<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2998842447029730227</id><updated>2011-11-28T05:27:54.266+05:30</updated><category term='ಸತ್ಯ ಅಶ್ವತ್ಥಾಮ'/><title type='text'>ragaakshara</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://ragaakshara.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2998842447029730227/posts/default?max-results=100'/><link rel='alternate' type='text/html' href='http://ragaakshara.blogspot.com/'/><link rel='hub' href='http://pubsubhubbub.appspot.com/'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><generator version='7.00' uri='http://www.blogger.com'>Blogger</generator><openSearch:totalResults>77</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2998842447029730227.post-5464981683203733535</id><published>2011-09-02T16:21:00.003+05:30</published><updated>2011-09-02T17:28:37.292+05:30</updated><title type='text'>ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-BotuoSo3jnQ/TmDE5AkHgpI/AAAAAAAAATk/YyLd53tiLQE/s1600/rahul_dravid.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://2.bp.blogspot.com/-BotuoSo3jnQ/TmDE5AkHgpI/AAAAAAAAATk/YyLd53tiLQE/s400/rahul_dravid.jpg" border="0" alt=""id="BLOGGER_PHOTO_ID_5647730416405676690" /&gt;&lt;/a&gt;&lt;br /&gt;ಶ್ರೇಷ್ಠತೆಗೆ ದೇಶ-ಕಾಲ-ಸಂದರ್ಭವೆಂಬುದಿಲ್ಲ.&lt;br /&gt;ಶ್ರೇಷ್ಠರಿಗೂ ಅಷ್ಟೇ.&lt;br /&gt;ಶ್ರೇಷ್ಠರು ಯಾವಾಗಲೂ ಶ್ರೇಷ್ಠರೇ.&lt;br /&gt;ಇಂಗ್ಲೆಂಡ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಿರೂಪಿಸಿದ್ದೂ ಅದನ್ನೇ.&lt;br /&gt;ಅದು ಅವರ ವೃತ್ತಿಜೀವನದ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.&lt;br /&gt;ಅದು ಭಾರತದ ಪರ ಅವರ ಪಾಲಿಗೆ ಕೊನೆಯ ಟಿ20 ಪಂದ್ಯವೂ ಆಗಿತ್ತು.&lt;br /&gt;ಭಾರತದ ಪರ 1996ರಲ್ಲಿ ಟೆಸ್ಟ್ ಪದಾರ್ಪಣೆಗೈದ 15 ವರ್ಷದ ಬಳಿಕ ದ್ರಾವಿಡ್ ಈ ವಿಶೇಷ ಪಂದ್ಯವನ್ನು ಆಡಿದ್ದರು.&lt;br /&gt;ಹಾಗೆ ನೋಡಿದರೆ, ಟಿ20 ಮಾದರಿ ರಾಹುಲ್ ಗೆ ಅಪರಿಚಿತವೇನೂ ಆಗಿರಲಿಲ್ಲ.&lt;br /&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ವರ್ಷ ಹಾಗೂ ರಾಜಸ್ಥಾನ ರಾಯಲ್ಸ್ ಪರ  ಒಂದು ವರ್ಷ ಐಪಿಎಲ್ ಆಡಿರುವ ದ್ರಾವಿಡ್ ಕ್ರಿಕೆಟ್ ನ ಕಿರು ಮಾದರಿಗೆ ಹೊಸಬರೇನೂ ಆಗಿರಲಿಲ್ಲ. ಅಲ್ಲದೆ ಅವರು ನಿರೂಪಿಸುವಂಥದ್ದೂ ಏನೂ ಇರಲಿಲ್ಲ.&lt;br /&gt;ಬದಲಿಗೆ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆ ಸ್ವತಃ ಭಾರತ ತಂಡದಿಂದ ಹೊರಗುಳಿದಿದ್ದ ಅವರು ಮುಂದೆ ಆಡುವಂಥ ಪ್ರಮೇಯ ಒದಗಿಬಂದಿರಲಿಲ್ಲ.&lt;br /&gt;2009ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ಹೊರಗುಳಿಯುವುದರೊಂದಿಗೆ ದ್ರಾವಿಡ್ ಟಿ20 ಕ್ರಿಕೆಟ್ ಗೆ ಭಾರತ ತಂಡಕ್ಕೆ ಪರಿಗಣನೆಯಲ್ಲಿರಲೇ ಇಲ್ಲ.&lt;br /&gt;ಆದರೆ, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ದ್ರಾವಿಡ್ ಟಿ20 ತಂಡದಲ್ಲೂ ಆಡುವಂಥ ಪ್ರಸಂಗ ಎದುರಾಯಿತು. ಟೆಸ್ಟ್ ಸರಣಿಯಲ್ಲಾದಂತೆ ಈ ಪಂದ್ಯದಲ್ಲೂ ಭಾರತದ ಬ್ಯಾಟ್ಸ್ ಮನ್ ಗಳು ದಯನೀಯ ವೈಫಲ್ಯ  ಅನುಭವಿಸಿದ್ದರಿಂದ ಭಾರತ ಈ ಪಂದ್ಯವನ್ನು ಸೋಲಬೇಕಾಯಿತು. ಆದರೆ, ದ್ರಾವಿಡ್ ತಮ್ಮ ಚಿಕ್ಕ ಚೊಕ್ಕ ಆಟದ ಮೂಲಕ ಹೃದಯವನ್ನಂತೂ ಗೆದ್ದರು.&lt;br /&gt;ದ್ರಾವಿಡ್ ಆರಂಭದಲ್ಲಿ 14 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಹಿರಿಯ ಆಟಗಾರನಿಗೆ ಕಿರಿ ಮಾದರಿಯ ಅಗ್ನಿಪರೀಕ್ಷೆ ಇದೆನಿಸಿತ್ತು. ಆದರೆ,ಮುಂದಿನ ಐದೇ ಎಸೆತಗಳಲ್ಲಿ ಚಿತ್ರಣವೇ ಬದಲಾಗಿತ್ತು. ಸಮಿತ್ ಪಟೇಲ್ ರ ಒಂದೇ ಓವರ್ ನಲ್ಲಿ ಸತತ 3 ಸಿಕ್ಸರ್ ಸಹಿತ ದ್ರಾವಿಡ್ 21 ರನ್ ಬಾಚಿದ್ದರು (ಇನ್ನೊಂದು ರನ್ ರಹಾನೆ ಹೊಡೆದರು. ಆ ಓವರ್ ನಲ್ಲಿ ಒಟ್ಟು 22 ರನ್). ದ್ರಾವಿಡ್ ಸತತ 3 ಸಿಕ್ಸರ್ ಚಚ್ಚುತ್ತಿರುವಾಗಲಂತೂ ನಂಬಲಾಗದಂಥ  ಅನುಭವ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ 2ನೇ ಅತ್ಯಂತ ವೇಗದ ಅರ್ಧ ಶತಕ ಬಾರಿಸಿದ್ದರೂ ರಕ್ಷಣಾತ್ಮಕ ಬ್ಯಾಟ್ಸ್ ಮನ್ ಆಗಿಯೇ ವರ್ಚಸ್ಸು ಬೆಳೆಸಿಕೊಂಡಿರುವ ದ್ರಾವಿಡ್, ವೃತ್ತಿಜೀವನದಲ್ಲಿ ಸತತ 3 ಸಿಕ್ಸರ್ ಬಾರಿಸಿದ್ದು ಬಹುಶಃ ಇದೇ ಮೊದಲ ಬಾರಿ ಇರಬೇಕು. ಆದರೆ, ಆ ಮೂರು ಎಸೆತಗಳಲ್ಲಿ ತಾವು ಕೇವಲ ಟೆಸ್ಟ್ ಅಥವಾ ಏಕದಿನಗಳಿಗೆ ಮಾತ್ರ ಸಲ್ಲುವವರಲ್ಲ. ಟಿ20 ಮಾದರಿಯಲ್ಲೂ ಸಲ್ಲುತ್ತೇನೆ ಎಂದು ನಿರೂಪಿಸಿಬಿಟ್ಟರು. ತಂಡದ ಬ್ಯಾಟ್ಸ್ ಮನ್ ಗಳು ಪೂರ್ಣ 20 ಓವರ್ ಸಹ  ಆಡುವುದು ಸಾಧ್ಯವಾಗದೆ ಆಲೌಟ್ ಆದರೂ ತಂಡ 165 ರನ್ ಗಳಿಸಿದ್ದರೆ ಅದರಲ್ಲಿ ದ್ರಾವಿಡ್ 3 ಎಸೆತದಲ್ಲಿ ಗಳಿಸಿದ 18 ರನ್ ಗಳ ಪಾತ್ರ ದೊಡ್ಡದು. ಅದಿಲ್ಲವಾದರೆ ಭಾರತದ ಮೊತ್ತ 140-142  ಆಗಿರುತ್ತಿತ್ತೇನೋ.&lt;br /&gt;ಟಿ20 ಕ್ರಿಕೆಟ್ ಎಂದರೆ ತಾಂತ್ರಿಕತೆಯ ಬಗ್ಗೆ ಯೋಚಿಸದೆ ಮೊದಲ ಎಸೆತದಿಂದಲೇ ಹೊಡೆ-ಬಡಿ ಆಟಕ್ಕಿಳಿಯುವುದೇನೋ ಸರಿಯೇ. ಆದರೆ, ಇಲ್ಲಿಯೂ ಪ್ರಾರಂಭದಲ್ಲಿ ಕೆಲವು ಎಸೆತ ಎಚ್ಚರಿಕೆಯಿಂದ  ಆಡಿದ ಮೇಲೂ ನಂತರ ಆ ಕೊರತೆ ನೀಗಿಸಬಹುದು ಎಂದು ದ್ರಾವಿಡ್ 21 ಎಸೆತಗಳ 31 ರನ್ ಆಟದಿಂದ ನಿರೂಪಿಸಿದರು. ಒಟ್ಟಾರೆ ಮಾದರಿ ಆಟಗಾರ ದ್ರಾವಿಡ್ ರ ಅಂದಿನ ಆಟ ಮಾದರಿಯಾಗಿತ್ತು.&lt;br /&gt;ಭಾರತ ಸುಲಭವಾಗಿ 180-190 ರನ್ ಗಳಿಸಬಹುದಾಗಿದ್ದ ಇನಿಂಗ್ಸ್ ಅದಾಗಿತ್ತಾದರೂ ಇಂಗ್ಲೆಂಡ್ ನ ಪಿಚ್ ಎಂಬ ಗುಮ್ಮ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಮೊದಲಾದವರನ್ನು ಕಾಡಿದ್ದರಿಂದ ತಂಡ ಮುಗ್ಗರಿಸಿತು. ಭಾರತದ ಟಿ20 ಸ್ಕೀಮ್ ನಲ್ಲೇ ಇಲ್ಲದ ಅಜಿಂಕ್ಯ ರಹಾನೆ ಅನಿರೀಕ್ಷಿತವಾಗಿ ದೊರೆತ  ಅವಕಾಶ ಸಾರ್ಥಕ ಪಡಿಸಿಕೊಂಡಿದ್ದರಿಂದ ತಂಡ ಗೌರವಾನ್ವಿತ ಮೊತ್ತ ಪೇರಿಸುವುದು ಸಾಧ್ಯವಾಯಿತು. ಇಲ್ಲದಿದ್ದರೆ....&lt;br /&gt;ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯರ ಆಟದಷ್ಟೇ, ತಂಡದ ಆಯ್ಕೆಯೂ ಕಳಪೆ. ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡುವಾಗ ಭಾರತ ಪೂರ್ಣ ಸಾಮರ್ಥ್ಯದ ಟಿ20 ತಂಡವನ್ನೇ ಕಣಕ್ಕಿಳಿಸಬೇಕಿತ್ತು. ಅದಕ್ಕಾಗಿ ಒಂದಿಬ್ಬರು ಆಟಗಾರರನ್ನು ಈ ಪಂದ್ಯಕ್ಕೆಂದೇ ಇಂಗ್ಲೆಂಡ್ ಗೆ ಕರೆಸಿಕೊಂಡಿದ್ದರೆ ಅದರಿಂದ ಬಿಸಿಸಿಐ ಬೊಕ್ಕಸವೇನೂ ಬರಿದಾಗುತ್ತಿರಲಿಲ್ಲ. ಆದರೆ, ಟಿ20 ತಜ್ಞ ಆಟಗಾರರಾದ ಯೂಸುಫ್ ಪಠಾಣ್, ಅಂಬಟಿ ರಾಯುಡು, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಬದ್ರಿನಾಥ್ (ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮಾನದಂಡ), ಮೊದಲಾದವರು ದೇಶದಲ್ಲೇ ಉಳಿದರೆ, ಪಾರ್ಥಿವ್ ಪಟೇಲ್, ರಹಾನೆ ಮತ್ತು ದ್ರಾವಿಡ್ ಮೊದಲ 3 ಕ್ರಮಾಂಕದಲ್ಲಿ ಆಡಿದ್ದರು.&lt;br /&gt;ಹೋಗಲಿ, ಒಬ್ಬ ಆಟಗಾರ ಗಾಯಗೊಂಡಾಗ ಆತನಿಗೆ ಬದಲಿ ಆಯ್ಕೆ ಮಾಡುವುದಕ್ಕೂ ಒಂದು ರೀತಿ-ನೀತಿ ಬೇಡವೇ? ಆರಂಭಿಕ ಆಟಗಾರ ಗೌತಮ್ ಗಂಭೀರ್ ಬದಲಿಗೆ ಆಲ್ರೌಂಡರ್ (?) ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದು ಸರಿಯೇ? ಅಷ್ಟಕ್ಕೂ ಐಪಿಎಲ್ ನಂತರ ಮನೆಯಲ್ಲಿ ಕುಳಿತಿದ್ದ ಜಡೇಜಾ ಬದಲು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಉದಯೋನ್ಮುಖರ ಕ್ರಿಕೆಟ್ ಟೂರ್ನಿ ಆಡಿ ಬಂದಿದ್ದವರನ್ನೇ ಒಬ್ಬರನ್ನು ಕಳಿಸಬಹುದಿತ್ತು. ಆದರೆ, ಆರ್ ಪಿ ಸಿಂಗ್ ರನ್ನು ಇತ್ತೀಚೆಗೆ ಆಯ್ಕೆ ಮಾಡಿದ್ದಂತೆ ಜಡೇಜಾ ವಿಷಯದಲ್ಲೂ ಆಯ್ಕೆಗಾರರು ಕೋಟಾ ಪದ್ಧತಿ ಅನುಸರಿಸಿರಬಹುದು.&lt;br /&gt;ಸದ್ಯದಲ್ಲೇ ಕೆ. ಶ್ರೀಕಾಂತ್ ಬದಲು ಬೇರೊಬ್ಬರು ರಾಷ್ಟ್ರೀಯ ಮುಖ್ಯ ಆಯ್ಕೆಗಾರರಾಗಿ ನೇಮಕಗೊಳ್ಳಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಕಾಂತ್ ಮಾಡಿದ ಬ್ಲಂಡರ್ ಗಳಿಂದ ನೂತನ ಆಯ್ಕೆಗಾರರು ಪಾಠ ಕಲಿತಿದ್ದರೆ ಒಳಿತು.&lt;br /&gt;ಏಕೆಂದರೆ ಎಲ್ಲರಿಗೂ ಶ್ರೀಕಾಂತ್ ಗಿದ್ದಂತ ಅದೃಷ್ಟವಂತೂ ಇರುವುದಿಲ್ಲ....&lt;br /&gt;&lt;br /&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-5464981683203733535?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/5464981683203733535/comments/default' title='Post Comments'/><link rel='replies' type='text/html' href='http://ragaakshara.blogspot.com/2011/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/5464981683203733535'/><link rel='self' type='application/atom+xml' href='http://www.blogger.com/feeds/2998842447029730227/posts/default/5464981683203733535'/><link rel='alternate' type='text/html' href='http://ragaakshara.blogspot.com/2011/09/blog-post.html' title='ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-BotuoSo3jnQ/TmDE5AkHgpI/AAAAAAAAATk/YyLd53tiLQE/s72-c/rahul_dravid.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-4129223670753675820</id><published>2011-08-30T13:16:00.003+05:30</published><updated>2011-08-30T13:20:14.707+05:30</updated><title type='text'>ಒಂದೇ ಒಂದು ಸಾರಿ....</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-_Pp7e34ktUo/TlyWFuk44_I/AAAAAAAAATc/521xGdLFbuM/s1600/girl%2Bsmile.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 351px; height: 350px;" src="http://1.bp.blogspot.com/-_Pp7e34ktUo/TlyWFuk44_I/AAAAAAAAATc/521xGdLFbuM/s400/girl%2Bsmile.jpg" border="0" alt=""id="BLOGGER_PHOTO_ID_5646553057962025970" /&gt;&lt;/a&gt;&lt;br /&gt;&lt;br /&gt;&lt;br /&gt;ಒಂದಲ್ಲ ಒಂದು ದಿನ&lt;br /&gt;ಪ್ರತಿಯೊಬ್ಬರ ಜೀವನದಲ್ಲೂ&lt;br /&gt;ಏನಾದರೊಂದು ಸಂಕಷ್ಟ&lt;br /&gt;ಎದುರಾಗುವುದು ಖಚಿತ&lt;br /&gt;ಅದನ್ನು ನೀವು ಯಾವ ರೀತಿ&lt;br /&gt;ಎದುರಿಸುತ್ತೀರಿ ಎನ್ನುವುದು&lt;br /&gt;ನಿನ್ನ ಭವಿಷ್ಯದ ಸಂತೋಷ ಮತ್ತು ಯಶಸ್ಸನ್ನು&lt;br /&gt;ನಿರ್ಧರಿಸುತ್ತದೆ....&lt;br /&gt;&lt;br /&gt;ಅನಾದಿ ಕಾಲದಿಂದಲೂ&lt;br /&gt;ಎಲ್ಲರೂ&lt;br /&gt;ಇಂಥ ಸಂಕಷ್ಟಗಳ ಹಾದಿಯಲ್ಲೇ&lt;br /&gt;ಸಾಗಿ ಬಂದವರೇ...&lt;br /&gt;&lt;br /&gt;ಗಹನವಾಗಿ ನೋಡುವುದಾದರೆ&lt;br /&gt;ಇಂಥ ಸಂಕಷ್ಟದ ಪರಿಸ್ಥಿತಿಗಳು&lt;br /&gt;ಜೀವನದಲ್ಲಿ ಮುನ್ನಡೆಯುವುದಕ್ಕೆ&lt;br /&gt;ಅಥವಾ ಇದ್ದಲ್ಲಿಯೇ ಇರುವುದಕ್ಕೆ&lt;br /&gt;ಅವಕಾಶಗಳು...&lt;br /&gt;&lt;br /&gt;ಬದುಕಿನ ಬಹಳಷ್ಟು&lt;br /&gt;ಬದಲಾವಣೆಗಳು&lt;br /&gt;ಒಂದೋ ಸ್ಫೂರ್ತಿಯಿಂದ&lt;br /&gt;ಇಲ್ಲವೇ&lt;br /&gt;ಹತಾಶೆಯಿಂದ&lt;br /&gt;ಆಗಿರುತ್ತವೆ...&lt;br /&gt;&lt;br /&gt;ನಮ್ಮ ಹಾದಿಯಲ್ಲಿ ಏನೇ&lt;br /&gt;ಎದುರಾದರೂ&lt;br /&gt;ಅದಕ್ಕೊಂದು ಅರ್ಥ ತುಂಬಬೇಕು&lt;br /&gt;ಅರ್ಥಪೂರ್ಣವೆನಿಸುವಂತೆ&lt;br /&gt;ಮಾರ್ಪಡಿಸಬೇಕು....&lt;br /&gt;&lt;br /&gt;ವ್ಯಕ್ತಿಗತ ಬೆಳವಣಿಗೆ&lt;br /&gt;ಎನ್ನುವುದು &lt;br /&gt;ಬದಲಾವಣೆಗೆ ಸಕಾರಾತ್ಮಕವಾಗಿ&lt;br /&gt;ಸ್ಪಂದಿಸುವ&lt;br /&gt;ಪ್ರಕ್ರಿಯೆ...&lt;br /&gt;&lt;br /&gt;ಉಳಿಯ ಪೆಟ್ಟಿಗೆ ಸಿಲುಕದೆ&lt;br /&gt;ಕಲ್ಲು ಶಿಲ್ಪವಾಗುವುದಿಲ್ಲ&lt;br /&gt;ಎಡವಿದವನು ಮಾತ್ರ&lt;br /&gt;ಎದ್ದು ನಿಲ್ಲುತ್ತಾನೆ....&lt;br /&gt;(ಆಧಾರ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-4129223670753675820?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/4129223670753675820/comments/default' title='Post Comments'/><link rel='replies' type='text/html' href='http://ragaakshara.blogspot.com/2011/08/blog-post_30.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/4129223670753675820'/><link rel='self' type='application/atom+xml' href='http://www.blogger.com/feeds/2998842447029730227/posts/default/4129223670753675820'/><link rel='alternate' type='text/html' href='http://ragaakshara.blogspot.com/2011/08/blog-post_30.html' title='ಒಂದೇ ಒಂದು ಸಾರಿ....'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-_Pp7e34ktUo/TlyWFuk44_I/AAAAAAAAATc/521xGdLFbuM/s72-c/girl%2Bsmile.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-2863329047764017130</id><published>2011-08-26T14:24:00.001+05:30</published><updated>2011-08-26T14:24:50.021+05:30</updated><title type='text'>ನಿಧಾನ, ಸಮಾಧಾನ</title><content type='html'>ಸೋಲಿಗೂ, ಗೆಲುವಿಗೂ ಸಿದ್ಧ ಮಾದರಿ ಎಂಬುದಿರುವುದಿಲ್ಲ.&lt;br /&gt;ಗೆಲುವಿನ ಮೈಮರೆವು ಸೋಲಿಗೆ ದಾರಿಯಾಗಬಹುದು.&lt;br /&gt;ಸೋಲು ಮೂಡಿಸಿದ  ಅರಿವು ಗೆಲುವಿನತ್ತ ಕೊಂಡೊಯ್ಯಬಹುದು.&lt;br /&gt;ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ 0-4 ಅಂತರದಿಂದ ಸೋತಿದ್ದಾಗಿದೆ.&lt;br /&gt;ಇನ್ನು ಟಿ20 ಹಾಗೂ ಏಕದಿನ ಸರಣಿಗಳ ಸರದಿ.&lt;br /&gt;ಅಲ್ಲಿ ಸೋತ ಭಾರತ ಇಲ್ಲಿಯೂ ಸೋಲಲೇಬೇಕೆಂದೇನೂ ಇಲ್ಲ.&lt;br /&gt;ಭಾರತ ಗೆಲ್ಲುವುದು ಕಷ್ಟ, ಸೋತೇ ಹೋಗಲಿದೆ ಎಂಬ ಆತಂಕವೂ ಬೇಡ.&lt;br /&gt;ಏಕೆಂದರೆ ಭಾರತ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಇಂಗ್ಲೆಂಡ್ ತಂಡವೇ ಬೇರೆ.&lt;br /&gt;ಏಕದಿನ ಸರಣಿಯಲ್ಲಿ ಎದುರಾಗುವ ಇಂಗ್ಲೆಂಡ್ ತಂಡವೇ ಬೇರೆ.&lt;br /&gt;ಇತ್ತೀಚಿನ ವರ್ಷಗಳಲ್ಲಿ ಏಕದಿನ ಪಂದ್ಯಗಳು ಜಗತ್ತಿನ ಯಾವ ಮೂಲೆಯಲ್ಲಿ ನಡೆದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ. ತವರಿನ  ಅನುಕೂಲವೆಂಬ  ಅಂಶವೀಗ ಗೌಣವಾಗಿದೆ.&lt;br /&gt;ಭಾರತದ ವಿಷಯಕ್ಕೆ ಬಂದರೆ ಧೋನಿ ಬಳಗ ವಿಶ್ವ ಚಾಂಪಿಯನ್.  ಟೆಸ್ಟ್ ತಂಡದಲ್ಲಿ ಭಾರತದ ಯಶಸ್ಸಿಗೆ ಅನುಭವಿ ತ್ರಿವಳಿಗಳ ಆಟ ನಿರ್ಣಾಯಕವಾಗಿದ್ದರೆ, ಏಕದಿನಗಳಲ್ಲಿ ಭಾರತ  ಆ ಅವಲಂಬನೆಯಿಂದ ಯಾವಾಗಲೋ ಹೊರಗೆ ಬಂದಿದೆ.&lt;br /&gt;ವೀರೇಂದ್ರ ಸೆಹ್ವಾಗ್ ಗೈರು ದೊಡ್ಡ ಕೊರತೆಯೇ ಹೌದು. ಆದರೂ, ಏಕದಿನಗಳಲ್ಲಿ ಭಾರತದ ಸಾಮರ್ಥ್ಯ ಯಾವುದೇ ಒಬ್ಬ ಆಟಗಾರನಿಗೆ ಸೀಮಿತಗೊಂಡಿಲ್ಲ. ತೆಂಡುಲ್ಕರ್,  ಗಂಭೀರ್, ಕೊಹ್ಲಿ, ರೈನಾ, ರೋಹಿತ್, ಧೋನಿ ಇರುವ ಭಾರತ ತಂಡದೆದರು ಆತಂಕ ಪಡಬೇಕಿರುವುದು ಇಂಗ್ಲೆಂಡ್.&lt;br /&gt;ಒಂದು ಮುಖ್ಯ ವಿಷಯವೆಂದರೆ ಇಂಗ್ಲೆಂಡ್ ನ ಪರಮ ಆದ್ಯತೆ ಏಕದಿನ ಕ್ರಿಕೆಟ್ ಅಲ್ಲ.  ಅವರು ವಿಶ್ವಕಪ್ ಗೆದ್ದಿಲ್ಲ ಎಂಬ  ಅವಮಾನವನ್ನು ಆಶಸ್ ಗೆದ್ದಿದ್ದೇವೆ ಎಂಬ ಸಂಭ್ರಮದಲ್ಲೇ ಮರೆಯುವವರು.&lt;br /&gt;ಈ ವರ್ಷ  ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಆಶಸ್ ಸರಣಿ ಗೆದ್ದ ಮೇಲೆ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ 1-6 ಅಂತರದಿಂದ ಸೋತು ಹೋಯಿತು. ವಿಶ್ವಕಪ್ ನಲ್ಲೂ ಕ್ವಾರ್ಟರ್ ಫೈನಲ್ ಗಿಂತ ಮೇಲೆ ಬರಲಿಲ್ಲ.  ಆದರೆ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ.&lt;br /&gt;ಈಗಲೂ ಅಷ್ಟೇ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದರೆ ಅವರಿಗದು ಬೋನಸ್. ವಿಶ್ವ ಚಾಂಪಿಯನ್ನರ ವಿರುದ್ಧ ಗೆದ್ದೆವು ಎಂದು ಬೀಗುತ್ತಾರೆ. ಅದೇ ಸೋತರೆ, ಅವರಿಗೆ ಬೇಸರವೇನೂ ಇಲ್ಲ. ಟೆಸ್ಟ್ ಸರಣಿ ಗೆದ್ದು ವಿಶ್ವ ನಂ.1 ಆಗಿದ್ದೇವೆಲ್ಲಾ ಅದೇ ಯಥೇಚ್ಛ  ಎನ್ನುತ್ತಾರವರು.&lt;br /&gt;ಭಾರತಕ್ಕಿದು ಪ್ರತಿಷ್ಠೆಯ ಸರಣಿ. ತವರಿನಲ್ಲಿ ವಿಶ್ವಕಪ್ ಗೆದ್ದ ಮೇಲೆ ಭಾರತ ವಿಂಡೀಸ್ ನಲ್ಲಿ ಗೆದ್ದಿರಬಹುದು. ಆದರೆ, ಗಂಭೀರ ಸವಾಲು ಎದುರಾಗುತ್ತಿರುವುದು ಇಂಗ್ಲೆಂಡ್ ನಲ್ಲೇ. ಆದರೆ, ತಂಡ ಸೂಕ್ತ ಮನೋಸ್ಥಿತಿಯಿಂದ ಸರಣಿ ಪ್ರವೇಶಿಸುತ್ತಿದೆಯೇ?&lt;br /&gt;ಭಾರತ ಬಲಾಢ್ಯ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ, ಹೊಸ ಕೋಚ್ ಡಂಕನ್ ಫ್ಲೆಚರ್ ಒಡನಾಟ ಆಟಗಾರರಿಗಿನ್ನೂ ಹೊಸದು. ಅವರ ತರಬೇತಿ ವಿಧಾನಗಳು, ಅವರ ಮನೋಸ್ಥಿತಿ, ವಿಚಾರ ಲಹರಿ ಇವೆಲ್ಲವೂ ಇನ್ನೂ ಪೂರ್ತಿಯಾಗಿ ಅರ್ಥವಾಗಬೇಕು.&lt;br /&gt;ಇಂಗ್ಲೆಂಡ್ ಕೋಚ್ ಆಗಿದ್ದಾಗ ಫ್ಲೆಚರ್ ಯಾವತ್ತೂ ಏಕದಿನಗಳಿಗೆ ಮಹತ್ವ ನೀಡಿರಲಿಲ್ಲ. ಟೆಸ್ಟ್ ಸಾಧನೆಗಳ ಬಗ್ಗೆ ಮಾತ್ರ  ಅವರು ಗಮನ ಕೊಟ್ಟಿದ್ದರು. ಹಾಗೆಂದೇ ತಂಡ 50 ಓವರ್ ಮಾದರಿಯಲ್ಲಿ ಪ್ರಪಾತಕ್ಕೆ ಬಿದ್ದಿತ್ತು. ಅಂಥ ಫ್ಲೆಚರ್ ಕೈಗೆ ಈಗ ವಿಶ್ವ ಚಾಂಪಿಯನ್ ಭಾರತದ ಚುಕ್ಕಾಣಿ ದೊರೆತಿದೆ.&lt;br /&gt;ಫ್ಲೆಚರ್ ನೇಮಕಾತಿ ನಡೆದು ತಿಂಗಳುಗಳೇ ಕಳೆದುಹೋಗಿರುವುದರಿಂದ  ಅವರು ಈ ಹುದ್ದೆಗೆ ಸೂಕ್ತರೇ ಎಂದು ಈಗಲೂ ಚರ್ಚೆ ಮಾಡುವುದು ಸರಿಯಲ್ಲ. ಆದರೂ, ಟೆಸ್ಟ್ ಸರಣಿಯಲ್ಲಿ  ಫ್ಲೆಚರ್ ವಿಚಾರ ಶೂನ್ಯರಾಗಿದ್ದರು. ಇಂಗ್ಲೆಂಡ್ ನ ವ್ಯೂಹಗಳ  ಎದುರು ಇವರು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಏಕದಿನಗಳಲ್ಲಿ ಹಾಗಾಗದಿದ್ದರೆ ಸಾಕು.&lt;br /&gt;ಅಂದ ಹಾಗೆ ಆಯ್ಕೆಗಾರರು ರಾಹುಲ್ ದ್ರಾವಿಡ್ ಗೆ ಏಕದಿನಗಳಿಂದ ದೊಡ್ಡ ರೀತಿಯಲ್ಲಿ ವಿದಾಯ ಹೇಳಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿದಾಯ ಸರಣಿಗಾಗಿ ಸ್ವತಃ ದ್ರಾವಿಡ್ ಏನೂ ಕೋರಿರಲಿಲ್ಲ.  ಆದರೆ, ವಿಶ್ವ ಕಪ್ ಗೆ ನಿಮ್ಮ  ಅಗತ್ಯವಿಲ್ಲ ಎಂದಿದ್ದ  ಆಯ್ಕೆಗಾರರು ಇಂಗ್ಲೆಂಡ್ ನಲ್ಲಿ ಆಡಿ ಎಂದು ಆಹ್ವಾನ ನೀಡಿದ್ದು ದ್ರಾವಿಡ್ ರಂಥ ಮೇರು ಆಟಗಾರನಿಗೆ ಮಾಡಿದ  ಅವಮಾನ.  ಅದೇ ಕಾರಣಕ್ಕೆ ಅವರು ಏಕದಿನಗಳಿಂದ ವಿದಾಯ ಪ್ರಕಟಿಸಿದರು.  ಅದೇನೇ ಇರಲಿ. ಉತ್ತುಂಗ ಫಾರ್ಮ್ ನಲ್ಲಿರುವ ದ್ರಾವಿಡ್ ಈ ಸರಣಿ ಅವಿಸ್ಮರಣಿಯವಾಗಿಸಿಕೊಳ್ಳಲು ಯತ್ನಿಸಲಿದ್ದಾರೆ.&lt;br /&gt;ಟೆಸ್ಟ್ ತಂಡಕ್ಕೆ ಪರಿಗಣನೆಯಲ್ಲಿರಬೇಕಾದ ಅಜಿಂಕ್ಯ ರಹಾನೆ ಏಕದಿನ ತಂಡಕ್ಕೆ ಆಯ್ಕೆ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಹಾಲಿ ಸರಣಿಯಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ. ಗಂಭೀರ್, ತೆಂಡುಲ್ಕರ್, ದ್ರಾವಿಡ್, ಕೊಹ್ಲಿ, ರೈನಾ, ರೋಹಿತ್, ಧೋನಿ ಮಧ್ಯೆ ರಹಾನೆ ನುಸುಳುವುದು ಬಹಳ ಕಷ್ಟ.  ಆದರೂ, ಅವರು ಇಂದಲ್ಲ ನಾಳೆ ಭಾರತದ ಪರ  ಆಡಲೇಬೇಕಾದ  ಉತ್ತಮ ಆಟಗಾರ. &lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-2863329047764017130?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/2863329047764017130/comments/default' title='Post Comments'/><link rel='replies' type='text/html' href='http://ragaakshara.blogspot.com/2011/08/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/2863329047764017130'/><link rel='self' type='application/atom+xml' href='http://www.blogger.com/feeds/2998842447029730227/posts/default/2863329047764017130'/><link rel='alternate' type='text/html' href='http://ragaakshara.blogspot.com/2011/08/blog-post_26.html' title='ನಿಧಾನ, ಸಮಾಧಾನ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-6324056801567193324</id><published>2011-08-18T15:11:00.001+05:30</published><updated>2011-08-18T15:15:35.522+05:30</updated><title type='text'>ಗುರುತು</title><content type='html'>&lt;a href="http://2.bp.blogspot.com/-FX_lcu_Sz6s/TkzfLpKdP1I/AAAAAAAAAS0/LclpFx6_tgU/s1600/Footprints_on_the_Beach.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/-FX_lcu_Sz6s/TkzfLpKdP1I/AAAAAAAAAS0/LclpFx6_tgU/s400/Footprints_on_the_Beach.jpg" border="0" alt=""id="BLOGGER_PHOTO_ID_5642129824309657426" /&gt;&lt;/a&gt;&lt;br /&gt;&lt;br /&gt;&lt;br /&gt;ಹೆಜ್ಜೆಗಳನ್ನು ಅನುಸರಿಸಿ&lt;br /&gt;ಸಾಗುವುದಕ್ಕೇಕೆ ಲಜ್ಜೆ&lt;br /&gt;ಕನಸುಗಳ ಹಾದಿಯಲ್ಲಿ&lt;br /&gt;ಕಲ್ಪನೆಗಳ ಬೀದಿಯಲ್ಲಿ&lt;br /&gt;&lt;br /&gt;ಅದೇಕೋ ಏನೋ&lt;br /&gt;ಮನಸೆಲ್ಲಾ ತೋಯಿಸುವ&lt;br /&gt;ಕಾತರ, ಆತುರ&lt;br /&gt;ಬುದ್ಧಿಯ ಹಿಡಿತಕ್ಕೆ ಸಿಕ್ಕದ&lt;br /&gt;ಚಡಪಡಿಕೆ&lt;br /&gt;ಅಪಾರ&lt;br /&gt;&lt;br /&gt;ಅಲ್ಲೆಲ್ಲೋ ದೂರ&lt;br /&gt;ಇರುವಳಾಕೆ&lt;br /&gt;ನೆನಪಿಗೆ ಬಲುಹತ್ತಿರ&lt;br /&gt;ಸ್ಪಂದಿಸಲು ಸಾಲದು&lt;br /&gt;ಈ ಅಕ್ಷರ&lt;br /&gt;&lt;br /&gt;ಇದ್ದಾಗ ಬಲು ಸದರ&lt;br /&gt;ಹೋದಾಗ ಮನ ಭಾರ&lt;br /&gt;ಹೋಗಿದ್ದು &lt;br /&gt;ನಾನೋ&lt;br /&gt;ಅವಳೋ&lt;br /&gt;ಪ್ರಶ್ನೆಗಿಲ್ಲ&lt;br /&gt;ಉತ್ತರ&lt;br /&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-6324056801567193324?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/6324056801567193324/comments/default' title='Post Comments'/><link rel='replies' type='text/html' href='http://ragaakshara.blogspot.com/2011/08/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/6324056801567193324'/><link rel='self' type='application/atom+xml' href='http://www.blogger.com/feeds/2998842447029730227/posts/default/6324056801567193324'/><link rel='alternate' type='text/html' href='http://ragaakshara.blogspot.com/2011/08/blog-post.html' title='ಗುರುತು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-FX_lcu_Sz6s/TkzfLpKdP1I/AAAAAAAAAS0/LclpFx6_tgU/s72-c/Footprints_on_the_Beach.jpg' height='72' width='72'/><thr:total>1</thr:total></entry><entry><id>tag:blogger.com,1999:blog-2998842447029730227.post-1629738788665728213</id><published>2011-07-24T17:24:00.003+05:30</published><updated>2011-07-24T17:29:57.007+05:30</updated><title type='text'>ನಂಬಿ ಬಂದವರ ವಿಶ್ವಾಸಕ್ಕೆ ದ್ರೋಹವಾಗದಿರಲಿ...</title><content type='html'>&lt;span style="font-style: italic;"&gt;&lt;br /&gt;&lt;br /&gt;&lt;br /&gt;ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು&lt;/span&gt;&lt;br /&gt;&lt;span style="font-style: italic;"&gt;ನಿಮ್ಮ ಮಡಿಲೊಳಗಿರಲು ತಂದಿರುವೆವು&lt;/span&gt;&lt;br /&gt;&lt;span style="font-style: italic;"&gt;ಕೊಳ್ಳಿರೀ ಮಗುವನ್ನು, ನಮ್ಮ ಮನೆ ಬೆಳಕನ್ನು....&lt;/span&gt;&lt;br /&gt;&lt;span style="font-style: italic;"&gt;                                     -ವಿ. ಸೀತಾರಾಮಯ್ಯ&lt;/span&gt;&lt;br /&gt;&lt;br /&gt;&lt;br /&gt;&lt;br /&gt;ಉತ್ತಮ ಬದುಕಿಗೆ ಅವಶ್ಯವಾದ ಎಲ್ಲಾ ಗುಣಗಳನ್ನು ಕಲಿಸುವ ಗುಣ ಕ್ರೀಡೆಗಿದೆ. ಆತ್ಮವಿಶ್ವಾಸ, ಏಕಾಗ್ರತೆ, ಪರಿಶ್ರಮ, ಸಂಯಮ, ಸಮಯಸ್ಫೂರ್ತಿ, ನ್ಯಾಯಪರತೆ, ನೈತಿಕತೆ ಇತ್ಯಾದಿ ಗುಣ-ಮೌಲ್ಯಗಳು ಯಶಸ್ವಿ ಕ್ರೀಡಾಪಟುವಾಗಲು ಅಗತ್ಯ ಎಂದು ಕ್ರೀಡೆ ಕಲಿಸುತ್ತದೆ. ಇನ್ನು ಕ್ರೀಡಾ ಸಾಧನೆಗಳಿಗೆ ಬಹುಮುಖ್ಯವಾದ ಅಡಿಪಾಯ ಪರಸ್ಪರ ವಿಶ್ವಾಸ. ಕ್ರೀಡಾಪಟುವಿಗೆ ತರಬೇತುದಾರನ ಮೇಲೆ, ತರಬೇತುದಾರನಿಗೆ ಕ್ರೀಟಾಪಟುವಿನ ಮೇಲೆ ವಿಶ್ವಾಸವಿಲ್ಲದೇ ಹೋದರೆ ಆಟ ನಡೆಯುವುದಿಲ್ಲ. ಆದರೆ, ಆ ವಿಶ್ವಾಸವೇ ಅತ್ಯಾಚಾರಕ್ಕೊಳಗಾಗುತ್ತಿರುವುದು ಕ್ರೀಡೆಯ ದುರಂತ.&lt;br /&gt;ಪೋಷಕರು ತಮ್ಮ ಹಾಲುಗಲ್ಲದ ಹಸುಳೆಯನ್ನು ಕ್ರೀಡಾ ದೃಷ್ಟಿಕೋನದಿಂದ ಮಾತ್ರ ತಮಗೆ ಪರಿಚಯವಿರುವ ಒಬ್ಬ ಕೋಚ್ ಬಳಿಗೆ ತರಬೇತಿಗೆಂದು ಕಲಿಸುವುದು ವಿಶ್ವಾಸದಿಂದ. ನಮ್ಮ ಮಗಳೂ ಇವರ ಬಳಿ ಕಲಿತರೆ ದೊಡ್ಡ ಸಾಧನೆ ಮಾಡುತ್ತಾಳೆ ಎಂಬ ನಂಬಿಕೆ ಮಾತ್ರ ಅಲ್ಲಿರುತ್ತದೆ. ಆದರೆ, ಅಂಥ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವ ಕೋಚ್ಗಳ ವಿಶ್ವಾಸಘಾತದ ಪ್ರಕರಣಗಳು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿವೆ.&lt;br /&gt;ತರಬೇತುದಾರನೆಂದರೆ ಗುರು. ಗುರು ದೇವರ ಸಮಾನ ಎನ್ನುವುದು ಭಾರತೀಯ ನಂಬಿಕೆ. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕೆನ್ನುವ ಏಕೈಕ ಕನಸಿನೊಂದಿಗೆ ತರಬೇತಿಗೆ ಬರುವ ಕ್ರೀಡಾಪಟುಗಳಲ್ಲಿ ನಿಶ್ಚಿತವಾಗಿಯೂ ಅನ್ಯ ಚಿಂತನೆಗಳಿರುವುದಿಲ್ಲ. ಆದರೆ, ಕೆಲವು ತರಬೇತುದಾರರು ಮುಗ್ಧ ಆಟಗಾರ್ತಿಯರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ‘ಗುರುದಕ್ಷಿಣೆ’ ಪಡೆಯುವ ಪಿಡುಗು ಇಂದು ನಿನ್ನೆಯದೂ ಅಲ್ಲ.&lt;br /&gt;ಕಳೆದ ವರ್ಷ ಹಾಕಿ ಆಟಗಾರ್ತಿ ರಂಜಿತಾ ಆಗ ರಾಷ್ಟ್ರೀಯ ಮಹಿಳಾ ತಂಡದ ಕೋಚ್ ಆಗಿದ್ದ ಮಹಾರಾಜ್ ಕಿಶನ್ ಕೌಶಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಕೌಶಿಕ್ ಕೋಚ್ ಹುದ್ದೆಯಿಂದ ಅಮಾನತುಗೊಂಡಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಒಬ್ಬ ಸಾಮಾನ್ಯ ಅತ್ಯಾಚಾರಿಗೆ ಅನ್ವಯವಾಗುವ ಕಾನೂನು ಕ್ರೀಡಾ ಕೋಚ್ಗಳಿಗೆ ಯಾವತ್ತೂ ಅನ್ವಯಿಸುವುದಿಲ್ಲ. ಆರೋಪಗಳೆಲ್ಲವೂ ತಮ್ಮ ಹೆಸರು ಕೆಡಿಸಲು ಮಾಡುವ ಷಢ್ಯಂತ್ರ ಎಂಬ ನೆಪದಿಂದ ಅವರೆಲ್ಲರೂ ಜಾರಿಕೊಂಡು ಬಿಡುತ್ತಾರೆ.&lt;br /&gt;ಒಲಿಂಪಿಕ್ಸ್ನಲ್ಲಿ ವೇಟ್ಲಿಫ್ಟಿಂಗ್ ಕಂಚು ಗೆದ್ದಿರುವ ಕರ್ಣಂ ಮಲ್ಲೇಶ್ವರಿ ಸಹ ಅನೇಕ ವರ್ಷಗಳಿಂದ ಕೆಲವು ವೇಟ್ಲಿಫ್ಟಿಂಗ್ ಕೋಚ್ಗಳು ಮುಗ್ಧ ಲಿಫ್ಟರ್ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸತತ 5 ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ಬಾಕ್ಸಿಂಗ್ನಲ್ಲೂ ಇಂಥ ಪಿಡುಗಿದೆ ಎಂದರು.  ಅಥ್ಲೆಟಿಕ್ಸ್ನಲ್ಲೂ ಸಾಕಷ್ಟು  ಮಾಜಿ ಅಥ್ಲೀಟ್ಗಳು ನಮ್ಮ ಕಾಲದಿಂದಲೂ  ಉತ್ತಮ ಅವಕಾಶಕ್ಕೆ ಪ್ರತಿಯಾಗಿ ಲೈಂಗಿಕ ‘ಗುರುದಕ್ಷಿಣೆ’ ಪಡೆಯುವ ಪ್ರವೃತ್ತಿ  ಇದೆ. ಆದರೆ, ನಮಗೆ ಅದರ ಅನುಭವ ಆಗಿಲ್ಲ ಎನ್ನುತ್ತಾರೆ. ಕೋಚ್ಗಳ ಕಾಮ ಪ್ರವೃತ್ತಿಗೆ ಬೇಸತ್ತು ಅದೆಷ್ಟೋ ಯುವ ಪ್ರತಿಭೆಗಳು ಕ್ರೀಡಾ ಕಣವನ್ನೇ ತೊರೆದು ಹೋಗಿದ್ದಾರೆ. ಕೆಲವು ಪ್ರತಿಭಾವಂತರ ಉತ್ತಮ ಸಾಧನೆಗೆ ಕೋಚ್ ಜೊತೆಗಿನ ‘ಹೊಂದಾಣಿಕೆ ಕಾರಣ’ ಎಂದು ಹೇಳುವವರೂ ಇದ್ದಾರೆ. ಕೋಚ್ ಮಾತ್ರವೇ ಅಲ್ಲ, ಆಯ್ಕೆಗಾರರು, ಒಕ್ಕೂಟಗಳ ಪದಾಧಿಕಾರಿಗಳು ವಿವಿಧ ತಂಡಗಳಿಗೆ ಆಯ್ಕೆ ಮಾಡುವಾಗ ಯಾವ ರೀತಿ ಆಟಗಾರ್ತಿಯರಿಂದ ‘ಸೇವೆ’ ಬಯಸುತ್ತಾರೆ ಎಂದು ಕಥೆ ಹೇಳಿದ ಅನೇಕರಿದ್ದಾರೆ.&lt;br /&gt;ಒಟ್ಟಾರೆ, ಈ ಎಲ್ಲಾ ಪ್ರಕರಣಗಳು ಸೂಚಿಸುವುದು ಕ್ರೀಡೆಯಲ್ಲಿನ ವಿಶ್ವಾಸಘಾತ.&lt;br /&gt;ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಉತ್ತರ ಪ್ರದೇಶದ ಅಪ್ರಾಪ್ತ ಖೋ-ಖೋ ಆಟಗಾರ್ತಿಯ ಮೇಲೆ ಗೋವಾದಲ್ಲಿ ಅತ್ಯಾಚಾರ ಎಸಗಿರುವ ಕೋಚ್ ಒಬ್ಬ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇದು ಒಂದು ನಿದರ್ಶನ ಮಾತ್ರ. ಬೆಳಕಿಗೇ ಬರದ ಇಂಥ ಪ್ರಕರಣಗಳು ಅದೆಷ್ಟೋ ಇವೆ.&lt;br /&gt;ಹುಡುಗಿಯರು ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಕ್ರೀಡಾಕೋಟಾದಲ್ಲಿ ಸ್ಥಾನ ಇತ್ಯಾದಿ ಆಕರ್ಷಣೆಗಳಿಂದ ವಿವಿಧ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಪೋಷಕರ ಒತ್ತಾಸೆಯೂ ಇದಕ್ಕೆ ಇರುತ್ತದೆ. ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳಿಗಾಗಿ ದೂರದೂರದ ಊರುಗಳಿಗೆ ಹೋಗಬೇಕಾಗುತ್ತದೆ. ದುರಂತವೆಂದರೆಎಷ್ಟೋ ಬಾರಿ ರಾಷ್ಟ್ರ ಮಟ್ಟದ ಟೂರ್ನಿಗಳಿಗೆ ದೂರದ ರಾಜ್ಯಗಳಿಗೆ ವಾರಗಟ್ಟಲೆ ತೆರಳುವ ಬಾಲಕಿಯರ ತಂಡದ ಜೊತೆಗೆ ಓರ್ವ ಮಹಿಳಾ ಸಹಯೋಗಿಯೂ ಇರುವುದಿಲ್ಲ.  ತಂಡದ ಕೋಚ್, ಮ್ಯಾನೇಜರ್ ಎಲ್ಲರೂ ಪುರುಷರೇ ಆಗಿರುತ್ತಾರೆ.  ಕೆಲವು ಪ್ರಕರಣಗಳಲ್ಲಿ ತಂಡದೊಂದಿಗೆ ತೆರಳುವ ಅಧಿಕಾರಿಗಳು, ಕೋಚ್ಗಳಿಗೆ ಸಹಕರಿಸುವಂಥ ಮಹಿಳೆಯರನ್ನೇ ಕರೆದೊಯ್ಯಲಾಗುತ್ತದೆ ಎಂಬ ಆರೋಪಗಳೂ ಇವೆ.&lt;br /&gt;ಕ್ರೀಡೆಯನ್ನು ಕಾಡುತ್ತಿರುವ ಉದ್ದೀಪನ ವ್ಯಸನದ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯವೇ ಗಮನ ಹರಿಸಿದೆ. ಕ್ರೀಡೆಗೆ ಮಾರಕವಾಗಿರುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲು ಇದು ಸಕಾಲ. ಪ್ರತೀ ಬಾರಿ ಪ್ರಕರಣವೊಂದು ಬಯಲಿಗೆ ಬಂದಾಗ ತನಿಖಾ ಸಮಿತಿ ರಚಿಸಿ ಹಗರಣ  ಮುಚ್ಚಿಹಾಕುವ ಪ್ರವೃತ್ತಿಯಿಂದ ವ್ಯವಸ್ಥೆಗೆ ಒಳ್ಳೆಯದಲ್ಲ. ಜೊತೆಗೆ ಕೇವಲ ಆಟವಾಡಲು ಬಂದಿರುವ ಆಟಗಾರ್ತಿಯರು ಹಾಗೂ ಮಕ್ಕಳನ್ನು ಕಳಿಸುವ ಪೋಷಕರ ವಿಶ್ವಾಸಕ್ಕೆ ಆಗುವ ವಜ್ರಘಾತವನ್ನು ಒಲಿಂಪಿಕ್ಸ್ ಪದಕದಿಂದಲೂ ಸರಿಪಡಿಸಲು ಸಾಧ್ಯವಿಲ್ಲ.&lt;br /&gt;ಬದುಕಿಗೆ ಬಂಗಾರದ ಬೆಲೆಯೇ ಹೊರತು ಬಂಗಾರದ ಪದಕದಿಂದ ಬದುಕಿನ ಬೆಲೆ ಕಟ್ಟಲು ಸಾಧ್ಯವಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-1629738788665728213?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/1629738788665728213/comments/default' title='Post Comments'/><link rel='replies' type='text/html' href='http://ragaakshara.blogspot.com/2011/07/blog-post_24.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/1629738788665728213'/><link rel='self' type='application/atom+xml' href='http://www.blogger.com/feeds/2998842447029730227/posts/default/1629738788665728213'/><link rel='alternate' type='text/html' href='http://ragaakshara.blogspot.com/2011/07/blog-post_24.html' title='ನಂಬಿ ಬಂದವರ ವಿಶ್ವಾಸಕ್ಕೆ ದ್ರೋಹವಾಗದಿರಲಿ...'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-5635441519377657652</id><published>2011-07-24T17:22:00.001+05:30</published><updated>2011-07-24T17:24:27.885+05:30</updated><title type='text'>ಪ್ರೀಜಾ ಶ್ರೀಧರನ್ ಸಂದರ್ಶನ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-jPq3nJzvqUY/TiwH5donqEI/AAAAAAAAARQ/zklgpyfTnqU/s1600/sp%2Bpreeja1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/-jPq3nJzvqUY/TiwH5donqEI/AAAAAAAAARQ/zklgpyfTnqU/s400/sp%2Bpreeja1.JPG" alt="" id="BLOGGER_PHOTO_ID_5632885917722585154" border="0" /&gt;&lt;/a&gt;&lt;br /&gt;ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಬಳಿಕ ಪ್ರೀಜಾ ಶ್ರೀಧರನ್ 2 ವರ್ಷ ಕಾಲ ಅಭ್ಯಾಸವನ್ನೇ ನಡೆಸಿರಲಿಲ್ಲ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಮೇಲೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂಬ ಭಾವನೆಯೊಂದಿಗೆ ಅವರು ಸಂತೃಪ್ತಿ ಹೊಂದಿದ್ದರು. ಆದರೆ, 2010ರ ಡೆಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸಾಧನೆ ಮಾಡುವಂತೆ ಅಮ್ಮ ಮತ್ತು ಅಣ್ಣ ಹುರಿದುಂಬಿಸಿದ್ದರ ಪರಿಣಾಮ ಪ್ರೀಜಾ ಟ್ರಾಕ್ಗೆ ಮರಳಿದ್ದರು.&lt;br /&gt;ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾದಾಗ ಮತ್ತೆ ನಿರಾಸಕ್ತಿ ಪ್ರೀಜಾರನ್ನು ಕಾಡಿತ್ತು. ಇನ್ನು ಎಲ್ಲಿಗೂ ಓಡುವುದಿಲ್ಲ ಎಂಬ ಹತಾಶೆಯ ಹಂತವನ್ನು ಅವರು ತಲುಪಿದ್ದರು. ಆದರೆ, ಮತ್ತೆ ಕುಟುಂಬದವರು ಮತ್ತು ಕೋಚ್ಗಳು ಹಾಗೆ ಮಾಡದಂತೆ ತಡೆದರು. ಅದರ ಪರಿಣಾಮ ಒಂದೇ ತಿಂಗಳಲ್ಲಿ ಫಲ ಸಿಕ್ಕಿತ್ತು. ಚೀನಾದ ಗುವಾಂಗ್ಝೌನಲ್ಲಿ ನಡೆದ ಏಷ್ಯಾಡ್ನಲ್ಲಿ ಪ್ರೀಜಾ 10,000 ಮೀ. ಓಟದಲ್ಲಿ ಚಿನ್ನ, 5000ಮೀ. ಓಟದಲ್ಲಿ ಬೆಳ್ಳಿ ಗೆದ್ದು ಬೀಗಿದ್ದರು.&lt;br /&gt;ಈಗ ಪ್ರೀಜಾ ಏಷ್ಯಾಡ್ನಲ್ಲಿ ಗೆದ್ದ ಚಿನ್ನವನ್ನು ಲಂಡನ್ ಒಲಿಂಪಿಕ್ಸ್ನಲ್ಲಿ ಪದಕವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯೊಂದಿಗೆ ಶ್ರಮ ಪಡುತ್ತಿದ್ದಾರೆ. ಗುವಾಂಗ್ಝೌ ಏಷ್ಯಾಡ್ ಸಾಧನೆಗಾಗಿ ಅವರಿಗೆ ಭಾರತ ಸರ್ಕಾರದ ಮಹತ್ವದ ಕ್ರೀಡಾ ಪುರಸ್ಕಾರ ಅರ್ಜುನ ಪ್ರಶಸ್ತಿ ಲಭ್ಯವಾಗಿದೆ. ಆರ್ಥಿಕ ಹಿನ್ನೆಲೆಯಿಲ್ಲದೆ, ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಕೇರಳದ ಹುಡುಗಿಯನ್ನು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಪ್ರಾಯೋಜಿಸುತ್ತಿದೆ.  ಪ್ರೀಜಾ ತಮ್ಮ ಕನಸಿನ ಹಾದಿಯಲ್ಲಿ ಶರವೇಗದಲ್ಲಿ ಓಡುತ್ತಿದ್ದಾರೆ.&lt;br /&gt;ಬೆಂಗಳೂರಿನ ಸಾಯ್ ದಕ್ಷಿಣ ಕೇಂದ್ರದಲ್ಲಿ ಒಲಿಂಪಿಕ್ಸ್ ತಯಾರಿನಲ್ಲಿ ಮಗ್ನರಾಗಿರುವ ಪ್ರೀಜಾ ಶ್ರೀಧರನ್ ಶನಿವಾರ ಅರ್ಜುನ ಪ್ರಶಸ್ತಿ, ತಮ್ಮ ವೃತ್ತಿಜೀವನ ಹಾಗೂ ಲಂಡನ್ ಪೂರ್ವ ತಯಾರಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದರು.&lt;br /&gt;ಏಷ್ಯಾಡ್ನ ಸಾಧನೆ ಬಳಿಕ ಅರ್ಜುನ ಗೌರವವನ್ನು ನಾನು ನಿರೀಕ್ಷಿಸಿದ್ದೆ.  ಬಹಳ ಸಂತೋಷವಾಗಿದೆ. ಈ ಪ್ರಶಸ್ತಿ ಇನ್ನೂ ದೊಡ್ಡ ಸಾಧನೆಗಳಿಗೆ ಪ್ರೇರಣೆ ಒದಗಿಸಲಿದೆ ಎಂದು ಪ್ರೀಜಾ ಖುಷಿಯಿಂದ ಹೇಳಿಕೊಂಡರು.&lt;br /&gt;ನನ್ನ ಈ ಸಾಧನೆಯ ಎಲ್ಲಾ ಶ್ರೇಯ ನನ್ನ ಅಮ್ಮ, ಅಣ್ಣ ಪ್ರದೀಪ್ ಮತ್ತು ಕೋಚ್ಗಳಿಗೆ ಸಲ್ಲಬೇಕು. ನಿನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದೆ. ಅವರೆಲ್ಲರಿಗೂ ಅತ್ಯಾನಂದವಾಗಿತ್ತು. ಟಿವಿಯಲ್ಲಿ ನಿನ್ನ ಸುದ್ದಿಯನ್ನೇ ನೋಡುತ್ತಿದ್ದೇವೆ ಎಂದು ಹೇಳಿಕೊಂಡು ಸಂಭ್ರಮ ಪಟ್ಟರು ಎಂದು ಪ್ರೀಜಾ ಹೇಳಿಕೊಂಡರು.&lt;br /&gt;ಪ್ರೀಜಾ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ಸಂದರ್ಭದಲ್ಲೂ ಮೊದಲಿಗೆ ಅಮ್ಮ ಮತ್ತು ಅಣ್ಣನನ್ನು ನೆನಪಿಸಿಕೊಂಡಿದ್ದರು. ಬಡತನದ ಬೆಂಕಿಯಲ್ಲಿ ಅರಳಿದ ಹೂವು ಪ್ರೀಜಾ ಹಾಗೆ ಮಾಡುವುದು ಸಹಜವೂ ಆಗಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಮಲ್ಲಕ್ಕಾನಂ ಹಳ್ಳಿಯ ಹುಡುಗಿ ಪ್ರೀಜಾ 4ನೇ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರು. ಆಗಿನಿಂದಲೂ ಅಮ್ಮ ರಮಣಿ ಶ್ರೀಧರನ್ ಅವರೇ ಮನೆಗೆಲಸ ಮಾಡಿ ಮಕ್ಕಳನ್ನು ಸಾಕಿದ್ದರು.  ಪ್ರೀಜಾ ಅಣ್ಣ ಪ್ರದೀಪ್ 8ನೇ ತರಗತಿಯಲ್ಲೇ ಶಾಲೆ ತೊರೆದು ಕಾರ್ಪೆಂಟರ್ ಕೆಲಸಕ್ಕೆ ಸೇರುವ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ ಆ ಕಷ್ಟದ ದಿನಗಳಲ್ಲೂ ಪ್ರೀಜಾರ ಓಡುವ ಆಸಕ್ತಿಗೆ ಅವರು ನೀರೆರೆದಿದ್ದರು.&lt;br /&gt;ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಕೋಚ್ ರಣೇಂದ್ರ ಅವರ ಮನೆಯಲ್ಲೇ ಇದ್ದುಕೊಂಡು ಅಭ್ಯಾಸ ನಡೆಸಿದ್ದ ಪ್ರೀಜಾ, ಪಾಲಂನಲ್ಲಿ  ಆಲ್ಫಾನ್ಸೋ ಕಾಲೇಜು ಸೇರಿದ ಮೇಲೆ ಥಂಕಚ್ಚನ್ ಮ್ಯಾಥ್ಯೂ ಅವರಿಂದ ನೆರವು ಪಡೆದಿದ್ದರು.&lt;br /&gt;ಕೊನೆಗೂ ಪ್ರೀಜಾಗೆ ರೈಲ್ವೇ ಉದ್ಯೋಗ ದೊರಕಿದ ಮೇಲೆ ಅವರು ಕುಟುಂಬ  ನೆಲೆ ಕಂಡುಕೊಂಡಿತು. ರೈಲ್ವೇಯಲ್ಲಿ ಕೆಲಸ ಸಿಕ್ಕಿದ್ದುನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಎಂದು ಪ್ರೀಜಾ ಈಗಲೂ ಹೇಳುತ್ತಾರೆ.&lt;br /&gt;ಪ್ರೀಜಾ ಕಳೆದ ವರ್ಷ ಏಷ್ಯಾಡ್ನಲ್ಲಿ 10,000ಮೀ. ಓಟವನ್ನು 31 ನಿಮಿಷ 50.28ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಚಿನ್ನ ಗೆದ್ದಿದ್ದರು. ಇದು ರಾಷ್ಟ್ರೀಯ ದಾಖಲೆಯೂ ಹೌದು. ಹಾಗೆ ನೋಡಿದರೆ 5000 ಮೀ. ಮತ್ತು 10,000 ಮೀ. ಓಟಗಳೆರಡರಲ್ಲೂ ರಾಷ್ಟ್ರೀಯ ದಾಖಲೆ ಪ್ರೀಜಾ ಹೆಸರಲ್ಲೇ ಇದೆ.  ಮುಂದಿನ ವರ್ಷದ ಲಂಡನ್ ಒಲಿಂಪಿಕ್ಸ್ಗೆ ‘ಎ’ ಶ್ರೇಣಿಯ ಅರ್ಹತೆ ಗಳಿಸಲು ಪ್ರೀಜಾ ಗುವಾಂಗ್ಝೌನಲ್ಲಿ ದಾಖಲಿಸಿದ ಅವಧಿಯನ್ನು ಪುನರಾವರ್ತಿಸಿದರೆ ಸಾಕು. ಅವರಿಂದ ಅದು ಸಾಧ್ಯವೂ ಹೌದು. ಮುಂದಿನ ತಿಂಗಳು ಕೊರಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಷಿಪ್ನಲ್ಲೇ ಈ ಸಾಧನೆ ಮಾಡಿ ಲಂಡನ್ಗೆ ಟಿಕೆಟ್ ಬುಕ್ ಮಾಡುವ ವಿಶ್ವಾಸವನ್ನು ಪ್ರೀಜಾ ಹೊಂದಿದ್ದಾರೆ.&lt;br /&gt;ಒಲಿಂಪಿಕ್ಸ್ನಲ್ಲಿ ಪದಕದ ಕನಸು ಕಾಣಲು 10,000ಮೀ. ಓಟವನ್ನು ಕನಿಷ್ಠ 29 ಪ್ಲಸ್ ನಿಮಿಷದಲ್ಲಿ ಓಡಬೇಕು. ಇನ್ನೂ ಒಂದು ವರ್ಷದಲ್ಲಿ ಆ ವೇಗ ರೂಢಿಸಿಕೊಳ್ಳಲು ಶತ ಪ್ರಯತ್ನ ಮಾಡುವುದಾಗಿ ಪ್ರೀಜಾ ಹೇಳುತ್ತಾರೆ.&lt;br /&gt;ಮಿತ್ತಲ್ ಸಹಕಾರ: ಪ್ರೀಜಾ ವೃತ್ತಿಜೀವನದ ಆರಂಭದ ದಿನಗಳಲ್ಲಿ  ಪ್ರಾಯೋಜಕರ ಬೆಂಬಲವಿಲ್ಲದೆ ತಾಪತ್ರಯ ಅನುಭವಿಸಿದ್ದರು. ಆದರೆ, ಈಗ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಅವರ ಒಲಿಂಪಿಕ್ಸ್ ತಯಾರಿಯ  ಪೂರ್ಣ ವೆಚ್ಚವನ್ನು ಅದು ಭರಿಸಲಿದೆ.&lt;br /&gt;ಲಕ್ಷ್ಮೀ ಮಿತ್ತಲ್ ಹಾಗೂ ಅಮಿತ್ ಭಾಟಿಯಾ ಮಹತ್ವಾಕಾಂಕ್ಷೆಯ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಸ್ಥಾಪನೆಗೊಂಡಿದ್ದೇ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರನ್ನು ರೂಪಿಸುವ ಕನಸಿನಿಂದ. ಆರ್ಚರಿ, ಕುಸ್ತಿ, ಶೂಟಿಂಗ್, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ನಲ್ಲಿ ಅನೇಕ ಪ್ರತಿಭಾವಂತರು ಸದ್ಯ ಎಂಸಿಟಿ ನೆರವಿನಿಂದ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿದ್ದಾರೆ.  ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಸ್ವರ್ಣ ಗೆದ್ದ ಮಿತ್ತಲ್ ಟ್ರಸ್ಟ್ ಪ್ರಾಯೋಜನೆಯ ಮೊದಲ ಚಾಂಪಿಯನ್. ಕಾಮನ್ವೆಲ್ತ್ ಗೇಮ್ಸ್ನಲ್ಲಿ  ಎಂಸಿಟಿ ಪ್ರಾಯೋಜಿತ ಅಥ್ಲೀಟ್ಗಳು 7 ಚಿನ್ನ, 7 ಬೆಳ್ಳಿ, 2ಕಂಚು, ಏಷ್ಯಾಡ್ನಲ್ಲಿ 3 ಚಿನ್ನ, 5 ಬೆಳ್ಳಿ, 8 ಕಂಚು ಗೆದ್ದಿದ್ದರು. ಈಗ ಪ್ರೀಜಾ ಎಂಸಿಟಿ ಪತಾಕೆಯನ್ನು ಲಂಡನ್ನಲ್ಲಿ ಹಾರಿಸಲು ತರಬೇತಿ ನಡೆಸಿದ್ದಾರೆ.&lt;br /&gt;ಭಾರತೀಯ ಅಥ್ಲೆಟಿಕ್ಸ್ಗೆ ಸದ್ಯ ಕಳಂಕ ತಂದಿರುವ ಉದ್ದೀಪನ ಕಳಂಕದ ಬಗ್ಗೆ ಪ್ರೀಜಾ ಪ್ರತಿಕ್ರಿಯಿಸಲು ಇಷ್ಟ ಪಡುವುದಿಲ್ಲ. ಎಲ್ಲವೂ ಅಯೋಮಯವಾಗಿದೆ.  ಅದೆಲ್ಲಾ ಹೇಗಾಯಿತೆಂದೇ ಗೊತ್ತಾಗುತ್ತಿಲ್ಲ ಎಂದು ಪ್ರೀಜಾ ಹೇಳಿಕೊಂಡರು.&lt;br /&gt;ಕಳೆದ ವರ್ಷ ಏಷ್ಯಾಡ್ನಲ್ಲಿ ಪ್ರೀಜಾ ಗೆದ್ದ ಬಂಗಾರದ ಪದಕಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂ. ನಗದು ಬಹುಮಾನ ನೀಡಿತ್ತು. ಆ ಹಣದಲ್ಲಿ ಪ್ರೀಜಾ ಪಾಲಕ್ಕಾಡ್ನ ಅಕ್ಕಥೇಥರಾದಲ್ಲಿ ಹೊಸದೊಂದು ಮನೆ ಕಟ್ಟಿಸುತ್ತಿದ್ದಾರೆ. ಮುಂದಿನ ತಿಂಗಳು ಗೃಹಪ್ರವೇಶ ನಡೆಯುವ ನಿರೀಕ್ಷೆ ಇದೆ. ನಿನಗೆ ಮದುವೆಯ ವಯಸ್ಸಾಯಿತು ಎಂದು ಅಮ್ಮ ರಮಣಿ ಒತ್ತಾಯ ಮಾಡಲಾರಂಭಿಸಿದ್ದಾರೆ. ಆದರೆ, ಸೂಕ್ತ ಹುಡುಗ ಇನ್ನೂ ಸಿಕ್ಕಿಲ್ಲ. ಅಷ್ಟಕ್ಕೂ ಅಮ್ಮ ಹುಡುಗನನ್ನು ಹುಡುಕಿದರೂ ಆತನನ್ನು ನೋಡಲು ನಾನು ಮನೆಯಲ್ಲಿರುವುದಿಲ್ಲ ಎಂದು ಪ್ರೀಜಾ ಹೇಳಿಕೊಳ್ಳುತ್ತಾರೆ.&lt;br /&gt;ಸದ್ಯಕ್ಕಂತೂ ಪ್ರೀಜಾ ಗಮನವೆಲ್ಲಾ ಒಲಿಂಪಿಕ್ಸ್ ಮೇಲೆ.  ಬೆಳಗ್ಗೆ , ಸಂಜೆ ತಲಾ 25 ಕಿಮೀಗಳಂತೆ ದಿನಂಪ್ರತಿ 50ಕಿಮೀ ಓಡುತ್ತಿರುವ ಪ್ರೀಜಾ ದೊಡ್ಡ ಗುರಿಯ ಕಡೆಗೆ ಚಿರತೆ ವೇಗದಲ್ಲಿ ಸಾಗುತ್ತಿದ್ದಾರೆ.