Wednesday, April 4, 2012

ಭಾರತದ ಫೇಸ್ ನಮ್ಮ ಲಿಯಾಂಡರ್ ಪೇಸ್



ಬಹುಶಃ ಅವರು ಹಿಂದಿನ ಜನ್ಮದಲ್ಲಿ ಸ್ವಾತಂತ್ರೃ ಹೋರಾಟಗಾರ ಆಗಿದ್ದಿರಬಹುದು.....
ಒಬ್ಬ ಕ್ರೀಡಾಪಟುವಿನ ಬಗ್ಗೆ ಇಂಥ ಭಾವನೆ ಮೂಡಿದಲ್ಲಿ ಆ ಆಟಗಾರ ನಿಶ್ಚಿತವಾಗಿಯೂ ಲಿಯಾಂಡರ್ ಪೇಸ್ ಆಗಿರುತ್ತಾರೆ.
ಕೆಲವೊಮ್ಮೆ ಪ್ರಕೃತಿಯ ನ್ಯಾಯ ಸರಿಯಿಲ್ಲ ಎಂಬ ನಮ್ಮ ಅಸಹನೆ ಸಕಾರಣವಾಗಿರುತ್ತದೆ. ಏಕೆಂದರೆ, ಇಂದಿನ ಹೈಟೆಕ್ ಯುಗದಲ್ಲಂತೂ ಅತಿಯಾಗಿ ವೈಭವೀಕರಣಗೊಳ್ಳುವುದಷ್ಟೇ ಸಾಧನೆ ಎಂಬ ನಂಬಿಕೆ ಅಥವಾ ಭ್ರಮೆಯಲ್ಲಿ ನಾವಿರುತ್ತೇವೆ. ಹೀಗಾಗಿ ಅದೆಷ್ಟೋ ಮಹತ್ವದ ಸಂಗತಿಗಳ ಮಹತ್ವ ಅರ್ಥವಾಗಿರುವುದಿಲ್ಲ ಮತ್ತು ಅದಕ್ಕೆ ಸಿಗಬೇಕಾದ ನ್ಯಾಯಸಮ್ಮತ ಮೌಲ್ಯ ಸಿಕ್ಕಿರುವುದಿಲ್ಲ.
ಜಾಗತಿಕ ಟೆನಿಸ್ ಭೂಪಟದಲ್ಲಿ ಭಾರತದ ‘ಫೇಸ್’ ಆಗಿರುವ ಲಿಯಾಂಡರ್ ಪೇಸ್‌ರ ವೃತ್ತಿಜೀವನ-ಸಾಧನೆಗೆ ತಕ್ಕ ಗೌರವ ಯಾವತ್ತೂ ಲಭಿಸಿಲ್ಲ. ಆದರೆ, ಅವರು ಪ್ರಚಾರಕ್ಕಾಗಿ ಆಡುವವರಲ್ಲ. ಹಾಗಾಗಿ ಅವರಿಗೆ ಬೇಸರವಾಗುವುದೂ ಇಲ್ಲ.
ಸಚಿನ್ ತೆಂಡುಲ್ಕರ್ ಅವರ ಮಹಾನ್ ಶತ-ಶತಕದ ಸಾಧನೆಯ ಗುಂಗು ಎಲ್ಲೆಡೆ ಆವರಿಸಿದ್ದಾಗ ಲಿಯಾಂಡರ್ ಪೇಸ್ ಟೆನಿಸ್‌ನಲ್ಲಿ 50 ಎಟಿಪಿ ಡಬಲ್ಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಆದರೆ, ನೂರನೇ ಶತಕಕ್ಕೆ ಸಿಕ್ಕ ಪ್ರಚಾರದ ಅರ್ಧಭಾಗ ಸಹ ಇವರ 50 ಪ್ರಶಸ್ತಿಗಳಿಗೆ ಸಿಗಲಿಲ್ಲ. ಬೇರೆ ಬೇರೆ ಕ್ರೀಡೆಯ ಇಬ್ಬರು ಆಟಗಾರರನ್ನು, ಅವರ ಸಾಧನೆಗಳನ್ನು ಹೋಲಿಸುವುದು ಸಮಂಜಸವಲ್ಲವಾದರೂ, ಅದಕ್ಕೆ ಸಲ್ಲಿಸಬೇಕಾದ ಗೌರವದಲ್ಲಿ ಪಕ್ಷಪಾತ ಆಗಬಾರದು.
‘ಟೆನಿಸ್‌ನಲ್ಲಿ 50 ಡಬಲ್ಸ್ ಪ್ರಶಸ್ತಿ ಮಹಾನ್ ಸಾಧನೆ ಏನಲ್ಲ. ಮಾರ್ಟಿನಾ ನವ್ರಾಟಿಲೋವಾ ಅದಕ್ಕಿಂತ ಮೂರು ಪಟ್ಟು ಹೆಚ್ಚಿನ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ’ ಎನ್ನಬಹುದು. ಆದರೆ, ಲಿಯಾಂಡರ್ ಟೆನಿಸ್‌ಗೆ ಅದರಲ್ಲೂ ಭಾರತೀಯ ಕ್ರೀಡೆಗಳಿಗೆ ತಂದುಕೊಟ್ಟಿರುವ ಮೌಲ್ಯ 50 ಪ್ರಶಸ್ತಿಗಳ ತೂಕಕ್ಕಿಂತ ಸಾವಿರ ಪಟ್ಟು ಹೆಚ್ಚಿನದು.
ಕ್ರಿಕೆಟ್‌ನಲ್ಲಿ ಯಾವ ರೀತಿ ಇನ್ನೊಬ್ಬ ಸಚಿನ್ ತೆಂಡುಲ್ಕರ್ ಹುಟ್ಟಿಬರುವುದು ಸಾಧ್ಯವಿಲ್ಲವೋ ಅದೇ ರೀತಿ ಟೆನಿಸ್‌ನಲ್ಲೂ ಇನ್ನೊಬ್ಬ ಲಿಯಾಂಡರ್ ಪೇಸ್ ಭವಿಷ್ಯದಲ್ಲಿ ಹೊರಹೊಮ್ಮುವುದು ಅಸಾಧ್ಯ. ನಮಗೆ ತೆಂಡುಲ್ಕರ್ ಎಂದೊಡನೆ ಅವರ ಮಹಾಮಹಾ ಸಾಧನೆಗಳು, ದಾಖಲೆಗಳು, ಶತಕ ಬಾರಿಸಿದೊಡನೆ ಅವರು ವಿನೀತರಾಗಿ ಆಗಸದತ್ತ ಮುಖ ಮಾಡುವ ರೀತಿ ನೆನಪಾಗುತ್ತದೆ. ಆದರೆ, ಲಿಯಾಂಡರ್ ಪೇಸ್ ವಿಷಯ ಬಂದಾಗ ಭಾರತದ ತ್ರಿವರ್ಣ ಧ್ವಜವೇ ಕಣ್ಮುಂದೆ ಸುಳಿಯುತ್ತದೆ. ಭಾರತದ ಕ್ರೀಡಾ ಪಟುಗಳಲ್ಲೇ ತಮ್ಮ ಆಟದಲ್ಲಿ, ಆವೇಶದಲ್ಲಿ, ಅಭಿವ್ಯಕ್ತಿಯಲ್ಲಿ ದೇಶಪ್ರೇಮವನ್ನು ಅತ್ಯಂತ ಪರಿಪೂರ್ಣವಾಗಿ ಬಿಂಬಿಸುವ ಕ್ರೀಡಾಪಟುವೆಂದರೆ ಲಿಯಾಂಡರ್ ಪೇಸ್.
ಟೆನಿಸ್ ಒಂದು ವೈಯಕ್ತಿಕ ಕ್ರೀಡೆ. ಟೆನಿಸ್‌ನ ಪ್ರಮುಖ ಟೂರ್ನಿಗಳಾದ ಗ್ರಾಂಡ್‌ಸ್ಲಾಂಗಳಿಗೂ ದೇಶಕ್ಕೂ ಏನಕೇನ ಸಂಬಂಧವೂ ಇಲ್ಲ. ಅವೆಲ್ಲಾ ವೃತ್ತಿಪರ ಟೂರ್ನಿಗಳಾಗಿರುವ ಕಾರಣ ಆಟಗಾರರು ಅಲ್ಲಿ ವ್ಯಕ್ತಿಗತ ನೆಲೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಸಾಧನೆಗಳೂ ವೈಯಕ್ತಿಕವೇ ಆಗಿರುತ್ತದೆ. ಗ್ರಾಂಡ್‌ಸ್ಲಾಂಗಳಲ್ಲಿ ಲಿಯಾಂಡರ್ ಆಗಲೀ, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಆಗಲಿ ಭಾರತದ ಆಟಗಾರರೆಂದು ಗುರುತಿಸಲ್ಪಡುವರೇ ಹೊರತು ಭಾರತದ ಪ್ರತಿನಿಧಿಗಳೆಂದಲ್ಲ.
ಇಂಥ ಟೆನಿಸ್‌ನಲ್ಲಿ ಆಟಗಾರರಿಗೆ ದೇಶ ಪ್ರತಿನಿಧಿಸುವ ಅವಕಾಶ ದೊರೆಯುವುದು ಡೇವಿಸ್ ಕಪ್, ಫೆಡರೇಷನ್ ಕಪ್‌ನಂಥ ತಂಡ ಟೂರ್ನಿಗಳಲ್ಲಿ, ಏಷ್ಯಾಡ್, ಕಾಮನ್ವೆಲ್ತ್ ಗೇಮ್ಸ್, ಒಲಿಂಪಿಕ್ಸ್‌ನಂಥ ಕ್ರೀಡಾಕೂಟಗಳಲ್ಲಿ ಮಾತ್ರ.
ಲಿಯಾಂಡರ್ ಪೇಸ್ ಒಬ್ಬ ಆಟಗಾರನ ಚೌಕಟ್ಟಿನಿಂದ ಹೊರಬಂದು ದೇಶಪ್ರೇಮಿ ಆಗುವುದು ಇಂಥ ಡೇವಿಸ್ ಕಪ್, ಏಷ್ಯಾಡ್, ಒಲಿಂಪಿಕ್ಸ್‌ಗಳಲ್ಲೇ. ಅದರಲ್ಲೂ ವಿಶೇಷವಾಗಿ ಡೇವಿಸ್ ಕಪ್ ಪಂದ್ಯಗಳಲ್ಲಿ ಲಿಯಾಂಡರ್ ಭಾರತಕ್ಕಷ್ಟೇ ಅಲ್ಲ ವಿಶ್ವದಲ್ಲೇ ಮಾದರಿ ಆಟಗಾರ. ಅವರಷ್ಟು ದೀರ್ಘ ಕಾಲ ದೇಶವನ್ನು ಪ್ರತಿನಿಧಿಸಿರುವ, ಅದಕ್ಕಿಂತ ಹೆಚ್ಚಾಗಿ ಅತೀ ಹೆಚ್ಚಿನ ಪಂದ್ಯಗಳನ್ನು (86 ಜಯ, 31 ಸೋಲು) ಗೆದ್ದುಕೊಟ್ಟಿರುವ ವಿಶ್ವದ ಮತ್ತೊಬ್ಬ ಆಟಗಾರನನ್ನು ದುರ್ಬೀನು ಹಾಕಿ ಹುಡುಕಬೇಕು.
ಲಿಯಾಂಡರ್ ಒಂದೂ ಗ್ರಾಂಡ್‌ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಗೆಲ್ಲದೇ ಇರಬಹುದು. ಆದರೆ, ಡೇವಿಸ್ ಕಪ್‌ನಲ್ಲಿ ಅವರ ಸಾಧನೆ ಪೀಟ್ ಸಾಂಪ್ರಾಸ್, ಆಂಡ್ರೆ ಅಗಾಸ್ಸಿ, ರೋಜರ್ ಫೆಡರರ್‌ಗಿಂತ ಮಿಗಿಲು. ನಿಜ ಹೇಳಬೇಕೆಂದರೆ, ಫೆಡರರ್‌ರಂಥ ಮಹಾನ್ ಆಟಗಾರರು ತಮ್ಮ ವೃತ್ತಿಜೀವನದ ಉತ್ತುಂಗದ ದಿನಗಳಲ್ಲಿ ಡೇವಿಸ್ ಕಪ್‌ನಿಂದ ದೂರವೇ ಉಳಿದರು. ಸ್ವಿಸ್ ಮಾಸ್ಟರ್ ವಿಶ್ವ ನಂ.1 ಶ್ರೇಯಾಂಕದಿಂದ ಕೆಳಗಿಳಿದ ಮೇಲಷ್ಟೇ ಡೇವಿಸ್ ಕಪ್‌ನಲ್ಲಿ ಸ್ವಿಟ್ಜರ್ಲೆಂಡ್ ಪರ ಆಡಿದರು. ಬಹುಶಃ ಲಿಯಾಂಡರ್ ಸಹ ತಮ್ಮ ವೃತ್ತಿಜೀವನದ ಉತ್ತುಂಗದ ವರ್ಷಗಳಲ್ಲಿ ಗ್ರಾಂಡ್‌ಸ್ಲಾಂ ಸಿಂಗಲ್ಸ್ ಟೆನಿಸ್‌ಗೆ ಆದ್ಯತೆ ನೀಡಿದ್ದರೆ ಅವರಿಂದ ಅನೇಕ ‘ಗ್ಲಾೃಮರಸ್’ ಸಾಧನೆಗಳನ್ನು ನಿರೀಕ್ಷಿಸಬಹುದಿತ್ತೇನೋ. ಆದರೆ, ಅವರು ಹಾಗೆ ಮಾಡಲಿಲ್ಲ. ಅಪಾರ ಹಣ ತಂದುಕೊಡುವ ಗ್ರಾಂಡ್‌ಸ್ಲಾಂಗಳಿಗಿಂತ ಹೆಮ್ಮೆ ತರುವ ಡೇವಿಸ್ ಕಪ್ ಹೋರಾಟಗಳಿಗೇ ಅವರು ಪ್ರಾಶಸ್ತ್ಯ ನೀಡಿದರು. ಪ್ರತಿಯೊಂದು ಪಂದ್ಯವನ್ನೂ ಇದೇ ತಮ್ಮ ಜೀವನದ ಕೊಟ್ಟಕೊನೆಯ ಹೋರಾಟವೆಂಬಂತೆ ಆಡಿದರು. ಅವರ ಆಟ, ಅವರ ತನ್ಮಯತೆ, ಒಂದೊಂದು ಅಂಕ ಗಳಿಸಿದ ಸಂದರ್ಭದಲ್ಲೂ ಅವರು ಮೆರೆಯುವ ಭಾವತೀವ್ರತೆ, ಇದು ನನ್ನ ಜಯವಲ್ಲ ದೇಶದ ಜಯ ಎಂಬ ಧನ್ಯತಾಭಾವವನ್ನು ಬೇರೆಲ್ಲೂ ಕಾಣುವುದು ಸಾಧ್ಯವಿಲ್ಲ.
ದೀರ್ಘಕಾಲೀನತೆಯ ವಿಷಯದಲ್ಲೂ ಲಿಯಾಂಡರ್ ಟೆನಿಸ್‌ನ ಸಚಿನ್ ತೆಂಡುಲ್ಕರ್ ಎನ್ನಬಹುದು. ಕ್ರಿಕೆಟ್ ಸವ್ಯಸಾಚಿಯ ಪಯಣ 1989ರಲ್ಲಿ ಆರಂಭಗೊಂಡರೆ, ಲಿಯಾಂಡರ್ ಪಯಣ 1990ರಲ್ಲಿ ಶುರುವಾಯಿತು. ಮೊದಲ ಬಾರಿ ದೇಶ ಪ್ರತಿನಿಧಿಸಿ ಆಡಿದಾಗ ಇಬ್ಬರಿಗೂ 16 ವರ್ಷ. ಲಿಯಾಂಡರ್ ತಮ್ಮ ಮೊಟ್ಟ ಮೊದಲ ಡೇವಿಸ್ ಕಪ್ ಪಂದ್ಯದಲ್ಲೇ ಜೀಶನ್ ಅಲಿ ಜತೆಯಲ್ಲಿ ಜಪಾನ್ ತಂಡವನ್ನು ಸೋಲಿಸಿದ್ದರು. 1991ರಲ್ಲಿ ವೃತ್ತಿಪರ ಆಟಗಾರರಾದ ಪೇಸ್ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಾಗ ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತದ ಕೇವಲ 2ನೇ ಆಟಗಾರ ಎನಿಸಿಕೊಂಡರು. ಇನ್ನು ಕ್ರೋಷಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಗೋರಾನ್ ಇವಾನಿಸೆವಿಚ್‌ರನ್ನು ಸೋಲಿಸಿದ್ದು ಅವರ ಅವಿಸ್ಮರಣೀಯ ಸಾಧನೆ.
ಡೇವಿಸ್ ಕಪ್ ಪಂದ್ಯಗಳಲ್ಲಿ ಎಟಿಪಿ ಶ್ರೇಯಾಂಕಕ್ಕೆ ಕವಡೆ ಕಿಮ್ಮತ್ತಿಲ್ಲ. ಅಲ್ಲಿ ದೇಶಕ್ಕಾಗಿ ಆಡುವ ಹೆಮ್ಮೆಯೇ ದೊಡ್ಡದೆಂದು ಹತ್ತುಹಲವು ಬಾರಿ ನಿರೂಪಿಸಿದವರು ಪೇಸ್. ಭಾರತ 1991ರಿಂದ 1998ರ ಅವಧಿಯಲ್ಲಿ ಸತತವಾಗಿ ಈ ಟೂರ್ನಿಯ ವಿಶ್ವ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ ಅದರಲ್ಲಿ ಅವರ ಕೊಡುಗೆ ಸಿಂಹಪಾಲು. ಭಾರತದ ಪರ ಆಡುವಾಗ ಪೀಟ್ ಸಾಂಪ್ರಾಸ್‌ರಂಥ ಆಟಗಾರರಿಗೆ ಬೆವರಿಳಿಸಿದ್ದ ಲಿಯಾಂಡರ್, ವೇಯ್ನ ಫೆರೀರಾ, ಜಾನ್ ಸಿಮರಿಂಕ್, ಜಿರಿ ನೋವಾಕ್‌ರಂಥ ಆಟಗಾರರನ್ನು ಅವರು ಉತ್ತುಂಗ ಫಾರ್ಮ್‌ನಲ್ಲಿದ್ದಾಗಲೇ ಸೋಲಿಸಿದರು. ಡಬಲ್ಸ್‌ನಲ್ಲೂ ಮಹೇಶ್ ಭೂಪತಿ ಜೊತೆ ನಂ.1 ತಂಡ ಕಟ್ಟಿದ ಪೇಸ್ ಯಾವುದೇ ರಾಷ್ಟ್ರದ ವಿರುದ್ಧ ಡೇವಿಸ್ ಕಪ್ ಹಣಾಹಣಿ ಪ್ರಾರಂಭಗೊಳ್ಳುವ ಮುನ್ನವೇ ಸಿಂಗಲ್ಸ್, ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಹೀಗೆ ತಾವು ಆಡುವ ಮೂರು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಖಾತ್ರಿ ಪಡಿಸಿರುತ್ತಿದ್ದರು. ಬಹುಶಃ ಪೇಸ್ ಉತ್ತುಂಗದ ದಿನಗಳಲ್ಲಿ ಅವರಿಗೆ ಇನ್ನೊಬ್ಬ ಸಮರ್ಥ ಸಿಂಗಲ್ಸ್ ಆಟಗಾರನ ಸಾಥ್ ದೊರೆತಿದ್ದರೆ, ಭಾರತ ಡೇವಿಸ್ ಕಪ್ ಚಾಂಪಿಯನ್ ಪಟ್ಟದ ಸನಿಹ ಸಾಗುವುದು ಸಾಧ್ಯವಿತ್ತು. 1993ರಲ್ಲಿ ಸ್ವಿಟ್ಜರ್ಲೆಂಡ್, ಫ್ರಾನ್ಸ್ ವಿರುದ್ಧ ಗೆದ್ದಿದ್ದ ಭಾರತ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸುವಲ್ಲಿ ಲಿಯಾಂಡರ್ ಪಾತ್ರ ಅವಿಸ್ಮರಣೀಯ.
ಇಂಡಿಯನ್ ಪ್ರೀಮಿಯರ್ ಲೀಗ್ ಅದ್ಧೂರಿ ಚಾಲನೆ ಪಡೆದಿರುವಂತೆಯೇ ಕ್ರಿಕೆಟ್ ವಲಯದಲ್ಲಿ ದೇಶ / ಕ್ಲಬ್ ಅಥವಾ ದುಡ್ಡು/ ದೇಶ ಪ್ರಶ್ನೆ ತಲೆದೋರಿದೆ. ಗಾಯದ ಕಾರಣ ನೀಡಿ ದೇಶ ಆಡುವ ಪಂದ್ಯ, ಸರಣಿಗಳಿಂದ ಹಿಂದೆ ಸರಿಯುವ ಆಟಗಾರರು ಐಪಿಎಲ್‌ನಲ್ಲಿ ಆಡುವ ನಿದರ್ಶನಗಳು ಅನೇಕ ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ. ಕೇವಲ ಐಪಿಎಲ್‌ನಲ್ಲಿ ಆಡುವ ಸಲುವಾಗಿ ಕಳೆದ ವರ್ಷ ಶ್ರೀಲಂಕಾದ ಲಸಿತ್ ಮಾಲಿಂಗ ಟೆಸ್ಟ್ ಕ್ರಿಕೆಟ್‌ನಿಂದಲೇ ಅಕಾಲ ನಿವೃತ್ತಿ ಘೋಷಿಸಿದ್ದರು. ಆಸ್ಟ್ರೇಲಿಯಾದ ಆಂಡ್ರೂೃ ಸೈಮಂಡ್ಸ್, ಆಡಂ ಗಿಲ್‌ಕ್ರಿಸ್ಟ್ ಮೊದಲಾದವರು ಇನ್ನೂ ಕೆಲವು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಕಿ ಇರುವಾಗಲೇ ಐಪಿಎಲ್ ಸಲುವಾಗಿ ನಿವೃತ್ತರಾಗಿದ್ದರು. ಕಳೆದ ಆವೃತ್ತಿಯಲ್ಲಿ ಗೌತಂ ಗಂಭೀರ್, ವೀರೇಂದ್ರ ಸೆಹ್ವಾಗ್ ಮೊದಲಾದವರು ಗಾಯ ಮುಚ್ಚಿಟ್ಟು ಐಪಿಎಲ್‌ನಲ್ಲಿ ಆಡಿದ ಆರೋಪಕ್ಕೆ ಗುರಿಯಾಗಿದ್ದರು. ಈ ಬಾರಿಯೂ ಸೆಹ್ವಾಗ್‌ರ ಫಿಟ್‌ನೆಸ್ ಬಗ್ಗೆ ಅನುಮಾನಗಳಿವೆ. ಸಚಿನ್ ತೆಂಡುಲ್ಕರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸಲುವಾಗಿ ಹೆಬ್ಬೆರಳಿನ ಶಸ್ತ್ರಚಿಕಿತ್ಸೆ ಮುಂದೆ ಹಾಕಿದ್ದಾರೆ. ಐಪಿಎಲ್‌ನ ವಾಣಿಜ್ಯ ಮೌಲ್ಯಕ್ಕೆ ಸಚಿನ್, ಧೋನಿ, ಸೆಹ್ವಾಗ್ ಲಭ್ಯತೆ ಅನಿವಾರ್ಯ ಆಗಿದ್ದರೂ, ಇಂಥ ಪ್ರಕರಣಗಳಿಂದ ದೇಶ / ಕ್ಲಬ್ ಪ್ರಶ್ನೆಗಳು ಹುಟ್ಟುತ್ತವೆ.
ಲಿಯಾಂಡರ್ ಪೇಸ್‌ರ ದೇಶ ಭಕ್ತಿಯ ಆಟ ಇಲ್ಲಿ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಮಾದರಿಯಾಗಬೇಕು. 38 ವರ್ಷದ ಈ ಹಿರಿಯ ಆಟಗಾರ ಕಳೆದ ವರ್ಷದ್ದೊಂದು ಅಪವಾದ ಬಿಟ್ಟರೆ ಗಾಯದ ಸಲುವಾಗಿ ಡೇವಿಸ್ ಕಪ್‌ನಲ್ಲಿ ದೇಶ ಪ್ರತಿನಿಧಿಸುವ ಕರ್ತವ್ಯದಿಂದ ತಪ್ಪಿಸಿಕೊಂಡವರಲ್ಲ. ಈ ಪಂದ್ಯಗಳಿಗೆ ಸಜ್ಜಾಗುವ ಸಲುವಾಗಿ ಅವರು ಲಾಭದಾಯಕ ಗ್ರಾಂಡ್‌ಸ್ಲಾಂಗಳನ್ನು ನಿರ್ಲಕ್ಷಿಸಿದ್ದೂ ಇದೆ. ಇಂಥ ಬದ್ಧತೆಯಿಂದಾಗಿಯೇ ಲಿಯಾಂಡರ್ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಡೇವಿಸ್ ಕಪ್‌ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸುತ್ತಲೇ ಭಾರತದ ಪರ ಅತೀ ಹೆಚ್ಚು ಗ್ರಾಂಡ್‌ಸ್ಲಾಂ ಗೆದ್ದ, ಎಲ್ಲಾ ನಾಲ್ಕು ಗ್ರಾಂಡ್‌ಸ್ಲಾಂ ಗೆದ್ದ ವಿರಳ ದಾಖಲೆಗಳಿಗೂ ಭಾಜನರಾಗಿದ್ದಾರೆ.
ಸತತ 22 ವರ್ಷಗಳಿಂದ ಟೆನಿಸ್ ಆಡುತ್ತಿದ್ದರೂ, ಇನ್ನೂ ಹದಿಹರೆಯದ ಹುಮ್ಮಸ್ಸು ಉಳಿಸಿಕೊಂಡಿರುವ ಪೇಸ್ ತಮ್ಮ 38ನೇ ವಯಸ್ಸಿನಲ್ಲೂ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆ. ಅವರ ಹಿರಿಮೆ ಗುರುತಿಸಲು ಇದೊಂದೇ ಅಂಶ ಸಾಕು.

Friday, September 2, 2011

ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್


ಶ್ರೇಷ್ಠತೆಗೆ ದೇಶ-ಕಾಲ-ಸಂದರ್ಭವೆಂಬುದಿಲ್ಲ.
ಶ್ರೇಷ್ಠರಿಗೂ ಅಷ್ಟೇ.
ಶ್ರೇಷ್ಠರು ಯಾವಾಗಲೂ ಶ್ರೇಷ್ಠರೇ.
ಇಂಗ್ಲೆಂಡ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಿರೂಪಿಸಿದ್ದೂ ಅದನ್ನೇ.
ಅದು ಅವರ ವೃತ್ತಿಜೀವನದ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಅದು ಭಾರತದ ಪರ ಅವರ ಪಾಲಿಗೆ ಕೊನೆಯ ಟಿ20 ಪಂದ್ಯವೂ ಆಗಿತ್ತು.
ಭಾರತದ ಪರ 1996ರಲ್ಲಿ ಟೆಸ್ಟ್ ಪದಾರ್ಪಣೆಗೈದ 15 ವರ್ಷದ ಬಳಿಕ ದ್ರಾವಿಡ್ ಈ ವಿಶೇಷ ಪಂದ್ಯವನ್ನು ಆಡಿದ್ದರು.
ಹಾಗೆ ನೋಡಿದರೆ, ಟಿ20 ಮಾದರಿ ರಾಹುಲ್ ಗೆ ಅಪರಿಚಿತವೇನೂ ಆಗಿರಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ವರ್ಷ ಹಾಗೂ ರಾಜಸ್ಥಾನ ರಾಯಲ್ಸ್ ಪರ ಒಂದು ವರ್ಷ ಐಪಿಎಲ್ ಆಡಿರುವ ದ್ರಾವಿಡ್ ಕ್ರಿಕೆಟ್ ನ ಕಿರು ಮಾದರಿಗೆ ಹೊಸಬರೇನೂ ಆಗಿರಲಿಲ್ಲ. ಅಲ್ಲದೆ ಅವರು ನಿರೂಪಿಸುವಂಥದ್ದೂ ಏನೂ ಇರಲಿಲ್ಲ.
ಬದಲಿಗೆ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆ ಸ್ವತಃ ಭಾರತ ತಂಡದಿಂದ ಹೊರಗುಳಿದಿದ್ದ ಅವರು ಮುಂದೆ ಆಡುವಂಥ ಪ್ರಮೇಯ ಒದಗಿಬಂದಿರಲಿಲ್ಲ.
2009ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ಹೊರಗುಳಿಯುವುದರೊಂದಿಗೆ ದ್ರಾವಿಡ್ ಟಿ20 ಕ್ರಿಕೆಟ್ ಗೆ ಭಾರತ ತಂಡಕ್ಕೆ ಪರಿಗಣನೆಯಲ್ಲಿರಲೇ ಇಲ್ಲ.
ಆದರೆ, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ದ್ರಾವಿಡ್ ಟಿ20 ತಂಡದಲ್ಲೂ ಆಡುವಂಥ ಪ್ರಸಂಗ ಎದುರಾಯಿತು. ಟೆಸ್ಟ್ ಸರಣಿಯಲ್ಲಾದಂತೆ ಈ ಪಂದ್ಯದಲ್ಲೂ ಭಾರತದ ಬ್ಯಾಟ್ಸ್ ಮನ್ ಗಳು ದಯನೀಯ ವೈಫಲ್ಯ ಅನುಭವಿಸಿದ್ದರಿಂದ ಭಾರತ ಈ ಪಂದ್ಯವನ್ನು ಸೋಲಬೇಕಾಯಿತು. ಆದರೆ, ದ್ರಾವಿಡ್ ತಮ್ಮ ಚಿಕ್ಕ ಚೊಕ್ಕ ಆಟದ ಮೂಲಕ ಹೃದಯವನ್ನಂತೂ ಗೆದ್ದರು.
ದ್ರಾವಿಡ್ ಆರಂಭದಲ್ಲಿ 14 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಹಿರಿಯ ಆಟಗಾರನಿಗೆ ಕಿರಿ ಮಾದರಿಯ ಅಗ್ನಿಪರೀಕ್ಷೆ ಇದೆನಿಸಿತ್ತು. ಆದರೆ,ಮುಂದಿನ ಐದೇ ಎಸೆತಗಳಲ್ಲಿ ಚಿತ್ರಣವೇ ಬದಲಾಗಿತ್ತು. ಸಮಿತ್ ಪಟೇಲ್ ರ ಒಂದೇ ಓವರ್ ನಲ್ಲಿ ಸತತ 3 ಸಿಕ್ಸರ್ ಸಹಿತ ದ್ರಾವಿಡ್ 21 ರನ್ ಬಾಚಿದ್ದರು (ಇನ್ನೊಂದು ರನ್ ರಹಾನೆ ಹೊಡೆದರು. ಆ ಓವರ್ ನಲ್ಲಿ ಒಟ್ಟು 22 ರನ್). ದ್ರಾವಿಡ್ ಸತತ 3 ಸಿಕ್ಸರ್ ಚಚ್ಚುತ್ತಿರುವಾಗಲಂತೂ ನಂಬಲಾಗದಂಥ ಅನುಭವ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ 2ನೇ ಅತ್ಯಂತ ವೇಗದ ಅರ್ಧ ಶತಕ ಬಾರಿಸಿದ್ದರೂ ರಕ್ಷಣಾತ್ಮಕ ಬ್ಯಾಟ್ಸ್ ಮನ್ ಆಗಿಯೇ ವರ್ಚಸ್ಸು ಬೆಳೆಸಿಕೊಂಡಿರುವ ದ್ರಾವಿಡ್, ವೃತ್ತಿಜೀವನದಲ್ಲಿ ಸತತ 3 ಸಿಕ್ಸರ್ ಬಾರಿಸಿದ್ದು ಬಹುಶಃ ಇದೇ ಮೊದಲ ಬಾರಿ ಇರಬೇಕು. ಆದರೆ, ಆ ಮೂರು ಎಸೆತಗಳಲ್ಲಿ ತಾವು ಕೇವಲ ಟೆಸ್ಟ್ ಅಥವಾ ಏಕದಿನಗಳಿಗೆ ಮಾತ್ರ ಸಲ್ಲುವವರಲ್ಲ. ಟಿ20 ಮಾದರಿಯಲ್ಲೂ ಸಲ್ಲುತ್ತೇನೆ ಎಂದು ನಿರೂಪಿಸಿಬಿಟ್ಟರು. ತಂಡದ ಬ್ಯಾಟ್ಸ್ ಮನ್ ಗಳು ಪೂರ್ಣ 20 ಓವರ್ ಸಹ ಆಡುವುದು ಸಾಧ್ಯವಾಗದೆ ಆಲೌಟ್ ಆದರೂ ತಂಡ 165 ರನ್ ಗಳಿಸಿದ್ದರೆ ಅದರಲ್ಲಿ ದ್ರಾವಿಡ್ 3 ಎಸೆತದಲ್ಲಿ ಗಳಿಸಿದ 18 ರನ್ ಗಳ ಪಾತ್ರ ದೊಡ್ಡದು. ಅದಿಲ್ಲವಾದರೆ ಭಾರತದ ಮೊತ್ತ 140-142 ಆಗಿರುತ್ತಿತ್ತೇನೋ.
ಟಿ20 ಕ್ರಿಕೆಟ್ ಎಂದರೆ ತಾಂತ್ರಿಕತೆಯ ಬಗ್ಗೆ ಯೋಚಿಸದೆ ಮೊದಲ ಎಸೆತದಿಂದಲೇ ಹೊಡೆ-ಬಡಿ ಆಟಕ್ಕಿಳಿಯುವುದೇನೋ ಸರಿಯೇ. ಆದರೆ, ಇಲ್ಲಿಯೂ ಪ್ರಾರಂಭದಲ್ಲಿ ಕೆಲವು ಎಸೆತ ಎಚ್ಚರಿಕೆಯಿಂದ ಆಡಿದ ಮೇಲೂ ನಂತರ ಆ ಕೊರತೆ ನೀಗಿಸಬಹುದು ಎಂದು ದ್ರಾವಿಡ್ 21 ಎಸೆತಗಳ 31 ರನ್ ಆಟದಿಂದ ನಿರೂಪಿಸಿದರು. ಒಟ್ಟಾರೆ ಮಾದರಿ ಆಟಗಾರ ದ್ರಾವಿಡ್ ರ ಅಂದಿನ ಆಟ ಮಾದರಿಯಾಗಿತ್ತು.
ಭಾರತ ಸುಲಭವಾಗಿ 180-190 ರನ್ ಗಳಿಸಬಹುದಾಗಿದ್ದ ಇನಿಂಗ್ಸ್ ಅದಾಗಿತ್ತಾದರೂ ಇಂಗ್ಲೆಂಡ್ ನ ಪಿಚ್ ಎಂಬ ಗುಮ್ಮ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಮೊದಲಾದವರನ್ನು ಕಾಡಿದ್ದರಿಂದ ತಂಡ ಮುಗ್ಗರಿಸಿತು. ಭಾರತದ ಟಿ20 ಸ್ಕೀಮ್ ನಲ್ಲೇ ಇಲ್ಲದ ಅಜಿಂಕ್ಯ ರಹಾನೆ ಅನಿರೀಕ್ಷಿತವಾಗಿ ದೊರೆತ ಅವಕಾಶ ಸಾರ್ಥಕ ಪಡಿಸಿಕೊಂಡಿದ್ದರಿಂದ ತಂಡ ಗೌರವಾನ್ವಿತ ಮೊತ್ತ ಪೇರಿಸುವುದು ಸಾಧ್ಯವಾಯಿತು. ಇಲ್ಲದಿದ್ದರೆ....
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯರ ಆಟದಷ್ಟೇ, ತಂಡದ ಆಯ್ಕೆಯೂ ಕಳಪೆ. ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡುವಾಗ ಭಾರತ ಪೂರ್ಣ ಸಾಮರ್ಥ್ಯದ ಟಿ20 ತಂಡವನ್ನೇ ಕಣಕ್ಕಿಳಿಸಬೇಕಿತ್ತು. ಅದಕ್ಕಾಗಿ ಒಂದಿಬ್ಬರು ಆಟಗಾರರನ್ನು ಈ ಪಂದ್ಯಕ್ಕೆಂದೇ ಇಂಗ್ಲೆಂಡ್ ಗೆ ಕರೆಸಿಕೊಂಡಿದ್ದರೆ ಅದರಿಂದ ಬಿಸಿಸಿಐ ಬೊಕ್ಕಸವೇನೂ ಬರಿದಾಗುತ್ತಿರಲಿಲ್ಲ. ಆದರೆ, ಟಿ20 ತಜ್ಞ ಆಟಗಾರರಾದ ಯೂಸುಫ್ ಪಠಾಣ್, ಅಂಬಟಿ ರಾಯುಡು, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಬದ್ರಿನಾಥ್ (ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮಾನದಂಡ), ಮೊದಲಾದವರು ದೇಶದಲ್ಲೇ ಉಳಿದರೆ, ಪಾರ್ಥಿವ್ ಪಟೇಲ್, ರಹಾನೆ ಮತ್ತು ದ್ರಾವಿಡ್ ಮೊದಲ 3 ಕ್ರಮಾಂಕದಲ್ಲಿ ಆಡಿದ್ದರು.
ಹೋಗಲಿ, ಒಬ್ಬ ಆಟಗಾರ ಗಾಯಗೊಂಡಾಗ ಆತನಿಗೆ ಬದಲಿ ಆಯ್ಕೆ ಮಾಡುವುದಕ್ಕೂ ಒಂದು ರೀತಿ-ನೀತಿ ಬೇಡವೇ? ಆರಂಭಿಕ ಆಟಗಾರ ಗೌತಮ್ ಗಂಭೀರ್ ಬದಲಿಗೆ ಆಲ್ರೌಂಡರ್ (?) ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದು ಸರಿಯೇ? ಅಷ್ಟಕ್ಕೂ ಐಪಿಎಲ್ ನಂತರ ಮನೆಯಲ್ಲಿ ಕುಳಿತಿದ್ದ ಜಡೇಜಾ ಬದಲು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಉದಯೋನ್ಮುಖರ ಕ್ರಿಕೆಟ್ ಟೂರ್ನಿ ಆಡಿ ಬಂದಿದ್ದವರನ್ನೇ ಒಬ್ಬರನ್ನು ಕಳಿಸಬಹುದಿತ್ತು. ಆದರೆ, ಆರ್ ಪಿ ಸಿಂಗ್ ರನ್ನು ಇತ್ತೀಚೆಗೆ ಆಯ್ಕೆ ಮಾಡಿದ್ದಂತೆ ಜಡೇಜಾ ವಿಷಯದಲ್ಲೂ ಆಯ್ಕೆಗಾರರು ಕೋಟಾ ಪದ್ಧತಿ ಅನುಸರಿಸಿರಬಹುದು.
ಸದ್ಯದಲ್ಲೇ ಕೆ. ಶ್ರೀಕಾಂತ್ ಬದಲು ಬೇರೊಬ್ಬರು ರಾಷ್ಟ್ರೀಯ ಮುಖ್ಯ ಆಯ್ಕೆಗಾರರಾಗಿ ನೇಮಕಗೊಳ್ಳಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಕಾಂತ್ ಮಾಡಿದ ಬ್ಲಂಡರ್ ಗಳಿಂದ ನೂತನ ಆಯ್ಕೆಗಾರರು ಪಾಠ ಕಲಿತಿದ್ದರೆ ಒಳಿತು.
ಏಕೆಂದರೆ ಎಲ್ಲರಿಗೂ ಶ್ರೀಕಾಂತ್ ಗಿದ್ದಂತ ಅದೃಷ್ಟವಂತೂ ಇರುವುದಿಲ್ಲ....


