Thursday, May 12, 2011

ಮರಳಿದ ಮಹಾರಾಜ


ಸಾಕು ಮನೆಯಲ್ಲಿರಬಾರದೇ?
ಇಂಥ ಅವಮಾನ ಬೇಕಿತ್ತೇ. ಅತ್ತು ಕರೆದು ಆಡಬೇಕೇ, ಗೌರವದಿಂದ ನಿರ್ಗಮಿಸಬಾರದೇ...?ಂಥ ಕುಹಕ, ಸಲಹೆ, ಟೀಕೆ, ಲೇವಡಿ, ಅನುಕಂಪದ ಮಾತುಗಳು ಒಂದೇ ಎರಡೇ...ದರೆ, ಸೌರವ್ ಗಂಗೂಲಿ ರಾಜನಂತೆ ಬದುಕಿದವರು. ರಾಜನಂತೆಯೇ ನಿರ್ಗಮಿಸಲು ಬಯಸಿದವರು.
ನಿಜ. ಜೀವನದಲ್ಲಿ ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ, ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು ಬೇರೆಯವರ ನಿಯಂತ್ರಣಕ್ಕೆ ಸಿಲುಕಬಾರದು. ಈ ಸತ್ಯವನ್ನು ಅರ್ಥ ಮಾಡಿಕೊಂಡವರು ಗಂಗೂಲಿ.
ಭಾರತೀಯ ಕ್ರಿಕೆಟ್ನಲ್ಲಿ ಗಂಗೂಲಿಗೊಂದು ವಿಶಿಷ್ಠ ಸ್ಥಾನವಿದೆ. ಹಿಂದೆ ಅವರಂಥ ಇನ್ನೊಬ್ಬರಿರಲಿಲ್ಲ. ಮುಂದೆಯೂ ಅವರ ಜಾಗದಲ್ಲಿ ಇನ್ನೊಬ್ಬರು ಬರುವುದಿಲ್ಲ. ಕ್ರಿಕೆಟ್ ಬದುಕಿನುದ್ದಕ್ಕೂ ಅವರು ತಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದವರು. ತಮ್ಮ ಇಷ್ಟದಂತೆ ಬದುಕಿದವರು. ಅಂಥ ವ್ಯಕ್ತಿ ತಾವು ನಿರ್ಧರಿಸಿದಂತೆಯೇ ಕ್ರಿಕೆಟ್ನಿಂದ ನಿರ್ಗಮಿಸುವುದು ಸರಿಯಾದ ರೀತಿ. ಕೋಲ್ಕತ್ತ ನೈಟ್ರೈಡರ್ಸ್ ತಂಡದವರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಗೂಲಿ ಮನೆಯಲ್ಲೇ ಕುಳಿತರೆ ಅದು ಅವರ ಗೌರವಾರ್ಹ ವೃತ್ತಿಜೀವನಕ್ಕೆ ಮಾಡಿಕೊಳ್ಳುವ ಅವಮಾನ. ಅದೇ ಕಾರಣಕ್ಕೆ ಅವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಸೇರಿಕೊಳ್ಳಲು ಯತ್ನಿಸಿದರು. ಪುಣೆ ವಾರಿಯರ್ಸ್ ಪರ ಅವಕಾಶ ಬಂದಾಗ ಎರಡೂ ಕೈಗಳಿಂದ ಬಾಚಿಕೊಂಡರು. ಈ ಮನುಷ್ಯನಿಗೆ ಇನ್ನೂ ಎಂಥಾ ಆಸೆ ಎನ್ನಬಹುದು. ಆದರೆ, ಟೀಕಿಸುವ ಮುನ್ನ ಗಂಗೂಲಿ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.