&lt;br /&gt;&lt;br /&gt;ಪ್ರೀಜಾ ಸಾಧನೆ&lt;br /&gt;1998: ತಂಡ ಬೆಳ್ಳಿ - ಏಷ್ಯಾ ಗುಡ್ಡಗಾಡು ಓಟ, ಹಾಂಕಾಂಗ್&lt;br /&gt;2000: 5000 ಮೀ ಚಿನ್ನ, 10,000ಮೀ. ಬೆಳ್ಳಿ- ಎಸ್ಎಎಫ್ ಗೇಮ್ಸ್&lt;br /&gt;2004: ಚಿನ್ನ, ಏಷ್ಯಾ ಒಳಾಂಗಣ ಕೂಟ, ಟೆಹ್ರಾನ್&lt;br /&gt;2006: 5000ಮೀ. ಬೆಳ್ಳಿ, ಏಷ್ಯನ್ ಅಥ್ಲೆಟಿಕ್ಸ್, ಜೋರ್ಡಾನ್&lt;br /&gt;2008: ಒಲಿಂಪಿಕ್ಸ್ನ 10,000ಮೀ. ಓಟದಲ್ಲಿ ಭಾರತ ಪ್ರತಿನಿಧಿಸಿದ ಮೊದಲ ಮಹಿಳೆ ಎಂಬಶ್ರೇಯ.&lt;br /&gt;2010: 10,000ಮೀ. ಚಿನ್ನ, 5000ಮೀ. ಬೆಳ್ಳಿ, ಗುವಾಂಗ್ಝೌ ಏಷ್ಯಾಡ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-5635441519377657652?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/5635441519377657652/comments/default' title='Post Comments'/><link rel='replies' type='text/html' href='http://ragaakshara.blogspot.com/2011/07/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/5635441519377657652'/><link rel='self' type='application/atom+xml' href='http://www.blogger.com/feeds/2998842447029730227/posts/default/5635441519377657652'/><link rel='alternate' type='text/html' href='http://ragaakshara.blogspot.com/2011/07/blog-post.html' title='ಪ್ರೀಜಾ ಶ್ರೀಧರನ್ ಸಂದರ್ಶನ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-jPq3nJzvqUY/TiwH5donqEI/AAAAAAAAARQ/zklgpyfTnqU/s72-c/sp%2Bpreeja1.JPG' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-7215813197974141875</id><published>2011-06-21T18:26:00.002+05:30</published><updated>2011-06-21T18:33:16.363+05:30</updated><title type='text'>ನಂಬಿ ಕೆಟ್ಟವರಿಲ್ಲವೋ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-sAoqOM07aLk/TgCWirxXIUI/AAAAAAAAARI/m6QF2X624fA/s1600/rahul-dravid%2Bcopy.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 400px;" src="http://4.bp.blogspot.com/-sAoqOM07aLk/TgCWirxXIUI/AAAAAAAAARI/m6QF2X624fA/s400/rahul-dravid%2Bcopy.jpg" alt="" id="BLOGGER_PHOTO_ID_5620657857567859010" border="0" /&gt;&lt;/a&gt;&lt;br /&gt;ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ನ ಮುಖವಾದರೆ, ರಾಹುಲ್ ದ್ರಾವಿಡ್ ಬೆನ್ನೆಲುಬು. ಇದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.&lt;br /&gt;ಬಹುಶಃ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲೋ, ವೆಸ್ಟ್ ಇಂಡೀಸ್ನಲ್ಲೋ ಜನಿಸಿದ್ದರೆ ಈ ಹೊತ್ತಿಗೆ ಆ ರಾಷ್ಟ್ರದ ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳುತ್ತಿದ್ದರು ಅಥವಾ ಭಾರತದಲ್ಲೇ ಸಚಿನ್ ತೆಂಡುಲ್ಕರ್ ಸಮಕಾಲೀನರೆನಿಸದೆ ಬೇರೊಂದು ಕಾಲಘಟ್ಟದಲ್ಲಿ ಜನಿಸಿದ್ದರೆ ಅವರ ಸಾಧನೆಗಳಿಗೆ ಇನ್ನೂ ಹೆಚ್ಚಿನ ಮಹತ್ವ ಸಿಕ್ಕಿರುತ್ತಿತ್ತು.&lt;br /&gt;ಯಶಸ್ಸೆಂಬ ಗಗನಚುಂಬಿ ಕಟ್ಟಡದ ತುತ್ತತುದಿಗೆ ಸಚಿನ್ ಲಿಫ್ಟ್ ಏರಿಕೊಂಡು ಶರವೇಗದಲ್ಲಿ ಏರಿದರೆ, ದ್ರಾವಿಡ್ ಒಂದೊಂದೇ ಮೆಟ್ಟಿಲು ಕ್ರಮಿಸಿಕೊಂಡು ಸ್ಥಿರವಾಗಿ ಏರಿದರು.&lt;br /&gt;ದ್ರಾವಿಡ್ ಎಂದೊಡನೆ ಕಣ್ಮುಂದೆ ಸುಳಿಯುವುದು ಅವರ ಸದ್ವರ್ತನೆ, ಸೌಜನ್ಯ, ವಿಧೇಯತೆ ಮತ್ತು ಸರಳತೆ. ಅವರು ಸ್ಟೈಲಿಷ್ ಆಗಿದ್ದರೂ ಶೋಕಿಲಾಲರಲ್ಲ. ವಾಗ್ಮಿಯಾಗಿದ್ದರೂ ವಾಚಾಳಿಯಲ್ಲ. ಶಿಸ್ತಿನ ವ್ಯಕ್ತಿಯಾಗಿದ್ದರೂ ಸಿಡುಕನಲ್ಲ. ತಾಂತ್ರಿಕವಾಗಿ ಪರಿಪೂರ್ಣ ಆಟಗಾರನೆನಿಸಿದ್ದರೂ ಅಷ್ಟಕ್ಕೇ ಸೀಮಿತಗೊಂಡವರಲ್ಲ. ಅನುಭವ ಶ್ರೀಮಂತನಾದರೂ ಮೈಮರೆತವರಲ್ಲ. ದ್ರಾವಿಡ್ ಎಂದರೆ ಪರಿಪೂರ್ಣತೆಗೆ ಹತ್ತಿರ ದಲ್ಲಿರುವ, ಇನ್ನೂ ಪ್ರಕ್ರಿಯೆಯಲ್ಲಿರುವ ಒಂದು ಕಲಾಕೃತಿ. ಅವರಿಗೆ ನಿರಂತರವಾಗಿ ಯಶಸ್ಸಿನ ಹಸಿವು, ಸಾಧನೆಯ ದಾಹ, ಎತ್ತರಕ್ಕೇರುವ ತುಡಿತ. ಕ್ರಿಕೆಟ್ ಮೈದಾನದಲ್ಲಿ ಅವರೊಬ್ಬ  ಸದಾ ಅನ್ವೇಷಣಶೀಲ ವಿಜ್ಞಾನಿ. ಏರಿಳಿತಗಳಿಂದ ವಿಚಲಿತಗೊಳ್ಳದ ತತ್ವಜ್ಞಾನಿ.  ಆದರೆ, ಅವರ ಪ್ರಕಾರ ಶಾಶ್ವತ ವಿದ್ಯಾರ್ಥಿ. ಅವರ ವೃತ್ತಿಜೀವನ ಒಂದು ಸುದೀರ್ಘ ಕಲಿಕೆಯ ಅಭಿಯಾನ. ಒಂದೊಂದು ಪಂದ್ಯವೂ ಅವರಿಗೆ ಒಂದೊಂದು ಪರೀಕ್ಷೆ. ಪ್ರತೀ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಬದ್ಧತೆ, ಪ್ರಯತ್ನಶೀಲತೆ, ಛಲ ಅವರಲ್ಲಿ. ಅದೇ ದ್ರಾವಿಡ್ ಹಿರಿಮೆ.&lt;br /&gt;ಎಷ್ಟೋ ಬಾರಿ ಕ್ರಿಕೆಟಿಗನ ಶ್ರೇಷ್ಠತೆಯನ್ನು ಕೇವಲ ಅಂಕಿ ಅಂಶದಿಂದ ಅಳೆಯಲು ಸಾಧ್ಯವಾಗುವುದಿಲ್ಲ. ದ್ರಾವಿಡ್ ವಿಷಯದಲ್ಲೂ ಅಷ್ಟೇ. ಕ್ರಿಕೆಟ್ನಲ್ಲಿ ಹರ್ಭಜನ್ ಸಿಂಗ್ ಸಹ ಎರಡು ಶತಕ ಬಾರಿಸಿದ್ದಾರೆ. ಲಕ್ಷ್ಮೀಪತಿ ಬಾಲಾಜಿಯಂಥವರು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಂದು ಅದೆಲ್ಲಾ ಅವರ  ಬ್ಯಾಟಿಂಗ್ ಪ್ರೌಢಿಮೆಗಿಂತ ಅದೃಷ್ಟದ ಫಲ. ಮುಟ್ಟಿದ್ದೆಲ್ಲಾ ಚಿನ್ನವಾಗುವಂಥ ಎಂದೋ ಒಂದು ದಿನ ಹರ್ಭಜನ್ ಕಣ್ಣು ಮುಚ್ಚಿಕೊಂಡು ಹೊಡೆದರೂ ಔಟಾಗುವುದಿಲ್ಲ. ಬ್ಯಾಟ್ ತಾಗಿದರೆ ಸಾಕು ಚೆಂಡು ಬೌಂಡರಿಯತ್ತ ಓಡುತ್ತದೆ. ಆದರೆ, ದ್ರಾವಿಡ್ ವೃತ್ತಿಜೀವನದಲ್ಲಿ ಇಂಥ ಬಿಟ್ಟಿ ರನ್ಗಳಿಲ್ಲ. ಸೆಹ್ವಾಗ್ರಂತೆ ಎಡ್ಜ್ ಆಗಿ ಕ್ಯಾಚ್ ಆಗಬೇಕಾದ ಚೆಂಡು ಬೌಂಡರಿ, ಸಿಕ್ಸರ್ ಆದ ಉದಾಹರಣೆ ದ್ರಾವಿಡ್ ಬ್ಯಾಟಿಂಗ್ನಲ್ಲಿ ಕಾಣಸಿಗುವುದಿಲ್ಲ. ಅಂದರೆ,  ಅವರು ಗಳಿಸುವ ಒಂದೊಂದು ರನ್ನಿನಲ್ಲೂ ಅವರ ಪ್ರಯತ್ನವಿರುತ್ತದೆ. ಪ್ರತಿಭೆ, ಯೋಗ್ಯತೆ, ಅಭ್ಯಾಸ, ಸಿದ್ಧಿ ಕಾಣುತ್ತದೆ.  ಹೊಸದಾಗಿ ಕ್ರಿಕೆಟ್ ಕಲಿಯುವವರು ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ಸಾಕು. ಕ್ರೀಸ್ನಲ್ಲಿ ನಿಲುವಿನಿಂದ ಬ್ಯಾಟ್ ಹಿಡಿಯುವ ರೀತಿಯಿಂದ, ಚೆಂಡನ್ನು ನೋಡುವ, ಗ್ರಹಿಸುವ, ಮೌಲ್ಯಕ್ಕೆ ತಕ್ಕಂತೆ ಆಡುವ ಒಂದೊಂದು ಅಂಶವೂ ಒಂದೊಂದು ಪಾಠ. ಚೆಂಡಿರುವುದೇ ಚಚ್ಚುವುದಕ್ಕೆ ಎನ್ನುವ ಇಂದಿನ ಟಿ20 ಯುಗದಲ್ಲಿ ಶ್ರೇಷ್ಠ ಎಸೆತಗಳ ವಿರುದ್ಧ ಯಾವ ಯಾವ ರೀತಿ ರಕ್ಷಣಾತ್ಮಕವಾಗಿ ಆಡಬಹುದು, ಯಾವ ರೀತಿ ಆಕ್ರಮಣ ನಡೆಸಬಹುದು ಎಂಬುದನ್ನು ದ್ರಾವಿಡ್ ಆಟ ನೋಡಿ ಕಲಿಯಬಹುದು.&lt;br /&gt;ದ್ರಾವಿಡ್ರ ವಿಶೇಷತೆಯೆಂದರೆ ಅವರು ಯಾವತ್ತೂ ತಮ್ಮ ಆಟ ನಿಂತ ನೀರಾಗಲು ಅವಕಾಶ ಕೊಡಲಿಲ್ಲ. ಒಂದು ಚೌಕಟ್ಟಿನೊಳಗೆ ಬಂಧಿಯಾಗಲಿಲ್ಲ. ಕೇವಲ ಟೆಸ್ಟ್ ಆಟಗಾರ ಎಂದು ಬ್ರಾಂಡ್ ಆಗಲಿಲ್ಲ. ಬರೀ ಬ್ಯಾಟ್ಸ್ಮನ್ ಆಗಿಯೂ ಉಳಿಯಲಿಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ ುನ್ ಆಗಿ ಅವರ ರೂಪಾಂತರ, ಸ್ಲಿಪ್ ಫೀಲ್ಡರ್ ಆಗಿ ಸಾಧಿಸಿದ ತಜ್ಞತೆ, ವಿಕೆಟ್ಕೀಪರ್ ಆಗಿ ಪ್ರದರ್ಶಿಸಿದ ಉಪಯುಕ್ತತೆ ಎಲ್ಲವೂ ಭವಿಷ್ಯದ ಪೀಳಿಗೆಗೆ ಒಂದೊಂದು ಪಾಠ.&lt;br /&gt;ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಅನೇಕ ಐತಿಹಾಸಿಕ ಸಾಧನೆಗಳ ಸಂದರ್ಭದಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ಕೋಲ್ಕತ್ತದ ಐತಿಹಾಸಿಕ ಟೆಸ್ಟ್ನಿಂದ ಆಸ್ಟ್ರೇಲಿಯಾದಲ್ಲಿನ ದಿಗ್ವಿಜಯದವರೆಗೆ, ದಕ್ಷಿಣ ಆಫ್ರಿಕಾದಲ್ಲಿನ ಸಾಹಸದಿಂದ ನ್ಯೂಜಿಲೆಂಡ್ನಲ್ಲಿ ಸತತ ಶತಕ ಪರಾಕ್ರಮದವರೆಗೆ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಸರಣಿ ವಿಜಯದವರೆಗೆ ಎಲ್ಲೆಡೆ ಭಾರತದ ಎಲ್ಲಾ ಮಹತ್ವದ ಸಾಧನೆಗಳಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ತೆಂಡುಲ್ಕರ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆಯ ಮಹೋನ್ನತ ಸಾಹಸದ ದಿನಗಳಲ್ಲಿ ದ್ರಾವಿಡ್ ಸಹ ಕೊಡುಗೆ ಸಲ್ಲಿಸಿದ್ದಾರೆ. ತಂಡದಲ್ಲಿ ಎಲ್ಲರೂ ಭರ್ಜರಿ ಫಾರ್ಮ್ ನಲ್ಲಿರುವಾಗ ಶತಕ, ಅರ್ಧ ಶತಕ ಬಾರಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ದ್ರಾವಿಡ್ ಎಲ್ಲರೂ ವಿಫಲರಾದ ದಿನಗಳಲ್ಲೂ ತಾವೊಬ್ಬರೇ ಏಕಾಂಗಿಯಾಗಿ ಹೋರಾಡಿದ್ದಾರೆ. ಅಂಥ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಅಥವಾ ಸಂಪೂರ್ಣ ಶರಣಾಗತಿ ತಪ್ಪಿಸಿ ಮರ್ಯಾದೆ ಉಳಿಸಿದ್ದಾರೆ. ಮಿ. ಡಿಪೆಂಡಬಲ್ ಎಂಬ ಹೊಗಳಿಕೆ ಅವರಿಗೆ ಸುಮ್ಮನೆ ಬಂದಿದ್ದಲ್ಲ.&lt;br /&gt;ದ್ರಾವಿಡ್ ಯಶಸ್ಸಿಗೆ ಸ್ವರ್ಣ ತೂಕ ಏಕೆಂದರೆ ಅವರಿಗೆ ಯಾವತ್ತೂ ಸಾಧನೆಯ ಪಿತ್ಥ ನೆತ್ತಿಗೇರಲಿಲ್ಲ. ತಮ್ಮ ಬೇರುಗಳನ್ನು ಅವರು ಮರೆಯಲಿಲ್ಲ. ಆವೇಶದ ಕೈಗೆ ವಿವೇಚನೆಯನ್ನು, ಆತುರದ ಕೈಗೆ ವಿವೇಕವನ್ನು ಅವರು ಯಾವತ್ತೂ ಕೊಡಲಿಲ್ಲ. ಸುದೀರ್ಘ ವೃತ್ತಿಜೀವನದಲ್ಲಿ ಯಾವತ್ತೂ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ. ಚೆಂಡು ವಿರೂಪದಂಥ ಆರೋಪವನ್ನು ಅವರ ತಲೆಗೆ ಕಟ್ಟಲಾದ ಸಂದರ್ಭದಲ್ಲೂ ಅವರು ಅಮಾಯಕರಾಗಿದ್ದರೆ ವಿನಃ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿರಲಿಲ್ಲ. ಮಾತಿನಲ್ಲಾಗಲೀ,  ಕೃತಿಯಲ್ಲಾಗಲೀ ಅವರು ಎಲ್ಲೆ ಮೀರಲಿಲ್ಲ. ಕ್ರಿಕೆಟ್ನಿಂದ ಅವರು ಗಣ್ಯರಾದಷ್ಟೇ ಕ್ರಿಕೆಟ್ಗೂ ಘನತೆ ತಂದುಕೊಟ್ಟಿದ್ದು ಅವರ ಹಿರಿಮೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-7215813197974141875?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/7215813197974141875/comments/default' title='Post Comments'/><link rel='replies' type='text/html' href='http://ragaakshara.blogspot.com/2011/06/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/7215813197974141875'/><link rel='self' type='application/atom+xml' href='http://www.blogger.com/feeds/2998842447029730227/posts/default/7215813197974141875'/><link rel='alternate' type='text/html' href='http://ragaakshara.blogspot.com/2011/06/blog-post.html' title='ನಂಬಿ ಕೆಟ್ಟವರಿಲ್ಲವೋ...'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-sAoqOM07aLk/TgCWirxXIUI/AAAAAAAAARI/m6QF2X624fA/s72-c/rahul-dravid%2Bcopy.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-6374175360698006956</id><published>2011-05-12T15:53:00.000+05:30</published><updated>2011-05-14T01:57:44.459+05:30</updated><title type='text'>ಕುಣಿಯೆ ಕುಣಿಯೆ ಚಿಯರುಲತೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-l-UU_j4aTUY/Tcu1vv25NpI/AAAAAAAAAQ8/ZMzBG1kMjek/s1600/16.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 257px;" src="http://1.bp.blogspot.com/-l-UU_j4aTUY/Tcu1vv25NpI/AAAAAAAAAQ8/ZMzBG1kMjek/s400/16.jpg" alt="" id="BLOGGER_PHOTO_ID_5605773993097901714" border="0" /&gt;&lt;/a&gt;&lt;br /&gt;ನೃತ್ಯವನ್ನು ನೋಡು, ನರ್ತಿಸುವವಳನ್ನಲ್ಲ ಎಂಬ ಮಾತೊಂದಿತ್ತು... ಅದೀಗ ತಿರುವುಮುರುವಾಗಿದೆ!&lt;br /&gt;ನೃತ್ಯವೆನ್ನುವುದು ಹೆಜ್ಜೆಗಳು ಸೃಷ್ಟಿಸುವ ಕಾವ್ಯ ಎಂದೊಬ್ಬರು ಮಹಾನುಭಾವ ಹೇಳಿದ್ದರು. ಆದರೆ ನಮ್ಮ ಕವಿಗಳು ಕಾವ್ಯವನ್ನು ಕನ್ನಿಕೆ ಎಂದು ಕರೆದರು. ಕನ್ನಿಕೆಯನ್ನು ಕಾವ್ಯಮಯವಾಗಿ ಬಣ್ಣಿಸಿದರು. ಹೆಣ್ಣಿನ ಅಂಕು, ಡೊಂಕು, ಬಾಗು, ಬಳುಕು, ಲಾಸ್ಯ, ಹಾಸ್ಯ, ಮೊಗ, ನಗು ಕಾವ್ಯಭಾಷೆಯಲ್ಲಿ ಅಮರತ್ವ ಪಡೆದವು. ಕಾವ್ಯದಿಂದ ಹೆಣ್ಣು ಸುಂದರಿಯಾದಳು. ಕಾವ್ಯದ ಕಣ್ಣಲ್ಲಿ ಜನ ಸೌಂದರ್ಯವನ್ನು ಹುಡುಕಿದರು. ಸುಂದರಿಯರಲ್ಲಿ ಕಾವ್ಯವನ್ನು ಹುಡುಕಿದರು.ಯರ್ಗರ್ಲ್ಸ್ ಎಂಬ ಕಾವ್ಯ ಸೂರ್ತಿ ಹುಟ್ಟಿಸುವ ಕನ್ನಿಕೆಯರ ಸಲುವಾಗಿ ಇಷ್ಟೆಲ್ಲಾ ಹೇಳಬೇಕಾಯಿತು. ಚಿಯರ್ಲೀಡಿಂಗ್ ಎಂಬ ಪರಿಕಲ್ಪನೆ ಹಾಗೂ ಚಿಯರ್ಲೀಡರ್ಸ್ ಎಂಬ ಗಂಧರ್ವ ಬೆಡಗಿಯರು ಭಾರತಕ್ಕೆ ಕಾಲಿಟ್ಟಿದ್ದು ಐಪಿಎಲ್ ಮೂಲಕ. ಬಾರ್, ನೈಟ್ಕ್ಲಬ್ಗಳಲ್ಲಿ ಹುಡುಗಿಯರು ನರ್ತಿಸುವುದನ್ನು ನಿಷೇಸುವ ನಮ್ಮ ದೇಶದಲ್ಲಿ ಕ್ರಿಕೆಟ್ ಮೈದಾನದಲ್ಲಿ ಪರಂಗಿ ಹುಡುಗಿಯರು ಅರೆಬೆತ್ತಲೆ ಕುಣಿಯಲು ಅವಕಾಶವಾಗಿದ್ದಾದರೂ ಹೇಗೆ ಎನ್ನುವುದು ಮತ್ತೊಂದು ವಿಚಾರ. ಆದರೆ, ನಮ್ಮ ಚಲನಚಿತ್ರಗಳಲ್ಲಿ ಐಟಂ ಸಾಂಗ್ ಇರುವಂತೆ, ಇವರನ್ನೂ ಕ್ರಿಕೆಟ್ ಮೈದಾನದ ಐಟಂ ಹುಡುಗಿಯರು ಎನ್ನಲಡ್ಡಿಯಿಲ್ಲ.ಯರ್ಲೀಡರ್ಸ್ ಪರಿಕಲ್ಪನೆ ಭಾರತಕ್ಕೆ ಹೊಸದೇನೂ ಅಲ್ಲ. ಏಕೆಂದರೆ ಪ್ರಜಾಪ್ರಭುತ್ವ ಬರುವುದಕ್ಕೆ ಮುನ್ನ ಎಲ್ಲಾ ರಾಜ-ಮಹಾರಾಜರ ಆಸ್ಥಾನಗಳಲ್ಲಿ ರಾಜನರ್ತಕಿಯರಿರುತ್ತಿದ್ದರು. ಹಾಗೆ ನೋಡಿದರೆ ಚಿಯರ್ಲೀಡರ್ಗಳನ್ನು ಪೋಷಿಸಿದ ಮೊಟ್ಟಮೊದಲ ವ್ಯಕ್ತಿ ದೇವೇಂದ್ರಘಿ. ಅವನ ಒಡ್ಡೋಲಗದಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಂಥ ಚಿಯರ್ಲೀಡರ್ಗಳಿದ್ದರು.ದರೂ, ಚಿಯರ್ಲೀಡರ್ಗಳೆಂಬ ವೃತ್ತಿಪರ ಪರಿಕಲ್ಪನೆ ಆರಂಭವಾಗಿದ್ದು ಸುಮಾರು ನೂರಿಪ್ಪತ್ತು ವರ್ಷಗಳ ಹಿಂದೆ. ಅಮೆರಿಕದಲ್ಲಿ ಚಿಯರ್ಲೀಡಿಂಗ್ ಎನ್ನುವುದು ಆಸಕ್ತಿ ಅಥವಾ ವೃತ್ತಿಯ ಹಂತವನ್ನು ದಾಟಿ ಸಂಸ್ಕೃತಿಯೇ ಆಗಿಹೋಗಿದೆ. ಒಂದು ಅಂದಾಜಿನ ಪ್ರಕಾರ ಕೇವಲ ಅಮೆರಿಕದಲ್ಲೇ 15 ಲಕ್ಷಕ್ಕೂ ಹೆಚ್ಚು ಚಿಯರ್ಲೀಡರ್ಗಳಿದ್ದಾರೆ. ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳ ಹುಡುಗಿಯರಿಗೆ ಬೇರೆಲ್ಲಾ ಆಯ್ಕೆಗಳಂತೆ ಚಿಯರ್ಲೀಡಿಂಗ್ ಸಹ ಒಂದು ವೃತ್ತಿ ಆಯ್ಕೆಯಾಗಿದೆ.&lt;br /&gt;ಭಾರತದಲ್ಲೂ ಚಿಯರ್ಲೀಡಿಂಗ್ ಕಂಪೆನಿಗಳಿವೆ. ಆದರೆ, ಆ ತಂಡಗಳಲ್ಲೆಲ್ಲಾ ಕುಣಿಯುವವರು ವಿದೇಶಿ ಹುಡುಗಿಯರು. ನಮ್ಮ ಹುಡುಗಿಯರಿಗೆ ನೃತ್ಯ ಹೊಸದಲ್ಲವಾದರೂ ಕ್ರೀಡಾ ಮೈದಾನದಲ್ಲಿ ಕುಣಿಯುವುದು ಹೊಸ ವಿಷಯವೇ. ಅದಕ್ಕಿನ್ನೂ ಅವರು ತೆರೆದುಕೊಳ್ಳಬೇಕಿದೆ.&lt;br /&gt;ಭಾರತಕ್ಕೆ ಚಿಯರ್ಲೀಡರ್ಸ್ ಬೆಡಗಿಯರು ಕಾಲಿಟ್ಟಿದ್ದು 2008ರಲ್ಲಿ ಮೊದಲ ಐಪಿಎಲ್ ಮೂಲಕ. ಆಗ ಮನರಂಜನೆಯ ಹೆಸರಿನಲ್ಲಿ ಈ ಹುಡುಗಿಯರು ಅರೆಬರೆ ಬಟ್ಟೆ ತೊಟ್ಟು ಅರೆಬೆತ್ತಲೆ ಕುಣಿಯುವುದರ ವಿರುದ್ಧ ದೊಡ್ಡ ಕೋಲಾಹಲವೇ ನಡೆದುಹೋಗಿತ್ತು. ಸಂಸತ್ತಿನಲ್ಲೂ ಚರ್ಚೆಗಳಾಗಿದ್ದವು. ಚಿಯರ್ಲೀಡರ್ಗಳಿಂದ ಕ್ರಿಕೆಟ್ಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ಕ್ರಿಕೆಟ್ ಮಂಡಳಿ ಪದಾಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿತ್ತು. ಆದರೆ, ಕಾಲಾನಂತರದಲ್ಲಿ ಎಲ್ಲವೂ ತಣ್ಣಗಾದವು. ಚಿಯರ್ಲೀಡರ್ಗಳ ಉಡುಗೆ ಮೊದಲಿಗಿಂತ ಸ್ವಲ್ಪ ಸಭ್ಯವಾಗಿರುವುದು ನಿಜವಾದರೂ, ಸಾರ್ವಜನಿಕವಾಗಿ ಆಕ್ಷೇಪಿಸುವ ಮಂದಿಯೇ ಕ್ರಿಕೆಟ್ ಮೈದಾನಕ್ಕೆ ಬಂದು ಆಸ್ವಾದಿಸುವುದರಿಂದ ನಿಧಾನವಾಗಿ ಚಿಯರ್ಲೀಡಿಂಗ್ ಸಹ ನಮ್ಮ ಕ್ರಿಕೆಟ್ ಸಂಸ್ಕೃತಿಯ ಭಾಗವಾಗಿದೆ.ದರರ್ಥ ಜನ ಈಗ ಕ್ರಿಸ್ ಗೇಲ್ ಆಟ ನೋಡಲು ಹೋಗುವಂತೆಯೇ ಚಿಯರ್ಲೀಡರ್ಗಳನ್ನು ನೋಡಲೂ ಹೋಗುತ್ತಾರೆ. ನೃತ್ಯಕ್ಕಿಂತ ಹೆಚ್ಚಾಗಿ ನರ್ತಿಸುವವರನ್ನು ನೋಡುತ್ತಾರೆ. ಟಿವಿ ನೇರ ಪ್ರಸಾರಗಳಲ್ಲೂ ಜನ ಪ್ರತೀ ಬೌಂಡರಿ, ಸಿಕ್ಸರ್ಗಳ ಬಳಿಕ ಚಿಯರ್ಲೀಡರ್ಸ್ ನರ್ತನವನ್ನು ಅಪೇಕ್ಷಿಸುತ್ತಾರೆ. ಅವರು ನರ್ತಿಸಿದ್ದನ್ನು ಟಿವಿಯಲ್ಲಿ ತೋರಿಸದಿದ್ದಲ್ಲಿ ಸಿಟ್ಟಾಗುತ್ತಾರೆ.ಬಾರಿ ಐಪಿಎಲ್ನಲ್ಲಿ ಎಲ್ಲಾ ತಂಡಗಳೂ ಚಿಯರ್ಲೀಡರ್ಸ್ಗಳನ್ನು ಹೊಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಪರ ವೈಟ್ಮಿಶ್ಚ್ೀ ತಂಡದ ಹುಡುಗಿಯರು ನರ್ತಿಸುತ್ತಿದ್ದಾರೆ. ಕೋಲ್ಕತ್ತ ತಂಡದ ಚಿಯರ್ಲೀಡರ್ಗಳೂ ಮುದ್ದಾಗಿ ಗೊಂಬೆಯಂತಿದ್ದಾರೆ. ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಮುಂಬೈನ ಏಜೆನ್ಸಿ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಉಕ್ರೇನ್ನ ಹುಡುಗಿಯರು ಆ ತಂಡದ ಪರ ಕುಣಿಯುತ್ತಿದ್ದಾರೆ. ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ಹೀಗೆ ಎಲ್ಲಾ ತಂಡಗಳೂ ತಮ್ಮದೇ ಕುಣಿಯುವ ಬಳಗ ಹೊಂದಿವೆ. ಚೆನ್ನೈ ಸೂಪರ್ಕಿಂಗ್ಸ್ ಚಿಯರ್ಲೀಡರ್ಸ್ ತಂಡದಲ್ಲಿ ಹುಡುಗರೂ ಇರುವುದು ವಿಶೇಷ. ಪುಣೆ ವಾರಿಯರ್ಸ್ ಮಾತ್ರ ವಿದೇಶಿ ಬೆಡಗಿಗೆ ಮಾರುಹೋಗದೆ ದೇಶಿ ಸಾಂಪ್ರದಾಯಿಕ ನರ್ತಕಿಯರನ್ನು ಚಿಯರ್ಕ್ವೀನ್ಸ್ ಹೆಸರಲ್ಲಿ ಪರಿಚಯಿಸಿದೆ. ಅವರಿಂದಾಗಿ ಭರತನಾಟ್ಯ, ಕಥಕ್ಕಳಿ, ಕೂಚಿಪುಡಿ, ಬಂಗಾಳಿ, ಮರಾಠಿ, ಪಂಜಾಬಿ ಸಾಂಪ್ರದಾಯಿಕ ನೃತ್ಯಗಳೂ ಕ್ರಿಕೆಟ್ ಮೈದಾನ ಪ್ರವೇಶಿಸಿವೆ.್ರಕೆಟ್ಗೆ ಅದರಲ್ಲೂ ಟಿ20 ಮಾದರಿಗೆ ಇಂಥ ಚಿಯರ್ಲೀಡರ್ಗಳ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಇದ್ದರೂ, ಇದು ಆಡೆಡ್ ಅಟ್ರಾಕ್ಷನ್ ಎನ್ನುವುದು ನಿಜ. 30-40 ಸಾವಿರ ಜನ ತೆರೆದ ಕಣ್ಣು ಮುಚ್ಚದಂತೆ ನೋಡುತ್ತಿದ್ದರೆ ಆ ಹುಡುಗಿಯರಿಗಾದರೂ ಇರುಸುಮುರಿಸಾಗುವುದಿಲ್ಲವೇ? ನೃತ್ಯ ಅಥವಾ ಮುಖಕ್ಕಿಂತ ಮೈಮಾಟವನ್ನೇ ಆಸೆಕಂಗಳಿಂದ ನೋಡುವಾಗ ಮುಜುಗರವಾಗುವುದಿಲ್ಲವೇ? ಆ ಹುಡುಗಿಯರು ಆ ರೀತಿ ಯೋಚಿಸುವುದೇ ಇಲ್ಲ. ಜನ ನೋಡಲಿ ಎಂದೇ ಆ ವೃತ್ತಿ ಆಯ್ಕೆ ಮಾಡಿಕೊಂಡಿರುವಾಗ ಸಂಕೋಚಪಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳುತ್ತಾರೆ.&lt;br /&gt;ಹಾಗೆಂದು ಭಾರತಕ್ಕೆ ಬಂದಿರುವ ಎಲ್ಲಾ ಚಿಯರ್ಲೀಡರ್ಗಳಿಗೆ ಕ್ರಿಕೆಟ್ ಬಗ್ಗೆ ಗೊತ್ತಿದೆ ಎಂದೇನೂ ಅಲ್ಲ ಅಥವಾ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಅವರಿಗೆ ಇದು ಮತ್ತೊಂದು ಅಸೈನ್ಮೆಂಟ್ ಅಷ್ಟೇ. ಆದರೆ, ಯಾವ ಸಂದರ್ಭದಲ್ಲಿ ನರ್ತಿಸಬೇಕು, ಯಾವ ಸಂದರ್ಭದಲ್ಲಿ ನರ್ತಿಸಬಾರದು ಎಂದೆಲ್ಲಾ ಅವರಿಗೆ ಹೇಳಿಕೊಡಲಾಗಿರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಬಿದ್ದಾಗ ಇದಕ್ಕೆಲ್ಲಾ ಬೇರೆ ಬೇರೆ ಬಗೆಯ ಸ್ಟೆಪ್ಗಳನ್ನು ಅವರು ಅಭ್ಯಾಸ ಮಾಡಿರುತ್ತಾರೆ. ಕೊಚ್ಚಿ ಟಸ್ಕರ್ಸ್ ಪರ ನರ್ತಿಸುತ್ತಿರುವ ಚಿಯರ್ಲೀಡರ್ಗಳು ಉಕ್ರೇನ್ನ ಹುಡುಗಿಯರು. ಅವರಿಗೆ ಕ್ರಿಕೆಟ್ನ ತಲೆಬುಡ ಗೊತ್ತಿಲ್ಲ. ಹಾಗಾಗಿ ಪಂದ್ಯದಲ್ಲಿ ಯಾವ ಸಂದರ್ಭದಲ್ಲಿ ನರ್ತಿಸಬೇಕು ಎಂದು ಅವರಿಗೆ ಸೂಚಿಸುವುದಕ್ಕೆಂದೇ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗಿದೆ.&lt;br /&gt;ಭಾರತದಲ್ಲಿ ಚಿಯರ್ಲೀಡಿಂಗ್ ಮಾಡುವುದು ಈ ಹುಡುಗಿಯರಿಗೊಂದು ವಿನೂತನ ಅನುಭವ. ದಿನಕ್ಕೊಂದು ಹೊಸ ನಗರ, ದಿನ ಬಿಟ್ಟುದಿನ ಪ್ರಯಾಣ, ಹೊಸ ಜಾಗ, ಹೊಸ ಕ್ರೀಡಾಂಗಣ, ಹೊಸ ಪ್ರೇಕ್ಷಕರು.... ಈ ನಡುವೆ ಊರು ಸುತ್ತುವ, ಶಾಪಿಂಗ್ ಮಾಡುವ, ಪಂದ್ಯ ಮುಗಿದ ಮೇಲೆ ತಡರಾತ್ರಿಯವರೆಗೆ ಕ್ರಿಕೆಟಿಗರೊಂದಿಗೆ ಪಾರ್ಟಿ ಮಾಡುವ ಅವಕಾಶ. ಇದೆಲ್ಲದರ ಜೊತೆಗೆ ಕೈತುಂಬಾ ದುಡ್ಡು...ನಲ್ಲಿ ಚಿಯರ್ಲೀಡರ್ಗಳೆಂಬ ಮಾಯಾಂಗನೆಯರು ಕ್ರಿಕೆಟ್ ವೀಕ್ಷಣೆಗೆ ಹೊಸ ಆಯಾಮ ತಂದುಕೊಟ್ಟಿದ್ದಾರೆ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಎಲ್ಲಿಂದಲೋ ಬಂದವರು...ಚಿಯರ್ಲೀಡಿಂಗ್ ಪರಿಕಲ್ಪನೆ ಜಗತ್ತಿಗೆ ಅಮೆರಿಕದ ಕೊಡುಗೆ. ಮಿನ್ನೆಸೊಟ ವಿಶ್ವವಿದ್ಯಾಲಯದಲ್ಲಿ ುಟ್ಬಾಲ್ ಪಂದ್ಯಗಳ ಸಂದರ್ಭದಲ್ಲಿ ಪ್ರೇಕ್ಷಕರು ಸಂಘಟಿತವಾಗಿ ಉತ್ತೇಜಿಸುವ ಹೊಸ ಬಗೆಯನ್ನು ಥಾಮಸ್ ಪೀಬಲ್ಸ್ ಎಂಬಾತ ಪರಿಚಯಿಸಿದರು. ಆದರೆ, ಜಗತ್ತಿನ ಮೊಟ್ಟಮೊದಲ ಚಿಯರ್ಲೀಡರ್ ಮಿನ್ನೆಸೊಟ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಾನ್ನಿ ಕ್ಯಾಂಪ್ಬೆಲ್. ರಾಹ್ ರಾಹ್ ರಾಹ್, ಸ್ಕೈ-ಉ-ಮಾಹ್-ಹೂ-ರಾಹ್! ಹೂ-ರಾಹ್! ವಾರ್ಸಿಟಿ! ವಾರ್ಸಿಟಿ! ವಾರ್ಸಿಟಿ! ಮಿನ್-ಎ-ಸೋ-ಟಾಹ್ ಎಂದು ಅವರು ಮೊದಲ ಬಾರಿ ಉತ್ತೇಜಿಸಿ ಕುಣಿದರು. ನವೆಂಬರ್ 2, 1898ರ ಆ ದಿನವೇ ಚಿಯರ್ಲೀಡಿಂಗ್ ಹುಟ್ಟಿದ ದಿನ. ಅದಾದ ಮೇಲೆ ಮಿನ್ನೆಸೊಟ ವಿವಿ ಯೆಲ್ ಲೀಡರ್ಗಳೆಂಬ 6 ಹುಡುಗರ ತಂಡವನ್ನು ಕಟ್ಟಿತು. 1903ರಲ್ಲಿ ಗಾಮಾ ಸಿಗ್ಮಾ ಎಂಬ ಮೊದಲ ಚಿಯರ್ಲೀಡಿಂಗ್ ಕಂಪೆನಿ ಉಗಮಗೊಂಡಿತು. ಆಗೆಲ್ಲಾ ಚಿಯರ್ಲೀಡಿಂಗ್ ಎನ್ನುವುದು ಗಂಡಸರ ಚಟುವಟಿಕೆಯಾಗಿತ್ತು. ಹುಡುಗಿಯರು ಈ ರಂಗ ಪ್ರವೇಶಿಸಿದ್ದು 1923ರಲ್ಲಿ. ಇದಕ್ಕೆ ಕಾರಣ ಆಗ ಕಾಲೇಜು ಮಟ್ಟದಲ್ಲಿ ಹುಡುಗಿಯರಿಗೆ ಹೆಚ್ಚು ಕ್ರೀಡೆಗಳಿರಲಿಲ್ಲ. ಹಾಗಾಗಿ ಅವರೆಲ್ಲಾ ಖಾಲಿ ಇದ್ದರು. ಜೊತೆಗೆ ಹುಡುಗರನ್ನೆಲ್ಲಾ ಮಹಾಯುದ್ಧಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಹಾಗಾಗಿ ಚಿಯರ್ಲೀಡಿಂಗ್ ತಂಡಗಳಿಗೆ ಹುಡುಗಿಯರನ್ನು ಬಳಸಿಕೊಳ್ಳಲಾಯಿತು. ಈಗ ಜಗತ್ತಿನಾದ್ಯಂತ ಶೇ. 97ರಷ್ಟು ಚಿಯರ್ಲೀಡರ್ಗಳು ಹುಡುಗಿಯರು. ಆದರೆ, ಅಮೆರಿಕದ ಕಾಲೇಜು ಮಟ್ಟದ ಚಿಯರ್ಲೀಡಿಂಗ್ ತಂಡಗಳಲ್ಲಿ ಅರ್ಧದಷ್ಟು ಹುಡುಗರೂ ಇರುತ್ತಾರೆ.ಂದು ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿಂದು ಸುಮಾರು 15 ಲಕ್ಷ ಚಿಯರ್ಲೀಡರ್ಗಳಿದ್ದಾರೆ. ವಿಶ್ವದ ಇತರೆಡೆ ಸುಮಾರು 1 ಲಕ್ಷ ಚಿಯರ್ಲೀಡಿಂಗ್ ಬೆಡಗಿಯರಿದ್ದಾರೆ. ಅಮೆರಿಕದಲ್ಲಿ ಚಿಯರ್ಲೀಡರ್ಗಳಿಲ್ಲದ ಎನ್ಬಿಎ (ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಸಂಸ್ಥೆ) ಲೀಗ್ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಅಲ್ಲಿ ಮಾಧ್ಯಮಿಕ ಶಾಲಾ ಮಟ್ಟದಿಂದಲೇ ಚಿಯರ್ಲೀಡಿಂಗ್ ಪೋಷಿಸಲಾಗುತ್ತದೆ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಮೆರಿಕದಲ್ಲಿ ಶಾಲೆ, ಕಾಲೇಜು ಮಟ್ಟದಲ್ಲಿ ಚಿಯರ್ಲೀಡಿಂಗ್ ಸ್ಪರ್ಧೆಗಳೇ ನಡೆಯುತ್ತವೆ. ಈ ವೃತ್ತಿಯ ಬಗ್ಗೆ ಹಾಲಿವುಡ್ನಲ್ಲಿ ಬ್ರಿಂಗ್ ಇಟ್ ಆನ್ನಂಥ (2000) ಯಶಸ್ವಿ ಹಾಲಿವುಡ್ ಚಿತ್ರಗಳೂ ಬಂದಿವೆ. ಇಂದು ಆಸ್ಟ್ರೇಲಿಯಾ, ಕೆನಡಾ, ಚೀನಾ, ಕೊಲಂಬಿಯಾ, ಫಿನ್ಲೆಂಡ್, ್ರಾನ್ಸ್ಘಿ, ಜರ್ಮನಿ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ಕಿಂಗ್ಡಂ, ದಕ್ಷಿಣ ಆಫ್ರಿಕಾಗಳಲ್ಲಿ ಚಿಯರ್ಲೀಡಿಂಗ್ ಲಾಭದಾಯಕ ವೃತ್ತಿ ಆಯ್ಕೆ ಎನಿಸಿದೆ.್ರಕೆಟ್ನಲ್ಲಿ 2007ರ ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿ ಚಿಯರ್ಲೀಡರ್ಗಳು ನರ್ತಿಸಿದರು. ಈಗ ಇವರಿಲ್ಲದೆ ಐಪಿಎಲ್ ಇಲ್ಲ ಎನ್ನುವಂತಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-6374175360698006956?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/6374175360698006956/comments/default' title='Post Comments'/><link rel='replies' type='text/html' href='http://ragaakshara.blogspot.com/2011/05/blog-post_12.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/6374175360698006956'/><link rel='self' type='application/atom+xml' href='http://www.blogger.com/feeds/2998842447029730227/posts/default/6374175360698006956'/><link rel='alternate' type='text/html' href='http://ragaakshara.blogspot.com/2011/05/blog-post_12.html' title='ಕುಣಿಯೆ ಕುಣಿಯೆ ಚಿಯರುಲತೆ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-l-UU_j4aTUY/Tcu1vv25NpI/AAAAAAAAAQ8/ZMzBG1kMjek/s72-c/16.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-8782745887560328784</id><published>2011-05-12T15:44:00.000+05:30</published><updated>2011-05-14T01:57:44.497+05:30</updated><title type='text'>ಮರಳಿದ ಮಹಾರಾಜ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-blZfRCaaVBI/TcuzkYXR3QI/AAAAAAAAAQ0/BMYm7q8C518/s1600/sourav-ganguly.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/-blZfRCaaVBI/TcuzkYXR3QI/AAAAAAAAAQ0/BMYm7q8C518/s400/sourav-ganguly.jpg" alt="" id="BLOGGER_PHOTO_ID_5605771598789467394" border="0" /&gt;&lt;/a&gt;&lt;br /&gt;ಸಾಕು ಮನೆಯಲ್ಲಿರಬಾರದೇ?&lt;br /&gt;ಇಂಥ ಅವಮಾನ ಬೇಕಿತ್ತೇ. ಅತ್ತು ಕರೆದು ಆಡಬೇಕೇ, ಗೌರವದಿಂದ ನಿರ್ಗಮಿಸಬಾರದೇ...?ಂಥ ಕುಹಕ, ಸಲಹೆ, ಟೀಕೆ, ಲೇವಡಿ, ಅನುಕಂಪದ ಮಾತುಗಳು ಒಂದೇ ಎರಡೇ...ದರೆ, ಸೌರವ್ ಗಂಗೂಲಿ ರಾಜನಂತೆ ಬದುಕಿದವರು. ರಾಜನಂತೆಯೇ ನಿರ್ಗಮಿಸಲು ಬಯಸಿದವರು.&lt;br /&gt;ನಿಜ. ಜೀವನದಲ್ಲಿ ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ, ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು ಬೇರೆಯವರ ನಿಯಂತ್ರಣಕ್ಕೆ ಸಿಲುಕಬಾರದು. ಈ ಸತ್ಯವನ್ನು ಅರ್ಥ ಮಾಡಿಕೊಂಡವರು ಗಂಗೂಲಿ.&lt;br /&gt;ಭಾರತೀಯ ಕ್ರಿಕೆಟ್ನಲ್ಲಿ ಗಂಗೂಲಿಗೊಂದು ವಿಶಿಷ್ಠ ಸ್ಥಾನವಿದೆ. ಹಿಂದೆ ಅವರಂಥ ಇನ್ನೊಬ್ಬರಿರಲಿಲ್ಲ. ಮುಂದೆಯೂ ಅವರ ಜಾಗದಲ್ಲಿ ಇನ್ನೊಬ್ಬರು ಬರುವುದಿಲ್ಲ. ಕ್ರಿಕೆಟ್ ಬದುಕಿನುದ್ದಕ್ಕೂ ಅವರು ತಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದವರು. ತಮ್ಮ ಇಷ್ಟದಂತೆ ಬದುಕಿದವರು. ಅಂಥ ವ್ಯಕ್ತಿ ತಾವು ನಿರ್ಧರಿಸಿದಂತೆಯೇ ಕ್ರಿಕೆಟ್ನಿಂದ ನಿರ್ಗಮಿಸುವುದು ಸರಿಯಾದ ರೀತಿ. ಕೋಲ್ಕತ್ತ ನೈಟ್ರೈಡರ್ಸ್ ತಂಡದವರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಗೂಲಿ ಮನೆಯಲ್ಲೇ ಕುಳಿತರೆ ಅದು ಅವರ ಗೌರವಾರ್ಹ ವೃತ್ತಿಜೀವನಕ್ಕೆ ಮಾಡಿಕೊಳ್ಳುವ ಅವಮಾನ. ಅದೇ ಕಾರಣಕ್ಕೆ ಅವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಸೇರಿಕೊಳ್ಳಲು ಯತ್ನಿಸಿದರು. ಪುಣೆ ವಾರಿಯರ್ಸ್ ಪರ ಅವಕಾಶ ಬಂದಾಗ ಎರಡೂ ಕೈಗಳಿಂದ ಬಾಚಿಕೊಂಡರು. ಈ ಮನುಷ್ಯನಿಗೆ ಇನ್ನೂ ಎಂಥಾ ಆಸೆ ಎನ್ನಬಹುದು. ಆದರೆ, ಟೀಕಿಸುವ ಮುನ್ನ ಗಂಗೂಲಿ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.ಷ್ಟಕ್ಕೂ ಗಂಗೂಲಿ ಏಕೆ ಐಪಿಎಲ್ ಆಡಬಾರದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಗಂಗೂಲಿಗಿನ್ನೂ 38 ವರ್ಷ. ಸಚಿನ್ಗಿಂತ ಅವರು ಆರು ತಿಂಗಳು ದೊಡ್ಡವರಷ್ಟೇ. ಸಚಿನ್ರಷ್ಟು ಅಮೋಘ ಾರ್ಮ್ನಲ್ಲಿ ಅವರು ಇಲ್ಲದಿರಬಹುದು. ಒಂದು ವೇಳೆ ಇದ್ದರೂ, ಅದನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ಇರಲಿಲ್ಲ. ಐಪಿಎಲ್ನಲ್ಲಿ 40 ವರ್ಷ ದಾಟಿದ ಶೇನ್ ವಾರ್ನ್, ಆಡಂ ಗಿಲ್ಕ್ರಿಸ್ಟ್ರಂಥವರೇ ಆಡುತ್ತಿರುವಾಗ ಗಂಗೂಲಿಯೂ ಆಡುವುದರಲ್ಲಿ ಯಾವ ತಪ್ಪೂ ಇಲ್ಲ. ಅನಿಲ್ ಕುಂಬ್ಳೆ ಸ್ವ-ಇಚ್ಛೆಯಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೆಂಟರ್ ಆದರು. ಆದರೆ, ಗಂಗೂಲಿಗೂ ನೀವು ಆಡಬೇಡಿ, ಕೇವಲ ಮೆಂಟರ್ ಆಗಿರಿ ಎಂದು ಹೇಳಲು ಇವರ್ಯಾರು? ಯಾವ ಕಾಲದಲ್ಲಿ ಏನಾಗಬೇಕೆಂದು ನಿರ್ಧರಿಸಬೇಕಾದವರು ಸ್ವತಃ ಗಂಗೂಲಿಯೇ ಹೊರತು ಶಾರುಖ್ ಖಾನ್ ಆಗಲೀ ಕೋಲ್ಕತ್ತ ನೈಟ್ರೈಡರ್ಸ್ ಆಗಲೀ ಅಲ್ಲ.ದು ಗಂಗೂಲಿ ಪಾಲಿಗೆ ಮತ್ತೊಂದು ಪುನರಾಗಮನ. ಮಂಗಳವಾರ ಅವರು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅಜೇಯ 32 ರನ್ ಬಾರಿಸುವ ಮೂಲಕ ಐಪಿಎಲ್ಗೆ ಯಶಸ್ವಿಯಾಗಿ ಮರಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು 75 ರನ್ ಹೊಡೆಯಬಹುದು ಅಥವಾ 5 ರನ್ಗೂ ಔಟಾಗಬಹುದು. ಆದರೆ, ಅವರು ಗಳಿಸುವ ರನ್ಗಿಂತ ಆಡುವುದು ಮುಖ್ಯ. ಭಾರತೀಯ ಕ್ರಿಕೆಟ್ನಲ್ಲಿ ಮೊಹಿಂದರ್ ಅಮರನಾಥ್ ಬಳಿಕ ಅತೀ ಹೆಚ್ಚು ಪುನರಾಗಮನಗೈದಿರುವ ಆಟಗಾರ ಗಂಗೂಲಿ. ಕ್ರಿಕೆಟ್ ವ್ಯವಸ್ಥೆ, ಆಡಳಿತಗಾರರು, ಕೋಚ್ಗಳು ಹಾಗೂ ತಂಡ ಎಷ್ಟು ಬಾರಿ ಕೈಬಿಟ್ಟರೂ ಮತ್ತೆ ಮತ್ತೆ ಮರಳಿ ತಾವು ಛಲ ಬಿಡದ ತ್ರಿವಿಕ್ರಮ ಎಂದು ನಿರೂಪಿಸಿದವರು ಗಂಗೂಲಿ.ಂಗೂಲಿ ಭಾರತ ಕಂಡ ಅತ್ಯುತ್ತಮ ನಾಯಕ. ಆದರೂ, ಕ್ರಿಕೆಟ್ ನಾಯಕತ್ವದ ವಿಚಾರ ಬಂದಾಗ ಅವರನ್ನು ಮೈಕ್ ಬ್ರೇರ್ಲಿ ಅಥವಾ ಮಾರ್ಕ್ ಟೇಲರ್ ಸ್ಥರದಲ್ಲಿ ಹೋಲಿಸಿ ಮಾತನಾಡುವುದಿಲ್ಲ. ಬ್ಯಾಟ್ಸ್ಮನ್ ಆಗಿ ಸಾಕಷ್ಟು ಉನ್ನತ ಸಾಧನೆ ಮಾಡಿದ್ದರೂ, ಅವರು ಸಚಿನ್ ತೆಂಡುಲ್ಕರ್ ಅಥವಾ ಬ್ರಿಯಾನ್ ಲಾರಾ ಲೀಗ್ಗೂ ಸೇರುವವರಲ್ಲ. ಹಿಂದೊಮ್ಮೆ ಗಂಗೂಲಿಯೇ ಹೇಳಿದಂತೆ ತೆಂಡುಲ್ಕರ್, ಲಾರಾ ಮಟ್ಟದ ಪ್ರತಿಭೆಯನ್ನು ದೈವದತ್ತವಾಗಿ ಪಡೆದು ಬಂದಾಗ ಸಾಧನೆಯಲ್ಲಿ ಎತ್ತರಕ್ಕೇರುವುದು ಸುಲಭ. ಆದರೆ, ನನ್ನಂಥ ಒಬ್ಬ ಸಾಮಾನ್ಯ ಆಟಗಾರ ಎತ್ತರಕ್ಕೇರುವುದು ಬಹಳ ಕಷ್ಟ.ಂಗೂಲಿ 1992ರಲ್ಲೇ ಏಕದಿನ ಪದಾರ್ಪಣೆ ಮಾಡಿದವರು. ನಿರಾಶಾದಾಯಕ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ದೀರ್ಘಕಾಲ ಮೂಲೆಗುಂಪಾಗಿದ್ದರು. ಆದರೆ, 1996ರಲ್ಲಿ ಅವರು ಮರಳಿದರು. ಚೊಚ್ಚಲ ಟೆಸ್ಟ್ನಲ್ಲೇ ಶತಕ ಬಾರಿಸಿದರು. ಕ್ರಿಕೆಟ್ ಜೀವನದಲ್ಲಿ ಮುಂದಿನ 10 ವರ್ಷ ಕಾಲ ಅವರು ಹೊಸ ಹೊಸ ಶೃಂಗಗಳನ್ನು ಏರಿದರು. ಏಕದಿನ ಕ್ರಿಕೆಟ್ನಲ್ಲಿ ಸಚಿನ್ಗಿಂತ ವೇಗವಾಗಿ 10,000 ರನ್ ಗಳಿಸಿದರು. ಸಚಿನ್ ಜೊತೆ ವಿಶ್ವದಾಖಲೆ ಜೊತೆಯಾಟಗಳನ್ನು ಆಡುವ ಮೂಲಕ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡರು. ಆ್ಸೈಡ್ನಲ್ಲಿ ದೇವರು ಎಂಬ ಬಣ್ಣನೆಗೊಳಗಾದರು. ಸಚಿನ್ ನಾಯಕತ್ವ ನನಗಲ್ಲ ಎಂದಾಗ ಭಾರತ ತಂಡದ ನಾಯಕರೂ ಆದರು. ಮ್ಯಾಚ್ಫಿಕ್ಸಿಂಗ್ ಕರಾಳ ದಿನಗಳ ಬಳಿಕ ಕುಗ್ಗಿದ್ದ ಭಾರತ ತಂಡಕ್ಕೆ ಹೊಸ ಚೈತನ್ಯ ತುಂಬಿದರು. ಭಾರತ 2011ರಲ್ಲಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದರೆ ಆ ಯಶಸ್ಸಿನ ಪ್ರಕ್ರಿಯೆಯ ಬೀಜ ಬಿತ್ತಿದವರು ಗಂಗೂಲಿ. ಅವರು ತಂಡದ ಆಟಗಾರರಿಗೆ ಯಾವುದೇ ತಂಡದ ವಿರುದ್ಧ, ಯಾವುದೇ ದೇಶದಲ್ಲಿ ಗೆಲ್ಲುವ ಛಲ, ಮನೋಬಲ ತುಂಬಿದರು. ಅವರ ನಾಯಕತ್ವದಲ್ಲಿ ಭಾರತ ತಂಡ ವಿದೇಶಗಳಲ್ಲೂ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐತಿಹಾಸಿಕ ಜಯ, ಆಸೀಸ್ ಪ್ರವಾಸದಲ್ಲೇ ಡ್ರಾ ಮಾಡಿಕೊಂಡಿದ್ದು ಅವರ ವೃತ್ತಿಜೀವನ ಹೈಲೈಟ್. ಭಾರತದ ಯಶಸ್ವಿ ವಿಶ್ವಕಪ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಇವರೆಲ್ಲಾ ಗಂಗೂಲಿ ಬೆಂಬಲ ಕೊಟ್ಟು ಬೆಳೆಸಿದ ಆಟಗಾರರು. ಗಂಗೂಲಿಗಾಗಿ ನಾನು ಪ್ರಾಣ ಕೊಡಲೂ ರೆಡಿ ಎಂದು ಯುವರಾಜ್ ಒಮ್ಮೆಹೇಳಿದ್ದರು. ಈಗ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಯುವರಾಜ್ ನಾಯಕತ್ವದಡಿ ಗಂಗೂಲಿ ಆಡುತ್ತಿರುವುದು ವಿಶೇಷವೋ, ವಿಪರ್ಯಾಸವೋ ಕಾಲವೇ ಹೇಳಬೇಕು.ಂಗೂಲಿ ಯಾರಿಗೂ ಏನನ್ನೂ ನಿರೂಪಿಸಿ ತೋರಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಅವರು ಕ್ರಿಕೆಟ್ ಆಡುತ್ತಿರುವುದು ತಮ್ಮ ಸಂತೋಷಕ್ಕೆ, ಆತ್ಮತೃಪ್ತಿಗೆ. ಅವರ ಜೀವನ ನಿರ್ವಹಣೆಗೆ ಕ್ರಿಕೆಟ್ ಅಗತ್ಯವಿಲ್ಲ. ಪುಣೆ ಪರ ಆಡುವುದರಿಂದ ಸಿಗುವ 80 ಲಕ್ಷ ಅವರು ತಲೆತಲಾಂತರದಿಂದ ಹೊಂದಿರುವ ಕುಟುಂಬ ಆಸ್ತಿಯ ಎದುರು ಸಣ್ಣ ಮೊತ್ತ. ಆದರೆ, ಅವರು ಇಷ್ಟು ಹಟ ತೊಟ್ಟು ಕ್ರಿಕೆಟ್ ಆಡುವುದು ಆಟದ ಮೇಲಿನ ತುಡಿತಕ್ಕಾಗಿ, ವ್ಯಾಮೋಹಕ್ಕಾಗಿ. ಅಷ್ಟಕ್ಕೂ ಐಪಿಎಲ್ನಲ್ಲಿ ಅವರು ಯಾರ ಅವಕಾಶ ಕಿತ್ತುಕೊಳ್ಳುವ ಪ್ರಶ್ನೆಯೂ ಇಲ್ಲ. ಕ್ರಿಕೆಟ್ನಲ್ಲಿ ತಾವು ಔಟ್ಡೇಟೆಡ್ ಅಲ್ಲ, ಇಂದಿಗೂ ಸಲ್ಲುವವರು ಎಂದು ತಮಗೆ ತಾವು ಸಾಬೀತು ಪಡಿಸಿಕೊಳ್ಳುವ ಹಟವಷ್ಟೇ ಅವರಿಗಿರುವುದು.ಂಗೂಲಿಯನ್ನು ಮೂಲೆಗುಂಪು ಮಾಡಲು ಯತ್ನಿಸಿದ ಗ್ರೆಗ್ ಚಾಪೆಲ್, ಜಾನ್ ಬುಕನನ್ ಸ್ವತಃ ಮೂಲೆಗುಂಪಾದರು. ಅವರಿಂದು ಯಾರಿಗೂ ನೆನಪಿಲ್ಲ. ಆದರೆ, ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ಹಿಂದೆಯೂ ಇದ್ದರು, ಇಂದು ಇದ್ದಾರೆ, ಮುಂದೂ ಇರುತ್ತಾರೆ.&lt;br /&gt;ನಾನಾ ರೀತಿ, ನಾನಾ ಪಾತ್ರಗಳಲ್ಲಿ ಅವರು ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸುವುದು ಸಾಕಷ್ಟಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-8782745887560328784?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/8782745887560328784/comments/default' title='Post Comments'/><link rel='replies' type='text/html' href='http://ragaakshara.blogspot.com/2011/05/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/8782745887560328784'/><link rel='self' type='application/atom+xml' href='http://www.blogger.com/feeds/2998842447029730227/posts/default/8782745887560328784'/><link rel='alternate' type='text/html' href='http://ragaakshara.blogspot.com/2011/05/blog-post.html' title='ಮರಳಿದ ಮಹಾರಾಜ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-blZfRCaaVBI/TcuzkYXR3QI/AAAAAAAAAQ0/BMYm7q8C518/s72-c/sourav-ganguly.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-5831184696934653510</id><published>2011-02-17T22:22:00.000+05:30</published><updated>2011-02-17T22:23:09.802+05:30</updated><title type='text'>ಗೆಲುವಿನ  ಪ್ರವೃತ್ತಿ</title><content type='html'>ನಾಡಿದ್ದು ವಿಶ್ವಕಪ್ ಕ್ರಿಕೆಟ್ ಮಹಾಸಮರ ಪ್ರಾರಂಭ. ಗೆಲುವಿಗೆ ೇವರಿಟ್ಗಳಲ್ಲಿ ಒಂದಾಗಿರುವ ಆತಿಥೇಯ ಭಾರತದ ದಂಡನಾಯಕ ಎಂಎಸ್ ಧೋನಿ, ತಂಡವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂಬಂಥ ಮಾತುಗಳನ್ನು ಕೊನೆಯ ಕ್ಷಣದಲ್ಲಿ ಆಡಿದ್ದಾರೆ. ದಯವಿಟ್ಟು ಅಂಥ ನಕಾರಾತ್ಮಕ ಮಾತುಗಳು ಬೇಡ. ಶಕ್ತಿ ಮೀರಿ ಆಡಿ, ಸ್ಫೂರ್ತಿಯಿಂದ ಆಡಿ. ಗೆಲುವಿನ ಮನೋವೃತ್ತಿ ಯಿಂದ ಆಡಿ ಎಂದು ಸ್ಫೂರ್ತಿ ತುಂಬುವ ಪ್ರಯತ್ನ ಇಲ್ಲಿದೆ.&lt;br /&gt;&lt;br /&gt;&lt;br /&gt;ಮೊದಲಿಗೆ ಒಂದು ಓಶೋ ಕಥೆ....&lt;br /&gt;ಸಾಮಾನ್ಯ ರೈತನೊಬ್ಬ ಮೊದಲ ಬಾರಿಗೆ ಗುಡ್ಡವೇರಲು ಹೊರಟ. ಆ ಗುಡ್ಡ ಅವನ ಹಳ್ಳಿಯಿಂದ ಬಹಳ ದೂರವೇನೂ ಇರಲಿಲ್ಲ. ಆದರೂ, ಸಹ ಅಂದಿನವರೆಗೆ ಆತ ಅಲ್ಲಿಗೆ ಹೋಗಿರಲಿಲ್ಲ. ಆತನ ಹೊಲದಿಂದ ಗುಡ್ಡದ ನೆತ್ತಿ ಕಾಣುತ್ತಿತ್ತು. ಒಮ್ಮೆಯಾದರೂ ಆ ಗುಡ್ಡ ಏರಲೇಬೇಕೆಂಬ ಹಂಬಲ ಅವನಲ್ಲಿತ್ತು. ಆದರೆ, ಅಲ್ಲಿಗೆ ಹೋಗಬೇಕಾದರೆ, ರಾತ್ರಿಯೇ ಎದ್ದು ಹೊರಡಬೇಕಿತ್ತು. ಅದಕ್ಕಾಗಿ ಅವನಿಗೊಂದು ಕಂದೀಲು ಬೇಕಿತ್ತು. ಕೊನೆಗೂ ಒಂದು ದಿನ ಕಂದೀಲು ತಂದ ಅವನು ರಾತ್ರಿಯೇ ಎದ್ದು ಹೊರಡುವುದೆಂದು ನಿಶ್ಚೈಸಿ ಬೇಗನೆ ಮಲಗಿದ. ಗುಡ್ಡ ಏರುತ್ತೇನೆಂಬ ಸಂಭ್ರಮದಲ್ಲಿ ಅವನಿಗೆ ನಿದ್ರೆಯೇ ಬರಲಿಲ್ಲ. ಕೊನೆಗೂ ರಾತ್ರಿ 2 ಗಂಟೆಗೆ ಎದ್ದು ಕಂದೀಲು ಹಿಡಿದು ಗುಡ್ಡದ ಕಡೆಗೆ ಹೊರಟ. ಮನೆಯಿಂದ ಸ್ವಲ್ಪ ದೂರ ಸಾಗಿದ ಬಳಿಕ ಆತನಿಗೆ ಇದು ಅಮಾವಾಸ್ಯೆ ರಾತ್ರಿ ಎನ್ನುವುದು ನೆನಪಾಯಿತು. ಆತನ ಕಂದೀಲಿನಲ್ಲೋ ದೂರದವರೆಗೆ ಬೆಳಕು ಕಾಣುತ್ತಿರಲಿಲ್ಲ. ಮಿಣುಕು ಬೆಳಕಿನಲ್ಲಿ ಹತ್ತು ಹೆಜ್ಜೆಯಷ್ಟೂ ದಾರಿ ಕಾಣುತ್ತಿರಲಿಲ್ಲ. ರೈತನಿಗೆ ಯೋಚನೆಗಿಟ್ಟುಕೊಂಡಿತು. ತಾನಿನ್ನೂ ಹತ್ತು ಮೈಲಿ ಸಾಗಬೇಕು. ಈ ಕಂದೀಲು ಹತ್ತು ಹೆಜ್ಜೆಗಿಂತ ಹೆಚ್ಚು ದಾರಿ ತೋರಿಸುವುದಿಲ್ಲ. ಈ ಕತ್ತಲೆಯಲ್ಲಿ ಇದನ್ನು ನಂಬಿಕೊಂಡು ಹೇಗೆ ಹೋಗುವುದು? ಇದು  ಸಮುದ್ರವನ್ನು ದಾಟಲು ತೆಪ್ಪದಲ್ಲಿ ಹೋದಂತೆಯೇ ಸರಿ ಎಂದು ಹೆದರಿಕೊಂಡು ಅಲ್ಲಿಯೇ ಕುಳಿತ.&lt;br /&gt;ಇದೇ ಸಂದರ್ಭದಲ್ಲಿ ವೃದ್ಧನೊಬ್ಬ ಪುಟ್ಟ ಕಂದೀಲು ಹಿಡಿದುಕೊಂಡು ಎತ್ತಲೋ ಹೊರಟಿದ್ದ. ರೈತ ಆತನನ್ನು ನಿಲ್ಲಿಸಿ ತನ್ನ ಸಮಸ್ಯೆ ಹೇಳಿಕೊಂಡ. ಇದನ್ನು ಕೇಳಿ ಆ ವೃದ್ಧ ನಕ್ಕು ಹೇಳಿದ... ಹುಚ್ಚ! ನೀನು ಮೊದಲು ಹತ್ತು ಹೆಜ್ಜೆ ನಡೆ. ಎಷ್ಟು ಕಾಣುವುದೋ ಅಷ್ಟು ಮುಂದೆ ನಡೆ. ಆಗ ಇನ್ನಷ್ಟು ಮುಂದೆ ದಾರಿ ಕಾಣುತ್ತದೆ. ಒಂದು ಹೆಜ್ಜೆ ಕಾಣಿಸಿದರೆ, ಅದರಿಂದ ಭೂಮಿಗೇ ಪ್ರದಕ್ಷಿಣೆ ಹಾಕಬಹುದು... ರೈತ ಅರ್ಥ ಮಾಡಿಕೊಂಡ. ಬೆಳಗು ಮೂಡುವ ಹೊತ್ತಿಗೆ ಗುಡ್ಡ ಏರಿದ್ದ...&lt;br /&gt;ಈ ಕಥೆಯ ತಾತ್ಪರ್ಯವಿಷ್ಟೇ. ಎಲ್ಲಾ ದೊಡ್ಡ ದೊಡ್ಡ ಪ್ರಯಾಣಗಳೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭಗೊಳ್ಳುತ್ತವೆ. ಕ್ರಿಕೆಟ್ನಲ್ಲಿ ವಿಶ್ವಕಪ್ಗಿಂಥ ದೊಡ್ಡ ಟೂರ್ನಿ ಇಲ್ಲ. ಇಲ್ಲಿ ಕೂಡ ಮೊದಲ ಹೆಜ್ಜೆಯಲ್ಲೇ ವಿಶ್ವಕಪ್ ಗೆದ್ದುಬಿಡಲು ಸಾಧ್ಯವಿಲ್ಲ. ಒಂದೊಂದೇ ಹೆಜ್ಜೆಯನ್ನು ಮುತುವರ್ಜಿಯಿಂದ, ಎಚ್ಚರಿಕೆಯಿಂದ ಇಡುತ್ತ ಮುಂದೆ ಸಾಗಬೇಕು. ಈ ಪ್ರಯಾಣದಲ್ಲಿ ಅರಿವೇ ಗುರು.&lt;br /&gt;ಈ ಬಾರಿಯ ವಿಶ್ವಕಪ್ ಮಾದರಿ ಯಾವ ರೀತಿ ಇದೆಯೆಂದರೆ 9 ಪಂದ್ಯ ಗೆಲ್ಲುವವನು ವಿಶ್ವವಿಜೇತ ಎನಿಸಬಹುದು. ತಲಾ 7 ತಂಡಗಳ 2 ಗುಂಪುಗಳಿಂದ ತಲಾ 4 ತಂಡಗಳು ಕ್ವಾರ್ಟರ್ೈನಲ್ಗೆ ಅರ್ಹತೆ ಗಳಿಸುವ ಹಿನ್ನೆಲೆಯಲ್ಲಿ ಲೀಗ್ ಹಂತದ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದವರಿಗೂ ನಾಕೌಟ್ ಘಟ್ಟ ತಲುಪುವ ಅವಕಾಶ ಸಿಗಬಹುದು. ಆದರೆ, ಕೊನೆಯ ಮೂರು ಪಂದ್ಯಗಳಲ್ಲಿ ಮಾತ್ರ ಗೆಲ್ಲಲೇ ಬೇಕು. ಅಲ್ಲಿ ಒಂದು ಹೆಜ್ಜೆ ಎಡವಿದರೂ ಅದೇ ಟ್ರೋಫಿಗೂ ತಂಡಕ್ಕೂ ನಡುವೆ ತಡೆಗೋಡೆಯಾಗಿಬಿಡುತ್ತದೆ.&lt;br /&gt;ವಿಶ್ವಕಪ್ಗೆ ಈಗ ಆಟದ ದೃಷ್ಟಿಯಿಂದ ಸಿದ್ಧತೆ ನಡೆಸುವುದೇನೂ ಇರುವುದಿಲ್ಲ. ಏಕೆಂದರೆ, ಟೂರ್ನಿಗೆ ಒಂದೆರಡು ವರ್ಷ ಮುನ್ನವೇ ಅಂಥ ಪ್ರಯತ್ನ ಆರಂಭವಾಗಿರುತ್ತದೆ. ಕೊನೆಯ ಘಟ್ಟದಲ್ಲಿ ಏನಿದ್ದರೂ ಮಾನಸಿಕ ಸಿದ್ಧತೆಯ ಕಾಲ. ನಾವು ಎಷ್ಟೇ ಸಮರ್ಥರಾಗಿದ್ದರೂ, ವಿಶ್ವಕಪ್ ವೇದಿಕೆಯಲ್ಲಿ ಅದನ್ನು ಪ್ರದರ್ಶಿಸದಿದ್ದಲ್ಲಿ ಅಂಥ ಸಾಮರ್ಥ್ಯಕ್ಕೆ ಬೆಲೆಯಿಲ್ಲ. ಆದರೆ, ವಿಶ್ವಕಪ್ಗೆ  5 ದಿನ ಬಾಕಿ ಇದ್ದಾಗ ಭಾರತ ತಂಡದ ನಾಯಕ ಎಂಎಸ್ ಧೋನಿ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಹೇಳಿ ವಿವಾದ ಹುಟ್ಟುಹಾಕಿದರು. ಬಿಡುವಿಲ್ಲದೆ ಕ್ರಿಕೆಟ್ ಆಡಿ ಮನಸ್ಸು ಜಡ್ಡುಗಟ್ಟಿದೆ ಎಂಬ ಮಾತನ್ನು ಅವರು ಹೇಳಿದರು. ಅದು ವಾಸ್ತವವೇ ಇರಬಹುದು. ಆದರೆ, ಅದನ್ನು ಹೇಳಿಕೊಳ್ಳುವ ಸಮಯ ಇದಾಗಿರಲಿಲ್ಲ.&lt;br /&gt;ಈ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಚಾಂಪಿಯನ್ಸ್ ಲೀಗ್ ಇವೆಲ್ಲಾ ವ್ಯಾಪಾರಿ ದೃಷ್ಟಿಕೋನದಿಂದ ನಡೆಯುವಂಥವು. ಇವುಗಳಲ್ಲಿ ಆಟಗಾರರಿಗಿರುವುದು ಕೇವಲ ಸ್ವ-ಹಿತಾಸಕ್ತಿ ಮಾತ್ರ. ಆದರೆ, ವಿಶ್ವಕಪ್ನಂಥ ಟೂರ್ನಿ ತಾಯ್ನಡನ್ನು ಪ್ರತಿನಿಧಿಸಿ ಹೆಮ್ಮೆಯ ಸಾಧನೆ ಮಾಡಲು ಇರುವ  ಅಪೂರ್ವ ಅವಕಾಶ. ಹಿಂದೆಲ್ಲಾ ತಾಯ್ನಡಿನ ರಕ್ಷಣೆಗಾಗಿ ಮಧ್ಯರಾತ್ರಿ ನಿದ್ರೆಯಿಂದೆದ್ದು ಯುದ್ಧಕ್ಕೆ ಓಡಿದ ನಿದರ್ಶನಗಳಿವೆ. ಈ ಕಾಲದಲ್ಲಿ ರಾಷ್ಟ್ರ-ರಾಷ್ಟ್ರಗಳ ಕ್ರಿಕೆಟ್ ಪಂದ್ಯಗಳೇ ಯುದ್ಧಗಳು. ಅದರಲ್ಲೂ ವಿಶ್ವಕಪ್ನಂಥ ಮಹಾಸಮರ ಎದುರಿಗಿರುವಾಗ ದೈಹಿಕವಾಗಿ, ಮಾನಸಿಕವಾಗಿ ಅದನ್ನು ಗೆಲ್ಲಲು ಮುಂದಾಗಬೇಕು. ಅಂಥ ಸಂದರ್ಭದಲ್ಲಿ ನಮ್ಮ ಅತೃಪ್ತಿ, ಆಯಾಸಗಳೆಲ್ಲಾ ಮೂಲೆಗುಂಪಾಗಬೇಕು. ಸಕಾರಾತ್ಮಕ ಮನೋಭಾವವಿಲ್ಲದೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಧೋನಿ ಇನ್ನೂ ಮಾಗಬೇಕು.&lt;br /&gt;ಇಲ್ಲಿ ಮುಖ್ಯವಾಗುವುದು ವಿಜೇತನ ಮನೋವೃತ್ತಿ. ವಿಜೇತರು ಯಾವಾಗಲೂ ಒಂದೇ ಬಗೆಯ ಮನೋವೃತ್ತಿ ಹೊಂದಿರುತ್ತಾರೆಯೇ ಅಥವಾ ವಿಜೇತರು ಒಂದೇ ಬಗೆಯ ಚಿಂತನಾ ಕ್ರಮ ಹೊಂದಿರುತ್ತಾರೆಯೇ ಎಂದು ಸುಪ್ರಸಿದ್ಧ ವಾಗ್ಮಿ ವಿನ್ಸಿ ಲೊಂಬಾರ್ಡಿ ಪ್ರಶ್ನೆ ಎತ್ತುತ್ತಾರೆ. ಅದಕ್ಕೆ ಉತ್ತರವೂ ಅವರ ಬಳಿಯೇ ಇದೆ. ಅದು ಗೆಲ್ಲಲೇ ಬೇಕೆಂಬ ಸಂಕಲ್ಪ. ಸಾಧಿಸಲೇಬೇಕೆಂಬ ಸಂಕಲ್ಪ. ಬದುಕು ನಮ್ಮತ್ತ ಅನೇಕ ಸವಾಲುಗಳನ್ನು ಒಡ್ಡುತ್ತವೆ. ನಾವು ಯಾವ ಮನೋವೃತ್ತಿಯಿಂದ ಆ ಸವಾಲುಗಳನ್ನು ಎದುರಿಸುತ್ತೇವೆ ಅಥವಾ ಎಂಥಾ ಮನೋಭಾವದಿಂದ ಈ ಸವಾಲುಗಳಿಗೆ ಸಜ್ಜಾಗುತ್ತೇವೆ ಎನ್ನುವುದು ನಮ್ಮ ಬದುಕು ಬರಡಾಗಿರುವುದೇ, ಬೆಳಕಾಗಿರುವುದೇ ಎನ್ನುವುದನ್ನು ನಿರ್ಧರಿಸುತ್ತವೆ ಎಂದು ಅವರು ಹೇಳುತ್ತಾರೆ.&lt;br /&gt;ಅಲ್ಲಿ ಇರಬೇಕಾಗಿರುವುದು ನಮ್ಮಿಂದ ಸಾಧ್ಯ ಎನ್ನುವಂಥ ಮನೋವೃತ್ತಿ. ಬದುಕಿನ ಹೋರಾಟವಿರಲಿ, ವಿಶ್ವಕಪ್ ಇರಲಿ. ನಮ್ಮಿಂದ ಗೆಲ್ಲಲು ಸಾಧ್ಯ ಎಂಬ ಮನೋಭಾವ ಇರಬೇಕು. ಮೊದಲು ಮನಸ್ಸಿನಲ್ಲಿ ಗೆಲ್ಲಬೇಕು.&lt;br /&gt;ಇದೇ ವಿಷಯವನ್ನು ಮೇರಿ ಕೇ ೌಂಡೇಷನ್ನ ಸಂಸ್ಥಾಪಕಿ ಹಾಗೂ ನಿವೃತ್ತ ಅಧ್ಯಕ್ಷೆ ಮೇರಿ ಕೇ ಆಶ್ ಬೇರೆ ರೀತಿ ಹೇಳುತ್ತಾರೆ. ಅವರ ಪ್ರಕಾರ ಪ್ರಪಂಚದಲ್ಲಿ ನಾಲ್ಕು ಬಗೆಯ ಜನರಿರುತ್ತಾರೆ. ಮೊದಲನೆ ವರ್ಗ ಏನೇ ಆಗುವುದಾದರೂ ತಮ್ಮ ಪ್ರಯತ್ನದಿಂದಲೇ ಆಗಲಿ ಎಂದು ಸದಾ ಪ್ರಯತ್ನಶೀಲರಾಗಿರುವವರು; ಇನ್ನೊಂದು ವರ್ಗ ಏನಾಗುವುದೋ ಆಗಲಿ ಎಂದು ನಿಂತು ನೋಡುವವರು; ಅರೇ ಇದೇನಾಯಿತು ಎಂದು ಅಚ್ಚರಿ ಪಡುವವರದು ಮೂರನೇ ವರ್ಗ; ನಾಲ್ಕನೇ ವರ್ಗದವರಿಗೆ ತಮ್ಮ ಸುತ್ತಮುತ್ತ ಏನೇನು ನಡೆದಿದೆ, ನಡೆಯುತ್ತಿದೆ ಎಂಬ ಪರಿವೆ-ಅರಿವೇ ಇರುವುದಿಲ್ಲ. ವಿಶ್ವಕಪ್ ಗೆಲ್ಲುವವರು ಮೊದಲ ವರ್ಗಕ್ಕೆ ಸೇರಿರುತ್ತಾರೆ.&lt;br /&gt;ಭಾರತ 2007ರ ವಿಶ್ವಕಪ್ನಲ್ಲಿ  ಬಾಂಗ್ಲಾದೇಶದ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಆ ಸಂದರ್ಭದಲ್ಲಿ ಇಡೀ ತಂಡ ನಕಾರಾತ್ಮಕ ಗಾಳಿಯಲ್ಲೇ ಉಸಿರಾಡುತ್ತಿತ್ತು. ಕೋಚ್ ಚಾಪೆಲ್ ಹೆಚ್ಚು ಕಡಿಮೆ ತಂಡವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅಲ್ಲಿ ಚಾಪೆಲ್ ಗುಂಪು, ಸಚಿನ್ ಗುಂಪು, ನಾಯಕ ದ್ರಾವಿಡ್ ಗುಂಪು, ಗಂಗೂಲಿ ಗುಂಪು ಹೀಗೆ ಅನೇಕ ಗುಂಪುಗಳಾಗಿ ತಂಡ ಛಿದ್ರವಾಗಿತ್ತು. ಅದರ ಪರಿಣಾಮ ಭಿನ್ನವೇನೂ ಆಗಲಿಲ್ಲ.