Tuesday, August 30, 2011

ಒಂದೇ ಒಂದು ಸಾರಿ....




ಒಂದಲ್ಲ ಒಂದು ದಿನ
ಪ್ರತಿಯೊಬ್ಬರ ಜೀವನದಲ್ಲೂ
ಏನಾದರೊಂದು ಸಂಕಷ್ಟ
ಎದುರಾಗುವುದು ಖಚಿತ
ಅದನ್ನು ನೀವು ಯಾವ ರೀತಿ
ಎದುರಿಸುತ್ತೀರಿ ಎನ್ನುವುದು
ನಿನ್ನ ಭವಿಷ್ಯದ ಸಂತೋಷ ಮತ್ತು ಯಶಸ್ಸನ್ನು
ನಿರ್ಧರಿಸುತ್ತದೆ....

ಅನಾದಿ ಕಾಲದಿಂದಲೂ
ಎಲ್ಲರೂ
ಇಂಥ ಸಂಕಷ್ಟಗಳ ಹಾದಿಯಲ್ಲೇ
ಸಾಗಿ ಬಂದವರೇ...

ಗಹನವಾಗಿ ನೋಡುವುದಾದರೆ
ಇಂಥ ಸಂಕಷ್ಟದ ಪರಿಸ್ಥಿತಿಗಳು
ಜೀವನದಲ್ಲಿ ಮುನ್ನಡೆಯುವುದಕ್ಕೆ
ಅಥವಾ ಇದ್ದಲ್ಲಿಯೇ ಇರುವುದಕ್ಕೆ
ಅವಕಾಶಗಳು...

ಬದುಕಿನ ಬಹಳಷ್ಟು
ಬದಲಾವಣೆಗಳು
ಒಂದೋ ಸ್ಫೂರ್ತಿಯಿಂದ
ಇಲ್ಲವೇ
ಹತಾಶೆಯಿಂದ
ಆಗಿರುತ್ತವೆ...

ನಮ್ಮ ಹಾದಿಯಲ್ಲಿ ಏನೇ
ಎದುರಾದರೂ
ಅದಕ್ಕೊಂದು ಅರ್ಥ ತುಂಬಬೇಕು
ಅರ್ಥಪೂರ್ಣವೆನಿಸುವಂತೆ
ಮಾರ್ಪಡಿಸಬೇಕು....

ವ್ಯಕ್ತಿಗತ ಬೆಳವಣಿಗೆ
ಎನ್ನುವುದು
ಬದಲಾವಣೆಗೆ ಸಕಾರಾತ್ಮಕವಾಗಿ
ಸ್ಪಂದಿಸುವ
ಪ್ರಕ್ರಿಯೆ...

ಉಳಿಯ ಪೆಟ್ಟಿಗೆ ಸಿಲುಕದೆ
ಕಲ್ಲು ಶಿಲ್ಪವಾಗುವುದಿಲ್ಲ
ಎಡವಿದವನು ಮಾತ್ರ
ಎದ್ದು ನಿಲ್ಲುತ್ತಾನೆ....
(ಆಧಾರ)

Friday, August 26, 2011

ನಿಧಾನ, ಸಮಾಧಾನ

ಸೋಲಿಗೂ, ಗೆಲುವಿಗೂ ಸಿದ್ಧ ಮಾದರಿ ಎಂಬುದಿರುವುದಿಲ್ಲ.
ಗೆಲುವಿನ ಮೈಮರೆವು ಸೋಲಿಗೆ ದಾರಿಯಾಗಬಹುದು.
ಸೋಲು ಮೂಡಿಸಿದ ಅರಿವು ಗೆಲುವಿನತ್ತ ಕೊಂಡೊಯ್ಯಬಹುದು.
ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ 0-4 ಅಂತರದಿಂದ ಸೋತಿದ್ದಾಗಿದೆ.
ಇನ್ನು ಟಿ20 ಹಾಗೂ ಏಕದಿನ ಸರಣಿಗಳ ಸರದಿ.
ಅಲ್ಲಿ ಸೋತ ಭಾರತ ಇಲ್ಲಿಯೂ ಸೋಲಲೇಬೇಕೆಂದೇನೂ ಇಲ್ಲ.
ಭಾರತ ಗೆಲ್ಲುವುದು ಕಷ್ಟ, ಸೋತೇ ಹೋಗಲಿದೆ ಎಂಬ ಆತಂಕವೂ ಬೇಡ.
ಏಕೆಂದರೆ ಭಾರತ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಇಂಗ್ಲೆಂಡ್ ತಂಡವೇ ಬೇರೆ.
ಏಕದಿನ ಸರಣಿಯಲ್ಲಿ ಎದುರಾಗುವ ಇಂಗ್ಲೆಂಡ್ ತಂಡವೇ ಬೇರೆ.
ಇತ್ತೀಚಿನ ವರ್ಷಗಳಲ್ಲಿ ಏಕದಿನ ಪಂದ್ಯಗಳು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ. ತವರಿನ ಅನುಕೂಲವೆಂಬ ಅಂಶವೀಗ ಗೌಣವಾಗಿದೆ.
ಭಾರತದ ವಿಷಯಕ್ಕೆ ಬಂದರೆ ಧೋನಿ ಬಳಗ ವಿಶ್ವ ಚಾಂಪಿಯನ್. ಟೆಸ್ಟ್ ತಂಡದಲ್ಲಿ ಭಾರತದ ಯಶಸ್ಸಿಗೆ ಅನುಭವಿ ತ್ರಿವಳಿಗಳ ಆಟ ನಿರ್ಣಾಯಕವಾಗಿದ್ದರೆ, ಏಕದಿನಗಳಲ್ಲಿ ಭಾರತ ಆ ಅವಲಂಬನೆಯಿಂದ ಯಾವಾಗಲೋ ಹೊರಗೆ ಬಂದಿದೆ.
ವೀರೇಂದ್ರ ಸೆಹ್ವಾಗ್ ಗೈರು ದೊಡ್ಡ ಕೊರತೆಯೇ ಹೌದು. ಆದರೂ, ಏಕದಿನಗಳಲ್ಲಿ ಭಾರತದ ಸಾಮರ್ಥ್ಯ ಯಾವುದೇ ಒಬ್ಬ ಆಟಗಾರನಿಗೆ ಸೀಮಿತಗೊಂಡಿಲ್ಲ. ತೆಂಡುಲ್ಕರ್, ಗಂಭೀರ್, ಕೊಹ್ಲಿ, ರೈನಾ, ರೋಹಿತ್, ಧೋನಿ ಇರುವ ಭಾರತ ತಂಡದೆದರು ಆತಂಕ ಪಡಬೇಕಿರುವುದು ಇಂಗ್ಲೆಂಡ್.
ಒಂದು ಮುಖ್ಯ ವಿಷಯವೆಂದರೆ ಇಂಗ್ಲೆಂಡ್ ನ ಪರಮ ಆದ್ಯತೆ ಏಕದಿನ ಕ್ರಿಕೆಟ್ ಅಲ್ಲ. ಅವರು ವಿಶ್ವಕಪ್ ಗೆದ್ದಿಲ್ಲ ಎಂಬ ಅವಮಾನವನ್ನು ಆಶಸ್ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲೇ ಮರೆಯುವವರು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಆಶಸ್ ಸರಣಿ ಗೆದ್ದ ಮೇಲೆ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ 1-6 ಅಂತರದಿಂದ ಸೋತು ಹೋಯಿತು. ವಿಶ್ವಕಪ್ ನಲ್ಲೂ ಕ್ವಾರ್ಟರ್ ಫೈನಲ್ ಗಿಂತ ಮೇಲೆ ಬರಲಿಲ್ಲ. ಆದರೆ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ.
ಈಗಲೂ ಅಷ್ಟೇ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದರೆ ಅವರಿಗದು ಬೋನಸ್. ವಿಶ್ವ ಚಾಂಪಿಯನ್ನರ ವಿರುದ್ಧ ಗೆದ್ದೆವು ಎಂದು ಬೀಗುತ್ತಾರೆ. ಅದೇ ಸೋತರೆ, ಅವರಿಗೆ ಬೇಸರವೇನೂ ಇಲ್ಲ. ಟೆಸ್ಟ್ ಸರಣಿ ಗೆದ್ದು ವಿಶ್ವ ನಂ.1 ಆಗಿದ್ದೇವೆಲ್ಲಾ ಅದೇ ಯಥೇಚ್ಛ ಎನ್ನುತ್ತಾರವರು.
ಭಾರತಕ್ಕಿದು ಪ್ರತಿಷ್ಠೆಯ ಸರಣಿ. ತವರಿನಲ್ಲಿ ವಿಶ್ವಕಪ್ ಗೆದ್ದ ಮೇಲೆ ಭಾರತ ವಿಂಡೀಸ್ ನಲ್ಲಿ ಗೆದ್ದಿರಬಹುದು. ಆದರೆ, ಗಂಭೀರ ಸವಾಲು ಎದುರಾಗುತ್ತಿರುವುದು ಇಂಗ್ಲೆಂಡ್ ನಲ್ಲೇ. ಆದರೆ, ತಂಡ ಸೂಕ್ತ ಮನೋಸ್ಥಿತಿಯಿಂದ ಸರಣಿ ಪ್ರವೇಶಿಸುತ್ತಿದೆಯೇ?
ಭಾರತ ಬಲಾಢ್ಯ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹೊಸ ಕೋಚ್ ಡಂಕನ್ ಫ್ಲೆಚರ್ ಒಡನಾಟ ಆಟಗಾರರಿಗಿನ್ನೂ ಹೊಸದು. ಅವರ ತರಬೇತಿ ವಿಧಾನಗಳು, ಅವರ ಮನೋಸ್ಥಿತಿ, ವಿಚಾರ ಲಹರಿ ಇವೆಲ್ಲವೂ ಇನ್ನೂ ಪೂರ್ತಿಯಾಗಿ ಅರ್ಥವಾಗಬೇಕು.
ಇಂಗ್ಲೆಂಡ್ ಕೋಚ್ ಆಗಿದ್ದಾಗ ಫ್ಲೆಚರ್ ಯಾವತ್ತೂ ಏಕದಿನಗಳಿಗೆ ಮಹತ್ವ ನೀಡಿರಲಿಲ್ಲ. ಟೆಸ್ಟ್ ಸಾಧನೆಗಳ ಬಗ್ಗೆ ಮಾತ್ರ ಅವರು ಗಮನ ಕೊಟ್ಟಿದ್ದರು. ಹಾಗೆಂದೇ ತಂಡ 50 ಓವರ್ ಮಾದರಿಯಲ್ಲಿ ಪ್ರಪಾತಕ್ಕೆ ಬಿದ್ದಿತ್ತು. ಅಂಥ ಫ್ಲೆಚರ್ ಕೈಗೆ ಈಗ ವಿಶ್ವ ಚಾಂಪಿಯನ್ ಭಾರತದ ಚುಕ್ಕಾಣಿ ದೊರೆತಿದೆ.
ಫ್ಲೆಚರ್ ನೇಮಕಾತಿ ನಡೆದು ತಿಂಗಳುಗಳೇ ಕಳೆದುಹೋಗಿರುವುದರಿಂದ ಅವರು ಈ ಹುದ್ದೆಗೆ ಸೂಕ್ತರೇ ಎಂದು ಈಗಲೂ ಚರ್ಚೆ ಮಾಡುವುದು ಸರಿಯಲ್ಲ. ಆದರೂ, ಟೆಸ್ಟ್ ಸರಣಿಯಲ್ಲಿ ಫ್ಲೆಚರ್ ವಿಚಾರ ಶೂನ್ಯರಾಗಿದ್ದರು. ಇಂಗ್ಲೆಂಡ್ ನ ವ್ಯೂಹಗಳ ಎದುರು ಇವರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಏಕದಿನಗಳಲ್ಲಿ ಹಾಗಾಗದಿದ್ದರೆ ಸಾಕು.
ಅಂದ ಹಾಗೆ ಆಯ್ಕೆಗಾರರು ರಾಹುಲ್ ದ್ರಾವಿಡ್ ಗೆ ಏಕದಿನಗಳಿಂದ ದೊಡ್ಡ ರೀತಿಯಲ್ಲಿ ವಿದಾಯ ಹೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿದಾಯ ಸರಣಿಗಾಗಿ ಸ್ವತಃ ದ್ರಾವಿಡ್ ಏನೂ ಕೋರಿರಲಿಲ್ಲ. ಆದರೆ, ವಿಶ್ವ ಕಪ್ ಗೆ ನಿಮ್ಮ ಅಗತ್ಯವಿಲ್ಲ ಎಂದಿದ್ದ ಆಯ್ಕೆಗಾರರು ಇಂಗ್ಲೆಂಡ್ ನಲ್ಲಿ ಆಡಿ ಎಂದು ಆಹ್ವಾನ ನೀಡಿದ್ದು ದ್ರಾವಿಡ್ ರಂಥ ಮೇರು ಆಟಗಾರನಿಗೆ ಮಾಡಿದ ಅವಮಾನ. ಅದೇ ಕಾರಣಕ್ಕೆ ಅವರು ಏಕದಿನಗಳಿಂದ ವಿದಾಯ ಪ್ರಕಟಿಸಿದರು. ಅದೇನೇ ಇರಲಿ. ಉತ್ತುಂಗ ಫಾರ್ಮ್ ನಲ್ಲಿರುವ ದ್ರಾವಿಡ್ ಈ ಸರಣಿ ಅವಿಸ್ಮರಣಿಯವಾಗಿಸಿಕೊಳ್ಳಲು ಯತ್ನಿಸಲಿದ್ದಾರೆ.
ಟೆಸ್ಟ್ ತಂಡಕ್ಕೆ ಪರಿಗಣನೆಯಲ್ಲಿರಬೇಕಾದ ಅಜಿಂಕ್ಯ ರಹಾನೆ ಏಕದಿನ ತಂಡಕ್ಕೆ ಆಯ್ಕೆ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಹಾಲಿ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ. ಗಂಭೀರ್, ತೆಂಡುಲ್ಕರ್, ದ್ರಾವಿಡ್, ಕೊಹ್ಲಿ, ರೈನಾ, ರೋಹಿತ್, ಧೋನಿ ಮಧ್ಯೆ ರಹಾನೆ ನುಸುಳುವುದು ಬಹಳ ಕಷ್ಟ. ಆದರೂ, ಅವರು ಇಂದಲ್ಲ ನಾಳೆ ಭಾರತದ ಪರ ಆಡಲೇಬೇಕಾದ ಉತ್ತಮ ಆಟಗಾರ.

Thursday, August 18, 2011

ಗುರುತು




ಹೆಜ್ಜೆಗಳನ್ನು ಅನುಸರಿಸಿ
ಸಾಗುವುದಕ್ಕೇಕೆ ಲಜ್ಜೆ
ಕನಸುಗಳ ಹಾದಿಯಲ್ಲಿ
ಕಲ್ಪನೆಗಳ ಬೀದಿಯಲ್ಲಿ

ಅದೇಕೋ ಏನೋ
ಮನಸೆಲ್ಲಾ ತೋಯಿಸುವ
ಕಾತರ, ಆತುರ
ಬುದ್ಧಿಯ ಹಿಡಿತಕ್ಕೆ ಸಿಕ್ಕದ
ಚಡಪಡಿಕೆ
ಅಪಾರ

ಅಲ್ಲೆಲ್ಲೋ ದೂರ
ಇರುವಳಾಕೆ
ನೆನಪಿಗೆ ಬಲುಹತ್ತಿರ
ಸ್ಪಂದಿಸಲು ಸಾಲದು
ಈ ಅಕ್ಷರ

ಇದ್ದಾಗ ಬಲು ಸದರ
ಹೋದಾಗ ಮನ ಭಾರ
ಹೋಗಿದ್ದು
ನಾನೋ
ಅವಳೋ
ಪ್ರಶ್ನೆಗಿಲ್ಲ
ಉತ್ತರ

Sunday, July 24, 2011

ನಂಬಿ ಬಂದವರ ವಿಶ್ವಾಸಕ್ಕೆ ದ್ರೋಹವಾಗದಿರಲಿ...




ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳಿರೀ ಮಗುವನ್ನು, ನಮ್ಮ ಮನೆ ಬೆಳಕನ್ನು....
-ವಿ. ಸೀತಾರಾಮಯ್ಯ



ಉತ್ತಮ ಬದುಕಿಗೆ ಅವಶ್ಯವಾದ ಎಲ್ಲಾ ಗುಣಗಳನ್ನು ಕಲಿಸುವ ಗುಣ ಕ್ರೀಡೆಗಿದೆ. ಆತ್ಮವಿಶ್ವಾಸ, ಏಕಾಗ್ರತೆ, ಪರಿಶ್ರಮ, ಸಂಯಮ, ಸಮಯಸ್ಫೂರ್ತಿ, ನ್ಯಾಯಪರತೆ, ನೈತಿಕತೆ ಇತ್ಯಾದಿ ಗುಣ-ಮೌಲ್ಯಗಳು ಯಶಸ್ವಿ ಕ್ರೀಡಾಪಟುವಾಗಲು ಅಗತ್ಯ ಎಂದು ಕ್ರೀಡೆ ಕಲಿಸುತ್ತದೆ. ಇನ್ನು ಕ್ರೀಡಾ ಸಾಧನೆಗಳಿಗೆ ಬಹುಮುಖ್ಯವಾದ ಅಡಿಪಾಯ ಪರಸ್ಪರ ವಿಶ್ವಾಸ. ಕ್ರೀಡಾಪಟುವಿಗೆ ತರಬೇತುದಾರನ ಮೇಲೆ, ತರಬೇತುದಾರನಿಗೆ ಕ್ರೀಟಾಪಟುವಿನ ಮೇಲೆ ವಿಶ್ವಾಸವಿಲ್ಲದೇ ಹೋದರೆ ಆಟ ನಡೆಯುವುದಿಲ್ಲ. ಆದರೆ, ಆ ವಿಶ್ವಾಸವೇ ಅತ್ಯಾಚಾರಕ್ಕೊಳಗಾಗುತ್ತಿರುವುದು ಕ್ರೀಡೆಯ ದುರಂತ.
ಪೋಷಕರು ತಮ್ಮ ಹಾಲುಗಲ್ಲದ ಹಸುಳೆಯನ್ನು ಕ್ರೀಡಾ ದೃಷ್ಟಿಕೋನದಿಂದ ಮಾತ್ರ ತಮಗೆ ಪರಿಚಯವಿರುವ ಒಬ್ಬ ಕೋಚ್ ಬಳಿಗೆ ತರಬೇತಿಗೆಂದು ಕಲಿಸುವುದು ವಿಶ್ವಾಸದಿಂದ. ನಮ್ಮ ಮಗಳೂ ಇವರ ಬಳಿ ಕಲಿತರೆ ದೊಡ್ಡ ಸಾಧನೆ ಮಾಡುತ್ತಾಳೆ ಎಂಬ ನಂಬಿಕೆ ಮಾತ್ರ ಅಲ್ಲಿರುತ್ತದೆ. ಆದರೆ, ಅಂಥ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವ ಕೋಚ್ಗಳ ವಿಶ್ವಾಸಘಾತದ ಪ್ರಕರಣಗಳು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿವೆ.
ತರಬೇತುದಾರನೆಂದರೆ ಗುರು. ಗುರು ದೇವರ ಸಮಾನ ಎನ್ನುವುದು ಭಾರತೀಯ ನಂಬಿಕೆ. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕೆನ್ನುವ ಏಕೈಕ ಕನಸಿನೊಂದಿಗೆ ತರಬೇತಿಗೆ ಬರುವ ಕ್ರೀಡಾಪಟುಗಳಲ್ಲಿ ನಿಶ್ಚಿತವಾಗಿಯೂ ಅನ್ಯ ಚಿಂತನೆಗಳಿರುವುದಿಲ್ಲ. ಆದರೆ, ಕೆಲವು ತರಬೇತುದಾರರು ಮುಗ್ಧ ಆಟಗಾರ್ತಿಯರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ‘ಗುರುದಕ್ಷಿಣೆ’ ಪಡೆಯುವ ಪಿಡುಗು ಇಂದು ನಿನ್ನೆಯದೂ ಅಲ್ಲ.
ಕಳೆದ ವರ್ಷ ಹಾಕಿ ಆಟಗಾರ್ತಿ ರಂಜಿತಾ ಆಗ ರಾಷ್ಟ್ರೀಯ ಮಹಿಳಾ ತಂಡದ ಕೋಚ್ ಆಗಿದ್ದ ಮಹಾರಾಜ್ ಕಿಶನ್ ಕೌಶಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಕೌಶಿಕ್ ಕೋಚ್ ಹುದ್ದೆಯಿಂದ ಅಮಾನತುಗೊಂಡಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಒಬ್ಬ ಸಾಮಾನ್ಯ ಅತ್ಯಾಚಾರಿಗೆ ಅನ್ವಯವಾಗುವ ಕಾನೂನು ಕ್ರೀಡಾ ಕೋಚ್ಗಳಿಗೆ ಯಾವತ್ತೂ ಅನ್ವಯಿಸುವುದಿಲ್ಲ. ಆರೋಪಗಳೆಲ್ಲವೂ ತಮ್ಮ ಹೆಸರು ಕೆಡಿಸಲು ಮಾಡುವ ಷಢ್ಯಂತ್ರ ಎಂಬ ನೆಪದಿಂದ ಅವರೆಲ್ಲರೂ ಜಾರಿಕೊಂಡು ಬಿಡುತ್ತಾರೆ.
ಒಲಿಂಪಿಕ್ಸ್ನಲ್ಲಿ ವೇಟ್ಲಿಫ್ಟಿಂಗ್ ಕಂಚು ಗೆದ್ದಿರುವ ಕರ್ಣಂ ಮಲ್ಲೇಶ್ವರಿ ಸಹ ಅನೇಕ ವರ್ಷಗಳಿಂದ ಕೆಲವು ವೇಟ್ಲಿಫ್ಟಿಂಗ್ ಕೋಚ್ಗಳು ಮುಗ್ಧ ಲಿಫ್ಟರ್ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸತತ 5 ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ಬಾಕ್ಸಿಂಗ್ನಲ್ಲೂ ಇಂಥ ಪಿಡುಗಿದೆ ಎಂದರು. ಅಥ್ಲೆಟಿಕ್ಸ್ನಲ್ಲೂ ಸಾಕಷ್ಟು ಮಾಜಿ ಅಥ್ಲೀಟ್ಗಳು ನಮ್ಮ ಕಾಲದಿಂದಲೂ ಉತ್ತಮ ಅವಕಾಶಕ್ಕೆ ಪ್ರತಿಯಾಗಿ ಲೈಂಗಿಕ ‘ಗುರುದಕ್ಷಿಣೆ’ ಪಡೆಯುವ ಪ್ರವೃತ್ತಿ ಇದೆ. ಆದರೆ, ನಮಗೆ ಅದರ ಅನುಭವ ಆಗಿಲ್ಲ ಎನ್ನುತ್ತಾರೆ. ಕೋಚ್ಗಳ ಕಾಮ ಪ್ರವೃತ್ತಿಗೆ ಬೇಸತ್ತು ಅದೆಷ್ಟೋ ಯುವ ಪ್ರತಿಭೆಗಳು ಕ್ರೀಡಾ ಕಣವನ್ನೇ ತೊರೆದು ಹೋಗಿದ್ದಾರೆ. ಕೆಲವು ಪ್ರತಿಭಾವಂತರ ಉತ್ತಮ ಸಾಧನೆಗೆ ಕೋಚ್ ಜೊತೆಗಿನ ‘ಹೊಂದಾಣಿಕೆ ಕಾರಣ’ ಎಂದು ಹೇಳುವವರೂ ಇದ್ದಾರೆ. ಕೋಚ್ ಮಾತ್ರವೇ ಅಲ್ಲ, ಆಯ್ಕೆಗಾರರು, ಒಕ್ಕೂಟಗಳ ಪದಾಧಿಕಾರಿಗಳು ವಿವಿಧ ತಂಡಗಳಿಗೆ ಆಯ್ಕೆ ಮಾಡುವಾಗ ಯಾವ ರೀತಿ ಆಟಗಾರ್ತಿಯರಿಂದ ‘ಸೇವೆ’ ಬಯಸುತ್ತಾರೆ ಎಂದು ಕಥೆ ಹೇಳಿದ ಅನೇಕರಿದ್ದಾರೆ.
ಒಟ್ಟಾರೆ, ಈ ಎಲ್ಲಾ ಪ್ರಕರಣಗಳು ಸೂಚಿಸುವುದು ಕ್ರೀಡೆಯಲ್ಲಿನ ವಿಶ್ವಾಸಘಾತ.
ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಉತ್ತರ ಪ್ರದೇಶದ ಅಪ್ರಾಪ್ತ ಖೋ-ಖೋ ಆಟಗಾರ್ತಿಯ ಮೇಲೆ ಗೋವಾದಲ್ಲಿ ಅತ್ಯಾಚಾರ ಎಸಗಿರುವ ಕೋಚ್ ಒಬ್ಬ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇದು ಒಂದು ನಿದರ್ಶನ ಮಾತ್ರ. ಬೆಳಕಿಗೇ ಬರದ ಇಂಥ ಪ್ರಕರಣಗಳು ಅದೆಷ್ಟೋ ಇವೆ.
ಹುಡುಗಿಯರು ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಕ್ರೀಡಾಕೋಟಾದಲ್ಲಿ ಸ್ಥಾನ ಇತ್ಯಾದಿ ಆಕರ್ಷಣೆಗಳಿಂದ ವಿವಿಧ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಪೋಷಕರ ಒತ್ತಾಸೆಯೂ ಇದಕ್ಕೆ ಇರುತ್ತದೆ. ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳಿಗಾಗಿ ದೂರದೂರದ ಊರುಗಳಿಗೆ ಹೋಗಬೇಕಾಗುತ್ತದೆ. ದುರಂತವೆಂದರೆಎಷ್ಟೋ ಬಾರಿ ರಾಷ್ಟ್ರ ಮಟ್ಟದ ಟೂರ್ನಿಗಳಿಗೆ ದೂರದ ರಾಜ್ಯಗಳಿಗೆ ವಾರಗಟ್ಟಲೆ ತೆರಳುವ ಬಾಲಕಿಯರ ತಂಡದ ಜೊತೆಗೆ ಓರ್ವ ಮಹಿಳಾ ಸಹಯೋಗಿಯೂ ಇರುವುದಿಲ್ಲ. ತಂಡದ ಕೋಚ್, ಮ್ಯಾನೇಜರ್ ಎಲ್ಲರೂ ಪುರುಷರೇ ಆಗಿರುತ್ತಾರೆ. ಕೆಲವು ಪ್ರಕರಣಗಳಲ್ಲಿ ತಂಡದೊಂದಿಗೆ ತೆರಳುವ ಅಧಿಕಾರಿಗಳು, ಕೋಚ್ಗಳಿಗೆ ಸಹಕರಿಸುವಂಥ ಮಹಿಳೆಯರನ್ನೇ ಕರೆದೊಯ್ಯಲಾಗುತ್ತದೆ ಎಂಬ ಆರೋಪಗಳೂ ಇವೆ.
ಕ್ರೀಡೆಯನ್ನು ಕಾಡುತ್ತಿರುವ ಉದ್ದೀಪನ ವ್ಯಸನದ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯವೇ ಗಮನ ಹರಿಸಿದೆ. ಕ್ರೀಡೆಗೆ ಮಾರಕವಾಗಿರುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲು ಇದು ಸಕಾಲ. ಪ್ರತೀ ಬಾರಿ ಪ್ರಕರಣವೊಂದು ಬಯಲಿಗೆ ಬಂದಾಗ ತನಿಖಾ ಸಮಿತಿ ರಚಿಸಿ ಹಗರಣ ಮುಚ್ಚಿಹಾಕುವ ಪ್ರವೃತ್ತಿಯಿಂದ ವ್ಯವಸ್ಥೆಗೆ ಒಳ್ಳೆಯದಲ್ಲ. ಜೊತೆಗೆ ಕೇವಲ ಆಟವಾಡಲು ಬಂದಿರುವ ಆಟಗಾರ್ತಿಯರು ಹಾಗೂ ಮಕ್ಕಳನ್ನು ಕಳಿಸುವ ಪೋಷಕರ ವಿಶ್ವಾಸಕ್ಕೆ ಆಗುವ ವಜ್ರಘಾತವನ್ನು ಒಲಿಂಪಿಕ್ಸ್ ಪದಕದಿಂದಲೂ ಸರಿಪಡಿಸಲು ಸಾಧ್ಯವಿಲ್ಲ.
ಬದುಕಿಗೆ ಬಂಗಾರದ ಬೆಲೆಯೇ ಹೊರತು ಬಂಗಾರದ ಪದಕದಿಂದ ಬದುಕಿನ ಬೆಲೆ ಕಟ್ಟಲು ಸಾಧ್ಯವಿಲ್ಲ.