ಷ್ಟಕ್ಕೂ ಗಂಗೂಲಿ ಏಕೆ ಐಪಿಎಲ್ ಆಡಬಾರದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಗಂಗೂಲಿಗಿನ್ನೂ 38 ವರ್ಷ. ಸಚಿನ್ಗಿಂತ ಅವರು ಆರು ತಿಂಗಳು ದೊಡ್ಡವರಷ್ಟೇ. ಸಚಿನ್ರಷ್ಟು ಅಮೋಘ ಾರ್ಮ್ನಲ್ಲಿ ಅವರು ಇಲ್ಲದಿರಬಹುದು. ಒಂದು ವೇಳೆ ಇದ್ದರೂ, ಅದನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ಇರಲಿಲ್ಲ. ಐಪಿಎಲ್ನಲ್ಲಿ 40 ವರ್ಷ ದಾಟಿದ ಶೇನ್ ವಾರ್ನ್, ಆಡಂ ಗಿಲ್ಕ್ರಿಸ್ಟ್ರಂಥವರೇ ಆಡುತ್ತಿರುವಾಗ ಗಂಗೂಲಿಯೂ ಆಡುವುದರಲ್ಲಿ ಯಾವ ತಪ್ಪೂ ಇಲ್ಲ. ಅನಿಲ್ ಕುಂಬ್ಳೆ ಸ್ವ-ಇಚ್ಛೆಯಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೆಂಟರ್ ಆದರು. ಆದರೆ, ಗಂಗೂಲಿಗೂ ನೀವು ಆಡಬೇಡಿ, ಕೇವಲ ಮೆಂಟರ್ ಆಗಿರಿ ಎಂದು ಹೇಳಲು ಇವರ್ಯಾರು? ಯಾವ ಕಾಲದಲ್ಲಿ ಏನಾಗಬೇಕೆಂದು ನಿರ್ಧರಿಸಬೇಕಾದವರು ಸ್ವತಃ ಗಂಗೂಲಿಯೇ ಹೊರತು ಶಾರುಖ್ ಖಾನ್ ಆಗಲೀ ಕೋಲ್ಕತ್ತ ನೈಟ್ರೈಡರ್ಸ್ ಆಗಲೀ ಅಲ್ಲ.ದು ಗಂಗೂಲಿ ಪಾಲಿಗೆ ಮತ್ತೊಂದು ಪುನರಾಗಮನ. ಮಂಗಳವಾರ ಅವರು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅಜೇಯ 32 ರನ್ ಬಾರಿಸುವ ಮೂಲಕ ಐಪಿಎಲ್ಗೆ ಯಶಸ್ವಿಯಾಗಿ ಮರಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು 75 ರನ್ ಹೊಡೆಯಬಹುದು ಅಥವಾ 5 ರನ್ಗೂ ಔಟಾಗಬಹುದು. ಆದರೆ, ಅವರು ಗಳಿಸುವ ರನ್ಗಿಂತ ಆಡುವುದು ಮುಖ್ಯ. ಭಾರತೀಯ ಕ್ರಿಕೆಟ್ನಲ್ಲಿ ಮೊಹಿಂದರ್ ಅಮರನಾಥ್ ಬಳಿಕ ಅತೀ ಹೆಚ್ಚು ಪುನರಾಗಮನಗೈದಿರುವ ಆಟಗಾರ ಗಂಗೂಲಿ. ಕ್ರಿಕೆಟ್ ವ್ಯವಸ್ಥೆ, ಆಡಳಿತಗಾರರು, ಕೋಚ್ಗಳು ಹಾಗೂ ತಂಡ ಎಷ್ಟು ಬಾರಿ ಕೈಬಿಟ್ಟರೂ ಮತ್ತೆ ಮತ್ತೆ ಮರಳಿ ತಾವು ಛಲ ಬಿಡದ ತ್ರಿವಿಕ್ರಮ ಎಂದು ನಿರೂಪಿಸಿದವರು ಗಂಗೂಲಿ.