&lt;br /&gt;ನಾವು ಸಕಾರಾತ್ಮಕ ಮನಸ್ಸು ಮತ್ತು ನಂಬಿಕೆ ಹೊಂದಿದ್ದರೆ, ಏನಾದರೂ ಕೆಡುಕು ಘಟಿಸಿದಾಗಲೂ ಹತಾಶರಾಗುವ ಬದಲು ಅದರಿಂದ ಪಾಠ ಕಲಿಯುತ್ತೇವೆ ಮತ್ತು ಅದರಿಂದ ಒಳಿತೇ ಆಗುತ್ತವೆ. ಇಂಥ ಅನುಭವಗಳಿಂದ ನಾವು ಬೆಳೆಯುತ್ತೇವೆ ಎಂದು ಸೀಕ್ರೆಟ್ಸ್ ಆ್ ಸ್ಟೇಯಿಂಗ್ ಇನ್ ಲವ್ ಎಂಬ ಪ್ರಸಿದ್ಧ ಕೃತಿಯ ಲೇಖಕಿ ರುತ್ ಸಾ್ಟೆೆರ್ಡ್ ಪೀಲ್ ಬರೆಯುತ್ತಾರೆ.&lt;br /&gt;ಇಂಥ ಮನೋವೃತ್ತಿಯ ಬಗ್ಗೆಯೇ ಕುವೆಂಪು&lt;br /&gt;&lt;span style="font-weight: bold;"&gt;ಏರು, ಏರು, ಮನವೆ, ಏರು;&lt;/span&gt;&lt;br /&gt;&lt;span style="font-weight: bold;"&gt;ಭೂಮಿ ವ್ಯೋಮಗಳಲಿ ಹಾರು;&lt;/span&gt;&lt;br /&gt;&lt;span style="font-weight: bold;"&gt;ಲೋಕ ಲೋಕಗಳನು ಮೀರು;&lt;/span&gt;&lt;br /&gt;&lt;span style="font-weight: bold;"&gt;ಮಾತೃ ಚರಣತಲವ ಸೇರು;&lt;/span&gt;&lt;br /&gt;&lt;span style="font-weight: bold;"&gt;ಏರು, ಮನವೆ, ಏರು, ಏರು!&lt;/span&gt;&lt;br /&gt;-ಎಂದು ಬರೆಯುತ್ತಾರೆ.&lt;br /&gt;ಗೆಲುವು ಅರ್ಥಾತ್ ಯಶಸ್ಸು ಯಾವತ್ತೂ ಸುಲಭಕ್ಕೆ ಲಭಿಸುವುದಿಲ್ಲ. ವಿಶ್ವಕಪ್ ಪಂದ್ಯಗಳನ್ನೇ ಉದಾಹರಣೆ ತೆಗೆದುಕೊಂಡರೆ ಭಾರತವೇ ಎರಡು ಬಾರಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾಗಿದ್ದ ಪಂದ್ಯಗಳನ್ನು ಕೇವಲ 1 ರನ್ ಅಂತರದಿಂದ (1987 ಹಾಗೂ 1992ರ ಟೂರ್ನಿ) ಸೋತಿದೆ. ಈ ಬಾರಿಯಂತೂ 45 ದಿನಗಳ ಸುದೀರ್ಘ ಟೂರ್ನಿಯಲ್ಲಿ ಹಾಗೂ ಪ್ರತೀ ಪಂದ್ಯದಲ್ಲಿ ಗೆಲುವಿನ ದಡ ಮುಟ್ಟುವ ತನಕ ಏಕಾಗ್ರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.&lt;br /&gt;ಕ್ರೀಡೆಯಲ್ಲಿ ಯಾವಾಗಲೂ ಪಂದ್ಯಗಳನ್ನು ಗೆದ್ದವರೇ ಗೆದ್ದಿರುವುದಿಲ್ಲ! ಅನೇಕ ಬಾರಿ ಎದುರಾಳಿ ಸೋತಿದ್ದರಿಂದ ಇವರಿಗೆ ಲಾಭವಾಗಿರುತ್ತದೆ. ಬಿಲಿಯರ್ಡ್ಸ್ ಮಾಂತ್ರಿಕ ಗೀತ್ ಸೇಥಿ ಈ ರೀತಿ ಗೆಲುವಿನ ದವಡೆಯಿಂದ ಸೋಲನ್ನು ಸಂಪಾದಿಸುವುದು ಹೇಗೆ ಎನ್ನುವುದಕ್ಕೆ ನಿದರ್ಶನವಾಗಿ ತಮ್ಮ ಯಶಸ್ಸು ವರ್ಸಸ್ ಆನಂದ ಕೃತಿಯಲ್ಲಿ ಒಂದು ಕಥೆ ಹೇಳುತ್ತಾರೆ.&lt;br /&gt;ಥಾಯ್ಲೆಂಡ್ನ ಜೇಮ್ಸ್ ವಾಟನ್ 1989ರಲ್ಲಿ 18ನೇ ವಯಸ್ಸಿನಲ್ಲೇ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಇಂಗ್ಲೆಂಡ್ನಲ್ಲಿ ನಡೆಯುವ ವೃತ್ತಿಪರ ಸ್ನೂಕರ್ ಆಡಲು ತೆರಳಿದ್ದರು.&lt;br /&gt;ಇಂಗ್ಲೆಂಡ್ ಸೇರಿದ 3ನೇ ವರ್ಷದಲ್ಲೇ ವಾಟನ್, ಮೈಟ ವರ್ಲ್ಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿೈನಲ್ ತಲುಪಿದರು. ಆ ಟೂರ್ನಿಯಲ್ಲಿ ಗೆದ್ದವರಿಗೆ ಆ ದಿನಗಳಲ್ಲಿ ದಾಖಲೆ 2 ಲಕ್ಷ ಪೌಂಡ್ ಬಹುಮಾನ ನೀಡಲಾಗುತ್ತಿತ್ತು.&lt;br /&gt;ಪ್ರಖ್ಯಾತ ಜಿಮ್ಮಿ ವೈಟ್ ವಿರುದ್ಧ  ಉಪಾಂತ್ಯ ಪಂದ್ಯದ ದಿನ ವಾಟನ್ ಅಸ್ವಾಸ್ಥ್ಯದಿಂದ ಬಳಲುತ್ತಿದ್ದರು. ಆದರೂ, 19 ್ರೇಮ್ಗಳ ಆ ಪಂದ್ಯದಲ್ಲಿ ಅಸಾಧಾರಣ ಆಟವಾಡಿ ಒಂದು ಹಂತದಲ್ಲಿ 8-6 ್ರೇಮ್ಗಳಿಂದ ಮುನ್ನಡೆ ಸಾಧಿಸಿಬಿಟ್ಟರು. ಆಗ ಗೆಲುವು ಅವರ ಬೆರಳ ತುದಿಯಲ್ಲಿತ್ತು. ಆದರೆ, ಇದ್ದಕ್ಕಿದ್ದಂತೆ ಒಂದು ಸುಲಭ ಹೊಡೆತ ಅವರಿಗೆ ಕೈಕೊಟ್ಟಿತು. ಆ ಒಂದೇ ಒಂದು ತಪ್ಪಿನಿಂದ ಅವರು ಕುಸಿದುಬಿದ್ದರು. ಎದುರಾಳಿ ವೈಟ್ 10-8 ್ರೇಮ್ಗಳಿಂದ ಜಯ ಸಾಧಿಸಿದರು.&lt;br /&gt;ಪಂದ್ಯ ಮುಗಿದ ಮೇಲೆ ವರದಿಗಾರನೊಬ್ಬ ಆಟದ ಒಂದು ಹಂತದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ನೀವು ಸೋತದ್ದಾದರೂ ಹೇಗೆ? ಎಂದು ಪ್ರಶ್ನಿಸುತ್ತಾನೆ. ನಾನು 8-6 ್ರೇಮ್ಗಳಿಂದ ಮುಂದಿದ್ದಾಗ ನನ್ನ ಮನಸ್ಸು ಬ್ಯಾಂಕಾಕ್ನ ರಸ್ತೆಯೊಂದರಲ್ಲಿರುವ ಒಂದು ಮನೆಯ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸಿತು. ನಾನು ಈ ಟೂರ್ನಿಯನ್ನು ಗೆದ್ದು, ಬರುವ ಹಣದಲ್ಲಿ ನನ್ನ ತಾಯಿಗಾಗಿ ಖರೀದಿಸಲು ಇಚ್ಛಿಸಿದ್ದ ಮನೆಯೇ ಅದು ಎಂದು ವಾಟನ್ ಆ ಸಂದರ್ಭದಲ್ಲಿ ಉತ್ತರ ನೀಡಿದ್ದರು. ಅಂದರೆ ವರ್ತಮಾನದಿಂದ ಒಂದೇ ಒಂದು ಕ್ಷಣ ಅವರ ಮನಸ್ಸು ವಿಚಲಿತಗೊಂಡಿದ್ದರಿಂದ ಗೆಲುವಿನ ಜಾಗದಲ್ಲಿ ಸೋಲು ಕಾಣಿಸಿಕೊಂಡಿತ್ತು.&lt;br /&gt;ಕೊನೆಯದಾಗಿ ವಿಶ್ವಕಪ್ ಗೆಲ್ಲಿ ಎಂದು ಟೀಮ್ ಇಂಡಿಯಾ ಆಟಗಾರರನ್ನು ಹುರಿದುಂಬಿಸುವುದಕ್ಕೆ ಒಂದ ಕುವೆಂಪು ಸ್ಪೂರ್ತಿ ಕವಿತೆ:&lt;br /&gt;ಮತ್ತೆ ಮತ್ತೆ ಗೆಲ್ಲಬೇಕು;&lt;br /&gt;&lt;span style="font-weight: bold;"&gt;ನಿತ್ಯ ಗೆಲ್ಲುತಿರಲೆ ಬೇಕು.&lt;/span&gt;&lt;br /&gt;&lt;span style="font-weight: bold;"&gt;ಗೆಲ್ಲುತಿಹುದೆ ಗೆಲ್ಲ !&lt;/span&gt;&lt;br /&gt;&lt;span style="font-weight: bold;"&gt;ನಿನ್ನ ಗೆದ್ದು ಪೂರೈಸಿದೆ&lt;/span&gt;&lt;br /&gt;&lt;span style="font-weight: bold;"&gt;ಎಂಬ ಮಾತೆ ಸಲ್ಲ;&lt;/span&gt;&lt;br /&gt;&lt;span style="font-weight: bold;"&gt;ಪಡೆದು, ಪಡೆದು, ಪಡೆದು ನಿನ್ನ....&lt;/span&gt;&lt;br /&gt;&lt;span style="font-weight: bold;"&gt;ಕಡೆಗೆ?-ಕಡೆಯೆ ಇಲ್ಲ !&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-5831184696934653510?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/5831184696934653510/comments/default' title='Post Comments'/><link rel='replies' type='text/html' href='http://ragaakshara.blogspot.com/2011/02/blog-post_17.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/5831184696934653510'/><link rel='self' type='application/atom+xml' href='http://www.blogger.com/feeds/2998842447029730227/posts/default/5831184696934653510'/><link rel='alternate' type='text/html' href='http://ragaakshara.blogspot.com/2011/02/blog-post_17.html' title='ಗೆಲುವಿನ  ಪ್ರವೃತ್ತಿ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-5950857963949227997</id><published>2011-02-03T21:50:00.001+05:30</published><updated>2011-02-03T21:54:51.608+05:30</updated><title type='text'>ದಾರಿ ತೋರುವ ಗುರು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/TUrWugYPIoI/AAAAAAAAAP4/Pa8gWe7Vddc/s1600/Gary-Kirsten.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 298px;" src="http://2.bp.blogspot.com/_fosRdfQ3Hws/TUrWugYPIoI/AAAAAAAAAP4/Pa8gWe7Vddc/s400/Gary-Kirsten.jpg" alt="" id="BLOGGER_PHOTO_ID_5569499983650955906" border="0" /&gt;&lt;/a&gt;&lt;br /&gt;ಬದುಕಿನಲ್ಲೂ ಕ್ರೀಡೆಯಲ್ಲೂ ಗುರುವಿನ ಪಾತ್ರ ದೊಡ್ಡದು. ಗುರುತರವಾದದು.&lt;br /&gt;ಕುದುರೆ ಎಷ್ಟೇ ಸಮರ್ಥವಾಗಿದ್ದರೂ, ಶಕ್ತಿಶಾಲಿಯಾಗಿದ್ದರೂ ಅದರ ಮೇಲೆ ಕುಳಿತು ನಿಯಂತ್ರಿಸಲು ಸವಾರನೊಬ್ಬ ಬೇಕು. ಕಷ್ಟದಲ್ಲಿ, ಕತ್ತಲಲ್ಲಿ ದಾರಿ ತೋರಿಸುವವನು ಗುರ್ರುೀಡೆಯಲ್ಲೂ ತರಬೇತುದಾರನೆಂದು ಗುರುತಿಸಲ್ಪಡುವ ಗುರುವಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ುಟ್ಬಾಲ್ನಂಥ ಕ್ರೀಡೆಗಳಲ್ಲಿ ತರಬೇತುದಾರ ಹೇಳಿದ್ದೇ ವೇದವಾಕ್ಯ. ಅಲ್ಲಿ ರಾಷ್ಟ್ರದ ುಟ್ಬಾಲ್ ಸಂಸ್ಥೆ ತರಬೇತುದಾರನನ್ನು ನೇಮಕ ಮಾಡಿದರೆ, ತರಬೇತುದಾರ ಆಟಗಾರರನ್ನು ಆಯ್ಕೆ ಮಾಡುತ್ತಾನೆ. ಅಲ್ಲಿ ನಿಜ ಅರ್ಥದಲ್ಲಿ ಗುರುವಿನ ಗುಲಾಮನಾಗದ ಹೊರತು ಆಟಗಾರರಿಗೆ ಯಶಸ್ಸು ದೊರೆಯುವುದಿಲ್ಲ.್ರಕೆಟ್ನಲ್ಲಿ ಅಂಥ ಕಟ್ಟುನಿಟ್ಟಿನ ವಾತಾವರಣವಿಲ್ಲದಿದ್ದರೂ, ಸಾಕಷ್ಟು ಜವಾಬ್ದಾರಿ ಇದ್ದೇ ಇರುತ್ತದೆ. ಏಕೆಂದರೆ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ವೈಲ್ಯಕ್ಕೆ ಮೊದಲು ಬಲಿಪಶುವಾಗುವವನು ತರಬೇತುದಾರ.&lt;br /&gt;ುಟ್ಬಾಲ್ ಕೋಚ್ನಂತೆ ಕ್ರಿಕೆಟ್ ಕೋಚ್ಗೆ ತಂಡದ ಆಯ್ಕೆಯಲ್ಲಿ ಅಧಿಕಾರವಿಲ್ಲ. ಆಯ್ಕೆಗಾರರು ಸೂಚಿಸಿದ ಆಟಗಾರರೊಂದಿಗೆ ಇಲ್ಲಿ ಕೋಚ್ ಹೆಣಗಬೇಕು. ಅಂದರೆ ಕೊಟ್ಟ ಕುದುರೆಯನ್ನು ಏರುವುದಷ್ಟೇ ಅವನ ಪಾಲಿಗಿರುವುದು.ದೇನೇ ಇರಲಿ, ಇದೇ 19ರಂದು ಪ್ರಾರಂಭವಾಗುವ 10ನೇ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಕಣದಲ್ಲಿರುವ 14 ತಂಡಗಳ ಪೈಕಿ ಯಾವ ಕೋಚ್ ವಿಶ್ವಕಪ್ ಗೆಲ್ಲಿಸಲು ಸಮರ್ಥರು ಎಂಬ ಜಿಜ್ಞಾಸೆಗೆ ಇದು ಸಕಾಲ.&lt;br /&gt;ಮೊದಲನೆಯದಾಗಿ ಈ ಬಾರಿ ಯಾರೂ ವಿಶ್ವಕಪ್ ಗೆದ್ದ ಕೋಚ್ಗಳಿಲ್ಲ. 2007ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಜಾನ್ ಬುಕನನ್ ಮತ್ತು ಬಾಂಗ್ಲಾದೇಶದ ಡೇವ್ ವಾಟ್ಮೋರ್ ಹಿಂದೆ ವಿಶ್ವಕಪ್ ಗೆದ್ದ ಅನುಭವದೊಂದಿಗೆ ಟೂರ್ನಿಗೆ ಆಗಮಿಸಿದ್ದರು. ಆದರೆ, ಈ ಬಾರಿ ಅಂಥ ದಿಗ್ಗಜರು ಯಾರಿಲ್ಲ. ಇದ್ದುದರಲ್ಲಿ ನ್ಯೂಜಿಲೆಂಡ್ ಕೋಚ್ ಜಾನ್ ರೈಟ್ ಅನುಭವಿ. ಅವರಿಗೆ 2003ರಲ್ಲಿ ಭಾರತ ತಂಡದ ಕೋಚ್ ಆಗಿ ೈನಲ್ ಸಾಧನೆ ಮಾಡಿದ ಅನುಭವವಿದೆ. ಉಳಿದ 13 ತಂಡದ ಕೋಚ್ಗಳಿಗೆ ಇದು ಮೊದಲ ವಿಶ್ವಕಪ್ ಅನುಭವ.&lt;br /&gt;ಗುರುಮೂಲದ ದೃಷ್ಟಿಯಿಂದ ಹೇಳುವುದಾದರೆ ಈ ಬಾರಿ ಕಣದಲ್ಲಿರುವ 14ರಲ್ಲಿ 9 ತಂಡಗಳ ಭವಿಷ್ಯ ವಿದೇಶಿಯರ ಕೈಯಲ್ಲಿದೆ. ಅಂದರೆ ಕೇವಲ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮಾತ್ರ ಸ್ವದೇಶಿ ಕೋಚ್ ಮಾರ್ಗದರ್ಶನದಲ್ಲಿ ಆಡಲಿವೆ. ಉಳಿದ 9 ತಂಡಗಳು ವಿದೇಶಿ ಕೋಚ್ ನೆರವು ಪಡೆದಿವೆ.ಳೆದ ವಿಶ್ವಕಪ್ನಲ್ಲಿ ಬಹುತೇಕ ತಂಡಗಳು ಆಸ್ಟ್ರೇಲಿಯಾ ಮೂಲದ ಕೋಚ್ ಹೊಂದಿದ್ದವು. ಈ ಬಾರಿಯೂ ಆ ರಾಷ್ಟ್ರದ ತರಬೇತುದಾರರದೇ ಹೆಚ್ಚಿನ ಸಂಖ್ಯೆ. 14ರಲ್ಲಿ 4 ಕೋಚ್ಗಳು ಆಸೀಗಳಾದರೆ, ಆಟದಲ್ಲಿ ಪಾತಾಳ ಕಚ್ಚಿರುವ ವೆಸ್ಟ್ ಇಂಡೀಸ್ನ ಮೂವರು ಕೋಚ್ಗಳು ವಿವಿಧ ತಂಡ ಪ್ರತಿನಿಧಿಸುತ್ತಿರುವುದು ವಿಶೇಷ. ದಕ್ಷಿಣ ಆಫ್ರಿಕಾದ ಇಬ್ಬರು ಕೋಚ್ಗಳಿದ್ದರೆ, ಇಂಗ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ನ ತಲಾ ಒಬ್ಬರು ಕೋಚ್ಗಳಿದ್ದಾರೆ. ಭಾರತದ ಯಾವುದೇ ಕೋಚ್ಗೆ ಈ ವಿಶ್ವಕಪ್ನಲ್ಲಿ ಪಾತ್ರವಿಲ್ಲ. ಭಾರತೀಯ ತರಬೇತುದಾರರು ಈ ರೀತಿ ಬೇಡಿಕೆ ಕಳೆದುಕೊಂಡು ಮೂಲೆಗುಂಪಾಗಿರುವುದು ದುರದೃಷ್ಟಕರ.&lt;br /&gt;ಯಾವ ಕೋಚ್ ಗೆಲ್ಲಬಹುದು?ಟೂರ್ನಿಯ ಸಂಖ್ಯಾಬಲ ಹೆಚ್ಚಿಸುವ ಸಲುವಾಗಿ ಐರ್ಲೆಂಡ್, ಕೆನಡಾ, ಹಾಲೆಂಡ್, ಕೀನ್ಯಾಕ್ಕೂ ಅವಕಾಶ ನೀಡಿದ್ದರಿಂದ ಈ ಬಾರಿ 14 ತಂಡಗಳಿವೆ. ಉಳಿದ 10 ತಂಡಗಳ ಪೈಕಿ ಗೆಲ್ಲುವ ಅವಕಾಶ ಇರುವುದು 6 ರಿಂದ 7 ತಂಡಗಳಿಗೆ ಮಾತ್ರ. ಜಿಂಬಾಬ್ವೆ ಈ ಬಾರಿ ಆಡುತ್ತಿರುವುದೇ ದೊಡ್ಡ ಸಾಧನೆ ಎನಿಸಬಹುದು. 1983ರಲ್ಲಿಭಾರತ ಗೆದ್ದಂತೆ ಈ ಬಾರಿ ಬಾಂಗ್ಲಾದೇಶ ಗೆಲ್ಲುವ ಸಾಧ್ಯತೆ ಕಡಿಮೆ. ಆದರೂ, ತವರಿನ ಲಾಭ ಪಡೆದು ಸೆಮಿೈನಲ್ ಹಂತದವರೆಗೆ ಕನಸಿನ ಓಟ ಓಡುವ ಸಾಧ್ಯತೆ ಸ್ವಲ್ಪ ಇದೆ.ನ್ನು ವೆಸ್ಟ್ ಇಂಡೀಸ್ ಕ್ವಾರ್ಟರ್ೈನಲ್ನಿಂದ ಮತ್ತೊಂದು ಹೆಜ್ಜೆ ಮುಂದಿಟ್ಟರೆ ಅದೇ ಹೆಚ್ಚು. ಆದರೂ, ಚೊಚ್ಚಲ ಚಾಂಪಿಯನ್ಸ್ಲೀಗ್ನಲ್ಲಿ ಟ್ರಿನಿಡಾಡ್ ಟೊಬ್ಯಾಗೋ ೈನಲ್ ಪ್ರವೇಶಿಸಿದಂತೆ ವಿಂಡೀಸ್ ದೈತ್ಯ ಓಟ ಪ್ರದರ್ಶಿಸಲೂ ಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 1 ಶೇ. ಮಾತ್ರ.ನ್ನುಳಿದ 7 ತಂಡಗಳ ಪೈಕಿ ಸದ್ಯ ಅತ್ಯಂತ ನಿಕೃಷ್ಟ ಾರ್ಮ್ ನಲ್ಲಿರುವ ತಂಡವೆಂದರೆ ನ್ಯೂಜಿಲೆಂಡ್. ಆದರೆ, ವಿಶ್ವಕಪ್ಗಳಲ್ಲಿ ಯಾವಾಗಲೂ ಕಿವೀಸ್ ಅಚ್ಚರಿ ಪ್ರದರ್ಶನ ನೀಡಿಸೆಮಿೈನಲ್ ಹಂತವನ್ನು ಸ್ಥಿರವಾಗಿ ಪ್ರವೇಶಿಸಿದ ಇತಿಹಾಸ ಹೊಂದಿದೆ. ಈ ಬಾರಿ ಜಾನ್ ರೈಟ್ ಮಾರ್ಗದರ್ಶನವೂ ಇರುವುದರಿಂದ ಏನಾದರೂ ಪವಾಡ ನಡೆಯಲೂಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 10ರಿಂದ 15 ಶೇ. ಮಾತ್ರ.&lt;br /&gt;ಬಾಕಿ 6 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆಲ್ಲಲು ಸಮರ್ಥವೆನಿಸಿದೆ. ಭಾರತ ಉಳಿದೆಲ್ಲವುಗಳಿಗಿಂತ ಪ್ರಬಲ ತಂಡ ಹೊಂದಿದೆ. ತವರಿನ ಅನುಕೂಲ, ದಕ್ಷ ಕೋಚ್ ಮಾರ್ಗದರ್ಶನ ತಂಡಕ್ಕಿದೆ. ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಬೋರಲಾಗಿದ್ದರೂ, ಏಕದಿನಗಳಲ್ಲಿ ಈಗಲೂ ನಂ.1 ತಂಡ. ಇಂಗ್ಲೆಂಡ್ನ ಟೆಸ್ಟ್ ಯಶಸ್ಸು ಏಕದಿನಗಳಿಗೂ ವಿಸ್ತರಿಸುವ ಅವಕಾಶವಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಹಸಿವಿಂದ ಬಳಲಿ ಸದ್ಯ ಕುಂಭಕರ್ಣನಂತೆ ಭೋರ್ಗರೆಯುತ್ತಿರುವ ಪಾಕಿಸ್ತಾನ ಈ ವಿಶ್ವಕಪ್ನ ಅತ್ಯಂತ ಅಪಾಯಕಾರಿ ತಂಡ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕ್ನ ಪ್ರದರ್ಶನವೇ ಇದಕ್ಕೆ ನಿದರ್ಶನ. ದಕ್ಷಿಣ ಆಫ್ರಿಕಾ ಉತ್ತಮ ತಂಡವನ್ನು ಹೊಂದಿದ್ದರೂ ಅವರು ಚೋಕರ್ ಅಪಖ್ಯಾತಿಯಿಂದ ಈ ಬಾರಿಯಾದರೂ ಹೊರಬರಬೇಕಿದೆ.ದರೆ ಈ ಪೈಕಿ ಯಾವುದೇ ತಂಡ ಗೆಲ್ಲಬೇಕಾದರೂ, ಅದರಲ್ಲಿ ಕೋಚ್ ವಹಿಸುವ ಪಾತ್ರ ನಿರ್ಣಾಯಕ. ಒಟ್ಟಾರೆ ಈ ವಿಶ್ವಕಪ್ನಲ್ಲಿ ಕರ್ಸ್ಟನ್, ನೀಲ್ಸೆನ್, ಫ್ಲವರ್, ಬೇಲಿಸ್, ಯೂನಿಸ್, ಫೇವರಿಟ್ಕೋಚ್ಗಳು.&lt;br /&gt;&lt;br /&gt;ಭಾರತ: ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ)&lt;br /&gt;ದಕ್ಷಿಣ ಆಫ್ರಿಕಾ ಪರ 101 ಟೆಸ್ಟ್, 185 ಏಕದಿನಗಳಲ್ಲಿ ಆಡಿರುವ ಗ್ಯಾರಿ ಕರ್ಸ್ಟನ್ ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಹಾಗೂ ಏಕದಿನಗಳಲ್ಲಿ ನಂ.2 ಶ್ರೇಯಾಂಕಕ್ಕೆ ಮುನ್ನಡೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಭಾರತ ೇವರಿಟ್ ತಂಡವಾಗಿರುವಂತೆ, ಕರ್ಸ್ಟನ್ ಟ್ರೋಫಿ ಗೆಲ್ಲಲು ೇವರಿಟ್ ಕೋಚ್.&lt;br /&gt;&lt;br /&gt;ಆಸ್ಟ್ರೇಲಿಯಾ:ಟಿಮ್ ನೀಲ್ಸೆನ್(ಆಸಿಸ್)&lt;br /&gt;43 ವರ್ಷದ ಟಿಮೋತಿ ಜಾನ್ ನೀಲ್ಸೆನ್ ಆಸ್ಟ್ರೇಲಿಯಾ ತಂಡ 2007ರ ವಿಶ್ವಕಪ್ ಗೆದ್ದ ಬಳಿಕ ಜಾನ್ ಬುಕನನ್ ಉತ್ತರಾಧಿಕಾರಿಯಾಗಿ ನೇಮಕಗೊಂಡವರು. 101 ಪ್ರಥಮ ದರ್ಜೆ ಪಂದ್ಯ ಆಡಿರುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ನೀಲ್ಸೆನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದವರಲ್ಲ.&lt;br /&gt;&lt;br /&gt;&lt;br /&gt;ಬಾಂಗ್ಲಾದೇಶ:ಜೇಮಿ ಸಿಡ್ಡನ್ಸ್ (ಆಸಿಸ್)&lt;br /&gt;47 ವರ್ಷದ ಜೇಮ್ಸ್ ಡರೆನ್ ಸಿಡ್ಡನ್ಸ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಹಾಗೂ ದಕ್ಷಿಣ ಆಸ್ಟ್ರೇಲಿಯಾ ತಂಡಗಳ ಪರ 16 ವರ್ಷ ಪ್ರಥಮ ದರ್ಜೆ ಕ್ರಿಕೆಟ್ ಆಡಿದವರು. 146 ಪಂದ್ಯಗಳಲ್ಲಿ 10,643 ರನ್ ಅವರ ಸಾಧನೆ. ಆಸ್ಟ್ರೇಲಿಯಾ ಪರ 1988ರಲ್ಲಿ ಏಕೈಕ ಏಕದಿನ ಪಂದ್ಯ ಆಡಿರುವ ಜೇಮಿ, 2007ರಿಂದ ಬಾಂಗ್ಲಾದೇಶದ ಕೋಚ್.&lt;br /&gt;&lt;br /&gt;ಕೆನಡಾ: ಪುಬುಡು ದಾಸನಾಯಕೆ (ಶ್ರೀಲಂಕಾ)&lt;br /&gt;ಶ್ರೀಲಂಕಾ ಪರ 1993-94ರ ಅವಧಿಯಲ್ಲಿ 11 ಟೆಸ್ಟ್ ಹಾಗೂ 16 ಏಕದಿನ ಪಂದ್ಯ ಆಡಿರುವ 41 ವರ್ಷದ ದಾಸನಾಯಕೆ 1998ರಿಂದ ಕೆನಡಾ ಪರ ಐಸಿಸಿ ಟ್ರೋಫಿಯಲ್ಲಿ ಆಡಿದವರು. 2007ರಿಂದ ಆ ತಂಡದ ಕೋಚ್.&lt;br /&gt;&lt;br /&gt;&lt;br /&gt;ಇಂಗ್ಲೆಂಡ್:ಆಂಡಿ ್ಲವರ್ (ಜಿಂಬಾಬ್ವೆ)ಜಿಂಬಾಬ್ವೆಯ ಅತ್ಯಂತ ಯಶಸ್ವಿ ಕ್ರಿಕೆಟಿಗ ಆಂಡಿ ್ಲವರ್ ಇಂಗ್ಲೆಂಡ್ ಕೋಚ್ ಆಗಿ ಅಪಾರ ಯಶಸ್ಸು ಪಡೆದಿದ್ದಾರೆ. ಮಾಜಿ ಕೋಚ್ ಪೀಟರ್ ಮೂರ್ಸ್ಗೆ ಸಹಾಯಕರಾಗಿದ್ದ ಆಂಡಿ, ಕೆರಿಬಿಯನ್ ಪ್ರವಾಸದ ಸಂದರ್ಭದಲ್ಲಿ ಹಂಗಾಮಿ ಕೋಚ್ ಆಗಿದ್ದರು. ನಂತರ ಬಡ್ತಿ ಪಡೆದರು. ಇಂಗ್ಲೆಂಡ್ ತಂಡವನ್ನು ಆಶಸ್ ಗೆಲುವಿಗೆ ಮುನ್ನಡೆಸಿರುವುದು ಅವರ ಹೆಗ್ಗಳಿಕೆ. ಇಂಗ್ಲೆಂಡ್ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಆಂಡಿ ಏಕದಿನ ವಿಶ್ವಕಪ್ನಲ್ಲೂ ಅದೇ ಮ್ಯಾಜಿಕ್ ಮೆರೆಯುವ ಉತ್ಸಾಹದಲ್ಲಿದ್ದಾರೆ.&lt;br /&gt;&lt;br /&gt;ಐರ್ಲೆಂಡ್: ಫಿಲ್ ಸಿಮ್ಮನ್(ವೆಸ್ಟ್ ಇಂಡೀಸ್)&lt;br /&gt;ಫಿಲ್ ಸಿಮ್ಮನ್ಸ್ 1990ರ ದಶಕದಲ್ಲಿ ವೆಸ್ಟ್ ಇಂಡೀಸ್ನ ಅಗ್ರಮಾನ್ಯ ಆಲ್ರೌಂಡರ್ ಆಗಿದ್ದವರು. 2004ರಲ್ಲಿ ಜಿಂಬಾಬ್ವೆ ಕೋಚ್ ಹುದ್ದೆಗೇರಿದರೂ, ಒಂದು ವರ್ಷ ಬಳಿಕ ಉಚ್ಛಾಟನೆಗೊಂಡ ಅವರು 2007ರಿಂದ ಐರ್ಲೆಂಡ್ ಕೋಚ್ ಆಗಿದ್ದಾರೆ.&lt;br /&gt;&lt;br /&gt;ಜಿಂಬಾಬ್ವೆ: ಆಲನ್ ಬುಚರ್ (ಇಂಗ್ಲೆಂಡ್)&lt;br /&gt;ಇಂಗ್ಲೆಂಡ್ ಪರ 1 ಟೆಸ್ಟ್ ಆಡಿರುವ 56 ವರ್ಷದ ಬುಚರ್ ಹಿಂದೆ ಸರ್ರೆ ಕೌಂಟಿ ತಂಡದ ಮುಖ್ಯ ಕೋಚ್ ಆಗಿದ್ದವರು.&lt;br /&gt;&lt;br /&gt;ಕೀನ್ಯಾ: ಎಲ್ಡಿನ್ ಬ್ಯಾಪ್ಟಿಸ್ಟೆ (ವೆಸ್ಟ್ ಇಂಡೀಸ್)&lt;br /&gt;51 ವರ್ಷದ ಮಾಜಿ ವೇಗದ ಬೌಲರ್ ಬ್ಯಾಪ್ಟಿಸ್ಟೆ ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಗಳಲ್ಲಿ ಆಡಿದ್ದು ಆ ಎಲ್ಲಾ ಪಂದ್ಯಗಳಲ್ಲಿ ವಿಂಡೀಸ್ ಗೆದ್ದಿರುವುದು ವಿಶೇಷ. 43 ಏಕದಿನಗಳಲ್ಲೂ ಆಡಿರುವ ಅವರು 2009ರಿಂದ ಕೀನ್ಯಾ ಕೋಚ್.&lt;br /&gt;&lt;br /&gt;ಹಾಲೆಂಡ್: ಪೀಟರ್ರ್ನೆನ್ (ಆಸ್ಟ್ರೇಲಿಯಾ)&lt;br /&gt;ಕೇವಲ 5 ಪ್ರಥಮ ದರ್ಜೆ ಪಂದ್ಯ ಆಡಿರುವ ಡ್ರಿನೆನ್ 2006ರಲ್ಲಿ ಸ್ಕಾಟ್ಲೆಂಡ್ ಕೋಚ್ ಆಗಿದ್ದರು. ಸದ್ಯ ಹಾಲೆಂಡ್ಗೆ ಕೋಚ್.&lt;br /&gt;&lt;br /&gt;ನ್ಯೂಜಿಲೆಂಡ್: ಜಾನ್ ರೈಟ್ (ನ್ಯೂಜಿಲೆಂಡ್)&lt;br /&gt;ಈ ವಿಶ್ವಕಪ್ನಲ್ಲಿರುವ ಅತ್ಯಂತ ಹಿರಿಯ ಹಾಗೂ ಅನುಭವಿ ಕೋಚ್ 57 ವರ್ಷದ ಜಾನ್ ರೈಟ್ 2003ರಲ್ಲಿ ಭಾರತವನ್ನು ೈನಲ್ಗೆ ಮುನ್ನಡೆಸಿದ್ದರು. ಸದ್ಯ ಮಾರ್ಕ್ ಗ್ರೇಟ್ಬ್ಯಾಚ್ ತೆರವುಗೊಳಿಸಿದ ಕಿವೀಸ್ ಕೋಚ್ ಹುದ್ದೆ ತುಂಬಿದ್ದಾರೆ.&lt;br /&gt;&lt;br /&gt;ಪಾಕಿಸ್ತಾನ: ವಕಾರ್ ಯೂನಿಸ್ (ಪಾಕಿಸ್ತಾನ)&lt;br /&gt;ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ಗಳ ಯಾದಿಯಲ್ಲಿ ಸ್ಥಾನ ಪಡೆದಿರುವ ವಕಾರ್ ಯೂನಿಸ್ ಕೋಚ್ ಹುದ್ದೆಗೇರಿದ ಮೇಲೆ ಪಾಕ್ ತಂಡ ಮರುಹುಟ್ಟು ಪಡೆಯುತ್ತಿದೆ.&lt;br /&gt;&lt;br /&gt;ದಕ್ಷಿಣ ಆಫ್ರಿಕಾ: ಕೊರ್ರಿ ವಾನ್ ಝಿಲ್ (ದ. ಆಫ್ರಿಕಾ)&lt;br /&gt;ಕೇವಲ 2 ಏಕದಿನ ಪಂದ್ಯ ಆಡಿರುವ ವಾನ್ ಝಿಲ್ ಮಾಜಿ ಕೋಚ್ ಮಿಕಿ ಆರ್ಥರ್ಸ್ಗೆ ಸಹಾಯಕರಾಗಿದ್ದರು. ನಂತರ ಬಡ್ತಿ ಪಡೆದರು.&lt;br /&gt;&lt;br /&gt;ಶ್ರೀಲಂಕಾ: ಟ್ರೆವರ್ ಬೇಲಿಸ್ (ಆಸ್ಟ್ರೇಲಿಯಾ)&lt;br /&gt;ನ್ಯೂ ಸೌತ್ ವೇಲ್ಸ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಬೇಲಿಸ್ 2007ರಿಂದ ಲಂಕಾ ಕೋಚ್.&lt;br /&gt;&lt;br /&gt;&lt;br /&gt;ವೆಸ್ಟ್ ಇಂಡೀಸ್: ಒಟ್ಟಿಸ್ ಗಿಬ್ಸನ್ (ವಿಂಡೀಸ್)&lt;br /&gt;ವಿಂಡೀಸ್ ಪರ 2 ಟೆಸ್ಟ್, 15 ಏಕದಿನಗಳಲ್ಲಿ ಆಡಿರುವ ಮಾಜಿ ವೇಗದ ಬೌಲರ್ ಗಿಬ್ಸನ್ ಹಿಂದೆ ಇಂಗ್ಲೆಂಡ್ಗೆ ಬೌಲಿಂಗ್ ಕೋಚ್ ಆಗಿದ್ದರು.&lt;br /&gt;&lt;br /&gt;ನೆನಪಾಗುವವರು&lt;br /&gt;2007ರ ಕೆರಿಬಿಯನ್ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಆಘಾತಕಾರಿಯಾಗಿ ಸೋತ ಬಳಿಕ ಹೋಟೆಲ್ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾದ ಪಾಕಿಸ್ತಾನದ ಮಾಜಿ ಕೋಚ್ ಬಾಬ್ ವೂಲ್ಮರ್....&lt;br /&gt;ಸರ್ವಾಧಿಕಾರಿ ಧೋರಣೆಯಿಂದ ಎಲ್ಲರ ವೈರತ್ವ ಕಟ್ಟಿಕೊಂಡು, 2007ರಲ್ಲಿ ಭಾರತ ಮೊದಲ ಸುತ್ತಿನಲ್ಲೇ ನಿರ್ಗಮಿಸಲು ಕಾರಣರಾದ ಗ್ರೆಗ್ ಚಾಪೆಲ್....&lt;br /&gt;ಶ್ರೀಲಂಕಾ ತಂಡವನ್ನು ೈನಲ್ಗೆ ಮುನ್ನಡೆಸಿದ ದಕ್ಷ ಕೋಚ್ ಟಾಮ್ ಮೂಡಿ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-5950857963949227997?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/5950857963949227997/comments/default' title='Post Comments'/><link rel='replies' type='text/html' href='http://ragaakshara.blogspot.com/2011/02/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/5950857963949227997'/><link rel='self' type='application/atom+xml' href='http://www.blogger.com/feeds/2998842447029730227/posts/default/5950857963949227997'/><link rel='alternate' type='text/html' href='http://ragaakshara.blogspot.com/2011/02/blog-post.html' title='ದಾರಿ ತೋರುವ ಗುರು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/TUrWugYPIoI/AAAAAAAAAP4/Pa8gWe7Vddc/s72-c/Gary-Kirsten.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-8684830814683599300</id><published>2011-01-20T12:53:00.001+05:30</published><updated>2011-01-20T12:56:09.364+05:30</updated><title type='text'>ಸ್ವಭಾವ vs ಸಾಮರ್ಥ್ಯ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/TTfjhPyu7uI/AAAAAAAAAPw/IbN3NkuOZ3U/s1600/sreesanth.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 400px;" src="http://4.bp.blogspot.com/_fosRdfQ3Hws/TTfjhPyu7uI/AAAAAAAAAPw/IbN3NkuOZ3U/s400/sreesanth.jpg" alt="" id="BLOGGER_PHOTO_ID_5564166024954048226" border="0" /&gt;&lt;/a&gt;&lt;br /&gt;ಒಳ್ಳೆಯವರಾಗಿರಬೇಕೋ, ಸಮರ್ಥರಾಗಿರಬೇಕೋ...&lt;br /&gt;ಕ್ರೀಡೆಯಲ್ಲೂ ಕಚೇರಿಗಳಲ್ಲೂ ಆಗಾಗ ಇಂಥ ಸಮಸ್ಯೆ ಎದುರಾಗುತ್ತಿರುತ್ತದೆ.&lt;br /&gt;ತಮ್ಮ ಜೊತೆ ಕೆಲಸ ಮಾಡುವವರು ಸಮರ್ಥರಾಗಿರಬೇಕೇ ಅಥವಾ ಒಳ್ಳೆಯವರಾಗಿರಬೇಕೇ ಎಂಬ ಸಂದಿಗ್ಧ ಅದು.ೆಂದರೆ ಎಲ್ಲಾ ಒಳ್ಳೆಯವರೂ ಕೆಲಸದ ವಿಷಯದಲ್ಲಿ ದಕ್ಷರಾಗಿರುವುದಿಲ್ಲ. ಅವರಿಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಎಷ್ಟೋ ಬಾರಿ ಅತಿಯಾದ ವಿನಯ ಹಾಗೂ ಒಳ್ಳೆಯತನ ಅವರ ಅಸಾಮರ್ಥ್ಯದ ಕುರಿತ ಕೀಳರಿಮೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ.ೆಲಸದಲ್ಲಿ ಚುರುಕಿರುವವರು ಯಾವಾಗಲೂ ವಿಧೇಯರಾಗಿ, ಒಳ್ಳೆಯವರಾಗಿ ಇರಲೇಬೇಕೆಂದೇನೂ ಇಲ್ಲ. ಅವರು ತಮ್ಮ ಪಾಲಿನ ಕೆಲಸವನ್ನು ಆಕ್ಷೇಪಕ್ಕೆ ಅವಕಾಶವಿಲ್ಲದಂತೆ ಮಾಡುತ್ತಿರುತ್ತಾರೆ. ಆದರೆ, ತಮ್ಮ ಮೇಲಿನವರ ಹಿಡಿತಕ್ಕೆ ಸಿಗುವುದಿಲ್ಲ. ಅವರಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಸ್ವಲ್ಪ ಆತ್ಮವಿಶ್ವಾಸ, ಹೆಚ್ಚು ಅಹಂ, ಹುಂಬತನ ಎಲ್ಲವೂ ಇರುತ್ತದೆ. ಂಥ ಇಬ್ಬರು ವ್ಯಕ್ತಿಗಳ ನಡುವೆ ಆಯ್ಕೆ ಮಾಡುವ ಪ್ರಸಂಗ ಬಂದಾಗ ಯಾರು ಹಿತವರು ಎಂಬ ಸಂದಿಗ್ಧ ಎದುರಾಗುವುದು ಸಹಜ. ವಿಶ್ವಕಪ್ಗೆ ಭಾರತ ತಂಡ ಆಯ್ಕೆ ಮಾಡುವಾಗ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯಕ್ಕಿಂತ ಒಳ್ಳೆಯತನವೇ ಇರಲಿ ಎಂದರು. ವಿಶ್ವಕಪ್ ತಂಡದಿಂದ ಶ್ರೀಶಾಂತ್ ಹೊರಗುಳಿದಿದ್ದು, ಆಶಿಶ್ ನೆಹ್ರಾ ಆಯ್ಕೆಯಾಗಿದ್ದು ಇದೇ ರೀತಿ.&lt;br /&gt;ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶ್ರೀಶಾಂತ್ ಅದ್ಭುತ ಪ್ರದರ್ಶನ ನೀಡಿದ್ದರು. ಹಾಲಿ ಏಕದಿನ ಸರಣಿಯಲ್ಲಿ ಆಶಿಶ್ ನೆಹ್ರಾ ಪ್ರದರ್ಶನ ಅಷ್ಟಕ್ಕಷ್ಟೇ. ಮೊದಲ ಎರಡು ಏಕದಿನಗಳಲ್ಲಂತೂ ಅವರ ಬೌಲಿಂಗ್ ನಿಕೃಷ್ಟ ಮಟ್ಟದ್ದಾಗಿತ್ತು. ನೆಹ್ರಾ ಅಂಥ ಕಳಪೆ- ಕ್ಲಬ್ ದರ್ಜೆಯ ಬೌಲರ್ ಅಲ್ಲವಾದರೂ, ವರ್ತಮಾನದ ಾರ್ಮ್ ಆಧಾರದ ಮೇಲೆ ತಂಡ ಆಯ್ಕೆ ಮಾಡಿದ್ದರೆ, ಶ್ರೀಶಾಂತ್ ಆಯ್ಕೆಯಾಗುತ್ತಿದ್ದರು. ನೆಹ್ರಾ ಹೊರಗುಳಿಯುತ್ತಿದ್ದರು. ಆದರೆ, ಕೆಲವು ವರದಿಗಳ ಪ್ರಕಾರ ಕೇರಳದ ವೇಗಿ ಬೇಡವೇ ಬೇಡ ಎಂದು ಧೋನಿ ಪಟ್ಟು ಹಿಡಿದರು. ಹಾಗಾಗಿ ನೆಹ್ರಾ ಆಯ್ಕೆ ಅನಿವಾರ್ಯವಾಯಿತು.&lt;br /&gt;ಧೋನಿ ಹಾಗೇಕೆ ಮಾಡಿದರು?&lt;br /&gt;ಅದಕ್ಕೆ ಕಾರಣ ಶ್ರೀಶಾಂತ್ ಸ್ವಭಾವ. ಈ ಹುಡುಗ ಮುಂಗೋಪಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುಂಟಾಟ, ಹುಡುಗಾಟ, ಹಟ ಎಲ್ಲವೂ ಈ ಹುಡುಗನಿಗೆ ಜಾಸ್ತಿ. ಅತಿ ವಿನಯ, ವಿಧೇಯತೆ ಈತನಿಗೆ ಗೊತ್ತಿಲ್ಲ. ಅನಗತ್ಯವಾಗಿ ಯಾರನ್ನೂ ಓಲೈಸುವುದೂ ಇಲ್ಲ. ಮೌನವಾಗಿರುವುದೂ ಗೊತ್ತಿಲ್ಲ. ತಾಳ್ಮೆಯೂ ಸ್ವಲ್ಪ ಕಡಿಮೆ. ಯಾವುದೇ ವಿಷಯದಕ್ಕೂ ತಕ್ಷಣ ಪ್ರತಿಕ್ರಿಯಿಸುವುದು ರೂಢಿ. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವುದು ಇವರಿಗೆ ಅನ್ವರ್ಥ. ರಂಗೋಲಿ ಕೆಳಗೆ ನುಸುಳುವುದಿರಲಿ, ಚಾಪೆ ಕೆಳಗೆ ತೂರುವ ಜಾಣತನವೂ ಗೊತ್ತಿಲ್ಲ. ಕೇವಲ ತನ್ನ ಪ್ರದರ್ಶನವೊಂದೇ ತನ್ನನ್ನು ಕಾಪಾಡುತ್ತದೆ ಎಂದು ನಂಬಿದಾತ. ಇದೇ ಕಾರಣಕ್ಕೆ ಕಳೆದ ಅನೇಕ ವರ್ಷಗಳಿಂದ ಭಾರತ ತಂಡದ ಪರ ಆಡುತ್ತಿದ್ದರೂ, ಇವತ್ತಿಗೂ ಶ್ರೀಶಾಂತ್ ಅಕ್ಷರಶಃ ಏಕಾಂಗಿ. ತಂಡದಲ್ಲಿ ಯಾರೂ ಅಂತರಂಗದ ಗೆಳೆಯರಿಲ್ಲ. ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಲ್ಲುವವರಿಲ್ಲ. ಸ್ವಭಾವದಲ್ಲಿ ಒರಟನಾದರೂ, ಚೆನ್ನಾಗಿ ಆಡುತ್ತಾನೆ. ಆ ಕಾರಣಕ್ಕಾದರೂ ತಂಡದಲ್ಲಿರಲಿ ಎಂದು ಶಿಾರಸು ಮಾಡುವವರಿಲ್ಲ.&lt;br /&gt;ನಾಯಕ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯುದ್ದಕ್ಕೂ ಶ್ರೀಶಾಂತ್ರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದರು. ಅವರನ್ನು ಹದ್ದುಬಸ್ತಿನಲ್ಲಿಡುವುದು ಕಷ್ಟ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಬೌಲಿಂಗ್ ಮಾಡುವಾಗ ತುಂಬಾ ಕಾಲಹರಣ ಮಾಡುತ್ತಾರೆ, ಎಲ್ಲೆ ಮೀರಿ ವರ್ತಿಸುತ್ತಾರೆ ಎಂದೆಲ್ಲಾ ಸ್ಕೂಲ್ ಹುಡುಗನಂತೆ ದೂರಿಕೊಂಡಿದ್ದರು.&lt;br /&gt;ಧೋನಿ ಬಹಳ ಚಾಣಾಕ್ಷ ನಾಯಕ ಎನ್ನುವುದು ಎಲ್ಲೆಡೆ ಇರುವ ಅಭಿಪ್ರಾಯ. ಆದರೆ, ಶ್ರೀಶಾಂತ್ ವಿಷಯದಲ್ಲಿ ಅವರು ಪ್ರದರ್ಶಿಸಿದ್ದು ಅಪ್ರಬುದ್ಧತೆ. ಶ್ರೀಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ, ಅದು ಸ್ವತಃ ಧೋನಿಯ ವೈಲ್ಯವೇ ಹೊರತು ಬೇರೇನೂ ಅಲ್ಲ. ಅದನ್ನು ಬಹಿರಂಗವಾಗಿ ರಾಣಾರಂಪ ಮಾಡುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಶ್ರೀಶಾಂತ್ರ ಬುದ್ಧಿ ತಿದ್ದುವುದಕ್ಕೆ ಧೋನಿ ಯಾರು? ತಾವು ಕ್ರಿಕೆಟ್ ತಂಡದ ನಾಯಕನೇ ಹೊರತು ಸ್ಕೂಲ್ ಟೀಚರ್ ಅಲ್ಲ ಎನ್ನುವುದು ಅವರಿಗೆ ನೆನಪಿರಬೇಕು. ತಮ್ಮ ಕೈಕೆಳಗಿನ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತೆಗೆಯಬೇಕೇ ಹೊರತು, ಅವರು ದೇವತೆಗಳಂತೆ ವರ್ತಿಸಲಿ ಎಂದು ಅಪೇಕ್ಷಿಸುವ ಅಧಿಕಾರ ಅವರಿಗಿಲ್ಲ.&lt;br /&gt;ನಿಜ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ಕ್ರೀಡಾಮನೋಭಾವ, ಸದ್ವರ್ತನೆಯ ಲಕ್ಷ್ಮಣರೇಖೆ ಮೀರದಂತೆ ನೋಡಿಕೊಳ್ಳುವುದು ತಂಡದ ನಾಯಕನ ಕರ್ತವ್ಯ. ಆದರೆ, ಆಕ್ರಮಣಶೀಲತೆಗೂ ದುಷ್ಟ ಪ್ರವೃತ್ತಿಗೂ ವ್ಯತ್ಯಾಸವಿದೆ. ಒಂದು ವೇಳೆ ತಂಡದ ಆಟಗಾರರು ಎಲ್ಲೆ ಮೀರಿ ವರ್ತಿಸಿದ ಸಂದರ್ಭದಲ್ಲೂ ನಾಯಕರಾದವರು ಅದನ್ನು ಬೇರೆ ಮಾರ್ಗದಲ್ಲಿ ಸರಿಪಡಿಸಬೇಕೇ ಹೊರತು ಬಹಿರಂಗವಾಗಿ ತಪ್ಪಿತಸ್ಥ ಆಟಗಾರನನ್ನು ನೇಣಿಗೇರಿಸಬಾರದು.ರಡು ವರ್ಷ ಕೆಳಗೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಆಂಡ್ರ್ಯೂ ಸೈಮಂಡ್ಸ್ ವಿಚಾರದಲ್ಲಿ ಹರ್ಭಜನ್ ಸಿಂಗ್ ಎಲ್ಲೆ ಮೀರಿದ್ದರು. ಬಹುಶಃ ಧೋನಿ ಆಗ ನಾಯಕರಾಗಿದ್ದಿದ್ದರೆ ಹರ್ಭಜನ್ರನ್ನು ತಕ್ಷಣ ಮನೆಗೆ ಕಳಿಸುತ್ತಿದ್ದರೋ ಏನೋ. ಆದರೆ, ಅನಿಲ್ ಕುಂಬ್ಳೆ ಬಹಳ ವಿವೇಚನೆಯಿಂದ, ರಾಜತಾಂತ್ರಿಕವಾಗಿ ನಡೆದುಕೊಂಡರು. ಮುಳ್ಳಿನ ಮೇಲೆ ಒಣಗಲು ಹಾಕಿದ ಬಟ್ಟೆಯನ್ನು ತೆಗೆಯುವಷ್ಟೇ ನಾಜೂಕಾಗಿ ಪ್ರಕರಣವನ್ನು ಬಗೆಹರಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಪ್ರತಿಯೊಬ್ಬರೂ ಹರ್ಭಜನ್ರನ್ನು ಬೆಂಬಲಿಸುವ ಮೂಲಕ ಅವರಿಗೆ ಅನಾಥಪ್ರಜ್ಞೆ ಕಾಡದಂತೆ ನೋಡಿಕೊಂಡರು.&lt;br /&gt;ದಕ್ಷಿಣ ಆಫ್ರಿಕಾದಲ್ಲಿ ಶ್ರೀಶಾಂತ್ಗೆ ಇಂಥ ಅನಾಥಪ್ರಜ್ಞೆಯೇ ಕಾಡಿತ್ತು.ಂತೂ ಹೇಳಿದ ಮಾತು ಕೇಳದಿದ್ದರೆ ಕೆಲಸದಿಂದ ತೆಗೆದುಹಾಕು ಎಂಬ ಕಾರ್ಪೋರೇಟ್ ಬಾಸ್ಗಳ ಧೋರಣೆಯಂತೆ ಧೋನಿ ಸಹ ವರ್ತಿಸಿ ಶ್ರೀಶಾಂತ್ರ ಕೊಕ್ಗೆ ಕಾರಣರಾದರು.್ರಕೆಟ್ ಮೈದಾನದಲ್ಲಿ ಆಕ್ರಮಣಶೀಲರಾಗಿರುವುದು ತಪ್ಪಲ್ಲ. ಆದರೆ, ಮೋಸಗಾರ ಆಗಿರಬಾರದು. ಅಷ್ಟಕ್ಕೂ ಆಕ್ರಮಣಶೀಲ ಗುಣವೆನ್ನುವುದು ಇಲ್ಲದಿದ್ದರೆ ಕ್ರಿಕೆಟ್ ಸಪ್ಪೆ ಎನಿಸಿಬಿಡುತ್ತದೆ. ಕ್ರೀಡೆಗೆ ಶ್ರೀಶಾಂತ್ರಂಥ ವಿಲಕ್ಷಣ ವ್ಯಕ್ತಿಗಳೂ ಬೇಕು.&lt;br /&gt;ಹಾಗೆ ನೋಡಿದರೆ, ಉತ್ತಮ ಆಟಗಾರರಾಗಿಯೂ ಸ್ವಭಾವದಿಂದ ಕಷ್ಟ-ನಷ್ಟ ಅನುಭವಿಸಿದವರ ಪೈಕಿ ಶ್ರೀಶಾಂತ್ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ಗೆ ಇಂಥ ಪಟ್ಟಿಯಲ್ಲಿ ನಂ.1 ಸ್ಥಾನ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಆಂಡ್ರೆ ನೆಲ್, ನ್ಯೂಜಿಲೆಂಡ್ನ ಜೆಸ್ಸಿ ರೈಡರ್ ಇಂಥ ಕೆಲವು ಉದಾಹರಣೆಗಳು.&lt;br /&gt;ಪಾಕಿಸ್ತಾನದಲ್ಲಿ ಶೋಯಿಬ್ ಅಖ್ತರ್ರನ್ನು ಹದ್ದುಬಸ್ತಿನಲ್ಲಿಡುವುದು ಯಾವ ನಾಯಕರಿಂದಲೂ ಸಾಧ್ಯವಾಗಲಿಲ್ಲ. ಬಹುಶಃ ಅಖ್ತರ್ಗೆ ಮೂಗುದಾರ ಹಾಕುವ ಪ್ರಯತ್ನಮಾಡುವ ಬದಲು ನಾಯಕ ಪಟ್ಟ ಕಟ್ಟಿದ್ದರೆ ಇಷ್ಟು ಹೊತ್ತಿಗೆ ಪಾಕ್ ಕ್ರಿಕೆಟ್ ಉದ್ಧಾರವಾಗಿಬಿಡುವ ಸಾಧ್ಯತೆ ಇತ್ತು. ಇದಕ್ಕೆ ಎರಡು ಉದಾಹರಣೆಯೆಂದರೆ, ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ. ಇವರಿಬ್ಬರೂ ನಾಯಕರಾಗುವ ಮುನ್ನ ಭಾರೀ ಅಹಂಕಾರಿಗಳೆಂದು ಹೆಸರಾಗಿದ್ದರು. ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮೈದಾನಕ್ಕೆ ನೀರು ಕೊಂಡುಹೋಗಲು ಒಪ್ಪುತ್ತಿರಲಿಲ್ಲ. ಆದರೆ, ಅವರೇ ನಾಯಕರಾದ ಮೇಲೆ ಆಯಾ ತಂಡಗಳ ಅದೃಷ್ಟವೇ ಬದಲಾಯಿತು. ಅವರ ಆತ್ಮವಿಶ್ವಾಸ, ಆಕ್ರಮಣಶೀಲ ಧೋರಣೆಯೇ ತಂಡಗಳನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿತು.ಆಧಾರದ ಮೇಲೆ ಹೇಳುವುದಾದರೆ ಬಹುಶಃ ಶ್ರೀಶಾಂತ್ ಕೂಡ ಕ್ಯಾಪ್ಟನ್ಸಿ ಮೆಟೀರಿಯಲ್ಲೇ ಆಗಿರಬಹುದು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-8684830814683599300?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/8684830814683599300/comments/default' title='Post Comments'/><link rel='replies' type='text/html' href='http://ragaakshara.blogspot.com/2011/01/vs.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/8684830814683599300'/><link rel='self' type='application/atom+xml' href='http://www.blogger.com/feeds/2998842447029730227/posts/default/8684830814683599300'/><link rel='alternate' type='text/html' href='http://ragaakshara.blogspot.com/2011/01/vs.html' title='ಸ್ವಭಾವ vs ಸಾಮರ್ಥ್ಯ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/TTfjhPyu7uI/AAAAAAAAAPw/IbN3NkuOZ3U/s72-c/sreesanth.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-1499515893853915010</id><published>2010-12-16T14:09:00.002+05:30</published><updated>2010-12-16T14:14:30.521+05:30</updated><title type='text'>ಬೆಂಕಿಯಲ್ಲಿಅರಳಿದ ಹೂವುಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/TQnRYoKaHqI/AAAAAAAAAO0/0bzlRtZ0e-s/s1600/Jwala%2BGutta%2B%252811%2529.jpg"&gt;&lt;img style="display: block; margin: 0px auto 10px; text-align: center; cursor: pointer; width: 266px; height: 400px;" src="http://4.bp.blogspot.com/_fosRdfQ3Hws/TQnRYoKaHqI/AAAAAAAAAO0/0bzlRtZ0e-s/s400/Jwala%2BGutta%2B%252811%2529.jpg" alt="" id="BLOGGER_PHOTO_ID_5551198236738985634" border="0" /&gt;&lt;/a&gt;&lt;br /&gt;೧೦೦ ಮೀ. ಓಟ 10 ಸೆಕೆಂಡ್ ಒಳಗೆ ಮುಗಿದುಹೋಗುತ್ತದೆ. ಬಾಕ್ಸಿಂಗ್ ಪಂದ್ಯಕ್ಕೆ ಹೆಚ್ಚೆಂದರೆ 6 ನಿಮಿಷ ಸಾಕು. ಬ್ಯಾಡ್ಮಿಂಟನ್ ಪಂದ್ಯಗಳು ಸರಾಸರಿ ಅರ್ಧ ಗಂಟೆಯಲ್ಲಿ ಮುಗಿಯುತ್ತವೆ. ಇಷ್ಟು ಕಡಿಮೆ ಅವಧಿಯಲ್ಲಿ ಕ್ರೀಡಾ ಪಟುಗಳು ಕೀರ್ತಿ ಶಿಖರ ಏರಬೇಕು. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬೇಕು. ಆದರೆ, ಈ ಹತ್ತು ಸೆಕೆಂಡ್, 6 ನಿಮಿಷ, ಅರ್ಧ ಗಂಟೆಗಳಲ್ಲಿ ಗಳಿಸಬಹುದಾದ ವಿಶ್ವ ಮನ್ನಣೆಗಾಗಿ ಕ್ರೀಡಾಪಟುಗಳು ಅದೆಷ್ಟು ಕಷ್ಟ-ಕೋಟಲೆ ಅನುಭವಿಸಬೇಕಾಗುತ್ತದೆ? ಅದೆಂಥಾ ತ್ಯಾಗಗಳನ್ನು ಮಾಡಬೇಕಾಗುತ್ತದೆ? ಭಾರತದಲ್ಲಿ ಶ್ರೀಮಂತ ಹಿನ್ನೆಲೆಯಿಂದ ಯಶಸ್ವಿ ಕ್ರೀಡಾಪಟುಗಳಾಗುವವರ ಸಂಖ್ಯೆ ಬಹಳ ಕಡಿಮೆ. ಎಲ್ಲೋ ಸಾವಿರಕ್ಕೆ ಒಂದು. ಜೊತೆಗೆ ಪ್ರತಿಯೊಬ್ಬ ಕ್ರೀಡಾ ಪಟುವಿನ ಯಶಸ್ಸಿನ ಹಿಂದೆಯೂ ಅನೇಕ ರೋಚಕ, ಮೈಝುಮ್ಮೆನಿಸುವ, ಮರುಕ ಹುಟ್ಟಿಸುವ ಕಥೆಗಳಿರುತ್ತವೆ.&lt;br /&gt;ಭಾರತದ ಕೆಲವು ಯಶಸ್ವಿ ಕ್ರೀಡಾಪಟುಗಳ ಯಶಸ್ಸಿನ ಹಿಂದಿನ ಕಥೆಗಳು ಇಲ್ಲಿವೆ.ೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ಗೆ ಬಂದ ಆರಂಭದ ದಿನಗಳಲ್ಲಿ ಅವರು ದಿನಕ್ಕೆ ಎರಡು ಲೀ. ಹಾಲು ಕುಡಿಯುತ್ತಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಕ್ರೀಡಾಪಟುಗಳ ಜೀವನದಲ್ಲಿ ಪೌಷ್ಠಿಕ ಆಹಾರಕ್ಕೆ ಬಹುಮುಖ್ಯ ಪಾತ್ರಘಿ. ಅದಿಲ್ಲದೆ ಎಷ್ಟೇ, ಅಭ್ಯಾಸ ಮಾಡಿದರೂ,ಲಾಗ ಹೊಡೆದರೂ, ಸ್ಪರ್ಧೆಯಲ್ಲಿ ಗೆಲ್ಲಲಾಗುವುದಿಲ್ಲ.&lt;br /&gt;ನಮ್ಮ ಕುಸ್ತಿ ವಿಶ್ವಚಾಂಪಿಯನ್ ಸುಶೀಲ್ ಕುಮಾರ್ ಕಥೆಯೂ ಇದಕ್ಕಿಂತ ಭಿನ್ನವಲ್ಲ. 13ನೇ ವಯಸ್ಸಿನಲ್ಲೇ ಅಖಾಡಕ್ಕಿಳಿದು ಮೈಗೆ ಮಣ್ಣು ಮೆತ್ತಿಸಿಕೊಂಡಿದ್ದ ಸುಶೀಲ್ ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದರು. ಅವರ ಅಪ್ಪ ದಿನಂಪ್ರತಿ ಕೆಲಸಕ್ಕೆ ಹೋಗುವಾಗ 2 ಲೀ. ಹಾಲು, ಕಾಲು ಕೆಜಿ ತಾಜಾ ಪನ್ನೀರ್, ಸೇಬು, ಬಾದಾಮಿ ಮತ್ತು 100 ಗ್ರಾಂನಷ್ಟು ಆಗಷ್ಟೇ ಕಾಯಿಸಿದ ಬೆಣ್ಣೆಯನ್ನು ಮಗನಿಗೆಂದು ತಂದುಕೊಡುತ್ತಿದ್ದರು. ಇಷ್ಟು ಆಹಾರ ಪ್ರತೀ ದಿನ ಸುಶೀಲ್ಗೆ ಅಗತ್ಯವಿತ್ತು ಅವರ ಕುಟುಂಬ ಆರ್ಥಿಕವಾಗಿ ಅಷ್ಟೇನೂ ಗಟ್ಟಿಯಾಗಿರಲಿಲ್ಲಘಿ. ಆದರೂ, ಒಂದು ವಿಷಯದಲ್ಲಿ ಸುಶೀಲ್ ಅದೃಷ್ಟವಂತ. ಅವರಿಗೆ ಅವರದೇ ಆದ ಹೊಲವಿತ್ತು. ಎಮ್ಮೆ ಸಾಕಿದ್ದರು. ಹಾಗಾಗಿ ಬೆಳೆದಿದ್ದರಲ್ಲಿ ಒಂದು ಪಾಲನ್ನು ಮಗನ ಡಯೆಟ್ಗಿಂದು ಮೀಸಲಿಡುತ್ತಿದ್ದರು.ದರೆ, ವಿಶ್ವ ನಂ.1 ಬಾಕ್ಸರ್ ವಿಜೇಂದರ್ಗೆ ಇಂಥ ಅನುಕೂಲವಿರಲಿಲ್ಲ. ಆದರೂ, ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಅದರ ಬಿಸಿ ತಟ್ಟದಂತೆ ಅಪ್ಪ-ಅಮ್ಮ ನೋಡಿಕೊಳ್ಳುತ್ತಿದ್ದರು. ತ್ತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟ ಪಾಲಿಗೆ ಬಾಲ್ಯವೆನ್ನುವುದು ಪಾನಿಪುರಿ, ಬೇಲ್ಪುರಿ, ಸಮೋಸ, ಐಸ್ಕ್ರೀಮ್, ಕ್ಯಾಂಡಿಗಳು, ಸಿಹಿ ತಿಂಡಿ ಹಾಗೂ ಹುರಿದ ತಿಂಡಿಗಳಿಲ್ಲದ ಸಪ್ಪೆ ಬದುಕಾಗಿತ್ತುಘಿ. ಎಲ್ಲಾ ಮಕ್ಕಳೂ ತಿನ್ನುವಾಗ ನನಗೇಕೆ ಈ ಶಿಕ್ಷೆ ಎಂದು ಜ್ವಾಲಾ ಕಣ್ಣೀರು ಹಾಕಿದ ದಿನಗಳೂ ಇದ್ದವು.ತ್ತೀಚೆಗೆ ಹಾಂಕಾಂಗ್ ಓಪನ್ ಗೆದ್ದಿರುವ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ವಿಷಯದಲ್ಲೂ ಅಷ್ಟೇ. ಬೆಳಗಿನ ಜಾವ 4ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸೈನಾ ಒಂದೆಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಿರುತ್ತಿದ್ದರು, ಓದುತ್ತಿದ್ದರು, ಅಭ್ಯಾಸ ನಡೆಸುತ್ತಿದ್ದರು. 8ನೇ ವರ್ಷದಿಂದ ಇದೇ ಅವರ ದೈನಂದಿನ ವೇಳಾಪಟ್ಟಿಯಾಗಿತ್ತು. ಕ್ರೀಡಾಂಗಣಕ್ಕೆಂದು ಅಪ್ಪನ ಬೈಕ್ನಲ್ಲಿ ಇಲ್ಲವೇ ಬಸ್ ಅಥವಾ ರೈಲಿನಲ್ಲಿ ತೆರಳುವಾಗ ಅವರಿಗೆ ದಾರಿಯಲ್ಲಿಯೇ ನಿದ್ರೆ ಬರುತ್ತಿತ್ತುಘಿ. ಇವತ್ತೊಂದು ದಿನ ಅಭ್ಯಾಸ ಬೇಡವಮ್ಮಾ ಎಂದು ಅವರು ಅಮ್ಮನ ಬಳಿ ಗೋಗರೆಯುತ್ತಿದ್ದರು. ಆದರೆ, ಅಮ್ಮ ಕೇಳುತ್ತಿರಲಿಲ್ಲ.ಬಲವಂತ ಮಾಡಿ ಕಳಿಸುತ್ತಿದ್ದರು. ಭಾನುವಾರ ಬಂತೆಂದರೆ ಸೈನಾ ಪಾಲಿಗೆ ಕೇವಲ ನಿದ್ರೆ, ನಿದ್ರೆ ಮತ್ತು ಕೇವಲ ನಿದ್ರೆ ಮಾತ್ರ.&lt;br /&gt;ಸತತ ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ಗೆ ಭಾನುವಾರವೂ ವಿಶ್ರಾಂತಿ ಲಭಿಸುತ್ತಿರಲಿಲ್ಲ. ಶಾಲೆಗೆ ರಜಾ ಇದ್ದ ದಿನ ಎಲ್ಲಾ ಮಕ್ಕಳಂತೆ ಅವರಿಗೆ ಮಜಾ ಅನುಭವಿಸುವ ಮಾತೇ ಇರಲಿಲ್ಲ. ಅಪ್ಪ ಅಮ್ಮನ ಜೊತೆ ಜಮೀನಿನಲ್ಲಿ ದುಡಿಯಬೇಕಾಗಿತ್ತುಘಿ. ಶಾಲೆ ಇದ್ದ ದಿನವೂ ಅಪರಾಹ್ನದ ಹೊತ್ತಿನಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಬೇಕಾಗಿತ್ತು. ಸಂಜೆಯಾದ ಮೇಲೆ ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಬೇಕಿತ್ತುಘಿ. ಇಬ್ಬರು ತಮ್ಮಂದಿರು ಹಾಗೂ ತಂಗಿಯನ್ನು ನೋಡಿಕೊಳ್ಳಬೇಕಿತ್ತು. ಬಡಮಕ್ಕಳಿಗೆ ಬಾಲ್ಯವೆಂದರೇನೆಂದೇ ತಿಳಿದಿರುವುದಿಲ್ಲ ಎಂಬ ಮಾತು ಮೇರಿಕೋಮ್ ವಿಷಯದಲ್ಲಿ ನಿಜವಾಗಿತ್ತು.ದರೂ, ಮೇರಿಕೋಮ್ಗೊಂದು ಕನಸಿತ್ತು. ಆತ್ಮವಿಶ್ವಾಸವಿತ್ತು. ತಾನು ಕ್ರೀಡಾಪಟುವಾದರೆ ಹೆಚ್ಚು ಹಣ ಸಂಪಾದನೆ ಮಾಡಿ ಮನೆಗೆ ಸಹಾಯ ಮಾಡಬಹುದು ಎನ್ನುವುದು ಹುಡುಗಿಯ ಯೋಚನೆಯಾಗಿತ್ತು. ಹಾಗೆಂದೇ ಹುಡುಗಿ ಮನೆಯಿಂದ 45 ಕಿಮೀ ದೂರದಲ್ಲಿದ್ದ ಇಂಾಲದಲ್ಲಿ ಶಾಲೆಗೆ ಸೇರಿಸಲು ಹುಡುಗಿ ಹಟ ಹಿಡಿದಳು. ಅಪ್ಪ-ಅಮ್ಮನಿಗೆ ಇಷ್ಟವಿರದಿದ್ದರೂ ಹುಡುಗಿ ಕೇಳಲಿಲ್ಲ. ಆಗಿನ್ನೂ ಆಕೆಗೆ 13 ವರ್ಷ. 16 ವರ್ಷವಾಗುವಾಗ ಮೇರಿಕೋಮ್ ಇಂಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಕಾರದಲ್ಲಿ ಇಂಬೋಚಾ ಸಿಂಗ್ ಬಳಿ ಬಾಕ್ಸಿಂಗ್ ಕಲಿಯುತ್ತಿದ್ದರು.&lt;br /&gt;ಸುಶೀಲ್ ಕುಮಾರ್ ಸಹ 13ನೇ ವಯಸ್ಸಿನಲ್ಲೇ ಮನೆ ಬಿಟ್ಟವರು. ಅಂದಿನಿಂದ ಅವರ ಜೀವನ ಕಳೆದಿದ್ದೆಲ್ಲಾ ತರಬೇತಿ ಕೇಂದ್ರಗಳಲ್ಲಿ ಮತ್ತು ಕ್ರೀಡಾ ಹಾಸ್ಟೆಲ್ಗಳಲ್ಲಿ. ಅವರ ಅಮ್ಮನಿಗೆ ಮಗನನ್ನು ಬಿಟ್ಟಿರುವುದು ಕಷ್ಟವಾಗುತ್ತಿತ್ತು. ಆದರೂ, ಅದನ್ನವರು ತೋರಗೊಡಲಿಲ್ಲ. ಅವರು ಯಾವಾಗಲೂ ಸಕಾರಾತ್ಮಕವಾಗಿರುತ್ತಿದ್ದರು. ಮಗನಿಗೆ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದರು. ಏನಾದರೂ ತಮಾಷೆ ಮಾಡುತ್ತಿದ್ದರು. ಸದ್ಗುಣಗಳನ್ನು ತಿಳಿಯಹೇಳುತ್ತಿದ್ದರು. ಅದೇ ಗುಣ ಸುಶೀಲ್ಗೂ ಬಂದಿದೆ.ಂದು ಸಾಧಾರಣ ಮಗುವನ್ನು ಕ್ರೀಡಾಪಟುವಾಗಿ ಬೆಳೆಸುವುದೆಂದರೆ ಅದಕ್ಕೆ ಸಾಕಷ್ಟು ಹಣಬೇಕು. ಪೌಷ್ಠಿಕ ಆಹಾರ, ಪ್ರಯಾಣವೆಚ್ಚ, ಸಲಕರಣೆಗಳು, ತರಬೇತಿ ಶುಲ್ಕ, ಉಡುಪುಗಳು... ಹೀಗೆ ಖರ್ಚಿನ ಮೂಲಗಳು ಒಂದೆರಡಲ್ಲ. ಬ್ಯಾಡ್ಮಿಂಟನ್ನಂಥ ಆಟ ಕೂಡ ದುಬಾರಿಯೇ. ಜ್ವಾಲಾ ಗುಟ್ಟ ಅವರ ತರಬೇತಿಯ ವೆಚ್ಚ ಭರಿಸಲು ಅವರ ತಂದೆ ಪರದಾಡುತ್ತಿದ್ದರು. ಅವರ ಅಮ್ಮ ಯೇಲನ್ ಸಹ ಕೆಲಸ ಹುಡುಕುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.&lt;br /&gt; ಯೇಲನ್ ಅವರ ಮ್ಯಾಂಡರಿನ್ ಮೂಲ ಅವರಿಗೆ ಕೆಲಸ ಹುಡುಕುವಾಗ ಉಪಯೋಗಕ್ಕೆ ಬಂತು. ಚೀನಾದೊಂದಿಗೆ ವ್ಯವಹಾರ ಸಂಪರ್ಕ ಹೊಂದಿರುವ ಾರ್ಮಾ ಕಂಪೆನಿಗಳಿಗೆ ಮ್ಯಾಂಡರಿನ್ ಭಾಷೆ ಬಲ್ಲವರ ಅಗತ್ಯ ತುರ್ತಾಗಿತ್ತು. ಯೇಲನ್ ಇದರ ಲಾಭ ಪಡೆದು ಕೆಲಸ ಗಿಟ್ಟಿಸಿಕೊಂಡರು. ಆಗ ಜ್ವಾಲಾಗೆ 16 ವರ್ಷ. ಅವರು ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದಾಗ ಅಗ್ಗದ ಕ್ಯಾನ್ವಾಸ್ ಶೂ ಧರಿಸಿ ಆಡಿದ್ದರು. ಆಗ ಅವರ ಬಳಿ ಇದ್ದಿದ್ದು ಎರಡೇ ರ್ಯಾಕೆಟ್. ಅವರಿಗೆ ಹುಟ್ಟುಹಬ್ಬದ ಗ್ಟಿಗಾಗಿ ಅವರ ಅಪ್ಪ ಸ್ನೇಹಿತರ ಬಳಿ ಸಾಲ ಮಾಡಿದ್ದರು.ಷ್ಟಗಳು ಎಷ್ಟೇ ಇದ್ದರೂ, ಜ್ವಾಲಾಗೆ ಅಪ್ಪ-ಅಮ್ಮನ ಸಂಪೂರ್ಣ ಬೆಂಬಲವಿತ್ತು. ನೆಂಟರಿಷ್ಟರೆಲ್ಲಾ ಜ್ವಾಲಾ ಆಟವಾಡುವುದನ್ನು ಆಕ್ಷೇಪಿಸಿದ್ದರು. ಇವಳು ಬ್ಯಾಡ್ಮಿಂಟನ್ ಹುಚ್ಚು ಹಿಡಿಸಿಕೊಂಡು ಓದಿನಲ್ಲಿ ಹಿಂದೆ ಬೀಳುತ್ತಾಳೆ. ಮುಂದೆ ಇವಳಿಗೆ ಮದುವೆಯಾಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ಅದೇ ಬ್ಯಾಡ್ಮಿಂಟನ್ ಇಂದು ಜ್ವಾಲಾಗೆ ಎಲ್ಲಾ ಕೊಡಿಸಿದೆ. ಹೈದರಾಬಾದ್ನ ಸಾಂಪ್ರದಾಯಿಕ ತೆಲುಗು ಕುಟುಂಬದ ಜ್ವಾಲಾ ಇಂದು ಮುಂಬೈನಲ್ಲಿ ಸ್ವಂತ ಮನೆಹೊಂದಿದ್ದಾರೆ. ಬಿಎಂಡಬ್ಲ್ಯು ಕಾರಿದೆ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅವರಿಂದು ವಿಶ್ವ ತಾರೆ.&lt;br /&gt;ಭಿವಾನಿಯಲ್ಲಿ ಬಾಕ್ಸರ್ಗಳು ಮಾತ್ರ ಹುಟ್ಟುತ್ತಾರೆ ಎನ್ನುವುದೊಂದು ಮಾತು. ವಿಜೇಂದರ್ ಸಿಂಗ್ ಸಹ ಅಷ್ಟೇ. ಅವರು ಸಣ್ಣ ವಯಸ್ಸಿನಿಂದ ಹವಾ ಸಿಂಗ್ ಬಗ್ಗೆ ರೋಚಕ ಕಥೆಗಳನ್ನು ಕೇಳಿಕೊಂಡು ಬೆಳೆದವರು. 1966 ಮತ್ತು 1970ರ ಏಷ್ಯಾಡ್ನಲ್ಲಿ ಬಂಗಾರ ಗೆದ್ದಿದ್ದ ಹವಾ ಸಿಂಗ್ ಸತತ 11 ವರ್ಷ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿ ದಂತಕಥೆಯಾದವರು. ಅವರ ಸ್ಫೂರ್ತಿಯಲ್ಲಿ ಬೆಳೆದ ವಿಜೇಂದರ್ಗೆ ಅಣ್ಣ ಮತ್ತು ಸ್ನೇಹಿತರು ಜಿಮ್ನಲ್ಲಿ ಕಾಲ ಕಳೆಯುತ್ತಿದ್ದುದು ಪ್ರೇರಣೆಯಾಗಿತ್ತು. ಭಿವಾನಿ ಬಾಕ್ಸಿಂಗ್ಗೆ ಪ್ರಸಿದ್ಧವಾದರೆ, ಹರ್ಯಾಣದ ಉಳಿದೆಡೆಯೆಲ್ಲಾ ಆವರಿಸಿರುವುದು ಕುಸ್ತಿ.