ಪ್ರೀಜಾ ಶ್ರೀಧರನ್ ಸಂದರ್ಶನ


ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಬಳಿಕ ಪ್ರೀಜಾ ಶ್ರೀಧರನ್ 2 ವರ್ಷ ಕಾಲ ಅಭ್ಯಾಸವನ್ನೇ ನಡೆಸಿರಲಿಲ್ಲ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಮೇಲೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂಬ ಭಾವನೆಯೊಂದಿಗೆ ಅವರು ಸಂತೃಪ್ತಿ ಹೊಂದಿದ್ದರು. ಆದರೆ, 2010ರ ಡೆಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸಾಧನೆ ಮಾಡುವಂತೆ ಅಮ್ಮ ಮತ್ತು ಅಣ್ಣ ಹುರಿದುಂಬಿಸಿದ್ದರ ಪರಿಣಾಮ ಪ್ರೀಜಾ ಟ್ರಾಕ್ಗೆ ಮರಳಿದ್ದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾದಾಗ ಮತ್ತೆ ನಿರಾಸಕ್ತಿ ಪ್ರೀಜಾರನ್ನು ಕಾಡಿತ್ತು. ಇನ್ನು ಎಲ್ಲಿಗೂ ಓಡುವುದಿಲ್ಲ ಎಂಬ ಹತಾಶೆಯ ಹಂತವನ್ನು ಅವರು ತಲುಪಿದ್ದರು. ಆದರೆ, ಮತ್ತೆ ಕುಟುಂಬದವರು ಮತ್ತು ಕೋಚ್ಗಳು ಹಾಗೆ ಮಾಡದಂತೆ ತಡೆದರು. ಅದರ ಪರಿಣಾಮ ಒಂದೇ ತಿಂಗಳಲ್ಲಿ ಫಲ ಸಿಕ್ಕಿತ್ತು. ಚೀನಾದ ಗುವಾಂಗ್ಝೌನಲ್ಲಿ ನಡೆದ ಏಷ್ಯಾಡ್ನಲ್ಲಿ ಪ್ರೀಜಾ 10,000 ಮೀ. ಓಟದಲ್ಲಿ ಚಿನ್ನ, 5000ಮೀ. ಓಟದಲ್ಲಿ ಬೆಳ್ಳಿ ಗೆದ್ದು ಬೀಗಿದ್ದರು.
ಈಗ ಪ್ರೀಜಾ ಏಷ್ಯಾಡ್ನಲ್ಲಿ ಗೆದ್ದ ಚಿನ್ನವನ್ನು ಲಂಡನ್ ಒಲಿಂಪಿಕ್ಸ್ನಲ್ಲಿ ಪದಕವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯೊಂದಿಗೆ ಶ್ರಮ ಪಡುತ್ತಿದ್ದಾರೆ. ಗುವಾಂಗ್ಝೌ ಏಷ್ಯಾಡ್ ಸಾಧನೆಗಾಗಿ ಅವರಿಗೆ ಭಾರತ ಸರ್ಕಾರದ ಮಹತ್ವದ ಕ್ರೀಡಾ ಪುರಸ್ಕಾರ ಅರ್ಜುನ ಪ್ರಶಸ್ತಿ ಲಭ್ಯವಾಗಿದೆ. ಆರ್ಥಿಕ ಹಿನ್ನೆಲೆಯಿಲ್ಲದೆ, ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಕೇರಳದ ಹುಡುಗಿಯನ್ನು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಪ್ರಾಯೋಜಿಸುತ್ತಿದೆ. ಪ್ರೀಜಾ ತಮ್ಮ ಕನಸಿನ ಹಾದಿಯಲ್ಲಿ ಶರವೇಗದಲ್ಲಿ ಓಡುತ್ತಿದ್ದಾರೆ.
ಬೆಂಗಳೂರಿನ ಸಾಯ್ ದಕ್ಷಿಣ ಕೇಂದ್ರದಲ್ಲಿ ಒಲಿಂಪಿಕ್ಸ್ ತಯಾರಿನಲ್ಲಿ ಮಗ್ನರಾಗಿರುವ ಪ್ರೀಜಾ ಶ್ರೀಧರನ್ ಶನಿವಾರ ಅರ್ಜುನ ಪ್ರಶಸ್ತಿ, ತಮ್ಮ ವೃತ್ತಿಜೀವನ ಹಾಗೂ ಲಂಡನ್ ಪೂರ್ವ ತಯಾರಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದರು.
ಏಷ್ಯಾಡ್ನ ಸಾಧನೆ ಬಳಿಕ ಅರ್ಜುನ ಗೌರವವನ್ನು ನಾನು ನಿರೀಕ್ಷಿಸಿದ್ದೆ. ಬಹಳ ಸಂತೋಷವಾಗಿದೆ. ಈ ಪ್ರಶಸ್ತಿ ಇನ್ನೂ ದೊಡ್ಡ ಸಾಧನೆಗಳಿಗೆ ಪ್ರೇರಣೆ ಒದಗಿಸಲಿದೆ ಎಂದು ಪ್ರೀಜಾ ಖುಷಿಯಿಂದ ಹೇಳಿಕೊಂಡರು.
ನನ್ನ ಈ ಸಾಧನೆಯ ಎಲ್ಲಾ ಶ್ರೇಯ ನನ್ನ ಅಮ್ಮ, ಅಣ್ಣ ಪ್ರದೀಪ್ ಮತ್ತು ಕೋಚ್ಗಳಿಗೆ ಸಲ್ಲಬೇಕು. ನಿನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದೆ. ಅವರೆಲ್ಲರಿಗೂ ಅತ್ಯಾನಂದವಾಗಿತ್ತು. ಟಿವಿಯಲ್ಲಿ ನಿನ್ನ ಸುದ್ದಿಯನ್ನೇ ನೋಡುತ್ತಿದ್ದೇವೆ ಎಂದು ಹೇಳಿಕೊಂಡು ಸಂಭ್ರಮ ಪಟ್ಟರು ಎಂದು ಪ್ರೀಜಾ ಹೇಳಿಕೊಂಡರು.
ಪ್ರೀಜಾ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ಸಂದರ್ಭದಲ್ಲೂ ಮೊದಲಿಗೆ ಅಮ್ಮ ಮತ್ತು ಅಣ್ಣನನ್ನು ನೆನಪಿಸಿಕೊಂಡಿದ್ದರು. ಬಡತನದ ಬೆಂಕಿಯಲ್ಲಿ ಅರಳಿದ ಹೂವು ಪ್ರೀಜಾ ಹಾಗೆ ಮಾಡುವುದು ಸಹಜವೂ ಆಗಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಮಲ್ಲಕ್ಕಾನಂ ಹಳ್ಳಿಯ ಹುಡುಗಿ ಪ್ರೀಜಾ 4ನೇ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರು. ಆಗಿನಿಂದಲೂ ಅಮ್ಮ ರಮಣಿ ಶ್ರೀಧರನ್ ಅವರೇ ಮನೆಗೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಪ್ರೀಜಾ ಅಣ್ಣ ಪ್ರದೀಪ್ 8ನೇ ತರಗತಿಯಲ್ಲೇ ಶಾಲೆ ತೊರೆದು ಕಾರ್ಪೆಂಟರ್ ಕೆಲಸಕ್ಕೆ ಸೇರುವ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ ಆ ಕಷ್ಟದ ದಿನಗಳಲ್ಲೂ ಪ್ರೀಜಾರ ಓಡುವ ಆಸಕ್ತಿಗೆ ಅವರು ನೀರೆರೆದಿದ್ದರು.
ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಕೋಚ್ ರಣೇಂದ್ರ ಅವರ ಮನೆಯಲ್ಲೇ ಇದ್ದುಕೊಂಡು ಅಭ್ಯಾಸ ನಡೆಸಿದ್ದ ಪ್ರೀಜಾ, ಪಾಲಂನಲ್ಲಿ ಆಲ್ಫಾನ್ಸೋ ಕಾಲೇಜು ಸೇರಿದ ಮೇಲೆ ಥಂಕಚ್ಚನ್ ಮ್ಯಾಥ್ಯೂ ಅವರಿಂದ ನೆರವು ಪಡೆದಿದ್ದರು.
ಕೊನೆಗೂ ಪ್ರೀಜಾಗೆ ರೈಲ್ವೇ ಉದ್ಯೋಗ ದೊರಕಿದ ಮೇಲೆ ಅವರು ಕುಟುಂಬ ನೆಲೆ ಕಂಡುಕೊಂಡಿತು. ರೈಲ್ವೇಯಲ್ಲಿ ಕೆಲಸ ಸಿಕ್ಕಿದ್ದುನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಎಂದು ಪ್ರೀಜಾ ಈಗಲೂ ಹೇಳುತ್ತಾರೆ.
ಪ್ರೀಜಾ ಕಳೆದ ವರ್ಷ ಏಷ್ಯಾಡ್ನಲ್ಲಿ 10,000ಮೀ. ಓಟವನ್ನು 31 ನಿಮಿಷ 50.28ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಚಿನ್ನ ಗೆದ್ದಿದ್ದರು. ಇದು ರಾಷ್ಟ್ರೀಯ ದಾಖಲೆಯೂ ಹೌದು. ಹಾಗೆ ನೋಡಿದರೆ 5000 ಮೀ. ಮತ್ತು 10,000 ಮೀ. ಓಟಗಳೆರಡರಲ್ಲೂ ರಾಷ್ಟ್ರೀಯ ದಾಖಲೆ ಪ್ರೀಜಾ ಹೆಸರಲ್ಲೇ ಇದೆ. ಮುಂದಿನ ವರ್ಷದ ಲಂಡನ್ ಒಲಿಂಪಿಕ್ಸ್ಗೆ ‘ಎ’ ಶ್ರೇಣಿಯ ಅರ್ಹತೆ ಗಳಿಸಲು ಪ್ರೀಜಾ ಗುವಾಂಗ್ಝೌನಲ್ಲಿ ದಾಖಲಿಸಿದ ಅವಧಿಯನ್ನು ಪುನರಾವರ್ತಿಸಿದರೆ ಸಾಕು. ಅವರಿಂದ ಅದು ಸಾಧ್ಯವೂ ಹೌದು. ಮುಂದಿನ ತಿಂಗಳು ಕೊರಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಷಿಪ್ನಲ್ಲೇ ಈ ಸಾಧನೆ ಮಾಡಿ ಲಂಡನ್ಗೆ ಟಿಕೆಟ್ ಬುಕ್ ಮಾಡುವ ವಿಶ್ವಾಸವನ್ನು ಪ್ರೀಜಾ ಹೊಂದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪದಕದ ಕನಸು ಕಾಣಲು 10,000ಮೀ. ಓಟವನ್ನು ಕನಿಷ್ಠ 29 ಪ್ಲಸ್ ನಿಮಿಷದಲ್ಲಿ ಓಡಬೇಕು. ಇನ್ನೂ ಒಂದು ವರ್ಷದಲ್ಲಿ ಆ ವೇಗ ರೂಢಿಸಿಕೊಳ್ಳಲು ಶತ ಪ್ರಯತ್ನ ಮಾಡುವುದಾಗಿ ಪ್ರೀಜಾ ಹೇಳುತ್ತಾರೆ.
ಮಿತ್ತಲ್ ಸಹಕಾರ: ಪ್ರೀಜಾ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪ್ರಾಯೋಜಕರ ಬೆಂಬಲವಿಲ್ಲದೆ ತಾಪತ್ರಯ ಅನುಭವಿಸಿದ್ದರು. ಆದರೆ, ಈಗ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಅವರ ಒಲಿಂಪಿಕ್ಸ್ ತಯಾರಿಯ ಪೂರ್ಣ ವೆಚ್ಚವನ್ನು ಅದು ಭರಿಸಲಿದೆ.
ಲಕ್ಷ್ಮೀ ಮಿತ್ತಲ್ ಹಾಗೂ ಅಮಿತ್ ಭಾಟಿಯಾ ಮಹತ್ವಾಕಾಂಕ್ಷೆಯ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಸ್ಥಾಪನೆಗೊಂಡಿದ್ದೇ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರನ್ನು ರೂಪಿಸುವ ಕನಸಿನಿಂದ. ಆರ್ಚರಿ, ಕುಸ್ತಿ, ಶೂಟಿಂಗ್, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ನಲ್ಲಿ ಅನೇಕ ಪ್ರತಿಭಾವಂತರು ಸದ್ಯ ಎಂಸಿಟಿ ನೆರವಿನಿಂದ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿದ್ದಾರೆ. ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಸ್ವರ್ಣ ಗೆದ್ದ ಮಿತ್ತಲ್ ಟ್ರಸ್ಟ್ ಪ್ರಾಯೋಜನೆಯ ಮೊದಲ ಚಾಂಪಿಯನ್. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎಂಸಿಟಿ ಪ್ರಾಯೋಜಿತ ಅಥ್ಲೀಟ್ಗಳು 7 ಚಿನ್ನ, 7 ಬೆಳ್ಳಿ, 2ಕಂಚು, ಏಷ್ಯಾಡ್ನಲ್ಲಿ 3 ಚಿನ್ನ, 5 ಬೆಳ್ಳಿ, 8 ಕಂಚು ಗೆದ್ದಿದ್ದರು. ಈಗ ಪ್ರೀಜಾ ಎಂಸಿಟಿ ಪತಾಕೆಯನ್ನು ಲಂಡನ್ನಲ್ಲಿ ಹಾರಿಸಲು ತರಬೇತಿ ನಡೆಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ಗೆ ಸದ್ಯ ಕಳಂಕ ತಂದಿರುವ ಉದ್ದೀಪನ ಕಳಂಕದ ಬಗ್ಗೆ ಪ್ರೀಜಾ ಪ್ರತಿಕ್ರಿಯಿಸಲು ಇಷ್ಟ ಪಡುವುದಿಲ್ಲ. ಎಲ್ಲವೂ ಅಯೋಮಯವಾಗಿದೆ. ಅದೆಲ್ಲಾ ಹೇಗಾಯಿತೆಂದೇ ಗೊತ್ತಾಗುತ್ತಿಲ್ಲ ಎಂದು ಪ್ರೀಜಾ ಹೇಳಿಕೊಂಡರು.
ಕಳೆದ ವರ್ಷ ಏಷ್ಯಾಡ್ನಲ್ಲಿ ಪ್ರೀಜಾ ಗೆದ್ದ ಬಂಗಾರದ ಪದಕಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂ. ನಗದು ಬಹುಮಾನ ನೀಡಿತ್ತು. ಆ ಹಣದಲ್ಲಿ ಪ್ರೀಜಾ ಪಾಲಕ್ಕಾಡ್ನ ಅಕ್ಕಥೇಥರಾದಲ್ಲಿ ಹೊಸದೊಂದು ಮನೆ ಕಟ್ಟಿಸುತ್ತಿದ್ದಾರೆ. ಮುಂದಿನ ತಿಂಗಳು ಗೃಹಪ್ರವೇಶ ನಡೆಯುವ ನಿರೀಕ್ಷೆ ಇದೆ. ನಿನಗೆ ಮದುವೆಯ ವಯಸ್ಸಾಯಿತು ಎಂದು ಅಮ್ಮ ರಮಣಿ ಒತ್ತಾಯ ಮಾಡಲಾರಂಭಿಸಿದ್ದಾರೆ. ಆದರೆ, ಸೂಕ್ತ ಹುಡುಗ ಇನ್ನೂ ಸಿಕ್ಕಿಲ್ಲ. ಅಷ್ಟಕ್ಕೂ ಅಮ್ಮ ಹುಡುಗನನ್ನು ಹುಡುಕಿದರೂ ಆತನನ್ನು ನೋಡಲು ನಾನು ಮನೆಯಲ್ಲಿರುವುದಿಲ್ಲ ಎಂದು ಪ್ರೀಜಾ ಹೇಳಿಕೊಳ್ಳುತ್ತಾರೆ.
ಸದ್ಯಕ್ಕಂತೂ ಪ್ರೀಜಾ ಗಮನವೆಲ್ಲಾ ಒಲಿಂಪಿಕ್ಸ್ ಮೇಲೆ. ಬೆಳಗ್ಗೆ , ಸಂಜೆ ತಲಾ 25 ಕಿಮೀಗಳಂತೆ ದಿನಂಪ್ರತಿ 50ಕಿಮೀ ಓಡುತ್ತಿರುವ ಪ್ರೀಜಾ ದೊಡ್ಡ ಗುರಿಯ ಕಡೆಗೆ ಚಿರತೆ ವೇಗದಲ್ಲಿ ಸಾಗುತ್ತಿದ್ದಾರೆ.

ಪ್ರೀಜಾ ಸಾಧನೆ
1998: ತಂಡ ಬೆಳ್ಳಿ - ಏಷ್ಯಾ ಗುಡ್ಡಗಾಡು ಓಟ, ಹಾಂಕಾಂಗ್
2000: 5000 ಮೀ ಚಿನ್ನ, 10,000ಮೀ. ಬೆಳ್ಳಿ- ಎಸ್ಎಎಫ್ ಗೇಮ್ಸ್
2004: ಚಿನ್ನ, ಏಷ್ಯಾ ಒಳಾಂಗಣ ಕೂಟ, ಟೆಹ್ರಾನ್
2006: 5000ಮೀ. ಬೆಳ್ಳಿ, ಏಷ್ಯನ್ ಅಥ್ಲೆಟಿಕ್ಸ್, ಜೋರ್ಡಾನ್
2008: ಒಲಿಂಪಿಕ್ಸ್ನ 10,000ಮೀ. ಓಟದಲ್ಲಿ ಭಾರತ ಪ್ರತಿನಿಧಿಸಿದ ಮೊದಲ ಮಹಿಳೆ ಎಂಬಶ್ರೇಯ.
2010: 10,000ಮೀ. ಚಿನ್ನ, 5000ಮೀ. ಬೆಳ್ಳಿ, ಗುವಾಂಗ್ಝೌ ಏಷ್ಯಾಡ್

Tuesday, June 21, 2011

ನಂಬಿ ಕೆಟ್ಟವರಿಲ್ಲವೋ...


ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ನ ಮುಖವಾದರೆ, ರಾಹುಲ್ ದ್ರಾವಿಡ್ ಬೆನ್ನೆಲುಬು. ಇದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.
ಬಹುಶಃ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲೋ, ವೆಸ್ಟ್ ಇಂಡೀಸ್ನಲ್ಲೋ ಜನಿಸಿದ್ದರೆ ಈ ಹೊತ್ತಿಗೆ ಆ ರಾಷ್ಟ್ರದ ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳುತ್ತಿದ್ದರು ಅಥವಾ ಭಾರತದಲ್ಲೇ ಸಚಿನ್ ತೆಂಡುಲ್ಕರ್ ಸಮಕಾಲೀನರೆನಿಸದೆ ಬೇರೊಂದು ಕಾಲಘಟ್ಟದಲ್ಲಿ ಜನಿಸಿದ್ದರೆ ಅವರ ಸಾಧನೆಗಳಿಗೆ ಇನ್ನೂ ಹೆಚ್ಚಿನ ಮಹತ್ವ ಸಿಕ್ಕಿರುತ್ತಿತ್ತು.
ಯಶಸ್ಸೆಂಬ ಗಗನಚುಂಬಿ ಕಟ್ಟಡದ ತುತ್ತತುದಿಗೆ ಸಚಿನ್ ಲಿಫ್ಟ್ ಏರಿಕೊಂಡು ಶರವೇಗದಲ್ಲಿ ಏರಿದರೆ, ದ್ರಾವಿಡ್ ಒಂದೊಂದೇ ಮೆಟ್ಟಿಲು ಕ್ರಮಿಸಿಕೊಂಡು ಸ್ಥಿರವಾಗಿ ಏರಿದರು.
ದ್ರಾವಿಡ್ ಎಂದೊಡನೆ ಕಣ್ಮುಂದೆ ಸುಳಿಯುವುದು ಅವರ ಸದ್ವರ್ತನೆ, ಸೌಜನ್ಯ, ವಿಧೇಯತೆ ಮತ್ತು ಸರಳತೆ. ಅವರು ಸ್ಟೈಲಿಷ್ ಆಗಿದ್ದರೂ ಶೋಕಿಲಾಲರಲ್ಲ. ವಾಗ್ಮಿಯಾಗಿದ್ದರೂ ವಾಚಾಳಿಯಲ್ಲ. ಶಿಸ್ತಿನ ವ್ಯಕ್ತಿಯಾಗಿದ್ದರೂ ಸಿಡುಕನಲ್ಲ. ತಾಂತ್ರಿಕವಾಗಿ ಪರಿಪೂರ್ಣ ಆಟಗಾರನೆನಿಸಿದ್ದರೂ ಅಷ್ಟಕ್ಕೇ ಸೀಮಿತಗೊಂಡವರಲ್ಲ. ಅನುಭವ ಶ್ರೀಮಂತನಾದರೂ ಮೈಮರೆತವರಲ್ಲ. ದ್ರಾವಿಡ್ ಎಂದರೆ ಪರಿಪೂರ್ಣತೆಗೆ ಹತ್ತಿರ ದಲ್ಲಿರುವ, ಇನ್ನೂ ಪ್ರಕ್ರಿಯೆಯಲ್ಲಿರುವ ಒಂದು ಕಲಾಕೃತಿ. ಅವರಿಗೆ ನಿರಂತರವಾಗಿ ಯಶಸ್ಸಿನ ಹಸಿವು, ಸಾಧನೆಯ ದಾಹ, ಎತ್ತರಕ್ಕೇರುವ ತುಡಿತ. ಕ್ರಿಕೆಟ್ ಮೈದಾನದಲ್ಲಿ ಅವರೊಬ್ಬ ಸದಾ ಅನ್ವೇಷಣಶೀಲ ವಿಜ್ಞಾನಿ. ಏರಿಳಿತಗಳಿಂದ ವಿಚಲಿತಗೊಳ್ಳದ ತತ್ವಜ್ಞಾನಿ. ಆದರೆ, ಅವರ ಪ್ರಕಾರ ಶಾಶ್ವತ ವಿದ್ಯಾರ್ಥಿ. ಅವರ ವೃತ್ತಿಜೀವನ ಒಂದು ಸುದೀರ್ಘ ಕಲಿಕೆಯ ಅಭಿಯಾನ. ಒಂದೊಂದು ಪಂದ್ಯವೂ ಅವರಿಗೆ ಒಂದೊಂದು ಪರೀಕ್ಷೆ. ಪ್ರತೀ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಬದ್ಧತೆ, ಪ್ರಯತ್ನಶೀಲತೆ, ಛಲ ಅವರಲ್ಲಿ. ಅದೇ ದ್ರಾವಿಡ್ ಹಿರಿಮೆ.
ಎಷ್ಟೋ ಬಾರಿ ಕ್ರಿಕೆಟಿಗನ ಶ್ರೇಷ್ಠತೆಯನ್ನು ಕೇವಲ ಅಂಕಿ ಅಂಶದಿಂದ ಅಳೆಯಲು ಸಾಧ್ಯವಾಗುವುದಿಲ್ಲ. ದ್ರಾವಿಡ್ ವಿಷಯದಲ್ಲೂ ಅಷ್ಟೇ. ಕ್ರಿಕೆಟ್ನಲ್ಲಿ ಹರ್ಭಜನ್ ಸಿಂಗ್ ಸಹ ಎರಡು ಶತಕ ಬಾರಿಸಿದ್ದಾರೆ. ಲಕ್ಷ್ಮೀಪತಿ ಬಾಲಾಜಿಯಂಥವರು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಂದು ಅದೆಲ್ಲಾ ಅವರ ಬ್ಯಾಟಿಂಗ್ ಪ್ರೌಢಿಮೆಗಿಂತ ಅದೃಷ್ಟದ ಫಲ. ಮುಟ್ಟಿದ್ದೆಲ್ಲಾ ಚಿನ್ನವಾಗುವಂಥ ಎಂದೋ ಒಂದು ದಿನ ಹರ್ಭಜನ್ ಕಣ್ಣು ಮುಚ್ಚಿಕೊಂಡು ಹೊಡೆದರೂ ಔಟಾಗುವುದಿಲ್ಲ. ಬ್ಯಾಟ್ ತಾಗಿದರೆ ಸಾಕು ಚೆಂಡು ಬೌಂಡರಿಯತ್ತ ಓಡುತ್ತದೆ. ಆದರೆ, ದ್ರಾವಿಡ್ ವೃತ್ತಿಜೀವನದಲ್ಲಿ ಇಂಥ ಬಿಟ್ಟಿ ರನ್ಗಳಿಲ್ಲ. ಸೆಹ್ವಾಗ್ರಂತೆ ಎಡ್ಜ್ ಆಗಿ ಕ್ಯಾಚ್ ಆಗಬೇಕಾದ ಚೆಂಡು ಬೌಂಡರಿ, ಸಿಕ್ಸರ್ ಆದ ಉದಾಹರಣೆ ದ್ರಾವಿಡ್ ಬ್ಯಾಟಿಂಗ್ನಲ್ಲಿ ಕಾಣಸಿಗುವುದಿಲ್ಲ. ಅಂದರೆ, ಅವರು ಗಳಿಸುವ ಒಂದೊಂದು ರನ್ನಿನಲ್ಲೂ ಅವರ ಪ್ರಯತ್ನವಿರುತ್ತದೆ. ಪ್ರತಿಭೆ, ಯೋಗ್ಯತೆ, ಅಭ್ಯಾಸ, ಸಿದ್ಧಿ ಕಾಣುತ್ತದೆ. ಹೊಸದಾಗಿ ಕ್ರಿಕೆಟ್ ಕಲಿಯುವವರು ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ಸಾಕು. ಕ್ರೀಸ್ನಲ್ಲಿ ನಿಲುವಿನಿಂದ ಬ್ಯಾಟ್ ಹಿಡಿಯುವ ರೀತಿಯಿಂದ, ಚೆಂಡನ್ನು ನೋಡುವ, ಗ್ರಹಿಸುವ, ಮೌಲ್ಯಕ್ಕೆ ತಕ್ಕಂತೆ ಆಡುವ ಒಂದೊಂದು ಅಂಶವೂ ಒಂದೊಂದು ಪಾಠ. ಚೆಂಡಿರುವುದೇ ಚಚ್ಚುವುದಕ್ಕೆ ಎನ್ನುವ ಇಂದಿನ ಟಿ20 ಯುಗದಲ್ಲಿ ಶ್ರೇಷ್ಠ ಎಸೆತಗಳ ವಿರುದ್ಧ ಯಾವ ಯಾವ ರೀತಿ ರಕ್ಷಣಾತ್ಮಕವಾಗಿ ಆಡಬಹುದು, ಯಾವ ರೀತಿ ಆಕ್ರಮಣ ನಡೆಸಬಹುದು ಎಂಬುದನ್ನು ದ್ರಾವಿಡ್ ಆಟ ನೋಡಿ ಕಲಿಯಬಹುದು.
ದ್ರಾವಿಡ್ರ ವಿಶೇಷತೆಯೆಂದರೆ ಅವರು ಯಾವತ್ತೂ ತಮ್ಮ ಆಟ ನಿಂತ ನೀರಾಗಲು ಅವಕಾಶ ಕೊಡಲಿಲ್ಲ. ಒಂದು ಚೌಕಟ್ಟಿನೊಳಗೆ ಬಂಧಿಯಾಗಲಿಲ್ಲ. ಕೇವಲ ಟೆಸ್ಟ್ ಆಟಗಾರ ಎಂದು ಬ್ರಾಂಡ್ ಆಗಲಿಲ್ಲ. ಬರೀ ಬ್ಯಾಟ್ಸ್ಮನ್ ಆಗಿಯೂ ಉಳಿಯಲಿಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ ುನ್ ಆಗಿ ಅವರ ರೂಪಾಂತರ, ಸ್ಲಿಪ್ ಫೀಲ್ಡರ್ ಆಗಿ ಸಾಧಿಸಿದ ತಜ್ಞತೆ, ವಿಕೆಟ್ಕೀಪರ್ ಆಗಿ ಪ್ರದರ್ಶಿಸಿದ ಉಪಯುಕ್ತತೆ ಎಲ್ಲವೂ ಭವಿಷ್ಯದ ಪೀಳಿಗೆಗೆ ಒಂದೊಂದು ಪಾಠ.
ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಅನೇಕ ಐತಿಹಾಸಿಕ ಸಾಧನೆಗಳ ಸಂದರ್ಭದಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ಕೋಲ್ಕತ್ತದ ಐತಿಹಾಸಿಕ ಟೆಸ್ಟ್ನಿಂದ ಆಸ್ಟ್ರೇಲಿಯಾದಲ್ಲಿನ ದಿಗ್ವಿಜಯದವರೆಗೆ, ದಕ್ಷಿಣ ಆಫ್ರಿಕಾದಲ್ಲಿನ ಸಾಹಸದಿಂದ ನ್ಯೂಜಿಲೆಂಡ್ನಲ್ಲಿ ಸತತ ಶತಕ ಪರಾಕ್ರಮದವರೆಗೆ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಸರಣಿ ವಿಜಯದವರೆಗೆ ಎಲ್ಲೆಡೆ ಭಾರತದ ಎಲ್ಲಾ ಮಹತ್ವದ ಸಾಧನೆಗಳಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ತೆಂಡುಲ್ಕರ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆಯ ಮಹೋನ್ನತ ಸಾಹಸದ ದಿನಗಳಲ್ಲಿ ದ್ರಾವಿಡ್ ಸಹ ಕೊಡುಗೆ ಸಲ್ಲಿಸಿದ್ದಾರೆ. ತಂಡದಲ್ಲಿ ಎಲ್ಲರೂ ಭರ್ಜರಿ ಫಾರ್ಮ್ ನಲ್ಲಿರುವಾಗ ಶತಕ, ಅರ್ಧ ಶತಕ ಬಾರಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ದ್ರಾವಿಡ್ ಎಲ್ಲರೂ ವಿಫಲರಾದ ದಿನಗಳಲ್ಲೂ ತಾವೊಬ್ಬರೇ ಏಕಾಂಗಿಯಾಗಿ ಹೋರಾಡಿದ್ದಾರೆ. ಅಂಥ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಅಥವಾ ಸಂಪೂರ್ಣ ಶರಣಾಗತಿ ತಪ್ಪಿಸಿ ಮರ್ಯಾದೆ ಉಳಿಸಿದ್ದಾರೆ. ಮಿ. ಡಿಪೆಂಡಬಲ್ ಎಂಬ ಹೊಗಳಿಕೆ ಅವರಿಗೆ ಸುಮ್ಮನೆ ಬಂದಿದ್ದಲ್ಲ.
ದ್ರಾವಿಡ್ ಯಶಸ್ಸಿಗೆ ಸ್ವರ್ಣ ತೂಕ ಏಕೆಂದರೆ ಅವರಿಗೆ ಯಾವತ್ತೂ ಸಾಧನೆಯ ಪಿತ್ಥ ನೆತ್ತಿಗೇರಲಿಲ್ಲ. ತಮ್ಮ ಬೇರುಗಳನ್ನು ಅವರು ಮರೆಯಲಿಲ್ಲ. ಆವೇಶದ ಕೈಗೆ ವಿವೇಚನೆಯನ್ನು, ಆತುರದ ಕೈಗೆ ವಿವೇಕವನ್ನು ಅವರು ಯಾವತ್ತೂ ಕೊಡಲಿಲ್ಲ. ಸುದೀರ್ಘ ವೃತ್ತಿಜೀವನದಲ್ಲಿ ಯಾವತ್ತೂ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ. ಚೆಂಡು ವಿರೂಪದಂಥ ಆರೋಪವನ್ನು ಅವರ ತಲೆಗೆ ಕಟ್ಟಲಾದ ಸಂದರ್ಭದಲ್ಲೂ ಅವರು ಅಮಾಯಕರಾಗಿದ್ದರೆ ವಿನಃ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿರಲಿಲ್ಲ. ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಅವರು ಎಲ್ಲೆ ಮೀರಲಿಲ್ಲ. ಕ್ರಿಕೆಟ್ನಿಂದ ಅವರು ಗಣ್ಯರಾದಷ್ಟೇ ಕ್ರಿಕೆಟ್ಗೂ ಘನತೆ ತಂದುಕೊಟ್ಟಿದ್ದು ಅವರ ಹಿರಿಮೆ.

Thursday, May 12, 2011

ಕುಣಿಯೆ ಕುಣಿಯೆ ಚಿಯರುಲತೆ


ನೃತ್ಯವನ್ನು ನೋಡು, ನರ್ತಿಸುವವಳನ್ನಲ್ಲ ಎಂಬ ಮಾತೊಂದಿತ್ತು... ಅದೀಗ ತಿರುವುಮುರುವಾಗಿದೆ!
ನೃತ್ಯವೆನ್ನುವುದು ಹೆಜ್ಜೆಗಳು ಸೃಷ್ಟಿಸುವ ಕಾವ್ಯ ಎಂದೊಬ್ಬರು ಮಹಾನುಭಾವ ಹೇಳಿದ್ದರು. ಆದರೆ ನಮ್ಮ ಕವಿಗಳು ಕಾವ್ಯವನ್ನು ಕನ್ನಿಕೆ ಎಂದು ಕರೆದರು. ಕನ್ನಿಕೆಯನ್ನು ಕಾವ್ಯಮಯವಾಗಿ ಬಣ್ಣಿಸಿದರು. ಹೆಣ್ಣಿನ ಅಂಕು, ಡೊಂಕು, ಬಾಗು, ಬಳುಕು, ಲಾಸ್ಯ, ಹಾಸ್ಯ, ಮೊಗ, ನಗು ಕಾವ್ಯಭಾಷೆಯಲ್ಲಿ ಅಮರತ್ವ ಪಡೆದವು. ಕಾವ್ಯದಿಂದ ಹೆಣ್ಣು ಸುಂದರಿಯಾದಳು. ಕಾವ್ಯದ ಕಣ್ಣಲ್ಲಿ ಜನ ಸೌಂದರ್ಯವನ್ನು ಹುಡುಕಿದರು. ಸುಂದರಿಯರಲ್ಲಿ ಕಾವ್ಯವನ್ನು ಹುಡುಕಿದರು.ಯರ್ಗರ್ಲ್ಸ್ ಎಂಬ ಕಾವ್ಯ ಸೂರ್ತಿ ಹುಟ್ಟಿಸುವ ಕನ್ನಿಕೆಯರ ಸಲುವಾಗಿ ಇಷ್ಟೆಲ್ಲಾ ಹೇಳಬೇಕಾಯಿತು. ಚಿಯರ್ಲೀಡಿಂಗ್ ಎಂಬ ಪರಿಕಲ್ಪನೆ ಹಾಗೂ ಚಿಯರ್ಲೀಡರ್ಸ್ ಎಂಬ ಗಂಧರ್ವ ಬೆಡಗಿಯರು ಭಾರತಕ್ಕೆ ಕಾಲಿಟ್ಟಿದ್ದು ಐಪಿಎಲ್ ಮೂಲಕ. ಬಾರ್, ನೈಟ್ಕ್ಲಬ್ಗಳಲ್ಲಿ ಹುಡುಗಿಯರು ನರ್ತಿಸುವುದನ್ನು ನಿಷೇಸುವ ನಮ್ಮ ದೇಶದಲ್ಲಿ ಕ್ರಿಕೆಟ್ ಮೈದಾನದಲ್ಲಿ ಪರಂಗಿ ಹುಡುಗಿಯರು ಅರೆಬೆತ್ತಲೆ ಕುಣಿಯಲು ಅವಕಾಶವಾಗಿದ್ದಾದರೂ ಹೇಗೆ ಎನ್ನುವುದು ಮತ್ತೊಂದು ವಿಚಾರ. ಆದರೆ, ನಮ್ಮ ಚಲನಚಿತ್ರಗಳಲ್ಲಿ ಐಟಂ ಸಾಂಗ್ ಇರುವಂತೆ, ಇವರನ್ನೂ ಕ್ರಿಕೆಟ್ ಮೈದಾನದ ಐಟಂ ಹುಡುಗಿಯರು ಎನ್ನಲಡ್ಡಿಯಿಲ್ಲ.ಯರ್ಲೀಡರ್ಸ್ ಪರಿಕಲ್ಪನೆ ಭಾರತಕ್ಕೆ ಹೊಸದೇನೂ ಅಲ್ಲ. ಏಕೆಂದರೆ ಪ್ರಜಾಪ್ರಭುತ್ವ ಬರುವುದಕ್ಕೆ ಮುನ್ನ ಎಲ್ಲಾ ರಾಜ-ಮಹಾರಾಜರ ಆಸ್ಥಾನಗಳಲ್ಲಿ ರಾಜನರ್ತಕಿಯರಿರುತ್ತಿದ್ದರು. ಹಾಗೆ ನೋಡಿದರೆ ಚಿಯರ್ಲೀಡರ್ಗಳನ್ನು ಪೋಷಿಸಿದ ಮೊಟ್ಟಮೊದಲ ವ್ಯಕ್ತಿ ದೇವೇಂದ್ರಘಿ. ಅವನ ಒಡ್ಡೋಲಗದಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಂಥ ಚಿಯರ್ಲೀಡರ್ಗಳಿದ್ದರು.ದರೂ, ಚಿಯರ್ಲೀಡರ್ಗಳೆಂಬ ವೃತ್ತಿಪರ ಪರಿಕಲ್ಪನೆ ಆರಂಭವಾಗಿದ್ದು ಸುಮಾರು ನೂರಿಪ್ಪತ್ತು ವರ್ಷಗಳ ಹಿಂದೆ. ಅಮೆರಿಕದಲ್ಲಿ ಚಿಯರ್ಲೀಡಿಂಗ್ ಎನ್ನುವುದು ಆಸಕ್ತಿ ಅಥವಾ ವೃತ್ತಿಯ ಹಂತವನ್ನು ದಾಟಿ ಸಂಸ್ಕೃತಿಯೇ ಆಗಿಹೋಗಿದೆ. ಒಂದು ಅಂದಾಜಿನ ಪ್ರಕಾರ ಕೇವಲ ಅಮೆರಿಕದಲ್ಲೇ 15 ಲಕ್ಷಕ್ಕೂ ಹೆಚ್ಚು ಚಿಯರ್ಲೀಡರ್ಗಳಿದ್ದಾರೆ. ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳ ಹುಡುಗಿಯರಿಗೆ ಬೇರೆಲ್ಲಾ ಆಯ್ಕೆಗಳಂತೆ ಚಿಯರ್ಲೀಡಿಂಗ್ ಸಹ ಒಂದು ವೃತ್ತಿ ಆಯ್ಕೆಯಾಗಿದೆ.
ಭಾರತದಲ್ಲೂ ಚಿಯರ್ಲೀಡಿಂಗ್ ಕಂಪೆನಿಗಳಿವೆ. ಆದರೆ, ಆ ತಂಡಗಳಲ್ಲೆಲ್ಲಾ ಕುಣಿಯುವವರು ವಿದೇಶಿ ಹುಡುಗಿಯರು. ನಮ್ಮ ಹುಡುಗಿಯರಿಗೆ ನೃತ್ಯ ಹೊಸದಲ್ಲವಾದರೂ ಕ್ರೀಡಾ ಮೈದಾನದಲ್ಲಿ ಕುಣಿಯುವುದು ಹೊಸ ವಿಷಯವೇ. ಅದಕ್ಕಿನ್ನೂ ಅವರು ತೆರೆದುಕೊಳ್ಳಬೇಕಿದೆ.
ಭಾರತಕ್ಕೆ ಚಿಯರ್ಲೀಡರ್ಸ್ ಬೆಡಗಿಯರು ಕಾಲಿಟ್ಟಿದ್ದು 2008ರಲ್ಲಿ ಮೊದಲ ಐಪಿಎಲ್ ಮೂಲಕ. ಆಗ ಮನರಂಜನೆಯ ಹೆಸರಿನಲ್ಲಿ ಈ ಹುಡುಗಿಯರು ಅರೆಬರೆ ಬಟ್ಟೆ ತೊಟ್ಟು ಅರೆಬೆತ್ತಲೆ ಕುಣಿಯುವುದರ ವಿರುದ್ಧ ದೊಡ್ಡ ಕೋಲಾಹಲವೇ ನಡೆದುಹೋಗಿತ್ತು. ಸಂಸತ್ತಿನಲ್ಲೂ ಚರ್ಚೆಗಳಾಗಿದ್ದವು. ಚಿಯರ್ಲೀಡರ್ಗಳಿಂದ ಕ್ರಿಕೆಟ್ಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ಕ್ರಿಕೆಟ್ ಮಂಡಳಿ ಪದಾಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿತ್ತು. ಆದರೆ, ಕಾಲಾನಂತರದಲ್ಲಿ ಎಲ್ಲವೂ ತಣ್ಣಗಾದವು. ಚಿಯರ್ಲೀಡರ್ಗಳ ಉಡುಗೆ ಮೊದಲಿಗಿಂತ ಸ್ವಲ್ಪ ಸಭ್ಯವಾಗಿರುವುದು ನಿಜವಾದರೂ, ಸಾರ್ವಜನಿಕವಾಗಿ ಆಕ್ಷೇಪಿಸುವ ಮಂದಿಯೇ ಕ್ರಿಕೆಟ್ ಮೈದಾನಕ್ಕೆ ಬಂದು ಆಸ್ವಾದಿಸುವುದರಿಂದ ನಿಧಾನವಾಗಿ ಚಿಯರ್ಲೀಡಿಂಗ್ ಸಹ ನಮ್ಮ ಕ್ರಿಕೆಟ್ ಸಂಸ್ಕೃತಿಯ ಭಾಗವಾಗಿದೆ.ದರರ್ಥ ಜನ ಈಗ ಕ್ರಿಸ್ ಗೇಲ್ ಆಟ ನೋಡಲು ಹೋಗುವಂತೆಯೇ ಚಿಯರ್ಲೀಡರ್ಗಳನ್ನು ನೋಡಲೂ ಹೋಗುತ್ತಾರೆ. ನೃತ್ಯಕ್ಕಿಂತ ಹೆಚ್ಚಾಗಿ ನರ್ತಿಸುವವರನ್ನು ನೋಡುತ್ತಾರೆ. ಟಿವಿ ನೇರ ಪ್ರಸಾರಗಳಲ್ಲೂ ಜನ ಪ್ರತೀ ಬೌಂಡರಿ, ಸಿಕ್ಸರ್ಗಳ ಬಳಿಕ ಚಿಯರ್ಲೀಡರ್ಸ್ ನರ್ತನವನ್ನು ಅಪೇಕ್ಷಿಸುತ್ತಾರೆ. ಅವರು ನರ್ತಿಸಿದ್ದನ್ನು ಟಿವಿಯಲ್ಲಿ ತೋರಿಸದಿದ್ದಲ್ಲಿ ಸಿಟ್ಟಾಗುತ್ತಾರೆ.ಬಾರಿ ಐಪಿಎಲ್ನಲ್ಲಿ ಎಲ್ಲಾ ತಂಡಗಳೂ ಚಿಯರ್ಲೀಡರ್ಸ್ಗಳನ್ನು ಹೊಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಪರ ವೈಟ್ಮಿಶ್ಚ್ೀ ತಂಡದ ಹುಡುಗಿಯರು ನರ್ತಿಸುತ್ತಿದ್ದಾರೆ. ಕೋಲ್ಕತ್ತ ತಂಡದ ಚಿಯರ್ಲೀಡರ್ಗಳೂ ಮುದ್ದಾಗಿ ಗೊಂಬೆಯಂತಿದ್ದಾರೆ. ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಮುಂಬೈನ ಏಜೆನ್ಸಿ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಉಕ್ರೇನ್ನ ಹುಡುಗಿಯರು ಆ ತಂಡದ ಪರ ಕುಣಿಯುತ್ತಿದ್ದಾರೆ. ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ಹೀಗೆ ಎಲ್ಲಾ ತಂಡಗಳೂ ತಮ್ಮದೇ ಕುಣಿಯುವ ಬಳಗ ಹೊಂದಿವೆ. ಚೆನ್ನೈ ಸೂಪರ್ಕಿಂಗ್ಸ್ ಚಿಯರ್ಲೀಡರ್ಸ್ ತಂಡದಲ್ಲಿ ಹುಡುಗರೂ ಇರುವುದು ವಿಶೇಷ. ಪುಣೆ ವಾರಿಯರ್ಸ್ ಮಾತ್ರ ವಿದೇಶಿ ಬೆಡಗಿಗೆ ಮಾರುಹೋಗದೆ ದೇಶಿ ಸಾಂಪ್ರದಾಯಿಕ ನರ್ತಕಿಯರನ್ನು ಚಿಯರ್ಕ್ವೀನ್ಸ್ ಹೆಸರಲ್ಲಿ ಪರಿಚಯಿಸಿದೆ. ಅವರಿಂದಾಗಿ ಭರತನಾಟ್ಯ, ಕಥಕ್ಕಳಿ, ಕೂಚಿಪುಡಿ, ಬಂಗಾಳಿ, ಮರಾಠಿ, ಪಂಜಾಬಿ ಸಾಂಪ್ರದಾಯಿಕ ನೃತ್ಯಗಳೂ ಕ್ರಿಕೆಟ್ ಮೈದಾನ ಪ್ರವೇಶಿಸಿವೆ.್ರಕೆಟ್ಗೆ ಅದರಲ್ಲೂ ಟಿ20 ಮಾದರಿಗೆ ಇಂಥ ಚಿಯರ್ಲೀಡರ್ಗಳ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಇದ್ದರೂ, ಇದು ಆಡೆಡ್ ಅಟ್ರಾಕ್ಷನ್ ಎನ್ನುವುದು ನಿಜ. 30-40 ಸಾವಿರ ಜನ ತೆರೆದ ಕಣ್ಣು ಮುಚ್ಚದಂತೆ ನೋಡುತ್ತಿದ್ದರೆ ಆ ಹುಡುಗಿಯರಿಗಾದರೂ ಇರುಸುಮುರಿಸಾಗುವುದಿಲ್ಲವೇ? ನೃತ್ಯ ಅಥವಾ ಮುಖಕ್ಕಿಂತ ಮೈಮಾಟವನ್ನೇ ಆಸೆಕಂಗಳಿಂದ ನೋಡುವಾಗ ಮುಜುಗರವಾಗುವುದಿಲ್ಲವೇ? ಆ ಹುಡುಗಿಯರು ಆ ರೀತಿ ಯೋಚಿಸುವುದೇ ಇಲ್ಲ. ಜನ ನೋಡಲಿ ಎಂದೇ ಆ ವೃತ್ತಿ ಆಯ್ಕೆ ಮಾಡಿಕೊಂಡಿರುವಾಗ ಸಂಕೋಚಪಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳುತ್ತಾರೆ.
ಹಾಗೆಂದು ಭಾರತಕ್ಕೆ ಬಂದಿರುವ ಎಲ್ಲಾ ಚಿಯರ್ಲೀಡರ್ಗಳಿಗೆ ಕ್ರಿಕೆಟ್ ಬಗ್ಗೆ ಗೊತ್ತಿದೆ ಎಂದೇನೂ ಅಲ್ಲ ಅಥವಾ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಅವರಿಗೆ ಇದು ಮತ್ತೊಂದು ಅಸೈನ್ಮೆಂಟ್ ಅಷ್ಟೇ. ಆದರೆ, ಯಾವ ಸಂದರ್ಭದಲ್ಲಿ ನರ್ತಿಸಬೇಕು, ಯಾವ ಸಂದರ್ಭದಲ್ಲಿ ನರ್ತಿಸಬಾರದು ಎಂದೆಲ್ಲಾ ಅವರಿಗೆ ಹೇಳಿಕೊಡಲಾಗಿರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಬಿದ್ದಾಗ ಇದಕ್ಕೆಲ್ಲಾ ಬೇರೆ ಬೇರೆ ಬಗೆಯ ಸ್ಟೆಪ್ಗಳನ್ನು ಅವರು ಅಭ್ಯಾಸ ಮಾಡಿರುತ್ತಾರೆ. ಕೊಚ್ಚಿ ಟಸ್ಕರ್ಸ್ ಪರ ನರ್ತಿಸುತ್ತಿರುವ ಚಿಯರ್ಲೀಡರ್ಗಳು ಉಕ್ರೇನ್ನ ಹುಡುಗಿಯರು. ಅವರಿಗೆ ಕ್ರಿಕೆಟ್ನ ತಲೆಬುಡ ಗೊತ್ತಿಲ್ಲ. ಹಾಗಾಗಿ ಪಂದ್ಯದಲ್ಲಿ ಯಾವ ಸಂದರ್ಭದಲ್ಲಿ ನರ್ತಿಸಬೇಕು ಎಂದು ಅವರಿಗೆ ಸೂಚಿಸುವುದಕ್ಕೆಂದೇ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗಿದೆ.
ಭಾರತದಲ್ಲಿ ಚಿಯರ್ಲೀಡಿಂಗ್ ಮಾಡುವುದು ಈ ಹುಡುಗಿಯರಿಗೊಂದು ವಿನೂತನ ಅನುಭವ. ದಿನಕ್ಕೊಂದು ಹೊಸ ನಗರ, ದಿನ ಬಿಟ್ಟುದಿನ ಪ್ರಯಾಣ, ಹೊಸ ಜಾಗ, ಹೊಸ ಕ್ರೀಡಾಂಗಣ, ಹೊಸ ಪ್ರೇಕ್ಷಕರು.... ಈ ನಡುವೆ ಊರು ಸುತ್ತುವ, ಶಾಪಿಂಗ್ ಮಾಡುವ, ಪಂದ್ಯ ಮುಗಿದ ಮೇಲೆ ತಡರಾತ್ರಿಯವರೆಗೆ ಕ್ರಿಕೆಟಿಗರೊಂದಿಗೆ ಪಾರ್ಟಿ ಮಾಡುವ ಅವಕಾಶ. ಇದೆಲ್ಲದರ ಜೊತೆಗೆ ಕೈತುಂಬಾ ದುಡ್ಡು...ನಲ್ಲಿ ಚಿಯರ್ಲೀಡರ್ಗಳೆಂಬ ಮಾಯಾಂಗನೆಯರು ಕ್ರಿಕೆಟ್ ವೀಕ್ಷಣೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ.




ಎಲ್ಲಿಂದಲೋ ಬಂದವರು...ಚಿಯರ್ಲೀಡಿಂಗ್ ಪರಿಕಲ್ಪನೆ ಜಗತ್ತಿಗೆ ಅಮೆರಿಕದ ಕೊಡುಗೆ. ಮಿನ್ನೆಸೊಟ ವಿಶ್ವವಿದ್ಯಾಲಯದಲ್ಲಿ ುಟ್ಬಾಲ್ ಪಂದ್ಯಗಳ ಸಂದರ್ಭದಲ್ಲಿ ಪ್ರೇಕ್ಷಕರು ಸಂಘಟಿತವಾಗಿ ಉತ್ತೇಜಿಸುವ ಹೊಸ ಬಗೆಯನ್ನು ಥಾಮಸ್ ಪೀಬಲ್ಸ್ ಎಂಬಾತ ಪರಿಚಯಿಸಿದರು. ಆದರೆ, ಜಗತ್ತಿನ ಮೊಟ್ಟಮೊದಲ ಚಿಯರ್ಲೀಡರ್ ಮಿನ್ನೆಸೊಟ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಾನ್ನಿ ಕ್ಯಾಂಪ್ಬೆಲ್. ರಾಹ್ ರಾಹ್ ರಾಹ್, ಸ್ಕೈ-ಉ-ಮಾಹ್-ಹೂ-ರಾಹ್! ಹೂ-ರಾಹ್! ವಾರ್ಸಿಟಿ! ವಾರ್ಸಿಟಿ! ವಾರ್ಸಿಟಿ! ಮಿನ್-ಎ-ಸೋ-ಟಾಹ್ ಎಂದು ಅವರು ಮೊದಲ ಬಾರಿ ಉತ್ತೇಜಿಸಿ ಕುಣಿದರು. ನವೆಂಬರ್ 2, 1898ರ ಆ ದಿನವೇ ಚಿಯರ್ಲೀಡಿಂಗ್ ಹುಟ್ಟಿದ ದಿನ. ಅದಾದ ಮೇಲೆ ಮಿನ್ನೆಸೊಟ ವಿವಿ ಯೆಲ್ ಲೀಡರ್ಗಳೆಂಬ 6 ಹುಡುಗರ ತಂಡವನ್ನು ಕಟ್ಟಿತು. 1903ರಲ್ಲಿ ಗಾಮಾ ಸಿಗ್ಮಾ ಎಂಬ ಮೊದಲ ಚಿಯರ್ಲೀಡಿಂಗ್ ಕಂಪೆನಿ ಉಗಮಗೊಂಡಿತು. ಆಗೆಲ್ಲಾ ಚಿಯರ್ಲೀಡಿಂಗ್ ಎನ್ನುವುದು ಗಂಡಸರ ಚಟುವಟಿಕೆಯಾಗಿತ್ತು. ಹುಡುಗಿಯರು ಈ ರಂಗ ಪ್ರವೇಶಿಸಿದ್ದು 1923ರಲ್ಲಿ. ಇದಕ್ಕೆ ಕಾರಣ ಆಗ ಕಾಲೇಜು ಮಟ್ಟದಲ್ಲಿ ಹುಡುಗಿಯರಿಗೆ ಹೆಚ್ಚು ಕ್ರೀಡೆಗಳಿರಲಿಲ್ಲ. ಹಾಗಾಗಿ ಅವರೆಲ್ಲಾ ಖಾಲಿ ಇದ್ದರು. ಜೊತೆಗೆ ಹುಡುಗರನ್ನೆಲ್ಲಾ ಮಹಾಯುದ್ಧಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹಾಗಾಗಿ ಚಿಯರ್ಲೀಡಿಂಗ್ ತಂಡಗಳಿಗೆ ಹುಡುಗಿಯರನ್ನು ಬಳಸಿಕೊಳ್ಳಲಾಯಿತು. ಈಗ ಜಗತ್ತಿನಾದ್ಯಂತ ಶೇ. 97ರಷ್ಟು ಚಿಯರ್ಲೀಡರ್ಗಳು ಹುಡುಗಿಯರು. ಆದರೆ, ಅಮೆರಿಕದ ಕಾಲೇಜು ಮಟ್ಟದ ಚಿಯರ್ಲೀಡಿಂಗ್ ತಂಡಗಳಲ್ಲಿ ಅರ್ಧದಷ್ಟು ಹುಡುಗರೂ ಇರುತ್ತಾರೆ.ಂದು ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿಂದು ಸುಮಾರು 15 ಲಕ್ಷ ಚಿಯರ್ಲೀಡರ್ಗಳಿದ್ದಾರೆ. ವಿಶ್ವದ ಇತರೆಡೆ ಸುಮಾರು 1 ಲಕ್ಷ ಚಿಯರ್ಲೀಡಿಂಗ್ ಬೆಡಗಿಯರಿದ್ದಾರೆ. ಅಮೆರಿಕದಲ್ಲಿ ಚಿಯರ್ಲೀಡರ್ಗಳಿಲ್ಲದ ಎನ್ಬಿಎ (ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಸಂಸ್ಥೆ) ಲೀಗ್ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಅಲ್ಲಿ ಮಾಧ್ಯಮಿಕ ಶಾಲಾ ಮಟ್ಟದಿಂದಲೇ ಚಿಯರ್ಲೀಡಿಂಗ್ ಪೋಷಿಸಲಾಗುತ್ತದೆ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಮೆರಿಕದಲ್ಲಿ ಶಾಲೆ, ಕಾಲೇಜು ಮಟ್ಟದಲ್ಲಿ ಚಿಯರ್ಲೀಡಿಂಗ್ ಸ್ಪರ್ಧೆಗಳೇ ನಡೆಯುತ್ತವೆ. ಈ ವೃತ್ತಿಯ ಬಗ್ಗೆ ಹಾಲಿವುಡ್ನಲ್ಲಿ ಬ್ರಿಂಗ್ ಇಟ್ ಆನ್ನಂಥ (2000) ಯಶಸ್ವಿ ಹಾಲಿವುಡ್ ಚಿತ್ರಗಳೂ ಬಂದಿವೆ. ಇಂದು ಆಸ್ಟ್ರೇಲಿಯಾ, ಕೆನಡಾ, ಚೀನಾ, ಕೊಲಂಬಿಯಾ, ಫಿನ್ಲೆಂಡ್, ್ರಾನ್ಸ್ಘಿ, ಜರ್ಮನಿ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ಕಿಂಗ್ಡಂ, ದಕ್ಷಿಣ ಆಫ್ರಿಕಾಗಳಲ್ಲಿ ಚಿಯರ್ಲೀಡಿಂಗ್ ಲಾಭದಾಯಕ ವೃತ್ತಿ ಆಯ್ಕೆ ಎನಿಸಿದೆ.್ರಕೆಟ್ನಲ್ಲಿ 2007ರ ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿ ಚಿಯರ್ಲೀಡರ್ಗಳು ನರ್ತಿಸಿದರು. ಈಗ ಇವರಿಲ್ಲದೆ ಐಪಿಎಲ್ ಇಲ್ಲ ಎನ್ನುವಂತಾಗಿದೆ.

ಮರಳಿದ ಮಹಾರಾಜ


ಸಾಕು ಮನೆಯಲ್ಲಿರಬಾರದೇ?
ಇಂಥ ಅವಮಾನ ಬೇಕಿತ್ತೇ. ಅತ್ತು ಕರೆದು ಆಡಬೇಕೇ, ಗೌರವದಿಂದ ನಿರ್ಗಮಿಸಬಾರದೇ...?ಂಥ ಕುಹಕ, ಸಲಹೆ, ಟೀಕೆ, ಲೇವಡಿ, ಅನುಕಂಪದ ಮಾತುಗಳು ಒಂದೇ ಎರಡೇ...ದರೆ, ಸೌರವ್ ಗಂಗೂಲಿ ರಾಜನಂತೆ ಬದುಕಿದವರು. ರಾಜನಂತೆಯೇ ನಿರ್ಗಮಿಸಲು ಬಯಸಿದವರು.
ನಿಜ. ಜೀವನದಲ್ಲಿ ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ, ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು ಬೇರೆಯವರ ನಿಯಂತ್ರಣಕ್ಕೆ ಸಿಲುಕಬಾರದು. ಈ ಸತ್ಯವನ್ನು ಅರ್ಥ ಮಾಡಿಕೊಂಡವರು ಗಂಗೂಲಿ.
ಭಾರತೀಯ ಕ್ರಿಕೆಟ್ನಲ್ಲಿ ಗಂಗೂಲಿಗೊಂದು ವಿಶಿಷ್ಠ ಸ್ಥಾನವಿದೆ. ಹಿಂದೆ ಅವರಂಥ ಇನ್ನೊಬ್ಬರಿರಲಿಲ್ಲ. ಮುಂದೆಯೂ ಅವರ ಜಾಗದಲ್ಲಿ ಇನ್ನೊಬ್ಬರು ಬರುವುದಿಲ್ಲ. ಕ್ರಿಕೆಟ್ ಬದುಕಿನುದ್ದಕ್ಕೂ ಅವರು ತಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದವರು. ತಮ್ಮ ಇಷ್ಟದಂತೆ ಬದುಕಿದವರು. ಅಂಥ ವ್ಯಕ್ತಿ ತಾವು ನಿರ್ಧರಿಸಿದಂತೆಯೇ ಕ್ರಿಕೆಟ್ನಿಂದ ನಿರ್ಗಮಿಸುವುದು ಸರಿಯಾದ ರೀತಿ. ಕೋಲ್ಕತ್ತ ನೈಟ್ರೈಡರ್ಸ್ ತಂಡದವರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಗೂಲಿ ಮನೆಯಲ್ಲೇ ಕುಳಿತರೆ ಅದು ಅವರ ಗೌರವಾರ್ಹ ವೃತ್ತಿಜೀವನಕ್ಕೆ ಮಾಡಿಕೊಳ್ಳುವ ಅವಮಾನ. ಅದೇ ಕಾರಣಕ್ಕೆ ಅವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಸೇರಿಕೊಳ್ಳಲು ಯತ್ನಿಸಿದರು. ಪುಣೆ ವಾರಿಯರ್ಸ್ ಪರ ಅವಕಾಶ ಬಂದಾಗ ಎರಡೂ ಕೈಗಳಿಂದ ಬಾಚಿಕೊಂಡರು. ಈ ಮನುಷ್ಯನಿಗೆ ಇನ್ನೂ ಎಂಥಾ ಆಸೆ ಎನ್ನಬಹುದು. ಆದರೆ, ಟೀಕಿಸುವ ಮುನ್ನ ಗಂಗೂಲಿ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.ಷ್ಟಕ್ಕೂ ಗಂಗೂಲಿ ಏಕೆ ಐಪಿಎಲ್ ಆಡಬಾರದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಗಂಗೂಲಿಗಿನ್ನೂ 38 ವರ್ಷ. ಸಚಿನ್ಗಿಂತ ಅವರು ಆರು ತಿಂಗಳು ದೊಡ್ಡವರಷ್ಟೇ. ಸಚಿನ್ರಷ್ಟು ಅಮೋಘ ಾರ್ಮ್ನಲ್ಲಿ ಅವರು ಇಲ್ಲದಿರಬಹುದು. ಒಂದು ವೇಳೆ ಇದ್ದರೂ, ಅದನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ಇರಲಿಲ್ಲ. ಐಪಿಎಲ್ನಲ್ಲಿ 40 ವರ್ಷ ದಾಟಿದ ಶೇನ್ ವಾರ್ನ್, ಆಡಂ ಗಿಲ್ಕ್ರಿಸ್ಟ್ರಂಥವರೇ ಆಡುತ್ತಿರುವಾಗ ಗಂಗೂಲಿಯೂ ಆಡುವುದರಲ್ಲಿ ಯಾವ ತಪ್ಪೂ ಇಲ್ಲ. ಅನಿಲ್ ಕುಂಬ್ಳೆ ಸ್ವ-ಇಚ್ಛೆಯಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೆಂಟರ್ ಆದರು. ಆದರೆ, ಗಂಗೂಲಿಗೂ ನೀವು ಆಡಬೇಡಿ, ಕೇವಲ ಮೆಂಟರ್ ಆಗಿರಿ ಎಂದು ಹೇಳಲು ಇವರ್ಯಾರು? ಯಾವ ಕಾಲದಲ್ಲಿ ಏನಾಗಬೇಕೆಂದು ನಿರ್ಧರಿಸಬೇಕಾದವರು ಸ್ವತಃ ಗಂಗೂಲಿಯೇ ಹೊರತು ಶಾರುಖ್ ಖಾನ್ ಆಗಲೀ ಕೋಲ್ಕತ್ತ ನೈಟ್ರೈಡರ್ಸ್ ಆಗಲೀ ಅಲ್ಲ.ದು ಗಂಗೂಲಿ ಪಾಲಿಗೆ ಮತ್ತೊಂದು ಪುನರಾಗಮನ. ಮಂಗಳವಾರ ಅವರು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅಜೇಯ 32 ರನ್ ಬಾರಿಸುವ ಮೂಲಕ ಐಪಿಎಲ್ಗೆ ಯಶಸ್ವಿಯಾಗಿ ಮರಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು 75 ರನ್ ಹೊಡೆಯಬಹುದು ಅಥವಾ 5 ರನ್ಗೂ ಔಟಾಗಬಹುದು. ಆದರೆ, ಅವರು ಗಳಿಸುವ ರನ್ಗಿಂತ ಆಡುವುದು ಮುಖ್ಯ. ಭಾರತೀಯ ಕ್ರಿಕೆಟ್ನಲ್ಲಿ ಮೊಹಿಂದರ್ ಅಮರನಾಥ್ ಬಳಿಕ ಅತೀ ಹೆಚ್ಚು ಪುನರಾಗಮನಗೈದಿರುವ ಆಟಗಾರ ಗಂಗೂಲಿ. ಕ್ರಿಕೆಟ್ ವ್ಯವಸ್ಥೆ, ಆಡಳಿತಗಾರರು, ಕೋಚ್ಗಳು ಹಾಗೂ ತಂಡ ಎಷ್ಟು ಬಾರಿ ಕೈಬಿಟ್ಟರೂ ಮತ್ತೆ ಮತ್ತೆ ಮರಳಿ ತಾವು ಛಲ ಬಿಡದ ತ್ರಿವಿಕ್ರಮ ಎಂದು ನಿರೂಪಿಸಿದವರು ಗಂಗೂಲಿ.ಂಗೂಲಿ ಭಾರತ ಕಂಡ ಅತ್ಯುತ್ತಮ ನಾಯಕ. ಆದರೂ, ಕ್ರಿಕೆಟ್ ನಾಯಕತ್ವದ ವಿಚಾರ ಬಂದಾಗ ಅವರನ್ನು ಮೈಕ್ ಬ್ರೇರ್ಲಿ ಅಥವಾ ಮಾರ್ಕ್ ಟೇಲರ್ ಸ್ಥರದಲ್ಲಿ ಹೋಲಿಸಿ ಮಾತನಾಡುವುದಿಲ್ಲ. ಬ್ಯಾಟ್ಸ್ಮನ್ ಆಗಿ ಸಾಕಷ್ಟು ಉನ್ನತ ಸಾಧನೆ ಮಾಡಿದ್ದರೂ, ಅವರು ಸಚಿನ್ ತೆಂಡುಲ್ಕರ್ ಅಥವಾ ಬ್ರಿಯಾನ್ ಲಾರಾ ಲೀಗ್ಗೂ ಸೇರುವವರಲ್ಲ. ಹಿಂದೊಮ್ಮೆ ಗಂಗೂಲಿಯೇ ಹೇಳಿದಂತೆ ತೆಂಡುಲ್ಕರ್, ಲಾರಾ ಮಟ್ಟದ ಪ್ರತಿಭೆಯನ್ನು ದೈವದತ್ತವಾಗಿ ಪಡೆದು ಬಂದಾಗ ಸಾಧನೆಯಲ್ಲಿ ಎತ್ತರಕ್ಕೇರುವುದು ಸುಲಭ. ಆದರೆ, ನನ್ನಂಥ ಒಬ್ಬ ಸಾಮಾನ್ಯ ಆಟಗಾರ ಎತ್ತರಕ್ಕೇರುವುದು ಬಹಳ ಕಷ್ಟ.ಂಗೂಲಿ 1992ರಲ್ಲೇ ಏಕದಿನ ಪದಾರ್ಪಣೆ ಮಾಡಿದವರು. ನಿರಾಶಾದಾಯಕ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ದೀರ್ಘಕಾಲ ಮೂಲೆಗುಂಪಾಗಿದ್ದರು. ಆದರೆ, 1996ರಲ್ಲಿ ಅವರು ಮರಳಿದರು. ಚೊಚ್ಚಲ ಟೆಸ್ಟ್ನಲ್ಲೇ ಶತಕ ಬಾರಿಸಿದರು. ಕ್ರಿಕೆಟ್ ಜೀವನದಲ್ಲಿ ಮುಂದಿನ 10 ವರ್ಷ ಕಾಲ ಅವರು ಹೊಸ ಹೊಸ ಶೃಂಗಗಳನ್ನು ಏರಿದರು. ಏಕದಿನ ಕ್ರಿಕೆಟ್ನಲ್ಲಿ ಸಚಿನ್ಗಿಂತ ವೇಗವಾಗಿ 10,000 ರನ್ ಗಳಿಸಿದರು. ಸಚಿನ್ ಜೊತೆ ವಿಶ್ವದಾಖಲೆ ಜೊತೆಯಾಟಗಳನ್ನು ಆಡುವ ಮೂಲಕ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡರು. ಆ್ಸೈಡ್ನಲ್ಲಿ ದೇವರು ಎಂಬ ಬಣ್ಣನೆಗೊಳಗಾದರು. ಸಚಿನ್ ನಾಯಕತ್ವ ನನಗಲ್ಲ ಎಂದಾಗ ಭಾರತ ತಂಡದ ನಾಯಕರೂ ಆದರು. ಮ್ಯಾಚ್ಫಿಕ್ಸಿಂಗ್ ಕರಾಳ ದಿನಗಳ ಬಳಿಕ ಕುಗ್ಗಿದ್ದ ಭಾರತ ತಂಡಕ್ಕೆ ಹೊಸ ಚೈತನ್ಯ ತುಂಬಿದರು. ಭಾರತ 2011ರಲ್ಲಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದರೆ ಆ ಯಶಸ್ಸಿನ ಪ್ರಕ್ರಿಯೆಯ ಬೀಜ ಬಿತ್ತಿದವರು ಗಂಗೂಲಿ. ಅವರು ತಂಡದ ಆಟಗಾರರಿಗೆ ಯಾವುದೇ ತಂಡದ ವಿರುದ್ಧ, ಯಾವುದೇ ದೇಶದಲ್ಲಿ ಗೆಲ್ಲುವ ಛಲ, ಮನೋಬಲ ತುಂಬಿದರು. ಅವರ ನಾಯಕತ್ವದಲ್ಲಿ ಭಾರತ ತಂಡ ವಿದೇಶಗಳಲ್ಲೂ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐತಿಹಾಸಿಕ ಜಯ, ಆಸೀಸ್ ಪ್ರವಾಸದಲ್ಲೇ ಡ್ರಾ ಮಾಡಿಕೊಂಡಿದ್ದು ಅವರ ವೃತ್ತಿಜೀವನ ಹೈಲೈಟ್. ಭಾರತದ ಯಶಸ್ವಿ ವಿಶ್ವಕಪ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಇವರೆಲ್ಲಾ ಗಂಗೂಲಿ ಬೆಂಬಲ ಕೊಟ್ಟು ಬೆಳೆಸಿದ ಆಟಗಾರರು. ಗಂಗೂಲಿಗಾಗಿ ನಾನು ಪ್ರಾಣ ಕೊಡಲೂ ರೆಡಿ ಎಂದು ಯುವರಾಜ್ ಒಮ್ಮೆಹೇಳಿದ್ದರು. ಈಗ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಯುವರಾಜ್ ನಾಯಕತ್ವದಡಿ ಗಂಗೂಲಿ ಆಡುತ್ತಿರುವುದು ವಿಶೇಷವೋ, ವಿಪರ್ಯಾಸವೋ ಕಾಲವೇ ಹೇಳಬೇಕು.ಂಗೂಲಿ ಯಾರಿಗೂ ಏನನ್ನೂ ನಿರೂಪಿಸಿ ತೋರಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಅವರು ಕ್ರಿಕೆಟ್ ಆಡುತ್ತಿರುವುದು ತಮ್ಮ ಸಂತೋಷಕ್ಕೆ, ಆತ್ಮತೃಪ್ತಿಗೆ. ಅವರ ಜೀವನ ನಿರ್ವಹಣೆಗೆ ಕ್ರಿಕೆಟ್ ಅಗತ್ಯವಿಲ್ಲ. ಪುಣೆ ಪರ ಆಡುವುದರಿಂದ ಸಿಗುವ 80 ಲಕ್ಷ ಅವರು ತಲೆತಲಾಂತರದಿಂದ ಹೊಂದಿರುವ ಕುಟುಂಬ ಆಸ್ತಿಯ ಎದುರು ಸಣ್ಣ ಮೊತ್ತ. ಆದರೆ, ಅವರು ಇಷ್ಟು ಹಟ ತೊಟ್ಟು ಕ್ರಿಕೆಟ್ ಆಡುವುದು ಆಟದ ಮೇಲಿನ ತುಡಿತಕ್ಕಾಗಿ, ವ್ಯಾಮೋಹಕ್ಕಾಗಿ. ಅಷ್ಟಕ್ಕೂ ಐಪಿಎಲ್ನಲ್ಲಿ ಅವರು ಯಾರ ಅವಕಾಶ ಕಿತ್ತುಕೊಳ್ಳುವ ಪ್ರಶ್ನೆಯೂ ಇಲ್ಲ. ಕ್ರಿಕೆಟ್ನಲ್ಲಿ ತಾವು ಔಟ್ಡೇಟೆಡ್ ಅಲ್ಲ, ಇಂದಿಗೂ ಸಲ್ಲುವವರು ಎಂದು ತಮಗೆ ತಾವು ಸಾಬೀತು ಪಡಿಸಿಕೊಳ್ಳುವ ಹಟವಷ್ಟೇ ಅವರಿಗಿರುವುದು.ಂಗೂಲಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಗ್ರೆಗ್ ಚಾಪೆಲ್, ಜಾನ್ ಬುಕನನ್ ಸ್ವತಃ ಮೂಲೆಗುಂಪಾದರು. ಅವರಿಂದು ಯಾರಿಗೂ ನೆನಪಿಲ್ಲ. ಆದರೆ, ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ಹಿಂದೆಯೂ ಇದ್ದರು, ಇಂದು ಇದ್ದಾರೆ, ಮುಂದೂ ಇರುತ್ತಾರೆ.
ನಾನಾ ರೀತಿ, ನಾನಾ ಪಾತ್ರಗಳಲ್ಲಿ ಅವರು ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸುವುದು ಸಾಕಷ್ಟಿದೆ.

Thursday, February 17, 2011

ಗೆಲುವಿನ ಪ್ರವೃತ್ತಿ

ನಾಡಿದ್ದು ವಿಶ್ವಕಪ್ ಕ್ರಿಕೆಟ್ ಮಹಾಸಮರ ಪ್ರಾರಂಭ. ಗೆಲುವಿಗೆ ೇವರಿಟ್ಗಳಲ್ಲಿ ಒಂದಾಗಿರುವ ಆತಿಥೇಯ ಭಾರತದ ದಂಡನಾಯಕ ಎಂಎಸ್ ಧೋನಿ, ತಂಡವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂಬಂಥ ಮಾತುಗಳನ್ನು ಕೊನೆಯ ಕ್ಷಣದಲ್ಲಿ ಆಡಿದ್ದಾರೆ. ದಯವಿಟ್ಟು ಅಂಥ ನಕಾರಾತ್ಮಕ ಮಾತುಗಳು ಬೇಡ. ಶಕ್ತಿ ಮೀರಿ ಆಡಿ, ಸ್ಫೂರ್ತಿಯಿಂದ ಆಡಿ. ಗೆಲುವಿನ ಮನೋವೃತ್ತಿ ಯಿಂದ ಆಡಿ ಎಂದು ಸ್ಫೂರ್ತಿ ತುಂಬುವ ಪ್ರಯತ್ನ ಇಲ್ಲಿದೆ.


