Tuesday, August 30, 2011

ಒಂದೇ ಒಂದು ಸಾರಿ....




ಒಂದಲ್ಲ ಒಂದು ದಿನ
ಪ್ರತಿಯೊಬ್ಬರ ಜೀವನದಲ್ಲೂ
ಏನಾದರೊಂದು ಸಂಕಷ್ಟ
ಎದುರಾಗುವುದು ಖಚಿತ
ಅದನ್ನು ನೀವು ಯಾವ ರೀತಿ
ಎದುರಿಸುತ್ತೀರಿ ಎನ್ನುವುದು
ನಿನ್ನ ಭವಿಷ್ಯದ ಸಂತೋಷ ಮತ್ತು ಯಶಸ್ಸನ್ನು
ನಿರ್ಧರಿಸುತ್ತದೆ....

ಅನಾದಿ ಕಾಲದಿಂದಲೂ
ಎಲ್ಲರೂ
ಇಂಥ ಸಂಕಷ್ಟಗಳ ಹಾದಿಯಲ್ಲೇ
ಸಾಗಿ ಬಂದವರೇ...

ಗಹನವಾಗಿ ನೋಡುವುದಾದರೆ
ಇಂಥ ಸಂಕಷ್ಟದ ಪರಿಸ್ಥಿತಿಗಳು
ಜೀವನದಲ್ಲಿ ಮುನ್ನಡೆಯುವುದಕ್ಕೆ
ಅಥವಾ ಇದ್ದಲ್ಲಿಯೇ ಇರುವುದಕ್ಕೆ
ಅವಕಾಶಗಳು...

ಬದುಕಿನ ಬಹಳಷ್ಟು
ಬದಲಾವಣೆಗಳು
ಒಂದೋ ಸ್ಫೂರ್ತಿಯಿಂದ
ಇಲ್ಲವೇ
ಹತಾಶೆಯಿಂದ
ಆಗಿರುತ್ತವೆ...

ನಮ್ಮ ಹಾದಿಯಲ್ಲಿ ಏನೇ
ಎದುರಾದರೂ
ಅದಕ್ಕೊಂದು ಅರ್ಥ ತುಂಬಬೇಕು
ಅರ್ಥಪೂರ್ಣವೆನಿಸುವಂತೆ
ಮಾರ್ಪಡಿಸಬೇಕು....

ವ್ಯಕ್ತಿಗತ ಬೆಳವಣಿಗೆ
ಎನ್ನುವುದು
ಬದಲಾವಣೆಗೆ ಸಕಾರಾತ್ಮಕವಾಗಿ
ಸ್ಪಂದಿಸುವ
ಪ್ರಕ್ರಿಯೆ...

ಉಳಿಯ ಪೆಟ್ಟಿಗೆ ಸಿಲುಕದೆ
ಕಲ್ಲು ಶಿಲ್ಪವಾಗುವುದಿಲ್ಲ
ಎಡವಿದವನು ಮಾತ್ರ
ಎದ್ದು ನಿಲ್ಲುತ್ತಾನೆ....
(ಆಧಾರ)

No comments:

Post a Comment