&lt;br /&gt;ಸುಶೀಲ್ ಕುಮಾರ್ ಕುಟುಂಬದಲ್ಲಿ ಕುಸ್ತಿಯ ಉದ್ದ ಪರಂಪರೆಯೇ ಇದೆ. ಅವರ ಅಪ್ಪಘಿ, ಚಿಕ್ಕಂಪ್ಪಂದಿರು, ಅಜ್ಜ ಎಲ್ಲರೂ ಮಲ್ಲರಾಗಿದ್ದವರೇ. ಹರ್ಯಾಣದಂತೆ ಮಣಿಪುರದಲ್ಲೂ ಕೂಡ ಕ್ರೀಡೆ ಸಂಸ್ಕೃತಿಯಾಗಿ ಬೆಳೆದಿದೆ. ರಾಷ್ಟ್ರ ಮಟ್ಟದಲ್ಲಿ ಅನೇಕ ುಟ್ಬಾಲ್, ಬಾಕ್ಸಿಂಗ್ ಆರ್ಚರಿ, ಸೈಕ್ಲಿಂಗ್ ಮತ್ತು ಹಾಕಿ ತಾರೆಗಳನ್ನು ಆ ರಾಜ್ಯ ಕೊಡುಗೆಯಾಗಿ ನೀಡಿದೆ. ಗುವಾಂಗ್ಝೌ ಏಷ್ಯಾಡ್ನಲ್ಲಿ ಕಂಚು ಗೆಲ್ಲುವ ಮುನ್ನ ಸತತ 7 ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದಿದ್ದ ಬಾಕ್ಸರ್ ಸುರಂಜಯ್ ಸಿಂಗ್ ಪ್ರಾರಂಭದಲ್ಲಿ ುಟ್ಬಾಲ್ ಆಟಗಾರನಾಗಿದ್ದರು. ಮುಂದೆ ಬಾಕ್ಸಿಂಗ್ನತ್ತ ವಾಲಿದರು. ಒಟ್ಟಾರೆ ಮಣಿಪುರದಲ್ಲಿ ಬಡತನವನ್ನು ದೂರ ಅಟ್ಟಿ ಶ್ರೀಮಂತರಾಗುವುದಕ್ಕೆ ಕ್ರೀಡಾಪಟುವಾಗುವುದೇ ಮಾರ್ಗ ಎಂದು ಯುವಜನತೆ ಭಾವಿಸಿದೆ.&lt;br /&gt;ವಿಜೇಂದರ್ ಆರಂಭದ ಕೆಲವು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದರು. ಆದರೆ, ಅದರಿಂದ ಅವರೆಂದೂ ಹತಾಶರಾಗಲಿಲ್ಲಘಿ. ಬದಲಿಗೆ ಮುಂದಿನ ಪಂದ್ಯವನ್ನು ಯಾವ ರೀತಿ ಗೆಲ್ಲುವುದೆಂದೇ ಅವರ ಯೋಚನೆಯಾಗಿತ್ತು. ಸುರಂಜಯ್ ಪಂದ್ಯ ಸೋತರೆ ಆ ರಾತ್ರಿ ಅವರು ನಿದ್ರೆ ಮಾಡುವುದಿಲ್ಲಘಿ. ಬದಲಿಗೆ ಅವರ ತಾನು ಸೋತಿದ್ದು ಹೇಗೆ? ಏಕೆ ಎಂದು ಚಿಂತಿಸುತ್ತಾರೆ. ಮಾರನೇ ಮುಂಜಾನೆಯಿಂದ ಆ ನಿಟ್ಟಿನಲ್ಲಿ ಇನ್ನೂ ಕಠಿಣ ಅಭ್ಯಾಸ ಮಾಡುತ್ತಾರೆ.&lt;br /&gt;ಸೈನಾಗೆ ಗೆಲುವಿನ ಚಟ ಬೆಳೆಸಿದ್ದು ಅವರ ಅಮ್ಮಘಿ. ಪಂದ್ಯ ಆಡುತ್ತಿರುವಾಗ ನೀನು ಕೇವಲ ಗೆಲುವಿನ ಬಗ್ಗೆ ಮಾತ್ರ ಯೋಚಿಸುತ್ತಿರಬೇಕು; ಎದುರಾಳಿಯ ಬಗ್ಗೆ ಅಲ್ಲ ಎನ್ನುವುದು ಸೈನಾಗೆ ಅಮ್ಮ ಹೇಳಿಕೊಟ್ಟ ಪಾಠವಾಗಿತ್ತು. ಮಗಳು ಅದನ್ನು ಚಾಚೂತಪ್ಪದೆ ಪಾಲಿಸಿದಳು.&lt;br /&gt;ಲಿಯಾಂಡರ್ ಪೇಸ್ ಇಂದು ಟೆನಿಸ್ ದಿಗ್ಗಜ. ದಾಖಲೆ ಗ್ರಾಂಡ್ಸ್ಲಾಂಗಳ ಒಡೆಯ. ಅವರೀಗ ಅಂತಾರಾಷ್ಟ್ರೀಯ ಸೆಲೆಬ್ರಿಟಿ. ಅವರ ಪತ್ನಿಯೂ ದೊಡ್ಡ ಸೆಲೆಬ್ರಿಟಿ. ಆದರೆ, ಒಂದು ಕಾಲದಲ್ಲಿ ಲಿಯಾಂಡರ್ ತರಬೇತಿಗೆಂದು ತಿಂಗಳಿಗೆ 5-7 ಸಾವಿರ ರೂ ಹೊಂದಿಸಲು ಅವರ ಅಪ್ಪ ವೇಸ್ ಪೇಸ್ ಪರದಾಡುತ್ತಿದ್ದರು. 12ನೇ ವಯಸ್ಸಿನಿಂದ 5 ವರ್ಷ ಕಾಲ ಬ್ರಿಟಾನಿಯಾ ಅಮೃತ್ರಾಜ್ ಟೆನಿಸ್ ಅಕಾಡೆಮಿಯಲ್ಲಿ ಕಲಿತ ಲಿಯಾಂಡರ್ 1990ರಲ್ಲಿ ಜೂನಿಯರ್ ವಿಂಬಲ್ಡನ್ ಗೆದ್ದರು. ಆದರೆ, ಮುಂದಿನ ಆರು ತಿಂಗಳ ಅವರು ಒಂದೂ ಪಂದ್ಯ ಆಡಲಿಲ್ಲ. ಕಾರಣ ಹಣ. ಐಟಿಎ್ ಸರ್ಕ್ಯುಟ್ನಲ್ಲಿ ಆಡಬೇಕಾದರೆ, ಅವರು ಕಡ್ಡಾಯವಾಗಿ ಕೋಚ್, ಟ್ರೈನರ್ ಹೊಂದಬೇಕಾಗಿತ್ತು. ಅದಕ್ಕೆ ಕನಿಷ್ಠ 2 ಲಕ್ಷ ರೂ. ಬೇಕಾಗಿತ್ತು. ಕೊನೆಗೂ ಜೂನಿಯರ್ ಹಂತದಿಂದ ವೃತ್ತಿಪರರಾಗುವವರೆಗೆ ಲಿಯಾಂಡರ್ ಒಂದು ಟೂರ್ನಿಯಲ್ಲಿ ಗೆದ್ದ ಹಣದಿಂದ ಇನ್ನೊಂದು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದರು. ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ಕ್ರೀಡಾ ಸಚಿವರಾದಾಗ ಲಿಯಾಂಡರ್ಗೆ ಎರಡು ವರ್ಷ ಕಾಲ ವರ್ಷಕ್ಕೆ 30,000 ಡಾಲರ್ ನೆರವು ಕೊಡಿಸಿದರು. ಗ್ರಾಂಡ್ಸ್ಲಾಂಗಳಲ್ಲಿ ಡಬಲ್ಸ್ ಯಶಸ್ಸಿನ ಬಳಿಕ ಲಿಯಾಂಡರ್ ಜೀವನದಲ್ಲಿ ಭಾಗ್ಯೋದಯವಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-1499515893853915010?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/1499515893853915010/comments/default' title='Post Comments'/><link rel='replies' type='text/html' href='http://ragaakshara.blogspot.com/2010/12/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/1499515893853915010'/><link rel='self' type='application/atom+xml' href='http://www.blogger.com/feeds/2998842447029730227/posts/default/1499515893853915010'/><link rel='alternate' type='text/html' href='http://ragaakshara.blogspot.com/2010/12/blog-post.html' title='ಬೆಂಕಿಯಲ್ಲಿಅರಳಿದ ಹೂವುಗಳು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/TQnRYoKaHqI/AAAAAAAAAO0/0bzlRtZ0e-s/s72-c/Jwala%2BGutta%2B%252811%2529.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-3092953574772532659</id><published>2010-11-04T15:31:00.002+05:30</published><updated>2010-11-04T15:37:34.755+05:30</updated><title type='text'>ಪುಟ್ಟ ರಾಜಕುಮಾರಿಯ  ದಿಟ್ಟ ಹೆಜ್ಜೆಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/TNKFy7486DI/AAAAAAAAAOU/7fUJK6_S1so/s1600/caro.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 301px;" src="http://4.bp.blogspot.com/_fosRdfQ3Hws/TNKFy7486DI/AAAAAAAAAOU/7fUJK6_S1so/s400/caro.jpg" alt="" id="BLOGGER_PHOTO_ID_5535634002108278834" border="0" /&gt;&lt;/a&gt;&lt;br /&gt;ಅದ್ಭುತ ಆಟ, ಅಪ್ಸರೆಯ ಮೈಮಾಟ.&lt;br /&gt;ಟೆನಿಸ್ ಜಗತ್ತು ನಿಬ್ಬೆರಗಾಗಲು ಇನ್ನೇನು ಬೇಕು?&lt;br /&gt;ವಿಶ್ವ  ನಂ.1 ಕಿರೀಟ ಮುಡಿ ಅಲಂಕರಿಸಿದೆ. ಪ್ರಾಯೋಜಕರು ಆಕೆಯ ಒಂದು ಸಹಿಗಾಗಿ ಕರಾರುಪತ್ರ ಹಿಡಿದುಕೊಂಡು ಮನೆಬಾಗಿಲು ಕಾಯುತ್ತಿದ್ದಾರೆ. ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದಾರೆ, ದುಂಬಾಲು ಬೀಳುತ್ತಿದ್ದಾರೆ.&lt;br /&gt;20ರ ಸಣ್ಣ ಹರೆಯದಲ್ಲೇ ಜಗತ್ತು ಕ್ಯಾರೊಲಿನ್ ವೊಜ್ನಿಯಾಕಿಯ ವಶವಾಗಿದೆ.&lt;br /&gt;ಮಹಿಳಾ ಟೆನಿಸ್ನ ರೋಮಾಂಚನ ಇರುವುದೇ ಇಲ್ಲಿ. ಆಕೆ ಸ್ಟೆಫಿ ಗ್ರ್ಾ ಇರಬಹುದು, ಸೆಬಾಟಿನಿ, ಸ್ಯಾಂಚೆಜ್ ವಿಕಾರಿಯೋ ಆಗಿರಬಹುದು. ಮೋನಿಕಾ ಸೆಲಸ್, ಮಾರ್ಟಿನಾ ಹಿಂಗಿಸ್ ಇರಬಹುದು. ಇತ್ತೀಚಿನ ಶರಪೋವ, ಇವಾನೊವಿಕ್ ಆಗಿರಬಹುದು. ಹುಡುಗಿಯರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಬಲಿಯುವ ಮೊದಲೇ ಚಾಂಪಿಯನ್ ಪಟ್ಟಕ್ಕೇರಿರುತ್ತಾರೆ. ಅಬ್ಬಾ ಹುಡುಗಿ ಎಂದು ಜನ ಆಕೆಯ ಯಶಸ್ಸು, ಆಟ, ಅಂದಕ್ಕೆ ಮರುಳಾಗಿರುವಾಗಲೇ ಇನ್ನೊಬ್ಬ ಪುಟ್ಟ ರಾಜಕುಮಾರಿಯ ರಂಗಪ್ರವೇಶವಾಗಿರುತ್ತದೆ. ಟೆನಿಸ್ ಅಭಿಮಾನಿಗಳ ನಿಷ್ಠೆ ಮ್ಯೂಸಿಕಲ್ ಚೇರ್ನಂತಾಗಿದ್ದರೆ, ಅದರಲ್ಲಿ ಅವರ ತಪ್ಪೇನೂ ಇಲ್ಲ. ೆಡರರ್, ನಡಾಲ್ ಮೇಲಿರುವ ಏಕನಿಷ್ಠೆಯನ್ನು ಅಭಿಮಾನಿಗಳು ಮಹಿಳಾ ಟೆನಿಸ್ನಲ್ಲಿ ಒಬ್ಬಳು ಶರಪೋವಾ ಅಥವಾ ಕ್ಲೈಸ್ಟರ್ಸ್ ಮೇಲಿರಿಸುವುದು ಕಷ್ಟ.&lt;br /&gt;ಕ್ಯಾರೊಲಿನ್ ವೋಜ್ನಿಯಾಕಿಯನ್ನು ಡೆನ್ಮಾರ್ಕ್ನ ಜನ ಪುಟ್ಟ ರಾಜಕುಮಾರಿ ಎಂದೇ ಕರೆಯುತ್ತಾರೆ. 5 ಅಡಿ 10 ಇಂಚು ಎತ್ತರ ಬೆಳೆದಿದ್ದರೂ, ಆಕೆಯ ಮುಖದಲ್ಲಿನ್ನೂ ಮುಗ್ಧತೆ ಮಾಸದಿರುವುದು ಅದಕ್ಕೆ ಕಾರಣ. ಈ ವರ್ಷ ಹುಡುಗಿ ಉಳಿದೆಲ್ಲಾ ಮಹಿಳೆಯರಿಗಿಂತ ಅತೀ ಹೆಚ್ಚು ಟೆನಿಸ್ ಆಡಿದ್ದಾಳೆ. ಅತೀ ಹೆಚ್ಚು ಟ್ರೋಫಿಗಳನ್ನೂ ಗೆದ್ದಿದ್ದಾಳೆ. ಯುರೋಪ್ನ ಪುಟ್ಟ ದೇಶ ಡೆನ್ಮಾರ್ಕ್ನಿಂದ ಹೊರಹೊಮ್ಮಿದ ಮೊಟ್ಟಮೊದಲ ಚಾಂಪಿಯನ್ ಟೆನಿಸ್ ಹುಡುಗಿ ವೋಜ್ನಿಯಾಕಿ.&lt;br /&gt;ತನ್ನ ಉದ್ದ ಹೆಸರನ್ನು ಕ್ಯಾರೋ ಎಂದಷ್ಟೇ ಮೊಟಕುಗೊಳಿಸಿಕೊಂಡು, ಜನರಿಂದ ಹಾಗೆಯೇ ಕರೆಸಿಕೊಳ್ಳಲು ಇಷ್ಟ ಪಡುವ ವೋಜ್ನಿಯಾಕಿ ಅಪ್ಪಟ ಡೆನ್ಮಾರ್ಕಿಯೇನೂ ಅಲ್ಲ. ಏಕೆಂದರೆ, ಪೋಲೆಂಡ್ನವರು ಸಹ ನಮ್ಮವಳವಳು ಎನ್ನುತ್ತಾರೆ. ಕಾರಣವೂ ಇಲ್ಲದಿಲ್ಲ. ಕ್ಯಾರೋಳ ಅಪ್ಪ-ಅಮ್ಮ ಇಬ್ಬರೂ ಮೂಲತಃ ಪೋಲೆಂಡ್ನವರು. ಬಹಳ ಹಿಂದೆಯೇ ಡೆನ್ಮಾರ್ಕ್ಗೆ ವಲಸೆ ಬಂದು ನೆಲೆಸಿದವರು. ಅಪ್ಪ ಡೆನ್ಮಾರ್ಕ್ನ ಕ್ಲಬ್ಗಳ ಪರ ವೃತ್ತಿಪರ ುಟ್ಬಾಲ್ ಆಡಿದವರು. ಅಮ್ಮ ಪೋಲೆಂಡ್ನಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು. ಕ್ಯಾರೋಳ ಅಣ್ಣ ಸದ್ಯ ಡೆನ್ಮಾರ್ಕ್ನಲ್ಲಿ ುಟ್ಬಾಲ್ ಆಡುತ್ತಾರೆ.&lt;br /&gt;ಇಂಥ ಕ್ರೀಡಾ ಕುಟುಂಬದಿಂದ ಬಂದ ವೋಜ್ನಿಯಾಕಿ ಅದಕ್ಕೆ ತಕ್ಕ ಅಥ್ಲೆಟಿಕ್ ದೇಹ, ಫಿಟ್ನೆಸ್ ಬಳುವಳಿ ಪಡೆದವರು. ಅವರು ಟೆನಿಸ್ ಆಟವನ್ನು ುಟ್ಬಾಲ್ನಂತೆ ಯೋಜನಾಬದ್ಧವಾಗಿ ಆಡುವುದರಲ್ಲೂ ಅಪ್ಪನ ಕೊಡುಗೆ ಇರಬಹುದು. ಇಂಥ ವಿಶಿಷ್ಠ ಶೈಲಿ ವೋಜ್ನಿಯಾಕಿ ಆಟದ ಶಕ್ತಿಯೂ ಹೌದು, ಮಿತಿಯೂ ಹೌದು. ಅಂದರೆ, ಹುಡುಗಿಯ ಆಟದಲ್ಲಿ ಕ್ಲೈಸ್ಟರ್ಸ್ರ ಕಲಾವಂತಿಕೆಯಾಗಲೀ, ಸೆರೇನಾ ವಿಲಿಯಮ್ಸ್ರ ಶಕ್ತಿಯಾಗಲೀ, ಶರಪೋವಾರ ಸತ್ವವಾಗಲೀ ಕಡಿಮೆ. ವೋಜ್ನಿಯಾಕಿ ಸ್ವತಃ ತಾನೇ ಮುನ್ನುಗ್ಗಿ ಅಂಕ ಗಳಿಸುವುದಕ್ಕಿಂತ ಎದುರಾಳಿ ತಪ್ಪು ಎಸಗಿ ಅಂಕ ಬಿಟ್ಟುಕೊಡಲಿ ಎಂದು ಕಾಯುತ್ತಾರೆ; ನಿರ್ಬಂಧಿಸುತ್ತಾರೆ ಎಂಬ ಆರೋಪಗಳಿವೆ. ಇದು ನಿಜವೂ ಹೌದು; ಆಕೆಯ ಯಶಸ್ಸಿನ ಗುಟ್ಟೂ ಹೌದು.&lt;br /&gt;2010ರ ಟೆನಿಸ್ ಋತು ಮೊನ್ನೆ ದೋಹಾದಲ್ಲಿ ಕೊನೆಗೊಂಡಿದೆ. ಮುಗಿದ ಮೇಲೊಮ್ಮೆ ಹಿಂತಿರುಗಿ ನೋಡಿದರೆ ಎಲ್ಲರಿಗಿಂತ ಎದ್ದು ಕಾಣುವುದು ವೋಜ್ನಿಯಾಕಿ ಆಟ.&lt;br /&gt;ನಿಜ. ವರ್ಷದ ನಾಲ್ಕು ಗ್ರಾಂಡ್ಸ್ಲಾಂಗಳಲ್ಲಿ ನಮ್ಮ ಹುಡುಗಿಯ ಆಟ ಅಷ್ಟಕ್ಕಷ್ಟೇ. ಪ್ರಶಸ್ತಿ ಗೆಲ್ಲುವುದಿರಲಿ, ಕನಿಷ್ಠ ಒಂದರಲ್ಲೂ ೈನಲ್ ಸಹ ತಲುಪಲಿಲ್ಲ. ಆದರೂ, ವರ್ಷ ಮುಗಿಯುವ ಹೊತ್ತಿಗೆ ವಿಶ್ವ ಶ್ರೇಯಾಂಕದಲ್ಲಿ ನಂ.1 ಪಟ್ಟ ಒಲಿದಿತ್ತು. ಅದು ಹೇಗೆ ಸಾಧ್ಯವಾಯಿತು?&lt;br /&gt;ಟೆನಿಸ್ ವರ್ಷದಲ್ಲಿ ನಡೆಯುವುದು ನಾಲ್ಕು ಗ್ರಾಂಡ್ಸ್ಲಾಂಗಳು ಮಾತ್ರವಲ್ಲ. ಇನ್ನೂ ಸಾಕಷ್ಟು ಉನ್ನತ ದರ್ಜೆಯ ಟೂರ್ನಿಗಳು ನಡೆಯುತ್ತವೆ. ಅಲ್ಲೆಲ್ಲಾ ಮೆರೆದಿದ್ದು ವೋಜ್ನಿಯಾಕಿ. 2007ರ ಋತುವಿನಲ್ಲಿ ಜಸ್ಟಿನ್ ಹೆನಿನ್ 11 ಪ್ರಶಸ್ತಿ ಗೆದ್ದಿದ್ದರು. ಅದನ್ನು ಬಿಟ್ಟರೆ ಈ ವರ್ಷ ವೋಜ್ನಿಯಾಕಿ ಗೆದ್ದ 6 ಪ್ರಶಸ್ತಿಗಳೇ ವರ್ಷದ ದಾಖಲೆ.&lt;br /&gt;ಹಾಗೆಂದು ಎಲ್ಲರೂ ವೋಜ್ನಿಯಾಕಿಯನ್ನು ಕೊಂಡಾಡುತ್ತಿದ್ದಾರೆ ಎಂದೇನೂ ಅಲ್ಲ. ಟೆಸ್ಟ್ ಕ್ರಿಕೆಟ್ನ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎಂದು ಮುಖ ಹುಳ್ಳಗೆ ಮಾಡಿಕೊಳ್ಳುತ್ತಿರುವ ಆಸ್ಟ್ರೇಲಿಯನ್ನರಂತೆ ಅಮೆರಿಕನ್ನರು ಸಹ ಟೆನಿಸ್ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎನ್ನುತ್ತಿದ್ದಾರೆ. ಅವರ ವಾದಕ್ಕೊಂದು ತರ್ಕವೂ ಇದೆ. ಒಂದೂ ಗ್ರಾಂಡ್ಸ್ಲಾಂ ಗೆಲ್ಲದ ವೋಜ್ನಿಯಾಕಿಯನ್ನು ವಿಶ್ವ ನಂ.1 ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರವರು. ಹಾಗಾದರೆ, ಅವರ ಪ್ರಕಾರ ಯಾರಾಗಬೇಕು? ಅಮೆರಿಕದ ಸೆರೇನಾ ವಿಲಿಯಮ್ಸ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಒಂದೂ ಸೆಟ್ ಬಿಟ್ಟುಕೊಡದೆ ವಿಂಬಲ್ಡನ್ ಸಹ ಗೆದ್ದಿದ್ದಾರೆ. ಆದರೂ, ಆಕೆ ಶ್ರೇಯಾಂಕದಲ್ಲಿ ಹಿಂದೆ ಬೀಳುವುದಕ್ಕೆ ಕಾರಣ? ಈ ವರ್ಷ ಸೆರೇನಾ ಆಡಿದ್ದು ಕೇವಲ 6 ಟೂರ್ನಿ ಮಾತ್ರ. ವಿಂಬಲ್ಡನ್ ಗೆದ್ದ ಬಳಿಕ ಆಕೆ ಕಾಲಿನ ಗಾಯದಿಂದಾಗಿ ಟೆನಿಸ್ ರ್ಯಾಕೆಟ್ ಹಿಡಿದಿಲ್ಲ. ಇಷ್ಟು ಕಡಿಮೆ ಆಡಿ ನಂ.1 ಪಟ್ಟ ಬೇಕೆನ್ನುವುದು ನ್ಯಾಯಯುತವಲ್ಲ. ಬೆಲ್ಜಿಯಂನ ಕಿಂ ಕ್ಲೈಸ್ಟರ್ಸ್  ಸತತ 2ನೇ ವರ್ಷ ಯುಎಸ್ ಓಪನ್ ಗೆದ್ದುಕೊಂಡಿದ್ದಾರೆ. ಆದರೆ ಆಕೆ ಸಹ ಪೂರ್ಣಾವ ಅಮ್ಮ, ಅರೆಕಾಲಿಕ ಆಟಗಾರ್ತಿ. ಹಾಗಾಗಿ ನಂ.1 ಆಗುವುದಕ್ಕೆ ಅಪೇಕ್ಷಿತ ಅಂಕ ಹಾಗೂ ಟೂರ್ನಿಗಳ ಸಂಖ್ಯೆ ಅವರ ಬಳಿಯೂ ಇಲ್ಲ. ವೀನಸ್ ವಿಲಿಯಮ್ಸ್ ಸಹ ಸೆರೇನಾರಂತೆ ತುಂಬಾ ಚೂಸಿ. ಅವರು ವರ್ಷದಲ್ಲಿ ಎಲ್ಲಾ ಟೂರ್ನಿ ಆಡುವುದಿಲ್ಲ. ಈ ವರ್ಷವಂತೂ ಗಾಯಾಳುವಾಗಿ  ಋತುವಿನ ಬಹುಪಾಲು ಟೂರ್ನಿ ತಪ್ಪಿಸಿಕೊಂಡರು. ಇನ್ನು ನಂ.1 ಪಟ್ಟದ ಮತ್ತೋರ್ವ ಅಭ್ಯರ್ಥಿ ಮರಿಯ ಶರಪೋವ ಸಹ ಗಾಯದಿಂದಾಗಿ ಹೆಚ್ಚಿನ ಟೂರ್ನಿಗಳಲ್ಲಿ ಆಡಲಿಲ್ಲ. ವೋಜ್ನಿಯಾಕಿ ಟೀಕಾಕಾರರು ಈ ಅಂಶವನ್ನೆಲ್ಲಾ ಮುಂದು ಮಾಡುತ್ತಾರೆ. ಶರಪೋವ, ಕ್ಲೈಸ್ಟರ್ಸ್, ಸೆರೇನಾ, ವೀನಸ್ ಇವರೆಲ್ಲಾ ವರ್ಷ ಪೂರ್ತಿ ಆಡಿದ್ದರೆ, ವೋಜ್ನಿಯಾಕಿ ನಂ.1 ಆಗುತ್ತಿರಲಿಲ್ಲ ಎನ್ನುತ್ತಾರೆ. ಗೊತ್ತಿಲ್ಲ. ಇರಲೂ ಬಹುದು.&lt;br /&gt;ಆದರೆ, ಅವರೆಲ್ಲಾ ಆಡದಿರುವುದರಲ್ಲಿ ವೋಜ್ನಿಯಾಕಿ ಪಾತ್ರವೇನೂ ಇಲ್ಲ.&lt;br /&gt;ಕಿಂ ಕ್ಲೈಸ್ಟರ್ಸ್ ಮೊದಲ ಬಾರಿ ವಿಶ್ವ ನಂ.1 ಆದಾಗ ಒಂದೂ ಗ್ರಾಂಡ್ಸ್ಲಾಂ ಗೆದ್ದಿರಲಿಲ್ಲ. ಆದರೆ, ಈಗ ಅವರು 3 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ಅಮೇಲಿ ಮೌರೆಸ್ಮೋ ಸಹ ಮೊದಲು ವಿಶ್ವ ನಂ.1 ಆಗಿ ನಂತರ ಗ್ರಾಂಡ್ಸ್ಲಾಂ ಗೆದ್ದರು. ಜೆಲೆನಾ ಜಾಂಕೊವಿಕ್ ಮತ್ತು ದಿನಾರ ಸಫಿನಾ ಸಹ ವಿಶ್ವ ನಂ.1 ಆಗಿ ಮಾಜಿಗಳಾಗಿದ್ದಾರಾದರೂ, ಅವರಿಗಿನ್ನೂ ಗ್ರಾಂಡ್ಸ್ಲಾಂ ಗೆಲ್ಲುವುದು ಸಾಧ್ಯವಾಗಿಲ್ಲ.&lt;br /&gt;ಆದರೆ, ವೋಜ್ನಿಯಾಕಿ, ಸಫಿನಾ ಅಥವಾ ಜಾಂಕೊವಿಕ್ರಂತಾಗುವುದಿಲ್ಲವೆಂಬ ಭರವಸೆ ಇದೆ. ಬಹುಶಃ 2011 ಡೆನ್ಮಾರ್ಕ್ ಹುಡುಗಿಯ ವರ್ಷವಾಗಬಹುದು.  ಸೆರೇನಾ, ವೀನಸ್, ಶರಪೋವ ಇವರೆಲ್ಲರ ಉಪಸ್ಥಿತಿಯಲ್ಲೇ ವೋಜ್ನಿಯಾಕಿ ಗ್ರಾಂಡ್ಸ್ಲಾಂ ಗೆದ್ದರೆ ಅದು ಟೀಕಾಕಾರರಿಗೆ ಉತ್ತರ ಹಾಗೂ ಆಕೆಯ ಯೋಗ್ಯತೆಗೆ ಹಿಡಿವ ಕನ್ನಡಿ ಎರಡೂ ಆಗುತ್ತದೆ.&lt;br /&gt;&lt;br /&gt;2010ರಲ್ಲಿ ಸಾಧನೆ&lt;br /&gt;* ದೋಹಾ ವರ್ಷಾಂತ್ಯ ಟೂರ್ನಿಯಲ್ಲಿ ರನ್ನರ್ಅಪ್&lt;br /&gt;* ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ&lt;br /&gt;ನಂ.1 ಪಟ್ಟ&lt;br /&gt;* ಬೀಜಿಂಗ್ ಓಪನ್ ಚಾಂಪಿಯನ್&lt;br /&gt;* ಟೋಕಿಯೋ ಓಪನ್ ಚಾಂಪಿಯನ್&lt;br /&gt;* ಯುಎಸ್ ಓಪನ್ ಸೆಮಿೈನಲ್&lt;br /&gt;* ಯುಎಸ್ ಓಪನ್ ಸಿರೀಸ್ ಚಾಂಪಿಯನ್&lt;br /&gt;* ನ್ಯೂ ಹೆವನ್ ಚಾಂಪಿಯನ್&lt;br /&gt;* ಮಾಂಟ್ರಿಯಲ್ ಚಾಂಪಿಯನ್&lt;br /&gt;* ಕೋಪನ್ಹೇಗನ್ ಚಾಂಪಿಯನ್&lt;br /&gt;* ವಿಂಬಲ್ಡನ್ 4ನೇ ಸುತ್ತು&lt;br /&gt;* ್ರೆಂಚ್ ಓಪನ್ ಕ್ವಾರ್ಟರ್ೈನಲ್&lt;br /&gt;* ಚಾರ್ಲ್ಸ್ಟನ್ ಸೆಮಿೈನಲ್&lt;br /&gt;* ಪಾಂಟೆ ವೆದ್ರಾ ಬೀಚ್ ಚಾಂಪಿಯನ್&lt;br /&gt;* ಮಿಯಾಮಿ ಕ್ವಾರ್ಟರ್ೈನಲ್&lt;br /&gt;* ಇಂಡಿಯನ್ ವೆಲ್ಸ್ ೈನಲ್&lt;br /&gt;* ಆಸ್ಟ್ರೇಲಿಯನ್ ಓಪನ್ 4ನೇ ಸುತ್ತು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-3092953574772532659?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/3092953574772532659/comments/default' title='Post Comments'/><link rel='replies' type='text/html' href='http://ragaakshara.blogspot.com/2010/11/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/3092953574772532659'/><link rel='self' type='application/atom+xml' href='http://www.blogger.com/feeds/2998842447029730227/posts/default/3092953574772532659'/><link rel='alternate' type='text/html' href='http://ragaakshara.blogspot.com/2010/11/blog-post.html' title='ಪುಟ್ಟ ರಾಜಕುಮಾರಿಯ  ದಿಟ್ಟ ಹೆಜ್ಜೆಗಳು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/TNKFy7486DI/AAAAAAAAAOU/7fUJK6_S1so/s72-c/caro.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-6871412703823039724</id><published>2010-10-11T14:23:00.002+05:30</published><updated>2010-10-11T14:24:59.254+05:30</updated><title type='text'>ಈಜಿ ಜೈಸಿದವಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/TLLQvz8KdZI/AAAAAAAAANo/shDizxg2444/s1600/Natalie%281%29.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 290px;" src="http://2.bp.blogspot.com/_fosRdfQ3Hws/TLLQvz8KdZI/AAAAAAAAANo/shDizxg2444/s400/Natalie%281%29.jpg" alt="" id="BLOGGER_PHOTO_ID_5526709212552000914" border="0" /&gt;&lt;/a&gt;&lt;br /&gt;&lt;br /&gt;ಜೀವನವೊಂದು ಹೋರಾಟ.&lt;br /&gt;ಅಲ್ಲಿ ನಿತ್ಯ ಹೊಸ ಹೊಸ ಸವಾಲುಗಳು.&lt;br /&gt;ಒಂದಕ್ಕಿಂತ ಇನ್ನೊಂದು ಭಿನ್ನ.&lt;br /&gt;ಅನಿಶ್ಚಿತವಾದ ಜೀವನದಲ್ಲಿ ಇಂದಿಗೂ ನಾಳೆಗೂ ಅಜಗಜಾಂತರ ವ್ಯತ್ಯಾಸ.&lt;br /&gt;ಬೆಳೆಯುವ ಪೈರನ್ನು ಮೊಳಕೆಯಲ್ಲಿ ಗುರುತಿಸಬಹುದು. ಆದರೆ, ನಾಳೆ ಆಗುವುದನ್ನು ಇಂದೇ ಹೇಳಲು ಸಾಧ್ಯವಿಲ್ಲ.&lt;br /&gt;ನಟಾಲಿ ಡು ಟಾಯ್ಟ ವಿಚಾರದಲ್ಲೂ ಹಾಗೆಯೇ ಆಯಿತು.&lt;br /&gt;ಸರಿಯಾಗಿ ಒಂಬತ್ತು ವರ್ಷ ಹಿಂದೆ. ಫೆಬ್ರವರಿ ತಿಂಗಳ ಒಂದು ಸೋಮವಾರ ರಸ್ತೆ ಅಪಘಾತದಲ್ಲಿ ಆಕೆ ಕಾಲನ್ನೇ ಕಳೆದುಕೊಂಡರು!&lt;br /&gt;ಕೌಲಾಲಂಪುರದಲ್ಲಿ ನಡೆದ 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಗಿನ್ನೂ 14 ವರ್ಷದ ನಟಾಲಿ ದೊಡ್ಡ ಸೆನ್ಸೇಶನ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಈ ಮಿಂಚಿನ ಬಳ್ಳಿ ಈಜುಕೊಳದಲ್ಲಿ  ಭವಿಷ್ಯದ ವಿಶ್ವತಾರೆ ಎಂದೇ ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅಂಥ ಪ್ರತಿಭಾವಂತೆ ಆಕೆ. ವಯಸ್ಸಿಗೆ ಮೀರಿದ ಸಾಮರ್ಥ್ಯ. ಈಜುಕೊಳಕ್ಕೆ ಧುಮುಕಿದರೆ ಪದಕ ಗೆಲ್ಲದೆ ಮೇಲೇಳುತ್ತಿರಲಿಲ್ಲ.&lt;br /&gt;ಆದರೆ, ದುರ್ವಿಧಿ ಕಾರಿನ ರೂಪದಲ್ಲಿ ಆಕೆಗೆ ಬಡಿಯಿತು. ನಟಾಲಿ ಈಜು ಅಭ್ಯಾಸ ಮುಗಿಸಿಕೊಂಡು ಸ್ಕೂಟರ್ ಏರಿ ಶಾಲೆಗೆ ತೆರಳುತ್ತಿರುವಾಗ ಯಮನಂತೆ ಬಂದ ಕಾರು ಡಿಕ್ಕಿ ಹೊಡೆಯಿತು. ಗ್ರಹಚಾರವೆಂದರೆ, ಅವಸರದ ತರುಣಿಯೊಬ್ಬಳು ರಸ್ತೆಯ ಬದಲು ಪಾರ್ಕಿಂಗ್ ಜಾಗದಲ್ಲಿ ಕಾರು ಓಡಿಸಿಕೊಂಡು ಬಂದು  ಏಕಾಏಕಿ ರಸ್ತೆಗೆ ನುಗ್ಗಿದ್ದಳು. ಆ ಹುಡುಗಿಯ ಪ್ರಮಾದದಿಂದ ನಟಾಲಿ ಎಡಗಾಲು ಕಳೆದುಕೊಂಡಿದ್ದರು.&lt;br /&gt;ವಿಧಿಯೆಂದರೆ ಹಾಗೆ, ನಟಾಲಿಗೆ ಆ ದಿನ ಶಾಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆಯಿತ್ತು. ಆದರೆ, ಆಕೆ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಪ್ರಿಟೋರಿಯಾದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಆ ಹುಡುಗಿ ಹಿಂದಿನ ದಿನವಷ್ಟೇ 18 ಗಂಟೆಗಳ ಬಸ್ ಪ್ರಯಾಣ ಮುಗಿಸಿ ಕೇಪ್ಟೌನ್ನ ತಮ್ಮ ಮನೆಗೆ ಮರಳಿದ್ದರು. ಬಂದ ಮೇಲೆ ಆಯಾಸ. ಮಾರನೇ ದಿನ ಬೆಳಗ್ಗೆ 5 ಗಂಟೆಗೆಲ್ಲಾ ಈಜು ಅಭ್ಯಾಸಕ್ಕೆ ತೆರಳಬೇಕಿತ್ತು. ಅರೆಬರೆ ನಿದ್ರೆ, ಪ್ರಯಾಣದ ಆಯಾಸ, ಪರೀಕ್ಷೆಯ ಚಿಂತೆ. ಇವೆಲ್ಲದರ ನಡುವೆ ಈಜು ಅಭ್ಯಾಸ ಬೇರೆ. ಹಾಗಾಗಿ ನಾಳೆ ಅಭ್ಯಾಸಕ್ಕೆ ಹೋಗುವುದಿಲ್ಲ ಎಂದು ಅಮ್ಮನ ಬಳಿ  ಹೇಳಿದ್ದರು. ಆದರೆ, ರಾತ್ರಿ ಮಲಗುವ ಹೊತ್ತಿಗೆ ನಿರ್ಧಾರ ಬದಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಈಜುಕೊಳಕ್ಕೆ ತೆರಳಿದ್ದಳು. 6 ಗಂಟೆಯಿಂದ 7 ಗಂಟೆವರೆಗೆ ಅಭ್ಯಾಸ ನಡೆಸಿ ಸ್ಕೂಟರ್ ಏರಿ ಶಾಲೆಗೆ ತೆರಳುವ ಹಾದಿಯಲ್ಲಿ ಅಪಘಾತವಾಗಿತ್ತು. ಅಂದು 2001ರ ಫೆಬ್ರವರಿ 26, ಸೋಮವಾರ.&lt;br /&gt;ಅಪಘಾತವಾದ ರಭಸಕ್ಕೆ ತನ್ನ ಎಡಗಾಲು ಹೋಯಿತೆಂಬ ಸತ್ಯ ನಟಾಲಿಗೆ ಗೊತ್ತಾಗಿತ್ತು. ಆದರೂ, ಆ ಸಂದರ್ಭದಲ್ಲಿ ಆಕೆಗೆ ತನಗಿಂತ ಅಮ್ಮ ಹೇಗೆ ಸಹಿಸಿಕೊಂಡಾಳು ಎಂಬ ಚಿಂತೆ ಕಾಡುತ್ತಿತ್ತು. ಅಪಘಾತ ಸ್ಥಳಕ್ಕೆ ಬಂದ ಅಮ್ಮನಿಗೆ ತನ್ನ ಕಾಲು ತೋರಿಸಲು ಆಕೆ ನಿರಾಕರಿಸಿದರು. ಅಪಘಾತವಾದ ನಾಲ್ಕು ದಿನಗಳಲ್ಲಿ ಅಂದರೆ ಶುಕ್ರವಾರ ನಟಾಲಿಯ ಎಡಗಾಲು ಕತ್ತರಿಸಲಾಯಿತು. ಶನಿವಾರ ಆಕೆಗೆ ವಿಷಯ ತಿಳಿಸಲಾಯಿತು. ಭಾನುವಾರವೆಲ್ಲಾ  ನಟಾಲಿ ಊರುಗೋಲು ಹಾಗೂ ವೈದ್ಯರ ಸಹಾಯದಿಂದ ನಡೆಯಲು ಯತ್ನಿಸುತ್ತಿದ್ದರು.&lt;br /&gt;ಅದೊಂದು ರೀತಿ ವಿಧಿಯ ವಿರುದ್ಧದ ಹೋರಾಟ. ದೈವವೊಂದು ಬಗೆದರೆ ತಾನೊಂದು ಬಗೆಯುತ್ತೇನೆಂಬ ಛಲ.  ಈಜಬೇಕು ಈಜಿ ಜೈಸಬೇಕು ಎಂಬುದು ನಟಾಲಿ ತಲೆಯಲ್ಲಿ ಅಚ್ಚೊತ್ತಿತ್ತು. ಬದುಕಿನಲ್ಲಿ ಈಜುವುದಕ್ಕಿಂತ ಈಜುಕೊಳದಲ್ಲಿ ಕಷ್ಟವೇನಲ್ಲ ಎಂದು ಆಕೆಗೆ ಹೊಳೆದಿತ್ತು. ಅಪಘಾತವಾದ ಮೂರೇ ತಿಂಗಳಲ್ಲಿ ಆಕೆ ಈಜುಕೊಳದಲ್ಲಿದ್ದರು!&lt;br /&gt;ಈ ಹೊತ್ತಿಗೆ ಕೃತಕ ಕಾಲಿನ ನೆರವಿನಿಂದ ಎಲ್ಲರಂತೆ ಸಹಜವಾಗಿ ನಡೆದಾಡಲು ಕಲಿತಿದ್ದ ಛಲಗಾರ್ತಿ ನಟಾಲಿ,  ಈಜುಕೊಳದಲ್ಲಿ ಕಾಲು ಕಳಚಿಟ್ಟು ಒಂದೇ ಕಾಲು, ಎರಡು ಕೈಗಳ ನೆರವಿನಿಂದ ಈಜುತ್ತಿದ್ದರು. ಜಗತ್ತು ಏನೇ ಹೇಳಲಿ, ತಾವು ಅಂಗವಿಕಲೆ ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಿರಲಿಲ್ಲ. ಹಾಗೆಂದೇ ಅವರು  ಸಹಜ ಈಜುಗಾರ್ತಿಯರ ಜೊತೆಯಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರೊಂದಿಗೇ ಸ್ಪರ್ಧಿಸುತ್ತಿದ್ದರು.&lt;br /&gt;ಅಪಘಾತವಾದ ಒಂದೇ ವರ್ಷದಲ್ಲಿ  ನಟಾಲಿ ಮ್ಯಾಂಚೆಸ್ಟರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2002) ದಕ್ಷಿಣ ಆಫ್ರಿಕಾವನ್ನು ಪ್ರತಿನಿಸಿದ್ದರು. ಆಗ ಆಕೆಗೆ 18 ವರ್ಷ.&lt;br /&gt;ಮ್ಯಾಂಚೆಸ್ಟರ್ನಲ್ಲಿ ನಟಾಲಿ ವಿಕಲಾಂಗರ 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಮಾತ್ರವಲ್ಲ, ಮುಖ್ಯ ಕ್ರೀಡಾಕೂಟದ 800 ಮೀ. ಫ್ರೀಸ್ಟೈಲ್ ಈಜಿನ ಫೈನಲ್ಗೆ ಅರ್ಹತೆ ಪಡೆದರು. ವಿಕಲಾಂಗ ಈಜುಗಾರ್ತಿಯೊಬ್ಬರು ದೈಹಿಕವಾಗಿ ಸಬಲರಾದ ಈಜುಪಟುಗಳೊಂದಿಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯೊಂದರ ಫೈನಲ್ನಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿಯಾಗಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದ ಸರ್ವ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡಿಕ್ಸನ್ ಪ್ರಶಸ್ತಿ ಆ ಬಾರಿ ನಟಾಲಿಗೇ ಲಭಿಸಿತು.&lt;br /&gt;ಅದಾದ ನಂತರ ಅಥೆನ್ಸ್ (2004) ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ನಟಾಲಿ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ. ಮುಕ್ತ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ವಿಜೇತರಿಗಿಂತ ಕೇವಲ 5.1 ಸೆಕೆಂಡ್ ಹಿಂದುಳಿದು 5ನೇ ಸ್ಥಾನ ಪಡೆದಿದ್ದರು. ಬೀಜಿಂಗ್ನಲ್ಲಿ ಅವರು 16ನೇ ಸ್ಥಾನ ಪಡೆದರು.&lt;br /&gt;ಲಂಡನ್ ಒಲಿಂಪಿಕ್ಸ್ ಬಳಿಕ ಈಜುಕೊಳದಿಂದ ನಿವೃತ್ತರಾಗುವ ಬಯಕೆ ಹೊಂದಿರುವ ನಟಾಲಿ ದೆಹಲಿಯಲ್ಲಿ ಕೊನೆಯ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೂಟದಲ್ಲಿ 3 ಚಿನ್ನದ ಪದಕ ಗೆದ್ದಿರುವುದು ಅವರ ಸಾಧನೆ. ಬಂಗಾರದ ಹ್ಯಾಟ್ರಿಕ್ನೊಂದಿಗೆ ಕಾಮನ್ವೆಲ್ತ್ ಕೂಟಗಳಿಗೆ ವಿದಾಯ ಹೇಳಿರುವ 27 ವರ್ಷದ ನಟಾಲಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಲು ಬಯಸಿದ್ದಾರೆ.&lt;br /&gt;ಅಂಗವೈಕಲ್ಯ ಶಾಪವಲ್ಲ ಎಂದು ತಮ್ಮದೇ ಉದಾಹರಣೆ ನೀಡುವ ನಟಾಲಿ ಶೈಕ್ಷಣಿಕವಾಗಿ ವಿಜ್ಞಾನ ಪದವೀಧರೆಯೂ ಹೌದು. ಬಿಡುವಿನ ವೇಳೆಯಲ್ಲಿ ಅವರು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಾರೆ.&lt;br /&gt;ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.ಜೀವನವೊಂದು ಹೋರಾಟ.&lt;br /&gt;ಅಲ್ಲಿ ನಿತ್ಯ ಹೊಸ ಹೊಸ ಸವಾಲುಗಳು.&lt;br /&gt;ಒಂದಕ್ಕಿಂತ ಇನ್ನೊಂದು ಭಿನ್ನ.&lt;br /&gt;ಅನಿಶ್ಚಿತವಾದ ಜೀವನದಲ್ಲಿ ಇಂದಿಗೂ ನಾಳೆಗೂ ಅಜಗಜಾಂತರ ವ್ಯತ್ಯಾಸ.&lt;br /&gt;ಬೆಳೆಯುವ ಪೈರನ್ನು ಮೊಳಕೆಯಲ್ಲಿ ಗುರುತಿಸಬಹುದು. ಆದರೆ, ನಾಳೆ ಆಗುವುದನ್ನು ಇಂದೇ ಹೇಳಲು ಸಾಧ್ಯವಿಲ್ಲ.&lt;br /&gt;ನಟಾಲಿ ಡು ಟಾಯ್ಟ ವಿಚಾರದಲ್ಲೂ ಹಾಗೆಯೇ ಆಯಿತು.&lt;br /&gt;ಸರಿಯಾಗಿ ಒಂಬತ್ತು ವರ್ಷ ಹಿಂದೆ. ಫೆಬ್ರವರಿ ತಿಂಗಳ ಒಂದು ಸೋಮವಾರ ರಸ್ತೆ ಅಪಘಾತದಲ್ಲಿ ಆಕೆ ಕಾಲನ್ನೇ ಕಳೆದುಕೊಂಡರು!&lt;br /&gt;ಕೌಲಾಲಂಪುರದಲ್ಲಿ ನಡೆದ 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಗಿನ್ನೂ 14 ವರ್ಷದ ನಟಾಲಿ ದೊಡ್ಡ ಸೆನ್ಸೇಶನ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಈ ಮಿಂಚಿನ ಬಳ್ಳಿ ಈಜುಕೊಳದಲ್ಲಿ  ಭವಿಷ್ಯದ ವಿಶ್ವತಾರೆ ಎಂದೇ ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅಂಥ ಪ್ರತಿಭಾವಂತೆ ಆಕೆ. ವಯಸ್ಸಿಗೆ ಮೀರಿದ ಸಾಮರ್ಥ್ಯ. ಈಜುಕೊಳಕ್ಕೆ ಧುಮುಕಿದರೆ ಪದಕ ಗೆಲ್ಲದೆ ಮೇಲೇಳುತ್ತಿರಲಿಲ್ಲ.&lt;br /&gt;ಆದರೆ, ದುರ್ವಿಧಿ ಕಾರಿನ ರೂಪದಲ್ಲಿ ಆಕೆಗೆ ಬಡಿಯಿತು. ನಟಾಲಿ ಈಜು ಅಭ್ಯಾಸ ಮುಗಿಸಿಕೊಂಡು ಸ್ಕೂಟರ್ ಏರಿ ಶಾಲೆಗೆ ತೆರಳುತ್ತಿರುವಾಗ ಯಮನಂತೆ ಬಂದ ಕಾರು ಡಿಕ್ಕಿ ಹೊಡೆಯಿತು. ಗ್ರಹಚಾರವೆಂದರೆ, ಅವಸರದ ತರುಣಿಯೊಬ್ಬಳು ರಸ್ತೆಯ ಬದಲು ಪಾರ್ಕಿಂಗ್ ಜಾಗದಲ್ಲಿ ಕಾರು ಓಡಿಸಿಕೊಂಡು ಬಂದು  ಏಕಾಏಕಿ ರಸ್ತೆಗೆ ನುಗ್ಗಿದ್ದಳು. ಆ ಹುಡುಗಿಯ ಪ್ರಮಾದದಿಂದ ನಟಾಲಿ ಎಡಗಾಲು ಕಳೆದುಕೊಂಡಿದ್ದರು.&lt;br /&gt;ವಿಧಿಯೆಂದರೆ ಹಾಗೆ, ನಟಾಲಿಗೆ ಆ ದಿನ ಶಾಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆಯಿತ್ತು. ಆದರೆ, ಆಕೆ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಪ್ರಿಟೋರಿಯಾದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಆ ಹುಡುಗಿ ಹಿಂದಿನ ದಿನವಷ್ಟೇ 18 ಗಂಟೆಗಳ ಬಸ್ ಪ್ರಯಾಣ ಮುಗಿಸಿ ಕೇಪ್ಟೌನ್ನ ತಮ್ಮ ಮನೆಗೆ ಮರಳಿದ್ದರು. ಬಂದ ಮೇಲೆ ಆಯಾಸ. ಮಾರನೇ ದಿನ ಬೆಳಗ್ಗೆ 5 ಗಂಟೆಗೆಲ್ಲಾ ಈಜು ಅಭ್ಯಾಸಕ್ಕೆ ತೆರಳಬೇಕಿತ್ತು. ಅರೆಬರೆ ನಿದ್ರೆ, ಪ್ರಯಾಣದ ಆಯಾಸ, ಪರೀಕ್ಷೆಯ ಚಿಂತೆ. ಇವೆಲ್ಲದರ ನಡುವೆ ಈಜು ಅಭ್ಯಾಸ ಬೇರೆ. ಹಾಗಾಗಿ ನಾಳೆ ಅಭ್ಯಾಸಕ್ಕೆ ಹೋಗುವುದಿಲ್ಲ ಎಂದು ಅಮ್ಮನ ಬಳಿ  ಹೇಳಿದ್ದರು. ಆದರೆ, ರಾತ್ರಿ ಮಲಗುವ ಹೊತ್ತಿಗೆ ನಿರ್ಧಾರ ಬದಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಈಜುಕೊಳಕ್ಕೆ ತೆರಳಿದ್ದಳು. 6 ಗಂಟೆಯಿಂದ 7 ಗಂಟೆವರೆಗೆ ಅಭ್ಯಾಸ ನಡೆಸಿ ಸ್ಕೂಟರ್ ಏರಿ ಶಾಲೆಗೆ ತೆರಳುವ ಹಾದಿಯಲ್ಲಿ ಅಪಘಾತವಾಗಿತ್ತು. ಅಂದು 2001ರ ಫೆಬ್ರವರಿ 26, ಸೋಮವಾರ.&lt;br /&gt;ಅಪಘಾತವಾದ ರಭಸಕ್ಕೆ ತನ್ನ ಎಡಗಾಲು ಹೋಯಿತೆಂಬ ಸತ್ಯ ನಟಾಲಿಗೆ ಗೊತ್ತಾಗಿತ್ತು. ಆದರೂ, ಆ ಸಂದರ್ಭದಲ್ಲಿ ಆಕೆಗೆ ತನಗಿಂತ ಅಮ್ಮ ಹೇಗೆ ಸಹಿಸಿಕೊಂಡಾಳು ಎಂಬ ಚಿಂತೆ ಕಾಡುತ್ತಿತ್ತು. ಅಪಘಾತ ಸ್ಥಳಕ್ಕೆ ಬಂದ ಅಮ್ಮನಿಗೆ ತನ್ನ ಕಾಲು ತೋರಿಸಲು ಆಕೆ ನಿರಾಕರಿಸಿದರು. ಅಪಘಾತವಾದ ನಾಲ್ಕು ದಿನಗಳಲ್ಲಿ ಅಂದರೆ ಶುಕ್ರವಾರ ನಟಾಲಿಯ ಎಡಗಾಲು ಕತ್ತರಿಸಲಾಯಿತು. ಶನಿವಾರ ಆಕೆಗೆ ವಿಷಯ ತಿಳಿಸಲಾಯಿತು. ಭಾನುವಾರವೆಲ್ಲಾ  ನಟಾಲಿ ಊರುಗೋಲು ಹಾಗೂ ವೈದ್ಯರ ಸಹಾಯದಿಂದ ನಡೆಯಲು ಯತ್ನಿಸುತ್ತಿದ್ದರು.&lt;br /&gt;ಅದೊಂದು ರೀತಿ ವಿಧಿಯ ವಿರುದ್ಧದ ಹೋರಾಟ. ದೈವವೊಂದು ಬಗೆದರೆ ತಾನೊಂದು ಬಗೆಯುತ್ತೇನೆಂಬ ಛಲ.  ಈಜಬೇಕು ಈಜಿ ಜೈಸಬೇಕು ಎಂಬುದು ನಟಾಲಿ ತಲೆಯಲ್ಲಿ ಅಚ್ಚೊತ್ತಿತ್ತು. ಬದುಕಿನಲ್ಲಿ ಈಜುವುದಕ್ಕಿಂತ ಈಜುಕೊಳದಲ್ಲಿ ಕಷ್ಟವೇನಲ್ಲ ಎಂದು ಆಕೆಗೆ ಹೊಳೆದಿತ್ತು. ಅಪಘಾತವಾದ ಮೂರೇ ತಿಂಗಳಲ್ಲಿ ಆಕೆ ಈಜುಕೊಳದಲ್ಲಿದ್ದರು!&lt;br /&gt;ಈ ಹೊತ್ತಿಗೆ ಕೃತಕ ಕಾಲಿನ ನೆರವಿನಿಂದ ಎಲ್ಲರಂತೆ ಸಹಜವಾಗಿ ನಡೆದಾಡಲು ಕಲಿತಿದ್ದ ಛಲಗಾರ್ತಿ ನಟಾಲಿ,  ಈಜುಕೊಳದಲ್ಲಿ ಕಾಲು ಕಳಚಿಟ್ಟು ಒಂದೇ ಕಾಲು, ಎರಡು ಕೈಗಳ ನೆರವಿನಿಂದ ಈಜುತ್ತಿದ್ದರು. ಜಗತ್ತು ಏನೇ ಹೇಳಲಿ, ತಾವು ಅಂಗವಿಕಲೆ ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಿರಲಿಲ್ಲ. ಹಾಗೆಂದೇ ಅವರು  ಸಹಜ ಈಜುಗಾರ್ತಿಯರ ಜೊತೆಯಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರೊಂದಿಗೇ ಸ್ಪರ್ಧಿಸುತ್ತಿದ್ದರು.&lt;br /&gt;ಅಪಘಾತವಾದ ಒಂದೇ ವರ್ಷದಲ್ಲಿ  ನಟಾಲಿ ಮ್ಯಾಂಚೆಸ್ಟರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2002) ದಕ್ಷಿಣ ಆಫ್ರಿಕಾವನ್ನು ಪ್ರತಿನಿಸಿದ್ದರು. ಆಗ ಆಕೆಗೆ 18 ವರ್ಷ.&lt;br /&gt;ಮ್ಯಾಂಚೆಸ್ಟರ್ನಲ್ಲಿ ನಟಾಲಿ ವಿಕಲಾಂಗರ 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಮಾತ್ರವಲ್ಲ, ಮುಖ್ಯ ಕ್ರೀಡಾಕೂಟದ 800 ಮೀ. ಫ್ರೀಸ್ಟೈಲ್ ಈಜಿನ ಫೈನಲ್ಗೆ ಅರ್ಹತೆ ಪಡೆದರು. ವಿಕಲಾಂಗ ಈಜುಗಾರ್ತಿಯೊಬ್ಬರು ದೈಹಿಕವಾಗಿ ಸಬಲರಾದ ಈಜುಪಟುಗಳೊಂದಿಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯೊಂದರ ಫೈನಲ್ನಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿಯಾಗಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದ ಸರ್ವ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡಿಕ್ಸನ್ ಪ್ರಶಸ್ತಿ ಆ ಬಾರಿ ನಟಾಲಿಗೇ ಲಭಿಸಿತು.&lt;br /&gt;ಅದಾದ ನಂತರ ಅಥೆನ್ಸ್ (2004) ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ನಟಾಲಿ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ. ಮುಕ್ತ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ವಿಜೇತರಿಗಿಂತ ಕೇವಲ 5.1 ಸೆಕೆಂಡ್ ಹಿಂದುಳಿದು 5ನೇ ಸ್ಥಾನ ಪಡೆದಿದ್ದರು. ಬೀಜಿಂಗ್ನಲ್ಲಿ ಅವರು 16ನೇ ಸ್ಥಾನ ಪಡೆದರು.&lt;br /&gt;ಲಂಡನ್ ಒಲಿಂಪಿಕ್ಸ್ ಬಳಿಕ ಈಜುಕೊಳದಿಂದ ನಿವೃತ್ತರಾಗುವ ಬಯಕೆ ಹೊಂದಿರುವ ನಟಾಲಿ ದೆಹಲಿಯಲ್ಲಿ ಕೊನೆಯ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೂಟದಲ್ಲಿ 3 ಚಿನ್ನದ ಪದಕ ಗೆದ್ದಿರುವುದು ಅವರ ಸಾಧನೆ. ಬಂಗಾರದ ಹ್ಯಾಟ್ರಿಕ್ನೊಂದಿಗೆ ಕಾಮನ್ವೆಲ್ತ್ ಕೂಟಗಳಿಗೆ ವಿದಾಯ ಹೇಳಿರುವ 27 ವರ್ಷದ ನಟಾಲಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಲು ಬಯಸಿದ್ದಾರೆ.&lt;br /&gt;ಅಂಗವೈಕಲ್ಯ ಶಾಪವಲ್ಲ ಎಂದು ತಮ್ಮದೇ ಉದಾಹರಣೆ ನೀಡುವ ನಟಾಲಿ ಶೈಕ್ಷಣಿಕವಾಗಿ ವಿಜ್ಞಾನ ಪದವೀಧರೆಯೂ ಹೌದು. ಬಿಡುವಿನ ವೇಳೆಯಲ್ಲಿ ಅವರು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಾರೆ.&lt;br /&gt;ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-6871412703823039724?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/6871412703823039724/comments/default' title='Post Comments'/><link rel='replies' type='text/html' href='http://ragaakshara.blogspot.com/2010/10/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/6871412703823039724'/><link rel='self' type='application/atom+xml' href='http://www.blogger.com/feeds/2998842447029730227/posts/default/6871412703823039724'/><link rel='alternate' type='text/html' href='http://ragaakshara.blogspot.com/2010/10/blog-post.html' title='ಈಜಿ ಜೈಸಿದವಳು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/TLLQvz8KdZI/AAAAAAAAANo/shDizxg2444/s72-c/Natalie%281%29.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-6339720334544271704</id><published>2010-09-06T11:55:00.001+05:30</published><updated>2010-09-06T12:03:33.407+05:30</updated><title type='text'>ಎರಡು ಬರಹಗಳು</title><content type='html'>&lt;span style="color: rgb(153, 0, 0);font-size:180%;" &gt;&lt;span style="font-weight: bold;"&gt;ಪಾಪದ ಹಣ&lt;/span&gt;&lt;/span&gt;&lt;br /&gt;&lt;br /&gt;ದುಡ್ಡೇ ದುಃಖದ ಮೂಲ&lt;br /&gt;ಹಣದಿಂದ ಜಗತ್ತನ್ನೇ ಖರೀದಿಸಬಹುದು. ಆದರೆ, ನೆಮ್ಮದಿಯನ್ನು  ನಮ್ಮದಾಗಿಸಿಕೊಳ್ಳುವುದು ಅಸಾಧ್ಯ.&lt;br /&gt;ವಾಮ ಮಾರ್ಗದಿಂದ ಪಡೆದುಕೊಳ್ಳುವ ಹಣ ಜೇನುಗೂಡಿನಂತೆ. ಜೇನಿನ ಆಸೆಯಿಂದ ಕೈಹಾಕುವವರು ಜೇನುನೊಣಗಳಿಂದ ಕಚ್ಚಿಸಿಕೊಳ್ಳಲೂ ಸಿದ್ಧರಿರಬೇಕು.&lt;br /&gt;ಪಾಪದ ಹಣ ಯಾವತ್ತಿದ್ದರೂ ಶಾಪವೇ.&lt;br /&gt;ಪಾಕಿಸ್ತಾನದ ಕ್ರಿಕೆಟಿಗರು ಇದನ್ನೆಲ್ಲಾ ಒಪ್ಪಿಕೊಳ್ಳುತ್ತಾರೋ ಇಲ್ಲವೋ. ಆದರೆ, ಸದ್ಯಕ್ಕಂತೂ ಅವರಿಗೆ ಶಾಪ ತಟ್ಟಿದೆ.&lt;br /&gt;ಒಟ್ಟಾರೆ ಕ್ರಿಕೆಟ್ಗಿದು ಸಂಕಷ್ಟದ ಕಾಲ. ಅದರ ವಿಶ್ವಾಸಾರ್ಹತೆಯೇ ಸದ್ಯ ಪ್ರಶ್ನಾರ್ಹವಾಗಿದೆ.&lt;br /&gt;ಹಿಂದೆಲ್ಲಾ ಅತಿಮಾನುಷವೆಂಬಂಥ ಪ್ರದರ್ಶನಗಳು ಆಟದ ರೋಮಾಂಚನ ಹೆಚ್ಚಿಸುತ್ತಿದ್ದವು. ಆದರೆ, ಈಗೀಗ ಆಟಗಾರರ ಅಂಥ ಪ್ರದರ್ಶನಗಳು ಪ್ರೇಕ್ಷಕರಲ್ಲಿ ರೋಮಾಂಚನದ ಬದಲು ಅನುಮಾನ ಹುಟ್ಟುಹಾಕುತ್ತಿವೆ. ಇರ್ಫಾನ್ ಪಠಾಣ್ರಷ್ಟೇ ಒಳ್ಳೆಯ  ಆಲ್ರೌಂಡರ್ ಎನ್ನಬಹುದಾದ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಪಾಕಿಸ್ತಾನದ ವಿರುದ್ಧ ಲಾರ್ಡ್ಸ್ ಟೆಸ್ಟ್ನಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸಿಗೆ ಆಗಮಿಸಿ 160 ಚಿಲ್ಲರೆ ರನ್ ಗಳಿಸಿದರೆ ಅದನ್ನು  ಪ್ರಶಂಸಿಸಲು ಮನಸು ಬರುತ್ತಿಲ್ಲ. ಕಾರಣ ಬ್ರಾಡ್ ಅಂಥ ಶತಕ ಗಳಿಸಿದ್ದು ಫಿಕ್ಸಿಂಗ್ ಕಳಂಕಿತ ಪಾಕ್ ತಂಡದ ವಿರುದ್ಧ. ಸ್ಪಾಟ್ಫಿಕ್ಸಿಂಗ್ ಹಗರಣದ ಕೇಂದ್ರ ಬಿಂದುವಾಗಿರುವ ಪಾಕ್ ತಂಡದ ಇಬ್ಬರು ಪ್ರಧಾನ ವೇಗಿಗಳನ್ನು (ಆಸಿಫ್, ಆಮೀರ್) ಕ್ಲಬ್ ದರ್ಜೆ ಬೌಲರ್ಗಳೆಂಬಂತೆ ಬ್ರಾಡ್ ಹೀನಾಯವಾಗಿ ದಂಡಿಸಿದ್ದು ನಿಜವಲ್ಲ ಎಂಬ ಭಾವನೆಯೇ ಈಗಲೂ ಮೂಡುತ್ತಿದೆ.&lt;br /&gt;ಅಂತೂ ಕ್ರಿಕೆಟ್ ಕಾಶಿ ಲಾರ್ಡ್ಸ್ಗೆ ಕಳಂಕ ಮೆತ್ತಿದೆ. ಭಯೋತ್ಪಾದನೆಯ ದಳ್ಳುರಿಗೆ ಸಿಕ್ಕಿ ಕ್ರಿಕೆಟ್ ದುರ್ಬಿಕ್ಷ ಅನುಭವಿಸುತ್ತಿದ್ದ ಪಾಕಿಸ್ತಾನಕ್ಕೆ ಸಹಾಯ ಮಾಡಲು ಹೋಗಿ ಇಂಗ್ಲೆಂಡ್ ದೂರ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆದಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಾಕ್  ಸರಣಿಗೆ ತಟಸ್ಥ ಕೇಂದ್ರವಾಗಿ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ಗೀಗ ಅಪಾತ್ರರಿಗೆ ಸಹಾಯ ಮಾಡಿದ ವಿಷಾದಭಾವ.&lt;br /&gt;ಸ್ಪಾಟ್ ಫಿಕ್ಸಿಂಗ್ ಎನ್ನುವುದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಲ್ಲ. ಅದು ಜಾಗತಿಕ ಸಮಸ್ಯೆ. ಮ್ಯಾಚ್ಫಿಕ್ಸಿಂಗ್ ಬುಡವನ್ನೇ ಕತ್ತರಿಸುವ ಕೊಡಲಿಯಾದರೆ, ಸ್ಪಾಟ್ಫಿಕ್ಸಿಂಗ್ ಒಳಗಿಂದೊಳಗೆ ಕೊರೆಯುವ ಕ್ರಿಮಿ. ಸ್ಪಾಟ್ಫಿಕ್ಸಿಂಗ್ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲವಾದ  ಕಾರಣ ಅದು ಮ್ಯಾಚ್ಫಿಕ್ಸಿಂಗ್ಗಿಂಥ ಭಿನ್ನ. ಇದು ಪಂದ್ಯದೊಳಗಿನ ಘಟನೆಗಳಿಗೆ ಮಾತ್ರ ಸಂಬಂಧಿಸಿದ್ದಾದ ಕಾರಣ, ಕೆಲವು ನೋಬಾಲ್, ವೈಡ್ ಎಸೆದು ಹಣ ಮಾಡುವುದು ಸುರಕ್ಷಿತ ಎಂದು ಪಾಕ್ ಕ್ರಿಕೆಟಿಗರು ಭಾವಿಸಿರಬಹುದು.&lt;br /&gt;ಪಾಕ್ ಕ್ರಿಕೆಟಿಗರು ಅಕ್ರಮ ಹಣದ ಆಮಿಷಕ್ಕೆ ಸಿಲುಕುವುದಕ್ಕೂ ಕಾರಣಗಳು ಇಲ್ಲದಿಲ್ಲ. ರಾಜತಾಂತ್ರಿಕ ಕಾರಣಗಳಿಂದಾಗಿ ಶ್ರೀಮಂತ ಐಪಿಎಲ್ನಿಂದಾಗಿ ಪಾಕ್ ಆಟಗಾರರು ವಂಚಿತರಾಗಿದ್ದಾರೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಇತರ ಯಾವುದೇ ತಂಡಗಳು ತಯಾರಿಲ್ಲ. ಅಲ್ಲಿನ ಕ್ರಿಕೆಟ್ ಮಂಡಳಿಗೆ ಆಟಗಾರರನ್ನು ಸಾಕುವ ಶಕ್ತಿ ಇಲ್ಲ. ಇನ್ನು ಪಾಕ್ನ ಅಗ್ರಮಾನ್ಯ ಆಟಗಾರರು ಹತ್ತು ವರ್ಷಗಳಲ್ಲಿ ಗಳಿಸುವ ಹಣವನ್ನು ಐಪಿಎಲ್ನ ಕೆಲವು ಪ್ರಖ್ಯಾತರು ಒಂದೇ  ಋತುವಿನಲ್ಲಿ ಗಳಿಸುತ್ತಾರೆ.  ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ  ವರ್ಷದಲ್ಲಿ ಅತ್ಯಂತ ಕಡಿಮೆ ಕ್ರಿಕೆಟ್ ಆಡುತ್ತಿರುವ ತಂಡ ಪಾಕಿಸ್ತಾನ. ಹೀಗೆ ಆಟದ ಬರ, ಗಂಟಿನ ಕೊರತೆ  ಎದುರಿಸುತ್ತಿರುವ ಆಟಗಾರರು ಇಂಥ ಅವಕಾಶ ಸಿಕ್ಕಿದಾಗ ಹಣದ ಪ್ರಲೋಭನೆಗೆ ಒಳಗಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.&lt;br /&gt;ಹಾಗೆಂದು ಪಾಕ್ ಆಟಗಾರರು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಬೇಕಿಲ್ಲ. ಕ್ರಿಕೆಟ್ ದೃಷ್ಟಿಯಿಂದ, ನೈತಿಕ ದೃಷ್ಟಿಯಿಂದ ಅದು ಘೋರ ಅಪರಾಧ. ಈ ಪ್ರಕರಣದಲ್ಲಿ ಐಸಿಸಿ ನಿಷ್ಠುರ ಕ್ರಮ ತೆಗೆದುಕೊಳ್ಳಲೇ ಬೇಕು.&lt;br /&gt;ಅತ್ತ ಪಾಕ್ ಆಟಗಾರರು  ಮಾತ್ರ ಮೋಸಗಾರರು ಎಂಬ ವಿಕೃತ ಖುಷಿ ಅನುಭವಿಸುವುದೂ ಸರಿಯಲ್ಲ. ಬೆಟ್ಟಿಂಗ್ ಕಾನೂನುಬದ್ಧವಲ್ಲದ ಭಾರತದಲ್ಲಿ  ಅದೊಂದು ದೊಡ್ಡ ದಂಧೆಯೇ ಆಗಿ ಬೆಳೆದಿದೆ. ಭೂಗತ ಜಗತ್ತು ಈ ಮಾಫಿಯಾವನ್ನೂ ನಿಯಂತ್ರಿಸುತ್ತಿದೆ. ಭಾರತೀಯ ಬುಕಿಗಳು ವಿಶ್ವದ  ಎಲ್ಲಾ ತಂಡಗಳ ಆಟಗಾರರನ್ನು ಸಂಪರ್ಕಿಸಿದ ಬಗ್ಗೆ ಮಾಹಿತಿಗಳಿವೆ. ಕ್ರಿಕೆಟ್ ಪಂದ್ಯ ಎಲ್ಲೇ ನಡೆದರೂ,  ಹಣದ ಹೊಳೆ ಹರಿಯುವುದು ಭಾರತದಲ್ಲಿ. ಅಷ್ಟಕ್ಕೂ ಭಾರತೀಯ ಆಟಗಾರೇ ಮ್ಯಾಚ್ಫಿಕ್ಸಿಂಗ್ ಹಗರಣದಲ್ಲಿ ಶಿಕ್ಷೆ ಅನುಭವಿಸಿದ್ದನ್ನು ಕ್ರಿಕೆಟ್  ಇನ್ನೂ ಮರೆತಿಲ್ಲ. ಮೋಸದಾಟದಲ್ಲಿ ಆಜೀವ ನಿಷೇಧ ಅನುಭವಿಸಿದ್ದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈಗ ಮೊರಾದಾಬಾದ್ನಿಂದ  ಕಾಂಗ್ರೆಸ್ನ ಸಂಸದ. ಅಜಯ್ ಜಡೇಜಾ ಜನಪ್ರಿಯ ಟಿವಿ ಚಾನೆಲ್ ಒಂದರಲ್ಲಿ ಕ್ರಿಕೆಟ್ ವಿಶ್ಲೇಷಕ. ಮನೋಜ್ ಪ್ರಭಾಕರ್ ರಣಜಿ ತಂಡದ ಕೋಚ್.  ಅಲ್ಲಿಗೆ ಅವರೆಲ್ಲರ ಅಕ್ರಮಗಳು ಸಕ್ರಮಗೊಂಡಿವೆ. ಜನ ಹಾಗೂ ವ್ಯವಸ್ಥೆ ಅವರ ತಪ್ಪನ್ನು ಮನ್ನಿಸಿಯಾಗಿದೆ.&lt;br /&gt;ಪಾಕ್ ಕ್ರಿಕೆಟಿಗರ ಕಳಂಕ ಕೂಡ ಇನ್ನು ಕೆಲವು ದಿನ/ ತಿಂಗಳು/ ವರ್ಷಗಳಲ್ಲಿ  ಮರೆತು ಹೋಗಲಿದೆ. ಏಕೆಂದರೆ, ಅಫ್ರಿದಿ ಚೆಂಡನ್ನು ಕಚ್ಚಿ ವಿರೂಪಗೊಳಿಸಿದ್ದಾಗಲೀ, ಶೋಯಿಬ್ ಅಖ್ತರ್ ಬ್ಯಾಟಿನಿಂದ ಸಹ ಆಟಗಾರನಿಗೆ ಹೊಡೆದಿದ್ದಾಗಲೀ, ಆಸಿಫ್ ದುಬೈನಲ್ಲಿ ಕೊಕೇನ್ನೊಂದಿಗೆ ಸಿಕ್ಕಿಬಿದ್ದಿದ್ದಾಗಲೀ, ಅಥವಾ ಇಂಥ ಅದೆಷ್ಟೋ ಹಗರಣಗಳು ನೆನಪಿನಲ್ಲೇ ಇಲ್ಲ. ಹಾಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲೂ ಅಷ್ಟೇ. ಸಾಕ್ಷ್ಯಗಳು ಎಷ್ಟೇ ಪ್ರಬಲವಾಗಿದ್ದರೂ, ಸದ್ಯ ಮಟ್ಟಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ  ಐಸಿಸಿ ಯಾವುದೇ ದಾಕ್ಷಿಣ್ಯಗಳಿಗೆ ಕಟ್ಟುಬಿದ್ದರೆ, ಆಟದ ವಿಶ್ವಾಸಾರ್ಹತೆಯನ್ನು  ಮುಂದೆ ಯಾವ ರೀತಿಯಲ್ಲೂ ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ.&lt;br /&gt;&lt;br /&gt;&lt;br /&gt;&lt;span style="color: rgb(153, 0, 0);font-size:180%;" &gt;&lt;span style="font-weight: bold;"&gt;ಕಳಂಕದ ದಿನಗಳಲ್ಲಿ ಕ್ರಿಕೆಟ್&lt;/span&gt;&lt;/span&gt;&lt;br /&gt;&lt;br /&gt;ಇಂಗ್ಲೆಂಡ್, ಏಷ್ಯಾ ಉಪಖಂಡ ಮತ್ತು ಆಸ್ಟ್ರೇಲಿಯಾದ ಆಟಗಾರರಿಗೆ ಮ್ಯಾಚ್ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ನ ಕೆನ್ನಾಲಿಗೆ ಬಿಸಿ ಮುಟ್ಟಿಸುತ್ತಿರುವ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಟೂರ್ನಿಗೆ ಆತಿಥ್ಯ  ವಹಿಸಲು ಸಜ್ಜಾಗಿದೆ. ಕ್ರಿಕೆಟ್ನ ಅತಿ ದೊಡ್ಡ ಹಗರಣ ಸ್ಪಾಟ್ ಫಿಕ್ಸಿಂಗ್ ಆಟದ ಮಾನಮರ್ಯಾದೆ ಹರಾಜು ಹಾಕಿರುವ ಈ ದಿನಗಳಲ್ಲಿ ಬೆಟ್ಟಿಂಗ್ ದಂಧೆಗೆ ಅತ್ಯಂತ ಸೂಕ್ತವಾದ ಚುಟುಕು ಮಾದರಿಯ ಜಾಗತಿಕ ಕ್ಲಬ್  ಟೂರ್ನಿ ಆರಂಭವಾಗುತ್ತಿರುವುದು ಕಾಕತಾಳೀಯವೋ, ಪರಿಸ್ಥಿತಿಯ ವ್ಯಂಗ್ಯವೋ ಎನ್ನುವುದು ನಿರ್ಧಾರವಾಗಬೇಕು.&lt;br /&gt;ಭಾರತದಲ್ಲೇ ನಡೆದಿದ್ದ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಲೀಗ್ನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು. ಅತ್ಯಂತ  ಸ್ಪರ್ಧಾತ್ಮಕವಾಗಿದ್ದ ಟೂರ್ನಿಯಲ್ಲಿ  ವೆಸ್ಟ್ ಇಂಡೀಸ್ನ ಟ್ರಿನಿಡಾಡ್-ಟೊಬಾಗೊ ತಂಡ  ಅನಿರೀಕ್ಷಿತವಾಗಿ ಫೈನಲ್ ತಲುಪಿ ಅಚ್ಚರಿ ಮೂಡಿಸಿತ್ತು. ಈ ಬಾರಿಯ 2ನೇ ಆವೃತ್ತಿ ಇಂಥ ಅನೇಕ ಅಚ್ಚರಿಗಳನ್ನು ಒಡಲಲ್ಲಿ ಹುದುಗಿಸಿಕೊಂಡಿರುವ ನಿರೀಕ್ಷೆ ಇದೆ.&lt;br /&gt;ಚೊಚ್ಚಲ ಸಿಎಲ್ನಲ್ಲಿ ಭಾಗವಹಿಸಿದ್ದ ಕೇವಲ ಮೂರು ತಂಡಗಳು ಮಾತ್ರ ಈ ಬಾರಿಯೂ ಕಣದಲ್ಲಿವೆ. ಅವುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶ್ರೀಲಂಕಾದ ವಯಾಂಬ ಇಲೆವೆನ್ ಮತ್ತು ಆಸ್ಟ್ರೇಲಿಯಾದ ವಿಕ್ಟೋರಿಯಾ. ಕಳೆದ ವರ್ಷ ಫೈನಲ್ ತಲುಪಿದ್ದ ತಂಡಗಳೆರಡೂ ಈ ವರ್ಷ ಅರ್ಹತೆಯನ್ನೇ ಪಡೆದಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಭಾರತದ ಮೂರು ತಂಡಗಳು (ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಆರ್ಸಿಬಿ), ಆಸ್ಟ್ರೇಲಿಯಾದ ಎರಡು (ವಿಕ್ಟೋರಿಯಾ, ಸೌತ್ ಆಸ್ಟ್ರೇಲಿಯಾ), ದಕ್ಷಿಣ ಆಫ್ರಿಕಾದ 2 (ಲಯನ್ಸ್, ವಾರಿಯರ್ಸ್), ಶ್ರೀಲಂಕಾ (ವಯಾಂಬ), ನ್ಯೂಜಿಲೆಂಡ್ (ಸೆಂಟ್ರಲ್ ಡಿಸ್ಟ್ರಿಕ್ಟ್ಸ್), ವೆಸ್ಟ್ ಇಂಡೀಸ್ನ (ಗಯಾನ) ತಲಾ ಒಂದು ತಂಡಗಳು (ಒಟ್ಟು 10 ತಂಡ) ಸ್ಪರ್ಧೆಯಲ್ಲಿವೆ. ವೇಳಾಪಟ್ಟಿ ಅಡಚಣೆಯಿಂದಾಗಿ ಈ ಬಾರಿ ಇಂಗ್ಲೆಂಡ್ ತಂಡಗಳಿಗೆ ಅವಕಾಶ ಸಿಕ್ಕಿಲ್ಲ. ಪಾಕ್ ತಂಡಕ್ಕೆ ಅವಕಾಶ ನೀಡಲಾಗಿಲ್ಲ.&lt;br /&gt;ಇಂಡಿಯನ್ ಪ್ರೀಮಿಯರ್ ಲೀಗ್ಗೂ ಚಾಂಪಿಯನ್ಸ್ ಲೀಗ್ಗೂ ಇರುವ ದೊಡ್ಡ ವ್ಯತ್ಯಾಸವೆಂದರೆ, ಐಪಿಎಲ್  ಪಕ್ಕಾ ಭಾರತೀಯ ಟೂರ್ನಿ. ಇದರಲ್ಲಿ ಭಾಗವಹಿಸುವ ತಂಡಗಳಲ್ಲಿ ಬದಲಾವಣೆ ಆಗುವುದಿಲ್ಲ. ಆಟಗಾರರಲ್ಲಿ ಬದಲಾವಣೆ ಇರುವುದಿಲ್ಲ. ಆದರೆ, ಚಾಂಪಿಯನ್ಸ್ ಲೀಗ್ನಲ್ಲಿ ಪ್ರತೀ ವರ್ಷ ತಂಡಗಳು ಬದಲಾಗುತ್ತವೆ. ಇದು ಟೂರ್ನಿಯ ಅನಿಶ್ಚಿತತೆಯನ್ನು, ರೋಚಕತೆಯನ್ನು ಹೆಚ್ಚಿಸುತ್ತವೆ.  