ಮೊದಲಿಗೆ ಒಂದು ಓಶೋ ಕಥೆ....
ಸಾಮಾನ್ಯ ರೈತನೊಬ್ಬ ಮೊದಲ ಬಾರಿಗೆ ಗುಡ್ಡವೇರಲು ಹೊರಟ. ಆ ಗುಡ್ಡ ಅವನ ಹಳ್ಳಿಯಿಂದ ಬಹಳ ದೂರವೇನೂ ಇರಲಿಲ್ಲ. ಆದರೂ, ಸಹ ಅಂದಿನವರೆಗೆ ಆತ ಅಲ್ಲಿಗೆ ಹೋಗಿರಲಿಲ್ಲ. ಆತನ ಹೊಲದಿಂದ ಗುಡ್ಡದ ನೆತ್ತಿ ಕಾಣುತ್ತಿತ್ತು. ಒಮ್ಮೆಯಾದರೂ ಆ ಗುಡ್ಡ ಏರಲೇಬೇಕೆಂಬ ಹಂಬಲ ಅವನಲ್ಲಿತ್ತು. ಆದರೆ, ಅಲ್ಲಿಗೆ ಹೋಗಬೇಕಾದರೆ, ರಾತ್ರಿಯೇ ಎದ್ದು ಹೊರಡಬೇಕಿತ್ತು. ಅದಕ್ಕಾಗಿ ಅವನಿಗೊಂದು ಕಂದೀಲು ಬೇಕಿತ್ತು. ಕೊನೆಗೂ ಒಂದು ದಿನ ಕಂದೀಲು ತಂದ ಅವನು ರಾತ್ರಿಯೇ ಎದ್ದು ಹೊರಡುವುದೆಂದು ನಿಶ್ಚೈಸಿ ಬೇಗನೆ ಮಲಗಿದ. ಗುಡ್ಡ ಏರುತ್ತೇನೆಂಬ ಸಂಭ್ರಮದಲ್ಲಿ ಅವನಿಗೆ ನಿದ್ರೆಯೇ ಬರಲಿಲ್ಲ. ಕೊನೆಗೂ ರಾತ್ರಿ 2 ಗಂಟೆಗೆ ಎದ್ದು ಕಂದೀಲು ಹಿಡಿದು ಗುಡ್ಡದ ಕಡೆಗೆ ಹೊರಟ. ಮನೆಯಿಂದ ಸ್ವಲ್ಪ ದೂರ ಸಾಗಿದ ಬಳಿಕ ಆತನಿಗೆ ಇದು ಅಮಾವಾಸ್ಯೆ ರಾತ್ರಿ ಎನ್ನುವುದು ನೆನಪಾಯಿತು. ಆತನ ಕಂದೀಲಿನಲ್ಲೋ ದೂರದವರೆಗೆ ಬೆಳಕು ಕಾಣುತ್ತಿರಲಿಲ್ಲ. ಮಿಣುಕು ಬೆಳಕಿನಲ್ಲಿ ಹತ್ತು ಹೆಜ್ಜೆಯಷ್ಟೂ ದಾರಿ ಕಾಣುತ್ತಿರಲಿಲ್ಲ. ರೈತನಿಗೆ ಯೋಚನೆಗಿಟ್ಟುಕೊಂಡಿತು. ತಾನಿನ್ನೂ ಹತ್ತು ಮೈಲಿ ಸಾಗಬೇಕು. ಈ ಕಂದೀಲು ಹತ್ತು ಹೆಜ್ಜೆಗಿಂತ ಹೆಚ್ಚು ದಾರಿ ತೋರಿಸುವುದಿಲ್ಲ. ಈ ಕತ್ತಲೆಯಲ್ಲಿ ಇದನ್ನು ನಂಬಿಕೊಂಡು ಹೇಗೆ ಹೋಗುವುದು? ಇದು ಸಮುದ್ರವನ್ನು ದಾಟಲು ತೆಪ್ಪದಲ್ಲಿ ಹೋದಂತೆಯೇ ಸರಿ ಎಂದು ಹೆದರಿಕೊಂಡು ಅಲ್ಲಿಯೇ ಕುಳಿತ.
ಇದೇ ಸಂದರ್ಭದಲ್ಲಿ ವೃದ್ಧನೊಬ್ಬ ಪುಟ್ಟ ಕಂದೀಲು ಹಿಡಿದುಕೊಂಡು ಎತ್ತಲೋ ಹೊರಟಿದ್ದ. ರೈತ ಆತನನ್ನು ನಿಲ್ಲಿಸಿ ತನ್ನ ಸಮಸ್ಯೆ ಹೇಳಿಕೊಂಡ. ಇದನ್ನು ಕೇಳಿ ಆ ವೃದ್ಧ ನಕ್ಕು ಹೇಳಿದ... ಹುಚ್ಚ! ನೀನು ಮೊದಲು ಹತ್ತು ಹೆಜ್ಜೆ ನಡೆ. ಎಷ್ಟು ಕಾಣುವುದೋ ಅಷ್ಟು ಮುಂದೆ ನಡೆ. ಆಗ ಇನ್ನಷ್ಟು ಮುಂದೆ ದಾರಿ ಕಾಣುತ್ತದೆ. ಒಂದು ಹೆಜ್ಜೆ ಕಾಣಿಸಿದರೆ, ಅದರಿಂದ ಭೂಮಿಗೇ ಪ್ರದಕ್ಷಿಣೆ ಹಾಕಬಹುದು... ರೈತ ಅರ್ಥ ಮಾಡಿಕೊಂಡ. ಬೆಳಗು ಮೂಡುವ ಹೊತ್ತಿಗೆ ಗುಡ್ಡ ಏರಿದ್ದ...
ಈ ಕಥೆಯ ತಾತ್ಪರ್ಯವಿಷ್ಟೇ. ಎಲ್ಲಾ ದೊಡ್ಡ ದೊಡ್ಡ ಪ್ರಯಾಣಗಳೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭಗೊಳ್ಳುತ್ತವೆ. ಕ್ರಿಕೆಟ್ನಲ್ಲಿ ವಿಶ್ವಕಪ್ಗಿಂಥ ದೊಡ್ಡ ಟೂರ್ನಿ ಇಲ್ಲ. ಇಲ್ಲಿ ಕೂಡ ಮೊದಲ ಹೆಜ್ಜೆಯಲ್ಲೇ ವಿಶ್ವಕಪ್ ಗೆದ್ದುಬಿಡಲು ಸಾಧ್ಯವಿಲ್ಲ. ಒಂದೊಂದೇ ಹೆಜ್ಜೆಯನ್ನು ಮುತುವರ್ಜಿಯಿಂದ, ಎಚ್ಚರಿಕೆಯಿಂದ ಇಡುತ್ತ ಮುಂದೆ ಸಾಗಬೇಕು. ಈ ಪ್ರಯಾಣದಲ್ಲಿ ಅರಿವೇ ಗುರು.
ಈ ಬಾರಿಯ ವಿಶ್ವಕಪ್ ಮಾದರಿ ಯಾವ ರೀತಿ ಇದೆಯೆಂದರೆ 9 ಪಂದ್ಯ ಗೆಲ್ಲುವವನು ವಿಶ್ವವಿಜೇತ ಎನಿಸಬಹುದು. ತಲಾ 7 ತಂಡಗಳ 2 ಗುಂಪುಗಳಿಂದ ತಲಾ 4 ತಂಡಗಳು ಕ್ವಾರ್ಟರ್ೈನಲ್ಗೆ ಅರ್ಹತೆ ಗಳಿಸುವ ಹಿನ್ನೆಲೆಯಲ್ಲಿ ಲೀಗ್ ಹಂತದ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದವರಿಗೂ ನಾಕೌಟ್ ಘಟ್ಟ ತಲುಪುವ ಅವಕಾಶ ಸಿಗಬಹುದು. ಆದರೆ, ಕೊನೆಯ ಮೂರು ಪಂದ್ಯಗಳಲ್ಲಿ ಮಾತ್ರ ಗೆಲ್ಲಲೇ ಬೇಕು. ಅಲ್ಲಿ ಒಂದು ಹೆಜ್ಜೆ ಎಡವಿದರೂ ಅದೇ ಟ್ರೋಫಿಗೂ ತಂಡಕ್ಕೂ ನಡುವೆ ತಡೆಗೋಡೆಯಾಗಿಬಿಡುತ್ತದೆ.
ವಿಶ್ವಕಪ್ಗೆ ಈಗ ಆಟದ ದೃಷ್ಟಿಯಿಂದ ಸಿದ್ಧತೆ ನಡೆಸುವುದೇನೂ ಇರುವುದಿಲ್ಲ. ಏಕೆಂದರೆ, ಟೂರ್ನಿಗೆ ಒಂದೆರಡು ವರ್ಷ ಮುನ್ನವೇ ಅಂಥ ಪ್ರಯತ್ನ ಆರಂಭವಾಗಿರುತ್ತದೆ. ಕೊನೆಯ ಘಟ್ಟದಲ್ಲಿ ಏನಿದ್ದರೂ ಮಾನಸಿಕ ಸಿದ್ಧತೆಯ ಕಾಲ. ನಾವು ಎಷ್ಟೇ ಸಮರ್ಥರಾಗಿದ್ದರೂ, ವಿಶ್ವಕಪ್ ವೇದಿಕೆಯಲ್ಲಿ ಅದನ್ನು ಪ್ರದರ್ಶಿಸದಿದ್ದಲ್ಲಿ ಅಂಥ ಸಾಮರ್ಥ್ಯಕ್ಕೆ ಬೆಲೆಯಿಲ್ಲ. ಆದರೆ, ವಿಶ್ವಕಪ್ಗೆ 5 ದಿನ ಬಾಕಿ ಇದ್ದಾಗ ಭಾರತ ತಂಡದ ನಾಯಕ ಎಂಎಸ್ ಧೋನಿ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಹೇಳಿ ವಿವಾದ ಹುಟ್ಟುಹಾಕಿದರು. ಬಿಡುವಿಲ್ಲದೆ ಕ್ರಿಕೆಟ್ ಆಡಿ ಮನಸ್ಸು ಜಡ್ಡುಗಟ್ಟಿದೆ ಎಂಬ ಮಾತನ್ನು ಅವರು ಹೇಳಿದರು. ಅದು ವಾಸ್ತವವೇ ಇರಬಹುದು. ಆದರೆ, ಅದನ್ನು ಹೇಳಿಕೊಳ್ಳುವ ಸಮಯ ಇದಾಗಿರಲಿಲ್ಲ.
ಈ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಚಾಂಪಿಯನ್ಸ್ ಲೀಗ್ ಇವೆಲ್ಲಾ ವ್ಯಾಪಾರಿ ದೃಷ್ಟಿಕೋನದಿಂದ ನಡೆಯುವಂಥವು. ಇವುಗಳಲ್ಲಿ ಆಟಗಾರರಿಗಿರುವುದು ಕೇವಲ ಸ್ವ-ಹಿತಾಸಕ್ತಿ ಮಾತ್ರ. ಆದರೆ, ವಿಶ್ವಕಪ್ನಂಥ ಟೂರ್ನಿ ತಾಯ್ನಡನ್ನು ಪ್ರತಿನಿಧಿಸಿ ಹೆಮ್ಮೆಯ ಸಾಧನೆ ಮಾಡಲು ಇರುವ ಅಪೂರ್ವ ಅವಕಾಶ. ಹಿಂದೆಲ್ಲಾ ತಾಯ್ನಡಿನ ರಕ್ಷಣೆಗಾಗಿ ಮಧ್ಯರಾತ್ರಿ ನಿದ್ರೆಯಿಂದೆದ್ದು ಯುದ್ಧಕ್ಕೆ ಓಡಿದ ನಿದರ್ಶನಗಳಿವೆ. ಈ ಕಾಲದಲ್ಲಿ ರಾಷ್ಟ್ರ-ರಾಷ್ಟ್ರಗಳ ಕ್ರಿಕೆಟ್ ಪಂದ್ಯಗಳೇ ಯುದ್ಧಗಳು. ಅದರಲ್ಲೂ ವಿಶ್ವಕಪ್ನಂಥ ಮಹಾಸಮರ ಎದುರಿಗಿರುವಾಗ ದೈಹಿಕವಾಗಿ, ಮಾನಸಿಕವಾಗಿ ಅದನ್ನು ಗೆಲ್ಲಲು ಮುಂದಾಗಬೇಕು. ಅಂಥ ಸಂದರ್ಭದಲ್ಲಿ ನಮ್ಮ ಅತೃಪ್ತಿ, ಆಯಾಸಗಳೆಲ್ಲಾ ಮೂಲೆಗುಂಪಾಗಬೇಕು. ಸಕಾರಾತ್ಮಕ ಮನೋಭಾವವಿಲ್ಲದೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಧೋನಿ ಇನ್ನೂ ಮಾಗಬೇಕು.
ಇಲ್ಲಿ ಮುಖ್ಯವಾಗುವುದು ವಿಜೇತನ ಮನೋವೃತ್ತಿ. ವಿಜೇತರು ಯಾವಾಗಲೂ ಒಂದೇ ಬಗೆಯ ಮನೋವೃತ್ತಿ ಹೊಂದಿರುತ್ತಾರೆಯೇ ಅಥವಾ ವಿಜೇತರು ಒಂದೇ ಬಗೆಯ ಚಿಂತನಾ ಕ್ರಮ ಹೊಂದಿರುತ್ತಾರೆಯೇ ಎಂದು ಸುಪ್ರಸಿದ್ಧ ವಾಗ್ಮಿ ವಿನ್ಸಿ ಲೊಂಬಾರ್ಡಿ ಪ್ರಶ್ನೆ ಎತ್ತುತ್ತಾರೆ. ಅದಕ್ಕೆ ಉತ್ತರವೂ ಅವರ ಬಳಿಯೇ ಇದೆ. ಅದು ಗೆಲ್ಲಲೇ ಬೇಕೆಂಬ ಸಂಕಲ್ಪ. ಸಾಧಿಸಲೇಬೇಕೆಂಬ ಸಂಕಲ್ಪ. ಬದುಕು ನಮ್ಮತ್ತ ಅನೇಕ ಸವಾಲುಗಳನ್ನು ಒಡ್ಡುತ್ತವೆ. ನಾವು ಯಾವ ಮನೋವೃತ್ತಿಯಿಂದ ಆ ಸವಾಲುಗಳನ್ನು ಎದುರಿಸುತ್ತೇವೆ ಅಥವಾ ಎಂಥಾ ಮನೋಭಾವದಿಂದ ಈ ಸವಾಲುಗಳಿಗೆ ಸಜ್ಜಾಗುತ್ತೇವೆ ಎನ್ನುವುದು ನಮ್ಮ ಬದುಕು ಬರಡಾಗಿರುವುದೇ, ಬೆಳಕಾಗಿರುವುದೇ ಎನ್ನುವುದನ್ನು ನಿರ್ಧರಿಸುತ್ತವೆ ಎಂದು ಅವರು ಹೇಳುತ್ತಾರೆ.
ಅಲ್ಲಿ ಇರಬೇಕಾಗಿರುವುದು ನಮ್ಮಿಂದ ಸಾಧ್ಯ ಎನ್ನುವಂಥ ಮನೋವೃತ್ತಿ. ಬದುಕಿನ ಹೋರಾಟವಿರಲಿ, ವಿಶ್ವಕಪ್ ಇರಲಿ. ನಮ್ಮಿಂದ ಗೆಲ್ಲಲು ಸಾಧ್ಯ ಎಂಬ ಮನೋಭಾವ ಇರಬೇಕು. ಮೊದಲು ಮನಸ್ಸಿನಲ್ಲಿ ಗೆಲ್ಲಬೇಕು.
ಇದೇ ವಿಷಯವನ್ನು ಮೇರಿ ಕೇ ೌಂಡೇಷನ್ನ ಸಂಸ್ಥಾಪಕಿ ಹಾಗೂ ನಿವೃತ್ತ ಅಧ್ಯಕ್ಷೆ ಮೇರಿ ಕೇ ಆಶ್ ಬೇರೆ ರೀತಿ ಹೇಳುತ್ತಾರೆ. ಅವರ ಪ್ರಕಾರ ಪ್ರಪಂಚದಲ್ಲಿ ನಾಲ್ಕು ಬಗೆಯ ಜನರಿರುತ್ತಾರೆ. ಮೊದಲನೆ ವರ್ಗ ಏನೇ ಆಗುವುದಾದರೂ ತಮ್ಮ ಪ್ರಯತ್ನದಿಂದಲೇ ಆಗಲಿ ಎಂದು ಸದಾ ಪ್ರಯತ್ನಶೀಲರಾಗಿರುವವರು; ಇನ್ನೊಂದು ವರ್ಗ ಏನಾಗುವುದೋ ಆಗಲಿ ಎಂದು ನಿಂತು ನೋಡುವವರು; ಅರೇ ಇದೇನಾಯಿತು ಎಂದು ಅಚ್ಚರಿ ಪಡುವವರದು ಮೂರನೇ ವರ್ಗ; ನಾಲ್ಕನೇ ವರ್ಗದವರಿಗೆ ತಮ್ಮ ಸುತ್ತಮುತ್ತ ಏನೇನು ನಡೆದಿದೆ, ನಡೆಯುತ್ತಿದೆ ಎಂಬ ಪರಿವೆ-ಅರಿವೇ ಇರುವುದಿಲ್ಲ. ವಿಶ್ವಕಪ್ ಗೆಲ್ಲುವವರು ಮೊದಲ ವರ್ಗಕ್ಕೆ ಸೇರಿರುತ್ತಾರೆ.
ಭಾರತ 2007ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಆ ಸಂದರ್ಭದಲ್ಲಿ ಇಡೀ ತಂಡ ನಕಾರಾತ್ಮಕ ಗಾಳಿಯಲ್ಲೇ ಉಸಿರಾಡುತ್ತಿತ್ತು. ಕೋಚ್ ಚಾಪೆಲ್ ಹೆಚ್ಚು ಕಡಿಮೆ ತಂಡವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅಲ್ಲಿ ಚಾಪೆಲ್ ಗುಂಪು, ಸಚಿನ್ ಗುಂಪು, ನಾಯಕ ದ್ರಾವಿಡ್ ಗುಂಪು, ಗಂಗೂಲಿ ಗುಂಪು ಹೀಗೆ ಅನೇಕ ಗುಂಪುಗಳಾಗಿ ತಂಡ ಛಿದ್ರವಾಗಿತ್ತು. ಅದರ ಪರಿಣಾಮ ಭಿನ್ನವೇನೂ ಆಗಲಿಲ್ಲ.
ನಾವು ಸಕಾರಾತ್ಮಕ ಮನಸ್ಸು ಮತ್ತು ನಂಬಿಕೆ ಹೊಂದಿದ್ದರೆ, ಏನಾದರೂ ಕೆಡುಕು ಘಟಿಸಿದಾಗಲೂ ಹತಾಶರಾಗುವ ಬದಲು ಅದರಿಂದ ಪಾಠ ಕಲಿಯುತ್ತೇವೆ ಮತ್ತು ಅದರಿಂದ ಒಳಿತೇ ಆಗುತ್ತವೆ. ಇಂಥ ಅನುಭವಗಳಿಂದ ನಾವು ಬೆಳೆಯುತ್ತೇವೆ ಎಂದು ಸೀಕ್ರೆಟ್ಸ್ ಆ್ ಸ್ಟೇಯಿಂಗ್ ಇನ್ ಲವ್ ಎಂಬ ಪ್ರಸಿದ್ಧ ಕೃತಿಯ ಲೇಖಕಿ ರುತ್ ಸಾ್ಟೆೆರ್ಡ್ ಪೀಲ್ ಬರೆಯುತ್ತಾರೆ.
ಇಂಥ ಮನೋವೃತ್ತಿಯ ಬಗ್ಗೆಯೇ ಕುವೆಂಪು
ಏರು, ಏರು, ಮನವೆ, ಏರು;
ಭೂಮಿ ವ್ಯೋಮಗಳಲಿ ಹಾರು;
ಲೋಕ ಲೋಕಗಳನು ಮೀರು;
ಮಾತೃ ಚರಣತಲವ ಸೇರು;
ಏರು, ಮನವೆ, ಏರು, ಏರು!
-ಎಂದು ಬರೆಯುತ್ತಾರೆ.
ಗೆಲುವು ಅರ್ಥಾತ್ ಯಶಸ್ಸು ಯಾವತ್ತೂ ಸುಲಭಕ್ಕೆ ಲಭಿಸುವುದಿಲ್ಲ. ವಿಶ್ವಕಪ್ ಪಂದ್ಯಗಳನ್ನೇ ಉದಾಹರಣೆ ತೆಗೆದುಕೊಂಡರೆ ಭಾರತವೇ ಎರಡು ಬಾರಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾಗಿದ್ದ ಪಂದ್ಯಗಳನ್ನು ಕೇವಲ 1 ರನ್ ಅಂತರದಿಂದ (1987 ಹಾಗೂ 1992ರ ಟೂರ್ನಿ) ಸೋತಿದೆ. ಈ ಬಾರಿಯಂತೂ 45 ದಿನಗಳ ಸುದೀರ್ಘ ಟೂರ್ನಿಯಲ್ಲಿ ಹಾಗೂ ಪ್ರತೀ ಪಂದ್ಯದಲ್ಲಿ ಗೆಲುವಿನ ದಡ ಮುಟ್ಟುವ ತನಕ ಏಕಾಗ್ರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕ್ರೀಡೆಯಲ್ಲಿ ಯಾವಾಗಲೂ ಪಂದ್ಯಗಳನ್ನು ಗೆದ್ದವರೇ ಗೆದ್ದಿರುವುದಿಲ್ಲ! ಅನೇಕ ಬಾರಿ ಎದುರಾಳಿ ಸೋತಿದ್ದರಿಂದ ಇವರಿಗೆ ಲಾಭವಾಗಿರುತ್ತದೆ. ಬಿಲಿಯರ್ಡ್ಸ್ ಮಾಂತ್ರಿಕ ಗೀತ್ ಸೇಥಿ ಈ ರೀತಿ ಗೆಲುವಿನ ದವಡೆಯಿಂದ ಸೋಲನ್ನು ಸಂಪಾದಿಸುವುದು ಹೇಗೆ ಎನ್ನುವುದಕ್ಕೆ ನಿದರ್ಶನವಾಗಿ ತಮ್ಮ ಯಶಸ್ಸು ವರ್ಸಸ್ ಆನಂದ ಕೃತಿಯಲ್ಲಿ ಒಂದು ಕಥೆ ಹೇಳುತ್ತಾರೆ.
ಥಾಯ್ಲೆಂಡ್ನ ಜೇಮ್ಸ್ ವಾಟನ್ 1989ರಲ್ಲಿ 18ನೇ ವಯಸ್ಸಿನಲ್ಲೇ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಇಂಗ್ಲೆಂಡ್ನಲ್ಲಿ ನಡೆಯುವ ವೃತ್ತಿಪರ ಸ್ನೂಕರ್ ಆಡಲು ತೆರಳಿದ್ದರು.
ಇಂಗ್ಲೆಂಡ್ ಸೇರಿದ 3ನೇ ವರ್ಷದಲ್ಲೇ ವಾಟನ್, ಮೈಟ ವರ್ಲ್ಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿೈನಲ್ ತಲುಪಿದರು. ಆ ಟೂರ್ನಿಯಲ್ಲಿ ಗೆದ್ದವರಿಗೆ ಆ ದಿನಗಳಲ್ಲಿ ದಾಖಲೆ 2 ಲಕ್ಷ ಪೌಂಡ್ ಬಹುಮಾನ ನೀಡಲಾಗುತ್ತಿತ್ತು.
ಪ್ರಖ್ಯಾತ ಜಿಮ್ಮಿ ವೈಟ್ ವಿರುದ್ಧ ಉಪಾಂತ್ಯ ಪಂದ್ಯದ ದಿನ ವಾಟನ್ ಅಸ್ವಾಸ್ಥ್ಯದಿಂದ ಬಳಲುತ್ತಿದ್ದರು. ಆದರೂ, 19 ್ರೇಮ್ಗಳ ಆ ಪಂದ್ಯದಲ್ಲಿ ಅಸಾಧಾರಣ ಆಟವಾಡಿ ಒಂದು ಹಂತದಲ್ಲಿ 8-6 ್ರೇಮ್ಗಳಿಂದ ಮುನ್ನಡೆ ಸಾಧಿಸಿಬಿಟ್ಟರು. ಆಗ ಗೆಲುವು ಅವರ ಬೆರಳ ತುದಿಯಲ್ಲಿತ್ತು. ಆದರೆ, ಇದ್ದಕ್ಕಿದ್ದಂತೆ ಒಂದು ಸುಲಭ ಹೊಡೆತ ಅವರಿಗೆ ಕೈಕೊಟ್ಟಿತು. ಆ ಒಂದೇ ಒಂದು ತಪ್ಪಿನಿಂದ ಅವರು ಕುಸಿದುಬಿದ್ದರು. ಎದುರಾಳಿ ವೈಟ್ 10-8 ್ರೇಮ್ಗಳಿಂದ ಜಯ ಸಾಧಿಸಿದರು.
ಪಂದ್ಯ ಮುಗಿದ ಮೇಲೆ ವರದಿಗಾರನೊಬ್ಬ ಆಟದ ಒಂದು ಹಂತದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ನೀವು ಸೋತದ್ದಾದರೂ ಹೇಗೆ? ಎಂದು ಪ್ರಶ್ನಿಸುತ್ತಾನೆ. ನಾನು 8-6 ್ರೇಮ್ಗಳಿಂದ ಮುಂದಿದ್ದಾಗ ನನ್ನ ಮನಸ್ಸು ಬ್ಯಾಂಕಾಕ್ನ ರಸ್ತೆಯೊಂದರಲ್ಲಿರುವ ಒಂದು ಮನೆಯ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸಿತು. ನಾನು ಈ ಟೂರ್ನಿಯನ್ನು ಗೆದ್ದು, ಬರುವ ಹಣದಲ್ಲಿ ನನ್ನ ತಾಯಿಗಾಗಿ ಖರೀದಿಸಲು ಇಚ್ಛಿಸಿದ್ದ ಮನೆಯೇ ಅದು ಎಂದು ವಾಟನ್ ಆ ಸಂದರ್ಭದಲ್ಲಿ ಉತ್ತರ ನೀಡಿದ್ದರು. ಅಂದರೆ ವರ್ತಮಾನದಿಂದ ಒಂದೇ ಒಂದು ಕ್ಷಣ ಅವರ ಮನಸ್ಸು ವಿಚಲಿತಗೊಂಡಿದ್ದರಿಂದ ಗೆಲುವಿನ ಜಾಗದಲ್ಲಿ ಸೋಲು ಕಾಣಿಸಿಕೊಂಡಿತ್ತು.
ಕೊನೆಯದಾಗಿ ವಿಶ್ವಕಪ್ ಗೆಲ್ಲಿ ಎಂದು ಟೀಮ್ ಇಂಡಿಯಾ ಆಟಗಾರರನ್ನು ಹುರಿದುಂಬಿಸುವುದಕ್ಕೆ ಒಂದ ಕುವೆಂಪು ಸ್ಪೂರ್ತಿ ಕವಿತೆ:
ಮತ್ತೆ ಮತ್ತೆ ಗೆಲ್ಲಬೇಕು;
ನಿತ್ಯ ಗೆಲ್ಲುತಿರಲೆ ಬೇಕು.
ಗೆಲ್ಲುತಿಹುದೆ ಗೆಲ್ಲ !
ನಿನ್ನ ಗೆದ್ದು ಪೂರೈಸಿದೆ
ಎಂಬ ಮಾತೆ ಸಲ್ಲ;
ಪಡೆದು, ಪಡೆದು, ಪಡೆದು ನಿನ್ನ....
ಕಡೆಗೆ?-ಕಡೆಯೆ ಇಲ್ಲ !

Thursday, February 3, 2011

ದಾರಿ ತೋರುವ ಗುರು


ಬದುಕಿನಲ್ಲೂ ಕ್ರೀಡೆಯಲ್ಲೂ ಗುರುವಿನ ಪಾತ್ರ ದೊಡ್ಡದು. ಗುರುತರವಾದದು.
ಕುದುರೆ ಎಷ್ಟೇ ಸಮರ್ಥವಾಗಿದ್ದರೂ, ಶಕ್ತಿಶಾಲಿಯಾಗಿದ್ದರೂ ಅದರ ಮೇಲೆ ಕುಳಿತು ನಿಯಂತ್ರಿಸಲು ಸವಾರನೊಬ್ಬ ಬೇಕು. ಕಷ್ಟದಲ್ಲಿ, ಕತ್ತಲಲ್ಲಿ ದಾರಿ ತೋರಿಸುವವನು ಗುರ್ರುೀಡೆಯಲ್ಲೂ ತರಬೇತುದಾರನೆಂದು ಗುರುತಿಸಲ್ಪಡುವ ಗುರುವಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ುಟ್ಬಾಲ್ನಂಥ ಕ್ರೀಡೆಗಳಲ್ಲಿ ತರಬೇತುದಾರ ಹೇಳಿದ್ದೇ ವೇದವಾಕ್ಯ. ಅಲ್ಲಿ ರಾಷ್ಟ್ರದ ುಟ್ಬಾಲ್ ಸಂಸ್ಥೆ ತರಬೇತುದಾರನನ್ನು ನೇಮಕ ಮಾಡಿದರೆ, ತರಬೇತುದಾರ ಆಟಗಾರರನ್ನು ಆಯ್ಕೆ ಮಾಡುತ್ತಾನೆ. ಅಲ್ಲಿ ನಿಜ ಅರ್ಥದಲ್ಲಿ ಗುರುವಿನ ಗುಲಾಮನಾಗದ ಹೊರತು ಆಟಗಾರರಿಗೆ ಯಶಸ್ಸು ದೊರೆಯುವುದಿಲ್ಲ.್ರಕೆಟ್ನಲ್ಲಿ ಅಂಥ ಕಟ್ಟುನಿಟ್ಟಿನ ವಾತಾವರಣವಿಲ್ಲದಿದ್ದರೂ, ಸಾಕಷ್ಟು ಜವಾಬ್ದಾರಿ ಇದ್ದೇ ಇರುತ್ತದೆ. ಏಕೆಂದರೆ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ವೈಲ್ಯಕ್ಕೆ ಮೊದಲು ಬಲಿಪಶುವಾಗುವವನು ತರಬೇತುದಾರ.
ುಟ್ಬಾಲ್ ಕೋಚ್ನಂತೆ ಕ್ರಿಕೆಟ್ ಕೋಚ್ಗೆ ತಂಡದ ಆಯ್ಕೆಯಲ್ಲಿ ಅಧಿಕಾರವಿಲ್ಲ. ಆಯ್ಕೆಗಾರರು ಸೂಚಿಸಿದ ಆಟಗಾರರೊಂದಿಗೆ ಇಲ್ಲಿ ಕೋಚ್ ಹೆಣಗಬೇಕು. ಅಂದರೆ ಕೊಟ್ಟ ಕುದುರೆಯನ್ನು ಏರುವುದಷ್ಟೇ ಅವನ ಪಾಲಿಗಿರುವುದು.ದೇನೇ ಇರಲಿ, ಇದೇ 19ರಂದು ಪ್ರಾರಂಭವಾಗುವ 10ನೇ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಕಣದಲ್ಲಿರುವ 14 ತಂಡಗಳ ಪೈಕಿ ಯಾವ ಕೋಚ್ ವಿಶ್ವಕಪ್ ಗೆಲ್ಲಿಸಲು ಸಮರ್ಥರು ಎಂಬ ಜಿಜ್ಞಾಸೆಗೆ ಇದು ಸಕಾಲ.
ಮೊದಲನೆಯದಾಗಿ ಈ ಬಾರಿ ಯಾರೂ ವಿಶ್ವಕಪ್ ಗೆದ್ದ ಕೋಚ್ಗಳಿಲ್ಲ. 2007ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಜಾನ್ ಬುಕನನ್ ಮತ್ತು ಬಾಂಗ್ಲಾದೇಶದ ಡೇವ್ ವಾಟ್ಮೋರ್ ಹಿಂದೆ ವಿಶ್ವಕಪ್ ಗೆದ್ದ ಅನುಭವದೊಂದಿಗೆ ಟೂರ್ನಿಗೆ ಆಗಮಿಸಿದ್ದರು. ಆದರೆ, ಈ ಬಾರಿ ಅಂಥ ದಿಗ್ಗಜರು ಯಾರಿಲ್ಲ. ಇದ್ದುದರಲ್ಲಿ ನ್ಯೂಜಿಲೆಂಡ್ ಕೋಚ್ ಜಾನ್ ರೈಟ್ ಅನುಭವಿ. ಅವರಿಗೆ 2003ರಲ್ಲಿ ಭಾರತ ತಂಡದ ಕೋಚ್ ಆಗಿ ೈನಲ್ ಸಾಧನೆ ಮಾಡಿದ ಅನುಭವವಿದೆ. ಉಳಿದ 13 ತಂಡದ ಕೋಚ್ಗಳಿಗೆ ಇದು ಮೊದಲ ವಿಶ್ವಕಪ್ ಅನುಭವ.
ಗುರುಮೂಲದ ದೃಷ್ಟಿಯಿಂದ ಹೇಳುವುದಾದರೆ ಈ ಬಾರಿ ಕಣದಲ್ಲಿರುವ 14ರಲ್ಲಿ 9 ತಂಡಗಳ ಭವಿಷ್ಯ ವಿದೇಶಿಯರ ಕೈಯಲ್ಲಿದೆ. ಅಂದರೆ ಕೇವಲ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮಾತ್ರ ಸ್ವದೇಶಿ ಕೋಚ್ ಮಾರ್ಗದರ್ಶನದಲ್ಲಿ ಆಡಲಿವೆ. ಉಳಿದ 9 ತಂಡಗಳು ವಿದೇಶಿ ಕೋಚ್ ನೆರವು ಪಡೆದಿವೆ.ಳೆದ ವಿಶ್ವಕಪ್ನಲ್ಲಿ ಬಹುತೇಕ ತಂಡಗಳು ಆಸ್ಟ್ರೇಲಿಯಾ ಮೂಲದ ಕೋಚ್ ಹೊಂದಿದ್ದವು. ಈ ಬಾರಿಯೂ ಆ ರಾಷ್ಟ್ರದ ತರಬೇತುದಾರರದೇ ಹೆಚ್ಚಿನ ಸಂಖ್ಯೆ. 14ರಲ್ಲಿ 4 ಕೋಚ್ಗಳು ಆಸೀಗಳಾದರೆ, ಆಟದಲ್ಲಿ ಪಾತಾಳ ಕಚ್ಚಿರುವ ವೆಸ್ಟ್ ಇಂಡೀಸ್ನ ಮೂವರು ಕೋಚ್ಗಳು ವಿವಿಧ ತಂಡ ಪ್ರತಿನಿಧಿಸುತ್ತಿರುವುದು ವಿಶೇಷ. ದಕ್ಷಿಣ ಆಫ್ರಿಕಾದ ಇಬ್ಬರು ಕೋಚ್ಗಳಿದ್ದರೆ, ಇಂಗ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ನ ತಲಾ ಒಬ್ಬರು ಕೋಚ್ಗಳಿದ್ದಾರೆ. ಭಾರತದ ಯಾವುದೇ ಕೋಚ್ಗೆ ಈ ವಿಶ್ವಕಪ್ನಲ್ಲಿ ಪಾತ್ರವಿಲ್ಲ. ಭಾರತೀಯ ತರಬೇತುದಾರರು ಈ ರೀತಿ ಬೇಡಿಕೆ ಕಳೆದುಕೊಂಡು ಮೂಲೆಗುಂಪಾಗಿರುವುದು ದುರದೃಷ್ಟಕರ.
ಯಾವ ಕೋಚ್ ಗೆಲ್ಲಬಹುದು?ಟೂರ್ನಿಯ ಸಂಖ್ಯಾಬಲ ಹೆಚ್ಚಿಸುವ ಸಲುವಾಗಿ ಐರ್ಲೆಂಡ್, ಕೆನಡಾ, ಹಾಲೆಂಡ್, ಕೀನ್ಯಾಕ್ಕೂ ಅವಕಾಶ ನೀಡಿದ್ದರಿಂದ ಈ ಬಾರಿ 14 ತಂಡಗಳಿವೆ. ಉಳಿದ 10 ತಂಡಗಳ ಪೈಕಿ ಗೆಲ್ಲುವ ಅವಕಾಶ ಇರುವುದು 6 ರಿಂದ 7 ತಂಡಗಳಿಗೆ ಮಾತ್ರ. ಜಿಂಬಾಬ್ವೆ ಈ ಬಾರಿ ಆಡುತ್ತಿರುವುದೇ ದೊಡ್ಡ ಸಾಧನೆ ಎನಿಸಬಹುದು. 1983ರಲ್ಲಿಭಾರತ ಗೆದ್ದಂತೆ ಈ ಬಾರಿ ಬಾಂಗ್ಲಾದೇಶ ಗೆಲ್ಲುವ ಸಾಧ್ಯತೆ ಕಡಿಮೆ. ಆದರೂ, ತವರಿನ ಲಾಭ ಪಡೆದು ಸೆಮಿೈನಲ್ ಹಂತದವರೆಗೆ ಕನಸಿನ ಓಟ ಓಡುವ ಸಾಧ್ಯತೆ ಸ್ವಲ್ಪ ಇದೆ.ನ್ನು ವೆಸ್ಟ್ ಇಂಡೀಸ್ ಕ್ವಾರ್ಟರ್ೈನಲ್ನಿಂದ ಮತ್ತೊಂದು ಹೆಜ್ಜೆ ಮುಂದಿಟ್ಟರೆ ಅದೇ ಹೆಚ್ಚು. ಆದರೂ, ಚೊಚ್ಚಲ ಚಾಂಪಿಯನ್ಸ್ಲೀಗ್ನಲ್ಲಿ ಟ್ರಿನಿಡಾಡ್ ಟೊಬ್ಯಾಗೋ ೈನಲ್ ಪ್ರವೇಶಿಸಿದಂತೆ ವಿಂಡೀಸ್ ದೈತ್ಯ ಓಟ ಪ್ರದರ್ಶಿಸಲೂ ಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 1 ಶೇ. ಮಾತ್ರ.ನ್ನುಳಿದ 7 ತಂಡಗಳ ಪೈಕಿ ಸದ್ಯ ಅತ್ಯಂತ ನಿಕೃಷ್ಟ ಾರ್ಮ್ ನಲ್ಲಿರುವ ತಂಡವೆಂದರೆ ನ್ಯೂಜಿಲೆಂಡ್. ಆದರೆ, ವಿಶ್ವಕಪ್ಗಳಲ್ಲಿ ಯಾವಾಗಲೂ ಕಿವೀಸ್ ಅಚ್ಚರಿ ಪ್ರದರ್ಶನ ನೀಡಿಸೆಮಿೈನಲ್ ಹಂತವನ್ನು ಸ್ಥಿರವಾಗಿ ಪ್ರವೇಶಿಸಿದ ಇತಿಹಾಸ ಹೊಂದಿದೆ. ಈ ಬಾರಿ ಜಾನ್ ರೈಟ್ ಮಾರ್ಗದರ್ಶನವೂ ಇರುವುದರಿಂದ ಏನಾದರೂ ಪವಾಡ ನಡೆಯಲೂಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 10ರಿಂದ 15 ಶೇ. ಮಾತ್ರ.
ಬಾಕಿ 6 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆಲ್ಲಲು ಸಮರ್ಥವೆನಿಸಿದೆ. ಭಾರತ ಉಳಿದೆಲ್ಲವುಗಳಿಗಿಂತ ಪ್ರಬಲ ತಂಡ ಹೊಂದಿದೆ. ತವರಿನ ಅನುಕೂಲ, ದಕ್ಷ ಕೋಚ್ ಮಾರ್ಗದರ್ಶನ ತಂಡಕ್ಕಿದೆ. ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಬೋರಲಾಗಿದ್ದರೂ, ಏಕದಿನಗಳಲ್ಲಿ ಈಗಲೂ ನಂ.1 ತಂಡ. ಇಂಗ್ಲೆಂಡ್ನ ಟೆಸ್ಟ್ ಯಶಸ್ಸು ಏಕದಿನಗಳಿಗೂ ವಿಸ್ತರಿಸುವ ಅವಕಾಶವಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಹಸಿವಿಂದ ಬಳಲಿ ಸದ್ಯ ಕುಂಭಕರ್ಣನಂತೆ ಭೋರ್ಗರೆಯುತ್ತಿರುವ ಪಾಕಿಸ್ತಾನ ಈ ವಿಶ್ವಕಪ್ನ ಅತ್ಯಂತ ಅಪಾಯಕಾರಿ ತಂಡ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕ್ನ ಪ್ರದರ್ಶನವೇ ಇದಕ್ಕೆ ನಿದರ್ಶನ. ದಕ್ಷಿಣ ಆಫ್ರಿಕಾ ಉತ್ತಮ ತಂಡವನ್ನು ಹೊಂದಿದ್ದರೂ ಅವರು ಚೋಕರ್ ಅಪಖ್ಯಾತಿಯಿಂದ ಈ ಬಾರಿಯಾದರೂ ಹೊರಬರಬೇಕಿದೆ.ದರೆ ಈ ಪೈಕಿ ಯಾವುದೇ ತಂಡ ಗೆಲ್ಲಬೇಕಾದರೂ, ಅದರಲ್ಲಿ ಕೋಚ್ ವಹಿಸುವ ಪಾತ್ರ ನಿರ್ಣಾಯಕ. ಒಟ್ಟಾರೆ ಈ ವಿಶ್ವಕಪ್ನಲ್ಲಿ ಕರ್ಸ್ಟನ್, ನೀಲ್ಸೆನ್, ಫ್ಲವರ್, ಬೇಲಿಸ್, ಯೂನಿಸ್, ಫೇವರಿಟ್ಕೋಚ್ಗಳು.