ಂಗೂಲಿ ಭಾರತ ಕಂಡ ಅತ್ಯುತ್ತಮ ನಾಯಕ. ಆದರೂ, ಕ್ರಿಕೆಟ್ ನಾಯಕತ್ವದ ವಿಚಾರ ಬಂದಾಗ ಅವರನ್ನು ಮೈಕ್ ಬ್ರೇರ್ಲಿ ಅಥವಾ ಮಾರ್ಕ್ ಟೇಲರ್ ಸ್ಥರದಲ್ಲಿ ಹೋಲಿಸಿ ಮಾತನಾಡುವುದಿಲ್ಲ. ಬ್ಯಾಟ್ಸ್ಮನ್ ಆಗಿ ಸಾಕಷ್ಟು ಉನ್ನತ ಸಾಧನೆ ಮಾಡಿದ್ದರೂ, ಅವರು ಸಚಿನ್ ತೆಂಡುಲ್ಕರ್ ಅಥವಾ ಬ್ರಿಯಾನ್ ಲಾರಾ ಲೀಗ್ಗೂ ಸೇರುವವರಲ್ಲ. ಹಿಂದೊಮ್ಮೆ ಗಂಗೂಲಿಯೇ ಹೇಳಿದಂತೆ ತೆಂಡುಲ್ಕರ್, ಲಾರಾ ಮಟ್ಟದ ಪ್ರತಿಭೆಯನ್ನು ದೈವದತ್ತವಾಗಿ ಪಡೆದು ಬಂದಾಗ ಸಾಧನೆಯಲ್ಲಿ ಎತ್ತರಕ್ಕೇರುವುದು ಸುಲಭ. ಆದರೆ, ನನ್ನಂಥ ಒಬ್ಬ ಸಾಮಾನ್ಯ ಆಟಗಾರ ಎತ್ತರಕ್ಕೇರುವುದು ಬಹಳ ಕಷ್ಟ.ಂಗೂಲಿ 1992ರಲ್ಲೇ ಏಕದಿನ ಪದಾರ್ಪಣೆ ಮಾಡಿದವರು. ನಿರಾಶಾದಾಯಕ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ದೀರ್ಘಕಾಲ ಮೂಲೆಗುಂಪಾಗಿದ್ದರು. ಆದರೆ, 1996ರಲ್ಲಿ ಅವರು ಮರಳಿದರು. ಚೊಚ್ಚಲ ಟೆಸ್ಟ್ನಲ್ಲೇ ಶತಕ ಬಾರಿಸಿದರು. ಕ್ರಿಕೆಟ್ ಜೀವನದಲ್ಲಿ ಮುಂದಿನ 10 ವರ್ಷ ಕಾಲ ಅವರು ಹೊಸ ಹೊಸ ಶೃಂಗಗಳನ್ನು ಏರಿದರು. ಏಕದಿನ ಕ್ರಿಕೆಟ್ನಲ್ಲಿ ಸಚಿನ್ಗಿಂತ ವೇಗವಾಗಿ 10,000 ರನ್ ಗಳಿಸಿದರು. ಸಚಿನ್ ಜೊತೆ ವಿಶ್ವದಾಖಲೆ ಜೊತೆಯಾಟಗಳನ್ನು ಆಡುವ ಮೂಲಕ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡರು. ಆ್ಸೈಡ್ನಲ್ಲಿ ದೇವರು ಎಂಬ ಬಣ್ಣನೆಗೊಳಗಾದರು. ಸಚಿನ್ ನಾಯಕತ್ವ ನನಗಲ್ಲ ಎಂದಾಗ ಭಾರತ ತಂಡದ ನಾಯಕರೂ ಆದರು. ಮ್ಯಾಚ್ಫಿಕ್ಸಿಂಗ್ ಕರಾಳ ದಿನಗಳ ಬಳಿಕ ಕುಗ್ಗಿದ್ದ ಭಾರತ ತಂಡಕ್ಕೆ ಹೊಸ ಚೈತನ್ಯ ತುಂಬಿದರು. ಭಾರತ 2011ರಲ್ಲಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದರೆ ಆ ಯಶಸ್ಸಿನ ಪ್ರಕ್ರಿಯೆಯ ಬೀಜ ಬಿತ್ತಿದವರು ಗಂಗೂಲಿ. ಅವರು ತಂಡದ ಆಟಗಾರರಿಗೆ ಯಾವುದೇ ತಂಡದ ವಿರುದ್ಧ, ಯಾವುದೇ ದೇಶದಲ್ಲಿ ಗೆಲ್ಲುವ ಛಲ, ಮನೋಬಲ ತುಂಬಿದರು. ಅವರ ನಾಯಕತ್ವದಲ್ಲಿ ಭಾರತ ತಂಡ ವಿದೇಶಗಳಲ್ಲೂ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐತಿಹಾಸಿಕ ಜಯ, ಆಸೀಸ್ ಪ್ರವಾಸದಲ್ಲೇ ಡ್ರಾ ಮಾಡಿಕೊಂಡಿದ್ದು ಅವರ ವೃತ್ತಿಜೀವನ ಹೈಲೈಟ್. ಭಾರತದ ಯಶಸ್ವಿ ವಿಶ್ವಕಪ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಇವರೆಲ್ಲಾ ಗಂಗೂಲಿ ಬೆಂಬಲ ಕೊಟ್ಟು ಬೆಳೆಸಿದ ಆಟಗಾರರು. ಗಂಗೂಲಿಗಾಗಿ ನಾನು ಪ್ರಾಣ ಕೊಡಲೂ ರೆಡಿ ಎಂದು ಯುವರಾಜ್ ಒಮ್ಮೆಹೇಳಿದ್ದರು. ಈಗ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಯುವರಾಜ್ ನಾಯಕತ್ವದಡಿ ಗಂಗೂಲಿ ಆಡುತ್ತಿರುವುದು ವಿಶೇಷವೋ, ವಿಪರ್ಯಾಸವೋ ಕಾಲವೇ ಹೇಳಬೇಕು.ಂಗೂಲಿ ಯಾರಿಗೂ ಏನನ್ನೂ ನಿರೂಪಿಸಿ ತೋರಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಅವರು ಕ್ರಿಕೆಟ್ ಆಡುತ್ತಿರುವುದು ತಮ್ಮ ಸಂತೋಷಕ್ಕೆ, ಆತ್ಮತೃಪ್ತಿಗೆ. ಅವರ ಜೀವನ ನಿರ್ವಹಣೆಗೆ ಕ್ರಿಕೆಟ್ ಅಗತ್ಯವಿಲ್ಲ. ಪುಣೆ ಪರ ಆಡುವುದರಿಂದ ಸಿಗುವ 80 ಲಕ್ಷ ಅವರು ತಲೆತಲಾಂತರದಿಂದ ಹೊಂದಿರುವ ಕುಟುಂಬ ಆಸ್ತಿಯ ಎದುರು ಸಣ್ಣ ಮೊತ್ತ. ಆದರೆ, ಅವರು ಇಷ್ಟು ಹಟ ತೊಟ್ಟು ಕ್ರಿಕೆಟ್ ಆಡುವುದು ಆಟದ ಮೇಲಿನ ತುಡಿತಕ್ಕಾಗಿ, ವ್ಯಾಮೋಹಕ್ಕಾಗಿ. ಅಷ್ಟಕ್ಕೂ ಐಪಿಎಲ್ನಲ್ಲಿ ಅವರು ಯಾರ ಅವಕಾಶ ಕಿತ್ತುಕೊಳ್ಳುವ ಪ್ರಶ್ನೆಯೂ ಇಲ್ಲ. ಕ್ರಿಕೆಟ್ನಲ್ಲಿ ತಾವು ಔಟ್ಡೇಟೆಡ್ ಅಲ್ಲ, ಇಂದಿಗೂ ಸಲ್ಲುವವರು ಎಂದು ತಮಗೆ ತಾವು ಸಾಬೀತು ಪಡಿಸಿಕೊಳ್ಳುವ ಹಟವಷ್ಟೇ ಅವರಿಗಿರುವುದು.ಂಗೂಲಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಗ್ರೆಗ್ ಚಾಪೆಲ್, ಜಾನ್ ಬುಕನನ್ ಸ್ವತಃ ಮೂಲೆಗುಂಪಾದರು. ಅವರಿಂದು ಯಾರಿಗೂ ನೆನಪಿಲ್ಲ. ಆದರೆ, ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ಹಿಂದೆಯೂ ಇದ್ದರು, ಇಂದು ಇದ್ದಾರೆ, ಮುಂದೂ ಇರುತ್ತಾರೆ.
ನಾನಾ ರೀತಿ, ನಾನಾ ಪಾತ್ರಗಳಲ್ಲಿ ಅವರು ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸುವುದು ಸಾಕಷ್ಟಿದೆ.

No comments:

Post a Comment