ಅನಾಮಧೇಯ ತಂಡಗಳ ಅಪರಿಚಿತ ಆಟಗಾರರ ವಿರುದ್ಧ ಆಡುವಾಗ ಗುಣಮಟ್ಟ ಹೆಚ್ಚುವ ಸಾಧ್ಯತೆ ಇರುತ್ತದೆ. ಇದು ಮ್ಯಾಚ್ಫಿಕ್ಸಿಂಗ್ನ  ದಿನಗಳಾಗಿರುವುದರಿಂದ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಎಂದಿಗಿಂತ ಹೆಚ್ಚು ಜಾಗ್ರತವಾಗಿದೆ. ಹಾಗಾಗಿ ಕನಿಷ್ಠ ಈ ಟೂರ್ನಿ ಸ್ವಚ್ಛವಾಗಿ ನಡೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು.&lt;br /&gt;ಫಲಿತಾಂಶದ ದೃಷ್ಟಿಯಿಂದ ಯಾವುದೇ ತಂಡವನ್ನು ಫೇವರಿಟ್ ಎಂದು ಗುರುತಿಸುವುದು ಅಸಾಧ್ಯ. ಆದರೂ, ಆಸ್ಟ್ರೇಲಿಯಾದ ಎರಡು ತಂಡಗಳು, ಭಾರತದ ಮೂರು ತಂಡಗಳು  ಎಂದಿನಂತೆ ಫೇವರಿಟ್ಗಳು. ಈ ಪಟ್ಟಿಗೆ ತವರಿನ ಬೆಂಬಲ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಗಳನ್ನೂ  ಸೇರಿಸಬಹುದು. ಇನ್ನು ಶ್ರೀಲಂಕಾದ ಬಹುತೇಕ ಅಂತಾರಾಷ್ಟ್ರೀಯ ಆಟಗಾರರು ವಯಾಂಬ ತಂಡದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರರು ಟಿ20 ಮಾದರಿಯಲ್ಲಿ ಕಪ್ಪುಕುದುರೆಗಳು. ಅವರನ್ನು  ಯಾವತ್ತಿಗೂ ನಿರ್ಲಕ್ಷಿಸುವಂತಿಲ್ಲ. ಇನ್ನು ಉಳಿಯುವುದು ನ್ಯೂಜಿಲೆಂಡ್ ತಂಡ ಮಾತ್ರ. ಅವರನ್ನೂ ದುರ್ಬಲವೆಂದು ಪರಿಗಣಿಸಲು ಯಾವುದೇ ಕಾರಣಗಳಿಲ್ಲ. ಶರವೇಗದ ವೇಗಿ ಶೇನ್ ಬಾಂಡ್ ಆ ತಂಡದ ಕೋಚ್.&lt;br /&gt;ಆಟಗಾರರ ದೃಷ್ಟಿಯಿಂದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಎಂಎಸ್  ಧೋನಿ, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಮೊದಲಾದವರು ಭಾರತೀಯ ತಂಡಗಳ ಆಕರ್ಷಣೆ. ಜಾಕ್ಸ್ ಕಾಲಿಸ್, ಡೇಲ್ ಸ್ಟೈನ್ ಮೊದಲಾದವರು ತವರು ತಂಡಗಳನ್ನು ಬಿಟ್ಟು ಭಾರತದ ಪರ ಆಡುತ್ತಿದ್ದಾರೆ. ಜೇಕಬ್ ಓರಮ್, ಡೇವಿಡ್ ಹಸ್ಸೆ, ಬ್ರಾಡ್ ಹಾಜ್, ಮಹೇಲ ಜಯವರ್ಧನೆ, ಕೈರನ್ ಪೊಲ್ಲಾರ್ಡ್ ಮೊದಲಾದ ಖ್ಯಾತನಾಮರು ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.&lt;br /&gt;ಒಟ್ಟಾರೆ ಚಾಂಪಿಯನ್ಸ್ ಲೀಗ್  ಅನ್ನು ಯಾರು ಗೆಲ್ಲುತ್ತಾರೆ ಎನ್ನುವುದಕ್ಕಿಂತ  ಯಾವ ರೀತಿ ಗೆಲ್ಲುತ್ತಾರೆಂಬ ಬಗ್ಗೆ ಹೆಚ್ಚಿನ ಗಮನವಿದೆ. ಇಂಗ್ಲೆಂಡ್ನಲ್ಲಿ ಹೋದ ಮಾನ ದಕ್ಷಿಣ ಆಫ್ರಿಕಾದಲ್ಲಿ ಬರಲಿ ಎನ್ನುವುದಷ್ಟೇ ಸದ್ಯದ ಆಶಯ.&lt;br /&gt;&lt;br /&gt;&lt;span style="font-weight: bold;"&gt;ಚಾಂಪಿಯನ್ಸ್ ಲೀಗ್ &lt;/span&gt;&lt;br /&gt;&lt;span style="font-weight: bold;"&gt;ವೇಳಾ ಪಟ್ಟಿ&lt;/span&gt;&lt;br /&gt;ಸೆ. 10    ಮುಂಬೈ ಇಂಡಿಯನ್ಸ್ - ಲಯನ್ಸ್&lt;br /&gt;ಸೆ. 11    ವಾರಿಯರ್ಸ್ - ವಯಾಂಬ&lt;br /&gt;ಸೆ. 11    ಸೆಂಟ್ರಲ್ ಡಿಸ್ಟ್ರಿಕ್ಟ್ಸ್-ಚೆನ್ನೈ&lt;br /&gt;ಸೆ. 12    ಲಯನ್ಸ್ - ಸೌತ್ ಆಸ್ಟ್ರೇಲಿಯಾ&lt;br /&gt;ಸೆ. 12    ಬೆಂಗಳೂರು- ಗಯಾನ&lt;br /&gt;ಸೆ. 13    ವಿಕ್ಟೋರಿಯಾ-ವಾರಿಯರ್ಸ್&lt;br /&gt;ಸೆ. 14    ಮುಂಬೈ- ಸೌತ್ ಆಸ್ಟ್ರೇಲಿಯಾ&lt;br /&gt;ಸೆ. 15    ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಿಕ್ಟೋರಿಯಾ&lt;br /&gt;ಸೆ. 15    ಚೆನ್ನೈ- ವಯಾಂಬ&lt;br /&gt;ಸೆ. 16    ಗಯಾನ- ಮುಂಬೈ&lt;br /&gt;ಸೆ. 17    ಬೆಂಗಳೂರು- ಸೌತ್ ಆಸ್ಟ್ರೇಲಿಯಾ&lt;br /&gt;ಸೆ. 18    ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಾರಿಯರ್&lt;br /&gt;ಸೆ. 18    ಚೆನ್ನೈ - ವಿಕ್ಟೋರಿಯಾ&lt;br /&gt;ಸೆ. 19    ಲಯನ್ಸ್ - ಗಯಾನ&lt;br /&gt;ಸೆ. 19    ಮುಂಬೈ-ಬೆಂಗಳೂರು&lt;br /&gt;ಸೆ. 20    ವಿಕ್ಟೋರಿಯಾ - ವಯಾಂಬ&lt;br /&gt;ಸೆ. 21    ಗಯಾನ-ಸೌತ್ ಆಸ್ಟ್ರೇಲಿಯಾ&lt;br /&gt;ಸೆ. 21    ಲಯನ್ಸ್- ಬೆಂಗಳೂರು&lt;br /&gt;ಸೆ. 22    ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಯಾಂಬ&lt;br /&gt;ಸೆ. 22    ಚೆನ್ನೈ- ವಾರಿಯರ್ಸ್&lt;br /&gt;ಸೆ. 24    ಮೊದಲ ಸೆಮಿಫೈನಲ್&lt;br /&gt;ಸೆ. 25    ಎರಡನೇ ಸೆಮಿಫೈನಲ್&lt;br /&gt;ಸೆ. 26    ಫೈನಲ್&lt;br /&gt;ಭಾರತದ ತಂಡಗಳು ಆಡುವ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಆರಂಭವಾಗಲಿವೆ. ಉಳಿದ ಪಂದ್ಯಗಳು ಸಂಜೆ 5 ಗಂಟೆಗೆ ಆರಂಭವಾಗುತ್ತವೆ.&lt;br /&gt;&lt;span style="font-weight: bold;"&gt;ನೇರಪ್ರಸಾರ&lt;/span&gt;&lt;br /&gt;ಸ್ಟಾರ್ ಕ್ರಿಕೆಟ್.&lt;br /&gt;ಕ್ರೀಡಾಂಗಣಗಳು&lt;br /&gt;ಸೆಂಚುರಿಯನ್, ಡರ್ಬನ್,&lt;br /&gt;ಜೊಹಾನ್ಸ್ಬರ್ಗ್, ಪೋರ್ಟ್ ಎಲಿಜಬೆತ್.&lt;br /&gt;&lt;span style="font-weight: bold;"&gt;ತಂಡಗಳು&lt;/span&gt;&lt;br /&gt;&lt;span style="font-weight: bold;"&gt;ಎ ಗುಂಪು: &lt;/span&gt;&lt;br /&gt;ಚೆನ್ನೈ ಸೂಪರ್ ಕಿಂಗ್ಸ್&lt;br /&gt;ವಾರಿಯರ್ಸ್ (ದಕ್ಷಿಣ ಆಫ್ರಿಕಾ)&lt;br /&gt;ವಿಕ್ಟೋರಿಯಾ (ಆಸ್ಟ್ರೇಲಿಯಾ)&lt;br /&gt;ವಯಾಂಬ (ಶ್ರೀಲಂಕಾ)&lt;br /&gt;ಸೆಂಟ್ರಲ್ ಡಿಸ್ಟ್ರಿಕ್ಟ್ಸ್ (ನ್ಯೂಜಿಲೆಂಡ್)&lt;br /&gt;&lt;span style="font-weight: bold;"&gt;ಬಿ ಗುಂಪು:&lt;/span&gt;&lt;br /&gt;ಮುಂಬೈ ಇಂಡಿಯನ್ಸ್&lt;br /&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು&lt;br /&gt;ಲಯನ್ಸ್ (ದಕ್ಷಿಣ ಆಫ್ರಿಕಾ)&lt;br /&gt;ಸೌತ್ ಆಸ್ಟ್ರೇಲಿಯಾ&lt;br /&gt;ಗಯಾನ (ವೆಸ್ಟ್ ಇಂಡೀಸ್)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-6339720334544271704?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/6339720334544271704/comments/default' title='Post Comments'/><link rel='replies' type='text/html' href='http://ragaakshara.blogspot.com/2010/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/6339720334544271704'/><link rel='self' type='application/atom+xml' href='http://www.blogger.com/feeds/2998842447029730227/posts/default/6339720334544271704'/><link rel='alternate' type='text/html' href='http://ragaakshara.blogspot.com/2010/09/blog-post.html' title='ಎರಡು ಬರಹಗಳು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-4752008404991199613</id><published>2010-08-23T16:05:00.000+05:30</published><updated>2010-08-23T16:07:06.384+05:30</updated><title type='text'>ಮಾತು ಕೃತಿಯ ಅಂತರ</title><content type='html'>ಮುತ್ತಯ್ಯ ಮುರಳೀಧರನ್ಗೆ 800 ವಿಕೆಟ್ ಕಬಳಿಸಲು ಅವಕಾಶ ಕೊಡುವುದಿಲ್ಲ ಎಂದು ಗಾಲೆ ಟೆಸ್ಟ್ಗೆ ಮುನ್ನ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಹೇಳಿದಾಗ, ಅದನ್ನು ಉದ್ಧಟತನದ ಮಾತು ಎಂದು ಟೀಕಿಸಿದವರು ಬಹಳ ಮಂದಿ.&lt;br /&gt;ಆದರೆ, ವಾಸ್ತವದಲ್ಲಿ ಭಾರತೀಯರು ಹಾಗೇನೂ ಮಾಡಲಿಲ್ಲ. ಮುರಳಿ 800 ವಿಕೆಟ್ಗಳ ಹೆಮ್ಮೆಯೊಂದಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದಾಗ ಇವರೂ ಸಂತೋಷಪಟ್ಟರು.&lt;br /&gt;     ಭಾರತೀಯರು ಮನಸ್ಸು ಮಾಡಿದ್ದರೆ ಮುರಳಿಗೆ 800 ವಿಕೆಟ್ ಸಿಗದಂತೆ ಮಾಡುವುದು ಕಠಿಣವೇನೂ ಆಗಿರಲಿಲ್ಲ. ಅದು ಕಾನೂನುಬಾಹಿರ ಎನಿಸಿಕೊಳ್ಳುತ್ತಲೂ ಇರಲಿಲ್ಲ.ಾಲೆ ಟೆಸ್ಟ್ನಲ್ಲಿ ಭಾರತೀಯರು ಸೋಲುವುದು ಖಚಿತವಾಗಿತ್ತು. 2ನೇ ಇನಿಂಗ್ಸ್ನಲ್ಲಿ ತಂಡದ ಮೊತ್ತ 314 ರನ್ ಆಗಿದ್ದಾಗ ಲಕ್ಷ್ಮಣ್ 9 ವಿಕೆಟ್ ರೂಪದಲ್ಲಿ ರನೌಟ್ ಆದರು. ಆ ಕೂಡಲೇ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರೆ ಲಂಕೆಗೆ 95 ರನ್ ಬದಲು 71 ರನ್ಗಳ ಗುರಿ ನೀಡಿದಂತಾಗುತ್ತಿತ್ತು. ಅದರಿಂದ ಅಂಥ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಆದರೆ, ಮುತ್ತಯ್ಯ ಮುರಳೀಧರನ್ ಅಂಥ ಸನ್ನಿವೇಶದಲ್ಲಿ 799 ವಿಕೆಟ್ಗಳೊಂದಿಗೆ ತ್ರಿಶಂಕುವಾಗುತ್ತಿದ್ದರು. 800 ವಿಕೆಟ್ ಅವರಿಗೆ ಎಟುಕುತ್ತಿರಲಿಲ್ಲ.ದರೆ, ಭಾರತೀಯ ಆಟಗಾರರು ಅಂಥ ಸಣ್ಣತನ ತೋರಲಿಲ್ಲ.ದರೆ, ಡಂಬುಲ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 13ನೇ ಶತಕ ಬಾರಿಸಲು 1 ರನ್ ಅಗತ್ಯ ಹೊಂದಿದ್ದಾಗ ಸೂರಜ್ ರಣದಿವ್ ನೋಬಾಲ್ ಎಸೆದರು. ಆ ರೀತಿ ಮಾಡುವಂತೆ ತಿಲಕರತ್ನೆ ದಿಲ್ಶಾನ್ ಪ್ರಚೋದಿಸಿದ್ದರು. ಲಂಕಾ ನಾಯಕ ಕುಮಾರ ಸಂಗಕ್ಕರ ಸಹ ತಮ್ಮ ಆಟಗಾರರ ಮೋಸದಲ್ಲಿ ಶಾಮೀಲಾಗಿದ್ದರು (ಅವರು ಇದನ್ನು ಒಪ್ಪಿಕೊಳ್ಳದಿರಬಹುದು). ಇದಕ್ಕಾಗಿ ಲಂಕಾ ಕ್ರಿಕೆಟ್ ಮಂಡಳಿ ಆ ಮೂವರಿಗೆ ನಿಷೇಧ, ದಂಡ ಹಾಗೂ ಛೀಮಾರಿಯ ಶಿಕ್ಷೆಧಿವಿಸಿದೆ.್ರಕೆಟ್ನಲ್ಲಿ ಕ್ರೀಡಾಸೂರ್ತಿಗೆ ಧಕ್ಕೆ ತರುವ ಇಂಥ ಪ್ರಸಂಗಗಳು ಹೊಸದೇನೂ ಅಲ್ಲ. ರಣದೀವ್ ಮೋಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ ಸೆಹ್ವಾಗ್ ಸಂತರೇನೂ ಅಲ್ಲ ಎನ್ನುವವರಿದ್ದಾರೆ. ಅದಕ್ಕೆ ಅವರು ಉದಾಹರಿಸುವುದು ಕಳೆದ ವರ್ಷ ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲಿ ಸೆಹ್ವಾಗ್ ದಂಡಶಿಕ್ಷೆ ಅನುಭವಿಸಿದ ಪ್ರಕರಣವನ್ನು.ಟೆಸ್ಟ್ನಲ್ಲಿ ಭಾರತ ಇನಿಂಗ್ಸ್ ಗೆಲುವಿಗೆ ಹತ್ತಿರದಲ್ಲಿತ್ತು. ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಜೋಡಿ ಹಾಶಿಮ್ ಆಮ್ಲಾ ಮತ್ತು ಮಾರ್ನ್ ಮಾರ್ಕೆಲ್ ಕ್ರೀಸ್ನಲ್ಲಿದ್ದರು. ಅದಾಗಲೇ ಶತಕ ಬಾರಿಸಿದ್ದ ಅನುಭವಿ ಆಟಗಾರ ಆಮ್ಲ, ತೆಂಡುಲ್ಕರ್ ಓವರ್ನ ನಾಲ್ಕನೇ ಎಸೆತವನ್ನು ಸೆಹ್ವಾಗ್ರತ್ತ ತಳ್ಳಿ ಒಂಟಿ ರನ್ಗಾಗಿ ಓಡಿದರು. ಆದರೆ, ಸೆಹ್ವಾಗ್ ಚೆಂಡು ತಡೆಯುವ ಬದಲು ಸ್ವತಃ ಬೌಂಡರಿ ಗೆರೆಯತ್ತ ಒದ್ದರು. ಮುಂದಿನ ಓವರ್ನಲ್ಲಿ ಆಮ್ಲಾಗೆ ಬ್ಯಾಟಿಂಗ್ ಸಿಗದೆ, ಮಾರ್ಕೆಲ್ಗೆ ಸಿಗಲಿ ಎನ್ನುವುದು ಸೆಹ್ವಾಗ್ ಉದ್ದೇಶವಾಗಿತ್ತು. ಇದಕ್ಕಾಗಿ ಕ್ರೀಡಾ ್ಫೂರ್ತಿ ಉಲ್ಲಂಘಿಸಿದ ಆಪಾದನೆ ಹಾಗೂ ಶಿಕ್ಷೆಗೆ ದೆಹಲಿ ಆಟಗಾರ ಗುರಿಯಾದರು.ದರೆ, ರಣದಿವ್ ಪ್ರಕರಣಕ್ಕೂ ವೀರೂ ಪ್ರಕರಣಕ್ಕೂ ವ್ಯತ್ಯಾಸವಿದೆ. ಟೀಕಾಕಾರರು ಅದನ್ನು ಗಮನಿಸಬೇಕು.ಮ್ಲ ಶತಕ ಗಳಿಸುವುದಕ್ಕೆ ವೀರೂ ಅಡ್ಡಿ ಮಾಡಿರಲಿಲ್ಲ. ಜೊತೆಗೆ ಅವರು ಆ ರೀತಿ ಮಾಡಿದ್ದು ಭಾರತ ಬೇಗನೆ ಗೆಲ್ಲಲಿ ಎಂಬ ಕಾರಣದಿಂದ. ಆದರೆ, ರಣದಿವ್ ಕೃತ್ಯದಿಂದ ಪಂದ್ಯದ ಫಲಿತಾಂಶದ ಮೇಲೆ ಯಾವುದೇ ವ್ಯತ್ಯಾಸವಾಗುವುದು ಸಾಧ್ಯವಿರಲಿಲ್ಲ. ಏಕೆಂದರೆ, ಭಾರತದ ಗೆಲುವಿಗೆ 1 ರನ್ ಮಾತ್ರ ಬೇಕಿತ್ತು. ಅವರು ವೀರೂ ಶತಕ ಗಳಿಸಬಾರದು ಎಂಬ ಏಕೈಕ ವಿಕೃತಿಯಿಂದ ನೋಬಾಲ್ ಎಸೆದಿದ್ದರು.ರಡೂ ಪ್ರಕರಣಗಳ ನಡುವೆ ಇನ್ನೂ ಒಂದು ದೊಡ್ಡ ವ್ಯತ್ಯಾಸವಿದೆ.&lt;br /&gt; ಸೆಹ್ವಾಗ್ ಚೆಂಡನ್ನು ಬೌಂಡರಿಯತ್ತ ಒದ್ದಾಗ ಮೈದಾನದ ಅಂಪೈರ್ಗಳು ಕೂಡಲೇ ಕ್ರಮ ತೆಗೆದುಕೊಂಡಿದ್ದರು. ಆಮ್ಲ ಗಳಿಸಿದ್ದು ಒಂಟಿ ರನ್ ಮಾತ್ರ ಎಂದು ಪರಿಗಣಿಸಿದ್ದರು ಹಾಗೂ 5 ಇತರೆ ರನ್ಗಳನ್ನು ದಂಡ ರೂಪದಲ್ಲಿ ನೀಡಿದ್ದರು. ಜೊತೆಗೆ ಉದ್ದೇಶಪೂರ್ವಕವಾಗಿ ಚೆಂಡು ಒದ್ದ ಸೆಹ್ವಾಗ್ ಕ್ರೀಡ್ಫಾೂರ್ತಿ ಉಲ್ಲಂಘಿಸಿದ್ದಾರೆ ಎಂದು ಮ್ಯಾಚ್ರೆಫ್ರಿಗೆ ದೂರು ನೀಡಿ ಶಿಕ್ಷೆ ಕೊಡಿಸಿದ್ದರು.ದರೆ, ರಣದಿವ್ ಪ್ರಕರಣದಲ್ಲಿ ಹಾಗಾಗಲೇ ಇಲ್ಲ. ಅಂಪೈರ್ಗಳು ಹೆಚ್ಚು ಜಾಗೃತರಾಗಿದ್ದರೆ, ರಣದಿವ್ ‘ಉದ್ದೇಶಪೂರ್ವಕವಾಗಿ ಎಸೆದ ನೋಬಾಲ್’ ಅನ್ನು ಅಮಾನ್ಯ ಮಾಡಿ ಸೆಹ್ವಾಗ್ ಬಾರಿಸಿದ ಸಿಕ್ಸರ್ ಅನ್ನು ಮಾನ್ಯ ಮಾಡಬಹುದಿತ್ತು. ಐಸಿಸಿ ನೀತಿಸಂಹಿತೆಯಲ್ಲಿ ಇದಕ್ಕೆ ಅವಕಾಶವಿತ್ತು. ಆದರೆ, ಡಂಬುಲದಲ್ಲಿದ್ದ ಅಂಪೈರ್ಗಳು ಕಣ್ಣುಮುಚ್ಚಿಕೊಂಡಿದ್ದರು. ಹಾಗೆ ನೋಡಿದರೆ, ಅಂಪೈರ್ಗಳಲ್ಲೇ ಗೊಂದಲವಿತ್ತು. ರಣದಿವ್ ನೋಬಾಲ್ ಮಾಡಿದ ಅರಿವಿದ್ದೂ, ಅಂಪೈರ್ ಅಸದ್ ರಾಫ್ ಸೆಹ್ವಾಗ್ರ ಹೊಡೆತಕ್ಕೂ ಸಿಕ್ಸರ್ ಸಂಕೇತ ನೀಡಿದರು. ಕೊನೆಗೆ ಸಿಕ್ಸರ್ ಮಟ್ಟಗೋಲು ಹಾಕಿಕೊಂಡು ಶತಕ ವಂಚಿಸಲಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-4752008404991199613?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/4752008404991199613/comments/default' title='Post Comments'/><link rel='replies' type='text/html' href='http://ragaakshara.blogspot.com/2010/08/blog-post_23.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/4752008404991199613'/><link rel='self' type='application/atom+xml' href='http://www.blogger.com/feeds/2998842447029730227/posts/default/4752008404991199613'/><link rel='alternate' type='text/html' href='http://ragaakshara.blogspot.com/2010/08/blog-post_23.html' title='ಮಾತು ಕೃತಿಯ ಅಂತರ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-6092728934213647533</id><published>2010-08-16T14:50:00.001+05:30</published><updated>2010-08-16T14:54:03.442+05:30</updated><title type='text'>ವಿ ದಾ ಯ ದ ಬಾಗಿಲು</title><content type='html'>&lt;span style="font-weight: bold; color: rgb(153, 0, 0);"&gt;&lt;/span&gt;ನಿವೃತ್ತಿಗೆ ಸೂಕ್ತವಾದ ವಯಸ್ಸು ಯಾವುದೆಂಬ ಬಗ್ಗೆ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಜಿಜ್ಞಾಸೆಯೇ ಇದೆ.&lt;br /&gt;ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತರಾಗಲೇ ಬೇಕು. ಆದರೆ, ಪ್ರತಿಯೊಬ್ಬರದೂ ಸ್ವಯಂ ನಿವೃತ್ತಿ ಆಗಿರುವುದಿಲ್ಲ. ಎಲ್ಲೋ ಕೆಲವರು ಮಾತ್ರ ಸೂಕ್ತ ಸಂದರ್ಭದಲ್ಲಿ ತಮ್ಮದೇ ನಿರ್ಧಾರದಂತೆ ನಿವೃತ್ತರಾಗುತ್ತಾರೆ. ಉದಾಹರಣೆಗೆ ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳೀಧರನ್. ಆದರೆ, ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲ. ಕೆಲವರಿಗೆ ಅಕಾಲ ನಿವೃತ್ತಿಯಾದರೆ,  ಕೆಲವರಿಗೆ ಕ್ರೀಡೆಯ ಹಿತದೃಷ್ಟಿಯಿಂದ ಸಕಾಲಿಕವಾಗಿರುತ್ತದೆ. ಇನ್ನೂ ಕೆಲವರಿಗೆ ಬಲವಂತದ ನಿವೃತ್ತಿ. ಎಷ್ಟೋ ಮಂದಿಗೆ ನಿವೃತ್ತಿಯ ಮಾತಾಡುವ ಸಂದರ್ಭವೇ ಬರುವುದಿಲ್ಲ. ಆಡುವ ಅವಕಾಶ ದೊರೆತರೆ ತಾನೆ ನಿವೃತ್ತಿಯಾಗುವುದು?&lt;br /&gt;ಸಾಮಾನ್ಯವಾಗಿ ಟೆನಿಸ್ನಂಥ ವೈಯಕ್ತಿಕ ಕ್ರೀಡೆಗಳಲ್ಲಿ ಆಟಗಾರರಿಗೆ ತಮಗೆ ಶಕ್ತಿ, ಆಕಾಂಕ್ಷೆ ಇದ್ದಷ್ಟು ಕಾಲ ಆಟವಾಡುವ, ಸಾಕೆಂದಾಗ ನಿವೃತ್ತರಾಗುವ ಸ್ವಾತಂತ್ರ್ಯ ಇರುತ್ತದೆ. ಆದರೆ, ಆಯ್ಕೆಗಾರರ ಮರ್ಜಿಗೆ ತಲೆಬಾಗುವ ತಂಡ ಕ್ರೀಡೆಗಳ ಕ್ರೀಡಾಪಟುಗಳಿಗೆ ಇಂಥ ಅದೃಷ್ಟ ಇರುವುದಿಲ್ಲ. ಅಲ್ಲಿ ಕೋಚ್ನಿಂದ ಮೊದಲ್ಗೊಂಡು, ಆಯ್ಕೆಗಾರರು, ಆಡಳಿತ ಮಂಡಳಿ ಎಲ್ಲರ ಒಲವು ಹೊಂದಿದ್ದರೆ ಮಾತ್ರ ನೆತ್ತಿಯ ಮೇಲೆ ತೂಗುಕತ್ತಿ ಇಲ್ಲದೆ ನೆಮ್ಮದಿಯಿಂದ ದೀರ್ಘಕಾಲ ಆಡಿಕೊಂಡಿರಲು ಸಾಧ್ಯ. ಇಂಗ್ಲೆಂಡ್ನ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಂರ ಅಂತಾರಾಷ್ಟ್ರೀಯ ವೃತ್ತಿಜೀವನ ಮುಗಿದಿದೆ. ಬೆಕ್ಹ್ಯಾಂ ಇನ್ನೊಮ್ಮೆ ಇಂಗ್ಲೆಂಡ್ ಸಮವಸ್ತ್ರ ಧರಿಸಿ ಆಡುವುದನ್ನು ಕಾಣಲು ಇನ್ನು ಸಾಧ್ಯವಾಗದು. ಹಾಗೆಂದು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟು ಸ್ವಯಂನಿವೃತ್ತಿಯನ್ನೇನೂ ಘೋಷಿಸಿಲ್ಲ. ಬದಲಿಗೆ ಇಂಗ್ಲೆಂಡ್ ಕೋಚ್ ಫಾಬಿಯೋ ಕ್ಯಾಪೆಲೋ ಅವರಿಗೆ ಬಲವಂತದ ನಿವೃತ್ತಿ ಕೊಡಿಸಿದ್ದಾರೆ. ‘ಬೆಕ್ಹ್ಯಾಂಗೆ ವಯಸ್ಸಾಯಿತು. ನನ್ನ ತಂಡದಲ್ಲಿನ್ನು ಅವರು ಸ್ಥಾನ ಪಡೆಯುವುದಿಲ್ಲ’ ಎಂದು ಕ್ಯಾಪೆಲೊ ಇತ್ತೀಚೆಗೆ ಟಿವಿ ಸಂದರ್ಶನದಲ್ಲಿ ಘೋಷಿಸಿದರು.&lt;br /&gt;ಬೆಕ್ಹ್ಯಾಂರಂಥ ಆಟಗಾರನ ಬಗ್ಗೆ ಕ್ಯಾಪೆಲೊ ಅಷ್ಟೊಂದು ನಿರ್ದಯವಾಗಿ, ನಿಷ್ಕಾರಣುವಾಗಿ, ಸೌಜನ್ಯರಹಿತರಾಗಿ ವರ್ತಿಸುವುದನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ, ಈ ಫುಟ್ಬಾಲ್ ಎಂಬ ಆಟ ಇರುವುದೇ ಹೀಗೆ. ಅಲ್ಲಿ ತರಬೇತುದಾರನೇ ದೇವರು. ಕೋಚ್ ಬೇಡವೆಂದ ಕೆಲಸ ಮಾಡುವ ಧೈರ್ಯ ಆ ರಾಷ್ಟ್ರದ ಫುಟ್ಬಾಲ್ ಮಂಡಳಿ ಹೋಗಲಿ, ರಾಷ್ಟ್ರಾಧ್ಯಕ್ಷರಿಗೂ ಇರುವುದಿಲ್ಲ. ಹಾಗೆಂದೇ ಕ್ಯಾಪೆಲೋ ತಮ್ಮ ನಿರ್ಧಾರವನ್ನು ಟಿವಿ ಮುಂದೆ ಘೋಷಿಸುವ ಮುನ್ನ ಸೌಜನ್ಯಕ್ಕಾದರೂ, ಬೆಕ್ಹ್ಯಾಂ ಜೊತೆ ಮಾತನಾಡುವುದು ಸೂಕ್ತವೆಂದು ಯೋಚಿಸಲಿಲ್ಲ. ಅದರೊಂದಿಗೆ ಇಂಗ್ಲೆಂಡ್ ಪರ 115 ಪಂದ್ಯಗಳನ್ನಾಡಿದ್ದ ಬೆಕ್ಹ್ಯಾಂರ ವರ್ಣರಂಜಿತ ವೃತ್ತಿಜೀವನ ದಾರುಣವಾಗಿ ಕೊನೆಗೊಂಡಿತು.&lt;br /&gt;ಕೋಚ್ರ ಬಲವಂತ ವಿದಾಯವನ್ನು ಬೆಕ್ಹ್ಯಾಂ ಒಪ್ಪಿಕೊಂಡಿಲ್ಲ. ಇಂಗ್ಲೆಂಡ್ ಪರ ಕೊಟ್ಟಕೊನೆಯ ಬಾರಿ ವಿದಾಯ ಪಂದ್ಯ ಆಡುವ ಕೋಚ್ರ ಆಹ್ವಾನವನ್ನೂ ಅವರು ತಿರಸ್ಕರಿಸಿದ್ದಾರೆ. ರಾಷ್ಟ್ರದ ಪರ ಆಡುವುದು ತಮಗೆ ಯಾವತ್ತಿಗೂ ಹೆಮ್ಮೆಯ ಸಂಗತಿ. ಅದರಿಂದ ನಿವೃತ್ತಿ ತೆಗೆದುಕೊಳ್ಳುವ ಮಾತೇ ಇಲ್ಲ. ಕೋಚ್ಗೆ ನಾನು ಬೇಡದಿರಬಹುದು. ಆದರೆ, ನನ್ನ ಸೇವೆ ಸದಾ ಲಭ್ಯ ಎಂದು ಅವರು ಹೇಳಿದ್ದಾರೆ.&lt;br /&gt;ಬೆಕ್ಹ್ಯಾಂಗೆ ವಯಸ್ಸಾಗಿದೆ ಎಂದೇನೋ ಕ್ಯಾಪೆಲೋ ತೀರ್ಪು ಕೊಟ್ಟರು. ಬೆಕ್ಹ್ಯಾಂಗೀಗ  35 ವರ್ಷ. ಇದು ನಿವೃತ್ತಿಯ ವಯಸ್ಸೇ? ಹೌದು ಅಲ್ಲ ಎರಡೂ ಇದಕ್ಕೆ ಉತ್ತರ. ಮುತ್ತಯ್ಯ ಮುರಳೀಧರನ್ ನಿವೃತ್ತರಾದಾಗ ಅವರಿಗೆ 38 ವರ್ಷ. ಸಚಿನ್ ತೆಂಡುಲ್ಕರ್ 38ರ ಹತ್ತಿರದಲ್ಲಿದ್ದಾರೆ. ಶೇನ್ ವಾರ್ನ್ ನಿವೃತ್ತಿಯಾಗಿದ್ದೂ 38ನೇ ವಯಸ್ಸಿನಲ್ಲಿ. ಫುಟ್ಬಾಲ್ ವಿಷಯಕ್ಕೇ ಬಂದರೆ, 37, 38ರ ಹರೆಯದಲ್ಲೂ ಆಡುತ್ತಿರುವ ಕೆಲವು ಆಟಗಾರರಿದ್ದಾರೆ.&lt;br /&gt;ಅಷ್ಟಕ್ಕೂ ಕ್ರಿಕೆಟ್, ಫುಟ್ಬಾಲ್ನಂಥ ದೈಹಿಕ ಪರಿಶ್ರಮದ ಕ್ರೀಡೆಯಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ಆಡುವ ಶಕ್ತಿ ಮುಖ್ಯವಾಗುತ್ತದೆ. ಕೆಲವು ಆಟಗಾರರು 30 ವರ್ಷಕ್ಕೇ ಸುಸ್ತಾಗುತ್ತಾರೆ. ಕೆಲವರು 40 ಸಮೀಪಿಸಿದರೂ ಉತ್ಸಾಹದಿಂದ ಪುಟಿಯುತ್ತಿರುತ್ತಾರೆ. ಆಡುವ ಉತ್ಸಾಹ, ಸಾಧನೆಯ ಹಸಿವು, ದೇಹದಲ್ಲಿ ಶಕ್ತಿ, ಫಾರ್ಮ್ ಇವೆಲ್ಲಾ ಜೊತೆಯಲ್ಲಿರುವವರೆಗೂ ಯಾವುದೇ ಆಟಗಾರ ವಯಸ್ಸಿನ ಬಗ್ಗೆ ಚಿಂತಿಸಬೇಕಿಲ್ಲ. ಆದರೆ, ಕೆಲವೊಮ್ಮೆ ಕೋಚ್ಗಳು ಚಿಂತಿಸುತ್ತಾರೆ.&lt;br /&gt;ನಿಜ. ಕ್ರೀಡೆಗಿಂತ ಕ್ರೀಡಾಪಟು ದೊಡ್ಡವನಲ್ಲ. ಎಂಥಾ ಮಹತ್ಸಾಧಕನೇ ಆಗದ್ದರೂ, ಒಂದು ಕ್ರೀಡೆಗೆ ಅಥವಾ ತಂಡಕ್ಕೆ ಆತ ಅನಿವಾರ್ಯನಲ್ಲ. ಬ್ರಾಡ್ಮನ್, ಪೀಲೆ, ಮರಡೋನಾರಿಂದ ಬ್ರಿಯಾನ್ ಲಾರಾವರೆಗೆ ಪ್ರತಿಯೊಬ್ಬರೂ ತಮ್ಮ ಸಮಯ ಬಂದಾಗ ವಿದಾಯದ ಬಾಗಿಲು ದಾಟಿದವರೇ. ಆದರೂ, ದಶಕಗಳ ಕಾಲ ಕ್ರೀಡೆಗಾಗಿ, ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ಮುಡಿಪಾಗಿಟ್ಟ, ಕ್ರೀಡೆಯನ್ನೇ  ಉಸಿರಾಡಿ ದಿಗ್ಗಜರ ಪಟ್ಟಕ್ಕೇರಿದ ಆಟಗಾರರಿಗೆ ಗೌರವಯುತವಾಗಿ ನಿವೃತ್ತಿ ಪಡೆಯುವ ಅವಕಾಶ ಮಾಡಿಕೊಡಬೇಕೆನ್ನುವುದು ಸಮಾಜದ ಅಭಿಪ್ರಾಯ. ಆದರೆ, ಬಹುತೇಕ ಕ್ರೀಡಾಪಟುಗಳಿಗೆ ಅಂಥ ಅದೃಷ್ಟ ಇರುವುದಿಲ್ಲ. ತಮ್ಮ ಉತ್ತುಂಗದ ದಿನಗಳಲ್ಲಿ ಜಗತ್ತಿನ ಸರ್ವಶ್ರೇಷ್ಠ ಆಟಗಾರರಾಗಿ ಮೆರೆದ ಬ್ರೆಜಿಲ್ನ ರೊನಾಲ್ಡೊ, ಇಟಲಿಯ ರಾಬರ್ಟೊ ಬ್ಯಾಜಿಯೊ, ಅರ್ಜೆಂಟೀನಾದ ಗೇಬ್ರಿಯಾಲ ಬ್ಯಾಟಿಸ್ಟುಟ, ಪೋರ್ಚುಗಲ್ನ ಲೂಯಿಸ್ ಫಿಗೊ, ಸ್ಪೇನ್ನ ರಾಲ್, ಹಾಲೆಂಡ್ನ ರುಡ್ ವಾನ್ ನಿಸ್ಟೆಲ್ರೂಯ್ ಇವರೆಲ್ಲರಿಗೂ ತಮ್ಮಿಚ್ಚೆಯಂತೆ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿರ್ಗಮಿಸುವ ಅವಕಾಶ ದೊರೆಯಲೇ ಇಲ್ಲ. ಅಭಿಮಾನಿಗಳ ಪಾಲಿಗೆ ತಾವೆಷ್ಟೇ ದೊಡ್ಡವರಾದರೂ, ಕೋಚ್ಗಳು ಬೇಡವೆಂದು ಕೈಬಿಟ್ಟಾಗ ತಮ್ಮ ಪಾಲಿನ ಪ್ರಾಪ್ತಿ ಇಷ್ಟೇ ಎಂದುಕೊಂಡು ಸಂತೃಪ್ತರಾಗಬೇಕಾಯಿತು. ಈಗ ಡೇವಿಡ್ ಬೆಕ್ಹ್ಯಾಂ ಹಣೆಬರಹವೂ ಇಷ್ಟೇ ಆಗಿದೆ.&lt;br /&gt;ಭಾರತದ ಹಾಕಿ ದಿಗ್ಗಜ ಧನರಾಜ್ ಪಿಳ್ಳೆ ಸಹ ಇಂಥ ನೋವು  ಅನುಭವಿಸಿದವರೇ. 15 ವರ್ಷ ಕಾಲ ಭಾರತವನ್ನು ಪ್ರತಿಧಿಸಿ, 4 ಒಲಿಂಪಿಕ್ಸ್, 4 ಚಾಂಪಿಯನ್ಸ್ ಟ್ರೋಫಿ ಹಾಗೂ 4 ಏಷ್ಯಾಡ್ಗಳಲ್ಲಿ  ಆಡಿದ ಏಕೈಕ ಭಾರತೀಯರೆನಿಸಿಕೊಂಡವರು ಧನರಾಜ್. ಅವರ ನಾಯಕತ್ವದಲ್ಲಿ ಭಾರತ ತಂಡ 1998ರ ಏಷ್ಯಾಡ್ ಹಾಗೂ 2003 ಏಷ್ಯಾ ಕಪ್ ಚಿನ್ನ ಗೆದ್ದಿದೆ.&lt;br /&gt;36ರ ಹರೆಯದಲ್ಲೂ ತಮ್ಮ ಅರ್ಧ ವಯಸ್ಸಿನ ಆಟಗಾರರಿಗಿಂತಲೂ ಹೆಚ್ಚಿನ ಹುರುಪಿನಿಂದ, ಚುರುಕಿನಿಂದ ಆಡುತ್ತಿದ್ದರು. ಆದರೆ, ಭಾರತೀಯ ಹಾಕಿ ಒಕ್ಕೂಟದ ಪೂರ್ವಾಗ್ರಹ ಪೀಡಿತ ಧೋರಣೆಯಿಂದಾಗಿ  ಅವರಿಗೆ ಗೌರವಯುತವಾಗಿ ನಿವೃತ್ತರಾಗುವ ಅವಕಾಶ ದೊರೆಯಲೇ ಇಲ್ಲ. ಜಗಮೋಹನ್ ದಾಲ್ಮಿಯಾ ವಿರುದ್ಧ ಬಂಡೇಳದೇ ಇದ್ದರೆ ಬಹುಶಃ ಕ್ರಿಕೆಟಿಗ ಸೌರವ್ ಗಂಗೂಲಿಗೂ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ನಿವೃತ್ತಿ ಘೋಷಿಸುವ ಅವಕಾಶ ಪ್ರಾಪ್ತವಾಗುತ್ತಿರಲಿಲ್ಲ.&lt;br /&gt;ಕ್ರೀಡಾಪಟುಗಳ ಜೀವನದಲ್ಲಿ ಪದಾರ್ಪಣೆ ಹಾಗೂ ನಿವೃತ್ತಿಯ ದಿನಾಂಕ ಒಂದು ಅಂಕಿ-ಅಂಶ ಅಷ್ಟೇ. ಏಕೆಂದರೆ, ಆ ನಡುವಿನ ಅವಧಿಯಲ್ಲಿ  ದಾಖಲಾದ ಸಾಧನೆಗಳನ್ನು ಕ್ರೀಡೆಯ ಅಪ್ಪಟ ಅಭಿಮಾನಿಗಳು ಶಾಶ್ವತವಾಗಿ ನೆನಪಿಡುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಾರೆ ಎನಿಸಿದ್ದ ಡೇವಿಡ್ ಬೆಕ್ಹ್ಯಾಂ ಸಹ ಅವರ ಸೆಲೆಬ್ರಿಟಿ ವರ್ಚಸ್ಸು, ಮೈಮೇಲಿನ ಹಚ್ಚೆಗಳಷ್ಟೇ, ಅವರ ಗೋಲುಗಳಿಂದಲೂ ನೆನಪಾಗುತ್ತಾರೆ. 2004ರ ಯುರೋ ಕಪ್ನ ಪೆನಾಲ್ಟಿ ಶೂಟೌಟ್ನಲ್ಲಿ ವಿಫಲರಾಗಿದ್ದು ಸಹ ಬೆಕ್ಹ್ಯಾಂ ಎಂದಾಗಲೆಲ್ಲಾ ನೆನಪಾಗುತ್ತಿರುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-6092728934213647533?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/6092728934213647533/comments/default' title='Post Comments'/><link rel='replies' type='text/html' href='http://ragaakshara.blogspot.com/2010/08/blog-post_16.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/6092728934213647533'/><link rel='self' type='application/atom+xml' href='http://www.blogger.com/feeds/2998842447029730227/posts/default/6092728934213647533'/><link rel='alternate' type='text/html' href='http://ragaakshara.blogspot.com/2010/08/blog-post_16.html' title='ವಿ ದಾ ಯ ದ ಬಾಗಿಲು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-1082532547423069417</id><published>2010-08-12T18:43:00.000+05:30</published><updated>2010-08-12T18:44:48.485+05:30</updated><title type='text'>ಮಾತಿನ ಮಂಟಪ</title><content type='html'>ನಾನು ಯಾವಾಗಲೂ ದಿನಪತ್ರಿಕೆಗಳಲ್ಲಿ ಕ್ರೀಡಾ ಸುದ್ದಿಗಳನ್ನು ಮೊದಲು ಓದುತ್ತೇನೆ. ಕ್ರೀಡಾಪುಟದಲ್ಲಿ ಜನರ ಸಾಧನೆಗಳಿರುತ್ತವೆ. ಮುಖಪುಟದಲ್ಲಿರುವುದು ವೈಫಲ್ಯಗಳ ವೈಭವೀಕರಣ ಮಾತ್ರ....&lt;br /&gt;-ಅರ್ಲ್ ವಾರೆನ್&lt;br /&gt;&lt;br /&gt;*****&lt;br /&gt;ಕ್ರೀಡಾ ಪಟುಗಳೆಂದರೆ ಯಾವ ತತ್ವಜ್ಞಾನಿಗಳಿಗೂ ಕಡಿಮೆ ಇಲ್ಲ. ಏಕೆಂದರೆ, ಸೋಲು-ಗೆಲುವುಗಳನ್ನು ಸ್ವತಃ ಕ್ರೀಡಾಪಟುಗಳಿಗಿಂತ ಉತ್ತಮವಾಗಿ ಬೇರೆ ಯಾರಿಂದಲೂ ವಿಶ್ಲೇಷಿಸಲು ಸಾಧ್ಯವಿಲ್ಲ.&lt;br /&gt;&lt;br /&gt; ಯಾವುದೇ ಕ್ರೀಡೆಯ ಫಲಿತಾಂಶ, ಸಾಧನೆ, ವೈಫಲ್ಯಗಳ ಬಗ್ಗೆ ಮಾಧ್ಯಮಗಳು, ಜನರ ಅಭಿಪ್ರಾಯ ಒಂದು ರೀತಿಯಾಗಿದ್ದರೆ, ಆಯಾ ಕ್ರೀಡೆ, ಫಲಿತಾಂಶದಲ್ಲಿ ಪಾತ್ರ ವಹಿಸಿರುವ ಕ್ರೀಡಾಪಟುಗಳು ಅದನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಕ್ರೀಡಾ ಪಟುಗಳು ತಾವು ಕಳಪೆಯಾಗಿ ಆಡಿದ್ದನ್ನು ಒಪ್ಪಿಕೊಳ್ಳುವುದು ಬಹಳ ಕಡಿಮೆ. ಎದುರಾಳಿಗಳ ಉತ್ತಮ ಆಟವನ್ನು ಹೊಗಳುವುದೂ ವಿರಳ. ಮಾತ್ರವಲ್ಲ. ಗೆದ್ದಾಗ ಹಾಗೂ ಸೋತಾಗ ಅವರ ಚಿಂತನೆಯ ರೀತಿ ತದ್ವಿರುದ್ಧವಾಗಿರುತ್ತದೆ.ಾವು ಪಂದ್ಯ ಸೋಲಲಿಲ್ಲ. ನಮಗೆ ಸಮಯ ಸಾಕಾಗಲಿಲ್ಲ...’ ಇದು ಅಮೆರಿಕನ್ ಫುಟ್ಬಾಲ್ನ ಖ್ಯಾತ ಕೋಚ್ ವಿನ್ಸಿ ಲೊಂಬಾರ್ಡಿ ಹೇಳಿಕೆ. ಇಂಥ ಹೇಳಿಕೆ ನೀಡುವುದು ಇವರು ಮಾತ್ರವಲ್ಲ. ಮೊಹಮ್ಮದ್ ಅಜರುದ್ದೀನ್ರಿಂದ, ಸಾನಿಯಾ ಮಿರ್ಜಾವರೆಗೆ, ಟೈಗರ್ ವುಡ್ಸ್ರಿಂದ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ವರೆಗೆ ಎಲ್ಲರೂ ಸೋಲಿನ ಸಂದರ್ಭದಲ್ಲಿ ಏನಾದರೊಂದು ಸಬೂಬಿಗೆ ಅಂಟಿಕೊಂಡವರ್ರೇೀಡಾಪಟುಗಳ ಇಂಥ ಉಕ್ತಿಗಳು ಕೇಳಲು ಮಜವಾಗಿರುತ್ತದೆ. ಎಷ್ಟೋ ಬಾರಿ ಅವುಗಳಲ್ಲಿ ಜೀವನದರ್ಶನವಿರುತ್ತದೆ. ಕ್ರೀಡಾಪಟುಗಳ ಹೇಳಿಕೆಗಳು ಅವರ ಚಿಂತನೆ, ಗ್ರಹಿಕೆ, ಓದು, ವಿಚಾರಶೀಲತೆಯನ್ನು ಪ್ರತಿಫಲಿಸುತ್ತವೆ.ಾಂಪಿಯನ್ನರಿಗೆ ಬೆಳಗಿನ ಉಪಾಹಾರವೆಂದರೆ ಲಘು ತಿಂಡಿಯಲ್ಲ... ಎದುರಾಳಿಗಳು ಎಂಬ ಗಾಲ್ಫ್ಆಟಗಾರ ನಿಕ್ ಸೀಜ್ ಮಾತು ಅನ್ವರ್ಥ.&lt;br /&gt;ಯಾವುದೇ ಕ್ರೀಡೆಯೆಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ, ‘ಬಹುತೇಕ ಪಂದ್ಯಗಳನ್ನು ಗೆಲ್ಲುವದಕ್ಕಿಂತ ಹೆಚ್ಚಾಗಿ ಸೋಲಲಾಗುತ್ತದೆ’ ಎಂಬ ಅಮೆರಿಕದ ಬೇಸ್ಬಾಲ್ ಆಟಗಾರ ಮತ್ತು ಕೋಚ್ ಮಾತು ಅಕ್ಷರಶಃ ನಿಜ.&lt;br /&gt;  &lt;br /&gt;"  ಪಂದ್ಯ ಟೈ ಆಗುವುದೆಂದರೆ ಸೋದರಿಯನ್ನು ಚುಂಬಿಸುವಂತೆ. ಸೋಲುವುದೆಂದರೆ ಹಲ್ಲು ಬಿದ್ದುಹೋಗಿರುವ ಅಜ್ಜಿಗೆ ಮುತ್ತು ಕೊಟ್ಟಂತೆ ಎಂದು ಅಮೆರಿಕದ ಮತ್ತೊಬ್ಬ ಬ್ಯಾಸ್ಕೆಟ್ಬಾಲ್ ಆಟಗಾರ ಜಾರ್ಜ್ ಬ್ರೆಟ್ ಹೇಳಿಕೆಯಲ್ಲಿ ಹತಾಶೆ ಇದೆಯೇ, ವಿನೋದ ಇದೆಯೇ ಎನ್ನುವುದನ್ನು ಹುಡುಕಬೇಕು.ರಿದರಲಿ ಪಿರಿದರ್ಥವಂ.... ಎಂಬ ಉಕ್ತಿಗೆ ಸೌರವ್ ಗಂಗೂಲಿ ಸ್ವಲ್ಪ ಮಟ್ಟಿಗೆ ಅನ್ವರ್ಥ. ಅವರು ಏನನ್ನಾದರೂ ಹೇಳುವಾಗ ಸುಮ್ಮನೆ ಮಾತು ಎಳೆಯುವುದಿಲ್ಲ. ಎರಡೇ ಮಾತಿನಲ್ಲಿ ಛಾಟಿ ಏಟು ಬೀಸಿರುತ್ತಾರೆ. ಅವರೊಮ್ಮೆ ಭಾರತದ ಗೆಲುವಿನ ಬಳಿಕ ಹೇಳಿದ್ದು ಹೀಗೆ... ‘ಅವರನ್ನು ನಾವು ಸೋಲಿಸಬಲ್ಲೆವು ಎಂದು ನಮಗೆ ಗೊತ್ತಿತ್ತು... ಅವರಿಗೂ ಗೊತ್ತಿತ್ತು...್ರೀಡಾಪಟುಗಳಿಗೆ ಹಾಸ್ಯಪ್ರಜ್ಞೆ ಬಹಳ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ, ಕೆಲವೊಮ್ಮೆ ಆಕಸ್ಮಿಕವಾಗಿ ಅವರ ಮಾತುಗಳಲ್ಲಿ ಹಾಸ್ಯ ಇಣುಕುತ್ತಿರುತ್ತದೆ. ತೆಂಡುಲ್ಕರ್ ಹರಟೆ ಕೊಚ್ಚುವುದು ಕಡಿಮೆ. ಆದರೆ, ಮಾತನಾಡಿದಾಗ ಅರ್ಥಗರ್ಭಿತವಾಗಿರುತ್ತದೆ. ಕೆಲವೊಮ್ಮೆ ಹಾಸ್ಯದ ಲೇಪವೂ ಇರುತ್ತದೆ. ಅಂಥ ಒಂದು ಹೇಳಿಕೆ ಇಲ್ಲಿದೆ... ‘ನಾನು ಇಲ್ಲಿಗೆ ಬರುವ ಮುನ್ನ ನನಗೆ ಸ್ವಲ್ಪ ಬೆನ್ನು ನೋವಿತ್ತು. ಪಾಕ್ ವಿರುದ್ಧ ಆಡುವಾಗಲೆಲ್ಲಾ ನನಗೆ ಬೆನ್ನು ನೋವು ಬರುತ್ತದೆ ಎನ್ನುವುದು ನನ್ನ ಭಾವನೆ’...ಥ್ಲೀಟ್ ಆದವನು ಜೇಬಿನಲ್ಲಿ ಹಣ ಇಟ್ಟುಕೊಂಡು ಓಡುವುದು ಅಸಾಧ್ಯ. ಅವನು ಹೃದಯದಲ್ಲಿ ಭರವಸೆ ಮತ್ತು ತಲೆಯಲ್ಲಿ ಕನಸು ತುಂಬಿಕೊಂಡು ಓಡಬೇಕು ಎನ್ನುವುದು ಜೆಕ್ ಗಣರಾಜ್ಯದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಎಮಿಲ್ ಝಾಟೊಪೆಕ್ರ ಜಗತ್ಪ್ರಸಿದ್ಧ ಹೇಳಿಕೆ.ಸೋಲುಗಳು ಬಹಳ ವಿಚಿತ್ರ. ಆರಂಭದಲ್ಲಿ ಸೋತರೆ ಕಳಪೆ ಆರಂಭವೆನ್ನಲಾಗುತ್ತದೆ. ಋತುವಿನ ಮಧ್ಯದಲ್ಲಿ ಸೋತರೆ ಕಳಪೆ ಫಾರ್ಮ್ ಎನ್ನಲಾಗುತ್ತದೆ. ಕೊನೆಯಲ್ಲಿ ಸೋತರೆ ಬೇಕೆಂದೇ ಸೋತಿರೆಂದು ಜರಿಯಲಾಗುತ್ತದೆ ಎಂದು ಅಮೆರಿಕದ ಬೇಸ್ಬಾಲ್ ಆಟಗಾರ ಜೇನ್ ವೌಚ್ ಹೇಳಿದ್ದರು.ದೇವರೇ, ಸ್ವರ್ಗದಲ್ಲಿ ಕ್ರಿಕೆಟ್ ಎನ್ನುವುದೇನಾದರೂ ಇದ್ದರೆ, ಅಲ್ಲಿಯೂ ಮಳೆ ಬರಲಿ...’ ಎನ್ನುವುದು ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಇಂಗ್ಲೆಂಡ್ನ ಏಕೈಕ ಪ್ರಧಾನಿ ಅಲೆಕ್ ಡಗ್ಲಾಸ್ ಹೋಮ್ ಹೇಳಿಕೆ.ಂಪೈರ್ಗಳೆಂದರೆ ಬಚ್ಚಲುಮನೆಯ ಗೀಸರ್ನಂತೆ. ಅದು ನಮಗೆ ಬೇಕೇ ಬೇಕು. ಆದರೆ, ಅದರ ಅಸ್ತಿತ್ವ ನಮಗೆ ನೆನಪಾಗುವುದು ಕೆಟ್ಟುಹೋದಾಗ ಮಾತ್ರ... ಎನ್ನುವುದು ಇಂಗ್ಲೆಂಡ್ನ ಪ್ರಖ್ಯಾತ ಕ್ರಿಕೆಟ್ ವಿಮರ್ಶಕ ನೆವಿಲ್ ಕಾರ್ಡಸ್ ಅಭಿಪ್ರಾಯ.&lt;br /&gt;&lt;br /&gt;&lt;br /&gt;  ಪೋಲೋ ಆಡುವುದೆಂದರೆ, ಭೂಕಂಪದ ಸಂದರ್ಭದಲ್ಲಿ ಗಾಲ್ಫ್ಕಲಿಯಲು ಯತ್ನಿಸಿದಂತೆ ಎಂದು ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ಹೇಳಿದ್ದರು. ವಿವಾದಗಳಲ್ಲಿ ಸಿಲುಕಿದಾಗ ಕ್ರೀಡಾಪಟುಗಳು ತಮ್ಮನ್ನು ಸಮರ್ಥಿಸಿಕೊಳ್ಳುವ ರೀತಿ ಭಿನ್ನವಾಗಿರುತ್ತದೆ. ‘ನಾನು ಕೆಲವರೊಂದಿಗೆ ಮಲಗಿದ್ದೇನೆ. ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನನಗೆ ಸಂತೋಷವೇನೆಂದರೆ, ಅವೆಲ್ಲವೂ ನನ್ನದೇ ತಪ್ಪುಗಳು. ಬೇರೆ ಯಾರೂ ಕಾರಣರಲ್ಲ ಎನ್ನುವುದಾಗಿದೆ’ ಎನ್ನುವುದು ಅನೇಕ ಲೈಂಗಿಕ ಹಗರಣಗಳಲ್ಲಿ ಸಿಲುಕಿರುವ ಶೇನ್ ವಾರ್ನ್ರ ಮಾತು.ಮಹಿಳೆಯರ ಜೊತೆ ವಿವಾಹಬಾಹಿರ ಸಂಬಂಧ ಬೆಳೆಸಿ ಸಿಕ್ಕಿಬಿದ್ದು, ಧರ್ಮಪತ್ನಿಯಿಂದ ವಿಚ್ಛೇದನ ಪಡೆದಿರುವ ಗಾಲ್ಫ್ತಾರೆ ಟೈಗರ್ ವುಡ್ಸ್ ಹೇಳುವುದು ಹೀಗೆ.... ‘ಗಾಲ್ಫ್ಅಂಕಣದ ಸಾಧನೆಗಳಿಗೆ ಅಷ್ಟೇನೂ ಬೆಲೆಯಿಲ್ಲ. ಸಭ್ಯತೆ ಮತ್ತು ಪ್ರಾಮಾಣಿಕತೆಗೆ ಮಾತ್ರ ಮಹತ್ವ...’&lt;br /&gt;ಪತ್ನಿ ಬಿಟ್ಟುಹೋದ ಮೇಲೆ ವುಡ್ಸ್ ಒಂಟಿಯಾಗಿ (?) ಬದುಕುತ್ತಿದ್ದಾರೆ. ಹಾಗಾದರೆ, ಅವರ ಊಟೋಪಚಾರದ ಗತಿ? ಅದಕ್ಕೆ ಅವರ ಉತ್ತರ ಹೀಗೆ... ‘ನನಗೆ ಅಡುಗೆ ಮಾಡಲು ಬರುವುದಿಲ್ಲ. ಆದರೆ, ಮನೆ ಬಾಗಿಲಿಗೆ ಪಿಝಾ ತಂದುಕೊಡುವವರು ಇರುವವರೆಗೂ ಅದೇನೂ ಸಮಸ್ಯೆಯಲ್ಲ...’&lt;br /&gt;ರೋಜರ್ ಫೆಡರರ್ ವಿಶ್ವದಾಖಲೆ ಸತತ 237 ವಾರ ಕಾಲ ವಿಶ್ವ ನಂ.1 ಆಟಗಾರರೆನಿಸಿದ್ದವರು. ಇತ್ತೀಚೆಗೆ ರಾಫೆಲ್ ನಡಾಲ್ಗೆ ಆ ಗೌರವ ಬಿಟ್ಟುಕೊಟ್ಟಿದ್ದಾರೆ. ಆದರೆ, ಆ ಬಗ್ಗೆ ಅವರೇನೂ ತಲೆಕೆಡಿಸಿಕೊಂಡಿಲ್ಲ. ‘ನಾನು ಐವತ್ತು ವರ್ಷ ಕಾಲ ನಂ.1 ಆಗಿರಲು ಸಾಧ್ಯವಿಲ್ಲ. ಮುಂದೇನಾಗುವುದೋ ನೋಡೋಣ...’ ಎನ್ನುವುದು ಇತ್ತೀಚಿನ ಅವರ ಹೇಳಿಕೆ.&lt;br /&gt;&lt;br /&gt;&lt;br /&gt;&lt;span style="color: rgb(51, 102, 102); font-weight: bold;"&gt;ಕೆಲವು ಪ್ರಸಿದ್ಧ ಉಕ್ತಿಗಳು&lt;/span&gt;&lt;br /&gt;&lt;br /&gt;ಚಾಂಪಿಯನ್ಗಳು ಜಿಮ್ನಲ್ಲಿ ತಯಾರಾಗುವುದಿಲ್ಲ. ಚಾಂಪಿಯನ್ನರು ತಮ್ಮಳಗೆ ಅಂತರ್ಗತವಾಗಿರುವ ಪ್ರಬಲವಾದ ಇಚ್ಛೆ, ಕನಸು ಮತ್ತು ದೂರದೃಷ್ಟಿಯಿಂದ ರೂಪುಗೊಂಡಿರುತ್ತಾರೆ.&lt;br /&gt;-ಮುಹಮ್ಮದ್ ಅಲಿ&lt;br /&gt;ದೇವರು ನಾನು ಚೆನ್ನಾಗಿ ಆಡುವಂತೆ ಮಾಡುತ್ತಾನೆ. ಅದೇ ಕಾರಣಕ್ಕೆ ನಾನು ಯಾವಾಗಲೂ ಮೈದಾನ ಪ್ರವೇಶಿಸುವ ಸಂದರ್ಭದಲ್ಲಿ ಶಿಲುಬೆಯ ಸಂಕೇತ ಪ್ರದರ್ಶಿಸುತ್ತೇನೆ. ಹಾಗೆ ಮಾಡದಿದ್ದರೆ, ದೇವರಿಗೆ ವಂಚನೆ ಮಾಡಿದ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ.&lt;br /&gt;-ಡೀಗೋ ಮರಡೋನಾ&lt;br /&gt;ನನ್ನನ್ನು ನಾನು ಮೈಕೆಲ್ ಫೆಲ್ಪ್ಸ್ಗೆ ಹೋಲಿಸಿಕೊಳ್ಳಲಾರೆ. ನಾನು ಟ್ರ್ಯಾಕ್ ಮೇಲೆ ಓಡುತ್ತೇನೆ. ಅವರು ನೀರಿನಲ್ಲಿ ಈಜುತ್ತಾರೆ. ಅವರ ಕ್ರೀಡೆಯಲ್ಲಿ ಅವರು ಶ್ರೇಷ್ಠರು.&lt;br /&gt;-ಉಸೇನ್ ಬೋಲ್ಟ್&lt;br /&gt;ನಿಮಗೆ ಬೈಕ್ನಿಂದ ಬೀಳುವ ಭಯವಿದ್ದರೆ, ಬೈಕ್ ಏರಲೇ ಬೇಡಿ&lt;br /&gt;-ಲ್ಯಾನ್ಸ್ ಆರ್ಮ್ಸ್ಟ್ರಾಂಗ್&lt;br /&gt;ಅಭ್ಯಾಸದಲ್ಲಿ ಹೆಚ್ಚು ಬೆವರು ಹರಿಸುವವನು, ಹೋರಾಟದಲ್ಲಿ ಕಡಿಮೆ ರಕ್ತ ಚೆಲ್ಲುತ್ತಾನೆ.&lt;br /&gt;-ಅನಾಮಿಕ&lt;br /&gt;ಪಿಚ್ ಬ್ಯಾಟಿಂಗ್ಗೆ ಸುಲಭವಾಗಿತ್ತು. ಆದರೂ, ಆಡುವುದು ಸುಲಭವಾಗಿರಲಿಲ್ಲ.&lt;br /&gt;-ಎಂಎಸ್ ಧೋನಿ&lt;br /&gt;ಒಂದೆರಡು ಬಾರಿಯಾದರೂ ಪಂಕ್ಚರ್ ಆಗದೆ ಯಶಸ್ಸಿನ ದಾರಿಯಲ್ಲಿ ಪ್ರಯಾಣ ಮಾಡಿದವರು ಯಾರೂ ಇಲ್ಲ.&lt;br /&gt;-ನವ್ಜೋತ್ ಸಿಧು&lt;br /&gt;ಮದುವೆಯಾದ ಬಳಿಕ ಬೇರೆಯವರ ಹೆಂಡತಿ ಸುಂದರವಾಗಿ ಕಾಣುತ್ತಾಳೆ.&lt;br /&gt;-ನವ್ಜೋತ್ ಸಿಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-1082532547423069417?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/1082532547423069417/comments/default' title='Post Comments'/><link rel='replies' type='text/html' href='http://ragaakshara.blogspot.com/2010/08/blog-post_12.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/1082532547423069417'/><link rel='self' type='application/atom+xml' href='http://www.blogger.com/feeds/2998842447029730227/posts/default/1082532547423069417'/><link rel='alternate' type='text/html' href='http://ragaakshara.blogspot.com/2010/08/blog-post_12.html' title='ಮಾತಿನ ಮಂಟಪ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-2016561566422594183</id><published>2010-08-03T16:00:00.002+05:30</published><updated>2010-08-03T16:02:19.455+05:30</updated><title type='text'>ಪ್ರಕ್ರಿಯೆ ಜಾರಿಯಲ್ಲಿದೆ</title><content type='html'>&lt;div&gt; ಯಶಸ್ಸು ಒಂದು ಪ್ರಕ್ರಿಯೆ. ವಯಸ್ಸು ಒಂದು ಸಂಖ್ಯೆ.&lt;/div&gt;&lt;div&gt;ಯಶಸ್ಸಿಗೂ ವಯಸ್ಸಿಗೂ ಸಂಬಂಧವಿಲ್ಲ.&lt;/div&gt;&lt;div&gt;ಮಾರ್ಟಿನಾ ನವ್ರಾಟಿಲೋವಾ ತಮ್ಮ ಸುದೀರ್ಘ ವೃತ್ತಿಜೀವನದ ಕೊನೆಯ ಹಾಗೂ 58ನೇ ಗ್ರಾಂಡ್ ಸ್ಲಾಂ (ಮಿಶ್ರ ಡಬಲ್ಸ್) ಗೆದ್ದಾಗ ಅವರಿಗೆ 46 ವರ್ಷ 8 ತಿಂಗಳು.&lt;/div&gt;&lt;div&gt;ಆಸ್ಟ್ರೇಲಿಯಾದ ನಾರ್ಮನ್ ಬ್ರೂಕ್ಸ್ 46 ವರ್ಷ 2 ತಿಂಗಳ ಹರೆಯದಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಗೆದ್ದಿದ್ದರು.&lt;/div&gt;&lt;div&gt;ಕೆನ್ ರೋಸ್ವಾಲ್ 1972ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಾಗ ಅವರಿಗೆ 38 ವರ್ಷ. ಲಿಯಾಂಡರ್ ಪೇಸ್ ತಮ್ಮ 37ನೇ ವಯಸ್ಸಿನಲ್ಲಿ ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.&lt;/div&gt;&lt;div&gt;ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಾಧನೆಯೆನ್ನುವುದು ಯಾವತ್ತಿನಿಂದಲೂ ಕ್ರಿಕೆಟಿಗರ ಪಾಲಿಗೆ ಗಗನಕುಸುಮವಾಗಿತ್ತು. ಆದರೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಮಾಂತ್ರಿಕ 200 ರನ್ ಗಡಿ ದಾಟಿದಾಗ ಅವರಿಗೆ 37 ವರ್ಷ.&lt;/div&gt;&lt;div&gt;ಮೊನ್ನೆ ಗುರುವಾರ ಶ್ರೀಲಂಕಾ ವಿರುದ್ಧ ಕೊಲಂಬೋ ಟೆಸ್ಟ್ ನಲ್ಲಿ  ಸಚಿನ್ ವೃತ್ತಿಜೀವನದಲ್ಲಿ 5ನೇ ಬಾರಿ ದ್ವಿಶತಕ ಬಾರಿಸಿದಾಗ ಅವರಿಗೆ 37 ವರ್ಷ 96 ದಿನ.&lt;/div&gt;&lt;div&gt;ನಿಜ, ಕ್ರೀಡೆಯಲ್ಲಿ ಫಿಟ್ನೆಸ್ಗೆ ಎಲ್ಲಿಲ್ಲದ ಮಹತ್ವ. ಆದರೆ, ನಿಜವಾದ ಸಾಧಕರಿಗೆ  ವಯಸ್ಸು ಯಾವತ್ತೂ ಒಂದು ಅಡೆತಡೆಯಾಗುವುದಿಲ್ಲ. ಹಾಗೆಂದೇ ಸಚಿನ್ ಮೊನ್ನೆ ಹೇಳಿದ್ದು. ಇನ್ನಾದರೂ, ನನ್ನ ವಯಸ್ಸಿನ ಬಗ್ಗೆ ಯಾರೂ ಪ್ರಶ್ನೆ ಮಾಡದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು.&lt;/div&gt;&lt;div&gt;ಕಳೆದ ಇಪ್ಪತ್ತೊಂದು ವರ್ಷಗಳಿಂದ ಅವರು ಕ್ರಿಕೆಟ್ ಮೈದಾನದಲ್ಲಿದ್ದರೂ, ಅವರಲ್ಲಿನ ತಾಜಾತನ ಮಾಯವಾಗಿಲ್ಲ. ರನ್ ಹಸಿವು ಇಂಗಿಲ್ಲ. ಹಾಗೆಂದು ಅವರನ್ನು ರನ್ ಮೆಷಿನ್ ಎನ್ನುವಂತಿಲ್ಲ. ಏಕೆಂದರೆ, ಅವರ ಆಟದಲ್ಲಿರುವುದು  ಯಾಂತ್ರಿಕತೆಯಲ್ಲ; ಕಲಾತ್ಮಕತೆ. ಸಚಿನ್ ಆಟದಲ್ಲಿ ಕೆಲವರಿಗೆ ಚಿತ್ರಕಾರ ಕಾಣುತ್ತಾನೆ. ಕೆಲವರಿಗೆ ಸಂಗೀತಗಾರ ನೆನಪಾಗುತ್ತಾನೆ. ಅವರ ತಾದಾತ್ಮ್ಯ, ಅವರ ವಿಧೇಯತೆ, ಸ್ಥಿತಪ್ರಜ್ಞತೆ.... ಸಾಧನೆಯಲ್ಲಿ ಎಷ್ಟೇ ಎತ್ತರಕ್ಕೇರಿದ್ದರೂ ಅವರು ಬಾಗುವುದನ್ನು ಮರೆತಿಲ್ಲ. ಮೈಮರೆತು ಬೀಗುವುದನ್ನು ಕಲಿತಿಲ್ಲ. ಯಶಸ್ಸಿನ ಪ್ರಕ್ರಿಯೆ ತನ್ನ ಪಾಲಿಗಿನ್ನೂ ಮುಗಿದಿಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ ತೃಪ್ತಿ ಅವರ ಹತ್ತಿರ ಸುಳಿಯುವುದಿಲ್ಲ. ಹಾಗೆಂದು ಅತೃಪ್ತಿಯಿಂದ ತೊಳಲುವವರೂ ಅವರಲ್ಲ.&lt;/div&gt;&lt;div&gt;ಕ್ರಿಕೆಟ್ನಲ್ಲಿ ಅವರಿಗೊಲಿಯದ  ಬ್ಯಾಟಿಂಗ್ ದಾಖಲೆಗಳು ಯಾವುದೂ ಬಹುಶಃ ಉಳಿದಿಲ್ಲ. ಈ ವರ್ಷದ 6 ಟೆಸ್ಟ್ಗಳಲ್ಲಿ 5 ಶತಕ ಬಾರಿಸಿರುವ ಸಚಿನ್ ಶತಕಗಳ ಶತಕದತ್ತ ಬಿರುಸಿನಿಂದಲೇ ಸಾಗುತ್ತಿದ್ದಾರೆ. ಭಾರತ ಈ ವರ್ಷ ಇನ್ನೂ 7 ಟೆಸ್ಟ್ ಆಡುವುದು ನಿಗದಿಯಾಗಿದ್ದು, 2010 ಕಳೆಯುವುದರೊಳಗೆ ಅವರು 50 ಟೆಸ್ಟ್ ಶತಕಗಳ ಗಡಿ ದಾಟುವುದರಲ್ಲಿ ಅನುಮಾನ ಉಳಿದಿಲ್ಲ.&lt;/div&gt;&lt;div&gt;ಸದ್ಯ ಸಚಿನ್ ಎದುರಿಗಿರುವ ಒಂದು ಸಂಭಾವ್ಯ ಸಾಧನೆಯೆಂದರೆ ಅದು  ಟೆಸ್ಟ್ನಲ್ಲಿ 300 ರನ್ ಗಡಿ ದಾಟುವುದು.  ಸೆಹ್ವಾಗ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಮೂರನೇ ಬಾರಿ ಹತ್ತಿರ ಬಂದಿದ್ದಾರೆ.  ಆದರೆ, ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 248 (ಅಜೇಯ) ರನ್ ಗಳಿಸಿರುವುದೇ ಗರಿಷ್ಠ.  ಸಂದರ್ಭ ಬಂದರೆ ಅವರು 300 ರನ್ ಗಳಿಸಿಯೇ ಬಿಡಬಹುದು. ಆದರೂ, ಆಧುನಿಕ ಯುಗದ &lt;/div&gt;&lt;div&gt;ಟೆಸ್ಟ್ಗಳಲ್ಲಿ ಸಚಿನ್ ಅಥವಾ ದ್ರಾವಿಡ್ 300 ರನ್ ಗಳಿಸುವಂಥ ವಾತಾವರಣ ನಿರ್ಮಾಣವಾಗುವುದೇ ಕಷ್ಟ. ಏಕೆಂದರೆ, ಈಗ ಡ್ರಾ ಉದ್ದೇಶದಿಂದ ಯಾರೂ ಟೆಸ್ಟ್ ಆಡುವುದಿಲ್ಲ. ಫಲಿತಾಂಶಕ್ಕಾಗಿಯೇ ಆಡಲಾಗುತ್ತದೆ.  ಫಲಿತಾಂಶಕ್ಕಾಗಿ ಆಡುವಾಗ ವೈಯಕ್ತಿಕ ಮೈಲುಗಲ್ಲುಗಳಿಗೆ ಯತ್ನಿಸಲು ಕಾಲಾವಕಾಶ ಇರುವುದಿಲ್ಲ.  ಕೊಲಂಬೋ ಟೆಸ್ಟ್ ಪಂದ್ಯವನ್ನೇ ಪರಿಗಣಿಸಿದರೆ ಸಚಿನ್ ತಮ್ಮ 203 ರನ್ಗಾಗಿ (347 ಎಸೆತ) 8 ಗಂಟೆಗೂ ಹೆಚ್ಚು ಕಾಲ ಕ್ರೀಸ್ನಲ್ಲಿದ್ದರು. ಅದರರ್ಥ ಅವರು 300 ರನ್ ಗಳಿಸಬೇಕಿದ್ದರೆ ಇನ್ನೂ ಕನಿಷ್ಠ 3 ರಿಂದ 4 ಗಂಟೆ ಕ್ರೀಸಿನಲ್ಲಿರಬೇಕಿತ್ತು.  ಯಶಸ್ಸಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದು ನಿಜವೇ ಆದರೂ, ಸಚಿನ್ 37ನೇ ವಯಸ್ಸಿನಲ್ಲಿ 12 ಗಂಟೆ ಕ್ರೀಸಿನಲ್ಲಿ ಕಳೆಯುವುದು ಕಷ್ಟವೇ. ಏಕೆಂದರೆ, ದೇಹದ ಸಹಿಸುವಿಕೆಗೂ ಒಂದು ಮಿತಿಯೆನ್ನುವುದಿರುತ್ತದೆ.  ಒಂದು ವೇಳೆ ಸಚಿನ್ 300 ರನ್ ಮಾಡಲೇ ಬೇಕೆಂದರೆ ಅವರು ಸೆಹ್ವಾಗ್ ಶೈಲಿಯಲ್ಲಿ ಆಡಬೇಕು. ಆಗ ಸಾಧ್ಯ. ಅದು ಅವರಿಂದ ಅಸಾಧ್ಯವೂ ಅಲ್ಲ. ಅದಕ್ಕೂ ಸಂದರ್ಭ ಬರಬೇಕು. ಅಂಥ ಸಂದರ್ಭ ಬಂದರೂ ಬರಬಹುದು.&lt;/div&gt;&lt;div&gt;ಸೆಹ್ವಾಗ್ ಕೊಲಂಬೋದಲ್ಲಿ 101 ಎಸೆತಗಳಲ್ಲಿ 99 ರನ್ ಗಳಿಸಿದ್ದರು. ಕಳೆದ ವರ್ಷ ಅವರು 293 ರನ್ ಗಳಿಸಿದ ಸಂದರ್ಭದಲ್ಲಿ  100ಕ್ಕೂ  ಹೆಚ್ಚಿನ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದರು.  ಬ್ರಾಡ್ಮನ್ 1930ರಲ್ಲಿ  ಒಂದೇ ದಿನದ ಆಟದಲ್ಲಿ 309 ರನ್ ಗಳಿಸಿ ಅಜೇಯರಾಗುಳಿದಿದ್ದರು. ಸೆಹ್ವಾಗ್ ಕಳೆದ ವರ್ಷ ಲಂಕಾ ವಿರುದ್ಧ ಒಂದೇ ದಿನ 284 ರನ್ ಚಚ್ಚಿದ್ದರು. ಇಂಗ್ಲೆಂಡ್ನ ವ್ಯಾಲಿ ಹ್ಯಾಮ್ಮಂಡ್ 1933ರಲ್ಲಿ ಒಂದೇ ದಿನ ನ್ಯೂಜಿಲೆಂಡ್ ವಿರುದ್ಧ 295 ರನ್ ಸಿಡಿಸಿದ್ದರು. ಈ ಯುಗದಲ್ಲಿ ತ್ರಿಶತಕ ಬಾರಿಸುವುದಕ್ಕೆ ಅಂಥ ವೇಗದ ಆಟವೇ ಅವಶ್ಯಕ. ಸೆಹ್ವಾಗ್ ಪಾಕ್ ವಿರುದ್ಧ ಮೊದಲ ಬಾರಿ ತ್ರಿಶತಕ ಬಾರಿಸಿದಾಗ 364 ಎಸೆತ ಮಾತ್ರ ಆಡಿದ್ದರು. ಚೆನ್ನೈನಲ್ಲಿ ದಕ್ಷಿಣ  ಆಫ್ರಿಕಾ ವಿರುದ್ಧ  ಕೇವಲ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು. ಇದು  ವೇಗದ ವಿಶ್ವದಾಖಲೆ. 300 ರನ್ ಬಾರಿಸಿದವರಾದ ಲಾರಾ, ಮ್ಯಾಥ್ಯೂ ಹೇಡನ್ ಮೊದಲಾದವರೂ ಸಿಡಿಲಿನ ವೇಗದಲ್ಲಿ  ಬ್ಯಾಟ್ ಬೀಸುವವರು.  ಆದರೆ, ಸಚಿನ್ ಆಡುವುದು ಲೆಕ್ಕಾಚಾರದ ಆಕ್ರಮಣವೇ ಹೊರತು ಸೆಹ್ವಾಗ್ರಂತೆ ಗೂಳಿ ಓಟವಲ್ಲ. ಹಾಗಾಗಿ ಸಚಿನ್ 300 ರನ್ ಗಡಿ ದಾಟಬೇಕಾದರೆ, ಭಾರತ  ಮೂರು ದಿನ ಬ್ಯಾಟಿಂಗ್ ಮಾಡಬೇಕು ಹಾಗೂ ಅವರ ದೇಹ ಅನುಮತಿ ಕೊಡಬೇಕು.&lt;/div&gt;&lt;div&gt;ಆದರೆ, ಕೊನೆಗೊಂದು ದಿನ ಈ ಎಲ್ಲಾ ಲೆಕ್ಕಾಚಾರಗಳು ಸುಳ್ಳಾಗಲೂಬಹುದು. ಏಕದಿನ ಕ್ರಿಕೆಟ್ನ ದ್ವಿಶತಕ ಸಾಧನೆಯಂತೆ ಸಚಿನ್ರ ಇಚ್ಛಾಶಕ್ತಿಯ ಎದುರು ಯಾವ ಲೆಕ್ಕಾಚಾರಗಳೂ ನಿಲ್ಲುವುದಿಲ್ಲ ಎನ್ನುವುದೂ ಸುಳ್ಳಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-2016561566422594183?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/2016561566422594183/comments/default' title='Post Comments'/><link rel='replies' type='text/html' href='http://ragaakshara.blogspot.com/2010/08/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/2016561566422594183'/><link rel='self' type='application/atom+xml' href='http://www.blogger.com/feeds/2998842447029730227/posts/default/2016561566422594183'/><link rel='alternate' type='text/html' href='http://ragaakshara.blogspot.com/2010/08/blog-post.html' title='ಪ್ರಕ್ರಿಯೆ ಜಾರಿಯಲ್ಲಿದೆ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-4177427984217778657</id><published>2010-07-26T16:42:00.000+05:30</published><updated>2010-07-26T16:43:34.235+05:30</updated><title type='text'>ಹೊಲ ಮೇಯುವ ಬೇಲಿ</title><content type='html'>&lt;div&gt; ಮಹಿಳಾ ಕ್ರೀಡೆಗಳಿಗೆ ಪುರುಷ ಕೋಚ್ಗಳೇ ಏಕೆ ಬೇಕು?