ಭಾರತ: ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ ಪರ 101 ಟೆಸ್ಟ್, 185 ಏಕದಿನಗಳಲ್ಲಿ ಆಡಿರುವ ಗ್ಯಾರಿ ಕರ್ಸ್ಟನ್ ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಹಾಗೂ ಏಕದಿನಗಳಲ್ಲಿ ನಂ.2 ಶ್ರೇಯಾಂಕಕ್ಕೆ ಮುನ್ನಡೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಭಾರತ ೇವರಿಟ್ ತಂಡವಾಗಿರುವಂತೆ, ಕರ್ಸ್ಟನ್ ಟ್ರೋಫಿ ಗೆಲ್ಲಲು ೇವರಿಟ್ ಕೋಚ್.

ಆಸ್ಟ್ರೇಲಿಯಾ:ಟಿಮ್ ನೀಲ್ಸೆನ್(ಆಸಿಸ್)
43 ವರ್ಷದ ಟಿಮೋತಿ ಜಾನ್ ನೀಲ್ಸೆನ್ ಆಸ್ಟ್ರೇಲಿಯಾ ತಂಡ 2007ರ ವಿಶ್ವಕಪ್ ಗೆದ್ದ ಬಳಿಕ ಜಾನ್ ಬುಕನನ್ ಉತ್ತರಾಧಿಕಾರಿಯಾಗಿ ನೇಮಕಗೊಂಡವರು. 101 ಪ್ರಥಮ ದರ್ಜೆ ಪಂದ್ಯ ಆಡಿರುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ನೀಲ್ಸೆನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದವರಲ್ಲ.


ಬಾಂಗ್ಲಾದೇಶ:ಜೇಮಿ ಸಿಡ್ಡನ್ಸ್ (ಆಸಿಸ್)
47 ವರ್ಷದ ಜೇಮ್ಸ್ ಡರೆನ್ ಸಿಡ್ಡನ್ಸ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಹಾಗೂ ದಕ್ಷಿಣ ಆಸ್ಟ್ರೇಲಿಯಾ ತಂಡಗಳ ಪರ 16 ವರ್ಷ ಪ್ರಥಮ ದರ್ಜೆ ಕ್ರಿಕೆಟ್ ಆಡಿದವರು. 146 ಪಂದ್ಯಗಳಲ್ಲಿ 10,643 ರನ್ ಅವರ ಸಾಧನೆ. ಆಸ್ಟ್ರೇಲಿಯಾ ಪರ 1988ರಲ್ಲಿ ಏಕೈಕ ಏಕದಿನ ಪಂದ್ಯ ಆಡಿರುವ ಜೇಮಿ, 2007ರಿಂದ ಬಾಂಗ್ಲಾದೇಶದ ಕೋಚ್.

ಕೆನಡಾ: ಪುಬುಡು ದಾಸನಾಯಕೆ (ಶ್ರೀಲಂಕಾ)
ಶ್ರೀಲಂಕಾ ಪರ 1993-94ರ ಅವಧಿಯಲ್ಲಿ 11 ಟೆಸ್ಟ್ ಹಾಗೂ 16 ಏಕದಿನ ಪಂದ್ಯ ಆಡಿರುವ 41 ವರ್ಷದ ದಾಸನಾಯಕೆ 1998ರಿಂದ ಕೆನಡಾ ಪರ ಐಸಿಸಿ ಟ್ರೋಫಿಯಲ್ಲಿ ಆಡಿದವರು. 2007ರಿಂದ ಆ ತಂಡದ ಕೋಚ್.


ಇಂಗ್ಲೆಂಡ್:ಆಂಡಿ ್ಲವರ್ (ಜಿಂಬಾಬ್ವೆ)ಜಿಂಬಾಬ್ವೆಯ ಅತ್ಯಂತ ಯಶಸ್ವಿ ಕ್ರಿಕೆಟಿಗ ಆಂಡಿ ್ಲವರ್ ಇಂಗ್ಲೆಂಡ್ ಕೋಚ್ ಆಗಿ ಅಪಾರ ಯಶಸ್ಸು ಪಡೆದಿದ್ದಾರೆ. ಮಾಜಿ ಕೋಚ್ ಪೀಟರ್ ಮೂರ್ಸ್ಗೆ ಸಹಾಯಕರಾಗಿದ್ದ ಆಂಡಿ, ಕೆರಿಬಿಯನ್ ಪ್ರವಾಸದ ಸಂದರ್ಭದಲ್ಲಿ ಹಂಗಾಮಿ ಕೋಚ್ ಆಗಿದ್ದರು. ನಂತರ ಬಡ್ತಿ ಪಡೆದರು. ಇಂಗ್ಲೆಂಡ್ ತಂಡವನ್ನು ಆಶಸ್ ಗೆಲುವಿಗೆ ಮುನ್ನಡೆಸಿರುವುದು ಅವರ ಹೆಗ್ಗಳಿಕೆ. ಇಂಗ್ಲೆಂಡ್ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಆಂಡಿ ಏಕದಿನ ವಿಶ್ವಕಪ್ನಲ್ಲೂ ಅದೇ ಮ್ಯಾಜಿಕ್ ಮೆರೆಯುವ ಉತ್ಸಾಹದಲ್ಲಿದ್ದಾರೆ.

ಐರ್ಲೆಂಡ್: ಫಿಲ್ ಸಿಮ್ಮನ್(ವೆಸ್ಟ್ ಇಂಡೀಸ್)
ಫಿಲ್ ಸಿಮ್ಮನ್ಸ್ 1990ರ ದಶಕದಲ್ಲಿ ವೆಸ್ಟ್ ಇಂಡೀಸ್ನ ಅಗ್ರಮಾನ್ಯ ಆಲ್ರೌಂಡರ್ ಆಗಿದ್ದವರು. 2004ರಲ್ಲಿ ಜಿಂಬಾಬ್ವೆ ಕೋಚ್ ಹುದ್ದೆಗೇರಿದರೂ, ಒಂದು ವರ್ಷ ಬಳಿಕ ಉಚ್ಛಾಟನೆಗೊಂಡ ಅವರು 2007ರಿಂದ ಐರ್ಲೆಂಡ್ ಕೋಚ್ ಆಗಿದ್ದಾರೆ.

ಜಿಂಬಾಬ್ವೆ: ಆಲನ್ ಬುಚರ್ (ಇಂಗ್ಲೆಂಡ್)
ಇಂಗ್ಲೆಂಡ್ ಪರ 1 ಟೆಸ್ಟ್ ಆಡಿರುವ 56 ವರ್ಷದ ಬುಚರ್ ಹಿಂದೆ ಸರ್ರೆ ಕೌಂಟಿ ತಂಡದ ಮುಖ್ಯ ಕೋಚ್ ಆಗಿದ್ದವರು.

ಕೀನ್ಯಾ: ಎಲ್ಡಿನ್ ಬ್ಯಾಪ್ಟಿಸ್ಟೆ (ವೆಸ್ಟ್ ಇಂಡೀಸ್)
51 ವರ್ಷದ ಮಾಜಿ ವೇಗದ ಬೌಲರ್ ಬ್ಯಾಪ್ಟಿಸ್ಟೆ ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಗಳಲ್ಲಿ ಆಡಿದ್ದು ಆ ಎಲ್ಲಾ ಪಂದ್ಯಗಳಲ್ಲಿ ವಿಂಡೀಸ್ ಗೆದ್ದಿರುವುದು ವಿಶೇಷ. 43 ಏಕದಿನಗಳಲ್ಲೂ ಆಡಿರುವ ಅವರು 2009ರಿಂದ ಕೀನ್ಯಾ ಕೋಚ್.

ಹಾಲೆಂಡ್: ಪೀಟರ್ರ್ನೆನ್ (ಆಸ್ಟ್ರೇಲಿಯಾ)
ಕೇವಲ 5 ಪ್ರಥಮ ದರ್ಜೆ ಪಂದ್ಯ ಆಡಿರುವ ಡ್ರಿನೆನ್ 2006ರಲ್ಲಿ ಸ್ಕಾಟ್ಲೆಂಡ್ ಕೋಚ್ ಆಗಿದ್ದರು. ಸದ್ಯ ಹಾಲೆಂಡ್ಗೆ ಕೋಚ್.

ನ್ಯೂಜಿಲೆಂಡ್: ಜಾನ್ ರೈಟ್ (ನ್ಯೂಜಿಲೆಂಡ್)
ಈ ವಿಶ್ವಕಪ್ನಲ್ಲಿರುವ ಅತ್ಯಂತ ಹಿರಿಯ ಹಾಗೂ ಅನುಭವಿ ಕೋಚ್ 57 ವರ್ಷದ ಜಾನ್ ರೈಟ್ 2003ರಲ್ಲಿ ಭಾರತವನ್ನು ೈನಲ್ಗೆ ಮುನ್ನಡೆಸಿದ್ದರು. ಸದ್ಯ ಮಾರ್ಕ್ ಗ್ರೇಟ್ಬ್ಯಾಚ್ ತೆರವುಗೊಳಿಸಿದ ಕಿವೀಸ್ ಕೋಚ್ ಹುದ್ದೆ ತುಂಬಿದ್ದಾರೆ.

ಪಾಕಿಸ್ತಾನ: ವಕಾರ್ ಯೂನಿಸ್ (ಪಾಕಿಸ್ತಾನ)
ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ಗಳ ಯಾದಿಯಲ್ಲಿ ಸ್ಥಾನ ಪಡೆದಿರುವ ವಕಾರ್ ಯೂನಿಸ್ ಕೋಚ್ ಹುದ್ದೆಗೇರಿದ ಮೇಲೆ ಪಾಕ್ ತಂಡ ಮರುಹುಟ್ಟು ಪಡೆಯುತ್ತಿದೆ.

ದಕ್ಷಿಣ ಆಫ್ರಿಕಾ: ಕೊರ್ರಿ ವಾನ್ ಝಿಲ್ (ದ. ಆಫ್ರಿಕಾ)
ಕೇವಲ 2 ಏಕದಿನ ಪಂದ್ಯ ಆಡಿರುವ ವಾನ್ ಝಿಲ್ ಮಾಜಿ ಕೋಚ್ ಮಿಕಿ ಆರ್ಥರ್ಸ್ಗೆ ಸಹಾಯಕರಾಗಿದ್ದರು. ನಂತರ ಬಡ್ತಿ ಪಡೆದರು.

ಶ್ರೀಲಂಕಾ: ಟ್ರೆವರ್ ಬೇಲಿಸ್ (ಆಸ್ಟ್ರೇಲಿಯಾ)
ನ್ಯೂ ಸೌತ್ ವೇಲ್ಸ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಬೇಲಿಸ್ 2007ರಿಂದ ಲಂಕಾ ಕೋಚ್.


ವೆಸ್ಟ್ ಇಂಡೀಸ್: ಒಟ್ಟಿಸ್ ಗಿಬ್ಸನ್ (ವಿಂಡೀಸ್)
ವಿಂಡೀಸ್ ಪರ 2 ಟೆಸ್ಟ್, 15 ಏಕದಿನಗಳಲ್ಲಿ ಆಡಿರುವ ಮಾಜಿ ವೇಗದ ಬೌಲರ್ ಗಿಬ್ಸನ್ ಹಿಂದೆ ಇಂಗ್ಲೆಂಡ್ಗೆ ಬೌಲಿಂಗ್ ಕೋಚ್ ಆಗಿದ್ದರು.

ನೆನಪಾಗುವವರು
2007ರ ಕೆರಿಬಿಯನ್ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಆಘಾತಕಾರಿಯಾಗಿ ಸೋತ ಬಳಿಕ ಹೋಟೆಲ್ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾದ ಪಾಕಿಸ್ತಾನದ ಮಾಜಿ ಕೋಚ್ ಬಾಬ್ ವೂಲ್ಮರ್....
ಸರ್ವಾಧಿಕಾರಿ ಧೋರಣೆಯಿಂದ ಎಲ್ಲರ ವೈರತ್ವ ಕಟ್ಟಿಕೊಂಡು, 2007ರಲ್ಲಿ ಭಾರತ ಮೊದಲ ಸುತ್ತಿನಲ್ಲೇ ನಿರ್ಗಮಿಸಲು ಕಾರಣರಾದ ಗ್ರೆಗ್ ಚಾಪೆಲ್....
ಶ್ರೀಲಂಕಾ ತಂಡವನ್ನು ೈನಲ್ಗೆ ಮುನ್ನಡೆಸಿದ ದಕ್ಷ ಕೋಚ್ ಟಾಮ್ ಮೂಡಿ...

Thursday, January 20, 2011

ಸ್ವಭಾವ vs ಸಾಮರ್ಥ್ಯ


ಒಳ್ಳೆಯವರಾಗಿರಬೇಕೋ, ಸಮರ್ಥರಾಗಿರಬೇಕೋ...
ಕ್ರೀಡೆಯಲ್ಲೂ ಕಚೇರಿಗಳಲ್ಲೂ ಆಗಾಗ ಇಂಥ ಸಮಸ್ಯೆ ಎದುರಾಗುತ್ತಿರುತ್ತದೆ.
ತಮ್ಮ ಜೊತೆ ಕೆಲಸ ಮಾಡುವವರು ಸಮರ್ಥರಾಗಿರಬೇಕೇ ಅಥವಾ ಒಳ್ಳೆಯವರಾಗಿರಬೇಕೇ ಎಂಬ ಸಂದಿಗ್ಧ ಅದು.ೆಂದರೆ ಎಲ್ಲಾ ಒಳ್ಳೆಯವರೂ ಕೆಲಸದ ವಿಷಯದಲ್ಲಿ ದಕ್ಷರಾಗಿರುವುದಿಲ್ಲ. ಅವರಿಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಎಷ್ಟೋ ಬಾರಿ ಅತಿಯಾದ ವಿನಯ ಹಾಗೂ ಒಳ್ಳೆಯತನ ಅವರ ಅಸಾಮರ್ಥ್ಯದ ಕುರಿತ ಕೀಳರಿಮೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ.ೆಲಸದಲ್ಲಿ ಚುರುಕಿರುವವರು ಯಾವಾಗಲೂ ವಿಧೇಯರಾಗಿ, ಒಳ್ಳೆಯವರಾಗಿ ಇರಲೇಬೇಕೆಂದೇನೂ ಇಲ್ಲ. ಅವರು ತಮ್ಮ ಪಾಲಿನ ಕೆಲಸವನ್ನು ಆಕ್ಷೇಪಕ್ಕೆ ಅವಕಾಶವಿಲ್ಲದಂತೆ ಮಾಡುತ್ತಿರುತ್ತಾರೆ. ಆದರೆ, ತಮ್ಮ ಮೇಲಿನವರ ಹಿಡಿತಕ್ಕೆ ಸಿಗುವುದಿಲ್ಲ. ಅವರಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಸ್ವಲ್ಪ ಆತ್ಮವಿಶ್ವಾಸ, ಹೆಚ್ಚು ಅಹಂ, ಹುಂಬತನ ಎಲ್ಲವೂ ಇರುತ್ತದೆ. ಂಥ ಇಬ್ಬರು ವ್ಯಕ್ತಿಗಳ ನಡುವೆ ಆಯ್ಕೆ ಮಾಡುವ ಪ್ರಸಂಗ ಬಂದಾಗ ಯಾರು ಹಿತವರು ಎಂಬ ಸಂದಿಗ್ಧ ಎದುರಾಗುವುದು ಸಹಜ. ವಿಶ್ವಕಪ್ಗೆ ಭಾರತ ತಂಡ ಆಯ್ಕೆ ಮಾಡುವಾಗ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯಕ್ಕಿಂತ ಒಳ್ಳೆಯತನವೇ ಇರಲಿ ಎಂದರು. ವಿಶ್ವಕಪ್ ತಂಡದಿಂದ ಶ್ರೀಶಾಂತ್ ಹೊರಗುಳಿದಿದ್ದು, ಆಶಿಶ್ ನೆಹ್ರಾ ಆಯ್ಕೆಯಾಗಿದ್ದು ಇದೇ ರೀತಿ.
ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶ್ರೀಶಾಂತ್ ಅದ್ಭುತ ಪ್ರದರ್ಶನ ನೀಡಿದ್ದರು. ಹಾಲಿ ಏಕದಿನ ಸರಣಿಯಲ್ಲಿ ಆಶಿಶ್ ನೆಹ್ರಾ ಪ್ರದರ್ಶನ ಅಷ್ಟಕ್ಕಷ್ಟೇ. ಮೊದಲ ಎರಡು ಏಕದಿನಗಳಲ್ಲಂತೂ ಅವರ ಬೌಲಿಂಗ್ ನಿಕೃಷ್ಟ ಮಟ್ಟದ್ದಾಗಿತ್ತು. ನೆಹ್ರಾ ಅಂಥ ಕಳಪೆ- ಕ್ಲಬ್ ದರ್ಜೆಯ ಬೌಲರ್ ಅಲ್ಲವಾದರೂ, ವರ್ತಮಾನದ ಾರ್ಮ್ ಆಧಾರದ ಮೇಲೆ ತಂಡ ಆಯ್ಕೆ ಮಾಡಿದ್ದರೆ, ಶ್ರೀಶಾಂತ್ ಆಯ್ಕೆಯಾಗುತ್ತಿದ್ದರು. ನೆಹ್ರಾ ಹೊರಗುಳಿಯುತ್ತಿದ್ದರು. ಆದರೆ, ಕೆಲವು ವರದಿಗಳ ಪ್ರಕಾರ ಕೇರಳದ ವೇಗಿ ಬೇಡವೇ ಬೇಡ ಎಂದು ಧೋನಿ ಪಟ್ಟು ಹಿಡಿದರು. ಹಾಗಾಗಿ ನೆಹ್ರಾ ಆಯ್ಕೆ ಅನಿವಾರ್ಯವಾಯಿತು.
ಧೋನಿ ಹಾಗೇಕೆ ಮಾಡಿದರು?
ಅದಕ್ಕೆ ಕಾರಣ ಶ್ರೀಶಾಂತ್ ಸ್ವಭಾವ. ಈ ಹುಡುಗ ಮುಂಗೋಪಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುಂಟಾಟ, ಹುಡುಗಾಟ, ಹಟ ಎಲ್ಲವೂ ಈ ಹುಡುಗನಿಗೆ ಜಾಸ್ತಿ. ಅತಿ ವಿನಯ, ವಿಧೇಯತೆ ಈತನಿಗೆ ಗೊತ್ತಿಲ್ಲ. ಅನಗತ್ಯವಾಗಿ ಯಾರನ್ನೂ ಓಲೈಸುವುದೂ ಇಲ್ಲ. ಮೌನವಾಗಿರುವುದೂ ಗೊತ್ತಿಲ್ಲ. ತಾಳ್ಮೆಯೂ ಸ್ವಲ್ಪ ಕಡಿಮೆ. ಯಾವುದೇ ವಿಷಯದಕ್ಕೂ ತಕ್ಷಣ ಪ್ರತಿಕ್ರಿಯಿಸುವುದು ರೂಢಿ. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವುದು ಇವರಿಗೆ ಅನ್ವರ್ಥ. ರಂಗೋಲಿ ಕೆಳಗೆ ನುಸುಳುವುದಿರಲಿ, ಚಾಪೆ ಕೆಳಗೆ ತೂರುವ ಜಾಣತನವೂ ಗೊತ್ತಿಲ್ಲ. ಕೇವಲ ತನ್ನ ಪ್ರದರ್ಶನವೊಂದೇ ತನ್ನನ್ನು ಕಾಪಾಡುತ್ತದೆ ಎಂದು ನಂಬಿದಾತ. ಇದೇ ಕಾರಣಕ್ಕೆ ಕಳೆದ ಅನೇಕ ವರ್ಷಗಳಿಂದ ಭಾರತ ತಂಡದ ಪರ ಆಡುತ್ತಿದ್ದರೂ, ಇವತ್ತಿಗೂ ಶ್ರೀಶಾಂತ್ ಅಕ್ಷರಶಃ ಏಕಾಂಗಿ. ತಂಡದಲ್ಲಿ ಯಾರೂ ಅಂತರಂಗದ ಗೆಳೆಯರಿಲ್ಲ. ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಲ್ಲುವವರಿಲ್ಲ. ಸ್ವಭಾವದಲ್ಲಿ ಒರಟನಾದರೂ, ಚೆನ್ನಾಗಿ ಆಡುತ್ತಾನೆ. ಆ ಕಾರಣಕ್ಕಾದರೂ ತಂಡದಲ್ಲಿರಲಿ ಎಂದು ಶಿಾರಸು ಮಾಡುವವರಿಲ್ಲ.
ನಾಯಕ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯುದ್ದಕ್ಕೂ ಶ್ರೀಶಾಂತ್ರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದರು. ಅವರನ್ನು ಹದ್ದುಬಸ್ತಿನಲ್ಲಿಡುವುದು ಕಷ್ಟ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಬೌಲಿಂಗ್ ಮಾಡುವಾಗ ತುಂಬಾ ಕಾಲಹರಣ ಮಾಡುತ್ತಾರೆ, ಎಲ್ಲೆ ಮೀರಿ ವರ್ತಿಸುತ್ತಾರೆ ಎಂದೆಲ್ಲಾ ಸ್ಕೂಲ್ ಹುಡುಗನಂತೆ ದೂರಿಕೊಂಡಿದ್ದರು.
ಧೋನಿ ಬಹಳ ಚಾಣಾಕ್ಷ ನಾಯಕ ಎನ್ನುವುದು ಎಲ್ಲೆಡೆ ಇರುವ ಅಭಿಪ್ರಾಯ. ಆದರೆ, ಶ್ರೀಶಾಂತ್ ವಿಷಯದಲ್ಲಿ ಅವರು ಪ್ರದರ್ಶಿಸಿದ್ದು ಅಪ್ರಬುದ್ಧತೆ. ಶ್ರೀಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ, ಅದು ಸ್ವತಃ ಧೋನಿಯ ವೈಲ್ಯವೇ ಹೊರತು ಬೇರೇನೂ ಅಲ್ಲ. ಅದನ್ನು ಬಹಿರಂಗವಾಗಿ ರಾಣಾರಂಪ ಮಾಡುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಶ್ರೀಶಾಂತ್ರ ಬುದ್ಧಿ ತಿದ್ದುವುದಕ್ಕೆ ಧೋನಿ ಯಾರು? ತಾವು ಕ್ರಿಕೆಟ್ ತಂಡದ ನಾಯಕನೇ ಹೊರತು ಸ್ಕೂಲ್ ಟೀಚರ್ ಅಲ್ಲ ಎನ್ನುವುದು ಅವರಿಗೆ ನೆನಪಿರಬೇಕು. ತಮ್ಮ ಕೈಕೆಳಗಿನ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತೆಗೆಯಬೇಕೇ ಹೊರತು, ಅವರು ದೇವತೆಗಳಂತೆ ವರ್ತಿಸಲಿ ಎಂದು ಅಪೇಕ್ಷಿಸುವ ಅಧಿಕಾರ ಅವರಿಗಿಲ್ಲ.
ನಿಜ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ಕ್ರೀಡಾಮನೋಭಾವ, ಸದ್ವರ್ತನೆಯ ಲಕ್ಷ್ಮಣರೇಖೆ ಮೀರದಂತೆ ನೋಡಿಕೊಳ್ಳುವುದು ತಂಡದ ನಾಯಕನ ಕರ್ತವ್ಯ. ಆದರೆ, ಆಕ್ರಮಣಶೀಲತೆಗೂ ದುಷ್ಟ ಪ್ರವೃತ್ತಿಗೂ ವ್ಯತ್ಯಾಸವಿದೆ. ಒಂದು ವೇಳೆ ತಂಡದ ಆಟಗಾರರು ಎಲ್ಲೆ ಮೀರಿ ವರ್ತಿಸಿದ ಸಂದರ್ಭದಲ್ಲೂ ನಾಯಕರಾದವರು ಅದನ್ನು ಬೇರೆ ಮಾರ್ಗದಲ್ಲಿ ಸರಿಪಡಿಸಬೇಕೇ ಹೊರತು ಬಹಿರಂಗವಾಗಿ ತಪ್ಪಿತಸ್ಥ ಆಟಗಾರನನ್ನು ನೇಣಿಗೇರಿಸಬಾರದು.ರಡು ವರ್ಷ ಕೆಳಗೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಆಂಡ್ರ್ಯೂ ಸೈಮಂಡ್ಸ್ ವಿಚಾರದಲ್ಲಿ ಹರ್ಭಜನ್ ಸಿಂಗ್ ಎಲ್ಲೆ ಮೀರಿದ್ದರು. ಬಹುಶಃ ಧೋನಿ ಆಗ ನಾಯಕರಾಗಿದ್ದಿದ್ದರೆ ಹರ್ಭಜನ್ರನ್ನು ತಕ್ಷಣ ಮನೆಗೆ ಕಳಿಸುತ್ತಿದ್ದರೋ ಏನೋ. ಆದರೆ, ಅನಿಲ್ ಕುಂಬ್ಳೆ ಬಹಳ ವಿವೇಚನೆಯಿಂದ, ರಾಜತಾಂತ್ರಿಕವಾಗಿ ನಡೆದುಕೊಂಡರು. ಮುಳ್ಳಿನ ಮೇಲೆ ಒಣಗಲು ಹಾಕಿದ ಬಟ್ಟೆಯನ್ನು ತೆಗೆಯುವಷ್ಟೇ ನಾಜೂಕಾಗಿ ಪ್ರಕರಣವನ್ನು ಬಗೆಹರಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಪ್ರತಿಯೊಬ್ಬರೂ ಹರ್ಭಜನ್ರನ್ನು ಬೆಂಬಲಿಸುವ ಮೂಲಕ ಅವರಿಗೆ ಅನಾಥಪ್ರಜ್ಞೆ ಕಾಡದಂತೆ ನೋಡಿಕೊಂಡರು.
ದಕ್ಷಿಣ ಆಫ್ರಿಕಾದಲ್ಲಿ ಶ್ರೀಶಾಂತ್ಗೆ ಇಂಥ ಅನಾಥಪ್ರಜ್ಞೆಯೇ ಕಾಡಿತ್ತು.ಂತೂ ಹೇಳಿದ ಮಾತು ಕೇಳದಿದ್ದರೆ ಕೆಲಸದಿಂದ ತೆಗೆದುಹಾಕು ಎಂಬ ಕಾರ್ಪೋರೇಟ್ ಬಾಸ್ಗಳ ಧೋರಣೆಯಂತೆ ಧೋನಿ ಸಹ ವರ್ತಿಸಿ ಶ್ರೀಶಾಂತ್ರ ಕೊಕ್ಗೆ ಕಾರಣರಾದರು.್ರಕೆಟ್ ಮೈದಾನದಲ್ಲಿ ಆಕ್ರಮಣಶೀಲರಾಗಿರುವುದು ತಪ್ಪಲ್ಲ. ಆದರೆ, ಮೋಸಗಾರ ಆಗಿರಬಾರದು. ಅಷ್ಟಕ್ಕೂ ಆಕ್ರಮಣಶೀಲ ಗುಣವೆನ್ನುವುದು ಇಲ್ಲದಿದ್ದರೆ ಕ್ರಿಕೆಟ್ ಸಪ್ಪೆ ಎನಿಸಿಬಿಡುತ್ತದೆ. ಕ್ರೀಡೆಗೆ ಶ್ರೀಶಾಂತ್ರಂಥ ವಿಲಕ್ಷಣ ವ್ಯಕ್ತಿಗಳೂ ಬೇಕು.
ಹಾಗೆ ನೋಡಿದರೆ, ಉತ್ತಮ ಆಟಗಾರರಾಗಿಯೂ ಸ್ವಭಾವದಿಂದ ಕಷ್ಟ-ನಷ್ಟ ಅನುಭವಿಸಿದವರ ಪೈಕಿ ಶ್ರೀಶಾಂತ್ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ಗೆ ಇಂಥ ಪಟ್ಟಿಯಲ್ಲಿ ನಂ.1 ಸ್ಥಾನ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಆಂಡ್ರೆ ನೆಲ್, ನ್ಯೂಜಿಲೆಂಡ್ನ ಜೆಸ್ಸಿ ರೈಡರ್ ಇಂಥ ಕೆಲವು ಉದಾಹರಣೆಗಳು.
ಪಾಕಿಸ್ತಾನದಲ್ಲಿ ಶೋಯಿಬ್ ಅಖ್ತರ್ರನ್ನು ಹದ್ದುಬಸ್ತಿನಲ್ಲಿಡುವುದು ಯಾವ ನಾಯಕರಿಂದಲೂ ಸಾಧ್ಯವಾಗಲಿಲ್ಲ. ಬಹುಶಃ ಅಖ್ತರ್ಗೆ ಮೂಗುದಾರ ಹಾಕುವ ಪ್ರಯತ್ನಮಾಡುವ ಬದಲು ನಾಯಕ ಪಟ್ಟ ಕಟ್ಟಿದ್ದರೆ ಇಷ್ಟು ಹೊತ್ತಿಗೆ ಪಾಕ್ ಕ್ರಿಕೆಟ್ ಉದ್ಧಾರವಾಗಿಬಿಡುವ ಸಾಧ್ಯತೆ ಇತ್ತು. ಇದಕ್ಕೆ ಎರಡು ಉದಾಹರಣೆಯೆಂದರೆ, ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ. ಇವರಿಬ್ಬರೂ ನಾಯಕರಾಗುವ ಮುನ್ನ ಭಾರೀ ಅಹಂಕಾರಿಗಳೆಂದು ಹೆಸರಾಗಿದ್ದರು. ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮೈದಾನಕ್ಕೆ ನೀರು ಕೊಂಡುಹೋಗಲು ಒಪ್ಪುತ್ತಿರಲಿಲ್ಲ. ಆದರೆ, ಅವರೇ ನಾಯಕರಾದ ಮೇಲೆ ಆಯಾ ತಂಡಗಳ ಅದೃಷ್ಟವೇ ಬದಲಾಯಿತು. ಅವರ ಆತ್ಮವಿಶ್ವಾಸ, ಆಕ್ರಮಣಶೀಲ ಧೋರಣೆಯೇ ತಂಡಗಳನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿತು.ಆಧಾರದ ಮೇಲೆ ಹೇಳುವುದಾದರೆ ಬಹುಶಃ ಶ್ರೀಶಾಂತ್ ಕೂಡ ಕ್ಯಾಪ್ಟನ್ಸಿ ಮೆಟೀರಿಯಲ್ಲೇ ಆಗಿರಬಹುದು!

Thursday, December 16, 2010

ಬೆಂಕಿಯಲ್ಲಿಅರಳಿದ ಹೂವುಗಳು


೧೦೦ ಮೀ. ಓಟ 10 ಸೆಕೆಂಡ್ ಒಳಗೆ ಮುಗಿದುಹೋಗುತ್ತದೆ. ಬಾಕ್ಸಿಂಗ್ ಪಂದ್ಯಕ್ಕೆ ಹೆಚ್ಚೆಂದರೆ 6 ನಿಮಿಷ ಸಾಕು. ಬ್ಯಾಡ್ಮಿಂಟನ್ ಪಂದ್ಯಗಳು ಸರಾಸರಿ ಅರ್ಧ ಗಂಟೆಯಲ್ಲಿ ಮುಗಿಯುತ್ತವೆ. ಇಷ್ಟು ಕಡಿಮೆ ಅವಧಿಯಲ್ಲಿ ಕ್ರೀಡಾ ಪಟುಗಳು ಕೀರ್ತಿ ಶಿಖರ ಏರಬೇಕು. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬೇಕು. ಆದರೆ, ಈ ಹತ್ತು ಸೆಕೆಂಡ್, 6 ನಿಮಿಷ, ಅರ್ಧ ಗಂಟೆಗಳಲ್ಲಿ ಗಳಿಸಬಹುದಾದ ವಿಶ್ವ ಮನ್ನಣೆಗಾಗಿ ಕ್ರೀಡಾಪಟುಗಳು ಅದೆಷ್ಟು ಕಷ್ಟ-ಕೋಟಲೆ ಅನುಭವಿಸಬೇಕಾಗುತ್ತದೆ? ಅದೆಂಥಾ ತ್ಯಾಗಗಳನ್ನು ಮಾಡಬೇಕಾಗುತ್ತದೆ? ಭಾರತದಲ್ಲಿ ಶ್ರೀಮಂತ ಹಿನ್ನೆಲೆಯಿಂದ ಯಶಸ್ವಿ ಕ್ರೀಡಾಪಟುಗಳಾಗುವವರ ಸಂಖ್ಯೆ ಬಹಳ ಕಡಿಮೆ. ಎಲ್ಲೋ ಸಾವಿರಕ್ಕೆ ಒಂದು. ಜೊತೆಗೆ ಪ್ರತಿಯೊಬ್ಬ ಕ್ರೀಡಾ ಪಟುವಿನ ಯಶಸ್ಸಿನ ಹಿಂದೆಯೂ ಅನೇಕ ರೋಚಕ, ಮೈಝುಮ್ಮೆನಿಸುವ, ಮರುಕ ಹುಟ್ಟಿಸುವ ಕಥೆಗಳಿರುತ್ತವೆ.
ಭಾರತದ ಕೆಲವು ಯಶಸ್ವಿ ಕ್ರೀಡಾಪಟುಗಳ ಯಶಸ್ಸಿನ ಹಿಂದಿನ ಕಥೆಗಳು ಇಲ್ಲಿವೆ.ೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ಗೆ ಬಂದ ಆರಂಭದ ದಿನಗಳಲ್ಲಿ ಅವರು ದಿನಕ್ಕೆ ಎರಡು ಲೀ. ಹಾಲು ಕುಡಿಯುತ್ತಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಕ್ರೀಡಾಪಟುಗಳ ಜೀವನದಲ್ಲಿ ಪೌಷ್ಠಿಕ ಆಹಾರಕ್ಕೆ ಬಹುಮುಖ್ಯ ಪಾತ್ರಘಿ. ಅದಿಲ್ಲದೆ ಎಷ್ಟೇ, ಅಭ್ಯಾಸ ಮಾಡಿದರೂ,ಲಾಗ ಹೊಡೆದರೂ, ಸ್ಪರ್ಧೆಯಲ್ಲಿ ಗೆಲ್ಲಲಾಗುವುದಿಲ್ಲ.
ನಮ್ಮ ಕುಸ್ತಿ ವಿಶ್ವಚಾಂಪಿಯನ್ ಸುಶೀಲ್ ಕುಮಾರ್ ಕಥೆಯೂ ಇದಕ್ಕಿಂತ ಭಿನ್ನವಲ್ಲ. 13ನೇ ವಯಸ್ಸಿನಲ್ಲೇ ಅಖಾಡಕ್ಕಿಳಿದು ಮೈಗೆ ಮಣ್ಣು ಮೆತ್ತಿಸಿಕೊಂಡಿದ್ದ ಸುಶೀಲ್ ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದರು. ಅವರ ಅಪ್ಪ ದಿನಂಪ್ರತಿ ಕೆಲಸಕ್ಕೆ ಹೋಗುವಾಗ 2 ಲೀ. ಹಾಲು, ಕಾಲು ಕೆಜಿ ತಾಜಾ ಪನ್ನೀರ್, ಸೇಬು, ಬಾದಾಮಿ ಮತ್ತು 100 ಗ್ರಾಂನಷ್ಟು ಆಗಷ್ಟೇ ಕಾಯಿಸಿದ ಬೆಣ್ಣೆಯನ್ನು ಮಗನಿಗೆಂದು ತಂದುಕೊಡುತ್ತಿದ್ದರು. ಇಷ್ಟು ಆಹಾರ ಪ್ರತೀ ದಿನ ಸುಶೀಲ್ಗೆ ಅಗತ್ಯವಿತ್ತು ಅವರ ಕುಟುಂಬ ಆರ್ಥಿಕವಾಗಿ ಅಷ್ಟೇನೂ ಗಟ್ಟಿಯಾಗಿರಲಿಲ್ಲಘಿ. ಆದರೂ, ಒಂದು ವಿಷಯದಲ್ಲಿ ಸುಶೀಲ್ ಅದೃಷ್ಟವಂತ. ಅವರಿಗೆ ಅವರದೇ ಆದ ಹೊಲವಿತ್ತು. ಎಮ್ಮೆ ಸಾಕಿದ್ದರು. ಹಾಗಾಗಿ ಬೆಳೆದಿದ್ದರಲ್ಲಿ ಒಂದು ಪಾಲನ್ನು ಮಗನ ಡಯೆಟ್ಗಿಂದು ಮೀಸಲಿಡುತ್ತಿದ್ದರು.ದರೆ, ವಿಶ್ವ ನಂ.1 ಬಾಕ್ಸರ್ ವಿಜೇಂದರ್ಗೆ ಇಂಥ ಅನುಕೂಲವಿರಲಿಲ್ಲ. ಆದರೂ, ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಅದರ ಬಿಸಿ ತಟ್ಟದಂತೆ ಅಪ್ಪ-ಅಮ್ಮ ನೋಡಿಕೊಳ್ಳುತ್ತಿದ್ದರು. ತ್ತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟ ಪಾಲಿಗೆ ಬಾಲ್ಯವೆನ್ನುವುದು ಪಾನಿಪುರಿ, ಬೇಲ್ಪುರಿ, ಸಮೋಸ, ಐಸ್ಕ್ರೀಮ್, ಕ್ಯಾಂಡಿಗಳು, ಸಿಹಿ ತಿಂಡಿ ಹಾಗೂ ಹುರಿದ ತಿಂಡಿಗಳಿಲ್ಲದ ಸಪ್ಪೆ ಬದುಕಾಗಿತ್ತುಘಿ. ಎಲ್ಲಾ ಮಕ್ಕಳೂ ತಿನ್ನುವಾಗ ನನಗೇಕೆ ಈ ಶಿಕ್ಷೆ ಎಂದು ಜ್ವಾಲಾ ಕಣ್ಣೀರು ಹಾಕಿದ ದಿನಗಳೂ ಇದ್ದವು.ತ್ತೀಚೆಗೆ ಹಾಂಕಾಂಗ್ ಓಪನ್ ಗೆದ್ದಿರುವ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ವಿಷಯದಲ್ಲೂ ಅಷ್ಟೇ. ಬೆಳಗಿನ ಜಾವ 4ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸೈನಾ ಒಂದೆಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಿರುತ್ತಿದ್ದರು, ಓದುತ್ತಿದ್ದರು, ಅಭ್ಯಾಸ ನಡೆಸುತ್ತಿದ್ದರು. 8ನೇ ವರ್ಷದಿಂದ ಇದೇ ಅವರ ದೈನಂದಿನ ವೇಳಾಪಟ್ಟಿಯಾಗಿತ್ತು. ಕ್ರೀಡಾಂಗಣಕ್ಕೆಂದು ಅಪ್ಪನ ಬೈಕ್ನಲ್ಲಿ ಇಲ್ಲವೇ ಬಸ್ ಅಥವಾ ರೈಲಿನಲ್ಲಿ ತೆರಳುವಾಗ ಅವರಿಗೆ ದಾರಿಯಲ್ಲಿಯೇ ನಿದ್ರೆ ಬರುತ್ತಿತ್ತುಘಿ. ಇವತ್ತೊಂದು ದಿನ ಅಭ್ಯಾಸ ಬೇಡವಮ್ಮಾ ಎಂದು ಅವರು ಅಮ್ಮನ ಬಳಿ ಗೋಗರೆಯುತ್ತಿದ್ದರು. ಆದರೆ, ಅಮ್ಮ ಕೇಳುತ್ತಿರಲಿಲ್ಲ.ಬಲವಂತ ಮಾಡಿ ಕಳಿಸುತ್ತಿದ್ದರು. ಭಾನುವಾರ ಬಂತೆಂದರೆ ಸೈನಾ ಪಾಲಿಗೆ ಕೇವಲ ನಿದ್ರೆ, ನಿದ್ರೆ ಮತ್ತು ಕೇವಲ ನಿದ್ರೆ ಮಾತ್ರ.
ಸತತ ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ಗೆ ಭಾನುವಾರವೂ ವಿಶ್ರಾಂತಿ ಲಭಿಸುತ್ತಿರಲಿಲ್ಲ. ಶಾಲೆಗೆ ರಜಾ ಇದ್ದ ದಿನ ಎಲ್ಲಾ ಮಕ್ಕಳಂತೆ ಅವರಿಗೆ ಮಜಾ ಅನುಭವಿಸುವ ಮಾತೇ ಇರಲಿಲ್ಲ. ಅಪ್ಪ ಅಮ್ಮನ ಜೊತೆ ಜಮೀನಿನಲ್ಲಿ ದುಡಿಯಬೇಕಾಗಿತ್ತುಘಿ. ಶಾಲೆ ಇದ್ದ ದಿನವೂ ಅಪರಾಹ್ನದ ಹೊತ್ತಿನಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಬೇಕಾಗಿತ್ತು. ಸಂಜೆಯಾದ ಮೇಲೆ ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಬೇಕಿತ್ತುಘಿ. ಇಬ್ಬರು ತಮ್ಮಂದಿರು ಹಾಗೂ ತಂಗಿಯನ್ನು ನೋಡಿಕೊಳ್ಳಬೇಕಿತ್ತು. ಬಡಮಕ್ಕಳಿಗೆ ಬಾಲ್ಯವೆಂದರೇನೆಂದೇ ತಿಳಿದಿರುವುದಿಲ್ಲ ಎಂಬ ಮಾತು ಮೇರಿಕೋಮ್ ವಿಷಯದಲ್ಲಿ ನಿಜವಾಗಿತ್ತು.ದರೂ, ಮೇರಿಕೋಮ್ಗೊಂದು ಕನಸಿತ್ತು. ಆತ್ಮವಿಶ್ವಾಸವಿತ್ತು. ತಾನು ಕ್ರೀಡಾಪಟುವಾದರೆ ಹೆಚ್ಚು ಹಣ ಸಂಪಾದನೆ ಮಾಡಿ ಮನೆಗೆ ಸಹಾಯ ಮಾಡಬಹುದು ಎನ್ನುವುದು ಹುಡುಗಿಯ ಯೋಚನೆಯಾಗಿತ್ತು. ಹಾಗೆಂದೇ ಹುಡುಗಿ ಮನೆಯಿಂದ 45 ಕಿಮೀ ದೂರದಲ್ಲಿದ್ದ ಇಂಾಲದಲ್ಲಿ ಶಾಲೆಗೆ ಸೇರಿಸಲು ಹುಡುಗಿ ಹಟ ಹಿಡಿದಳು. ಅಪ್ಪ-ಅಮ್ಮನಿಗೆ ಇಷ್ಟವಿರದಿದ್ದರೂ ಹುಡುಗಿ ಕೇಳಲಿಲ್ಲ. ಆಗಿನ್ನೂ ಆಕೆಗೆ 13 ವರ್ಷ. 16 ವರ್ಷವಾಗುವಾಗ ಮೇರಿಕೋಮ್ ಇಂಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಕಾರದಲ್ಲಿ ಇಂಬೋಚಾ ಸಿಂಗ್ ಬಳಿ ಬಾಕ್ಸಿಂಗ್ ಕಲಿಯುತ್ತಿದ್ದರು.
ಸುಶೀಲ್ ಕುಮಾರ್ ಸಹ 13ನೇ ವಯಸ್ಸಿನಲ್ಲೇ ಮನೆ ಬಿಟ್ಟವರು. ಅಂದಿನಿಂದ ಅವರ ಜೀವನ ಕಳೆದಿದ್ದೆಲ್ಲಾ ತರಬೇತಿ ಕೇಂದ್ರಗಳಲ್ಲಿ ಮತ್ತು ಕ್ರೀಡಾ ಹಾಸ್ಟೆಲ್ಗಳಲ್ಲಿ. ಅವರ ಅಮ್ಮನಿಗೆ ಮಗನನ್ನು ಬಿಟ್ಟಿರುವುದು ಕಷ್ಟವಾಗುತ್ತಿತ್ತು. ಆದರೂ, ಅದನ್ನವರು ತೋರಗೊಡಲಿಲ್ಲ. ಅವರು ಯಾವಾಗಲೂ ಸಕಾರಾತ್ಮಕವಾಗಿರುತ್ತಿದ್ದರು. ಮಗನಿಗೆ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದರು. ಏನಾದರೂ ತಮಾಷೆ ಮಾಡುತ್ತಿದ್ದರು. ಸದ್ಗುಣಗಳನ್ನು ತಿಳಿಯಹೇಳುತ್ತಿದ್ದರು. ಅದೇ ಗುಣ ಸುಶೀಲ್ಗೂ ಬಂದಿದೆ.ಂದು ಸಾಧಾರಣ ಮಗುವನ್ನು ಕ್ರೀಡಾಪಟುವಾಗಿ ಬೆಳೆಸುವುದೆಂದರೆ ಅದಕ್ಕೆ ಸಾಕಷ್ಟು ಹಣಬೇಕು. ಪೌಷ್ಠಿಕ ಆಹಾರ, ಪ್ರಯಾಣವೆಚ್ಚ, ಸಲಕರಣೆಗಳು, ತರಬೇತಿ ಶುಲ್ಕ, ಉಡುಪುಗಳು... ಹೀಗೆ ಖರ್ಚಿನ ಮೂಲಗಳು ಒಂದೆರಡಲ್ಲ. ಬ್ಯಾಡ್ಮಿಂಟನ್ನಂಥ ಆಟ ಕೂಡ ದುಬಾರಿಯೇ. ಜ್ವಾಲಾ ಗುಟ್ಟ ಅವರ ತರಬೇತಿಯ ವೆಚ್ಚ ಭರಿಸಲು ಅವರ ತಂದೆ ಪರದಾಡುತ್ತಿದ್ದರು. ಅವರ ಅಮ್ಮ ಯೇಲನ್ ಸಹ ಕೆಲಸ ಹುಡುಕುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಯೇಲನ್ ಅವರ ಮ್ಯಾಂಡರಿನ್ ಮೂಲ ಅವರಿಗೆ ಕೆಲಸ ಹುಡುಕುವಾಗ ಉಪಯೋಗಕ್ಕೆ ಬಂತು. ಚೀನಾದೊಂದಿಗೆ ವ್ಯವಹಾರ ಸಂಪರ್ಕ ಹೊಂದಿರುವ ಾರ್ಮಾ ಕಂಪೆನಿಗಳಿಗೆ ಮ್ಯಾಂಡರಿನ್ ಭಾಷೆ ಬಲ್ಲವರ ಅಗತ್ಯ ತುರ್ತಾಗಿತ್ತು. ಯೇಲನ್ ಇದರ ಲಾಭ ಪಡೆದು ಕೆಲಸ ಗಿಟ್ಟಿಸಿಕೊಂಡರು. ಆಗ ಜ್ವಾಲಾಗೆ 16 ವರ್ಷ. ಅವರು ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದಾಗ ಅಗ್ಗದ ಕ್ಯಾನ್ವಾಸ್ ಶೂ ಧರಿಸಿ ಆಡಿದ್ದರು. ಆಗ ಅವರ ಬಳಿ ಇದ್ದಿದ್ದು ಎರಡೇ ರ್ಯಾಕೆಟ್. ಅವರಿಗೆ ಹುಟ್ಟುಹಬ್ಬದ ಗ್ಟಿಗಾಗಿ ಅವರ ಅಪ್ಪ ಸ್ನೇಹಿತರ ಬಳಿ ಸಾಲ ಮಾಡಿದ್ದರು.ಷ್ಟಗಳು ಎಷ್ಟೇ ಇದ್ದರೂ, ಜ್ವಾಲಾಗೆ ಅಪ್ಪ-ಅಮ್ಮನ ಸಂಪೂರ್ಣ ಬೆಂಬಲವಿತ್ತು. ನೆಂಟರಿಷ್ಟರೆಲ್ಲಾ ಜ್ವಾಲಾ ಆಟವಾಡುವುದನ್ನು ಆಕ್ಷೇಪಿಸಿದ್ದರು. ಇವಳು ಬ್ಯಾಡ್ಮಿಂಟನ್ ಹುಚ್ಚು ಹಿಡಿಸಿಕೊಂಡು ಓದಿನಲ್ಲಿ ಹಿಂದೆ ಬೀಳುತ್ತಾಳೆ. ಮುಂದೆ ಇವಳಿಗೆ ಮದುವೆಯಾಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ಅದೇ ಬ್ಯಾಡ್ಮಿಂಟನ್ ಇಂದು ಜ್ವಾಲಾಗೆ ಎಲ್ಲಾ ಕೊಡಿಸಿದೆ. ಹೈದರಾಬಾದ್ನ ಸಾಂಪ್ರದಾಯಿಕ ತೆಲುಗು ಕುಟುಂಬದ ಜ್ವಾಲಾ ಇಂದು ಮುಂಬೈನಲ್ಲಿ ಸ್ವಂತ ಮನೆಹೊಂದಿದ್ದಾರೆ. ಬಿಎಂಡಬ್ಲ್ಯು ಕಾರಿದೆ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅವರಿಂದು ವಿಶ್ವ ತಾರೆ.
ಭಿವಾನಿಯಲ್ಲಿ ಬಾಕ್ಸರ್ಗಳು ಮಾತ್ರ ಹುಟ್ಟುತ್ತಾರೆ ಎನ್ನುವುದೊಂದು ಮಾತು. ವಿಜೇಂದರ್ ಸಿಂಗ್ ಸಹ ಅಷ್ಟೇ. ಅವರು ಸಣ್ಣ ವಯಸ್ಸಿನಿಂದ ಹವಾ ಸಿಂಗ್ ಬಗ್ಗೆ ರೋಚಕ ಕಥೆಗಳನ್ನು ಕೇಳಿಕೊಂಡು ಬೆಳೆದವರು. 1966 ಮತ್ತು 1970ರ ಏಷ್ಯಾಡ್ನಲ್ಲಿ ಬಂಗಾರ ಗೆದ್ದಿದ್ದ ಹವಾ ಸಿಂಗ್ ಸತತ 11 ವರ್ಷ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿ ದಂತಕಥೆಯಾದವರು. ಅವರ ಸ್ಫೂರ್ತಿಯಲ್ಲಿ ಬೆಳೆದ ವಿಜೇಂದರ್ಗೆ ಅಣ್ಣ ಮತ್ತು ಸ್ನೇಹಿತರು ಜಿಮ್ನಲ್ಲಿ ಕಾಲ ಕಳೆಯುತ್ತಿದ್ದುದು ಪ್ರೇರಣೆಯಾಗಿತ್ತು. ಭಿವಾನಿ ಬಾಕ್ಸಿಂಗ್ಗೆ ಪ್ರಸಿದ್ಧವಾದರೆ, ಹರ್ಯಾಣದ ಉಳಿದೆಡೆಯೆಲ್ಲಾ ಆವರಿಸಿರುವುದು ಕುಸ್ತಿ.
ಸುಶೀಲ್ ಕುಮಾರ್ ಕುಟುಂಬದಲ್ಲಿ ಕುಸ್ತಿಯ ಉದ್ದ ಪರಂಪರೆಯೇ ಇದೆ. ಅವರ ಅಪ್ಪಘಿ, ಚಿಕ್ಕಂಪ್ಪಂದಿರು, ಅಜ್ಜ ಎಲ್ಲರೂ ಮಲ್ಲರಾಗಿದ್ದವರೇ. ಹರ್ಯಾಣದಂತೆ ಮಣಿಪುರದಲ್ಲೂ ಕೂಡ ಕ್ರೀಡೆ ಸಂಸ್ಕೃತಿಯಾಗಿ ಬೆಳೆದಿದೆ. ರಾಷ್ಟ್ರ ಮಟ್ಟದಲ್ಲಿ ಅನೇಕ ುಟ್ಬಾಲ್, ಬಾಕ್ಸಿಂಗ್ ಆರ್ಚರಿ, ಸೈಕ್ಲಿಂಗ್ ಮತ್ತು ಹಾಕಿ ತಾರೆಗಳನ್ನು ಆ ರಾಜ್ಯ ಕೊಡುಗೆಯಾಗಿ ನೀಡಿದೆ. ಗುವಾಂಗ್ಝೌ ಏಷ್ಯಾಡ್ನಲ್ಲಿ ಕಂಚು ಗೆಲ್ಲುವ ಮುನ್ನ ಸತತ 7 ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದಿದ್ದ ಬಾಕ್ಸರ್ ಸುರಂಜಯ್ ಸಿಂಗ್ ಪ್ರಾರಂಭದಲ್ಲಿ ುಟ್ಬಾಲ್ ಆಟಗಾರನಾಗಿದ್ದರು. ಮುಂದೆ ಬಾಕ್ಸಿಂಗ್ನತ್ತ ವಾಲಿದರು. ಒಟ್ಟಾರೆ ಮಣಿಪುರದಲ್ಲಿ ಬಡತನವನ್ನು ದೂರ ಅಟ್ಟಿ ಶ್ರೀಮಂತರಾಗುವುದಕ್ಕೆ ಕ್ರೀಡಾಪಟುವಾಗುವುದೇ ಮಾರ್ಗ ಎಂದು ಯುವಜನತೆ ಭಾವಿಸಿದೆ.
ವಿಜೇಂದರ್ ಆರಂಭದ ಕೆಲವು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದರು. ಆದರೆ, ಅದರಿಂದ ಅವರೆಂದೂ ಹತಾಶರಾಗಲಿಲ್ಲಘಿ. ಬದಲಿಗೆ ಮುಂದಿನ ಪಂದ್ಯವನ್ನು ಯಾವ ರೀತಿ ಗೆಲ್ಲುವುದೆಂದೇ ಅವರ ಯೋಚನೆಯಾಗಿತ್ತು. ಸುರಂಜಯ್ ಪಂದ್ಯ ಸೋತರೆ ಆ ರಾತ್ರಿ ಅವರು ನಿದ್ರೆ ಮಾಡುವುದಿಲ್ಲಘಿ. ಬದಲಿಗೆ ಅವರ ತಾನು ಸೋತಿದ್ದು ಹೇಗೆ? ಏಕೆ ಎಂದು ಚಿಂತಿಸುತ್ತಾರೆ. ಮಾರನೇ ಮುಂಜಾನೆಯಿಂದ ಆ ನಿಟ್ಟಿನಲ್ಲಿ ಇನ್ನೂ ಕಠಿಣ ಅಭ್ಯಾಸ ಮಾಡುತ್ತಾರೆ.
ಸೈನಾಗೆ ಗೆಲುವಿನ ಚಟ ಬೆಳೆಸಿದ್ದು ಅವರ ಅಮ್ಮಘಿ. ಪಂದ್ಯ ಆಡುತ್ತಿರುವಾಗ ನೀನು ಕೇವಲ ಗೆಲುವಿನ ಬಗ್ಗೆ ಮಾತ್ರ ಯೋಚಿಸುತ್ತಿರಬೇಕು; ಎದುರಾಳಿಯ ಬಗ್ಗೆ ಅಲ್ಲ ಎನ್ನುವುದು ಸೈನಾಗೆ ಅಮ್ಮ ಹೇಳಿಕೊಟ್ಟ ಪಾಠವಾಗಿತ್ತು. ಮಗಳು ಅದನ್ನು ಚಾಚೂತಪ್ಪದೆ ಪಾಲಿಸಿದಳು.
ಲಿಯಾಂಡರ್ ಪೇಸ್ ಇಂದು ಟೆನಿಸ್ ದಿಗ್ಗಜ. ದಾಖಲೆ ಗ್ರಾಂಡ್ಸ್ಲಾಂಗಳ ಒಡೆಯ. ಅವರೀಗ ಅಂತಾರಾಷ್ಟ್ರೀಯ ಸೆಲೆಬ್ರಿಟಿ. ಅವರ ಪತ್ನಿಯೂ ದೊಡ್ಡ ಸೆಲೆಬ್ರಿಟಿ. ಆದರೆ, ಒಂದು ಕಾಲದಲ್ಲಿ ಲಿಯಾಂಡರ್ ತರಬೇತಿಗೆಂದು ತಿಂಗಳಿಗೆ 5-7 ಸಾವಿರ ರೂ ಹೊಂದಿಸಲು ಅವರ ಅಪ್ಪ ವೇಸ್ ಪೇಸ್ ಪರದಾಡುತ್ತಿದ್ದರು. 12ನೇ ವಯಸ್ಸಿನಿಂದ 5 ವರ್ಷ ಕಾಲ ಬ್ರಿಟಾನಿಯಾ ಅಮೃತ್ರಾಜ್ ಟೆನಿಸ್ ಅಕಾಡೆಮಿಯಲ್ಲಿ ಕಲಿತ ಲಿಯಾಂಡರ್ 1990ರಲ್ಲಿ ಜೂನಿಯರ್ ವಿಂಬಲ್ಡನ್ ಗೆದ್ದರು. ಆದರೆ, ಮುಂದಿನ ಆರು ತಿಂಗಳ ಅವರು ಒಂದೂ ಪಂದ್ಯ ಆಡಲಿಲ್ಲ. ಕಾರಣ ಹಣ. ಐಟಿಎ್ ಸರ್ಕ್ಯುಟ್ನಲ್ಲಿ ಆಡಬೇಕಾದರೆ, ಅವರು ಕಡ್ಡಾಯವಾಗಿ ಕೋಚ್, ಟ್ರೈನರ್ ಹೊಂದಬೇಕಾಗಿತ್ತು. ಅದಕ್ಕೆ ಕನಿಷ್ಠ 2 ಲಕ್ಷ ರೂ. ಬೇಕಾಗಿತ್ತು. ಕೊನೆಗೂ ಜೂನಿಯರ್ ಹಂತದಿಂದ ವೃತ್ತಿಪರರಾಗುವವರೆಗೆ ಲಿಯಾಂಡರ್ ಒಂದು ಟೂರ್ನಿಯಲ್ಲಿ ಗೆದ್ದ ಹಣದಿಂದ ಇನ್ನೊಂದು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದರು. ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ಕ್ರೀಡಾ ಸಚಿವರಾದಾಗ ಲಿಯಾಂಡರ್ಗೆ ಎರಡು ವರ್ಷ ಕಾಲ ವರ್ಷಕ್ಕೆ 30,000 ಡಾಲರ್ ನೆರವು ಕೊಡಿಸಿದರು. ಗ್ರಾಂಡ್ಸ್ಲಾಂಗಳಲ್ಲಿ ಡಬಲ್ಸ್ ಯಶಸ್ಸಿನ ಬಳಿಕ ಲಿಯಾಂಡರ್ ಜೀವನದಲ್ಲಿ ಭಾಗ್ಯೋದಯವಾಯಿತು.

Thursday, November 4, 2010

ಪುಟ್ಟ ರಾಜಕುಮಾರಿಯ ದಿಟ್ಟ ಹೆಜ್ಜೆಗಳು


ಅದ್ಭುತ ಆಟ, ಅಪ್ಸರೆಯ ಮೈಮಾಟ.
ಟೆನಿಸ್ ಜಗತ್ತು ನಿಬ್ಬೆರಗಾಗಲು ಇನ್ನೇನು ಬೇಕು?
ವಿಶ್ವ ನಂ.1 ಕಿರೀಟ ಮುಡಿ ಅಲಂಕರಿಸಿದೆ. ಪ್ರಾಯೋಜಕರು ಆಕೆಯ ಒಂದು ಸಹಿಗಾಗಿ ಕರಾರುಪತ್ರ ಹಿಡಿದುಕೊಂಡು ಮನೆಬಾಗಿಲು ಕಾಯುತ್ತಿದ್ದಾರೆ. ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದಾರೆ, ದುಂಬಾಲು ಬೀಳುತ್ತಿದ್ದಾರೆ.
20ರ ಸಣ್ಣ ಹರೆಯದಲ್ಲೇ ಜಗತ್ತು ಕ್ಯಾರೊಲಿನ್ ವೊಜ್ನಿಯಾಕಿಯ ವಶವಾಗಿದೆ.
ಮಹಿಳಾ ಟೆನಿಸ್ನ ರೋಮಾಂಚನ ಇರುವುದೇ ಇಲ್ಲಿ. ಆಕೆ ಸ್ಟೆಫಿ ಗ್ರ್ಾ ಇರಬಹುದು, ಸೆಬಾಟಿನಿ, ಸ್ಯಾಂಚೆಜ್ ವಿಕಾರಿಯೋ ಆಗಿರಬಹುದು. ಮೋನಿಕಾ ಸೆಲಸ್, ಮಾರ್ಟಿನಾ ಹಿಂಗಿಸ್ ಇರಬಹುದು. ಇತ್ತೀಚಿನ ಶರಪೋವ, ಇವಾನೊವಿಕ್ ಆಗಿರಬಹುದು. ಹುಡುಗಿಯರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಬಲಿಯುವ ಮೊದಲೇ ಚಾಂಪಿಯನ್ ಪಟ್ಟಕ್ಕೇರಿರುತ್ತಾರೆ. ಅಬ್ಬಾ ಹುಡುಗಿ ಎಂದು ಜನ ಆಕೆಯ ಯಶಸ್ಸು, ಆಟ, ಅಂದಕ್ಕೆ ಮರುಳಾಗಿರುವಾಗಲೇ ಇನ್ನೊಬ್ಬ ಪುಟ್ಟ ರಾಜಕುಮಾರಿಯ ರಂಗಪ್ರವೇಶವಾಗಿರುತ್ತದೆ. ಟೆನಿಸ್ ಅಭಿಮಾನಿಗಳ ನಿಷ್ಠೆ ಮ್ಯೂಸಿಕಲ್ ಚೇರ್ನಂತಾಗಿದ್ದರೆ, ಅದರಲ್ಲಿ ಅವರ ತಪ್ಪೇನೂ ಇಲ್ಲ. ೆಡರರ್, ನಡಾಲ್ ಮೇಲಿರುವ ಏಕನಿಷ್ಠೆಯನ್ನು ಅಭಿಮಾನಿಗಳು ಮಹಿಳಾ ಟೆನಿಸ್ನಲ್ಲಿ ಒಬ್ಬಳು ಶರಪೋವಾ ಅಥವಾ ಕ್ಲೈಸ್ಟರ್ಸ್ ಮೇಲಿರಿಸುವುದು ಕಷ್ಟ.
ಕ್ಯಾರೊಲಿನ್ ವೋಜ್ನಿಯಾಕಿಯನ್ನು ಡೆನ್ಮಾರ್ಕ್ನ ಜನ ಪುಟ್ಟ ರಾಜಕುಮಾರಿ ಎಂದೇ ಕರೆಯುತ್ತಾರೆ. 5 ಅಡಿ 10 ಇಂಚು ಎತ್ತರ ಬೆಳೆದಿದ್ದರೂ, ಆಕೆಯ ಮುಖದಲ್ಲಿನ್ನೂ ಮುಗ್ಧತೆ ಮಾಸದಿರುವುದು ಅದಕ್ಕೆ ಕಾರಣ. ಈ ವರ್ಷ ಹುಡುಗಿ ಉಳಿದೆಲ್ಲಾ ಮಹಿಳೆಯರಿಗಿಂತ ಅತೀ ಹೆಚ್ಚು ಟೆನಿಸ್ ಆಡಿದ್ದಾಳೆ. ಅತೀ ಹೆಚ್ಚು ಟ್ರೋಫಿಗಳನ್ನೂ ಗೆದ್ದಿದ್ದಾಳೆ. ಯುರೋಪ್ನ ಪುಟ್ಟ ದೇಶ ಡೆನ್ಮಾರ್ಕ್ನಿಂದ ಹೊರಹೊಮ್ಮಿದ ಮೊಟ್ಟಮೊದಲ ಚಾಂಪಿಯನ್ ಟೆನಿಸ್ ಹುಡುಗಿ ವೋಜ್ನಿಯಾಕಿ.
ತನ್ನ ಉದ್ದ ಹೆಸರನ್ನು ಕ್ಯಾರೋ ಎಂದಷ್ಟೇ ಮೊಟಕುಗೊಳಿಸಿಕೊಂಡು, ಜನರಿಂದ ಹಾಗೆಯೇ ಕರೆಸಿಕೊಳ್ಳಲು ಇಷ್ಟ ಪಡುವ ವೋಜ್ನಿಯಾಕಿ ಅಪ್ಪಟ ಡೆನ್ಮಾರ್ಕಿಯೇನೂ ಅಲ್ಲ. ಏಕೆಂದರೆ, ಪೋಲೆಂಡ್ನವರು ಸಹ ನಮ್ಮವಳವಳು ಎನ್ನುತ್ತಾರೆ. ಕಾರಣವೂ ಇಲ್ಲದಿಲ್ಲ. ಕ್ಯಾರೋಳ ಅಪ್ಪ-ಅಮ್ಮ ಇಬ್ಬರೂ ಮೂಲತಃ ಪೋಲೆಂಡ್ನವರು. ಬಹಳ ಹಿಂದೆಯೇ ಡೆನ್ಮಾರ್ಕ್ಗೆ ವಲಸೆ ಬಂದು ನೆಲೆಸಿದವರು. ಅಪ್ಪ ಡೆನ್ಮಾರ್ಕ್ನ ಕ್ಲಬ್ಗಳ ಪರ ವೃತ್ತಿಪರ ುಟ್ಬಾಲ್ ಆಡಿದವರು. ಅಮ್ಮ ಪೋಲೆಂಡ್ನಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು. ಕ್ಯಾರೋಳ ಅಣ್ಣ ಸದ್ಯ ಡೆನ್ಮಾರ್ಕ್ನಲ್ಲಿ ುಟ್ಬಾಲ್ ಆಡುತ್ತಾರೆ.
ಇಂಥ ಕ್ರೀಡಾ ಕುಟುಂಬದಿಂದ ಬಂದ ವೋಜ್ನಿಯಾಕಿ ಅದಕ್ಕೆ ತಕ್ಕ ಅಥ್ಲೆಟಿಕ್ ದೇಹ, ಫಿಟ್ನೆಸ್ ಬಳುವಳಿ ಪಡೆದವರು. ಅವರು ಟೆನಿಸ್ ಆಟವನ್ನು ುಟ್ಬಾಲ್ನಂತೆ ಯೋಜನಾಬದ್ಧವಾಗಿ ಆಡುವುದರಲ್ಲೂ ಅಪ್ಪನ ಕೊಡುಗೆ ಇರಬಹುದು. ಇಂಥ ವಿಶಿಷ್ಠ ಶೈಲಿ ವೋಜ್ನಿಯಾಕಿ ಆಟದ ಶಕ್ತಿಯೂ ಹೌದು, ಮಿತಿಯೂ ಹೌದು. ಅಂದರೆ, ಹುಡುಗಿಯ ಆಟದಲ್ಲಿ ಕ್ಲೈಸ್ಟರ್ಸ್ರ ಕಲಾವಂತಿಕೆಯಾಗಲೀ, ಸೆರೇನಾ ವಿಲಿಯಮ್ಸ್ರ ಶಕ್ತಿಯಾಗಲೀ, ಶರಪೋವಾರ ಸತ್ವವಾಗಲೀ ಕಡಿಮೆ. ವೋಜ್ನಿಯಾಕಿ ಸ್ವತಃ ತಾನೇ ಮುನ್ನುಗ್ಗಿ ಅಂಕ ಗಳಿಸುವುದಕ್ಕಿಂತ ಎದುರಾಳಿ ತಪ್ಪು ಎಸಗಿ ಅಂಕ ಬಿಟ್ಟುಕೊಡಲಿ ಎಂದು ಕಾಯುತ್ತಾರೆ; ನಿರ್ಬಂಧಿಸುತ್ತಾರೆ ಎಂಬ ಆರೋಪಗಳಿವೆ. ಇದು ನಿಜವೂ ಹೌದು; ಆಕೆಯ ಯಶಸ್ಸಿನ ಗುಟ್ಟೂ ಹೌದು.
2010ರ ಟೆನಿಸ್ ಋತು ಮೊನ್ನೆ ದೋಹಾದಲ್ಲಿ ಕೊನೆಗೊಂಡಿದೆ. ಮುಗಿದ ಮೇಲೊಮ್ಮೆ ಹಿಂತಿರುಗಿ ನೋಡಿದರೆ ಎಲ್ಲರಿಗಿಂತ ಎದ್ದು ಕಾಣುವುದು ವೋಜ್ನಿಯಾಕಿ ಆಟ.
ನಿಜ. ವರ್ಷದ ನಾಲ್ಕು ಗ್ರಾಂಡ್ಸ್ಲಾಂಗಳಲ್ಲಿ ನಮ್ಮ ಹುಡುಗಿಯ ಆಟ ಅಷ್ಟಕ್ಕಷ್ಟೇ. ಪ್ರಶಸ್ತಿ ಗೆಲ್ಲುವುದಿರಲಿ, ಕನಿಷ್ಠ ಒಂದರಲ್ಲೂ ೈನಲ್ ಸಹ ತಲುಪಲಿಲ್ಲ. ಆದರೂ, ವರ್ಷ ಮುಗಿಯುವ ಹೊತ್ತಿಗೆ ವಿಶ್ವ ಶ್ರೇಯಾಂಕದಲ್ಲಿ ನಂ.1 ಪಟ್ಟ ಒಲಿದಿತ್ತು. ಅದು ಹೇಗೆ ಸಾಧ್ಯವಾಯಿತು?
ಟೆನಿಸ್ ವರ್ಷದಲ್ಲಿ ನಡೆಯುವುದು ನಾಲ್ಕು ಗ್ರಾಂಡ್ಸ್ಲಾಂಗಳು ಮಾತ್ರವಲ್ಲ. ಇನ್ನೂ ಸಾಕಷ್ಟು ಉನ್ನತ ದರ್ಜೆಯ ಟೂರ್ನಿಗಳು ನಡೆಯುತ್ತವೆ. ಅಲ್ಲೆಲ್ಲಾ ಮೆರೆದಿದ್ದು ವೋಜ್ನಿಯಾಕಿ. 2007ರ ಋತುವಿನಲ್ಲಿ ಜಸ್ಟಿನ್ ಹೆನಿನ್ 11 ಪ್ರಶಸ್ತಿ ಗೆದ್ದಿದ್ದರು. ಅದನ್ನು ಬಿಟ್ಟರೆ ಈ ವರ್ಷ ವೋಜ್ನಿಯಾಕಿ ಗೆದ್ದ 6 ಪ್ರಶಸ್ತಿಗಳೇ ವರ್ಷದ ದಾಖಲೆ.
ಹಾಗೆಂದು ಎಲ್ಲರೂ ವೋಜ್ನಿಯಾಕಿಯನ್ನು ಕೊಂಡಾಡುತ್ತಿದ್ದಾರೆ ಎಂದೇನೂ ಅಲ್ಲ. ಟೆಸ್ಟ್ ಕ್ರಿಕೆಟ್ನ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎಂದು ಮುಖ ಹುಳ್ಳಗೆ ಮಾಡಿಕೊಳ್ಳುತ್ತಿರುವ ಆಸ್ಟ್ರೇಲಿಯನ್ನರಂತೆ ಅಮೆರಿಕನ್ನರು ಸಹ ಟೆನಿಸ್ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎನ್ನುತ್ತಿದ್ದಾರೆ. ಅವರ ವಾದಕ್ಕೊಂದು ತರ್ಕವೂ ಇದೆ. ಒಂದೂ ಗ್ರಾಂಡ್ಸ್ಲಾಂ ಗೆಲ್ಲದ ವೋಜ್ನಿಯಾಕಿಯನ್ನು ವಿಶ್ವ ನಂ.1 ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರವರು. ಹಾಗಾದರೆ, ಅವರ ಪ್ರಕಾರ ಯಾರಾಗಬೇಕು? ಅಮೆರಿಕದ ಸೆರೇನಾ ವಿಲಿಯಮ್ಸ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಒಂದೂ ಸೆಟ್ ಬಿಟ್ಟುಕೊಡದೆ ವಿಂಬಲ್ಡನ್ ಸಹ ಗೆದ್ದಿದ್ದಾರೆ. ಆದರೂ, ಆಕೆ ಶ್ರೇಯಾಂಕದಲ್ಲಿ ಹಿಂದೆ ಬೀಳುವುದಕ್ಕೆ ಕಾರಣ? ಈ ವರ್ಷ ಸೆರೇನಾ ಆಡಿದ್ದು ಕೇವಲ 6 ಟೂರ್ನಿ ಮಾತ್ರ. ವಿಂಬಲ್ಡನ್ ಗೆದ್ದ ಬಳಿಕ ಆಕೆ ಕಾಲಿನ ಗಾಯದಿಂದಾಗಿ ಟೆನಿಸ್ ರ್ಯಾಕೆಟ್ ಹಿಡಿದಿಲ್ಲ. ಇಷ್ಟು ಕಡಿಮೆ ಆಡಿ ನಂ.1 ಪಟ್ಟ ಬೇಕೆನ್ನುವುದು ನ್ಯಾಯಯುತವಲ್ಲ. ಬೆಲ್ಜಿಯಂನ ಕಿಂ ಕ್ಲೈಸ್ಟರ್ಸ್ ಸತತ 2ನೇ ವರ್ಷ ಯುಎಸ್ ಓಪನ್ ಗೆದ್ದುಕೊಂಡಿದ್ದಾರೆ. ಆದರೆ ಆಕೆ ಸಹ ಪೂರ್ಣಾವ ಅಮ್ಮ, ಅರೆಕಾಲಿಕ ಆಟಗಾರ್ತಿ. ಹಾಗಾಗಿ ನಂ.1 ಆಗುವುದಕ್ಕೆ ಅಪೇಕ್ಷಿತ ಅಂಕ ಹಾಗೂ ಟೂರ್ನಿಗಳ ಸಂಖ್ಯೆ ಅವರ ಬಳಿಯೂ ಇಲ್ಲ. ವೀನಸ್ ವಿಲಿಯಮ್ಸ್ ಸಹ ಸೆರೇನಾರಂತೆ ತುಂಬಾ ಚೂಸಿ. ಅವರು ವರ್ಷದಲ್ಲಿ ಎಲ್ಲಾ ಟೂರ್ನಿ ಆಡುವುದಿಲ್ಲ. ಈ ವರ್ಷವಂತೂ ಗಾಯಾಳುವಾಗಿ ಋತುವಿನ ಬಹುಪಾಲು ಟೂರ್ನಿ ತಪ್ಪಿಸಿಕೊಂಡರು. ಇನ್ನು ನಂ.1 ಪಟ್ಟದ ಮತ್ತೋರ್ವ ಅಭ್ಯರ್ಥಿ ಮರಿಯ ಶರಪೋವ ಸಹ ಗಾಯದಿಂದಾಗಿ ಹೆಚ್ಚಿನ ಟೂರ್ನಿಗಳಲ್ಲಿ ಆಡಲಿಲ್ಲ. ವೋಜ್ನಿಯಾಕಿ ಟೀಕಾಕಾರರು ಈ ಅಂಶವನ್ನೆಲ್ಲಾ ಮುಂದು ಮಾಡುತ್ತಾರೆ. ಶರಪೋವ, ಕ್ಲೈಸ್ಟರ್ಸ್, ಸೆರೇನಾ, ವೀನಸ್ ಇವರೆಲ್ಲಾ ವರ್ಷ ಪೂರ್ತಿ ಆಡಿದ್ದರೆ, ವೋಜ್ನಿಯಾಕಿ ನಂ.1 ಆಗುತ್ತಿರಲಿಲ್ಲ ಎನ್ನುತ್ತಾರೆ. ಗೊತ್ತಿಲ್ಲ. ಇರಲೂ ಬಹುದು.
ಆದರೆ, ಅವರೆಲ್ಲಾ ಆಡದಿರುವುದರಲ್ಲಿ ವೋಜ್ನಿಯಾಕಿ ಪಾತ್ರವೇನೂ ಇಲ್ಲ.
ಕಿಂ ಕ್ಲೈಸ್ಟರ್ಸ್ ಮೊದಲ ಬಾರಿ ವಿಶ್ವ ನಂ.1 ಆದಾಗ ಒಂದೂ ಗ್ರಾಂಡ್ಸ್ಲಾಂ ಗೆದ್ದಿರಲಿಲ್ಲ. ಆದರೆ, ಈಗ ಅವರು 3 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ಅಮೇಲಿ ಮೌರೆಸ್ಮೋ ಸಹ ಮೊದಲು ವಿಶ್ವ ನಂ.1 ಆಗಿ ನಂತರ ಗ್ರಾಂಡ್ಸ್ಲಾಂ ಗೆದ್ದರು. ಜೆಲೆನಾ ಜಾಂಕೊವಿಕ್ ಮತ್ತು ದಿನಾರ ಸಫಿನಾ ಸಹ ವಿಶ್ವ ನಂ.1 ಆಗಿ ಮಾಜಿಗಳಾಗಿದ್ದಾರಾದರೂ, ಅವರಿಗಿನ್ನೂ ಗ್ರಾಂಡ್ಸ್ಲಾಂ ಗೆಲ್ಲುವುದು ಸಾಧ್ಯವಾಗಿಲ್ಲ.
ಆದರೆ, ವೋಜ್ನಿಯಾಕಿ, ಸಫಿನಾ ಅಥವಾ ಜಾಂಕೊವಿಕ್ರಂತಾಗುವುದಿಲ್ಲವೆಂಬ ಭರವಸೆ ಇದೆ. ಬಹುಶಃ 2011 ಡೆನ್ಮಾರ್ಕ್ ಹುಡುಗಿಯ ವರ್ಷವಾಗಬಹುದು. ಸೆರೇನಾ, ವೀನಸ್, ಶರಪೋವ ಇವರೆಲ್ಲರ ಉಪಸ್ಥಿತಿಯಲ್ಲೇ ವೋಜ್ನಿಯಾಕಿ ಗ್ರಾಂಡ್ಸ್ಲಾಂ ಗೆದ್ದರೆ ಅದು ಟೀಕಾಕಾರರಿಗೆ ಉತ್ತರ ಹಾಗೂ ಆಕೆಯ ಯೋಗ್ಯತೆಗೆ ಹಿಡಿವ ಕನ್ನಡಿ ಎರಡೂ ಆಗುತ್ತದೆ.