&lt;/div&gt;&lt;div&gt;2007ರಲ್ಲಿ ನಡೆದ ಮಹಿಳೆಯರ ವಾಲಿಬಾಲ್ನ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಣದಲ್ಲಿದ್ದ 24 ತಂಡಗಳ ಪೈಕಿ 23 ತಂಡಗಳಿಗೆ ಪುರುಷರೇ ಕೋಚ್ ಆಗಿದ್ದರು.&lt;/div&gt;&lt;div&gt;ಮುಂದಿನ ವರ್ಷ ಜರ್ಮನಿಯಲ್ಲಿ ನಡೆಯುವ ಮಹಿಳೆಯರ ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಬಹುತೇಕ ತಂಡಗಳ ತರಬೇತುದಾರರು ಗಂಡಸರು. ಅಷ್ಟೇ ಏಕೆ, ಒಲಿಂಪಿಕ್ಸ್ನಲ್ಲಿ  ಭಾಗವಹಿಸುವ ಬಹುತೇಕ ರಾಷ್ಟ್ರಗಳ ಮಹಿಳಾ ತಂಡಗಳು ಪುರುಷ ಕೋಚ್ಗಳೊಂದಿಗೆ ಆಗಮಿಸಿರುತ್ತವೆ.&lt;/div&gt;&lt;div&gt;ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನೇ ಪರಿಗಣಿಸುವುದಾದರೂ, ಬಾಲಕಿಯರ ಹಾಕಿ, ಖೊಖೊ, ಹ್ಯಾಂಡ್ಬಾಲ್, ಥ್ರೋಬಾಲ್, ವಾಲಿಬಾಲ್, ಬ್ಯಾಸ್ಕೆಟ್ಬಾಲ್ ಇತ್ಯಾದಿ... ತಂಡಗಳೊಂದಿಗೆ ಪುರುಷ ಕೋಚ್ಗಳೇ ಪ್ರವಾಸ ಮಾಡುತ್ತಾರೆ. ಅಥ್ಲೀಟ್ಗಳ ಗಮನವೆಲ್ಲಾ ತಮ್ಮ ಸಾಧನೆ ಹಾಗೂ ಭವಿಷ್ಯದ ಕಡೆಗಿರುತ್ತದೆ. ಪೋಷಕರು ವ್ಯವಸ್ಥೆಯ ಮೇಲಿನ ವಿಶ್ವಾಸದಿಂದ ಮಕ್ಕಳನ್ನು ದೂರದೂರಿನ ಪ್ರವಾಸಗಳಿಗೆ ಕಳಿಸಿರುತ್ತಾರೆ. ಆದರೆ, ಕ್ರೀಡಾ ವಲಯದಲ್ಲಿ ನಡೆಯುತ್ತಿರುವುದಾದರೂ ಏನು?&lt;/div&gt;&lt;div&gt;ಕೌಶಿಕ್ ಹಾಗೂ ಟಿಎಸ್ ರಂಜಿತಾ ಪ್ರಕರಣ ಕ್ರೀಡೆಯಲ್ಲಿ  ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ಕಿರುಕುಳಕ್ಕೆ ಒಂದು ಹೊಸ ಸೇರ್ಪಡೆ ಅಷ್ಟೇ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ.  ಕ್ರೀಡೆ ಇರುವಲ್ಲೆಲ್ಲಾ ಇಂಥ ಪೀಡೆಯೂ ಇದ್ದೇ ಇದೆ.&lt;/div&gt;&lt;div&gt;‘ಕ್ರೀಡೆಯಲ್ಲಿ ಉದ್ದೀಪನ ವ್ಯಸನದ ಬಗ್ಗೆ ಎಲ್ಲಿಲ್ಲದ  ಕಟ್ಟೆಚ್ಚರವಿದೆ. ಫುಟ್ಬಾಲ್ನಲ್ಲಿ  100, ಈಜಿನಲ್ಲಿ  60 ಅಥವಾ ಟೆನಿಸ್ನಲ್ಲಿ 40 ಉದ್ದೀಪನ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದರೆ ಮಾಧ್ಯಮಗಳಲ್ಲಿ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ಕೋಲಾಹಲ ನಡೆಯುತ್ತದೆ. ಆದರೆ, ಮಹಿಳಾ ಕ್ರೀಡೆಗಳಲ್ಲಿ ಲೈಂಗಿಕ ಕಿರುಕುಳದ  ಪ್ರಮಾಣ ಇಷ್ಟೇ ಸಂಖ್ಯೆಯಲ್ಲಿದ್ದರೂ, ಯಾರೂ ಗಮನ  ಹರಿಸುತ್ತಿಲ್ಲ’ ಎಂದು ಇಂಗ್ಲೆಂಡ್ನ ಅಥ್ಲೀಟ್ ಸೆಲಿಯಾ ಬ್ರ್ಯಾಕೆನ್ರಿಡ್ಜ್ ಎಂಬಾಕೆ ಕೆಲವು ವರ್ಷಗಳ ಹಿಂದೆ ಹೇಳಿದ್ದರು.&lt;/div&gt;&lt;div&gt;‘ವೈಯಕ್ತಿಕ ಕ್ರೀಡೆಗಳಲ್ಲಿ ಅಥ್ಲೀಟ್ಗಳು ಹೆಚ್ಚು ಸುರಕ್ಷಿತ. ಆದರೆ, ತಂಡ ಕ್ರೀಡೆಗಳಲ್ಲಿ ಕೋಚ್ಗಳ ಕಾಮುಕ ಕಣ್ಣಿಗೆ ಯುವ ಕ್ರೀಡಾ ಪಟುಗಳು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುವುದು ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಅಶ್ವಿನಿ ನಾಚಪ್ಪ ಅಭಿಪ್ರಾಯ.&lt;/div&gt;&lt;div&gt;‘ಕ್ರೀಡೆಗೆ ಗ್ಲಾಮರ್ ಯಾವತ್ತಿಗೂ ಶಾಪವಲ್ಲ. ಅಥ್ಲೀಟ್ಗಳ ಸೌಂದರ್ಯ ಕೋಚ್ಗಳಿಗೆ ಕೆಟ್ಟ ಆಲೋಚನೆ ಮೂಡಿಸಬಹುದು. ಆದರೆ, ನಮ್ಮಲ್ಲಿ  ಸಂಯಮ ಇರಬೇಕು. ಮಾನಸಿಕವಾಗಿ ಗಟ್ಟಿತನ ಇರಬೇಕು. ನಮ್ಮಲ್ಲಿ ಅಂಥ ಗಡಸುತನವಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಾನೂ ದೀರ್ಘ ವೃತ್ತಿಜೀವನ ಕಳೆದಿದ್ದೇನೆ. ಆದರೆ, ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾರೊಬ್ಬರೂ ಬೆರಳು ಮಾಡುವುದಕ್ಕೆ ಅವಕಾಶ  ಕೊಟ್ಟಿಲ್ಲ’ ಎಂದು ಅಶ್ವಿನಿ ಹೇಳುತ್ತಾರೆ.&lt;/div&gt;&lt;div&gt;ಮಹಾರಾಜ ಕಿಶನ್ ಕೌಶಿಕ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ವಿಶ್ವಾಸಾರ್ಹವಾದವು ಎಂದು ಹಾಕಿ ಇಂಡಿಯಾ ಸ್ಪಷ್ಟ ಪಡಿಸಿದೆ. ಸತತ ಎರಡು ವರ್ಷಗಳಿಂದ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡಿದ್ದ ವೇಟ್ಲಿಫ್ಟಿಂಗ್ ಕೋಚ್ ಒಬ್ಬರು ದಶಕಗಳ ಕಾಲ ಕಿರಿಯ ಆಟಗಾರ್ತಿಯರಿಗೆ ಕಿರುಕುಳ  ಕೊಟ್ಟ  ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಒಟ್ಟಾರೆ ಕೌಶಿಕ್ ಪ್ರಕರಣ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದ್ದು, ಹೊಸ ಹೊಸ ಪ್ರಕರಣಗಳು ಒಂದರ ಬೆನ್ನಿಗೊಂದು ಬೆಳಕಿಗೆ ಬರುತ್ತಿವೆ.&lt;/div&gt;&lt;div&gt;ಮಹಿಳಾ ಕ್ರೀಡೆಗಳಲ್ಲಿ ಲೈಂಗಿಕ ಕಿರುಕುಳದ ವಿಷಯವಾಗಿ ಹಲವಾರು ಅಧ್ಯಯನಗಳೇ ನಡೆದಿವೆ. ಅದರ ಪ್ರಕಾರ ಮೂರು ಬಗೆಯ ಕೋಚ್ಗಳಿರುತ್ತಾರೆ. ಮೊದಲ ವರ್ಗದ ಕೋಚ್ಗಳು ಆಟಗಾರ್ತಿಯರನ್ನು ರೇಗಿಸುತ್ತ, ಫ್ಲರ್ಟ್ ಮಾಡುತ್ತ, ಅನವಶ್ಯಕವಾಗಿ ದೇಹ ಸ್ಪರ್ಶಿಸುತ್ತ ಸುಖ ಕಾಣುತ್ತಾರೆ. ಅಥ್ಲೀಟ್ಳ ತೂಕ ಎಷ್ಟು ಹೆಚ್ಚಿದೆ ಅಥವಾ ಇಳಿದೆ ಎಂದು ತಿಳಿದುಕೊಳ್ಳುವುದಕ್ಕೂ ಅವರು ಆಟಗಾರ್ತಿಯರನ್ನು ಚೂಟುತ್ತಾರೆ!  ಎರಡನೇ ವರ್ಗದ ಕೋಚ್ಗಳು ‘ಎಲ್ಲಾ ಹುಡುಗಿಯರನ್ನೂ  ಹಾಸಿಗೆಗೆ  ಎಳೆಯುವುದೇ ನನ್ನ ಗುರಿ’ ಎಂಬಂತೆ ವರ್ತಿಸುತ್ತಾರೆ. ಮೂರನೇ ವರ್ಗದ ಕೋಚ್ಗಳು ಮಹಿಳೆಯರ ಬಗ್ಗೆ ಸದಾ ನಕಾರಾತ್ಮಕವಾಗಿರುತ್ತಾರೆ. ಬೇಕೆಂದೇ ಅಸಡ್ಡೆ ಮಾಡುವುದು, ಎಲ್ಲರೆದುರು ನಿಂದಿಸುವುದು, ತಾನೇ ಶ್ರೇಷ್ಠ ಎಂದು ತೋರಿಸಿಕೊಳ್ಳುವುದು ಇತ್ಯಾದಿ ಮಾಡುತ್ತಾರೆ.&lt;/div&gt;&lt;div&gt;ಸಮಾಜದಲ್ಲಿ ಗುರುವಿಗೊಂದು ವಿಶಿಷ್ಠ ಸ್ಥಾನವಿದೆ. ನಮ್ಮ ಸನಾತನ ಪರಂಪರೆ ಗುರುವಿಗೆ ದೇವರ ಸ್ಥಾನ ಕಲ್ಪಿಸಿದೆ. ಆದರೆ, ಇದೇ ಸಮಾಜ ಗುರು-ಶಿಷ್ಯೆಯರ ವಿವಾಹ ಸಂಬಂದಕ್ಕೂ ಅವಕಾಶ ಕಲ್ಪಿಸಿದೆ. ಸಮಾಜದ ಚೌಕಟ್ಟಿನಲ್ಲಿ ನಡೆಯುವ ಯಾವ ಕೆಲಸವೂ ಕಾನೂನುಬಾಹಿರ  ಎನಿಸುವುದಿಲ್ಲ. ಆದರೆ, ಆಧುನಿಕ ಯುಗದ ಕೋಚ್ಗಳು ‘ಗುರುದಕ್ಷಿಣೆ ರೂಪದಲ್ಲಿ ಬೇರೇನನ್ನೋ ಬಯಸುತ್ತಿರುವುದು’ ಈ ಅವಾಂತರಗಳಿಗೆ ಕಾರಣವಾಗಿದೆ.&lt;/div&gt;&lt;div&gt;ಯುರೋಪಿನಲ್ಲಿ ನಡೆದ ಮತ್ತೊಂದು ಅಧ್ಯಯನದ ಪ್ರಕಾರ  ಪ್ರಪಂಚದ ಎಲ್ಲಾ ಕ್ರೀಡೆಗಳ ಉನ್ನತ ಅಥ್ಲೀಟ್ಗಳ ಪೈಕಿ  ಕನಿಷ್ಠ  29ಶೇ. ಮಂದಿ ಕೋಚ್ಗಳಿಂದ ಅಥವಾ ಯಾರಾದರೊಬ್ಬರಿಂದ ಲೈಂಗಿಕ ಕಿರುಕುಳ ಅನುಭವಿಸಿರುತ್ತಾರೆ. ಆದರೆ, ಇದರಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಎಷ್ಟು?&lt;/div&gt;&lt;div&gt;ಅಧ್ಯಯನಕಾರರ ಪ್ರಕಾರ ಶೇ. 38 ಮಂದಿ ತಂಡದಿಂದ ಸ್ಥಾನ ಕಳೆದುಕೊಳ್ಳಬಹುದು ಎಂಬ ಕಾರಣಕ್ಕೆ ಸಹಿಸಿಕೊಳ್ಳುತ್ತಾರೆ. ಶೇ 36 ಮಂದಿ ನಮ್ಮ ಮಾತನ್ನು ಯಾರೂ ನಂಬುವುದಿಲ್ಲ ಎಂಬ ಭಯದಿಂದ ಸುಮ್ಮನಿರುತ್ತಾರೆ. ಶೇ. 51 ಮಂದಿ ನಾಚಿಕೆ/ ಮುಜುಗರದಿಂದ ಯಾರಲ್ಲೂ ಹೇಳಿಕೊಳ್ಳುವುದೇ ಇಲ್ಲ. ಶೇ. 29 ಮಂದಿ ಕೋಚ್/ ತಂಡದ ಮೇಲಿನ ನಿಷ್ಠೆ-ಭಕ್ತಿಯಿಂದ ಸುಮ್ಮನುಳಿದರೆ, ಶೇ. 27 ಮಂದಿಗೆ ಇದನ್ನೆಲ್ಲಾ ಯಾರ ಬಳಿ ಹೇಳಿಕೊಳ್ಳಬೇಕೆನ್ನುವುದು ಗೊತ್ತಾಗುವುದಿಲ್ಲ.&lt;/div&gt;&lt;div&gt;ಕ್ರೀಡೆಯಲ್ಲಿರಬಹುದು, ಉದ್ಯೋಗಸ್ಥಳದಲ್ಲಿರಬಹುದು ಲೈಂಗಿಕ ಕಿರುಕುಳ ಶಿಕ್ಷಾರ್ಹ ಅಪರಾಧ. ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ನ್ಯೂಜಿಲೆಂಡ್, ಹಾಲೆಂಡ್ ಮೊದಲಾದ ದೇಶಗಳಲ್ಲಿ ಕ್ರೀಡಾಪಟುಗಳ ಮೇಲಿನ  ಲೈಂಗಿಕ ಕಿರುಕುಳ ತಡೆಗಟ್ಟಲು ಸರ್ಕಾರ, ಕಾನೂನಿನ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಭಾರತದಲ್ಲೂ ಅಂಥ ಕಾನೂನು ಗಟ್ಟಿಗೊಳ್ಳಬೇಕಿದೆ.&lt;/div&gt;&lt;div&gt;ಹಾಗಾದರೆ, ಮಹಿಳಾ ಕ್ರೀಡೆಗಳಿಗೆ ಮಹಿಳೆಯರೇ ಕೋಚ್ ಆಗುವುದು ಪರಿಹಾರವಾಗಬಹುದೇ? ಆಗಲಾರದು. ಆಗಲೂ ಕಿರುಕುಳ ಇರಬಹುದು. ಕೋಚ್ ಆದವರು ತಾನು ಅಥ್ಲೀಟ್ ಆಗಿದ್ದ ದಿನಗಳಲ್ಲಿ ಅನುಭವಿಸಿದ್ದ ಕಿರುಕುಳವನ್ನು ಈ ಹುಡುಗಿಯರೂ ಅನುಭವಿಸಲಿ ಎನ್ನಬಹುದು.  ಒಟ್ಟಿನಲ್ಲಿ ಕೋಚ್  ಪುರುಷನಾಗಿರಬೇಕೇ, ಮಹಿಳೆಯಾಗಿರಬೇಕೇ ಎನ್ನುವುದಕ್ಕಿಂತ ಅವರು ಸಭ್ಯರಾಗಿರಬೇಕು. ಒಬ್ಬ ಅಥ್ಲೀಟ್ ಯಶಸ್ವಿಯಾಗುವುದಕ್ಕೆ ಅಗತ್ಯವೆಂದು ಬೋಧಿಸುವ ಏಕಾಗ್ರತೆ, ಸಂಯಮ, ಗಟ್ಟಿ ಮನೋಬಲ ಕೋಚ್ಗೂ ಇರಬೇಕು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-4177427984217778657?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/4177427984217778657/comments/default' title='Post Comments'/><link rel='replies' type='text/html' href='http://ragaakshara.blogspot.com/2010/07/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/4177427984217778657'/><link rel='self' type='application/atom+xml' href='http://www.blogger.com/feeds/2998842447029730227/posts/default/4177427984217778657'/><link rel='alternate' type='text/html' href='http://ragaakshara.blogspot.com/2010/07/blog-post.html' title='ಹೊಲ ಮೇಯುವ ಬೇಲಿ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-3099317138797338006</id><published>2010-06-22T17:28:00.002+05:30</published><updated>2010-06-22T17:37:11.803+05:30</updated><title type='text'>ಪಾಪಪ್ರಜ್ಞೆಯ  ಗೋಲುಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_fosRdfQ3Hws/TCCm6cQhN-I/AAAAAAAAAM0/3GVJjUl9fAE/s1600/goal.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 335px;" src="http://1.bp.blogspot.com/_fosRdfQ3Hws/TCCm6cQhN-I/AAAAAAAAAM0/3GVJjUl9fAE/s400/goal.jpg" border="0" alt="" id="BLOGGER_PHOTO_ID_5485567869085366242" /&gt;&lt;/a&gt;&lt;br /&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಎಲ್ಲರೂ ತಪ್ಪು  ಮಾಡುತ್ತಾರೆ.&lt;/div&gt;&lt;div&gt;ಅಥವಾ ಎಲ್ಲರಿಂದಲೂ  ತಪ್ಪುಗಳು ಘಟಿಸುತ್ತವೆ.&lt;/div&gt;&lt;div&gt;ತಿದ್ದಿಕೊಳ್ಳುವವನು  ಮನುಜ ಎಂದು ಕವಿಗಳು ಹೇಳಿರಬಹುದು. ಆದರೆ, ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಲು ಕಾಲಾವಕಾಶವೇ ಇರುವುದಿಲ್ಲ. ಗಡಿಯಾರದ ಜೊತೆ ಸ್ಪರ್ಧೆ ನಡೆಸುವ ಫುಟ್ಬಾಲ್ ಆಟದಲ್ಲಂತೂ ತಪ್ಪು ಮಾಡಿದ ಮೇಲೆ ಅದನ್ನು ಸರಿಪಡಿಸುವ ಸಂಭಾವ್ಯತೆ ನೂರಕ್ಕೆ ತೊಂಭತ್ತೊಂಬತ್ತು ಬಾರಿ ಇರುವುದೇ ಇಲ್ಲ.&lt;/div&gt;&lt;div&gt;ಆಟದಲ್ಲಿ ಯಾವಾಗಲೂ  ಅಷ್ಟೇ. ತಪ್ಪುಗಳು ಫಲಿತಾಂಶದಲ್ಲಿ  ಪ್ರಮುಖ ಪಾತ್ರ ವಹಿಸಿರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಬಹುತೇಕ ಕ್ರೀಡೆಗಳಲ್ಲಿ ಸ್ವ-ಸಾಮರ್ಥ್ಯದಿಂದ ಗೆಲ್ಲುವುದಕ್ಕಿಂತ ಎದುರಾಳಿಗಳ ತಪ್ಪಿನ ಲಾಭ ಪಡೆದು ಗೆಲ್ಲುವುದೇ ಜಾಸ್ತಿಯಾಗುತ್ತಿದೆ. ಟೆನಿಸ್ನಲ್ಲಿ ಅದನ್ನು ಅನ್ಫೋರ್ಸ್ಡ್ ಎರರ್ಸ್ ಎಂದು ಗುರುತಿಸಲಾಗುತ್ತದೆ. ಆದರೆ, ಫುಟ್ಬಾಲ್, ಕ್ರಿಕೆಟ್ನಂಥ ಕ್ರೀಡೆಗಳಲ್ಲಿ ಅಂಥ ತಾಂತ್ರಿಕ ಶಬ್ದಗಳು  ಇಲ್ಲದೇ ಹೋದರೂ, ತಪ್ಪುಗಳಂತೂ ಇವೆ.&lt;/div&gt;&lt;div&gt;ಫುಟ್ಬಾಲ್ನಲ್ಲಿ  ಒಂದು ಮಹಾಪರಾಧವಿದೆ. ಇದರಿಂದ ಆಗಬಾರದ ಅನಾಹುತಗಳೆಲ್ಲಾ ಆಗಿಹೋಗಿವೆ. ಕೊಲೆಗಳಾಗಿವೆ, ಕೋಟಿಗಟ್ಟಲೆ ನಷ್ಟವಾಗಿದೆ, ವಿಶ್ವಕಪ್ನಂಥ  ಟೂರ್ನಿಗಳಿಂದ ನಿರ್ಗಮಿಸುವಂತಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಆಟಗಾರರು ಕೆಲವೊಮ್ಮೆ ಜೀವನಪರ್ಯಂತ ಪಾಪಪ್ರಜ್ಞೆಯಿಂದ ನರಳುತ್ತಾರೆ.&lt;/div&gt;&lt;div&gt;ಫುಟ್ಬಾಲ್ನಲ್ಲಿ  ಸ್ವ-ಗೋಲಿಗಿಂತ (ಆಟಗಾರ ತನ್ನದೇ ಆವರಣದಲ್ಲಿ ಗೋಲು ಹೊಡೆದು ಎದುರಾಳಿಗೆ ಲಾಭ ಮಾಡಿಕೊಡುವುದು) ದೊಡ್ಡ ಅಪರಾಧವಿಲ್ಲ.ಏಕೆಂದರೆ, ಸ್ವ-ಗೋಲು ಗಳಿಸುವ ತಂಡ ತನ್ನ ಸೋಲನ್ನು ತಾನೇ ಆಹ್ವಾನಿಸಿಕೊಳ್ಳುತ್ತದೆ. ಎದುರಾಳಿಗೆ ಗೆಲುವಿನ ಬಳುವಳಿ ನೀಡುತ್ತದೆ.&lt;/div&gt;&lt;div&gt;ದಕ್ಷಿಣ ಆಫ್ರಿಕಾದಲ್ಲಿ  ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲೂ  ಮೊದಲ ಏಳು ದಿನಗಳಲ್ಲಿ ಎರಡು ಪಂದ್ಯಗಳಲ್ಲಿ ಸ್ವ-ಗೋಲು ದಾಖಲಾಗಿದೆ. ಗುರುವಾರ ಅರ್ಜೆಂಟೀನಾ ವಿರುದ್ಧ ದಕ್ಷಿಣ ಕೊರಿಯಾ ಆಟಗಾರ ಪಾರ್ಕ್ ಚು-ಯಂಗ್ ಸ್ವ-ಗೋಲು ಹೊಡೆದರೆ, ಹಾಲೆಂಡ್ ವಿರುದ್ಧ ಡೇನಿಯಲ್ ಅಗ್ಗರ್ ಗೋಲು ಹೊಡೆದುಕೊಟ್ಟಿದ್ದು ಡೆನ್ಮಾರ್ಕ್ನ ಸೋಲಿಗೆ ಕಾರಣವಾಗಿತ್ತು.&lt;/div&gt;&lt;div&gt;ವಿಶ್ವ ಫುಟ್ಬಾಲ್ನ ಆಡಳಿತ ಸಂಸ್ಥೆ ಫಿಫಾ ಸ್ವ-ಗೋಲುಗಳು ಯಾವುದು ಎಂದು ಗುರುತಿಸುವುದಕ್ಕೇ  ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ಅದರ ಪ್ರಕಾರ, ಒಬ್ಬ  ಆಟಗಾರ ಎದುರಾಳಿ ತಂಡ ಗೋಲು ಗಳಿಸುವುದನ್ನು ತಡೆಯುವ ಯತ್ನದಲ್ಲಿ ಚೆಂಡನ್ನು ಸ್ವತಃ ಗೋಲು ಪೆಟ್ಟಿಗೆಯೊಳಗೆ ತಳ್ಳಿದರೆ ಅದು ಸ್ವ-ಗೋಲಾಗುತ್ತದೆ. ಕೆಲವೊಮ್ಮೆ ಎದುರಾಳಿ ತಂಡದ ಆಕ್ರಮಣಕಾರರು ಒದ್ದ ಚೆಂಡು ನಿಖರವಾಗಿ ಗುರಿಯ ದಿಕ್ಕಿನಲ್ಲಿದ್ದು, ಆಕಸ್ಮಿಕವಾಗಿ ರಕ್ಷಣಾ ಆಟಗಾರನನ್ನು ಸ್ಪರ್ಶಿಸಿದ್ದರೆ, ಅಂಥ ಸಂದರ್ಭಗಳಲ್ಲಿ ಅದನ್ನು ಸ್ವ-ಗೋಲೆಂದು ಪರಿಗಣಿಸಲಾಗುವುದಿಲ್ಲ. &lt;/div&gt;&lt;div&gt;&lt;b&gt;ಮೊದಲ ಸ್ವ-ಗೋಲ್&lt;/b&gt;: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಸ್ವ-ಗೋಲು ದಾಖಲಾಗಿದ್ದು 1888ರಲ್ಲಿ. ಆಸ್ಟನ್ ವಿಲ್ಲಾ ಕ್ಲಬ್ನ ಗೆರ್ಶೋಮ್ ಕಾಕ್ಸ್  ವೋಲ್ವರ್ಹ್ಯಾಂಪ್ಟನ್ ವಾಂಡರರ್ಸ್ ವಿರುದ್ಧ ಈ ಗೋಲು ಹೊಡೆದುಕೊಟ್ಟಿದ್ದರು.&lt;/div&gt;&lt;div&gt;ಫಿಫಾ ವಿಶ್ವಕಪ್ ಇತಿಹಾಸಕ್ಕೆ ಬರುವುದಾದರೆ, 1930ರ ಮೊದಲ ವಿಶ್ವಕಪ್ನಲ್ಲೇ  ಸ್ವ-ಗೋಲು ದಾಖಲಾಗಿತ್ತು. 1930ರಿಂದ 2006ರವರೆಗಿನ 18 ವಿಶ್ವಕಪ್ಗಳ 708 ಪಂದ್ಯಗಳಲ್ಲಿ 28 ಸ್ವ-ಗೋಲು ದಾಖಲಾಗಿವೆ. &lt;/div&gt;&lt;div&gt;1954, 1998 ಮತ್ತು  2006ರ ವಿಶ್ವಕಪ್ಗಳಲ್ಲಿ ತಲಾ 4 ಸ್ವ-ಗೋಲು ದಾಖಲಾಗಿದ್ದವು. ಇದು ಒಂದೇ ವಿಶ್ವಕಪ್ನಲ್ಲಿ ದಾಖಲಾದ ಗರಿಷ್ಠ ದಾಖಲೆ. 2002ರ ವಿಶ್ವಕಪ್ನ ಅಮೆರಿಕ - ಪೋರ್ಚುಗಲ್ ಪಂದ್ಯದಲ್ಲಿ 2 ಸ್ವ-ಗೋಲು ದಾಖಲಾಗಿದ್ದು ಸಹ ಒಂದೇ ಪಂದ್ಯದಲ್ಲಿ  ಒಂದಕ್ಕಿಂತ ಹೆಚ್ಚು  ಬಾರಿ ಇಂಥ ಗೋಲು ದಾಖಲಾದ ಮೊದಲ ನಿದರ್ಶನ. ಆಗ ಅಮೆರಿಕದ ಜೆಫ್ ಅಗೋಸ್ ಮತ್ತು ಪೋರ್ಚುಗಲ್ನ ಜಾರ್ಜ್ ಕೋಸ್ಟ ಇಂಥ ಪ್ರಮಾದವೆಸಗಿದ್ದರು.&lt;/div&gt;&lt;div&gt;ಒಬ್ಬನೇ ಆಟಗಾರ ಎರಡು ತಂಡದ ಪರ ಗೋಲು ಗಳಿಸಿದ ನಿದರ್ಶನವೂ ವಿಶ್ವಕಪ್ನಲ್ಲಿದೆ. 1978ರ ವಿಶ್ವಕಪ್ನಲ್ಲಿ ಹಾಲೆಂಡ್ನ ಅರ್ನಿ ಬ್ರಾಂಡ್ಸ್ 18ನೇ ನಿಮಿಷದಲ್ಲಿ ಸ್ವ-ಗೋಲು ಹೊಡೆದು ಇಟಲಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, 50ನೇ ನಿಮಿಷದಲ್ಲಿ ಹಾಲೆಂಡ್ ಪರ ಗೋಲು ಹೊಡೆಯುವ ಮೂಲಕ ತಮ್ಮ   ತಪ್ಪು ಸರಿಪಡಿಸಿಕೊಂಡಿದ್ದರು.&lt;/div&gt;&lt;div&gt;&lt;b&gt;ಎಸ್ಕೋಬಾರ್ ಕರುಣ ಕಥೆ:&lt;/b&gt; ಸ್ವ-ಗೋಲುಗಳ  ಪ್ರಸ್ತಾಪವಾದಾಗಲೆಲ್ಲಾ ನೆನಪಾಗುವುದು ಕೊಲಂಬಿಯಾದ ಆಂಡ್ರೆಸ್ ಎಸ್ಕೋಬಾರ್ ಅವರ ಕರುಣ ಕಥೆ.&lt;/div&gt;&lt;div&gt;ಅದು 1994ರಲ್ಲಿ ಅಮೆರಿಕದಲ್ಲಿ  ನಡೆದ ವಿಶ್ವಕಪ್ನಲ್ಲಿ ಎ ಗುಂಪಿನ ಎರಡನೇ ಪಂದ್ಯ. ಬದ್ಧ ಎದುರಾಳಿಗಳಾದ ಅಮೆರಿಕ- ಕೊಲಂಬಿಯಾ ಪಾಲಿಗೆ ಆ ಪಂದ್ಯ ನಿರ್ಣಾಯಕವಾಗಿತ್ತು. ಅಮೆರಿಕದ ಮಿಡ್ಫೀಲ್ಡರ್ ಜಾನ್ ಹಾರ್ಕ್ಸ್ ಅವರ ಕ್ರಾಸ್ ಅನ್ನು ತಡೆಯುವ ಯತ್ನದಲ್ಲಿ ಎಸ್ಕೋಬಾರ್ ಅವರ ಕಾಲಿಗೆ ಬಡಿದ ಚೆಂಡು ಗೋಲು ಪೆಟ್ಟಿಗೆಯೊಳಕ್ಕೆ ನುಗ್ಗಿತು. ಅಮೆರಿಕ ಆ ಪಂದ್ಯವನ್ನು 2-1ರಿಂದ ಗೆದ್ದುಕೊಂಡಿತು. ಕೊಲಂಬಿಯಾ ವಿಶ್ವಕಪ್ನಿಂದಲೇ ನಿರ್ಗಮಿಸುವಂತಾಯಿತು. ತಂಡದ ನಿರ್ಗಮನಕ್ಕೆ ಎಸ್ಕೋಬಾರ್ರನ್ನು ಬಲಿಪಶುವಾಗಿಸಲಾಯಿತು.&lt;/div&gt;&lt;div&gt;ಇದು ನಡೆದಿದ್ದು ಜೂನ್ 22ರಂದು. ಇದಾಗಿ ಹತ್ತು ದಿನ ಬಳಿಕ ಅಂದರೆ, 1994, ಜುಲೈ 2ರಂದು ಕೊಲಂಬಿಯಾದ ಮೆಡೆಲಿನ್ ನಗರದ ಹೊರವಲಯದ ಬಾರ್  ಒಂದರ ಎದುರು ಎಸ್ಕೋಬಾರ್ ಕೊಲೆಯಾದರು. ಎಸ್ಕೋಬಾರ್ ಎದೆಗೆ 12 ಗುಂಡಿಟ್ಟು ಕೊಂದ ಹಂತಕ, ಪ್ರತೀ ಬಾರಿ ಗುಂಡು ಹಾರಿಸಿದಾಗಲೂ ಗೋಲ್ ಎಂದು ಕೇಕೆ ಹಾಕಿದ್ದಾಗಿ ವರದಿಯಾಗಿತ್ತು.&lt;/div&gt;&lt;div&gt;ಎಸ್ಕೋಬಾರ್ ಕೊಲೆಗೆ  ಬೆಟ್ಟಿಂಗ್ ಮಾಫಿಯಾ ಕಾರಣ ಎಂದೂ ಹೇಳಲಾಗಿತ್ತು.  ಆ ವಿಶ್ವಕಪ್ನಲ್ಲಿ ಕೊಲಂಬಿಯಾ 2ನೇ ಸುತ್ತು ತಲುಪಲಿದೆ ಎಂದು ಕೋಟ್ಯಂತರ ರೂ.ಬಾಜಿ ಕಟ್ಟಲಾಗಿತ್ತು. ಆದರೆ, ಅಮೆರಿಕ ವಿರುದ್ಧ ಸೋತು ನಿರ್ಗಮಿಸಿದ್ದರಿಂದ ಅಷ್ಟೂ ಹಣ ಮುಳುಗಿಹೋಗಿತ್ತು.&lt;/div&gt;&lt;div&gt;ಇದಾಗಿ ಒಂದು ವರ್ಷ ಬಳಿಕ ಹಂಬರ್ಟೊ ಕ್ಯಾಸ್ಟ್ರೊ ಮುನೋಜ್ ಎಂಬ ಆ ಹಂತಕನಿಗೆ ನ್ಯಾಯಾಲಯ 43 ವರ್ಷ ಜೈಲು ಶಿಕ್ಷೆ ವಿಧಿಸಿತು. 2001ರಲ್ಲಿ ಈ ಶಿಕ್ಷೆಯನ್ನು 26 ವರ್ಷಗಳಿಗೆ ಕಡಿತಗೊಳಿಸಲಾಯಿತು. 2005ರಲ್ಲಿ ಸದ್ವರ್ತನೆಯ ಆಧಾರದ ಮೇಲೆ 11 ವರ್ಷ ಶಿಕ್ಷೆಯ ಬಳಿಕ ಆತನನ್ನು ಬಿಡುಗಡೆಗೊಳಿಸಲಾಯಿತು.&lt;/div&gt;&lt;div&gt;&lt;b&gt;ಹೀಗೂ ಉಂಟು:&lt;/b&gt; ಸ್ವ-ಗೋಲು ಹೊಡೆಯುವುದು ಸೋಲಿಗೆ ಆಹ್ವಾನವೆಂದು ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿ ಇಂಥ ಪ್ರಮಾದ ಎಸಗಿದ ನಿದರ್ಶನಗಳೂ ಇತಿಹಾಸದಲ್ಲಿವೆ. 1998ರ ಟೈಗರ್ ಕಪ್ನಲ್ಲಿ ಥಾಯ್ಲೆಂಡ್ ಮತ್ತು ಇಂಡೋನೇಶಿಯಾ ತಂಡಗಳು ಕೊನೆಯ ಲೀಗ್ನಲ್ಲಿ  ಮುಖಾಮುಖಿಯಾಗುವ ಮುನ್ನವೇ ಉಪಾಂತ್ಯ ಪ್ರವೇಶ ಖಚಿತ ಪಡಿಸಿಕೊಂಡಿದ್ದವು. ಈ ಪಂದ್ಯದಲ್ಲಿ ಗೆಲ್ಲುವ ತಂಡ ಉಪಾಂತ್ಯದಲ್ಲಿ ಆತಿಥೇಯ ವಿಯೆಟ್ನಾಂ ವಿರುದ್ಧ ಸೆಣಸುತ್ತದೆ, ಸೋಲುವ ತಂಡ ದುರ್ಬಲ ಸಿಂಗಾಪುರ ವಿರುದ್ಧ ಆಡಬೇಕಾಗುತ್ತದೆ ಎಂಬ ಸಂಗತಿ ಎರಡೂ ತಂಡಗಳಿಗೆ ತಿಳಿದಿತ್ತು. ಪಂದ್ಯದ ಮೊದಲ ಅವಧಿಯಲ್ಲಿ  ಉಭಯ ತಂಡಗಳು ಗೋಲುಯತ್ನ ನಡೆಸಲಿಲ್ಲ. 90 ನಿಮಿಷಗಳ ಆಟ ಮುಗಿದಾಗ 2-2 ಗೋಲುಗಳು ದಾಖಲಾಗಿದ್ದವು. ನಷ್ಟಕಾಲದ ಆಟದಲ್ಲಿ ಇಬ್ಬರು ಥಾಯ್ ಡಿಫೆಂಡರ್ಗಳು ತಡೆಯಲು ಯತ್ನಿಸುತ್ತಿದ್ದರೂ, ಇಂಡೋನೇಶಿಯಾದ ಡಿಫೆಂಡರ್ ಮುರ್ಸೈಯದ್ ಎಫೆಂದಿ ಉದ್ಧೇಶಪೂರ್ವಕವಾಗಿ ಸ್ವ-ಗೋಲು ಹೊಡೆದು ಥಾಯ್ಲೆಂಡ್ ತಂಡವನ್ನು 3-2ರಿಂದ ಗೆಲ್ಲಿಸಿದರು. ಕ್ರೀಡೆಯ ಸೂರ್ತಿಗೆ ಧಕ್ಕೆ ತಂದಿದ್ದಕ್ಕಾಗಿ ಫಿಫಾ ಉಭಯ ತಂಡಗಳಿಗೆ ತಲಾ 40,000 ಡಾಲರ್ ದಂಡ ವಿಸಿತು. ಮುರ್ಸೈಯದ್ರನ್ನು ಒಂದು ವರ್ಷ ಕಾಲ ದೇಶಿ ಫುಟ್ಬಾಲ್ನಿಂದ, ಜೀವನಪರ್ಯಂತ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿಷೇಧಿಸಲಾಯಿತು.&lt;/div&gt;&lt;div&gt;&lt;b&gt;ಎರಡೂ ಬದಿ ಗೋಲು  ಕಾಯಬೇಕಾಯಿತು:&lt;/b&gt; 1994ರ ಕೆರಿಬಿಯನ್  ಕಪ್ನ ಪ್ರಾಥಮಿಕ ಸುತ್ತಿನಲ್ಲಿ  ಬಾರ್ಬಡಾಸ್ ತಂಡ ಗ್ರೆನಡ ವಿರುದ್ಧ ಉದ್ದೇಶಪೂರ್ವಕವಾಗಿ ಸ್ವ-ಗೋಲು ಹೊಡೆಯಿತು. ಆ ಟೂರ್ನಿಯ ವಿಲಕ್ಷಣ ನಿಯಮದ ಪ್ರಕಾರ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಬಂಗಾರದ ಗೋಲು ಹೊಡೆದು ಗೆಲ್ಲುವ ತಂಡಕ್ಕೆ 2 ಗೋಲುಗಳ ಗೆಲುವು ನೀಡಲಾಗುತ್ತಿತ್ತು. ಇತ್ತ ಬಾರ್ಬಡಾಸ್ ಟೂರ್ನಿಯ  ಅಂತಿಮ ಘಟ್ಟಕ್ಕೆ ಪ್ರವೇಶ ಪಡೆಯಬೇಕಾದರೆ, ಆ ಪಂದ್ಯವನ್ನು ಎರಡು ಗೋಲುಗಳ ಅಂತರದಿಂದ ಗೆಲ್ಲುವ ಅವಶ್ಯಕತೆ ಇತ್ತು.&lt;/div&gt;&lt;div&gt;ಆ ಪಂದ್ಯದಲ್ಲಿ 87 ನಿಮಿಷಗಳ  ಆಟ ಮುಗಿದಾಗ ಬಾರ್ಬಡಾಸ್ 2-1 ಗೋಲುಗಳಿಂದ  ಮುನ್ನಡೆಯಲ್ಲಿತ್ತು. ಬಾಕಿ ಅವಧಿಯಲ್ಲಿ 2 ಗೋಲು ದಾಖಲಿಸಲು ಸಾಧ್ಯವಿಲ್ಲ ಎಂದು  ತಿಳಿದಿದ್ದ ಬಾರ್ಬಡಾಸ್ ಸ್ವ-ಗೋಲು ಹೊಡೆಯುವ ಮೂಲಕ ಅಂತರವನ್ನು 2-2ರಿಂದ ಸಮಗೊಳಿಸಿತು. ತನ್ಮೂಲಕ ಆಟವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸಿದರೆ, ಬಂಗಾರದ ಗೋಲು ಗಳಿಸಿ ಎರಡು ಗೋಲುಗಳ ಗೆಲುವಿನ ಅಂತರ ಪಡೆಯಬಹುದು ಎನ್ನುವುದು ತಂಡದ ಲೆಕ್ಕಾಚಾರವಾಯಿತು. ಈ ಮೋಸವನ್ನು ಅರಿತ ಗ್ರೆನಡ ಸಹ ಸ್ವ-ಗೋಲು ಗಳಿಸಲು ಯತ್ನಿಸಿತು. ಹೀಗಾಗಿ ಪಂದ್ಯದ ಕೊನೆಯ ಮೂರು ನಿಮಿಷಗಳ ಕಾಲ ಬಾರ್ಬಡಾಸ್ ಮೈದಾನದ ಎರಡೂ ಬದಿಯಲ್ಲಿ ಗೋಲಾಗದಂತೆ ರಕ್ಷಣೆ ಮಾಡಿದ ಅಭೂತಪೂರ್ವ ಘಟನೆ ನಡೆಯಿತು. ಕೊನೆಗೂ ಹೆಚ್ಚುವರಿ ಅವಯಲ್ಲಿ ಬಂಗಾರದ ಗೋಲು ಹೊಡೆದ ಬಾರ್ಬಡಾಸ್ ಗುರಿ ಸಾಸಿತು.&lt;/div&gt;&lt;div&gt;6 ಗೋಲು, 3 ಸ್ವ-ಗೋಲು: 2009ರ ಡಿಸೆಂಬರ್ನಲ್ಲಿ  ನಡೆದ ಜರ್ಮನಿಯ ಬುಂಡೆಸ್ಲಿಗ ಪಂದ್ಯದಲ್ಲಿ  ಹ್ಯಾನೊವರ್ 96 ತಂಡ ಬೋರುಸ್ಸಿಯ ಮಾಂಚೆಂಗ್ಲಾಡ್ಬ್ಯಾಕ್  ವಿರುದ್ಧ 6 ಗೋಲು ಹೊಡೆಯಿತು. ಆದರೆ ಅದರಲ್ಲಿ 3 ಸ್ವ-ಗೋಲಾಗಿತ್ತು. ಹೀಗಾಗಿ 3-5 ಅಂತರದಿಂದ ಪಂದ್ಯ ಸೋತಿತು!&lt;/div&gt;&lt;div&gt;1998ರ ವಿಶ್ವಕಪ್ನಲ್ಲಿ  ಸ್ಪೇನ್ ತಂಡ ಗೋಲಿ ಅಂದೋನಿ ಝುಬಿಝರೆಟ್ಟ ಅವರ ಸ್ವ-ಗೋಲಿನಿಂದಾಗಿ ನೈಜೀರಿಯಾ ವಿರುದ್ಧ ಸೋತಿತ್ತು. ಪರಿಣಾಮ, ಸ್ಪೇನ್ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿತು. ಅಂದೋನಿ ಅಕಾಲ ನಿವೃತ್ತಿ ಪಡೆದರು.&lt;/div&gt;&lt;div&gt;&lt;b&gt;ಕೊನೆಯದಾಗಿ:&lt;/b&gt; 2002ರಲ್ಲಿ ಮಡ್ಗಾಸ್ಕರ್ ಗಣರಾಜ್ಯದ ಲೀಗ್ನಲ್ಲಿ ಎಎಸ್ ಅಡೆಮಾ 149-0 ಅಂತರದಿಂದ ಎಸ್ಓಇ ಅಂಟನನರಿವೋ ತಂಡವನ್ನು ಸೋಲಿಸಿತ್ತು. ಎಸ್ಓಇ ಹಿಂದಿನ ಪಂದ್ಯದಲ್ಲಿ ರೆಫ್ರಿ ನಿರ್ಧಾರ ಪ್ರತಿಭಟಿಸಿ ಎಲ್ಲಾ 149 ಗೋಲುಗಳನ್ನು ಸ್ವ-ಗೋಲಿನ ರೂಪದಲ್ಲಿ ಹೊಡೆದುಕೊಟ್ಟಿತ್ತು.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-3099317138797338006?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/3099317138797338006/comments/default' title='Post Comments'/><link rel='replies' type='text/html' href='http://ragaakshara.blogspot.com/2010/06/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/3099317138797338006'/><link rel='self' type='application/atom+xml' href='http://www.blogger.com/feeds/2998842447029730227/posts/default/3099317138797338006'/><link rel='alternate' type='text/html' href='http://ragaakshara.blogspot.com/2010/06/blog-post.html' title='ಪಾಪಪ್ರಜ್ಞೆಯ  ಗೋಲುಗಳು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_fosRdfQ3Hws/TCCm6cQhN-I/AAAAAAAAAM0/3GVJjUl9fAE/s72-c/goal.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-4993196292210198631</id><published>2010-04-01T18:31:00.001+05:30</published><updated>2010-04-01T18:36:11.535+05:30</updated><title type='text'>ಸಾನಿಯಾ ಮದುವೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/S7SaNGXNyaI/AAAAAAAAAL0/y4ntK6Hv688/s1600/sania.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_fosRdfQ3Hws/S7SaNGXNyaI/AAAAAAAAAL0/y4ntK6Hv688/s400/sania.jpg" border="0" alt="" id="BLOGGER_PHOTO_ID_5455154598489475490" /&gt;&lt;/a&gt;&lt;br /&gt;&lt;div&gt;ಒಮ್ಮೆ ಎಡವಿದವರು ಕೂಡಲೇ ಜಾಗೃತರಾಗುತ್ತಾರೆ.&lt;/div&gt;&lt;div&gt;ಆದರೆ, ಸಾನಿಯಾ ಮಿರ್ಜಾ ಎರಡನೇ ಬಾರಿ ಎಡವಿದರೇ ಎಂಬ ಭಾವನೆ ಮೂಡುತ್ತಿದೆ.&lt;/div&gt;&lt;div&gt;ಸಾನಿಯಾ ಯಾರನ್ನು ಮದುವೆ ಆಗಬೇಕು, ಯಾರನ್ನು ಆಗಬಾರದು ಎಂದು ನಿರ್ಧರಿಸುವವರು, ನಿರ್ಧರಿಸಬೇಕಾದವರು ನಾವಲ್ಲ.  ಅದು ಅವರ ವೈಯಕ್ತಿಕ ಆಯ್ಕೆ. ಆದರೆ,  ಪ್ರತೀ ಬಾರಿ ಮದುವೆ ಊಟವೊಂದನ್ನು ಮುಗಿಸಿ ಬಂದ ಬಳಿಕ ಜೋಡಿ ಹೇಗಿದೆ? ಚೆನ್ನಾಗಿದೆಯೇ, ಇಲ್ಲವೇ ಎಂದು ವಿಶ್ಲೇಷಿಸುವಂತೆ ನಾವು ಸಾನಿಯಾ ಆಯ್ಕೆಯನ್ನೂ ವಿಶ್ಲೇಷಿಸಬಹುದು.&lt;/div&gt;&lt;div&gt;ಸಾನಿಯಾಗೆ ನಿಜಕ್ಕೂ ಅಂಥ ಅವಸರವೇನಿತ್ತು ಎನ್ನುವುದು ಕಾಡುವ ಪ್ರಶ್ನೆ.&lt;/div&gt;&lt;div&gt;25 ಮದುವೆಯ ವಯಸ್ಸೇ. ಆದರೆ, ಕ್ರೀಡಾಪಟುಗಳಿಗೆ ಇದು ಅನ್ವಯವಾಗುವುದಿಲ್ಲ.&lt;/div&gt;&lt;div&gt;ಸಾನಿಯಾ ಈಗಲೇ ಮದುವೆಯತ್ತ ಮುಖ ಮಾಡಿದ್ದಾರೆಂದರೆ,  ಕ್ರೀಡಾ ವೃತ್ತಿಜೀವನದ ಕಡೆ ಅವರ ಗಮನ, ಆಸಕ್ತಿ ಕಡಿಮೆಯಾಗಿದೆ ಎಂದರ್ಥವೇ?&lt;/div&gt;&lt;div&gt;ನೇರವಾಗಿ ಒಪ್ಪಿಕೊಳ್ಳದಿದ್ದರೂ, ಅವರು ಟೆನಿಸ್‌ನಿಂದ ಸ್ವಲ್ಪ ಸ್ವಲ್ಪವೇ ದೂರವಾಗುತ್ತಿರುವರೇ?&lt;/div&gt;&lt;div&gt;ನಿರಂತರ ಗಾಯಗಳು, ಅದರ ನೋವುಗಳು, ಶಸ್ತ್ರಚಿಕಿತ್ಸೆಗಳು, ಅದರಿಂದನುಭವಿಸುವ ವೇದನೆ, ಕಟ್ಟಳೆಗಳು, ಪಥ್ಯ ಇವೆಲ್ಲವೂ ಸಾನಿಯಾಗೆ ಹತಾಶೆ ತಂದಿವೆಯೇ. ಇನ್ನು  ಸಾಕು ಎಂಬ ಭಾವ ಹುಟ್ಟುಹಾಕಿವೆಯೇ?&lt;/div&gt;&lt;div&gt;ಅಥವಾ ಶೋಯಿಬ್‌ ಮಲಿಕ್‌ರಲ್ಲಿ ಅಂಥ ಆಕರ್ಷಣೆ ಇದೆಯೇ?&lt;/div&gt;&lt;div&gt;ಶೋಯಿಬ್‌ ಮಲಿಕ್‌ರ ಅಂದವನ್ನು ಸಾನಿಯಾ ಮೆಚ್ಚಿದರು ಎನ್ನುವಂತಿಲ್ಲ. ಏಕೆಂದರೆ, ಅವರಿಗಿಂತ ಸ್ಫೂರದ್ರೂಪಿಗಳಾದ ಗೆಳೆಯರು (ಶಾಹೀದ್‌ ಕಪೂರ್‌) ಅವರಿಗಿದ್ದಾರೆ. ಶೋಯಿಬ್‌ರ  ಆಟವನ್ನು  ಮೆಚ್ಚಿದರೇ? ಹಾಗೆ ನೋಡಿದರೆ ಶೋಯಿಬ್‌ ಉತ್ತಮ ಆಟಗಾರನೇ ಹೊರತು ಅಸಾಧಾರಣ ಕ್ರಿಕಿಟಿಗನೇನೂ ಅಲ್ಲ. ಅವರು ಗಳಿಸಿರುವುದು ಬೆರಳೆಣಿಕೆಯ ಶತಕಗಳು, ನೂರು ಚಿಲ್ಲರೆ ವಿಕೆಟ್‌ಗಳು ಅಷ್ಟೇ. ಅವರ ಬ್ಯಾಟಿಂಗ್‌ನಲ್ಲಿ ಸಚಿನ್‌, ಸೆಹ್ವಾಗ್‌ರ ಮೋಹಕತೆ, ಆರ್ಭಟವಾಗಲೀ ಇಲ್ಲ. ಅವರ ಬೌಲಿಂಗ್‌ನಲ್ಲೂ ಶೋಯಿಬ್‌ ಅಖ್ತರ್‌ ವೇಗವಾಗಲೀ, ಶೇನ್‌ ವಾರ್ನ್‌ ಮೋಡಿಯಾಗಲೀ ಇಲ್ಲ. &lt;/div&gt;&lt;div&gt;ಪಾಕಿಸ್ತಾನದಲ್ಲೇ ಅವರು ನಂ.1 ಕ್ರಿಕೆಟಿಗ ಅಲ್ಲ. ಅದೃಷ್ಟದ ಬಲದಿಂದ ಮಾಜಿ ನಾಯಕ ಎಂದು ಹೇಳಿಕೊಳ್ಳಬಹುದಷ್ಟೇ.&lt;/div&gt;&lt;div&gt;ನಡತೆ, ಬದ್ಧತೆ? ನಾಯಕತ್ವ ಕಳೆದುಕೊಂಡ ಬಳಿಕ ಪಾಕಿಸ್ತಾನ ಕ್ರಿಕೆಟ್‌ ತಂಡದ ಬಗ್ಗೆ ಅವರ ಬದ್ಧತೆ ಪ್ರಶ್ನಾರ್ಹವಾಗಿದೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ತೋರಿದ ಅಶಿಸ್ತಿನ ವರ್ತನೆಗಾಗಿ ಸದ್ಯ ಅವರು ಹಲವು ಸಾವಿರ ಡಾಲರ್‌ಗಳ ದಂಡ ಹಾಗೂ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾದ ಗುಮಾನಿಯೂ ಅವರ ಮೇಲಿದೆ.&lt;/div&gt;&lt;div&gt;ಶೋಯಿಬ್‌ ಮಲಿಕ್‌ ಮೋಸ್ಟ್‌ ಎಲಿಜಬಲ್‌ ಬ್ಯಾಚೆಲರ್‌ ಎಂದೂ ಹೇಳುವಂತಿಲ್ಲ. ಈಗಾಗಲೇ ಹೈದರಾಬಾದಿನ ಹುಡುಗಿಯೊಬ್ಬಳನ್ನು ವಿವಾಹವಾಗಿ ಕೈಕೊಟ್ಟ ಅಪವಾದ ಅವರ ಮೇಲಿದೆ.&lt;/div&gt;&lt;div&gt;ಹಾಗಾದರೆ, ಏನನ್ನು ನೋಡಿ ಮೆಚ್ಚಿದರು ಸಾನಿಯಾ?&lt;/div&gt;&lt;div&gt;ಪ್ರೀತಿ ಕುರುಡು. ಋಣಾನುಬಂಧ ಎನ್ನುವುದು ವಿಚಿತ್ರ. ಯಾರು-ಯಾರಿಗೋ ಅದು ಗಂಟು ಬೆಸೆಯುತ್ತದೆ. ವಿಶ್ವದಲ್ಲಿ ಅನುರೂಪ- ಅಪರೂಪದ ಜೋಡಿಗಳ ಸಂಖ್ಯೆ ಬಹಳ ಕಡಿಮೆ.&lt;/div&gt;&lt;div&gt;ಸಾನಿಯಾ ಈ ಹಿಂದೆ ಬಾಲ್ಯದ ಗೆಳೆಯ ಸೊಹ್ರಾಬ್‌ ಮಿರ್ಜಾ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ಆರು ತಿಂಗಳ ಬಳಿಕ ಹೊಂದಾಣಿಕೆ ಇಲ್ಲ ಎಂಬ ಕಾರಣಕ್ಕೆ ಸಂಬಂಧ ಕಡಿದುಕೊಂಡರು. ಆದರೆ, ಶೋಯಿಬ್‌ ಮಲಿಕ್‌ ಪ್ರೇಮ ನಿವೇದನೆ ಮಾಡಿಕೊಂಡ ಒಂದೆರಡು ತಿಂಗಳಲ್ಲೇ ಮದುವೆಯೂ ನಡೆದೇ ಹೋಗಲಿದೆ. ಬಹುಶಃ ಇದು ಸ್ವರ್ಗದಲ್ಲಿ ಬೆಸೆದ ನಂಟು ಹಾಗಾಗಿ ಹೊಂದಾಣಿಕೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಾನಿಯಾ ಭಾವಿಸಿದ್ದಿರಬೇಕು.&lt;/div&gt;&lt;div&gt;ಮದುವೆಯಾದ ಮೇಲೂ ಸಾನಿಯಾ ಭಾರತವನ್ನೇ ಪ್ರತಿನಿಧಿಸುವ ಬಗ್ಗೆ ಹೇಳಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ- ಸಂಪ್ರದಾಯಗಳ ಪ್ರಕಾರ ಕೊಟ್ಟ ಹೆಣ್ಣು ಕುಲದ ಹೊರಗೆ. ಅಂದರೆ, ಮದುವೆಯ ಬಳಿಕ ಗಂಡನ ಮನೆಯೇ ಸರ್ವಸ್ವ.  ಆದರೆ, ಇದು ಕಾನೂನೇನೂ ಅಲ್ಲ. ಕ್ರೀಡೆಯಲ್ಲಿ ಗಂಡ - ಹೆಂಡತಿ ಬೇರೆ ಬೇರೆ ದೇಶವನ್ನು ಪ್ರತಿನಿಧಿಸಿದ ಸಾಕಷ್ಟು ಉದಾಹರಣೆಗಳಿವೆ. ಸಾನಿಯಾ ಸಹ ಪಾಕಿಸ್ತಾನದ ಕ್ರಿಕೆಟಿಗನ ಪತ್ನಿಯಾಗಿ ಭಾರತವನ್ನು ಪ್ರತಿನಿಧಿಸುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಲು ಹೊರಟಿದ್ದಿರಬಹುದು.&lt;/div&gt;&lt;div&gt;ಒಟ್ಟಾರೆ ಸಾನಿಯಾ ಗುರಿ 2012ರ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್‌ ಆಡುವುದು. ಬಹುಶಃ ಭಾರತವನ್ನು ಪ್ರತಿನಿಧಿಸಿದರೆ, ಮಹೇಶ್‌ ಭೂಪತಿ ಅಥವಾ ಲಿಯಾಂಡರ್‌ ಪೇಸ್‌ ಅಥವಾ ರೋಹನ್‌ ಬೋಪಣ್ಣ ಅಥವಾ ಸೋಮದೇವ್‌ ದೇವ್‌ವರ್ಮನ್‌ (ಆಯಾ ಆಟಗಾರರ ಲಭ್ಯತೆ, ವಿಶ್ವ ಶ್ರೇಯಾಂಕ ಆಧರಿಸಿ) ಜೊತೆಯಲ್ಲಿ  ಪದಕಕ್ಕಾಗಿ ಪ್ರಯತ್ನಿಸಲು ಉತ್ತಮ ಅವಕಾಶಗಳಿರುತ್ತವೆ. ಒಂದು ವೇಳೆ ಆಕೆ ಪಾಕಿಸ್ತಾನವನ್ನು ಪ್ರತಿನಿಧಿಸುವುದಾದರೆ, ಅವರಿಗೆ ಸೂಕ್ತ ಜೊತೆಗಾರರ ಕೊರತೆ ಎದುರಾಗಲಿದೆ. ಸದ್ಯ ಪಾಕಿಸ್ತಾನದಲ್ಲಿರುವ ಏಕೈಕ ಸಮರ್ಥ (ಅಂತಾರಾಷ್ಟ್ರೀಯ ಮಟ್ಟದಲ್ಲಿ) ಆಟಗಾರ ಐಸಾಮ್‌ ಉಲ್‌ ಹಕ್‌ ಖುರೇಷಿ. ಕೆಲವು ಕಾಲದ ಹಿಂದೆ ಸಾನಿಯಾ ಹಾಗೂ ಖುರೇಷಿ ಸಖ್ಯದ ಬಗ್ಗೆಯೂ  ಗುಸುಗುಸುಗಳಿದ್ದವು. ಆದರೆ, ಈಗ ಆಕೆ ಓರ್ವ ಕ್ರಿಕೆಟಿಗನನ್ನು ಮದುವೆಯಾಗುತ್ತಿರುವುದರಿಂದ ಖುರೇಷಿ ಜೊತೆ ಮಿಶ್ರ ಡಬಲ್ಸ್‌ ಟೆನಿಸ್‌ ಆಡುವುದು ಎಷ್ಟು ಸಾಧ್ಯ ಎಂದು ಆಕೆಯೇ ನಿರ್ಧರಿಸಬೇಕು.&lt;/div&gt;&lt;div&gt;ಸಾನಿಯಾ ಪಾಕಿಸ್ತಾನದ ಆಟಗಾರನನ್ನು ಮದುವೆಯಾಗುತ್ತಿದ್ದರೂ, ಭಾರತೀಯಳೆಂಬ ಐಡೆಂಟಿಟಿಯನ್ನು ಕಳೆದುಕೊಳ್ಳುವುದಕ್ಕೂ ಇಷ್ಟ ಪಡುವುದಿಲ್ಲ ಎನ್ನುವುದು ಸ್ಪಷ್ಟ.  ಏಕೆಂದರೆ, ಅದರಿಂದ ಸಿಗುವ ಅನುಕೂಲಗಳು ಅಪಾರ. ಅಲ್ಲದೆ,  ಬಹುಶಃ ಸಾನಿಯಾ ಪಾಕಿಸ್ತಾನದಲ್ಲಿ ಹುಟ್ಟಿದ್ದರೆ ಈ ಎತ್ತರಕ್ಕೇರುವುದು ಸಾಧ್ಯವಾಗುತ್ತಲೇ ಇರಲಿಲ್ಲ. &lt;/div&gt;&lt;div&gt;ಮದುವೆಯಾದ ಮೇಲೆ ಸಾನಿಯಾ ಭಾರತೀಯರಾಗೇ ಉಳಿಯುತ್ತಾರೋ, ಇಲ್ಲವೋ. ಆದರೆ, ಭಾರತದ ಋಣವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಸಾಕು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-4993196292210198631?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/4993196292210198631/comments/default' title='Post Comments'/><link rel='replies' type='text/html' href='http://ragaakshara.blogspot.com/2010/04/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/4993196292210198631'/><link rel='self' type='application/atom+xml' href='http://www.blogger.com/feeds/2998842447029730227/posts/default/4993196292210198631'/><link rel='alternate' type='text/html' href='http://ragaakshara.blogspot.com/2010/04/blog-post.html' title='ಸಾನಿಯಾ ಮದುವೆ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/S7SaNGXNyaI/AAAAAAAAAL0/y4ntK6Hv688/s72-c/sania.jpg' height='72' width='72'/><thr:total>2</thr:total></entry><entry><id>tag:blogger.com,1999:blog-2998842447029730227.post-332233336104419437</id><published>2010-03-08T23:43:00.001+05:30</published><updated>2010-03-08T23:47:21.092+05:30</updated><title type='text'>ಅಂತ್ಯವಲ್ಲ ಆರಂಭ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/S5U_Gk0u2RI/AAAAAAAAAK8/310WeVEIxyo/s1600-h/PTI3_8_2010_000238B.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 270px;" src="http://4.bp.blogspot.com/_fosRdfQ3Hws/S5U_Gk0u2RI/AAAAAAAAAK8/310WeVEIxyo/s400/PTI3_8_2010_000238B.JPG" border="0" alt="" id="BLOGGER_PHOTO_ID_5446328706571098386" /&gt;&lt;/a&gt;&lt;br /&gt;&lt;div&gt;ಸಾವು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಬದುಕು ನಮ್ಮ ಕೈಯಲ್ಲಿರುತ್ತದೆ.&lt;/div&gt;&lt;div&gt;ಪ್ರಕೃತಿ ನಿಯಮವೇ ಹಾಗೆ.&lt;/div&gt;&lt;div&gt;ವಿನಾಶವಿಲ್ಲದೆ ಹೊಸ ಸೃಷ್ಟಿಯಿಲ್ಲ.&lt;/div&gt;&lt;div&gt;ಕತ್ತಲೆಯನ್ನು ಕಾಣದೆ, ಬೆಳಕಿನ ಮಹತ್ವ ಅರಿವಿಗೆ ಬರಲು ಸಾಧ್ಯವಿಲ್ಲ.&lt;/div&gt;&lt;div&gt;ಆಟದಲ್ಲಾಗಲೀ, ಬದುಕಿನಲ್ಲಾಗಲೀ ಸೋಲು ಗೆಲುವಿನ ಮೂಲ. ಸಾವು ಹಾಗೂ ಹುಟ್ಟು ಪ್ರಕೃತಿಯ ಚಕ್ರ.&lt;/div&gt;&lt;div&gt;ಭಾರತದ ಪಾಲಿಗೆ ಹಾಕಿ ವಿಶ್ವಕಪ್‌ ಮುಗಿದಿದೆ. &lt;/div&gt;&lt;div&gt;ಹಾಗೆ ನೋಡಿದರೆ, ಭಾರತೀಯರು ವಿಶ್ವಕಪ್‌ ಆತಿಥ್ಯದ ಸಂಭ್ರಮವನ್ನು ಪೂರ್ತಿಯಾಗಿ ಸವಿದಿದ್ದು ಕೇವಲ ಒಂದು ದಿನ ಮಾತ್ರ.&lt;/div&gt;&lt;div&gt;ಅದು ವಿಶ್ವಕಪ್‌ ಆರಂಭದ ದಿನ.&lt;/div&gt;&lt;div&gt;ಆದರೆ, ಇದೊಂದು ರೀತಿಯಲ್ಲಿ ದುರಂತವೂ ಹೌದು. ಕ್ರಿಕೆಟ್‌ ಇರಲಿ, ಹಾಕಿ ಇರಲಿ. ಭಾರತ, ಪಾಕಿಸ್ತಾನಗಳ ಪಾಲಿಗೆ ವಿಶ್ವಕಪ್‌ ಎಂದರೆ, ಪರಸ್ಪರರ ಮೇಲೆ ಗೆದ್ದರೆ ಸಾಕು ಎಂಬಂತಾಗಿದೆ.&lt;/div&gt;&lt;div&gt;ಪಾಕ್‌ ತಂಡ ಆ ರೀತಿ ಹೇಳಿಕೊಂಡೇ ದೆಹಲಿಗೆ ಆಗಮಿಸಿತ್ತು. ವಿಶ್ವಕಪ್‌ ಗೆಲ್ಲದಿದ್ದರೂ ಪರವಾಗಿಲ್ಲ, ಭಾರತದ ಮೇಲೆ ಗೆದ್ದರೆ, ಜನ ನಮ್ಮನ್ನು ಕ್ಷಮಿಸುತ್ತಾರೆ ಎಂದು ಪಾಕ್‌ ತಂಡದ ನಾಯಕ ಹೇಳಿದ್ದರು.&lt;/div&gt;&lt;div&gt;ಭಾರತದ ಅಭಿಮಾನಿಗಳು ನಿರೀಕ್ಷೆ ಪಡುವುದೂ ಅದನ್ನೇ. ಮೊದಲು ಪಾಕ್‌ ವಿರುದ್ಧ ಗೆಲ್ಲಲಿ, ಆಮೇಲೆ ಏನಾದರೂ ಆಗಲಿ.&lt;/div&gt;&lt;div&gt;ಈ ಕೂಪಮಂಡೂಕ ಪ್ರವೃತ್ತಿಯಿಂದ ಹೊರಬಂದು ನಮ್ಮ ತಂಡಗಳು  ವಿಶ್ವತೋಮುಖಿ ಆಗುವುದು ಯಾವಾಗ?&lt;/div&gt;&lt;div&gt;ಭಾರತೀಯ ಹಾಕಿಯ ಸಮಸ್ಯೆಗಳು ಸದ್ಯ ಸಾವಿರಾರಿವೆ. ಆದರೂ, ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನಮ್ಮ ತಂಡ ಕನಿಷ್ಠ ಸೆಮಿಫೈನಲ್‌ ತಲುಪಿದ್ದರೆ, ಯೋಗ್ಯ ಸಾಧನೆ ಎನಿಸಿಕೊಳ್ಳುತ್ತಿತ್ತು.&lt;/div&gt;&lt;div&gt;ಆದರೆ, ತಂಡಕ್ಕೆ ನಿಜಕ್ಕೂ ಅಂಥ ಯೋಗ್ಯತೆ ಇತ್ತೇ?&lt;/div&gt;&lt;div&gt;ಭಾವನಾತ್ಮಕ ಹೋರಾಟ ಕಂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ರದರ್ಶನ ಕಂಡು ನಿಬ್ಬೆರಗಾದವರೆಲ್ಲಾ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯದಲ್ಲಿ ವಾಸ್ತವ ಪ್ರಪಂಚಕ್ಕೆ ಮರಳಿದರು.&lt;/div&gt;&lt;div&gt;ಒಂದು ಕಾಲದ ಹಾಕಿ ಸಾರ್ವಭೌಮ ತಂಡ, 8 ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್‌ ತಂಡ ಈಗ ದಕ್ಷಿಣ ಏಷ್ಯಾದಲ್ಲಷ್ಟೇ ಪ್ರಬಲ ಶಕ್ತಿ ಎನಿಸಿಕೊಂಡಿದೆ. ಏಕೆಂದರೆ, ಏಷ್ಯಾದಲ್ಲೇ ಕೊರಿಯಾ ತಂಡದ ವೇಗಕ್ಕೆ, ಶರವೇಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಚೀನಾದ ಚಾತುರ್ಯಕ್ಕೆ ಆಗಾಗ ಮುಗ್ಗರಿಸಿ ಬೀಳುತ್ತಿರುವ ಭಾರತ, ಯುರೋಪಿನ ತಂಡಗಳ ವಿರುದ್ಧ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಅಟ್ಟಿದವರಂತೆ ಆಡುತ್ತದೆ. ಯುರೋಪಿನ ತಂಡಗಳಿಗೆ ಸರಿಸಮಾನವಾಗಿ ಆಡುವ ಆಸ್ಟ್ರೇಲಿಯಾ ವಿರುದ್ಧವೂ ಅಷ್ಟೇ.&lt;/div&gt;&lt;div&gt;ಹಾಗೆ ನೋಡಿದರೆ, ವಿಶ್ವಕಪ್‌ಗೆ ಭಾರತದ ಪೂರ್ವಭಾವಿ ತಯಾರಿಯೇ ಸಮರ್ಪಕವಾಗಿರಲಿಲ್ಲ. ಇದಕ್ಕೆ ಆಟಗಾರರ ದೋಷ ಕಾರಣವಲ್ಲ. ದೇಶದಲ್ಲಿ ಹಾಕಿ ಆಡಳಿತ ಸಂಸ್ಥೆಯೇ ಇಲ್ಲದ ಅರಾಜಕ ಸನ್ನಿವೇಶದಲ್ಲಿ ಆಟಗಾರರನ್ನು ದೂರುವುದು ಸಾಧ್ಯವೂ ಇಲ್ಲ. ಸತತ 15ಕ್ಕೂ ಹೆಚ್ಚು ವರ್ಷ ಕಾಲ ಭಾರತೀಯ ಹಾಕಿಯನ್ನು ಆಳಿ ಅಧಃಪತನದ ಅಂಚಿಗೆ ತಂದು ನಿಲ್ಲಿಸಿದ ಕೆಪಿಎಸ್‌ ಗಿಲ್‌ ನೇತೃತ್ವದ ಭಾರತೀಯ ಹಾಕಿ ಒಕ್ಕೂಟ ಬರ್ಖಾಸ್ತುಗೊಂಡ ಬಳಿಕ, ಇವತ್ತಿಗೂ ಹೊಸ ಚುನಾಯಿತ ಸಂಸ್ಥೆ ಅಧಿಕಾರಕ್ಕೆ ಬರಲೇ ಇಲ್ಲ. ಕಳೆದೆರಡು ವರ್ಷಗಳಿಂದ ಹಾಕಿಯನ್ನು ಗುಡಿಸಿ ಗುಂಡಾಂತರವೆಸಗುತ್ತಿರುವುದು ಮಧ್ಯಂತರ ವ್ಯವಸ್ಥೆಗಳು. ಆಟದ ಚಿಂತನೆಯಿಲ್ಲದೆ, ಕೇವಲ ಅಧಿಕಾರದ ಲಾಲಸೆಗಾಗಿ ಕಚ್ಚಾಡುವ ವ್ಯಕ್ತಿಗಳ ದೊಂಬರಾಟದಲ್ಲಿ ಹಾಕಿ ಅನಾಥವಾಗಿದೆ. ಇಂಥ ಸನ್ನಿವೇಶದಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದೇ ದೊಡ್ಡ ವಿಷಯ.&lt;/div&gt;&lt;div&gt;ಇನ್ನು ಆಟದ ವಿಷಯಕ್ಕೆ ಬಂದರೆ, ತಂಡವನ್ನು ಕಟ್ಟುವ ಜವಾಬ್ದಾರಿ ಹೊತ್ತವರಿಗೆ ಭವಿಷ್ಯದ ಕುರಿತು ಸ್ಪಷ್ಟ ಚಿಂತನೆ ಇಲ್ಲ. ತಂಡ ಭಾರತೀಯ ಶೈಲಿಯಲ್ಲೇ ಆಡಬೇಕೇ, ಅಥವಾ ಯುರೋಪಿಯನ್‌ ಮಾದರಿ ಆಟ ಅಳವಡಿಸಿಕೊಳ್ಳಬೇಕೇ ಎಂಬ ಗೊಂದಲದಿಂದ ಹೊರಬರಲು ದಶಕಗಳೇ ಕಳೆದರೂ ಸಾಧ್ಯವಾಗುತ್ತಿಲ್ಲ. ದೇಶಿ ಕೋಚ್‌ ಸಾಕೇ, ವಿದೇಶಿ ಕೋಚ್‌ ಅನಿವಾರ್ಯವೇ ಎಂಬ ಪ್ರಶ್ನೆಗೂ ಉತ್ತರ ಸಿಗುತ್ತಿಲ್ಲ. ವಿದೇಶಿ ಕೋಚ್‌ ವಿಫಲರಾದ ಸಂದರ್ಭದಲ್ಲಿ ದೇಶಿ ಕೋಚ್‌ ನೇಮಿಸುವುದು, ಮತ್ತೆ ಇದ್ದಕ್ಕಿದ್ದಂತೆ ವಿದೇಶಿ ಕೋಚ್‌ ತರುವುದು ಇಂಥವೇ ನಡೆಯುತ್ತಿವೆ. ಕೋಚ್‌ ಆಗಿ ಬಂದವರಿಗೂ ದೀರ್ಘಾವಧಿ ಚಿಂತನೆ, ಪ್ರಕ್ರಿಯೆ ರೂಪಿಸಲು, ತಂಡ ಕಟ್ಟಲು ಕಾಲಾವಕಾಶ ಕೊಡುವುದಿಲ್ಲ. ರಾತ್ರೋರಾತ್ರಿ ಯಶಸ್ವಿ ತಂಡ ಕಟ್ಟಬೇಕು ಎಂಬ ಒತ್ತಡ. ಕ್ರಿಕೆಟ್‌ನಂತೆ ತಂಡ ಕ್ರೀಡೆಯಾಗಿಯೂ, ವೈಯಕ್ತಿಕ ಸಾಹಸಗಳಿಗೆ ಅವಕಾಶವಿಲ್ಲದ, ನಾಯಕತ್ವವೆಂಬುದು ಕೇವಲ ಟಾಸ್‌ಗಷ್ಟೇ ಸೀಮಿತವಾದ ಹಾಕಿಯಂಥ ಕ್ರೀಡೆಗಳಲ್ಲಿ  ತರಬೇತುದಾರನಾದವನಿಗೆ ಫುಟ್‌ಬಾಲ್‌ ಮಾದರಿಯಲ್ಲಿ ಸರ್ವಾಧಿಕಾರ ಸಿಗಬೇಕು. ತಂಡದ ಆಟಗಾರರ ಆಯ್ಕೆ, ನಾಯಕತ್ವ ನಿರ್ಧಾರ, ರಣತಂತ್ರಗಳು ಇವೆಲ್ಲದರಲ್ಲೂ ತರಬೇತುದಾರನ ಪಾತ್ರ ಪ್ರಮುಖವಾಗಿರಬೇಕು. ಇದರಲ್ಲಿ ರಾಜಕೀಯ ಅಥವಾ ಬೇರಾವುದೇ ಬಗೆಯ ಹಸ್ತಕ್ಷೇಪ ಇರಬಾರದು. ಆದರೆ, ಭಾರತೀಯ ವ್ಯವಸ್ಥೆಯಲ್ಲಿ ಇಂಥದ್ದನ್ನೆಲ್ಲಾ ನಿರೀಕ್ಷಿಸಲೇ ಸಾಧ್ಯವಿಲ್ಲ.&lt;/div&gt;&lt;div&gt;ಸದ್ಯ ಆಸ್ಟ್ರೇಲಿಯಾ ಹಾಕಿ ತಂಡದ ಕೋಚ್‌ ಆಗಿರುವ ರಿಕ್‌ ಚಾರ್ಲ್ಸ್‌ವರ್ಥ್‌ ಇದೇ ಕಾರಣಕ್ಕೆ ಭಾರತದ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಸ್ಪೇನ್‌ನಿಂದ ತರಬೇತಿ ನೀಡಲು ಬಂದಿರುವ ಜೋಸ್‌ ಬ್ರಾಸಾರಿಗೂ ಅವರ ಅಪೇಕ್ಷೆಗಳನ್ನು ಪೂರೈಸಿಲ್ಲ. ಅವರ ಆಯ್ಕೆಯ ತಂಡ ಸಿಗಲಿಲ್ಲ. ವಿಶ್ವಕಪ್‌ನಲ್ಲಿ ಪ್ರಭ್ಜೋತ್‌ ಸಿಂಗ್‌ ನಾಯಕರಾಗಲಿ ಎಂಬ ಕೋಚ್‌ ಆಸೆಯೂ ನೆರವೇರಲಿಲ್ಲ. ವಿಶ್ವಕಪ್‌ ಟೂರ್ನಿಗೆ ಮುನ್ನ ಯುರೋಪಿನ ಪ್ರಬಲ ತಂಡಗಳ ವಿರುದ್ಧ  ಸೌಹಾರ್ದ ಸರಣಿ ಆಡುವ ಹಂಬಲವೂ ಈಡೇರಲಿಲ್ಲ. ನಾಲ್ಕಾರು ತಿಂಗಳ ಕೆಳಗೆ ಅರ್ಜೆಂಟೀನಾ ಪ್ರವಾಸ, ಚಾಂಪಿಯನ್ಸ್‌ ಚಾಲೆಂಜ್‌ ಟೂರ್ನಿ, ಬೆಲ್ಜಿಯಂ ವಿರುದ್ಧದ ಪಂದ್ಯಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅನುಭವಿಗಳಿಲ್ಲದ, ವಿಶ್ವಕಪ್‌, ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಇಲ್ಲದ, ಸೂಕ್ತ ಪೂರ್ವ ತಯಾರಿಯೂ ಇಲ್ಲದ ಭಾರತ ತಂಡ ವಿಶ್ವಕಪ್‌ನಲ್ಲಿ ತಯಾರಿಗೆ ತಕ್ಕಂತೆ ಆಡಿತು. ತಂಡವೀಗ ಏನೇ ಸಾಧನೆ ಮಾಡಿದರೂ, ಅದು 6ಕ್ಕಿಂತ ಕೆಳಗೆ ಮಾತ್ರ. 5 ಅಥವಾ 6ನೇ ಸ್ಥಾನ ಪಡೆದರೂ, ಅದೊಂದು ಪವಾಡವೇ ಸರಿ. ಹಾಗೆ ನೋಡಿದರೆ, ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಮೊದಲ ನಾಲ್ಕು ಸ್ಥಾನಗಳಿಗಷ್ಟೇ ಮಹತ್ವ. ಉಳಿದವೆಲ್ಲಾ ಬರೀ ಸಂಖ್ಯೆಗಳಷ್ಟೇ.&lt;/div&gt;&lt;div&gt;ಪ್ರಾಯಶಃ ಭಾರತೀಯ ಹಾಕಿಯ ಈ ದುರಂತ ಹೊಸ ಉದಯದ ಆರಂಭ ಎಂದು ಆಶಿಸಬೇಕಷ್ಟೇ. ನಾವು ನಾಳೆಗಳನ್ನು ಕಂಡವರಲ್ಲ. ಹಾಗಾಗಿ, ಬರುವ ನಾಳೆ ಉತ್ತಮವಾಗಿರಲಿ ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ.&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-332233336104419437?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/332233336104419437/comments/default' title='Post Comments'/><link rel='replies' type='text/html' href='http://ragaakshara.blogspot.com/2010/03/blog-post_08.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/332233336104419437'/><link rel='self' type='application/atom+xml' href='http://www.blogger.com/feeds/2998842447029730227/posts/default/332233336104419437'/><link rel='alternate' type='text/html' href='http://ragaakshara.blogspot.com/2010/03/blog-post_08.html' title='ಅಂತ್ಯವಲ್ಲ ಆರಂಭ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/S5U_Gk0u2RI/AAAAAAAAAK8/310WeVEIxyo/s72-c/PTI3_8_2010_000238B.JPG' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-3726723134327627465</id><published>2010-03-02T20:24:00.001+05:30</published><updated>2010-03-02T20:26:57.636+05:30</updated><title type='text'>`ಭಾರತ ರತ್ನ' ಆಗುವರೇ ಭಾರತದ ರತ್ನ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/S40nK20xPRI/AAAAAAAAAK0/nR5Nub1UI1o/s1600-h/sachinn9.