2010ರಲ್ಲಿ ಸಾಧನೆ
* ದೋಹಾ ವರ್ಷಾಂತ್ಯ ಟೂರ್ನಿಯಲ್ಲಿ ರನ್ನರ್ಅಪ್
* ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ
ನಂ.1 ಪಟ್ಟ
* ಬೀಜಿಂಗ್ ಓಪನ್ ಚಾಂಪಿಯನ್
* ಟೋಕಿಯೋ ಓಪನ್ ಚಾಂಪಿಯನ್
* ಯುಎಸ್ ಓಪನ್ ಸೆಮಿೈನಲ್
* ಯುಎಸ್ ಓಪನ್ ಸಿರೀಸ್ ಚಾಂಪಿಯನ್
* ನ್ಯೂ ಹೆವನ್ ಚಾಂಪಿಯನ್
* ಮಾಂಟ್ರಿಯಲ್ ಚಾಂಪಿಯನ್
* ಕೋಪನ್ಹೇಗನ್ ಚಾಂಪಿಯನ್
* ವಿಂಬಲ್ಡನ್ 4ನೇ ಸುತ್ತು
* ್ರೆಂಚ್ ಓಪನ್ ಕ್ವಾರ್ಟರ್ೈನಲ್
* ಚಾರ್ಲ್ಸ್ಟನ್ ಸೆಮಿೈನಲ್
* ಪಾಂಟೆ ವೆದ್ರಾ ಬೀಚ್ ಚಾಂಪಿಯನ್
* ಮಿಯಾಮಿ ಕ್ವಾರ್ಟರ್ೈನಲ್
* ಇಂಡಿಯನ್ ವೆಲ್ಸ್ ೈನಲ್
* ಆಸ್ಟ್ರೇಲಿಯನ್ ಓಪನ್ 4ನೇ ಸುತ್ತು

Monday, October 11, 2010

ಈಜಿ ಜೈಸಿದವಳು



ಜೀವನವೊಂದು ಹೋರಾಟ.
ಅಲ್ಲಿ ನಿತ್ಯ ಹೊಸ ಹೊಸ ಸವಾಲುಗಳು.
ಒಂದಕ್ಕಿಂತ ಇನ್ನೊಂದು ಭಿನ್ನ.
ಅನಿಶ್ಚಿತವಾದ ಜೀವನದಲ್ಲಿ ಇಂದಿಗೂ ನಾಳೆಗೂ ಅಜಗಜಾಂತರ ವ್ಯತ್ಯಾಸ.
ಬೆಳೆಯುವ ಪೈರನ್ನು ಮೊಳಕೆಯಲ್ಲಿ ಗುರುತಿಸಬಹುದು. ಆದರೆ, ನಾಳೆ ಆಗುವುದನ್ನು ಇಂದೇ ಹೇಳಲು ಸಾಧ್ಯವಿಲ್ಲ.
ನಟಾಲಿ ಡು ಟಾಯ್ಟ ವಿಚಾರದಲ್ಲೂ ಹಾಗೆಯೇ ಆಯಿತು.
ಸರಿಯಾಗಿ ಒಂಬತ್ತು ವರ್ಷ ಹಿಂದೆ. ಫೆಬ್ರವರಿ ತಿಂಗಳ ಒಂದು ಸೋಮವಾರ ರಸ್ತೆ ಅಪಘಾತದಲ್ಲಿ ಆಕೆ ಕಾಲನ್ನೇ ಕಳೆದುಕೊಂಡರು!
ಕೌಲಾಲಂಪುರದಲ್ಲಿ ನಡೆದ 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಗಿನ್ನೂ 14 ವರ್ಷದ ನಟಾಲಿ ದೊಡ್ಡ ಸೆನ್ಸೇಶನ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಈ ಮಿಂಚಿನ ಬಳ್ಳಿ ಈಜುಕೊಳದಲ್ಲಿ ಭವಿಷ್ಯದ ವಿಶ್ವತಾರೆ ಎಂದೇ ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅಂಥ ಪ್ರತಿಭಾವಂತೆ ಆಕೆ. ವಯಸ್ಸಿಗೆ ಮೀರಿದ ಸಾಮರ್ಥ್ಯ. ಈಜುಕೊಳಕ್ಕೆ ಧುಮುಕಿದರೆ ಪದಕ ಗೆಲ್ಲದೆ ಮೇಲೇಳುತ್ತಿರಲಿಲ್ಲ.
ಆದರೆ, ದುರ್ವಿಧಿ ಕಾರಿನ ರೂಪದಲ್ಲಿ ಆಕೆಗೆ ಬಡಿಯಿತು. ನಟಾಲಿ ಈಜು ಅಭ್ಯಾಸ ಮುಗಿಸಿಕೊಂಡು ಸ್ಕೂಟರ್ ಏರಿ ಶಾಲೆಗೆ ತೆರಳುತ್ತಿರುವಾಗ ಯಮನಂತೆ ಬಂದ ಕಾರು ಡಿಕ್ಕಿ ಹೊಡೆಯಿತು. ಗ್ರಹಚಾರವೆಂದರೆ, ಅವಸರದ ತರುಣಿಯೊಬ್ಬಳು ರಸ್ತೆಯ ಬದಲು ಪಾರ್ಕಿಂಗ್ ಜಾಗದಲ್ಲಿ ಕಾರು ಓಡಿಸಿಕೊಂಡು ಬಂದು ಏಕಾಏಕಿ ರಸ್ತೆಗೆ ನುಗ್ಗಿದ್ದಳು. ಆ ಹುಡುಗಿಯ ಪ್ರಮಾದದಿಂದ ನಟಾಲಿ ಎಡಗಾಲು ಕಳೆದುಕೊಂಡಿದ್ದರು.
ವಿಧಿಯೆಂದರೆ ಹಾಗೆ, ನಟಾಲಿಗೆ ಆ ದಿನ ಶಾಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆಯಿತ್ತು. ಆದರೆ, ಆಕೆ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಪ್ರಿಟೋರಿಯಾದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಆ ಹುಡುಗಿ ಹಿಂದಿನ ದಿನವಷ್ಟೇ 18 ಗಂಟೆಗಳ ಬಸ್ ಪ್ರಯಾಣ ಮುಗಿಸಿ ಕೇಪ್ಟೌನ್ನ ತಮ್ಮ ಮನೆಗೆ ಮರಳಿದ್ದರು. ಬಂದ ಮೇಲೆ ಆಯಾಸ. ಮಾರನೇ ದಿನ ಬೆಳಗ್ಗೆ 5 ಗಂಟೆಗೆಲ್ಲಾ ಈಜು ಅಭ್ಯಾಸಕ್ಕೆ ತೆರಳಬೇಕಿತ್ತು. ಅರೆಬರೆ ನಿದ್ರೆ, ಪ್ರಯಾಣದ ಆಯಾಸ, ಪರೀಕ್ಷೆಯ ಚಿಂತೆ. ಇವೆಲ್ಲದರ ನಡುವೆ ಈಜು ಅಭ್ಯಾಸ ಬೇರೆ. ಹಾಗಾಗಿ ನಾಳೆ ಅಭ್ಯಾಸಕ್ಕೆ ಹೋಗುವುದಿಲ್ಲ ಎಂದು ಅಮ್ಮನ ಬಳಿ ಹೇಳಿದ್ದರು. ಆದರೆ, ರಾತ್ರಿ ಮಲಗುವ ಹೊತ್ತಿಗೆ ನಿರ್ಧಾರ ಬದಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಈಜುಕೊಳಕ್ಕೆ ತೆರಳಿದ್ದಳು. 6 ಗಂಟೆಯಿಂದ 7 ಗಂಟೆವರೆಗೆ ಅಭ್ಯಾಸ ನಡೆಸಿ ಸ್ಕೂಟರ್ ಏರಿ ಶಾಲೆಗೆ ತೆರಳುವ ಹಾದಿಯಲ್ಲಿ ಅಪಘಾತವಾಗಿತ್ತು. ಅಂದು 2001ರ ಫೆಬ್ರವರಿ 26, ಸೋಮವಾರ.
ಅಪಘಾತವಾದ ರಭಸಕ್ಕೆ ತನ್ನ ಎಡಗಾಲು ಹೋಯಿತೆಂಬ ಸತ್ಯ ನಟಾಲಿಗೆ ಗೊತ್ತಾಗಿತ್ತು. ಆದರೂ, ಆ ಸಂದರ್ಭದಲ್ಲಿ ಆಕೆಗೆ ತನಗಿಂತ ಅಮ್ಮ ಹೇಗೆ ಸಹಿಸಿಕೊಂಡಾಳು ಎಂಬ ಚಿಂತೆ ಕಾಡುತ್ತಿತ್ತು. ಅಪಘಾತ ಸ್ಥಳಕ್ಕೆ ಬಂದ ಅಮ್ಮನಿಗೆ ತನ್ನ ಕಾಲು ತೋರಿಸಲು ಆಕೆ ನಿರಾಕರಿಸಿದರು. ಅಪಘಾತವಾದ ನಾಲ್ಕು ದಿನಗಳಲ್ಲಿ ಅಂದರೆ ಶುಕ್ರವಾರ ನಟಾಲಿಯ ಎಡಗಾಲು ಕತ್ತರಿಸಲಾಯಿತು. ಶನಿವಾರ ಆಕೆಗೆ ವಿಷಯ ತಿಳಿಸಲಾಯಿತು. ಭಾನುವಾರವೆಲ್ಲಾ ನಟಾಲಿ ಊರುಗೋಲು ಹಾಗೂ ವೈದ್ಯರ ಸಹಾಯದಿಂದ ನಡೆಯಲು ಯತ್ನಿಸುತ್ತಿದ್ದರು.
ಅದೊಂದು ರೀತಿ ವಿಧಿಯ ವಿರುದ್ಧದ ಹೋರಾಟ. ದೈವವೊಂದು ಬಗೆದರೆ ತಾನೊಂದು ಬಗೆಯುತ್ತೇನೆಂಬ ಛಲ. ಈಜಬೇಕು ಈಜಿ ಜೈಸಬೇಕು ಎಂಬುದು ನಟಾಲಿ ತಲೆಯಲ್ಲಿ ಅಚ್ಚೊತ್ತಿತ್ತು. ಬದುಕಿನಲ್ಲಿ ಈಜುವುದಕ್ಕಿಂತ ಈಜುಕೊಳದಲ್ಲಿ ಕಷ್ಟವೇನಲ್ಲ ಎಂದು ಆಕೆಗೆ ಹೊಳೆದಿತ್ತು. ಅಪಘಾತವಾದ ಮೂರೇ ತಿಂಗಳಲ್ಲಿ ಆಕೆ ಈಜುಕೊಳದಲ್ಲಿದ್ದರು!
ಈ ಹೊತ್ತಿಗೆ ಕೃತಕ ಕಾಲಿನ ನೆರವಿನಿಂದ ಎಲ್ಲರಂತೆ ಸಹಜವಾಗಿ ನಡೆದಾಡಲು ಕಲಿತಿದ್ದ ಛಲಗಾರ್ತಿ ನಟಾಲಿ, ಈಜುಕೊಳದಲ್ಲಿ ಕಾಲು ಕಳಚಿಟ್ಟು ಒಂದೇ ಕಾಲು, ಎರಡು ಕೈಗಳ ನೆರವಿನಿಂದ ಈಜುತ್ತಿದ್ದರು. ಜಗತ್ತು ಏನೇ ಹೇಳಲಿ, ತಾವು ಅಂಗವಿಕಲೆ ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಿರಲಿಲ್ಲ. ಹಾಗೆಂದೇ ಅವರು ಸಹಜ ಈಜುಗಾರ್ತಿಯರ ಜೊತೆಯಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರೊಂದಿಗೇ ಸ್ಪರ್ಧಿಸುತ್ತಿದ್ದರು.
ಅಪಘಾತವಾದ ಒಂದೇ ವರ್ಷದಲ್ಲಿ ನಟಾಲಿ ಮ್ಯಾಂಚೆಸ್ಟರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2002) ದಕ್ಷಿಣ ಆಫ್ರಿಕಾವನ್ನು ಪ್ರತಿನಿಸಿದ್ದರು. ಆಗ ಆಕೆಗೆ 18 ವರ್ಷ.
ಮ್ಯಾಂಚೆಸ್ಟರ್ನಲ್ಲಿ ನಟಾಲಿ ವಿಕಲಾಂಗರ 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಮಾತ್ರವಲ್ಲ, ಮುಖ್ಯ ಕ್ರೀಡಾಕೂಟದ 800 ಮೀ. ಫ್ರೀಸ್ಟೈಲ್ ಈಜಿನ ಫೈನಲ್ಗೆ ಅರ್ಹತೆ ಪಡೆದರು. ವಿಕಲಾಂಗ ಈಜುಗಾರ್ತಿಯೊಬ್ಬರು ದೈಹಿಕವಾಗಿ ಸಬಲರಾದ ಈಜುಪಟುಗಳೊಂದಿಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯೊಂದರ ಫೈನಲ್ನಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿಯಾಗಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದ ಸರ್ವ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡಿಕ್ಸನ್ ಪ್ರಶಸ್ತಿ ಆ ಬಾರಿ ನಟಾಲಿಗೇ ಲಭಿಸಿತು.
ಅದಾದ ನಂತರ ಅಥೆನ್ಸ್ (2004) ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ನಟಾಲಿ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ. ಮುಕ್ತ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ವಿಜೇತರಿಗಿಂತ ಕೇವಲ 5.1 ಸೆಕೆಂಡ್ ಹಿಂದುಳಿದು 5ನೇ ಸ್ಥಾನ ಪಡೆದಿದ್ದರು. ಬೀಜಿಂಗ್ನಲ್ಲಿ ಅವರು 16ನೇ ಸ್ಥಾನ ಪಡೆದರು.
ಲಂಡನ್ ಒಲಿಂಪಿಕ್ಸ್ ಬಳಿಕ ಈಜುಕೊಳದಿಂದ ನಿವೃತ್ತರಾಗುವ ಬಯಕೆ ಹೊಂದಿರುವ ನಟಾಲಿ ದೆಹಲಿಯಲ್ಲಿ ಕೊನೆಯ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೂಟದಲ್ಲಿ 3 ಚಿನ್ನದ ಪದಕ ಗೆದ್ದಿರುವುದು ಅವರ ಸಾಧನೆ. ಬಂಗಾರದ ಹ್ಯಾಟ್ರಿಕ್ನೊಂದಿಗೆ ಕಾಮನ್ವೆಲ್ತ್ ಕೂಟಗಳಿಗೆ ವಿದಾಯ ಹೇಳಿರುವ 27 ವರ್ಷದ ನಟಾಲಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಲು ಬಯಸಿದ್ದಾರೆ.
ಅಂಗವೈಕಲ್ಯ ಶಾಪವಲ್ಲ ಎಂದು ತಮ್ಮದೇ ಉದಾಹರಣೆ ನೀಡುವ ನಟಾಲಿ ಶೈಕ್ಷಣಿಕವಾಗಿ ವಿಜ್ಞಾನ ಪದವೀಧರೆಯೂ ಹೌದು. ಬಿಡುವಿನ ವೇಳೆಯಲ್ಲಿ ಅವರು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಾರೆ.
ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.ಜೀವನವೊಂದು ಹೋರಾಟ.
ಅಲ್ಲಿ ನಿತ್ಯ ಹೊಸ ಹೊಸ ಸವಾಲುಗಳು.
ಒಂದಕ್ಕಿಂತ ಇನ್ನೊಂದು ಭಿನ್ನ.
ಅನಿಶ್ಚಿತವಾದ ಜೀವನದಲ್ಲಿ ಇಂದಿಗೂ ನಾಳೆಗೂ ಅಜಗಜಾಂತರ ವ್ಯತ್ಯಾಸ.
ಬೆಳೆಯುವ ಪೈರನ್ನು ಮೊಳಕೆಯಲ್ಲಿ ಗುರುತಿಸಬಹುದು. ಆದರೆ, ನಾಳೆ ಆಗುವುದನ್ನು ಇಂದೇ ಹೇಳಲು ಸಾಧ್ಯವಿಲ್ಲ.
ನಟಾಲಿ ಡು ಟಾಯ್ಟ ವಿಚಾರದಲ್ಲೂ ಹಾಗೆಯೇ ಆಯಿತು.
ಸರಿಯಾಗಿ ಒಂಬತ್ತು ವರ್ಷ ಹಿಂದೆ. ಫೆಬ್ರವರಿ ತಿಂಗಳ ಒಂದು ಸೋಮವಾರ ರಸ್ತೆ ಅಪಘಾತದಲ್ಲಿ ಆಕೆ ಕಾಲನ್ನೇ ಕಳೆದುಕೊಂಡರು!
ಕೌಲಾಲಂಪುರದಲ್ಲಿ ನಡೆದ 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಗಿನ್ನೂ 14 ವರ್ಷದ ನಟಾಲಿ ದೊಡ್ಡ ಸೆನ್ಸೇಶನ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಈ ಮಿಂಚಿನ ಬಳ್ಳಿ ಈಜುಕೊಳದಲ್ಲಿ ಭವಿಷ್ಯದ ವಿಶ್ವತಾರೆ ಎಂದೇ ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅಂಥ ಪ್ರತಿಭಾವಂತೆ ಆಕೆ. ವಯಸ್ಸಿಗೆ ಮೀರಿದ ಸಾಮರ್ಥ್ಯ. ಈಜುಕೊಳಕ್ಕೆ ಧುಮುಕಿದರೆ ಪದಕ ಗೆಲ್ಲದೆ ಮೇಲೇಳುತ್ತಿರಲಿಲ್ಲ.
ಆದರೆ, ದುರ್ವಿಧಿ ಕಾರಿನ ರೂಪದಲ್ಲಿ ಆಕೆಗೆ ಬಡಿಯಿತು. ನಟಾಲಿ ಈಜು ಅಭ್ಯಾಸ ಮುಗಿಸಿಕೊಂಡು ಸ್ಕೂಟರ್ ಏರಿ ಶಾಲೆಗೆ ತೆರಳುತ್ತಿರುವಾಗ ಯಮನಂತೆ ಬಂದ ಕಾರು ಡಿಕ್ಕಿ ಹೊಡೆಯಿತು. ಗ್ರಹಚಾರವೆಂದರೆ, ಅವಸರದ ತರುಣಿಯೊಬ್ಬಳು ರಸ್ತೆಯ ಬದಲು ಪಾರ್ಕಿಂಗ್ ಜಾಗದಲ್ಲಿ ಕಾರು ಓಡಿಸಿಕೊಂಡು ಬಂದು ಏಕಾಏಕಿ ರಸ್ತೆಗೆ ನುಗ್ಗಿದ್ದಳು. ಆ ಹುಡುಗಿಯ ಪ್ರಮಾದದಿಂದ ನಟಾಲಿ ಎಡಗಾಲು ಕಳೆದುಕೊಂಡಿದ್ದರು.
ವಿಧಿಯೆಂದರೆ ಹಾಗೆ, ನಟಾಲಿಗೆ ಆ ದಿನ ಶಾಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆಯಿತ್ತು. ಆದರೆ, ಆಕೆ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಪ್ರಿಟೋರಿಯಾದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಆ ಹುಡುಗಿ ಹಿಂದಿನ ದಿನವಷ್ಟೇ 18 ಗಂಟೆಗಳ ಬಸ್ ಪ್ರಯಾಣ ಮುಗಿಸಿ ಕೇಪ್ಟೌನ್ನ ತಮ್ಮ ಮನೆಗೆ ಮರಳಿದ್ದರು. ಬಂದ ಮೇಲೆ ಆಯಾಸ. ಮಾರನೇ ದಿನ ಬೆಳಗ್ಗೆ 5 ಗಂಟೆಗೆಲ್ಲಾ ಈಜು ಅಭ್ಯಾಸಕ್ಕೆ ತೆರಳಬೇಕಿತ್ತು. ಅರೆಬರೆ ನಿದ್ರೆ, ಪ್ರಯಾಣದ ಆಯಾಸ, ಪರೀಕ್ಷೆಯ ಚಿಂತೆ. ಇವೆಲ್ಲದರ ನಡುವೆ ಈಜು ಅಭ್ಯಾಸ ಬೇರೆ. ಹಾಗಾಗಿ ನಾಳೆ ಅಭ್ಯಾಸಕ್ಕೆ ಹೋಗುವುದಿಲ್ಲ ಎಂದು ಅಮ್ಮನ ಬಳಿ ಹೇಳಿದ್ದರು. ಆದರೆ, ರಾತ್ರಿ ಮಲಗುವ ಹೊತ್ತಿಗೆ ನಿರ್ಧಾರ ಬದಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಈಜುಕೊಳಕ್ಕೆ ತೆರಳಿದ್ದಳು. 6 ಗಂಟೆಯಿಂದ 7 ಗಂಟೆವರೆಗೆ ಅಭ್ಯಾಸ ನಡೆಸಿ ಸ್ಕೂಟರ್ ಏರಿ ಶಾಲೆಗೆ ತೆರಳುವ ಹಾದಿಯಲ್ಲಿ ಅಪಘಾತವಾಗಿತ್ತು. ಅಂದು 2001ರ ಫೆಬ್ರವರಿ 26, ಸೋಮವಾರ.
ಅಪಘಾತವಾದ ರಭಸಕ್ಕೆ ತನ್ನ ಎಡಗಾಲು ಹೋಯಿತೆಂಬ ಸತ್ಯ ನಟಾಲಿಗೆ ಗೊತ್ತಾಗಿತ್ತು. ಆದರೂ, ಆ ಸಂದರ್ಭದಲ್ಲಿ ಆಕೆಗೆ ತನಗಿಂತ ಅಮ್ಮ ಹೇಗೆ ಸಹಿಸಿಕೊಂಡಾಳು ಎಂಬ ಚಿಂತೆ ಕಾಡುತ್ತಿತ್ತು. ಅಪಘಾತ ಸ್ಥಳಕ್ಕೆ ಬಂದ ಅಮ್ಮನಿಗೆ ತನ್ನ ಕಾಲು ತೋರಿಸಲು ಆಕೆ ನಿರಾಕರಿಸಿದರು. ಅಪಘಾತವಾದ ನಾಲ್ಕು ದಿನಗಳಲ್ಲಿ ಅಂದರೆ ಶುಕ್ರವಾರ ನಟಾಲಿಯ ಎಡಗಾಲು ಕತ್ತರಿಸಲಾಯಿತು. ಶನಿವಾರ ಆಕೆಗೆ ವಿಷಯ ತಿಳಿಸಲಾಯಿತು. ಭಾನುವಾರವೆಲ್ಲಾ ನಟಾಲಿ ಊರುಗೋಲು ಹಾಗೂ ವೈದ್ಯರ ಸಹಾಯದಿಂದ ನಡೆಯಲು ಯತ್ನಿಸುತ್ತಿದ್ದರು.
ಅದೊಂದು ರೀತಿ ವಿಧಿಯ ವಿರುದ್ಧದ ಹೋರಾಟ. ದೈವವೊಂದು ಬಗೆದರೆ ತಾನೊಂದು ಬಗೆಯುತ್ತೇನೆಂಬ ಛಲ. ಈಜಬೇಕು ಈಜಿ ಜೈಸಬೇಕು ಎಂಬುದು ನಟಾಲಿ ತಲೆಯಲ್ಲಿ ಅಚ್ಚೊತ್ತಿತ್ತು. ಬದುಕಿನಲ್ಲಿ ಈಜುವುದಕ್ಕಿಂತ ಈಜುಕೊಳದಲ್ಲಿ ಕಷ್ಟವೇನಲ್ಲ ಎಂದು ಆಕೆಗೆ ಹೊಳೆದಿತ್ತು. ಅಪಘಾತವಾದ ಮೂರೇ ತಿಂಗಳಲ್ಲಿ ಆಕೆ ಈಜುಕೊಳದಲ್ಲಿದ್ದರು!
ಈ ಹೊತ್ತಿಗೆ ಕೃತಕ ಕಾಲಿನ ನೆರವಿನಿಂದ ಎಲ್ಲರಂತೆ ಸಹಜವಾಗಿ ನಡೆದಾಡಲು ಕಲಿತಿದ್ದ ಛಲಗಾರ್ತಿ ನಟಾಲಿ, ಈಜುಕೊಳದಲ್ಲಿ ಕಾಲು ಕಳಚಿಟ್ಟು ಒಂದೇ ಕಾಲು, ಎರಡು ಕೈಗಳ ನೆರವಿನಿಂದ ಈಜುತ್ತಿದ್ದರು. ಜಗತ್ತು ಏನೇ ಹೇಳಲಿ, ತಾವು ಅಂಗವಿಕಲೆ ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಿರಲಿಲ್ಲ. ಹಾಗೆಂದೇ ಅವರು ಸಹಜ ಈಜುಗಾರ್ತಿಯರ ಜೊತೆಯಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರೊಂದಿಗೇ ಸ್ಪರ್ಧಿಸುತ್ತಿದ್ದರು.
ಅಪಘಾತವಾದ ಒಂದೇ ವರ್ಷದಲ್ಲಿ ನಟಾಲಿ ಮ್ಯಾಂಚೆಸ್ಟರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2002) ದಕ್ಷಿಣ ಆಫ್ರಿಕಾವನ್ನು ಪ್ರತಿನಿಸಿದ್ದರು. ಆಗ ಆಕೆಗೆ 18 ವರ್ಷ.
ಮ್ಯಾಂಚೆಸ್ಟರ್ನಲ್ಲಿ ನಟಾಲಿ ವಿಕಲಾಂಗರ 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಮಾತ್ರವಲ್ಲ, ಮುಖ್ಯ ಕ್ರೀಡಾಕೂಟದ 800 ಮೀ. ಫ್ರೀಸ್ಟೈಲ್ ಈಜಿನ ಫೈನಲ್ಗೆ ಅರ್ಹತೆ ಪಡೆದರು. ವಿಕಲಾಂಗ ಈಜುಗಾರ್ತಿಯೊಬ್ಬರು ದೈಹಿಕವಾಗಿ ಸಬಲರಾದ ಈಜುಪಟುಗಳೊಂದಿಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯೊಂದರ ಫೈನಲ್ನಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿಯಾಗಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದ ಸರ್ವ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡಿಕ್ಸನ್ ಪ್ರಶಸ್ತಿ ಆ ಬಾರಿ ನಟಾಲಿಗೇ ಲಭಿಸಿತು.
ಅದಾದ ನಂತರ ಅಥೆನ್ಸ್ (2004) ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ನಟಾಲಿ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ. ಮುಕ್ತ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ವಿಜೇತರಿಗಿಂತ ಕೇವಲ 5.1 ಸೆಕೆಂಡ್ ಹಿಂದುಳಿದು 5ನೇ ಸ್ಥಾನ ಪಡೆದಿದ್ದರು. ಬೀಜಿಂಗ್ನಲ್ಲಿ ಅವರು 16ನೇ ಸ್ಥಾನ ಪಡೆದರು.
ಲಂಡನ್ ಒಲಿಂಪಿಕ್ಸ್ ಬಳಿಕ ಈಜುಕೊಳದಿಂದ ನಿವೃತ್ತರಾಗುವ ಬಯಕೆ ಹೊಂದಿರುವ ನಟಾಲಿ ದೆಹಲಿಯಲ್ಲಿ ಕೊನೆಯ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೂಟದಲ್ಲಿ 3 ಚಿನ್ನದ ಪದಕ ಗೆದ್ದಿರುವುದು ಅವರ ಸಾಧನೆ. ಬಂಗಾರದ ಹ್ಯಾಟ್ರಿಕ್ನೊಂದಿಗೆ ಕಾಮನ್ವೆಲ್ತ್ ಕೂಟಗಳಿಗೆ ವಿದಾಯ ಹೇಳಿರುವ 27 ವರ್ಷದ ನಟಾಲಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಲು ಬಯಸಿದ್ದಾರೆ.
ಅಂಗವೈಕಲ್ಯ ಶಾಪವಲ್ಲ ಎಂದು ತಮ್ಮದೇ ಉದಾಹರಣೆ ನೀಡುವ ನಟಾಲಿ ಶೈಕ್ಷಣಿಕವಾಗಿ ವಿಜ್ಞಾನ ಪದವೀಧರೆಯೂ ಹೌದು. ಬಿಡುವಿನ ವೇಳೆಯಲ್ಲಿ ಅವರು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಾರೆ.
ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.