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 241px;" src="http://4.bp.blogspot.com/_fosRdfQ3Hws/S40nK20xPRI/AAAAAAAAAK0/nR5Nub1UI1o/s400/sachinn9.JPG" border="0" alt="" id="BLOGGER_PHOTO_ID_5444050592029818130" /&gt;&lt;/a&gt;&lt;br /&gt;&lt;div&gt;&lt;br /&gt;&lt;/div&gt;&lt;div&gt;&lt;b&gt;ಕನಸುಗಳು ಹೂವಿನಂತೆ &lt;/b&gt;&lt;/div&gt;&lt;div&gt;&lt;b&gt;ಯೋಚನೆಗಳು ಹಾವಿನಂತೆ&lt;/b&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಕನಸು ಕಾಣುವ ಹಕ್ಕು ಹುಟ್ಟಿನಿಂದಲೇ ಎಲ್ಲರಿಗೂ ಸಿಕ್ಕಿರುತ್ತದೆ.&lt;/div&gt;&lt;div&gt;ಆದರೆ, ಕಂಡ ಕನಸೆಲ್ಲವೂ ನನಸಾಗುವುದು ಕಾಣುವವರ ಕೈಯಲ್ಲಿರುವುದಿಲ್ಲ.&lt;/div&gt;&lt;div&gt;ಮಕ್ಕಳು ತೆಂಡುಲ್ಕರ್‌, ದ್ರಾವಿಡ್‌ರಂತೆ ಆಗಲಿ ಎಂದು ಸಚಿನ್‌, ರಾಹುಲ್‌ ಎಂದು ಹೆಸರಿಟ್ಟಿರುತ್ತಾರೆ.&lt;/div&gt;&lt;div&gt;ಆದರೆ, ಭಾರತದಲ್ಲಿ ಸಚಿನ್‌ ಹೆಸರು ಹೊತ್ತ ಸಾವಿರಾರು ಮಕ್ಕಳು ಭವಿಷ್ಯದಲ್ಲಿ ತೆಂಡುಲ್ಕರ್‌ ಆಗುವುದಿಲ್ಲ. ಸಚಿನ್‌ ತೆಂಡುಲ್ಕರ್‌ ಯಾವತ್ತಿಗೂ ಒಬ್ಬರೇ.&lt;/div&gt;&lt;div&gt;ಹಾಗೆ ನೋಡಿದರೆ, ಯಾರೂ ಇನ್ನೊಬ್ಬರಂತೆ ಆಗಬೇಕಿಲ್ಲ. ನಾವು ನಾವೇ ಆಗಬೇಕು. ನಮ್ಮ ಸಾಧನೆಯಿಂದಲೇ ಸಮಾಜ ಗುರುತಿಸಬೇಕೇ ಹೊರತು ಇತರರ ಅನುಕರಣೆಯಿಂದಲ್ಲ.&lt;/div&gt;&lt;div&gt;ಇಂದು ಸಚಿನ್‌ ತೆಂಡುಲ್ಕರ್‌ ಎಂದರೆ, ಕೇವಲ ಅದೊಂದು ಹೆಸರಲ್ಲ, ಒಬ್ಬ ವ್ಯಕ್ತಿಯಲ್ಲ. &lt;/div&gt;&lt;div&gt;ಬದಲಿಗೆ ಸ್ಫೂರ್ತಿ, ಅಂತಃಶಕ್ತಿ, ಹೊಸ ಪೀಳಿಗೆಯ ಆಶೋತ್ತರಗಳಿಗೆ ದಾರಿದೀಪವಾಗಬಲ್ಲ ಜ್ಯೋತಿ. ಕ್ರಿಕೆಟ್‌ ಸಮಾಜದ ಕೀರ್ತಿ...&lt;/div&gt;&lt;div&gt;ತಗ್ಗು ಇರುವಲ್ಲಿ ನೀರು ಸಹಜವಾಗಿ ಹರಿಯುತ್ತದೆ.&lt;/div&gt;&lt;div&gt;ಸಚಿನ್‌ ಹಾಗೂ ದಾಖಲೆಗಳ ವಿಷಯವೂ ಹೀಗೆ.&lt;/div&gt;&lt;div&gt;ಸಚಿನ್‌ ಯಾವತ್ತಿದ್ದರೂ ಕ್ರಿಕೆಟ್‌ ಆಟವನ್ನು ಆನಂದಿಸಿದವರೇ ಹೊರತು ದಾಖಲೆಗಳಿಗಾಗಿ ಆಡಿದವರಲ್ಲ.&lt;/div&gt;&lt;div&gt;ಬದಲಿಗೆ ಅವರು ಕ್ರಿಕೆಟ್‌ ಆಡುತ್ತ ಆಡುತ್ತ ಸಾಗಿದಂತೆ ದಾಖಲೆಗಳೇ ಅವರನ್ನು ಹಿಂಬಾಲಿಸಿ ಬಂದಿವೆ.&lt;/div&gt;&lt;div&gt;ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಹ ಅಂಥ ಒಂದು ಸಾಧನೆ.&lt;/div&gt;&lt;div&gt;ಗರಿಷ್ಠ ಶತಕಗಳಿರಬಹುದು (ಏಕದಿನ- ಟೆಸ್ಟ್‌), ಗರಿಷ್ಠ ರನ್‌ ಗಳಿಕೆ ಇರಬಹುದು (ಏಕದಿನ- ಟೆಸ್ಟ್‌ಗಳಲ್ಲಿ), ಗರಿಷ್ಠ ಪಂದ್ಯಗಳು ಅಥವಾ ಇಂಥ ಇನ್ನೂ ಹತ್ತಾರು, ನೂರಾರು ದಾಖಲೆಗಳಿರಬಹುದು.... ಅವೆಲ್ಲಾ ಸಹಜವಾಗಿ ಸಚಿನ್‌ರನ್ನು ಅಲಂಕರಿಸಿವೆ. ಈ ಎಲ್ಲಾ ದಾಖಲೆಗಳು ಸಚಿನ್‌ ತೆಂಡುಲ್ಕರ್‌ ಎಂಬ ಅನುಪಮ ಆಟಗಾರನ ದೀರ್ಘ ಕಾಲದ ಬಾಳಿಕೆಯ ಸಂಕೇತ.&lt;/div&gt;&lt;div&gt;`ನಾವು ಹದಿನೈದು ವರ್ಷ ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಸಾಧ್ಯವಾದರೆ, ದಾಖಲೆಗಳು ಸಹಜವಾಗಿ ಒಲಿಯುತ್ತವೆ. ದಾಖಲೆ ನಿರ್ಮಿಸುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ನಿರಂತರವಾಗಿ ಅಷ್ಟು ಕಾಲ ಉನ್ನತ ಮಟ್ಟದ ಕ್ರಿಕೆಟ್‌ ಆಡುವುದೇ ದೊಡ್ಡದು' ಎಂದು ಟೆಸ್ಟ್‌ ಹಾಗೂ ಏಕದಿನ ಮಾದರಿಯಲ್ಲಿ 10 ಸಾವಿರ ರನ್‌ ಗಡಿ ದಾಟಿದ ಸಂದರ್ಭದಲ್ಲಿ ರಾಹುಲ್‌ ದ್ರಾವಿಡ್‌ ಹೇಳಿಕೊಂಡಿದ್ದರು. ಈ ಮಾತು ಅಕ್ಷರಶಃ ನಿಜ.&lt;/div&gt;&lt;div&gt;ಸಚಿನ್‌ 1989ರಿಂದ ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದಾರೆ. ಅವರ ಆಟಕ್ಕೆ ಆಗಾಗ ಗಾಯಗಳು ಮಾತ್ರ ತಡೆಯೊಡ್ಡಿವೆ. ಅಥವಾ ಸ್ವತಃ ವಿಶ್ರಾಂತಿ ಬಯಸಿ ಕೆಲವೊಂದು ಸರಣಿಗಳಿಂದ ಹಿಂದೆ ಸರಿದಿದ್ದಿದೆ. ಆದರೆ, ಫಿಟ್‌ ಆಗಿ ತಂಡದಲ್ಲಿರುವ ಸಂದರ್ಭದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಅವರ ಬದ್ಧತೆ ಪ್ರಶ್ನಾತೀತ. ಮೈದಾನದಲ್ಲಿರುವಾಗ ದಣಿವು ಅವರನ್ನು ಬಾಧಿಸುವುದಿಲ್ಲ. ಅವರನ್ನು ಕಾಡುವುದೇನಾದರೂ ಇದ್ದರೆ ಅದು ರನ್‌ ಹಸಿವು ಮಾತ್ರ. ಲೆಕ್ಕವಿಲ್ಲದಷ್ಟು ದೊಡ್ಡ ದೊಡ್ಡ ಇನಿಂಗ್ಸ್‌ಗಳನ್ನು ಆಡಿರುವ ಅವರು ಅಂಥ ಸಂದರ್ಭಗಳಲ್ಲಿ ರನ್ನರ್‌ ನೆರವು ಪಡೆದಿರುವಂಥ ನಿದರ್ಶನಗಳು ಬಹಳ ವಿರಳ. ಎಷ್ಟೋ ಬಾರಿ ರನ್ನರ್‌ ಸೌಲಭ್ಯವನ್ನು ಅವರು ನಿರಾಕರಿಸಿದ್ದಿದೆ. ಅವರ ಸಾಧನೆ ಅಷ್ಟರ ಮಟ್ಟಿಗೆ ಪರಿಪೂರ್ಣ; ಸ್ವ-ಪರಿಶ್ರಮದಿಂದಲೇ ಮೂಡಿಬಂದಿರುವಂಥದ್ದು.&lt;/div&gt;&lt;div&gt;ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿ-ಶತಕ ಸಾಧನೆ ಇನ್ನೂ ಸಚಿನ್‌ ಬ್ಯಾಟ್‌ನಿಂದ ಸಿಡಿದಿಲ್ಲ. ಆದರೆ, ಸದ್ಯದ  ಅವರ ಲಹರಿಯನ್ನು ಗಮನಿಸಿದರೆ, ಈ ವರ್ಷವೇ ಅಂಥ ಒಂದು ಸಾಧನೆ ಮೂಡಿಬಂದರೂ ಅಚ್ಚರಿಯೇನಿಲ್ಲ. ಸಚಿನ್‌ ಬಳಿ ದೊಡ್ಡ ಇನಿಂಗ್ಸ್‌ ಆಡುವುದಕ್ಕೆ ಅಗತ್ಯವಾದ ಸ್ಥಿರತೆ, ತಾಂತ್ರಿಕತೆ, ಸಹನಶೀಲತೆ, ದೈಹಿಕ ತ್ರಾಣ ಎಲ್ಲವೂ ಇದೆ. ಬಹುಶಃ ಅವರು ತ್ರಿ-ಶತಕಕ್ಕಾಗಿಯೇ ಆಡಿದ್ದರೆ, ಈವರೆಗಿನ ಐದು ದ್ವಿಶತಕಗಳಲ್ಲಿ ಯಾವುದೋ ಒಂದು 300ರ ಗಡಿ ದಾಟುವ ಸಾಧ್ಯತೆಯೂ ಇತ್ತು. ಆದರೆ, ಅವರೆಂದೂ ವೈಯಕ್ತಿಕ ಮೈಲಿಗಲ್ಲುಗಳಿಗಾಗಿ ಆಡುವವರಲ್ಲ.&lt;/div&gt;&lt;div&gt;ವೀರೇಂದ್ರ ಸೆಹ್ವಾಗ್‌ ಟೆಸ್ಟ್‌ ಪಂದ್ಯಗಳಲ್ಲಿ 2 ಬಾರಿ 300ರ ಗಡಿ ದಾಟಿದ್ದಾರೆ. 3ನೇ ಬಾರಿ ಹತ್ತಿರ ಬಂದಿದ್ದಾರೆ. ಏಕದಿನಗಳಲ್ಲೂ ದ್ವಿಶತಕದ ಸಾಧನೆ ಮೂಡುವುದಿದ್ದರೆ, ಅದು ಸೆಹ್ವಾಗ್‌ರಿಂದ ಸಾಧ್ಯ ಎಂಬ ನಂಬಿಕೆಯಿತ್ತು. ಆದರೆ, ಟೆಸ್ಟ್‌ ಪಂದ್ಯಗಳಲ್ಲಿ ಪ್ರದರ್ಶಿಸುವ ತಪಸ್ಸಿನಂಥ ತನ್ಮಯತೆಯ ಆಟ ಏಕದಿನಗಳಲ್ಲಿ ಅವರಿಂದ ಸಾಧ್ಯವಾಗಿಲ್ಲ. ಆದರೆ, ಸಚಿನ್‌ ಯಾವುದೇ ಮಾದರಿಗಳ ಭೇದವಿಲ್ಲದೆ ಆಡುವವರು. ಅವರು ಆಡುವಾಗ ಎದುರಾಳಿಗಳು, ಪಿಚ್‌ ಇವೆಲ್ಲವೂ ಗೌಣ. ಎಸೆತಗಳ ಯೋಗ್ಯತೆಗೆ ತಕ್ಕಂತೆ ಅವರ ಬ್ಯಾಟ್‌ನಿಂದ ಉಪಚಾರ ಸಿಗುತ್ತದೆ. &lt;/div&gt;&lt;div&gt;ಗ್ವಾಲಿಯರ್‌ನಲ್ಲೂ ಅಷ್ಟೇ. ಅಂದು ಸಚಿನ್‌ ಆಡಿದ್ದು ಅದೆಂಥಾ ಮೋಹಕ ಆಟ! ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ 350 ರನ್‌ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ 175 ರನ್‌ ಬಾರಿಸಿದ್ದು ಸಚಿನ್‌ರ ಶ್ರೇಷ್ಠ ಇನಿಂಗ್ಸ್‌ ಎಂದು ವಿಶ್ಲೇಷಕರು ಹೇಳಬಹುದು. ಆದರೆ, ಗ್ವಾಲಿಯರ್‌ನಲ್ಲಿ ಭಾರತೀಯರು ಮೊದಲ ಸರದಿಯಲ್ಲಿ ಬ್ಯಾಟಿಂಗ್‌ ಮಾಡಿದ್ದರು ಎಂಬ ಅಂಶ ಬಿಟ್ಟರೆ, ವಿಶ್ವದ ನಂ.1 ವೇಗಿ ಡೇಲ್‌ ಸ್ಟೈನ್‌ರನ್ನೊಳಗೊಂಡ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್‌ ಆಟ ಉತ್ಕೃಷ್ಟ ಗುಣಮಟ್ಟದ್ದಾಗಿತ್ತು. ಜೀವದಾನಗಳ ನೆರವಿಲ್ಲದ ನಿಷ್ಕಳಂಕ ಆಟವಾಗಿತ್ತು.&lt;/div&gt;&lt;div&gt;ಹಾಗೆ ನೋಡಿದರೆ, ಏಕದಿನ ಮಾದರಿಗಿಂತ ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸುವುದು ಸುಲಭ. ಏಕೆಂದರೆ, ಅಲ್ಲಿ ಬ್ಯಾಟ್ಸ್‌ಮನ್‌ ನೆತ್ತಿಯ ಮೇಲೆ ಸಮಯದ ಕತ್ತಿ ತೂಗುತ್ತಿರುವುದಿಲ್ಲ. ಏನೇ ಸಾಹಸವಿದ್ದರೂ, 50 ಓವರ್‌ಗಳಲ್ಲೇ ಮುಗಿಸಬೇಕು ಎಂಬ ಪರಿಮಿತಿ ಇರುವುದಿಲ್ಲ. ಉಸಿರು ತೆಗೆದುಕೊಳ್ಳಲು ವ್ಯವಧಾನವಿಲ್ಲದಂತೆ ಬಿಡುವಿಲ್ಲದೆ ಆಬೇಕಾದ ಅನಿವಾರ್ಯವಿರುವುದಿಲ್ಲ. ಟೆಸ್ಟ್‌ ಪಂದ್ಯಗಳಲ್ಲಿ  ಬ್ಯಾಟ್ಸ್‌ಮನ್‌ಗಳು ತಮ್ಮದೇ ವೈಯಕ್ತಿಕ ರನ್‌ಗಳಿಗಾಗಿ ಎಷ್ಟು ಹೊತ್ತು ಬೇಕಾದರೂ ಆಡಿಕೊಳ್ಳಬಹುದು. ನಿರಂತರವಾಗಿ 5-6 ಓವರ್‌ಗಳಲ್ಲಿ ರನ್‌ ಗಳಿಸದೆ ಇದ್ದರೂ ಅದರಿಂದ ಅಂಥ ಸಮಸ್ಯೆಯೇನೂ ಎದುರಾಗುವುದಿಲ್ಲ. ಜೊತೆಯಲ್ಲಿರುವ ಇನ್ನೊಬ್ಬ ಬ್ಯಾಟ್ಸ್‌ಮನ್‌ ಸಲುವಾಗಿ ಚುರುಕು ಒಂಟಿ ರನ್‌ಗಳನ್ನು ಓಡಿ ಸುಸ್ತು ಹೊಡೆಯುವ ಪ್ರಮೇಯವೂ ಇರುವುದಿಲ್ಲ. ಜೊತೆಗೆ ಪಾನೀಯ, ಭೋಜನ, ಚಹಾ ವಿರಾಮದಂಥ ಬಿಡುವುಗಳು ಆಟಗಾರನಿಗೆ ಚೈತನ್ಯ ಮರಳಿ ಪಡೆದುಕೊಳ್ಳಲು ನೆರವಾಗುತ್ತವೆ. ಈ ಎಲ್ಲಾ ದೃಷ್ಟಿಕೋನದಿಂದ ನೋಡುವಾಗ ಟೆಸ್ಟ್‌ ಮಾದರಿಯಲ್ಲಿ ದ್ವಿಶತಕ ಬಾರಿಸುವುದಕ್ಕೂ, ಏಕದಿನ ಮಾದರಿಯಲ್ಲಿ ದ್ವಿಶತಕ ಬಾರಿಸುವುದಕ್ಕೂ ಅಗಾಧ ವ್ಯತ್ಯಾಸವಿದೆ. ಹಾಗೆಂದೇ, ಟೆಸ್ಟ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಆಟಗಾರರು 200 ರನ್‌ ಗಡಿ ದಾಟಿದ್ದಾರೆ. ಏಕದಿನಗಳಲ್ಲಿ ಮಾತ್ರ ಸಚಿನ್‌ ಒಬ್ಬರೇ.&lt;/div&gt;&lt;div&gt;ಸಚಿನ್‌ ಭಾರತವನ್ನು ಪ್ರತಿನಿಧಿಸುವ ಓರ್ವ ಕ್ರೀಡಾಪಟು ಮಾತ್ರವೇ ಅಲ್ಲ. ಅವರೊಬ್ಬ ಆದರ್ಶ ಪುರುಷ. ಕ್ರಿಕೆಟ್‌ನ ನಿಜವಾದ ಜೆಂಟಲ್‌ಮ್ಯಾನ್‌. ನಿಜ ಅರ್ಥದಲ್ಲಿ ಕ್ರೀಡೆಯ ರಾಯಭಾರಿ.&lt;/div&gt;&lt;div&gt;ಅವರ ಒಂದೊಂದು ರನ್‌ಗಳು ದೇಶದ ಮುಖವನ್ನು ಅರಳಿಸುತ್ತವೆ.  ಅವರ ಹೊಸ ಹೊಸ ದಾಖಲೆಗಳು, ಶತಕಗಳು, ಭಾರತೀಯರು ಸಂಭ್ರಮಿಸುವುದಕ್ಕೆ ಕಾರಣ ಕಟ್ಟಿಕೊಡುತ್ತವೆ. ಹೊಸ ಪೀಳಿಗೆ ಡಾನ್‌ ಬ್ರಾಡ್ಮನ್‌ ಆಟವನ್ನು ನೋಡಿಲ್ಲ. ಕೇವಲ ಟೆಸ್ಟ್‌ ಕ್ರಿಕೆಟ್‌ ಮಾತ್ರ ಆಡಿರುವ, ಬಹುಪಾಲು ಇಂಗ್ಲೆಂಡ್‌ ವಿರುದ್ಧ ಮಾತ್ರ ಆಡಿರುವ ಬ್ರಾಡ್ಮನ್‌ 59 ಟೆಸ್ಟ್‌ಗಳಲ್ಲಿ 29 ಶತಕ ಬಾರಿಸಿರುವ ಕಾರಣಕ್ಕೆ, 99.99 ಸರಾಸರಿ ಹೊಂದಿರುವ ಕಾರಣಕ್ಕೆ ಅವರನ್ನು ಸರ್ವಶ್ರೇಷ್ಠ ಎಂದು ಹೊಗಳುತ್ತಿದ್ದೇವೆ. ಆದರೆ, ಕಣ್ಣಿಗೆ ಕಾಣದ ದೇವರನ್ನು ಮೆಚ್ಚಿಕೊಳ್ಳುವುದಕ್ಕಿಂತ, ಕಣ್ಣೆದುರಿಗೇ ಇರುವ ದೇವರನ್ನು ಆರಾಧಿಸುವುದರಲ್ಲಿ ಅರ್ಥವಿದೆ.&lt;/div&gt;&lt;div&gt;ಬ್ರಾಡ್ಮನ್‌ ಕಾಲದಲ್ಲಿ ಈಗಿನಂತೆ ಹೆಲ್ಮೆಟ್‌ ಇರಲಿಲ್ಲ, ಇತರ ರಕ್ಷಣಾಸಾಧನಗಳು ಇರಲಿಲ್ಲ. ಭಯಾನಕ ವೇಗಿಗಳು, ಭಯಾನಕ ಪಿಚ್‌ಗಳಲ್ಲಿ ಆಡುತ್ತಿದ್ದರು ಎಲ್ಲವೂ ಸರಿ. ಆದರೆ, ತಂತ್ರಜ್ಞಾನ ಬೆಳೆದಂತೆ, ಸವಾಲುಗಳ ಸ್ವರೂಪವೂ ಬದಲಾಗಿದೆ. ಹಿಂದೆಲ್ಲಾ ವರ್ಷದಲ್ಲಿ ಹೆಚ್ಚೆಂದರೆ, ಮೂರ್ನಾಲ್ಕು ತಿಂಗಳು ಕ್ರಿಕೆಟ್‌ ಆಡುತ್ತಿದ್ದರು. ಈಗ ವರ್ಷದಲ್ಲಿ ಮೂರು ತಿಂಗಳ ವಿಶ್ರಾಂತಿಯೂ ಸಿಗುವುದಿಲ್ಲ. ವರ್ಷಂಪೂರ್ತಿ ವಿಶ್ವಪರ್ಯಟನೆ, ವಿಶ್ವದ ವಿವಿಧ ದೇಶ, ಹವಾಮಾನ, ಪಿಚ್‌ಗಳಲ್ಲಿ ಆಡುವ ಸವಾಲು ಸುಲಭದ್ದೇನಲ್ಲ. ತಂತ್ರಜ್ಞಾನಗಳ ಬಳಕೆ ಹೆಚ್ಚಾದಷ್ಟೂ ಬ್ಯಾಟಿಂಗ್‌ ಮಾಡುವುದು ಕಠಿಣವಾಗಿದೆ. ಬ್ಯಾಟ್ಸ್‌ಮನ್‌ ಮಾಡುವ ಸಣ್ಣ ಪ್ರಮಾದಗಳೂ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವುದರಿಂದ ತಂತ್ರಜ್ಞಾನದ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಹಿಂದೆಲ್ಲಾ ಹೀಗಿರಲಿಲ್ಲ. ಹಾಗಾಗಿ ವರ್ತಮಾನದಲ್ಲಿ ಬ್ಯಾಟ್ಸ್‌ಮನ್‌ಗಳು ಔಟಾಗುವ ಸಾಧ್ಯತೆ ಮೊದಲಿಗಿಂತ ದುಪ್ಪಟ್ಟು ಜಾಸ್ತಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಅತ್ಯುತ್ತಮರು ಮಾತ್ರ ಬಚಾವಾಗುವ ಸನ್ನಿವೇಶದಲ್ಲಿ, ನಿರಂತರವಾಗಿ, ಸ್ಥಿರವಾಗಿ ಕ್ರಿಕೆಟ್‌ ಆಡುವುದು ಕಷ್ಟದ ಕೆಲಸ. ಇಂಥ ಎಲ್ಲಾ ಸವಾಲುಗಳ ನಡುವೆಯೂ ಸಚಿನ್‌ ಅದ್ವಿತೀಯರಾಗಿ ಎತ್ತರಕ್ಕೆ ಬೆಳೆದು ನಿಂತಿರುವುದು ಅವರಿಗೆ ಸಾರ್ವಕಾಲಿಕ ಪಟ್ಟ ಕಟ್ಟಲು ಕಾರಣ.&lt;/div&gt;&lt;div&gt;ಸಚಿನ್‌ ಕ್ರಿಕೆಟ್‌ನಲ್ಲಿ ಅಷ್ಟೇ ಏಕೆ ಕ್ರೀಡಾ ಕ್ಷೇತ್ರದಲ್ಲೇ ಭಾರತದ ರತ್ನ ಎನ್ನುವುದರಲ್ಲಿ  ಎರಡು ಮಾತಿಲ್ಲ. ಇಂಥ ಅನರ್ಘ್ಯ ರತ್ನಕ್ಕೆ ಭಾರತ ಸರ್ಕಾರದ ಸರ್ವೋಚ್ಚ ನಾಗರಿಕ ಪುರಸ್ಕಾರ `ಭಾರತ ರತ್ನ' ದೊರೆಯಬಹುದೇ? ಸಚಿನ್‌ ಅದಕ್ಕೆ ಅರ್ಹರು ಎಂಬ ವಿಷಯದಲ್ಲಿ ಯಾರೂ ಆಕ್ಷೇಪವೆತ್ತುವುದಿಲ್ಲ. ಈಗಾಗಲೇ ಕಪಿಲ್‌ ದೇವ್‌, ವಾಡೇಕರ್‌ರಂಥ ದಿಗ್ಗಜರು ಲಿಟ್ಲ್‌ ಮಾಸ್ಟರ್‌ಗೆ ಭಾರತ ರತ್ನ ಸಿಗಲಿ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಚಿನ್‌ ಹೆಸರನ್ನು ಈ ಪುರಸ್ಕಾರಕ್ಕಾಗಿ ಶಿಫಾರಸು ಮಾಡಿದೆ. ಬಹುಶಃ ದೇಶದ ಅತ್ಯಂತ ಕಿರಿಯ ವಯಸ್ಸಿನ `ಭಾರತ ರತ್ನ' ಎಂಬ ಹೆಗ್ಗಳಿಕೆಗೆ ತೆಂಡುಲ್ಕರ್‌ ಪಾತ್ರರಾಗುವ ದಿನ ದೂರವಿಲ್ಲ.&lt;/div&gt;&lt;div&gt;ಆ ದಿನ ಇಡೀ ಭಾರತಕ್ಕೆ ಭಾರತವೇ ಸಂಭ್ರಮಿಸಲಿದೆ.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-3726723134327627465?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/3726723134327627465/comments/default' title='Post Comments'/><link rel='replies' type='text/html' href='http://ragaakshara.blogspot.com/2010/03/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/3726723134327627465'/><link rel='self' type='application/atom+xml' href='http://www.blogger.com/feeds/2998842447029730227/posts/default/3726723134327627465'/><link rel='alternate' type='text/html' href='http://ragaakshara.blogspot.com/2010/03/blog-post.html' title='`ಭಾರತ ರತ್ನ&apos; ಆಗುವರೇ ಭಾರತದ ರತ್ನ!'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/S40nK20xPRI/AAAAAAAAAK0/nR5Nub1UI1o/s72-c/sachinn9.JPG' height='72' width='72'/><thr:total>2</thr:total></entry><entry><id>tag:blogger.com,1999:blog-2998842447029730227.post-4404374747362914858</id><published>2010-02-09T16:20:00.002+05:30</published><updated>2010-02-09T16:21:37.938+05:30</updated><title type='text'>ಮನದ ಸೆಳೆತದ ಮಾಯೆಗೆ ಸಿಲುಕಿ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_fosRdfQ3Hws/S3E-JD93rGI/AAAAAAAAAKs/KwBZRg35H1c/s1600-h/desire_1_600.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 184px;" src="http://3.bp.blogspot.com/_fosRdfQ3Hws/S3E-JD93rGI/AAAAAAAAAKs/KwBZRg35H1c/s400/desire_1_600.jpg" alt="" id="BLOGGER_PHOTO_ID_5436194550617451618" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಆಸೆಯೇ ದುಃಖಕ್ಕೆ ಮೂಲ.&lt;br /&gt;ಇಲ್ಲದ ವಸ್ತುವಿಗಾಗಿ ಹಂಬಲಿಸುವುದು ಆಸೆ.&lt;br /&gt;ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ತುಡಿಯುವುದು ಅತೃಪ್ತಿ.&lt;br /&gt;ಆದರೆ, ಈ ಪ್ರಪಂಚವೇ ಅತೃಪ್ತಾತ್ಮಗಳ ಕೊಂಪೆ.&lt;br /&gt;ಇಲ್ಲಿ ಯಾರಿಗೂ ತೃಪ್ತಿ ಇಲ್ಲ. ಸಮಾಧಾನವಿಲ್ಲ.&lt;br /&gt;ತಮಗೇ ಬೇಕಾಗಿರುವುದಾದರೂ ಏನೆಂದು ಸ್ಪಷ್ಟವಾಗಿ ಗೊತ್ತಿಲ್ಲ.&lt;br /&gt;ಒಂದು ಅತೃಪ್ತಿಯಿಂದ ಇನ್ನೊಂದು ಅತೃಪ್ತಿಯ ಕಡೆಗೆ ತೆವಳುವುದೇ ಜೀವನ.&lt;br /&gt;ಆದರೆ, ಈ ಕಾಮನೆಗಳು ಬಹಳ ಅಪಾಯಕಾರಿ, ವಿಧ್ವಂಸಕಾರಿ.&lt;br /&gt;ಕಾಮನೆಗಳ ವಿಧವೂ ಸಾವಿರಾರು.&lt;br /&gt;ಇವುಗಳ ಪೈಕಿ ಬೇರೆಲ್ಲಾ ಬಯಕೆಗಳನ್ನು ಹತ್ತಿಕ್ಕ ಬಹುದು.&lt;br /&gt;ಆದರೆ, ಕಾಮದ ಭೂತ ಬೆನ್ನು ಹತ್ತಿದರೆ, ಅದರ ಗಮ್ಯ ಎಲ್ಲಿ, ಹೇಗೆ ಎಂದು ಊಹಿಸುವುದೂ ಅಸಾಧ್ಯ.&lt;br /&gt;ಕಾಮಾತುರಾಣಾಂ ನ ಭಯಂ ನ ಲಜ್ಜಾ.&lt;br /&gt;ಕಾಮದ ಬೆಂಕಿಯಲ್ಲಿ ಬೇಯುತ್ತಿರುವಾತನಿಗೆ ಯಾವ ಭಯ, ನಾಚಿಕೆಯೂ ಕಾಡುವುದಿಲ್ಲ. ಅದೆಲ್ಲಾ ಶುರುವಾಗುವುದು ವಾಂಛೆ ಈಡೇರಿದ ಮೇಲೆ.&lt;br /&gt;ಕಾಮಕ್ಕೆ ಮೈ-ಮನಸ್ಸು-ಬುದ್ಧಿ ಒಪ್ಪಿಸಿದ ಸಂದರ್ಭ ದಲ್ಲಿ ಭಯ, ಮುಜುಗರ, ಘನತೆ, ವರ್ಚಸ್ಸಿನ ಯೋಚನೆ  ಇರುವುದಿಲ್ಲ.&lt;br /&gt;ಎಲ್ಲವೂ ನಿಧಾನವಾಗಿ ನೆನಪಾಗುತ್ತದೆ.&lt;br /&gt;ಪಟ್ಟ ಸುಖವೆಲ್ಲಾ ಕರಗಿದ ಮೇಲೆ, ಮಾಡಿದ ಕೃತ್ಯ ಬೇರೆಯವರಿಗೆ ಗೊತ್ತಾಗದಂತೆ ಮುಚ್ಚಿಡುವ ಪ್ರಯತ್ನಗಳು ನಡೆಯುತ್ತವೆ.&lt;br /&gt;ಆದರೆ, ಅದೆಲ್ಲಾ ಅಷ್ಟು ಸುಲಭವಾಗಿದ್ದರೆ ಜಾನ್‌ ಟೆರ್ರಿ ಇಂಗ್ಲೆಂಡ್‌ ಫುಟ್‌ಬಾಲ್‌ ತಂಡದ ನಾಯಕತ್ವ ಕಳೆದುಕೊಳ್ಳುತ್ತಲೇ ಇರಲಿಲ್ಲ.&lt;br /&gt;ಟೈಗರ್‌ ವುಡ್ಸ್‌ ತಲೆ ತಗ್ಗಿಸುವ ಪ್ರಮೇಯ ಒದಗುತ್ತಲೇ ಇರಲಿಲ್ಲ.&lt;br /&gt;ಟೈಗರ್‌ ವುಡ್ಸ್‌ ಅವರ ವಿವಾಹಬಾಹಿರ ಸಂಬಂಧ ಗಳ ಸಂಖ್ಯೆ 19ಕ್ಕೇರಿದೆ. ಲೈಂಗಿಕ ವ್ಯಸನದಿಂದ ಮುಕ್ತ ರಾಗಲು ಅವರು 6 ವಾರ ಕಾಲ ಚಿಕಿತ್ಸೆಯನ್ನೂ ಪಡೆದು ಬಂದಿದ್ದಾರೆ.&lt;br /&gt;ಇದುವರೆಗೆ ಇಂಗ್ಲೆಂಡ್‌ನ ಅತ್ಯಂತ ಗೌರವಾನ್ವಿತ ಫುಟ್‌ಬಾಲ್‌ ಆಟಗಾರನೆನಿಸಿದ್ದ ಜಾನ್‌ ಟೆರ್ರಿಯ ಅನೈತಿಕ ಸಂಬಂಧಗಳ ಸಂಖ್ಯೆ     ಟೈಗರ್‌ ಬೇಟೆಯನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.&lt;br /&gt;ಹಾಗೆ ನೋಡಿದರೆ, ಇವರಿಬ್ಬರೂ ಸಮಾಜದ ದೃಷ್ಟಿ ಯಲ್ಲಿ ಸಂತೃಪ್ತ ವೈವಾಹಿಕ ಜೀವನ ನಡೆಸುತ್ತಿದ್ದವರು. ಸಾರ್ವಜನಿಕವಾಗಿ ಬಹಳ ಸಭ್ಯತೆಯ ಹೊದಿಕೆ ಹೊದ್ದುಕೊಂಡಿದ್ದವರು.&lt;br /&gt;ಆದರೂ, ಇವರು ದಾರಿ ತಪ್ಪಿದ್ದಾದರೂ ಹೇಗೆ?&lt;br /&gt;ಪಾಶ್ಚಾತ್ಯ ಜೀವನಶೈಲಿಯಲ್ಲಿ ಇದೆಲ್ಲಾ ಮಾಮೂಲು ಎನ್ನುವುದು ಭಾರತೀಯರ ಗ್ರಹಿಕೆ. ಹಾಗೆಂದು, ಆ ರಾಷ್ಟ್ರಗಳಲ್ಲಿ ಎಷ್ಟೇ ಸ್ವಚ್ಛಂದ ಪ್ರವೃತ್ತಿ ಇದ್ದರೂ ಅನೈತಿಕ ಸಂಬಂಧಗಳು ಮಾನ್ಯವಲ್ಲ ಎನ್ನುವುದಕ್ಕೆ ಅಲ್ಲಿನ ವಿಚ್ಛೇದನಗಳ ಸಂಖ್ಯೆಯೇ ಜಾಸ್ತಿ. ಭಾರತದಲ್ಲಿನ ವಿಚ್ಛೇದನಗಳಿಗೆ ಹೊಂದಾಣಿಕೆಯ ಕೊರತೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮತ್ತಿತರ ಕಾರಣ ಗಳೇ ಪ್ರಮುಖವಾಗಿದ್ದರೆ, ವಿದೇಶಗಳಲ್ಲಿ ವಿವಾಹ ಬಾಹಿರ ಸಂಬಂಧಗಳೇ ಮದುವೆ ಮುರಿಯಲು ಮುಖ್ಯ ಕಾರಣವಾಗಿರುತ್ತವೆ.&lt;br /&gt;ಹಾಗಾದರೆ, ಅಷ್ಟೊಂದು ಚಂಚಲವೇ ಆ ಜನರ ಮನಸ್ಸು?&lt;br /&gt;ಆದರೆ, ಒಂದು ವಿಷಯ ನಿಜ.&lt;br /&gt;ಕ್ರೀಡಾಪಟುಗಳಿಗೆ ಉಳಿದವರಿಗಿಂತ ಹೆಚ್ಚಾಗಿ ಇಂಥ ಲೈಂಗಿಕ ಸಾಹಸಯಾನ ಕೈಗೊಳ್ಳುವ ಅವಕಾಶ ಒದಗಿ ಬರುತ್ತದೆ.&lt;br /&gt;ಇದಕ್ಕೆ ಕಾರಣ ಅವರು ವರ್ಷದ ಬಹುಭಾಗ ಕುಟುಂಬದಿಂದ ದೂರವಿರುತ್ತಾರೆ. ಪ್ರವಾಸದಲ್ಲಿರು ತ್ತಾರೆ. ಅವರ ಸೆಲೆಬ್ರಿಟಿ ವರ್ಚಸ್ಸಿನಿಂದಾಗಿ ಅವರು ಹೋದಲ್ಲೆಲ್ಲಾ ಹುಡುಗಿಯರು ಮುತ್ತಿಕೊಳ್ಳುತ್ತಾರೆ. ಬಯಸದೆ ಬಂದ ಭಾಗ್ಯವನ್ನು ನಿರಾಕರಿಸುವಷ್ಟು ಸ್ಥಿತಪ್ರಜ್ಞ ಬುದ್ಧಿಯೂ ಇವರಿಗಿರುವುದಿಲ್ಲ. ಹಾಗಾಗಿ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತದೆ.&lt;br /&gt;ಟೈಗರ್‌ ವುಡ್ಸ್‌ ಮತ್ತು ಜಾನ್‌ ಟೆರ್ರಿ ಪ್ರಕರಣದ ನಂತರದ ದಿನಗಳಲ್ಲಿ ಇನ್ನೂ ಒಂದು ಬೆಳವಣಿಗೆಯನ್ನು ಗಮನಿಸಬಹುದು.&lt;br /&gt;ಕ್ರೀಡಾ ಸೆಲೆಬ್ರಿಟಿಗಳೊಂದಿಗೆ ಸಂಬಂಧವಿಟ್ಟುಕೊಂಡ ಮಹಿಳೆಯರಿಗೆ ತಮ್ಮ ಗುಟ್ಟು ರಟ್ಟಾದ ಬಗ್ಗೆ ಬೇಸರವಾಗಲೀ, ನೋವಾಗಲೀ ಇಲ್ಲ.&lt;br /&gt;ಬದಲಿಗೆ ಅದರಿಂದ ದೊರೆತ ಪ್ರಚಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಷ್ಟೇ ಅವರ ಹವಣಿಕೆ. ಇವರ ಪೈಕಿ ಎಷ್ಟೋ ಮಂದಿ ತಮ್ಮ ಸಂಬಂಧದ ಕಥೆಗಳನ್ನು ಚರ್ವಿತಚರ್ವಣವಾಗಿ ರೋಚಕಗೊಳಿಸಿ ಪತ್ರಿಕೆಗಳಿಗೆ, ವೆಬ್‌ಸೈಟ್‌ಗಳಿಗೆ ಮಾರಿದ್ದಾರೆ. ಇನ್ನು ಕೆಲವರಿಗೆ ಬಾಯಿ ಬಿಡದಂತೆ ಆಟಗಾರರೇ ಹಣ ಕೊಟ್ಟಿದ್ದಾರೆ. ಕ್ರೀಡಾ ಸೆಲೆಬ್ರಿಟಿಗಳೊಂದಿಗೆ ಸಂಬಂಧ ಬೆಳೆಸಿ, ನಂತರ ಆ ವಿಷಯವನ್ನು `ಮಾರುವ' ಮೂಲಕ ಶ್ರೀಮಂತ ವಾಗುವ ಒಂದು ವರ್ಗವೇ ಪಶ್ಚಿಮದಲ್ಲಿ ಬೆಳೆಯುತ್ತಿದೆ ಎನ್ನುವುದು ಇದರಿಂದ ವೇದ್ಯ.&lt;br /&gt;ಪ್ರಚೋದನೆಗಳು ಏನೇ ಇದ್ದರೂ, ಕ್ರೀಡೆಯಲ್ಲಿ ಎತ್ತರಕ್ಕೇರುವವರು ನೈತಿಕವಾಗಿ ಪಾತಾಳಕ್ಕೆ ಬೀಳುವುದೇಕೆ?&lt;br /&gt;ದಿಢೀರ್‌ ಪ್ರಖ್ಯಾತಿ, ಶ್ರೀಮಂತಿಕೆ ತಮ್ಮ ಇರುವನ್ನು ಮರೆಸುತ್ತವೆ. ಸಾಧಾರಣ ಹಿನ್ನೆಲೆಯಿಂದ ಬಂದು, ಇದ್ದಕ್ಕಿದ್ದಂತೆಯೇ ಸೆಲೆಬ್ರಿಟಿಗಳಾದವರಿಗೆ ತಮ್ಮ ಜನಪ್ರಿಯತೆಯನ್ನು ನಿರ್ವಹಿಸಲು ಸಾಧ್ಯವಾಗುವು ದಿಲ್ಲ. ಏರಿದವನು, ಕೆಳಗಿಳಿಯಲೇ ಬೇಕು ಎಂಬ ಪ್ರಕೃತಿ ನಿಯಮವನ್ನು ಅವರು ಮರೆಯುತ್ತಾರೆ. ಆ ಕ್ಷಣದ ಸುಖಲೋಲುಪತೆಯಲ್ಲಿ ಮೈಮರೆಯುವ ಅವರಿಗೆ ತಮ್ಮ ತಪ್ಪಿನ ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ.&lt;br /&gt;ಬಹುತೇಕ ಯಶಸ್ವಿ ಕ್ರೀಡಾಪಟುಗಳದ್ದು ವಿಫಲ ದಾಂಪತ್ಯ (ಕೆಲವರನ್ನು ಹೊರತು ಪಡಿಸಿ, ಭಾರತೀಯ ಕ್ರೀಡಾ ಪಟುಗಳು ಈ ವಿಷಯದಲ್ಲಿ ಅಪವಾದ). ಕ್ರಿಕೆಟ್‌ನ ಶೇನ್‌ ವಾರ್ನ್‌, ಬ್ರೆಟ್‌ ಲೀಯಿಂದ, ಫುಟ್‌ ಬಾಲ್‌ನ ರೊನಾಲ್ಡೊ, ರೊನಾಲ್ಡಿನೊ, ಥಿಯರಿ ಹೆನ್ರಿ, ಡೀಗೊ ಮರಡೋನ, ಟೆನಿಸ್‌ನ ಬೋರಿಸ್‌ ಬೆಕ್ಕರ್‌, ಸೈಕ್ಲಿಂಗ್‌ನ ಲ್ಯಾನ್ಸ್‌ ಆರ್ಮ್‌ಸ್ಟ್ರಾಂಗ್‌ ಇವರೆಲ್ಲರೂ ವಿಚ್ಛೇದನದ ಬಾಗಿಲು ದಾಟಿದವರು. ರೊನಾಲ್ಡೊ ಬೆಲೆವೆಣ್ಣುಗಳೆಂದು ಹಿಜ್ರಾಗಳೊಂದಿಗೆ ಚಕ್ಕಂದ ವಾಡಲು ಹೋಗಿ ಮುಜುಗರ ಅನುಭವಿಸಿದ್ದರು. ಟೈಗರ್‌ ವುಡ್ಸ್‌, ಥಿಯರಿ ಹೆನ್ರಿ ಇವರೆಲ್ಲರ ಅನೈತಿಕ ಸಂಬಂಧಗಳು ಬಯಲಾಗಿದ್ದು, ಅವರವರ ಮೊಬೈಲ್‌ನಿಂದ. ಶೇನ್‌ ವಾರ್ನ್‌ರಂತೂ ಅಶ್ಲೀಲ ಎಸ್ಸೆಮ್ಮೆಸ್‌ ಕಳಿಸುವುದರಲ್ಲಿ ನಿಸ್ಸೀಮ. ಅವರು ಪ್ರೇಯಸಿಗೆಂದು ಕಳಿಸಿದ ಎಸ್ಸೆಮ್ಮೆಸ್‌ ಹೆಂಡತಿಗೆ ತಲುಪಿ ಸಿಕ್ಕಿಬಿದ್ದಿದ್ದರು. ನ್ಯೂಜಿಲೆಂಡ್‌ ಕ್ರಿಕೆಟಿಗ ಡರೆಲ್‌ ಟಫಿ ಲೈಂಗಿಕ ಚಿತ್ರವೊಂದರಲ್ಲಿ ನಟಿಸಿ ನಗೆಪಾಟಲಿ ಗೀಡಾಗಿದ್ದರು. ಹರ್ಷಲ್‌ ಗಿಬ್ಸ್‌ ವಿಚ್ಛೇದನಕ್ಕೂ ಅವರ ನಡತೆ ಬಗ್ಗೆ ಹೆಂಡತಿಗೆ ಅನುಮಾನ ಬಂದಿದ್ದೇ ಕಾರಣ.&lt;br /&gt;ಜನ ಕ್ರೀಡಾಪಟುಗಳನ್ನು ಆರಾಧಿಸುವುದಕ್ಕೆ ಕಾರಣ ಮೈದಾನದಲ್ಲಿನ ಅವರ ಕೌಶಲ್ಯ. ಮೈದಾನದಿಂದ ಆಚೆಗೆ ಅವರು ಏನೆಲ್ಲಾ ಮಾಡುತ್ತಾರೆನ್ನುವುದು ಅವರ ವೈಯಕ್ತಿಕ. ಆದರೂ, ಸೆಲೆಬ್ರಿಟಿಗಳಿಗೆ ಖಾಸಗಿ ಜೀವನವೆಂಬುದಿರುವುದಿಲ್ಲ ಎಂಬುದೂ ಸತ್ಯ.&lt;br /&gt;ಯಶಸ್ವಿ ಕ್ರೀಡಾಪಟುವಿನ ಹಿಂದೆ ಅದೆಷ್ಟೋ ಮಂದಿಯ ತ್ಯಾಗ, ಪರಿಶ್ರಮವಿರುತ್ತದೆ. ಯಶಸ್ಸಿಗೆ ನೂರಾರು ನೆಂಟರು. ಕಳಂಕ ಯಾವಾಗಲೂ ಒಂಟಿ. ಇದನ್ನು ಅರಿತವರು ತಪ್ಪು ಹೆಜ್ಜೆ ಇಡುವುದಿಲ್ಲ.&lt;br /&gt;ಕ್ರೀಡೆಯಲ್ಲಿ ಅಂಥ ನಿಷ್ಕಳಂಕ ಕ್ರೀಡಾಪಟುಗಳ ಸಂಖ್ಯೆಯೂ ಕಡಿಮೆ ಏನಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-4404374747362914858?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/4404374747362914858/comments/default' title='Post Comments'/><link rel='replies' type='text/html' href='http://ragaakshara.blogspot.com/2010/02/blog-post_09.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/4404374747362914858'/><link rel='self' type='application/atom+xml' href='http://www.blogger.com/feeds/2998842447029730227/posts/default/4404374747362914858'/><link rel='alternate' type='text/html' href='http://ragaakshara.blogspot.com/2010/02/blog-post_09.html' title='ಮನದ ಸೆಳೆತದ ಮಾಯೆಗೆ ಸಿಲುಕಿ...'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_fosRdfQ3Hws/S3E-JD93rGI/AAAAAAAAAKs/KwBZRg35H1c/s72-c/desire_1_600.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-2275920828701419161</id><published>2010-02-02T18:07:00.000+05:30</published><updated>2010-02-02T18:08:06.087+05:30</updated><title type='text'>ವಿವಾದದ ಕೆಸರಿನಲ್ಲಿ ಐಪಿಎಲ್‌ ನಿಧಿ</title><content type='html'>ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಪಾಕ್‌ ಆಟಗಾರರನ್ನು  ಫ್ರಾಂಚೈಸಿಗಳು ತಿರಸ್ಕರಿಸಿರುವುದು ದೊಡ್ಡ ವಿವಾದವಾಗಿದೆ. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಮಧ್ಯಪ್ರವೇಶದಿಂದಲೂ ಐಪಿಎಲ್‌ ಧಣಿಗಳ ಮನ ಬದಲಾಯಿಸಲು ಸಾಧ್ಯವಾಗಿಲ್ಲ. ಮುಂಬೈ ಮೇಲೆ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕ್‌ ಆಟಗಾರರಿಗೆ ಅವಕಾಶ ನೀಡಬಾರದು ಎನ್ನುವುದು ದೇಶಭಕ್ತಿಯ (?) ಅಭಿಪ್ರಾಯ. ಕ್ರಿಕೆಟ್‌ ಬೇರೆ ರಾಜಕೀಯ ಬೇರೆ, ಹಾಗಾಗಿ ಅವಕಾಶ ನೀಡಬೇಕಿತ್ತು ಎನ್ನುವುದು  ಇನ್ನೊಂದು ಅಭಿಪ್ರಾಯ. ಪಾಕ್‌ ಆಟಗಾರರ ಪರ ಅನುಕಂಪದ ಮಾತನಾಡಿದ ಶಾರುಖ್‌ ಖಾನ್‌ ವಿರುದ್ಧ ಪಾಕಿಸ್ತಾನಕ್ಕೆ ತೊಲಗಿ ಎಂದು ಪ್ರತಿಭಟನೆ ನಡೆಸಿದ ಅತಿರೇಕದ ಅಭಿಪ್ರಾಯಗಳೂ ಇವೆ. ಹಾಲಿ ಪ್ರಕರಣದ ಬಗ್ಗೆ ನಾಲ್ಕು ದೃಷ್ಟಿಕೋನಗಳನ್ನು ಇಲ್ಲಿ ಮಂಡಿಸಲಾಗಿದೆ.&lt;br /&gt;&lt;br /&gt;&lt;br /&gt;&lt;span style="font-weight: bold;"&gt;ವಾದ 1&lt;/span&gt;&lt;br /&gt;ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕೇವಲ ಕ್ರಿಕೆಟ್‌ ಟೂರ್ನಿ ಮಾತ್ರವೇ ಅಲ್ಲ. ಅದೊಂದು ಲಾಭದಾಯಕ ಉದ್ಯಮ. ಅಲ್ಲಿ ನಡೆಯುವುದು ರನ್‌- ವಿಕೆಟ್‌ಗಳ ಲೆಕ್ಕಾಚಾರಕ್ಕಿಂತ ಮಿಗಿಲಾದ ಹಣದ ಲೆಕ್ಕಾಚಾರ, ಝಣಝಣತ್ಕಾರ.&lt;br /&gt;ಹಾಗೆ ನೋಡಿದರೆ, ಭಾರತದಲ್ಲಿ ಐಪಿಎಲ್‌ ಹೆಸರಲ್ಲಿ ರೂಪಾಯಿಯ ಅಪಮೌಲ್ಯವಾದಷ್ಟು ಬೇರಾವ ಬಗೆಯಲ್ಲೂ ಆಗಿರಲಿಲ್ಲ. ಇಲ್ಲಿ ನಡೆಯುವುದೆಲ್ಲಾ ದಶಲಕ್ಷ, ಕೋಟಿಗಳ ಲೆಕ್ಕಾಚಾರವೇ. ಮಾತೃ ಸಂಸ್ಥೆ ಬಿಸಿಸಿಐಗೆ ನೂರಾರು, ಸಾವಿರಾರು ಕೋಟಿ ರೂಪದಲ್ಲಿ ಈ ಟೂರ್ನಿಯಿಂದ ಆದಾಯ ಬರುತ್ತದೆ. ಫ್ರಾಂಚೈಸಿಗಳು, ಪ್ರಾಯೋಜಕರು ಗಳಿಸುವುದು ಅಥವಾ ನಷ್ಟ ಅನುಭವಿಸು ವುದು ಕೋಟಿಗಳ ರೂಪದಲ್ಲೇ. ಕೆಲವು ಕಿರಿಯ, ದೇಶಿ ಆಟಗಾರರನ್ನು ಹೊರತು ಪಡಿಸಿದರೆ, ದೇಶದ ಹಾಗೂ ವಿದೇಶದ ಅಂತಾರಾಷ್ಟ್ರೀಯ ಆಟಗಾರರು ಸಂಭಾವನೆ ರೂಪದಲ್ಲಿ ಗಳಿಸುವುದು ಕೋಟಿಗಳಲ್ಲೇ.&lt;br /&gt;ಹೀಗೆ ದುಡ್ಡೇ ದೊಡ್ಡಪ್ಪ ಆಗಿರುವ ಶ್ರೀಮಂತ ಟೂರ್ನಿಯಲ್ಲಿ ಬಂಡವಾಳ ಹೂಡಿರುವವರ ಮಾತಿಗೆ, ಇಚ್ಛೆಗೆ, ನಿರ್ಧಾರಕ್ಕೆ ಹೆಚ್ಚಿನ ಮಹತ್ವ, ಬೆಲೆ ಇರುವುದು (ಬರುವುದು) ಸಹಜವೇ. ಅದು ಅಪೇಕ್ಷಿತ ಕೂಡ. ಇಂಥ ಐಪಿಎಲ್‌ನಲ್ಲಿ ಕ್ರಿಕೆಟಿಗರಿಗೂ ರೇಸ್‌ ಕುದುರೆಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ.&lt;br /&gt;ನೂರಾರು ಕೋಟಿ ಬಂಡವಾಳ ಹೂಡಿ ಫ್ರಾಂಚೈಸಿ ತಂಡಗಳ ಮಾಲಿಕತ್ವ ಪಡೆದುಕೊಂಡಿರುವ ಬಾಲಿವುಡ್‌ ನಟ/ನಟಿಯರು, ವಾಣಿಜ್ಯೋದ್ಯಮಿಗಳು ಕ್ರಿಕೆಟಿಗರ ಆಯ್ಕೆಯಲ್ಲೂ ಸ್ವಾತಂತ್ರ್ಯ ಬಯಸುವುದು ಸಹಜವೇ. ಅಂಥ ಸಂದರ್ಭದಲ್ಲಿ ಆಟಗಾರರ ಪೂರ್ವ ಖ್ಯಾತಿಯಾಗಲೀ, ರಾಷ್ಟ್ರೀಯತೆ ಯಾಗಲೀ ಮುಖ್ಯವಾಗುವುದಿಲ್ಲ. ಯಾವುದೇ ಪ್ರಭಾವಗಳು ಕೆಲಸ ಮಾಡುವು ದಿಲ್ಲ.  ಹೂಡುವ ಹಣಕ್ಕೆ ತಕ್ಕ ಆಟ ಆಡುವ ವಿಶ್ವಾಸ ಮೂಡಿದರೆ ಮಾತ್ರ ಅಂಥ ಆಟಗಾರನ ಬಗ್ಗೆ ಮಾಲಿಕರ  ಒಲವು ಮೂಡುತ್ತದೆ. ಹಾಗಾಗಿ, ಐಪಿಎಲ್‌-3 ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರಿಗೆ ಅನ್ಯಾಯವಾಗಿದೆ ಎಂದು  ಗುಲ್ಲು-ದೊಂಬಿ ಎಬ್ಬಿಸುವುದು ತಪ್ಪು.&lt;br /&gt;ಫ್ರಾಂಚೈಸಿಗಳಿಗೆ ಮೊದಲನೆಯದಾಗಿ ಹಲವು ನಿರ್ಬಂಧಗಳಿವೆ. ಇಷ್ಟೇ ಹಣದಲ್ಲಿ ಆಟಗಾರರ ಖರೀದಿ ಮುಗಿಸಬೇಕು... ವಿದೇಶಿ ಆಟಗಾರರ ಸಂಖ್ಯೆ ಇಷ್ಟೇ ಇರಬೇಕು... ಇತ್ಯಾದಿ. ಆಟಗಾರರ ಲಭ್ಯತೆ ಮತ್ತೊಂದು ವಿಚಾರ. ಪಾಕಿಸ್ತಾನ, ಆಸ್ಟ್ರೇಲಿಯಾ ಮೂಲದ ಆಟಗಾರರಿಗೆ ಉಳಿದವರಿಗಿಂತ ವಿಶೇಷ ಭದ್ರತೆ ಕಲ್ಪಿಸಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಹೆಚ್ಚಿನ ಜನ, ಧನ, ಸಮಯ ವ್ಯಯವಾಗುತ್ತದೆ. ವೀಸಾಗಳಂಥ ವಿಚಾರಗಳಲ್ಲೂ ತೊಡಕಿನ ಸಂಭವ ಇರುತ್ತದೆ. ಐಪಿಎಲ್‌ ಒಂದು ಖಾಸಗಿ ಟೂರ್ನಿಯಾಗಿರುವ ಕಾರಣ, ಭದ್ರತೆಯ ವಿಚಾರವನ್ನು ಅವರೇ ನಿಭಾಯಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಆಟಗಾರರ ಭದ್ರತೆ ತಂಡಗಳಿಗೆ ಹೆಚ್ಚಿನ ಹೊರೆ. ಈ ಎಲ್ಲಾ ದೃಷ್ಟಿಯಿಂದ ಫ್ರಾಂಚೈಸಿಗಳಿಗೆ ತಮಗೆ ಯಾವ ಆಟಗಾರ ಬೇಕು, ಯಾರು ಬೇಡ ಎಂದು ತೀರ್ಮಾನಿಸುವ ಹಕ್ಕು ಇದೆ. ಈ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ.&lt;br /&gt;&lt;br /&gt;&lt;br /&gt;&lt;span style="font-weight: bold;"&gt;ವಾದ 2&lt;/span&gt;&lt;br /&gt;&lt;br /&gt;ಐಪಿಎಲ್‌ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನದ ಸೊಹೈಲ್‌ ತನ್ವೀರ್‌ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್‌ ಎನಿಸಿದ್ದರು. ಉಮರ್‌ ಗುಲ್‌, ಕಮ್ರಾನ್‌ ಅಕ್ಮಲ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಸಾಧಾರಣ ಯಶಸ್ಸು ಪಡೆದಿದ್ದರು. ಶಾಹಿದ್‌ ಅಫ್ರಿದಿ, ಶೋಯಿಬ್‌ ಅಖ್ತರ್‌ ಸೇರಿದಂತೆ ಹಲವರು ಟೂರ್ನಿಯಲ್ಲಿ ಆಡಿರಲಿಲ್ಲ. ಆದರೆ, ಮುಂಬೈ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಟಗಾರರು  ದಕ್ಷಿಣ ಆಫ್ರಿಕಾದಲ್ಲಿ ನಡೆದ 2ನೇ ಐಪಿಎಲ್‌ನಿಂದ ವಂಚಿತರಾದರು. ಆದರೂ, ಚಾಂಪಿಯನ್ಸ್‌ ಲೀಗ್‌ನಲ್ಲಿ  ಇಂಗ್ಲೆಂಡ್‌ನ ಕೌಂಟಿ ತಂಡವೊಂದರ ಪರ ಪಾಕಿಸ್ತಾನದ ಯಾಸಿರ್‌ ಅರಾಫತ್‌ ಭಾಗವಹಿಸಿದ್ದರು.&lt;br /&gt;ಆನಂತರದ ಅವಧಿಯಲ್ಲಿ ಪಾಕಿಸ್ತಾನ ಇಪ್ಪತ್ತು20 ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತು. ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ದೇಶಿ ಋತುಗಳಲ್ಲಿ ಭಾಗವಹಿಸಿದ್ದ ಪಾಕ್‌ನ ಹಲವು ಆಟಗಾರರು ಅಮೋಘ ಫಾರ್ಮ್‌ ಪ್ರದರ್ಶಿಸಿದ್ದರು. ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದರು. ಅವರನ್ನು ಫ್ರಾಂಚೈಸಿಗಳು ಈ ರೀತಿ ಸಾರಾಸಗಟಾಗಿ ಕಡೆಗಣಿಸಬಾರದಿತ್ತು.&lt;br /&gt;ಹಾಗೆ ನೋಡಿದರೆ, ಕ್ರಿಕೆಟ್‌ನಂಥ ವಿಚಾರಗಳಲ್ಲಿ ರಾಷ್ಟ್ರೀಯತೆಗಳು ಅಡ್ಡ ಬರಬಾರದು. ಪ್ರತಿಭೆ, ಯೋಗ್ಯತೆಯಷ್ಟೇ ಮುಖ್ಯವಾಗಬೇಕು. ಅಷ್ಟಕ್ಕೂ ಐಪಿಎಲ್‌ನಲ್ಲಿ ರಾಷ್ಟ್ರೀಯತೆಯೆಂಬ ಯಾವ ಮಣ್ಣಾಗಟ್ಟಿಯೂ ಇಲ್ಲ. ಅದೊಂದು ವಿಶ್ವ ದರ್ಜೆಯ ಕ್ಲಬ್‌ ಟೂರ್ನಿ. ಆಟಗಾರರಿಗೆ ವೀಸಾ ತೊಂದರೆ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಮೇಲಾದರೂ, ಆಟಗಾರರಿಗೆ ಅವಕಾಶ ಮಾಡಿಕೊಡಬೇಕಿತ್ತು. ಉಭಯ ರಾಷ್ಟ್ರಗಳ ಕ್ರಿಕೆಟ್‌ ಸಂಬಂಧ ಪುನರಾರಂಭಗೊಳ್ಳಲು ಐಪಿಎಲ್‌ ಸೇತುವೆಯಾಗುವ ಸಾಧ್ಯತೆಯೂ ಇತ್ತು.&lt;br /&gt;&lt;br /&gt;&lt;br /&gt;&lt;span style="font-weight: bold;"&gt;ವಾದ 3&lt;/span&gt;&lt;br /&gt;&lt;br /&gt;ಸರ್ಕಾರಗಳು ಮತ್ತು ಪೊಲೀಸರು ಯಾವಾಗಲೂ ಲೇಟ್‌. ಆಗಬಾರದ ಅನಾಹುತ ಆಗಿಹೋದ ಮೇಲೆ ಛೇ! ಎನ್ನುವುದು, ವಿಷಾದ ಸೂಚಿಸುವುದು  ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ವೈಖರಿಯಾಗಿರುತ್ತದೆ.&lt;br /&gt;ಐಪಿಎಲ್‌ಗೆ ಪಾಕ್‌ ಆಟಗಾರರನ್ನು ಕಡೆಗಣಿಸಬಾರದಿತ್ತು. ಅವರಿಗೆ ವೀಸಾ ಸಮಸ್ಯೆ ಇರಲಿಲ್ಲ. ತನ್ನ ಎಲ್ಲಾ ಆಟಗಾರರನ್ನು ಸಂಪೂರ್ಣವಾಗಿ ತಿರಸ್ಕರಿಸಿದಾಗ ಯಾವುದೇ ದೇಶಕ್ಕೆ ಅವಮಾನ, ನೋವಾಗುವುದು ಸಹಜ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಡ ವಾಗಿ ಹೇಳಿಕೆ ನೀಡಿದರು. ಅದಾದ ಒಂದು ದಿನದ ಬಳಿಕ ಕ್ರೀಡಾ ಸಚಿವ ಎಂಎಸ್‌ ಗಿಲ್‌ ಸಹ ಇಂಥ ಹೇಳಿಕೆಯನ್ನೇ ಪುನರುಚ್ಛರಿಸಿದರು.&lt;br /&gt;ಆದರೆ, ಐಪಿಎಲ್‌ ಹರಾಜಿಗೆ ಮುನ್ನವೇ ಇವರೆಲ್ಲಾ ಎಲ್ಲಿ ಹೋಗಿದ್ದರು?&lt;br /&gt;ಹರಾಜು ಪ್ರಕ್ರಿಯೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಪಾಕ್‌ ಆಟಗಾರರ ಲಭ್ಯತೆ, ಸರ್ಕಾರಿ ತೊಡಕುಗಳು, ವೀಸಾ ಸಮಸ್ಯೆ ಮತ್ತಿತರ ಸಂಗತಿಗಳು ನಿತ್ಯ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಐಪಿಎಲ್‌ ಮುಖ್ಯಸ್ಥ ಲಲಿತ್‌ ಮೋದಿ ಅಂಗಿ ಬದಲಾಯಿಸುವ ರೀತಿಯಲ್ಲಿ ದಿನಕ್ಕೊಂದು ಬಣ್ಣ ಬಣ್ಣದ ಹೇಳಿಕೆ ನೀಡುತ್ತಿದ್ದರು. ನಿಗದಿತ ಅವಧಿಯಲ್ಲಿ ವೀಸಾ ಪಡೆದುಕೊಳ್ಳದ ಕಾರಣ ಹರಾಜಿನಲ್ಲಿ ಯಾವ ಪಾಕ್‌ ಆಟಗಾರರೂ ಭಾಗವಹಿಸುವುದಿಲ್ಲ ಎಂದು ಒಮ್ಮೆ  ಹೇಳಿಕೆ ನೀಡಿದರೆ, ಮತ್ತೆರಡು ದಿನಗಳಲ್ಲಿ ಪಾಕ್‌ ಆಟಗಾರರೂ ಹರಾಜಿನಲ್ಲಿ ಭಾಗಿಯಾಗುತ್ತಾರೆ ಎನ್ನುತ್ತಿದ್ದರು. ನಿತ್ಯ ಇಷ್ಟೆಲ್ಲಾ  ನಡೆಯುತ್ತಿದ್ದರೂ, ಆ ಸಂದರ್ಭದಲ್ಲಿ ಸರ್ಕಾರ ಮೌನವಾಗಿತ್ತು.&lt;br /&gt;ಆ ಸಂದರ್ಭದಲ್ಲಿ ಚಿದಂಬರಂ ಸಾಹೇಬರು ಒಮ್ಮೆಯಾದರೂ, ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಬಹುದು. ಅವರಿಗೆ ವೀಸಾ, ಭದ್ರತೆ ಕುರಿತಂತೆ ಯಾವುದೇ ಸಮಸ್ಯೆ ಸರ್ಕಾರದ ಕಡೆಯಿಂದ ಎದುರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರೆ, ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಲೇ ಇರಲಿಲ್ಲ. ರಾಜತಾಂತ್ರಿಕವಾಗಿ ಉಭಯ ರಾಷ್ಟ್ರಗಳ ಸಂಬಂಧ ಹೇಗೆಯೇ ಇದ್ದರೂ, ಕ್ರಿಕೆಟ್‌ ಟೂರ್ನಿಯಲ್ಲಿ ಪಾಕ್‌ ಆಟಗಾರರಿಗೂ ಅವಕಾಶ ಕೊಡಿ ಎಂದು ಮೊದಲೇ ಹೇಳಬಹುದಿತ್ತು. ಆದರೆ, ನಮ್ಮವರು (ಸಚಿವರು) ಮೊದಲೇ ಸಲಹೆ ಕೊಡುವುದಕ್ಕಿಂತ ನಂತರ ಟೀಕಿಸುವುದರಲ್ಲಿ ಪ್ರವೀಣರು.&lt;br /&gt;&lt;br /&gt;&lt;br /&gt;&lt;span style="font-weight: bold;"&gt;ವಾದ 4&lt;/span&gt;&lt;br /&gt;ಕ್ರೀಡೆಗೆ ಅಪಾರವಾದ ಶಕ್ತಿ ಇದೆ. ಎಷ್ಟೋ ಬಾರಿ ಕ್ರೀಡೆಗಳು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತವೆ. ಹಿಂದೆಯೂ ಭಾರತ - ಪಾಕ್‌ ನಡುವಿನ ವೈಷಮ್ಯದ ಭಾವ ತಗ್ಗಿಸುವಲ್ಲಿ ಕ್ರಿಕೆಟ್‌ ಮಹತ್ವದ ಪಾತ್ರ ನಿರ್ವಹಿಸಿದೆ.&lt;br /&gt;ಉಭಯ ರಾಷ್ಟ್ರಗಳ ಕ್ರಿಕೆಟ್‌ ಮುಖಾಮುಖಿ ಗಳು ಎಷ್ಟೇ ಜಿದ್ದಾಜಿದ್ದಿಯಿಂದ ಕೂಡಿದ್ದರೂ, ಪಾಕಿಸ್ತಾನದ ವಾಸಿಂ ಅಕ್ರಂ, ಇಮ್ರಾನ್‌ ಖಾನ್‌, ಶೋಯಿಬ್‌ ಅಖ್ತರ್‌, ಅಫ್ರಿದಿಯನ್ನು ಇಷ್ಟ ಪಡುವ ಅಭಿಮಾನಿಗಳು ಭಾರತದಲ್ಲಿದ್ದಾರೆ. ಅದೇ ರೀತಿ ಸಚಿನ್‌ ತೆಂಡುಲ್ಕರ್‌, ದ್ರಾವಿಡ್‌ ಮೊದಲಾದವರಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ. &lt;br /&gt;ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭಾರತ- ಪಾಕ್‌ ಆಟಗಾರರು ಒಂದೇ ಡ್ರೆಸ್ಸಿಂಗ್‌ರೂಂ ಹಂಚಿಕೊಳ್ಳಲು ಅವಕಾಶವಿರುವ ಕಾರಣ, ಆಟಗಾರರಲ್ಲೂ, ಅಭಿಮಾನಿಗಳಲ್ಲೂ ಸ್ನೇಹಭಾವ ಹೆಚ್ಚಾಗಲು ಅವಕಾಶವಿತ್ತು. ಮುಂಬೈ ಮೇಲಿನ ಉಗ್ರರ ದಾಳಿಯ ವಿಷಯದಲ್ಲಿ ಪಾಕ್‌ ಬಗ್ಗೆ  ಭಾರತದ ನಿಷ್ಠುರ ನಿಲುವು ಬದಲಾಗಬೇಕಿಲ್ಲ.&lt;br /&gt;ಆದರೆ, ಪರಸ್ಪರರ ಕ್ರಿಕೆಟ್‌ ಸಂಬಂಧ ಪುನರಾರಂಭಗೊಳ್ಳುವುದರಿಂದ ಇಬ್ಬರಿಗೂ ಲಾಭವಿದೆ. ಅಷ್ಟಕ್ಕೂ ಕ್ರೀಡೆ ಬೇರೆ, ರಾಜಕೀಯ ಬೇರೆ. ಈ ಬಾರಿ ಪಾಕ್‌ ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸುವುದು ಕಷ್ಟ. ಅದಕ್ಕೆ ಐಪಿಎಲ್‌ನ ನಿಯಮಗಳು ಅಡ್ಡಿಯಾಗುತ್ತವೆ. ಈಗಲೂ ಗಾಯಾಳುಗಳಿದ್ದರೆ, ಬದಲಿ ರೂಪದಲ್ಲಿ ಪಾಕ್‌ ಆಟಗಾರರು ಅವಕಾಶ ಪಡೆಯುವುದು ಸಾಧು. ಜೊತೆಗೆ, ಭವಿಷ್ಯದಲ್ಲಿ ಹೀಗಾಗದಂತೆ ನೋಡಿಕೊಳ್ಳ ಬಹುದು. ಪರಸ್ಪರರ ದೂಷಣೆ, ಕೆಸರೆರಚಾಟದಿಂದ ಪರಿಹಾರ ಸಿಗಲು ಸಾಧ್ಯವಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-2275920828701419161?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/2275920828701419161/comments/default' title='Post Comments'/><link rel='replies' type='text/html' href='http://ragaakshara.blogspot.com/2010/02/blog-post_02.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/2275920828701419161'/><link rel='self' type='application/atom+xml' href='http://www.blogger.com/feeds/2998842447029730227/posts/default/2275920828701419161'/><link rel='alternate' type='text/html' href='http://ragaakshara.blogspot.com/2010/02/blog-post_02.html' title='ವಿವಾದದ ಕೆಸರಿನಲ್ಲಿ ಐಪಿಎಲ್‌ ನಿಧಿ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><thr:total>0</thr:total></entry><entry><id>tag:blogger.com,1999:blog-2998842447029730227.post-8638286594278652269</id><published>2010-02-02T18:01:00.002+05:30</published><updated>2010-02-02T18:07:00.864+05:30</updated><title type='text'>ದೊರೆಯ ಸಾಮ್ರಾಜ್ಯ ವಿಸ್ತರಣೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_fosRdfQ3Hws/S2gcPIj1w0I/AAAAAAAAAKk/NMZJaSmJX_E/s1600-h/paess.JPG"&gt;&lt;img style="display: block; margin: 0px auto 10px; text-align: center; cursor: pointer; width: 400px; height: 267px;" src="http://4.bp.blogspot.com/_fosRdfQ3Hws/S2gcPIj1w0I/AAAAAAAAAKk/NMZJaSmJX_E/s400/paess.JPG" alt="" id="BLOGGER_PHOTO_ID_5433623996743926594" border="0" /&gt;&lt;/a&gt;&lt;br /&gt;*ಹದಿನಾರು ಗ್ರಾಂಡ್‌ಸ್ಲಾಂ ಸಿಂಗಲ್ಸ್‌ ಕಿರೀಟಗಳು.&lt;br /&gt;*ಎಲ್ಲಾ 4 ಗ್ರಾಂಡ್‌ಸ್ಲಾಂಗಳನ್ನು ಗೆದ್ದ ಕೇವಲ ಆರನೆ ಆಟಗಾರ.&lt;br /&gt;* ಸತತ 237 ವಾರ ವಿಶ್ವ  ನಂ.1 ಪಟ್ಟದಲ್ಲಿದ್ದ ವಿಶ್ವದಾಖಲೆ (2004ರಿಂದ 2008).&lt;br /&gt;* ಸತತವಾಗಿ 10 ಗ್ರಾಂಡ್‌ಸ್ಲಾಂಗಳ ಫೈನಲ್‌ಗಳಲ್ಲಿ ಕಾಣಿಸಿ ಕೊಂಡ ದಾಖಲೆ (2005 ವಿಂಬಲ್ಡನ್‌ನಿಂದ 2007 ಯುಎಸ್‌ ಓಪನ್‌).&lt;br /&gt;* ಸತತ 23 ಗ್ರಾಂಡ್‌ಸ್ಲಾಂಗಳಲ್ಲಿ ಕನಿಷ್ಠ ಸೆಮಿಫೈನಲ್‌ ತಲುಪಿದ ಸಾಧನೆ (2004 ವಿಂಬಲ್ಡನ್‌ನಿಂದ ಇಲ್ಲಿಯವರೆಗೆ).&lt;br /&gt;* ಮುಕ್ತ ಟೆನಿಸ್‌ ಯುಗದಲ್ಲಿ ಅತೀ ಹೆಚ್ಚು  ಆಸ್ಟ್ರೇಲಿಯನ್‌ ಓಪನ್‌ (4) ಗೆದ್ದ ಗೌರವ (ಆಂಡ್ರೆ ಅಗಾಸ್ಸಿ ಜೊತೆ ಹಂಚಿ ಕೊಂಡಿದ್ದಾರೆ).&lt;br /&gt;* ಸತತವಾಗಿ 24 ಟೂರ್ನಿ ಫೈನಲ್‌ಗಳಲ್ಲಿ ಸೋಲು ಕಾಣದ ದಾಖಲೆ.&lt;br /&gt;* 2003ರಲ್ಲಿ ಚೊಚ್ಚಲ ವಿಂಬಲ್ಡನ್‌ ಗೆದ್ದ ಬಳಿಕ 7  ವರ್ಷಗಳಲ್ಲಿ 16 ಗ್ರಾಂಡ್‌ಸ್ಲಾಂ ಸಾಧನೆ....&lt;br /&gt;&lt;br /&gt;ರೋಜರ್‌ ಫೆಡರರ್‌ಗಲ್ಲದೆ ಬೇರಾರಿಂದಲೂ ಇವೆಲ್ಲಾ ಸಾಧ್ಯವಿಲ್ಲ. ಕನಸು ಕಾಣಲೂ ಸಾಧ್ಯವಿಲ್ಲದ ಕಲ್ಪನಾತೀತವಾದ ಸಾಧನೆಗಳು ಇವು.&lt;br /&gt;ಪುರುಷರ ಟೆನಿಸ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಮಾಂತ್ರಿಕ ಫೆಡರರ್‌ ಚಕ್ರಾಧಿಪತ್ಯ ಕೊನೆಗೊಳ್ಳುವ ಯಾವುದೇ ಸೂಚನೆ ಕಂಡು ಬರುತ್ತಿಲ್ಲ. ಸದ್ಯಕ್ಕಂತೂ ಇಲ್ಲ.&lt;br /&gt;ಟೆನಿಸ್‌ನಲ್ಲಿ ಹಿಂದೆ ಹತ್ತುಹಲವು ಮಹಾನುಭಾವರು ಆಗಿ ಹೋಗಿದ್ದಾರೆ. 60-70-80ರ ದಶಕಗಳಲ್ಲಿ ಟೆನಿಸ್‌ ಅಂಕಣ ದಲ್ಲಿ ವಿಶ್ವಯುದ್ಧದಂಥ ಸಂಘರ್ಷವೇರ್ಪಡುತ್ತಿತ್ತು. ಹಾಗೆಂದ ಮಾತ್ರಕ್ಕೆ ಈಗ ಆಟದ ಗುಣಮಟ್ಟದಲ್ಲಿ ಚೊರೆ ಆಗಿದೆ ಎಂದೇನೂ ಅರ್ಥವಲ್ಲ. ಬದಲಿಗೆ, ಆಲದ ಮರದ ನೆರಳಲ್ಲಿ ಬೇರಾವ ಗಿಡವೂ ಬೆಳೆಯದ ಹಾಗೆ ಉಳಿದವರು ಬೆಳೆಯಲು ಫೆಡರರ್‌ ಎಂಬ ಆಲದ ಮರ ಅವಕಾಶ ಕೊಡುತ್ತಿಲ್ಲ. ಫೆಡರರ್‌ ತಾವು ಸೃಷ್ಟಿಸಿಕೊಂಡ ಎತ್ತರಕ್ಕೆ ತಾವೇ ಏರಬೇಕೇ ಹೊರತು,  ಉಳಿದವರಿಂದ ಸದ್ಯದ ಪರಿಸ್ಥಿತಿಯಲ್ಲಂತೂ ಸಾಧ್ಯವಾಗುತ್ತಿಲ್ಲ.&lt;br /&gt;ರಾಫೆಲ್‌ ನಡಾಲ್‌ ಸತತ ನಾಲ್ಕು ವರ್ಷ ಫ್ರೆಂಚ್‌ ಓಪನ್‌ ಗೆದ್ದು, 2008ರಲ್ಲಿ ವಿಂಬಲ್ಡನ್‌ನಲ್ಲೂ ಫೆಡರರ್‌ ಆಧಿಪತ್ಯಕ್ಕೆ ತಡೆಯೊಡ್ಡಿದಾಗ ಅಂಥ ಒಂದು  ಆಶಾಕಿರಣ ಗೋಚರ ವಾಗಿತ್ತು. ಫೆಡರರ್‌ ಯುಗ ಕೊನೆಗೊಳಿಸುವ ದೊರೆಯೆಂದೇ ನಡಾಲ್‌ ಬಿಂಬಿಸಲ್ಪಟ್ಟಿದ್ದರು. ಆದರೆ, ಸದ್ಯ ನಡಾಲ್‌ ವೃತ್ತಿ ಜೀವನವೇ ಅತಂತ್ರವಾಗಿದೆ. ಗಾಯಗಳು ಅವರನ್ನು ಕಿತ್ತು ತಿನ್ನುತ್ತಿವೆ.&lt;br /&gt;ಉಳಿದವರು ಎಲ್ಲೋ ಆಗೊಮ್ಮೆ, ಈಗೊಮ್ಮೆ ಪ್ರಜ್ವಲಿಸಿ ನಂದಿ ಹೋಗುವ ಕಿಡಿಗಳು. ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ, ನೊವಾಕ್‌ ಡಿಜೊಕೊವಿಕ್‌, ಆಂಡಿ ಮರ್ರೆ ಇವರೆಲ್ಲರೂ ಅಷ್ಟೇ.&lt;br /&gt;ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಇದೆಲ್ಲವೂ  ಮತ್ತೆ ಸಾಬೀತಾಯಿತು. ಟೂರ್ನಿಯಲ್ಲಿ ಫೆಡರರ್‌ ಅಶ್ವವನ್ನು ಕಟ್ಟುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಅವರಿಗೆ ಸ್ವಲ್ಪ ಗಂಭೀರ ಸವಾಲು ಎದುರಾಗಿದ್ದು ಕ್ವಾರ್ಟರ್‌ಫೈನಲ್‌ನಲ್ಲಿ ನಿಕೋಲಾಯ್‌ ಡೇವಿಡೆಂಕೊರಿಂದ ಮಾತ್ರ.&lt;br /&gt;ಫೆಡರರ್‌ಗೆ ಅಂಥ ವಯಸ್ಸೇನೂ ಆಗಿಲ್ಲ. 30ರ ಆಚೆಯ ಟೆನಿಸ್‌ ಮುಪ್ಪಿಗೂ ಸಹ ಅವರಿನ್ನೂ ಒಂದೂವರೆ ವರ್ಷದಷ್ಟು ದೂರದಲ್ಲಿದ್ದಾರೆ. ಆದರೂ, ಸಾಧನೆ, ಅನುಭವದಿಂದ ಹಾಗೂ ಹೊಸ ಪೀಳಿಗೆಯ ಆಟಗಾರರ ಎದುರು ಅವರು ಸಾಕಷ್ಟು ಹಿರಿಯರೇ. ವಯಸ್ಸಾದಂತೆ ಪ್ರಬುದ್ಧತೆಯೂ ಅವರನ್ನು ಹಿಂಬಾಲಿಸಿದೆ. ದೇಹ ಶಕ್ತಿಯ ಕೊರತೆಯನ್ನು ಕೌಶಲ್ಯ, ಕಲಾತ್ಮಕ ಆಟ ಹಾಗೂ ಅನುಭವಗಳು ಮರೆಮಾಚುತ್ತಿವೆ. ಟೆನಿಸ್‌ನಲ್ಲಿ ಎಲ್ಲಾ ಸಂಭಾವ್ಯ ಶಿಖರಗಳನ್ನು ಏರಿ ಕುಳಿತಿರುವ ಫೆಡರರ್‌ ವೃತ್ತಿಪಯಣ ಈಗೀಗ ಕ್ರಿಕೆಟ್‌ನ ಸಚಿನ್‌ ತೆಂಡುಲ್ಕರ್‌ರನ್ನು ಹೋಲುತ್ತಿದೆ. ಏಕೆಂದರೆ, ಪ್ರತೀ ದಿನ, ಪ್ರತೀ ಪಂದ್ಯದಲ್ಲಿ ಅವರು ಏನಾದರೊಂದು ದಾಖಲೆ ಮಾಡುತ್ತಿರುತ್ತಾರೆ. ಹೊಸತು ಸೃಷ್ಟಿಸುತ್ತಿರುತ್ತಾರೆ. ಇಷ್ಟೆಲ್ಲಾ ಸಾಧನೆಗಳ ನಡುವೆ ಮೈಮರೆಯದಂತೆ, ಕಾಲು ಜಾರದಂತೆ ಎಚ್ಚರ ವಹಿಸುತ್ತಾರೆ.&lt;br /&gt;ತಪ್ಪು ಮಾಡಿ ಸಿಕ್ಕಿ ಬೀಳುವವರೆಗೂ ಪ್ರತಿಯೊಬ್ಬರೂ ಸಂಭಾವಿತರೇ (ಟೈಗರ್‌ ವುಡ್ಸ್‌ ಗಮನದಲ್ಲಿಟ್ಟುಕೊಂಡು). ಆದರೆ, ಫೆಡರರ್‌ ಆಟ, ಜೀವನ, ವರ್ತನೆಗಳನ್ನು ನೋಡುವಾಗ ಅವರ ಬಗ್ಗೆ  ಇತರ ಅನುಮಾನಗಳನ್ನು ಪಡಲು ಕಾರಣಗಳೇ ಸಿಗುವುದಿಲ್ಲ.&lt;br /&gt;ನಿವೃತ್ತಿಯಾಗಿ ಆರೇಳು ವರ್ಷಗಳ ಬಳಿಕ ಉದ್ದೀಪನ ವಂಚನೆ ರಹಸ್ಯ ಬಹಿರಂಗ ಪಡಿಸುವ ಮೂಲಕ ಆಂಡ್ರೆ ಅಗಾಸ್ಸಿ ದಿಗ್ಗಜನ ವರ್ಚಸ್ಸಿನಿಂದ ಕುಸಿದರು. ಆದರೆ, ಸಾರ್ವಜನಿಕ ಜೀವನದಲ್ಲಿ ಪರಿಶುದ್ದತೆ ಕಾಪಾಡಿಕೊಂಡಿರುವ, ವಾಡಾದ ಉದ್ದೀಪನ ನಿಗ್ರಹ ಆಂದೋಲನಗಳಿಗೆ ಪ್ರಥಮರಾಗಿ ಕೈಜೋಡಿಸುವ, ಸುನಾಮಿ ಸಂತ್ರಸ್ತರು, ಹೈಟಿ ಭೂಕಂಪ ಸಂತ್ರಸ್ತರಿಗಾಗಿ ತುಡಿಯುವ, ಆಟದ ಅಂಕಣದಲ್ಲಿ ಸದಾ ಗೆಲ್ಲುವ ಫೆಡರರ್‌ ನಿಜವಾದ ಚಾಂಪಿಯನ್‌ ಎಂದು ಒಪ್ಪಿ ಕೊಳ್ಳಬಹುದು. ಇನ್ನು ಟೆನಿಸ್‌ನಲ್ಲಿ ಅವರು ಸಾರ್ವಕಾಲಿಕ  ಶ್ರೇಷ್ಠ  ಹೌದೇ ಅಲ್ಲವೇ ಎನ್ನುವುದನ್ನು ಅವರ ಸಾಧನೆ, ಅಂಕಿ-ಅಂಶಗಳೇ ನಿರ್ಧರಿಸುತ್ತವೆ.&lt;br /&gt;&lt;span style="font-weight: bold;"&gt;ಸೆರೇನಾ ಸಾಧನೆ&lt;/span&gt;&lt;br /&gt;ಸೆರೇನಾ ವಿಲಿಯಮ್ಸ್‌ ಮೆಲ್ಬೋರ್ನ್‌ನಲ್ಲಿ ಶನಿವಾರ 12ನೇ ಗ್ರಾಂಡ್‌ಸ್ಲಾಂ ಸಿಂಗಲ್ಸ್‌ ಕಿರೀಟ ಗೆಲ್ಲುವ ಮೂಲಕ ಬಿಲ್ಲಿ ಜೀನ್‌ ಕಿಂಗ್‌ ಅವರ ಸಾಧನೆ ಸರಿಗಟ್ಟಿದರು.&lt;br /&gt;ಅಮೆರಿಕದ ಕೃಷ್ಣ ಸುಂದರಿ ಕ್ವಾರ್ಟರ್‌ ಫೈನಲ್‌ನಲ್ಲೇ ವಿಕ್ಟೋರಿಯಾ ಅಜಾರೆಂಕ ವಿರುದ್ಧ ಸೋಲಿನ ಅಂಚಿಗೆ ತಲುಪಿದ್ದರು. ಸೆಮಿಫೈನಲ್‌ನಲ್ಲೂ ಚೀನಾದ ಲೀ ನಾ ವಿರುದ್ಧ ಇನ್ನೇನು ಸೋತೇ ಬಿಟ್ಟಿದ್ದರು. ಹಾಗಾಗಿ, ಇದು ಅವರ ಪಾಲಿನ ಶ್ರೇಷ್ಠ ಎನ್ನುವುದಕ್ಕಿಂತ, ಅದೃಷ್ಟದ ಪ್ರಶಸ್ತಿ ಎನ್ನಬೇಕು.&lt;br /&gt;ಸೆರೇನಾ ವಿಶ್ವ ನಂ.1 ಪಟ್ಟಕ್ಕೆ ತಕ್ಕಂತೆ ಪ್ರಶಸ್ತಿ ಗೆಲ್ಲುವ ಮೂಲಕ ಅದ್ವಿತೀಯ ಸಾಧನೆಯನ್ನೇನೋ ಮಾಡಿದರು. ಅದರೆ, ಬೆಲ್ಜಿಯಂನ ಜಸ್ಟಿನ್‌ ಹೆನಿನ್‌ ಪ್ರಶಸ್ತಿ ಗೆದ್ದಿದ್ದರೆ, ಜನಪ್ರಿಯ ಚಾಂಪಿಯನ್‌ ಎನಿಸಿಕೊಳ್ಳುತ್ತಿದ್ದರು. ಏಕೆಂದರೆ, 18 ತಿಂಗಳ ನಿವೃತ್ತಿ ಮುರಿದು ಪುನರಾಗಮನಗೈದಿದ್ದ, ವೈಲ್ಡ್‌ ಕಾರ್ಡ್‌ ನೆರವಿನಿಂದ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಹೆನಿನ್‌ ಜನಾನುರಾಗ ಸಂಪಾದಿಸಿದ್ದರು. ಫೈನಲ್‌ವರೆಗಿನ ಪಂದ್ಯಗಳಲ್ಲಿ ಅವರ ಆಟವೂ ಅಮೋಘವಾಗಿಯೇ ಇತ್ತು. ಆದರೆ, ಮೊದಲ ಸಾವಿರ ಹೆಜ್ಜೆಗಳಿಗಿಂತಲೂ, ಕೊನೆಯ ಹೆಜ್ಜೆಯನ್ನು ಸರಿಯಾಗಿ ಇರಿಸುವುದಕ್ಕೆ ಹೆಚ್ಚಿನ ಮಹತ್ವ. ಹೆನಿನ್‌ರಿಂದ ಅದಾಗಲಿಲ್ಲ.&lt;br /&gt;&lt;br /&gt;&lt;span style="font-weight: bold;"&gt;ಭಾವಜೀವಿಗೆ ಭೋಪರಾಕ್‌&lt;/span&gt;&lt;br /&gt;&lt;br /&gt;ಲಿಯಾಂಡರ್‌ ಪೇಸ್‌ ವೃತ್ತಿಜೀವನದ 11ನೇ ಗ್ರಾಂಡ್‌ಸ್ಲಾಂ ಪ್ರಶಸ್ತಿ ಗೆದ್ದರು. 36ನೇ ವಯಸ್ಸಿನಲ್ಲಿ ಪ್ರಶಸ್ತಿ ಸಾಧನೆ ಮೆಚ್ಚತಕ್ಕ ವಿಷಯವೇ.&lt;br /&gt;ಅತೀ ಹೆಚ್ಚು ಗ್ರಾಂಡ್‌ಸ್ಲಾಂ ಗೆದ್ದ ಭಾರತೀಯನೆಂಬ ದಾಖಲೆಯನ್ನು ಅವರೀಗ ಮಹೇಶ್‌ ಭೂಪತಿ ಜೊತೆ ಹಂಚಿಕೊಂಡಿದ್ದಾರೆ.&lt;br /&gt;ಪೇಸ್‌ ಭಾರತೀಯ ಆಟಗಾರ ಹಾಗೂ ಅವರು ಗೆದ್ದಿರುವುದು ಗ್ರಾಂಡ್‌ಸ್ಲಾಂ ಎಂಬ ಕಾರಣಕ್ಕೆ ಅದಕ್ಕೆ ಮಹತ್ವ. ಆದರೂ, ವಿಶ್ವದ ಅಗ್ರಗಣ್ಯ ಆಟಗಾರರು ಮಿಶ್ರ ಡಬಲ್ಸ್‌ ಮಾದರಿಗೆ ಹೆಚ್ಚೇನೂ ಮಹತ್ವ ಕೊಡುವುದಿಲ್ಲ.  ಕೆಲವರ ಪಾಲಿಗೆ ಅದು ಸ್ಪರ್ಧೆಗಿಂತ ಹೆಚ್ಚಿನ ಮನರಂಜನೆ.&lt;br /&gt;ಈವರೆಗೂ ಈ ವಿಭಾಗ ಒಲಿಂಪಿಕ್ಸ್‌ನ ಭಾಗವೂ ಆಗಿರಲಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ  ಮೊದಲ ಬಾರಿ ಮಿಶ್ರ ಡಬಲ್ಸ್‌ ಟೆನಿಸ್‌ ಸೇರ್ಪಡೆಗೊಂಡಿರುವುದರಿಂದ ಈಗೀಗ ಸ್ವಲ್ಪ ಮಹತ್ವ ಪಡೆದುಕೊಳ್ಳುತ್ತಿದೆ.&lt;br /&gt;ಹಾಗೆ ನೋಡಿದರೆ, ಮಿಶ್ರ ಡಬಲ್ಸ್‌ನಲ್ಲಿ ತಜ್ಞ  ಆಟಗಾರರು, ಖಾಯಂ ಜೋಡಿಗಳೆಂದಿಲ್ಲ. ಬಹುಶಃ ವರ್ತಮಾನದಲ್ಲಿ ಅತ್ಯಂತ ದೀರ್ಘಕಾಲದಿಂದ ಒಟ್ಟಿಗೆ ಆಡುತ್ತಿರುವ ಮಿಶ್ರ ಡಬಲ್ಸ್‌ ಜೋಡಿಯೆಂದರೆ, ಪೇಸ್‌- ಕಾರಾ ಬ್ಲಾಕ್‌ರೇ ಇರಬೇಕು.&lt;br /&gt;ಸಿಂಗಲ್ಸ್‌ ಹಾಗೂ ಡಬಲ್ಸ್‌ ಮಾದರಿಗಳಲ್ಲಿ ಶ್ರೇಯಾಂಕ ಪದ್ಧತಿ  ಇರುವಂತೆ ಮಿಶ್ರ ಮಾದರಿಯಲ್ಲಿ ಇಲ್ಲ.  ಗ್ರಾಂಡ್‌ಸ್ಲಾಂಗಳಲ್ಲಿ ಕೆಲವು ಶ್ರೇಯಾಂಕ ಆಟಗಾರರು ಪಂದ್ಯಾ ಭ್ಯಾಸಕ್ಕೆ ನೆರವಾಗುತ್ತದೆ ಎಂಬ ಕಾರಣದಿಂದ ಇಲ್ಲವೇ, ಸಿಂಗಲ್ಸ್‌ನಲ್ಲಿ ಸೋತರೆ, ಇಲ್ಲಾದರೂ ಗೆಲ್ಲಬಹುದು ಎಂಬ ಆಶಾವಾದದಿಂದ ಮಿಶ್ರ ಡಬಲ್ಸ್‌ನಲ್ಲಿ ಭಾಗವಹಿಸು ತ್ತಾರೆ. ಹಾಗಾಗಿ, ಪ್ರತೀ ಟೂರ್ನಿಗಳಲ್ಲೂ ಟೂರ್ನಿ ಆರಂಭವಾದ ನಂತರವೇ, ಈ ವಿಭಾಗದಲ್ಲಿ ಸ್ಪರ್ಧಿಸುವವರ ನಿರ್ಣಯವಾಗುತ್ತದೆ. ಪ್ರತೀ ಬಾರಿ ಹೊಸ ಹೊಸ ಜೋಡಿಗಳು ಕಾಣಸಿಗುತ್ತವೆ. ಆಟಗಾರರ ಸಿಂಗಲ್ಸ್‌ ಶ್ರೇಯಾಂಕ ಆಧರಿಸಿ ಈ ವಿಭಾಗದ ಜೋಡಿಗಳಿಗೆ ಶ್ರೇಯಾಂಕ ನೀಡಲಾಗುತ್ತದೆ. ಕೆಲವೊಮ್ಮೆ ಅಪೇಕ್ಷಿತ ಜೋಡಿಗಳು ಕಣದಲ್ಲಿಲ್ಲದೆ, ಕೆಲವರಿಗೆ ಬೈ ಸಿಗುವುದೂ ಇದೆ.&lt;br /&gt;ಒಟ್ಟಿನಲ್ಲಿ ಸಿಂಗಲ್ಸ್‌ ಅಥವಾ ಪುರುಷರ ಡಬಲ್ಸ್‌ನಲ್ಲಿ ಕಾಣುವಷ್ಟು ಸ್ಪರ್ಧಾತ್ಮಕತೆ ಇಲ್ಲಿ ಕಾಣಸಿಗುವುದಿಲ್ಲ. ಆದರೆ, ಇಲ್ಲಿ ಆಡುವುದರಿಂದ ಲಭಿಸುವ ಹಣ ಆಟಗಾರರ ಪಾಲಿಗೆ ಬೋನಸ್‌. ಆ ಕಾರಣಕ್ಕಾಗಿ ಆಡುವವರೂ ಇದ್ದಾರೆ.&lt;br /&gt;ಇಂಥ ಸಂಗತಿಗಳೇನೇ ಇದ್ದರೂ, ಭಾರತೀಯ ಆಟಗಾರರು ಈ ವಿಭಾಗದಲ್ಲಿ ಗಂಭೀರವಾಗಿ ಸ್ಪರ್ಧಿಸುತ್ತಾರೆ ಎಂದೇ ಹೇಳಬೇಕು. ಸಿಂಗಲ್ಸ್‌ (ಇಲ್ಲವೇ ಇಲ್ಲ) ಹಾಗೂ ಡಬಲ್ಸ್‌ಗಿಂತ ಮಿಶ್ರ ಡಬಲ್ಸ್‌ನಲ್ಲೇ ಭಾರತೀಯರಿಗೆ ಪ್ರಶಸ್ತಿ ಅವಕಾಶ ಜಾಸ್ತಿ ಇರುವುದಕ್ಕೂ ಅದೇ ಕಾರಣ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಟೆನಿಸ್‌ ಚಿನ್ನ ಗೆಲ್ಲುವ ಕನಸು ಕಾಣುತ್ತಿರುವುದು ಸಹ ಮಿಶ್ರ ಡಬಲ್ಸ್‌ ಸ್ಪರ್ಧೆಯನ್ನು ಗಮನದಲ್ಲಿರಿಸಿಕೊಂಡೇ. ವಾಸ್ತವದಲ್ಲಿಯೂ ಭಾರತಕ್ಕೆ ಅಂಥ ಅವಕಾಶಗಳಿದ್ದೇ ಇವೆ.&lt;br /&gt;ಆದರೂ, ಲಿಯಾಂಡರ್‌ ಪೇಸ್‌ ಆರಂಭದಿಂದಲೂ ಪುರುಷರ ಡಬಲ್ಸ್‌ನಷ್ಟೇ ಮಿಶ್ರ ಡಬಲ್ಸ್‌ನಲ್ಲೂ ಗಂಭೀರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಹಲವು ವರ್ಷಗಳ ಕಾಲ ಮಹಿಳಾ ಟೆನಿಸ್‌ ದಂತಕಥೆ ಮಾರ್ಟಿನಾ ನವ್ರಾಟಿಲೋವ ಅವರ ಸಾಂಗತ್ಯ ಹೊಂದಿದ್ದರು. ಸದ್ಯ ಜಿಂಬಾಬ್ವೆಯ ಕಾರಾ ಬ್ಲಾಕ್‌ ಜೊತೆಗಿನ ಅವರ ಜೊತೆಯಾಟವೂ ಭರ್ಜರಿಯಾಗಿ ಸಾಗುತ್ತಿದೆ. 2008ರಲ್ಲಿ ಯುಎಸ್‌ ಓಪನ್‌ ಗೆದ್ದಿದ್ದ ಪೇಸ್‌ ಮತ್ತು ಕಾರಾ ಕಳೆದ ವರ್ಷ ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ನಲ್ಲಿ ಫೈನಲ್‌ ತಲುಪಿ ಸೋತಿದ್ದರು. ಆದರೆ, ಈ ಬಾರಿ ಆಸ್ಟ್ರೇಲಿಯಾದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಈ ಜೋಡಿ ಋತುವಿನ ಮುಂದಿನ ಗ್ರಾಂಡ್‌ಸ್ಲಾಂಗಳಿಗೆ ವಿಶ್ವಾಸ ಹೆಚ್ಚಿಸಿಕೊಂಡಿದೆ.&lt;br /&gt;ಪೇಸ್‌ ವಯಸ್ಸು ಮಾಗಿದಷ್ಟೂ ತರುಣರಾಗುತ್ತಿದ್ದಾರೆ. ಭಾನುವಾರದ ಫೈನಲ್‌ನಲ್ಲಿ  ಅವರು ಚಿರತೆ ವೇಗದಲ್ಲಿ ಕೋರ್ಟ್‌ನಲ್ಲಿ ಓಡುತ್ತಿದ್ದರೆ ಎದುರಾಳಿಗಳು ದಂಗಾದರು. ಸ್ವತಃ ಜೊತೆಗಾರ್ತಿ ಬ್ಲಾಕ್‌ ಸಹ ಚಕಿತರಾಗಿದ್ದರು. ಆಟವಾಡುವಾಗ ಅವರ ತಾದಾತ್ಮ್ಯ, ಉನ್ಮತ್ತತೆ, ಏಕಚಿತ್ತ, ಆವೇಶ, ಆವೇಗ ಇವೆಲ್ಲವೂ ಅನುಕರಣೀಯ.&lt;br /&gt;36ನೇ ವರ್ಷದಲ್ಲಿ 21ನೇ ಗ್ರಾಂಡ್‌ಸ್ಲಾಂ ಫೈನಲ್‌ನಲ್ಲಿ 11ನೇ ಪ್ರಶಸ್ತಿ ಜಯಿಸಿರುವ ಲಿಯಾಂಡರ್‌ಗೆ ಅಭಿನಂದಿಸಲೇಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-8638286594278652269?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/8638286594278652269/comments/default' title='Post Comments'/><link rel='replies' type='text/html' href='http://ragaakshara.blogspot.com/2010/02/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/8638286594278652269'/><link rel='self' type='application/atom+xml' href='http://www.blogger.com/feeds/2998842447029730227/posts/default/8638286594278652269'/><link rel='alternate' type='text/html' href='http://ragaakshara.blogspot.com/2010/02/blog-post.html' title='ದೊರೆಯ ಸಾಮ್ರಾಜ್ಯ ವಿಸ್ತರಣೆ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_fosRdfQ3Hws/S2gcPIj1w0I/AAAAAAAAAKk/NMZJaSmJX_E/s72-c/paess.JPG' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-280250233989600622</id><published>2010-01-26T17:33:00.002+05:30</published><updated>2010-01-26T17:39:18.088+05:30</updated><title type='text'>ರಾಜಕೀಯ, ರಾಜಕಾರಣಿಗಳಿಂದ ಕ್ರೀಡೆ ಮುಕ್ತವಾಗಬೇಕು</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/S17bR9RmlVI/AAAAAAAAAKc/2heF5dmIR7w/s1600-h/abhinav-bindra_4c.jpg"&gt;&lt;img style="display: block; margin: 0px auto 10px; text-align: center; cursor: pointer; width: 400px; height: 267px;" src="http://2.bp.blogspot.com/_fosRdfQ3Hws/S17bR9RmlVI/AAAAAAAAAKc/2heF5dmIR7w/s400/abhinav-bindra_4c.jpg" alt="" id="BLOGGER_PHOTO_ID_5431019302208050514" border="0" /&gt;&lt;/a&gt;&lt;br /&gt;&lt;br /&gt;ಮೇಲಿನ ಮಾತನ್ನು ಎಲ್ಲರೂ ಒಪ್ಪುತ್ತಾರೆ (ರಾಜಕಾರಣಿಗಳನ್ನು ಬಿಟ್ಟು).&lt;br /&gt;ಆದರೆ, ಹೇಗೆ? ಯಾವಾಗ ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ.&lt;br /&gt;ಕ್ರೀಡೆಗಳ ವಿಷಯಕ್ಕೆ ಬಂದಾಗ ಭಾರತಕ್ಕಿಂತ ದೊಡ್ಡ ವಿಫಲ ರಾಷ್ಟ್ರ ಮತ್ತೊಂದಿಲ್ಲ.&lt;br /&gt;1984ರಿಂದೀಚೆಗೆ ಚೀನಾ 400ಕ್ಕೂ ಹೆಚ್ಚು ಪದಕ ಗೆದ್ದಿದೆ. ಆದರೆ, ಭಾರತ ಗೆದ್ದಿರುವುದು ಕೇವಲ 6. 1996ರಲ್ಲಿ ಒಂದು ಕಂಚು (ಲಿಯಾಂಡರ್‌ ಪೇಸ್‌), 2000ದಲ್ಲಿ ಕಂಚು (ಕರ್ಣಂ ಮಲ್ಲೇಶ್ವರಿ), 2004ರಲ್ಲಿ ಬೆಳ್ಳಿ (ರಾಜ್ಯವರ್ಧನ ಸಿಂಗ್‌ ರಾಥೋಡ್‌), 2008ರಲ್ಲಿ ಚಿನ್ನ (ಅಭಿನವ್‌ ಬಿಂದ್ರಾ) ಮತ್ತು 2 ಕಂಚು  (ಸುಶೀಲ್‌ಕುಮಾರ್‌, ವಿಜೇಂದರ್‌ ಸಿಂಗ್‌).&lt;br /&gt;ವ್ಯಾಪಕ ಸಂಪನ್ಮೂಲ ಹೊಂದಿರುವ ನೂರಾರು ಕೋಟಿ ಜನಸಂಖ್ಯೆಯಿರುವ ಭಾರತದಂಥ ಬೃಹತ್‌ ದೇಶಕ್ಕೆ, ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ ಪ್ರತಿಭೆಗಳನ್ನು ಸೃಷ್ಟಿಸಲೇಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ಕಾರಣ ಎಲ್ಲಾ ಕ್ರೀಡಾ ಒಕ್ಕೂಟಗಳನ್ನು ಆಕ್ರಮಿಸಿಕೊಂಡು ಕುಳಿತಿರುವ ರಾಜಕಾರಣಿಗಳು.&lt;br /&gt;ಸುಮ್ಮನೆ ಉದಾಹರಣೆಗೆ ಹೇಳುವುದಾದರೆ:&lt;br /&gt;ಶರದ್‌ ಪವಾರ್‌ - ಕ್ರಿಕೆಟ್‌&lt;br /&gt;ಅರುಣ್‌ ಜೈಟ್ಲಿ - ಕ್ರಿಕೆಟ್‌&lt;br /&gt;ಲಾಲೂ ಪ್ರಸಾದ್‌ ಯಾದವ್‌ - ಕ್ರಿಕೆಟ್‌&lt;br /&gt;ನರೇಂದ್ರ ಮೋದಿ - ಕ್ರಿಕೆಟ್‌&lt;br /&gt;ಸುರೇಶ್‌ ಕಲ್ಮಾಡಿ - ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ&lt;br /&gt;ವಿಕೆ ಮಲ್ಹೋತ್ರ - ಆರ್ಚರಿ&lt;br /&gt;ಅಭಯ್‌ ಸಿಂಗ್‌ ಚೌಟಾಲ - ಬಾಕ್ಸಿಂಗ್‌&lt;br /&gt;ಅಜಯ್‌ ಸಿಂಗ್‌ ಚೌಟಾಲ - ಟೇಬಲ್‌ ಟೆನಿಸ್‌&lt;br /&gt;ಯಶವಂತ್‌ ಸಿನ್ಹಾ - ಟೆನಿಸ್‌&lt;br /&gt;ವಿದ್ಯಾ ಸ್ಟೋಕ್ಸ್‌ - ಹಾಕಿ&lt;br /&gt;ದಿಗ್ವಿಜಯ್‌ ಸಿಂಗ್‌ - ಶೂಟಿಂಗ್‌&lt;br /&gt;ಕೆಪಿ ಸಿಂಗ್‌ ದೇವ್‌ - ರೋಯಿಂಗ್‌&lt;br /&gt;ಪ್ರಫುಲ್‌ ಪಟೇಲ್‌ - ಫುಟ್‌ಬಾಲ್‌&lt;br /&gt;(ಇಲ್ಲಿ ಉಲ್ಲೇಖಿಸಿರುವುದು ಪ್ರಮುಖರು ಮಾತ್ರ. ರಾಜ್ಯ ಒಕ್ಕೂಟಗಳನ್ನೂ ಸೇರಿಸಿದರೆ ಈ ಪಟ್ಟಿ ಅನಂತ.)&lt;br /&gt;ಸುರೇಶ್‌ ಕಲ್ಮಾಡಿ ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ರಣಧೀರ್‌ ಸಿಂಗ್‌ 23 ವರ್ಷಗಳಿಂದ ಐಒಎ ಕಾರ್ಯದರ್ಶಿಯಾಗಿದ್ದಾರೆ. ವಿಜಯ್‌ ಕುಮಾರ್‌ ಮಲ್ಹೋತ್ರ 34 ವರ್ಷಗಳಿಂದ ಆರ್ಚರಿ ಸಂಸ್ಥೆಯನ್ನು ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಪ್ರಿಯರಂಜನ್‌ ದಾಸ್‌ಮುನ್ಶಿ 15 ವರ್ಷ ಕಾಲ ಅಖಿಲ ಭಾರತ ಫುಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕೊನೆಗೂ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಮೇಲೆ ಅಧಿಕಾರ ಬಿಟ್ಟುಕೊಟ್ಟರು. ಅವರ ಬದಲಿಗೆ ಬಂದವರು ಮತ್ತೊಬ್ಬ ರಾಜಕಾರಣಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್‌ ಪಟೇಲ್‌. ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಬಹಳ ದೀರ್ಘ ಕಾಲದಿಂದ ಮುಂಬೈ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಕೆಲವು ವರ್ಷ ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಶರದ್‌ ಪವಾರ್‌, ಕೆಲವೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಅಧ್ಯಕ್ಷರೂ ಆಗಲಿದ್ದಾರೆ. ಉತ್ತರ ಕರ್ನಾಟಕದಲ್ಲಿ, ಮಹಾರಾಷ್ಟ್ರದಲ್ಲಿ, ಆಂಧ್ರ, ಬಿಹಾರಗಳಲ್ಲಿ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವಾಗ ಪವಾರ್‌ ಸಾಹೇಬರು ಮಹತ್ವದ ವಿಶ್ವಕಪ್‌ ಕ್ರಿಕೆಟ್‌ ಸಂಘಟನಾ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿರುತ್ತಾರೆ.&lt;br /&gt;ಹೋಗಲಿ, ಈ ರಾಜಕಾರಣಿಗಳು ಇಷ್ಟು ದೀರ್ಘ ಕಾಲದಿಂದ ಆಡಳಿತದಲ್ಲಿರುವುದರಿಂದ ಕ್ರೀಡೆಗೆ ಯಾವ ರೀತಿಯಾದರೂ ಲಾಭವಾಗಿದೆಯೇ? ಖಂಡಿತವಾಗಿಯೂ ಇಲ್ಲ. ಲಾಭವಾಗಿರುವುದೆಲ್ಲಾ ರಾಜಕಾರಣಿಗಳಿಗೆ ಮಾತ್ರ.&lt;br /&gt;ಜನ ಪ್ರತಿನಿಧಿಗಳು ಕ್ರೀಡಾ ಸಂಸ್ಥೆಗಳಲ್ಲಿದ್ದರೆ, ಸರ್ಕಾರದಿಂದ ವಿವಿಧ ಅನುದಾನ, ವಿನಾಯತಿಗಳನ್ನು ಪಡೆಯಲು ಅನುಕೂಲವಾಗುತ್ತದೆ ಎನ್ನುವುದು ಇದರ ಹಿಂದಿನ ಮೂಲ ಉದ್ದೇಶವಾಗಿತ್ತು. ಆದರೆ, ಅದಾಗಿಲ್ಲ.&lt;br /&gt;ಸುರೇಶ್‌ ಕಲ್ಮಾಡಿ ದೇಶದಲ್ಲಿ ನಿರಂತರವಾಗಿ ವಿವಿಧ ಅಂತಾರಾಷ್ಟ್ರೀಯ ಕೂಟಗಳನ್ನು ಸಂಘಟಿಸುತ್ತಿರಬಹುದು. ಆದರೆ, ಅದರಿಂದ ದೇಶದ ಅಥ್ಲೀಟ್‌ಗಳಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಆಗೊಮ್ಮೆ, ಈಗೊಮ್ಮೆ ಪಿಟಿ ಉಷಾ, ಅಂಜು ಬಾಬ್ಬಿ ಜಾರ್ಜ್‌ರಂಥವರು ಹೊರಹೊಮ್ಮಿದರೂ, ಅದಕ್ಕೆ ಅವರ ವೈಯಕ್ತಿಕ ಶ್ರಮ ಕಾರಣವೇ ಹೊರತು, ಕಲ್ಮಾಡಿ ಅಥವಾ ಒಲಿಂಪಿಕ್ಸ್‌ ಸಂಸ್ಥೆ, ಅಥ್ಲೆಟಿಕ್ಸ್‌ ಸಂಸ್ಥೆಗಳ ಕೊಡುಗೆ ಏನೂ ಇರುವುದಿಲ್ಲ.&lt;br /&gt;ಆರ್ಚರಿಯಲ್ಲಿ ಪ್ರತೀ ವಿಶ್ವಕಪ್‌, ಒಲಿಂಪಿಕ್ಸ್‌ಗೆ ನಮ್ಮವರು ತೆರಳುತ್ತಾರೆ. ಆದರೆ, ಖಾಲಿ ಕೈಯಲ್ಲಿ ಮರಳುತ್ತಾರೆ. ಚೀನಾ, ಕೊರಿಯಾದ ಗುರಿಕಾರರ ಎದುರು ನಮ್ಮವರು ವಿಚಲಿತರಾಗುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಅಭಿನವ್‌ ಬಿಂದ್ರಾ, ರಾಜ್ಯವರ್ಧನ ಸಿಂಗ್‌ ರಾಥೋಡ್‌ ತಮ್ಮ ಯಶಸ್ಸಿಗೆ ವೈಯಕ್ತಿಕ ಶ್ರಮ ಕಾರಣವೇ ಹೊರತು ಭಾರತೀಯ ರಾಷ್ಟ್ರೀಯ ರೈಫಲ್ಸ್‌ ಸಂಸ್ಥೆ (ಎನ್‌ಆರ್‌ಎಐ) ಕೊಡುಗೆ ಸೊನ್ನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.&lt;br /&gt;1995ರ ಸುಮಾರಿಗೆ ಫುಟ್‌ಬಾಲ್‌ನಲ್ಲಿ ಭಾರತ ವಿಶ್ವ ಶ್ರೇಯಾಂಕದಲ್ಲಿ 95ರ ಆಸುಪಾಸಿನಲ್ಲಿತ್ತು. ಆಗ ಏಷ್ಯಾದ ಅಗ್ರಗಣ್ಯ ತಂಡಗಳಲ್ಲೊಂದಾಗಿತ್ತು. ಆದರೆ, ಈಗ ಭಾರತ ತಂಡ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ದೇಶಗಳಿಗಿಂತ ಮಾತ್ರ ಉತ್ತಮ ತಂಡ. ಒಲಿಂಪಿಕ್ಸ್‌, ವಿಶ್ವಕಪ್‌ಗಳು ದೂರದ ಬೆಟ್ಟ.&lt;br /&gt;ಇನ್ನು ಟೇಬಲ್‌ ಟೆನಿಸ್‌, ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌ ಎಲ್ಲಾ ಹಣೆಬರಹವೂ ಅಷ್ಟೇ. ಟೆನಿಸ್‌ನಲ್ಲೂ ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ತಮ್ಮ ದಾರಿ ಹುಡುಕಿಕೊಂಡ ಕಾರಣಕ್ಕೆ ಅಖಿಲ ಭಾರತ ಟೆನಿಸ್‌ ಸಂಸ್ಥೆಗಿಂತ ಎತ್ತರ ಬೆಳೆದು ನಿಂತಿದ್ದಾರೆ.&lt;br /&gt;ಕ್ರಿಕೆಟ್‌ ಸಂಸ್ಥೆಯಾದರೆ, ಹಣದ ಹೊಳೆಯೇ ಹರಿಯುತ್ತದೆ. ಉಳಿದ ಸಂಸ್ಥೆಗಳಿಗೆ ಯಾವ ಪ್ರಾಯೋಜಕರೂ ಬರುವುದಿಲ್ಲ. ಆದರೂ, ರಾಜಕಾರಣಿಗಳು ಅವುಗಳತ್ತ ಆಕರ್ಷಿತರಾಗಿರುವುದೇಕೆ?&lt;br /&gt;ಒಲಿಂಪಿಕ್ಸ್‌ ಸಂಸ್ಥೆಯ ಮಾನ್ಯತೆ ಹೊಂದಿದ ಎಲ್ಲಾ ಕ್ರೀಡೆಗಳಿಗೆ ಸರ್ಕಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಹಣ ಬಿಡುಗಡೆ ಮಾಡುತ್ತದೆ. ಯಾವುದೇ ವಿದೇಶಿ ಪ್ರವಾಸ, ಕ್ರೀಡಾಕೂಟಗಳಿಗೆ ರಾಷ್ಟೀಯ ತಂಡವನ್ನು ಆಯ್ಕೆ ಮಾಡುವಾಗ  ತಂಡದ ತರಬೇತಿ, ಆಹಾರ, ಅಭ್ಯಾಸ ಸೌಲಭ್ಯಗಳು, ವಿದೇಶಿ ಪ್ರವಾಸಕ್ಕೆಂದು ಸಾಕಷ್ಟು ಪ್ರಮಾಣದಲ್ಲಿ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ  ಉದ್ದೇಶಕ್ಕೆ ತಕ್ಕಂತೆ ಖರ್ಚಾಗುವ ಹಣ ಬಹಳ ಕಡಿಮೆ. ಉಳಿದದ್ದೆಲ್ಲಾ ಅಧಿಕಾರಿಗಳ ಜೇಬಿಗೆ ಹೋಗುತ್ತದೆ. ಈ ಹಣದಲ್ಲೇ ಅಧಿಕಾರಿಗಳೂ ವಿದೇಶ ಪ್ರವಾಸ ಮಾಡಿ ಬರುತ್ತಾರೆ. ಯಾವಾಗಲೂ ವಿದೇಶ ಪ್ರವಾಸಗಳ ಸಂದರ್ಭದಲ್ಲಿ  ಆಡುವ ತಂಡಕ್ಕಿಂತ ಅಧಿಕಾರಿಗಳ ಬಳಗವೇ ದೊಡ್ಡದಾಗಿರುವುದಕ್ಕೆ ಇದೇ ಕಾರಣ.&lt;br /&gt;ರಾಷ್ಟ್ರೀಯ ಹಾಕಿ ಕರ್ಮಕಾಂಡ&lt;br /&gt;ಕಳೆದ ಕೆಲವು ದಿನಗಳಿಂದ ಹಾಕಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಘನತೆಯನ್ನು ಮೂರಾಬಟ್ಟೆ ಮಾಡಿವೆ. ಭಾರತೀಯ ಹಾಕಿ ಇಂದು ಜಗತ್ತಿನ ಎದುರು ಹಾಸ್ಯಾಸ್ಪದವಾಗಿದ್ದರೆ, ಅದಕ್ಕೆ ಆಡಳಿತಾಧಿಕಾರಿಗಳು ಕಾರಣ.&lt;br /&gt;ಸರಿಯಾಗಿ ಇನ್ನೊಂದು ತಿಂಗಳಲ್ಲಿ ವಿಶ್ವಕಪ್‌ ಹಾಕಿ ಪ್ರಪ್ರಥಮ ಬಾರಿ ಭಾರತದಲ್ಲಿ ನಡೆಯಬೇಕಿದೆ. ಆದರೆ, ಸಂಘಟಕ ಸಂಸ್ಥೆಯ ಅವಾಂತರಗಳಿಂದಾಗಿ ಕೊನೆಯ ಕ್ಷಣದಲ್ಲಿ ಟೂರ್ನಿಯ ಆತಿಥ್ಯ ಬೇರೆ ರಾಷ್ಟ್ರದ ಪಾಲಾಗುವ ಅಪಾಯ ತಲೆದೋರಿತ್ತು. ಹಾಗೆ ನೋಡಿದರೆ, ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹಾಕಿ ಅರಾಜಕ ವಾಗಿದೆ. ಆಡಳಿತಕ್ಕೊಂದು ಸಂಸ್ಥೆಯೇ ಇಲ್ಲ. ಹಂಗಾಮಿ ಸಮಿತಿಯ ಮೂಲಕ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯೇ ಅಧಿಕಾರ ಮೆರೆಯುತ್ತಿದೆ. ಫೆಬ್ರವರಿ 7ರಂದು ಚುನಾವಣೆ ನಡೆಯಬೇಕಿತ್ತಾದರೂ, ಅದು ಅಕಾರಣವಾಗಿ ಮುಂದೂಡಿಕೆಯಾಗಿದೆ.&lt;br /&gt;ಏತನ್ಮಧ್ಯೆ ಆಟಗಾರರ ಸಂಭಾವನೆ ವಿಷಯ ನಗೆಪಾಟಲಿನ ಸಂಗತಿಯಾಗಿದೆ. ಆಟಗಾರರನ್ನು ಮನಸೋಇಚ್ಛೆ ದುಡಿಸಿಕೊಳ್ಳುವ ಹಾಕಿ ಇಂಡಿಯಾ ಬಳಿ ಸಂಭಾವನೆ ಕೊಡಲು ಹಣವಿಲ್ಲ. ಕೊನೆಗೂ ಪ್ರಾಯೋಜಕ ಸಂಸ್ಥೆ ಸಹಾರಾ 1 ಕೋಟಿ ರೂ. ನೀಡಿದ್ದರಿಂದ ಆಟಗಾರರ ಮುಷ್ಕರ ಕೊನೆಗೊಂಡಿತು. ಆದರೆ, ಮಹಿಳೆಯರ ಮುಷ್ಕರ ಮುಂದುವರಿದಿದೆ. ಆಟಗಾರ್ತಿಯರಿಗೆಂದೇ ಮಧ್ಯ ಪ್ರದೇಶ ಸರ್ಕಾರ 1 ಕೋಟಿ ರೂ. ನೀಡಿದ್ದರೂ, ಅದನ್ನು ಕೇಂದ್ರ ಕ್ರೀಡಾ ಸಚಿವಾಲಯ ಆಟಗಾರ್ತಿಯರಿಗೆ ವಿತರಣೆ ಮಾಡದೆ, ರಾಷ್ಟ್ರೀಯ ನಿಧಿ ಸ್ಥಾಪಿಸಲು ಮುಂದಾಗಿದೆ!&lt;br /&gt;ಒಟ್ಟಿನಲ್ಲಿ ಹಾಕಿ ಈ ರೀತಿ  ಬೀದಿಗೆ ಬೀಳುವುದಕ್ಕೆ ಆಡಳಿತಶಾಹಿ ಕಾರಣ. ಭಾರತೀಯ ಹಾಕಿ ಒಕ್ಕೂಟ (ಐಎಚ್‌ಎಫ್‌) ಅಸ್ತಿತ್ವದಲ್ಲಿದ್ದಾಗ ಮಾಜಿ ಐಪಿಎಸ್‌ ಅಧಿಕಾರಿ ಕೆಪಿಎಸ್‌ ಗಿಲ್‌ ಸಂಸ್ಥೆಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು. 8 ಬಾರಿಯ ಒಲಿಂಪಿಕ್ಸ್‌ ಹಾಗೂ 1975ರ ವಿಶ್ವ ಚಾಂಪಿಯನ್‌ ಎನಿಸಿಕೊಂಡಿದ್ದ ಭಾರತೀಯ ಹಾಕಿ ಗಿಲ್‌ ಅಡಿಯಲ್ಲಿ ಸತತ 15 ವರ್ಷ ಕಾಲ ಅವನತಿಯ ಹಾದಿ ಹಿಡಿಯಿತು. ಕೊನೆಗೂ 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಗಳಿಸಲೂ ವಿಫಲಗೊಂಡಾಗ ಗಿಲ್‌ ದುರಾಡಳಿತ ಕೊನೆಗೊಂಡಿತು. ಜೂನಿಯರ್‌ ಆಟಗಾರನೊಬ್ಬನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಒಕ್ಕೂಟದ ಕಾರ್ಯದರ್ಶಿ ಜ್ಯೋತಿಕುಮಾರನ್‌ ಲಂಚ ಪಡೆದ ಸಂಗತಿ ಕ್ಯಾಮೆರಾ ಎದುರು ಬಯಲಾದಾಗ ಒಕ್ಕೂಟವನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಬರ್ಖಾಸ್ತುಗೊಳಿಸಿತು. ಆನಂತರ ಹೊಸದಾಗಿ ಚುನಾವಣೆ ನಡೆಸುವ ಗೋಜಿಗೆ ಹೋಗದೆ ತತ್ಫೂರ್ತ ಸಮಿತಿ ಮುಖಾಂತರ ಐಒಎ ದುರಾಡಳಿತ ಶುರುವಾಯಿತು. ಈ ಮಧ್ಯೆ ಹಾಕಿಯ ವಿಶ್ವ ಒಕ್ಕೂಟ (ಎಫ್‌ಐಎಚ್‌) ಚುನಾವಣೆ ನಡೆಸುವುದಕ್ಕೆ ಗಡುವು ನೀಡಿತು. ಗಡುವು ಮೀರಿದರೆ, ವಿಶ್ವಕಪ್‌ ಆತಿಥ್ಯ ಕಿತ್ತುಕೊಳ್ಳುವುದಾಗಿ ಬೆದರಿಕೆ ಒಡ್ಡಿತು. ಈ ಬೆದರಿಕೆ ನಡುವೆಯೇ ಹಾಕಿ ಇಂಡಿಯಾ ಎಂಬ ಹೊಸ ಹೆಸರಿನಲ್ಲಿ ನಾಮಕರಣ ಪದಾಧಿಕಾರಿಗಳೊಂದಿಗೆ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಆದರೆ, ರಾಜ್ಯ ಘಟಕಗಳ ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಶುರುವಾಯಿತು. ಹಿಂದೆ ಹಾಕಿಯನ್ನು ಹಾಳು ಮಾಡಲು ಗಿಲ್‌ ಮಾತ್ರ ಇದ್ದರು. ಈಗ ಸುರೇಶ್‌ ಕಲಾಡಿ, ಕ್ರೀಡಾ ಸಚಿವಾಲಯ (ಎಂಎಸ್‌ ಗಿಲ್‌) ಎಲ್ಲರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ.&lt;br /&gt;ಲಲಿತ್‌ ಮೋದಿ ಎಂಬ ರಾಜಕಾರಣಿಯಲ್ಲದ ಆಡಳಿತಾಧಿಕಾರಿ ವಿಶ್ವದ ಅತ್ಯಂತ ದೊಡ್ಡ ಕ್ಲಬ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅನ್ನು ಎರಡು ವರ್ಷ ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸುವ ಮೂಲಕ ಮಾದರಿಯಾಗಿದ್ದರು. ವಿಶ್ವಕಪ್‌ ಹಾಕಿ, ಕಾಮನ್ವೆಲ್ತ್‌ ಕ್ರೀಡಾಕೂಟದ ಸಂಘಟಕರು ಮೋದಿಯನ್ನು ನೋಡಿ ಕಲಿಯಬಹುದಿತ್ತು. ಆದರೆ, ರಾಜಕಾರಣಿಗಳ ರಾಜಕಾರಣದಿಂದಾಗಿ ಐಪಿಎಲ್‌ 3ನೇ ಆವೃತ್ತಿಯ ಹೊತ್ತಿಗೆ ಮೋದಿ ಅಧಿಕಾರವೇ ಮೊಟಕುಗೊಂಡಿದೆ. ಇದು ಭಾರತೀಯ ಕ್ರೀಡೆಗಳ ದುರ್ವಿಧಿ.&lt;br /&gt;ಶೂಟಿಂಗ್‌ ಅವಾಂತರ&lt;br /&gt;ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಸತತ ಎರಡು ಅವಧಿಗಿಂಥ ಹೆಚ್ಚು ಕಾಲ ಅಧಿಕಾರದಲ್ಲಿರುವಂತಿಲ್ಲ ಎಂಬ ಸರ್ಕಾರದ ನಿಯಮವೊಂದಿದೆ. ಅದು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ, ದೇಶದ ಎಲ್ಲಾ ಕ್ರೀಡಾ ಒಕ್ಕೂಟಗಳ ಪದಾಧಿಕಾರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ. ಇತ್ತೀಚೆಗೆ ರಾಷ್ಟ್ರೀಯ ರೈಫಲ್ಸ್‌ ಸಂಸ್ಥೆಗೆ (ಎನ್‌ಆರ್‌ಎಐ) ಇಂಥ ಬಿಸಿ ತಗುಲಿತು. ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಚುನಾವಣೆ ಕಾನೂನುಬಾಹಿರ ಎಂದು ನ್ಯಾಯಾಲಯವೊಂದು ತೀರ್ಪು ನೀಡಿತು. ಅದರಿಂದಾಗಿ ಎನ್‌ಆರ್‌ಎಐ ಆಡಳಿತ ಸಂಸ್ಥೆ ಅಧಿಕಾರ ಕಳೆದುಕೊಂಡಿದೆ. ಈ ವಿವಾದದ ನಡುವೆಯೇ ಕಾಮನ್ವೆಲ್ತ್‌ ಹಾಗೂ ವಿಶ್ವಕಪ್‌ ತಂಡಗಳಿಂದ ಅಭಿನವ್‌ ಬಿಂದ್ರಾರನ್ನು ಕೈಬಿಟ್ಟು ಎನ್‌ಆರ್‌ಎಐ ಬೆಚ್ಚಿಬೀಳಿಸಿತು. ಭಾರತದ ಏಕೈಕ ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ಹಾಗೂ ರಾಜೀವ್‌ ಗಾಂಧಿ ಖೇಲ್‌ರತ್ನ ಪುರಸ್ಕೃತ ಶೂಟರ್‌ ಭಾರತ ತಂಡಕ್ಕೆ ಆಯ್ಕೆಯಾಗುವುದಕ್ಕೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಬೇಕೆಂದರೆ, ಅದಕ್ಕಿಂತ ಅಪಚಾರ ಇನ್ನೊಂದಿಲ್ಲ. ನಿಜ. ಕ್ರೀಡೆಯಲಿ ಹಾಲಿ ಫಾರ್ಮ್‌ಗೆ ಬೆಲೆಯೇ ಹೊರತು ಪೂರ್ವಸಾಧನೆಗಲ್ಲ. ಆದರೆ, ಬಿಂದ್ರಾ ವಿದೇಶದಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಗಳಿಸಿದ್ದ ಅಂಕಗಳನ್ನು ಪರಿಗಣಿಸದೆ  ಎನ್‌ಆರ್‌ಎಐ ದಾರ್ಷ್ಟ್ಯ ಮೆರೆಯಿತು.&lt;br /&gt;ಅಧಿಕಾರದ ಕುರ್ಚಿಯಲ್ಲಿ ಅನರ್ಹರು ಕುಳಿತಿರುವವರೆಗೂ, ಸಾಧಕರಿಗೆ ಅರ್ಹ ಗೌರವ ಸಲ್ಲುವುದಿಲ್ಲ. ಈ ದೇಶ ಕಪಿಲ್‌ ದೇವ್‌, ಪಿಟಿ ಉಷಾ, ಪ್ರಕಾಶ್‌ ಪಡುಕೋಣೆಯಂಥ ಕ್ರೀಡಾ ದಂತಕಥೆಗಳಿಗೂ ವಿವಿಧ ಸಂದರ್ಭಗಳಲ್ಲಿ ಅಗೌರವ ತೋರಿದೆ.  ಆ ಪಟ್ಟಿಗೆ ಬಿಂದ್ರಾ ಹೊಸ ಸೇರ್ಪಡೆ ಅಷ್ಟೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-280250233989600622?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/280250233989600622/comments/default' title='Post Comments'/><link rel='replies' type='text/html' href='http://ragaakshara.blogspot.com/2010/01/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/280250233989600622'/><link rel='self' type='application/atom+xml' href='http://www.blogger.com/feeds/2998842447029730227/posts/default/280250233989600622'/><link rel='alternate' type='text/html' href='http://ragaakshara.blogspot.com/2010/01/blog-post.html' title='ರಾಜಕೀಯ, ರಾಜಕಾರಣಿಗಳಿಂದ ಕ್ರೀಡೆ ಮುಕ್ತವಾಗಬೇಕು'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/S17bR9RmlVI/AAAAAAAAAKc/2heF5dmIR7w/s72-c/abhinav-bindra_4c.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-8473095927849732262</id><published>2010-01-05T23:52:00.003+05:30</published><updated>2010-01-06T00:01:09.476+05:30</updated><title type='text'>2010</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/S0OFJ1pxWwI/AAAAAAAAAKU/xeS-4rx_578/s1600-h/13-feb-07-wta+tennis-7.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 198px;" src="http://2.bp.blogspot.com/_fosRdfQ3Hws/S0OFJ1pxWwI/AAAAAAAAAKU/xeS-4rx_578/s320/13-feb-07-wta+tennis-7.jpg" alt="" id="BLOGGER_PHOTO_ID_5423324780351806210" border="0" /&gt;&lt;/a&gt;&lt;br /&gt;&lt;span style="font-size:130%;"&gt;&lt;span style="font-weight: bold;"&gt;ಪರಿಶುದ್ಧ ಸಾಧನೆಗಳ ಕ್ರೀಡಾ ವರ್ಷವಾಗಲಿ&lt;/span&gt;&lt;/span&gt;&lt;br /&gt;&lt;br /&gt;ಜೀವನದ ಸುಖ -ಸ್ವಾರಸ್ಯ ನಾಳೆಯ ಬಗ್ಗೆ ಕನಸು ಕಾಣುವುದರಲ್ಲಿದೆ.  ವರ್ತಮಾನ ಎನ್ನುವುದು ವಾಸ್ತವ. ವಾಸ್ತವ ಯಾವಾಗಲೂ ಸಿಹಿಯಾಗಿರುವುದಿಲ್ಲ.&lt;br /&gt;ಕಳೆದುಹೋದ ನಿನ್ನೆಗಳು ನಮ್ಮ ಕೈಯಲ್ಲಿರುವುದಿಲ್ಲ. ತಮ್ಮ ಇಷ್ಟದಂತೆ, ನಿರ್ಧಾರದಂತೆ ವರ್ತಮಾನದಲ್ಲಿ ಬದುಕುವವರು ಹೆಚ್ಚು ಮಂದಿ ಇರುವುದಿಲ್ಲ. ಅದು ಎಲ್ಲರಿಂದ ಸಾಧ್ಯವೂ ಇಲ್ಲ.&lt;br /&gt;ಹಾಗಾದರೆ, ನಮ್ಮ ನಾಳೆಗಳು ಹೇಗಿರಬೇಕು ಎಂದು ಕನಸು ಕಾಣುವುದರಲ್ಲಿ, ಅಂಥ ನಾಳೆಗಾಗಿ ಪ್ರಯತ್ನಿಸುವುದರಲ್ಲಿ ಬದುಕಿನ ನಿಜವಾದ ಸುಖವಿದೆ.&lt;br /&gt;``ಕಾಲಚಕ್ರ ತಿರುಗುತಲಿದೆ&lt;br /&gt;ತಡೆರಹಿತ ವಾಹನ&lt;br /&gt;ಅದಕವನೇ ಚಾಲಕ&lt;br /&gt;ಅದಕವನೇ ಮಾಲಿಕ&lt;br /&gt;ನಡುವೆ ನಾ ಪ್ರಯಾಣಿಕ''&lt;br /&gt;ಕಣ್ಣುಮುಚ್ಚಿ ತೆರೆಯುವ ವೇಗದಲ್ಲಿ 2010 ಬಂದೇ ಬಿಟ್ಟಿದೆ. 2009 ಹೇಗಿತ್ತು, ಹೀಗಿತ್ತು, ಹಾಗಿತ್ತು ಎಂದು ಕೂರುವ ಕಾಲ ಸರಿಯಿತು. ಈಗೇನಿದ್ದರೂ, ವರ್ತಮಾನದ ವರ್ಷದ ಬಗ್ಗೆ ಕ್ರಿಯಾಶೀಲ ಸಂಕಲ್ಪ ತೊಡುವ ಕಾಲ. ನಡೆಯಲೊಂದು ದಾರಿ, ಸಾಧಿಸಲೊಂದು ಗುರಿ, ಆ ನಿಟ್ಟಿನಲ್ಲೊಂದು ಕಟ್ಟುನಿಟ್ಟಿನ ವೇಳಾಪಟ್ಟಿ ಹಾಕಿಕೊಳ್ಳುವ ಕಾಲ.&lt;br /&gt;2010 ಯಾವ ರೀತಿಯಿಂದ ನೋಡಿದರೂ ಕ್ರೀಡಾವರ್ಷವಾಗಲಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ಹಾಕಿ ವಿಶ್ವಕಪ್‌, ಏಪ್ರಿಲ್‌-ಮೇನಲ್ಲಿ ಫುಟ್‌ಬಾಲ್‌ ವಿಶ್ವಕಪ್‌, ಅಕ್ಟೋಬರ್‌ನಲ್ಲಿ ಕಾಮನ್ವೆಲ್ತ್‌ ಕ್ರೀಡಾಕೂಟ, ಇವುಗಳ ಜೊತೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಭಾರತದ ವಿಸ್ತೃತ ಕ್ರಿಕೆಟ್‌ ವೇಳಾಪಟ್ಟಿ,  ನಾಲ್ಕು ಟೆನಿಸ್‌ ಗ್ರಾಂಡ್‌ಸ್ಲಾಂಗಳು, ಎಂದಿನಂತೆ ಫಾರ್ಮುಲಾ-1, ಅಥ್ಲೆಟಿಕ್ಸ್‌, ಗಾಲ್ಫ್‌, ಬ್ಯಾಡ್ಮಿಂಟನ್‌, ಹಾಕಿ ಮೊದಲಾದ ಕ್ರೀಡೆಗಳ ವಾರ್ಷಿಕ ವೇಳಾಪಟ್ಟಿ. ಒಟ್ಟಿನಲ್ಲಿ ವರ್ಷಪೂರ್ತಿ ಭಾರತದಲ್ಲಿ ಹಾಗೂ ವಿಶ್ವದಲ್ಲಿ ವಿವಿಧ ಕ್ರೀಡೆಗಳ ರಸದೌತಣ.&lt;br /&gt;ಭಾರತದ  ನಿರೀಕ್ಷೆಗಳೇನು?&lt;br /&gt;ಸಾನಿಯಾ ಮಿರ್ಜಾ ಈ ವರ್ಷವೂ ಒಂದು ಗ್ರಾಂಡ್‌ಸ್ಲಾಂ ಗೆಲ್ಲಲಿ ಎಂದು ಕನಸು ಕಾಣಬಹುದು. ಬೆಚ್ಚಿಬೀಳುವ ಅಗತ್ಯವಿಲ್ಲ. ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಮಹೇಶ್‌ ಭೂಪತಿ ಜೊತೆ ಆಡುವುದರಿಂದ 2009ರ ಆಸ್ಟ್ರೇಲಿಯನ್‌ ಓಪನ್‌  ಗೆಲುವಿನ ಸಾಧನೆ ಪುನರಾವರ್ತಿಸುವ ಅವಕಾಶ ಇದ್ದೇ ಇದೆ. ಶ್ರೇಯಾಂಕಗಳು ಪರ್ಮಿಟ್‌ ನೀಡಿದರೆ, ಉಳಿದ ಮೂರು ಗ್ರಾಂಡ್‌ಸ್ಲಾಂಗಳಲ್ಲೂ ಅವರು ಪ್ರಶಸ್ತಿಗೆ ಯತ್ನಿಸಬಹುದು. ಜೊತೆಗೆ, ಸಾನಿಯಾ ಈ ವರ್ಷ ಮಹಿಳಾ ಡಬಲ್ಸ್‌ನಲ್ಲೂ ಗ್ರಾಂಡ್‌ಸ್ಲಾಂಗಾಗಿ  ಯತ್ನಿಸಬಹುದು. ಈ ವರ್ಷ ಮಾಜಿ ವಿಶ್ವ ನಂ.1 ಡಬಲ್ಸ್‌ ಆಟಗಾರ್ತಿ ವರ್ಜೀನಿಯ ರುವಾನೊ ಪಾಸ್ಕಲ್‌ ಜೊತೆ ಆಡುವ ಸುಯೋಗ ಸಾನಿಯಾಗೆ ದೊರೆತಿದೆ. ಇದರ ಲಾಭ ಪಡೆದುಕೊಳ್ಳಬೇಕು. ಪುರುಷರ ಡಬಲ್ಸ್‌ನಲ್ಲಿ ಭೂಪತಿ ಹಾಗೂ ಲಿಯಾಂಡರ್‌ ಪೇಸ್‌ ತಮ್ಮ ತಮ್ಮ ಜೊತೆಗಾರ ರೊಂದಿಗೆ ಸಾಧ್ಯವಾದಷ್ಟು ಗ್ರಾಂಡ್‌ಸ್ಲಾಂ ಗೆಲ್ಲಲಿ ಎಂದು ಹಾರೈಸಬಹುದು.&lt;br /&gt;ಸೈನಾ ನೆಹ್ವಾಲ್‌ ವಿಶ್ವ ಶ್ರೇಯಾಂಕದಲ್ಲಿ 8ರಿಂದ ಇನ್ನಷ್ಟು ಉತ್ತುಂಗಕ್ಕೇರಲು 2010 ವೇದಿಕೆಯಾಗಬಹುದು. ಈ ವರ್ಷ ಅವರು ಸೂಪರ್‌ ಸಿರೀಸ್‌ ಟೂರ್ನಿಗಳಲ್ಲಿ ಉಜ್ವಲ ಪ್ರದರ್ಶನ ಮೆರೆದರೆ, ಬ್ಯಾಡಿಂಟನ್‌ ಶ್ರೇಯಾಂಕ ಪಟ್ಟಿ ಯಲ್ಲಿ 5ಸ್ಥಾನವನ್ನೂ ಮೀರಿ ಮೇಲೇರುವ ದಿನ ದೂರವಿಲ್ಲ. ಅಂಥ ಯೋಗ್ಯತೆ ಅವರಿಗಿದೆ.&lt;br /&gt;2008ರ ಬೀಜಿಂಗ್‌ ಒಲಿಂಪಿಕ್ಸ್‌ನಿಂದ ವಂಚಿತವಾಗಿದ್ದ ಭಾರತ ಹಾಕಿ ತಂಡ ಬಹಳ ಕಾಲದ ನಂತರ ವಿಶ್ವಕಪ್‌ ರೂಪದಲ್ಲಿ ಜಾಗತಿಕ ಟೂರ್ನಿಯೊಂದರಲ್ಲಿ ಆಡುತ್ತಿದೆ. ವರ್ತಮಾನದ ಹಾಕಿ ಸ್ಥಿತಿಗತಿಯಲ್ಲಿ ತಂಡದಿಂದ ದೊಡ್ಡ ಸಾಧನೆ ನಿರೀಕ್ಷಿಸುವುದು ಕಷ್ಟ ಸಾಧ್ಯ. ಆದರೂ, ತವರಿನ ವಾತಾವರಣದಲ್ಲಿ ತಂಡ ಗೌರವ ಉಳಿಸುವ ಪ್ರದರ್ಶನ ನೀಡಲಿ ಎಂದು ಆಶಿಸಬಹುದು.&lt;br /&gt;ಭಾರತೀಯ ಫುಟ್‌ಬಾಲ್‌  ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್‌ ನಡೆಯಲಿರುವುದರಿಂದ ಫುಟ್‌ ಬಾಲ್‌ ಜ್ವರ ಮೈಗಂಟಿಸಿಕೊಳ್ಳುವುದಕ್ಕೆ ಕಾರಣವಿದೆ. ಬ್ರೆಜಿಲ್‌ ಯುಗ ಮುಗಿದಿದೆ. ಅರ್ಜೆಂಟೀನಾ ಪರದಾಡು ತ್ತಿದೆ. ಈ ಬಾರಿಯೂ ಪ್ರಶಸ್ತಿ ನಿಶ್ಚಿತವಾಗಿ  ಯುರೋಪ್‌ ರಾಷ್ಟ್ರದ ಪಾಲಾಗಲಿದೆ ಎಂದು ಬೆಟ್‌ ಕಟ್ಟಲಡ್ಡಿಯಿಲ್ಲ.&lt;br /&gt;ಕಾಮನ್ವೆಲ್ತ್‌ ಕ್ರೀಡಾಕೂಟ ದೆಹಲಿಯಲ್ಲೇ ನಡೆಯಲಿರು ವುದರಿಂದ ಆತಿಥೇಯ ಭಾರತದ ಅಥ್ಲೀಟ್‌ಗಳಿಂದ ಹೆಚ್ಚಿನ ಸಾಧನೆ ನಿರೀಕ್ಷಿಸುವಂತಾಗಿದೆ. ಇಂಗ್ಲೆಂಡ್‌ನ ಸಾರ್ವ ಭೌಮತ್ವದ ಕುರುಹಾಗಿ ನಡೆಯುವ ಈ ಕ್ರೀಡಾಕೂಟದಲ್ಲಿ ಶೂಟಿಂಗ್‌, ವೇಟ್‌ಲಿಫ್ಟಿಂಗ್‌, ಅಥ್ಲೆಟಿಕ್ಸ್‌ನ ಕೆಲವು ವಿಭಾಗ ಗಳಲ್ಲಿ ಸಾಂಪ್ರದಾಯಿಕವಾಗಿ ಭಾರತೀಯರು ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡೆಗಳ ದೈತ್ಯರಾಷ್ಟ್ರಗಳು ಕಾಮನ್ವೆಲ್ತ್‌ ವ್ಯಾಪ್ತಿಗೆ ಒಳಪಡದಿರುವುದೇ ಇದಕ್ಕೆ ಕಾರಣ. ಇವುಗಳ ಜೊತೆಗೆ ಹಾಕಿ, ಟೆನಿಸ್‌, ಆರ್ಚರಿ, ಬ್ಯಾಡಿಂಟನ್‌ ಗಳಲ್ಲಿ ಭಾರತ ಹೆಚ್ಚಿನ ಪದಕ ನಿರೀಕ್ಷಿಸಬಹುದು. ಪದಕ ಒಂದೆರಡು ಕಡಿಮೆಯಾದರೂ ಅಡ್ಡಿಯಿಲ್ಲ. ಕಾಮಗಾರಿ ಗಳ ವಿಳಂಬದಿಂದ ವಿವಾದ, ಅಪಹಾಸ್ಯಕ್ಕೆ ತುತ್ತಾಗಿರುವ ಸಂಘಟಕರು ರಾಷ್ಟ್ರಕ್ಕೆ ಮುಜುಗರ ತರದಿರಲಿ ಎಂದು ದೇವರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಳ್ಳಬೇಕಿದೆ.&lt;br /&gt;ಟೆಸ್ಟ್‌  ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಆಗಿರುವ ಭಾರತ, ಬಾಂಗ್ಲಾದಲ್ಲಿ ತ್ರಿಕೋನ ಸರಣಿಯಲ್ಲಿ ಗೆದ್ದರೆ, ಏಕದಿನ ಗಳಲ್ಲೂ ನಂ.1 ಆಗಬಹುದಾಗಿದೆ. ಈ ಗೌರವಗಳನ್ನು ತಂಡ ಎಷ್ಟು ದೀರ್ಘಕಾಲ ಕಾಪಾಡಿಕೊಳ್ಳಲಿದೆ ಎಂಬುದರ ಮೇಲೆ ವರ್ಷದ ಯಶಸ್ಸು ಅಡಗಿದೆ. ಈ ವರ್ಷ ಭಾರತಕ್ಕೆ ವಿಪರೀತ ಪ್ರವಾಸವಿದೆ. ವೆಸ್ಟ್‌ ಇಂಡೀಸ್‌ನ ಇಪ್ಪತ್ತು20 ವಿಶ್ವಕಪ್‌ನಲ್ಲಿ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಹೋದ ಮಾನ ವನ್ನು ಮರಳಿ ಪಡೆಯಬೇಕಿದೆ. ಮುಂದಿನ ವರ್ಷ ಭಾರತ ದಲ್ಲೇ ಏಕದಿನ ವಿಶ್ವಕಪ್‌ ನಡೆಯುವ ಹಿನ್ನೆಲೆಯಲ್ಲಿ ಈ ವರ್ಷ ಪರಿಪೂರ್ಣ ತಂಡ ಕಟ್ಟುವ ಕೆಲಸ ನಡೆಯಬೇಕಿದೆ.&lt;br /&gt;ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೊದಲ ಎರಡು ವರ್ಷಗಳಲ್ಲಿ ಆಸೀಸ್‌ ಪ್ರೀಮಿಯರ್‌ ಲೀಗ್‌ನಂತಾಗಿದೆ. ಮೊದಲ 2 ಪ್ರಶಸ್ತಿಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ನಾಯ ಕತ್ವದ ತಂಡಗಳಿಗೆ ಒಲಿದಿದೆ. ಚಾಂಪಿಯನ್ಸ್‌ ಲೀಗ್‌ ಸಹ ಆಸೀಸ್‌ ತಂಡದ ಪಾಲಾಗಿದೆ. ಈ ವರ್ಷದ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ಹಾಗೂ ಭಾರತೀಯ ನಾಯಕತ್ವದ ತಂಡಗಳು ಖ್ಯಾತಿಗೆ ತಕ್ಕಂತೆ ಆಡಬೇಕಿದೆ&lt;br /&gt;ಕ್ರೀಡೆಯ ಸ್ವಾರಸ್ಯವಿರುವುದು ಅನಿರೀಕ್ಷಿತಗಳಲ್ಲಿ. ನಿರೀಕ್ಷೆಯೇ ಮಾಡದ ಸಂದರ್ಭಗಳಲ್ಲಿ ದೊರಕುವ ಯಶಸ್ಸಿನ ಸ್ವಾದ ಹೆಚ್ಚು. ಈ ವರ್ಷ ಯಾವುದೇ ಕ್ರೀಡೆಯಲ್ಲಿ ಅಂಥ ಪ್ರಶಸ್ತಿ, ಪದಕ ಲಭಿಸುವಂತಾದರೆ, ಸ್ವಾಗತಾರ್ಹ. ಎಲ್ಲಕ್ಕಿಂತ ಮುಖ್ಯವಾಗಿ ಕೋಟ್ಲಾ ಪಿಚ್‌ನಂಥ&lt;br /&gt;ಮುಜುಗರ ಯಾವುದೇ ಕ್ರೀಡೆಯಲ್ಲಿ,  ಯಾವುದೇ ರೂಪದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಉದ್ದೀಪನ ಕಳಂಕಗಳು, ಇನ್ನಿತರ ವಿವಾದಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.&lt;br /&gt;`2010 ಪರಿಶುದ್ಧ ಸಾಧನೆಗಳ' ವರ್ಷವಾಗಲಿ ಎನ್ನುವುದು ಕ್ರೀಡಾಜಗತ್ತಿನ ವರ್ಷದ ಸಂಕಲ್ಪವಾಗಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-8473095927849732262?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/8473095927849732262/comments/default' title='Post Comments'/><link rel='replies' type='text/html' href='http://ragaakshara.blogspot.com/2010/01/2010.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/8473095927849732262'/><link rel='self' type='application/atom+xml' href='http://www.blogger.com/feeds/2998842447029730227/posts/default/8473095927849732262'/><link rel='alternate' type='text/html' href='http://ragaakshara.blogspot.com/2010/01/2010.html' title='2010'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/S0OFJ1pxWwI/AAAAAAAAAKU/xeS-4rx_578/s72-c/13-feb-07-wta+tennis-7.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-807057518539280994</id><published>2009-12-30T16:37:00.002+05:30</published><updated>2009-12-30T17:10:18.469+05:30</updated><title type='text'>ವಿಷ್ಣುವರ್ಧನ್‌ ಮತ್ತು ಸ್ತ್ರೀವಾದ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/Szs2aVZ7ZmI/AAAAAAAAAKE/ndDSpDP2UGs/s1600-h/vish5.jpg"&gt;&lt;img style="margin: 0pt 10px 10px 0pt; float: left; cursor: pointer; width: 168px; height: 200px;" src="http://2.bp.blogspot.com/_fosRdfQ3Hws/Szs2aVZ7ZmI/AAAAAAAAAKE/ndDSpDP2UGs/s200/vish5.jpg" alt="" id="BLOGGER_PHOTO_ID_5420986402520917602" border="0" /&gt;&lt;/a&gt;ವಿಷ್ಣು ಇನ್ನಿಲ್ಲವಂತೆ ಎಂಬ ಸುದ್ದಿಯೊಂದಿಗೆ ಬುಧವಾರದ ಉದಯವಾಯಿತು. ಈ ಸಾವೇ ಹಾಗೆ. ಯಾವಾಗ, ಎಲ್ಲಿ, ಯಾರನ್ನು ಕೊಂಡು ಹೋಗುವುದೋ ಗೊತ್ತಾಗುವುದಿಲ್ಲ. ಆದರೂ, ವಿಷ್ಣುವರ್ಧನ್‌ರಂಥ ವಿಷ್ಣುವರ್ಧನ್‌ ಇನ್ನು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ಹಾಗೆಯೇ ವಿಷಣ್ಣನಾಗಿ ಟಿವಿ ಎದುರು ಕುಳಿತವನಿಗೆ ಹಳೆಯ ನೆನಪುಗಳು ಕಾಡಿದವು.&lt;br /&gt;&lt;br /&gt;ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ ಪತ್ರಿಕೆಯಲ್ಲಿ ಕ್ರೀಡಾ ಸಂಪಾದಕನಾಗುವ ಮೊದಲು ಉದಯವಾಣಿಯಲ್ಲಿ  ಚಲನಚಿತ್ರ ವರದಿಗಾರನಾಗಿದ್ದ ನನಗೆ ಒಂದಲ್ಲ ಹಲವು ಬಾರಿ ವಿಷ್ಣುವರ್ಧನ್‌ ಅವರನ್ನು ಭೇಟಿಯಾಗುವ ಅವಕಾಶಗಳು ದೊರೆತಿದ್ದವು. ಪರ್ವ, ಜಮೀನ್ದಾರ್ರು, ರಾಜ ನರಸಿಂಹ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ ಸೇರಿದಂತೆ ಇನ್ನೂ ಹಲವು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣು ಅವರನ್ನು ಭೇಟಿ ಮಾಡುವ, ಅವರೊಂದಿಗೆ ಮಾತನಾಡುವ ಅವಕಾಶ ದೊರೆತಿತ್ತು. ವಿಷ್ಣುವರ್ಧನ್‌ ಅವರ ಮಾತುಗಳಲ್ಲಿ ಚಿತ್ರರಂಗದ ಒಣಹರಟೆಗಿಂತ ತಾತ್ವಿಕ ಚಿಂತನೆ, ಜೀವನ ದರ್ಶನವೇ ಯಾವಾಗಲೂ ತುಂಬಿರುತ್ತಿದ್ದವು. ಹಾಗೆಯೇ ಅವರ ಕುರಿತು ನಾನು ಉದಯವಾಣಿಯಲ್ಲಿ ಬರೆದಿದ್ದನ್ನೆಲ್ಲಾ ತಿರುವಿಹಾಕುತ್ತಿರುವಾಗ ರಾಜ ನರಸಿಂಹ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಅವರು ಹೆಣ್ಣಿನ ಬಗ್ಗೆ ಮಾತನಾಡಿದ್ದ ವರದಿ ಗಮನ ಸೆಳೆಯಿತು. ಹಳೆಯದಾದರೂ, ಮತ್ತೊಮ್ಮೆ ಬ್ಲಾಗ್‌ನಲ್ಲಿ ಅದನ್ನು ಪ್ರಕಟಿಸುವ ಇಚ್ಛೆ ತಡೆದುಕೊಳ್ಳಲಾಗಲಿಲ್ಲ. ಹಾಗೆಂದೇ ಅದು ಇಲ್ಲಿದೆ.&lt;br /&gt;&lt;br /&gt;&lt;span style="font-size:180%;"&gt;&lt;span style="font-weight: bold;"&gt;ಹೆಣ್ಣು ದೇವರ ಪರಿಪೂರ್ಣ ಸೃಷ್ಟಿ&lt;/span&gt; &lt;span style="font-weight: bold;"&gt;&lt;br /&gt;ರಾಜ ನರಸಿಂಹನ ಮಹಿಳಾವಾದ&lt;/span&gt;&lt;/span&gt;&lt;br /&gt;&lt;br /&gt;ಅಬ್ಬಯ್ಯ ನಾಯ್ಡು ಸ್ಟುಡಿಯೋ ದಾರಿ ತುಳಿದು ಹೊರಟಿದ್ದ ನಮಗೆ ಪ್ರವೇಶ ದ್ವಾರ ದಾಟುತ್ತಿದ್ದಂತೆ ಎದುರಿಗೆ ಸಿಕ್ಕಿದ್ದು ಆನೆ.&lt;br /&gt;ಆನೆ ಎದುರಿಗೆ ಸಿಕ್ಕಿದರೆ ಶುಭ ಸೂಚನೆಯಂತೆ ಎಂದು ನೆನಪಾಯಿತು. ಆದರೆ, ನಾವು ಹೋಗುತ್ತಿದ್ದುದು ರಾಜ ನರಸಿಂಹ ಚಿತ್ರೀಕರಣಕ್ಕೆ ಎಂದು ಅರಿವಾದಾಗ ಇದೇನು ಸಿಂಹದ ಗುಹೆಯಲ್ಲಿ ಆನೆ ಎಂದು ಗೊಂದಲವಾದದ್ದು ನಿಜ. ಆಗಲೇ ಯಾರೋ ಉಸುರಿದ್ದರು ಪಕ್ಕದಲ್ಲೇ ಲಂಕೇಶ್‌ ಪತ್ರಿಕೆ ಚಿತ್ರೀಕರಣ ನಡೆಯುತ್ತಿದೆಯಂತೆ. ಒಳಗೆ ವಸುಂಧರಾ ದಾಸ್‌ ನರ್ತಿಸುತ್ತಿದ್ದಾರಂತೆ.&lt;br /&gt;ಶಕಲಕಬೇಬಿಯ ನರ್ತನ ನೋಡಬೇಕೆಂದು ಆಸೆಯಾದರೂ ಹತ್ತಿಕ್ಕಿಕೊಳ್ಳದೆ ವಿಧಿ ಇರಲಿಲ್ಲ. ಸಿಂಹವನ್ನು ನೋಡಲು ಬಂದಾಗ ಸಿಂಹಿಣಿಯನ್ನು ಅರಸಿ ಹೋಗುವುದು ತರವಲ್ಲ ಎನ್ನುವುದು ಆಗಿನ ಮನಸ್ಥಿತಿ.&lt;br /&gt;ಸಿಂಹದ ಗುಹೆ ಹೊಕ್ಕಾಗ ಅಚ್ಚರಿಯಾಗಿತ್ತು. ಏಕೆಂದರೆ, ಸಿಂಹದ ರೊಮ್ಯಾಂಟಿಕ್‌ ಮೂಡ್‌ ನೋಡುವ ಅವಕಾಶ ಸಿಕ್ಕಿತ್ತು. ಅಬ್ಬಾಯಿ ನಾಯ್ಡು ಸ್ಟುಡಿಯೋದ ವಿಶಾಲ ಒಳಾಂಗಣದಲ್ಲಿ ವಿಸ್ತಾರವಾದ (ಕೃತಕ) ಹೂದೋಟ. ಪುಷ್ಪಗಂಧ, ಮಕರಂದ, ಶ್ರೀಗಂಧ ಸುಗಂದದ ನಡುವೆ ಶ್ವೇತವಸ್ತ್ರದಲ್ಲಿ ಕಂಗೊಳಿಸುತ್ತಿದ್ದ ಸೌಗಂಧಿಕಾ ಪುಷ್ಪದಂಥ ನಾಯಕಿ. ನಾಯಕಿಯ ಸುತ್ತ ಹೂವಿನ ಮಕರಂದ ಮತ್ತು ಮಕರಂದದಿಂದ ಆಕರ್ಷಿತವಾಗಿ ಹಾರಿಬಂದ ದುಂಬಿಗಳನ್ನು ಸಂಕೇತಿಸುವ ನರ್ತಕಿಯರು. ಅಲ್ಲೊಂದು ಲತಾಕುಂಜ. ಹಿಂದೆ ಚಂದ್ರನ ಪ್ರತಿಕೃತಿ. ಪ್ರೀತಿಯ ತಂಗಾಳಿ. ಚುಂಬಕ ಸನ್ನಿವೇಶ. ಪ್ರೇಯಸಿಯನ್ನು ಪ್ರಣಯರಾಗದಿಂದ ಒಲಿಸಿಕೊಳ್ಳುತ್ತಿದ್ದ ರಾಜನರಸಿಂಹ!&lt;br /&gt;ರೊಮ್ಯಾಂಟಿಕ್‌ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ವಿಷ್ಣುವರ್ಧನ್‌ ಹಾಗೂ ರಾಶಿ ಹೀಗೆಲ್ಲಾ ಕಂಡುಬಂದರು.&lt;br /&gt;ರೊಮ್ಯಾಂಟಿಕ್‌ ದೃಶ್ಯೀಕರಣ ನಂತರದ ಮಾತುಕತೆಯಲ್ಲೂ ಪ್ರೀತಿ, ಪ್ರೇಮ, ಪ್ರಣಯದ ಬೆಚ್ಚನೆ ಅನುಭವ ಕಥನಗಳನ್ನು ನಿರೀಕ್ಷಿಸಿದ್ದವರಿಗೆ ನಿರಾಸೆ ಕಾದಿತ್ತು. ಏಕೆಂದರೆ, ಪೂರ್ತಿ ಸಂವಾದ ಸ್ತ್ರೀಪರವಾಗಿತ್ತು. ಹೆಣ್ಣಿನ ರೀತಿ ನೀತಿ, ಸಮಾಜ ಹೆಣ್ಣನ್ನು ನಡೆಸಿಕೊಳ್ಳುವ ರೀತಿ. ರಾಜನರಸಿಂಹನ ದೃಷ್ಟಿಯಲ್ಲಿ ಹೆಣ್ಣು ಯಾವ ರೀತಿ ಮೊದಲಾದ ವಿಷಯಗಳಿಗೆ ಸೀಮಿತವಾಗಿತ್ತು ಆ ಚರ್ಚೆ.&lt;br /&gt;ಹೆಣ್ಣಿನ ಬಗ್ಗೆ ಮಾತನಾಡುತ್ತ ವಿಷ್ಣು ಭಾವುಕರಾದರು. ದೇವರು ಭೂಮಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅದಕ್ಕೇ ಹೆಣ್ಣನ್ನು ಸೃಷ್ಟಿ ಮಾಡಿದ್ದಾನೆ. ತನ್ನ ಗುಣಗಳನ್ನೆಲ್ಲಾ ಹೆಣ್ಣಿನಲ್ಲಿ ತುಂಬಿದ್ದಾನೆ. ತ್ಯಾಗ, ಮಮತೆ, ಅಕ್ಕರೆ, ನಿಸ್ವಾರ್ಥ ಇವೆಲ್ಲಾ ಹೆಣ್ಣಿನಲ್ಲಲ್ಲದೆ ಗಂಡಲ್ಲಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು ವಿಷ್ಣು.&lt;br /&gt;ಯಾವುದೇ ಕೆಲಸವಿರಲಿ, ಅದನ್ನು ಹೆಣ್ಣೊಬ್ಬಳು ಮಾಡುವುದಕ್ಕೂ ಗಂಡಸು ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಗಂಡಿಗೆ ಗಾಂಭೀರ್ಯ ಇಲ್ಲ. ಕೆಲಸ ಎಷ್ಟೇ ಮಹತ್ವದ್ದಾದರೂ ಅಷ್ಟೇ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಾನೆ. ಆದರೆ, ಹೆಣ್ಣು ಹಾಗಲ್ಲ. ಕೆಲಸ ಎಷ್ಟೇ ಚಿಕ್ಕದಿರಲಿ, ಅದನ್ನು ರಾಜಕಾರ್ಯವೆಂಬಂತೆ ತತ್ಪರತೆಯಿಂದ ನಿರ್ವಹಿಸುತ್ತಾಳೆ. ಬೆಂಗಳೂರಿನಲ್ಲಿ ಗಾಡಿ ಓಡಿಸುವ ಹುಡುಗಿಯರೇ ಇದಕ್ಕೆ ಉತ್ತಮ ಉದಾಹರಣೆ ಎಂದರು ವಿಷ್ಣು. ಹುಡುಗರು ಬೇಜವಾಬ್ದಾರಿಯಿಂದ ಎಗ್ಗಿಲ್ಲದಂತೆ ಗಾಡಿ ಓಡಿಸುವುದಕ್ಕೂ ಹುಡುಗಿಯರು ತದೇಕಚಿತ್ತರಾಗಿ ಓಡಿಸುವುದಕ್ಕೂ ವ್ಯತ್ಯಾಸವಿದೆ ಎಂದರು ವಿಷ್ಣು.&lt;br /&gt;ರಾಜ ನರಸಿಂಹ ಹೆಣ್ಣನ್ನು ನೋಡುವ ದೃಷ್ಟಿ ಬೇರೆ. ಆತನ ದೃಷ್ಟಿಯಲ್ಲಿ ಹೆಣ್ಣು ದೇವರ ಪರಿಪೂರ್ಣ ಸೃಷ್ಟಿ. ಎಲ್ಲಾ ಸದ್ಗುಣಗಳ ಸಾಕಾರ. ಆಕೆಯಲ್ಲಿ ಯಾವುದಾದರೂ ದೋಷ ಇದ್ದರೆ, ಅದಕ್ಕೆ ಎಲ್ಲೋ ಒಂದು ಕಡೆ ಗಂಡಸೇ ಕಾರಣನಾಗಿರುತ್ತಾನೆ ಹೊರತು ಆಕೆಯ ತಪ್ಪು ಇರುವುದಿಲ್ಲ. ಸಮಾಜದ ಬುನಾದಿ ಹೆಣ್ಣಿನ ಸಂಸ್ಕಾರದ ಮೇಲೆ ನೆಲೆಗೊಂಡಿದೆ ಎಂದು ತಿಳಿದವ ಆತ. ಇಂಥ ನಾಯಕ ಜಾತ್ರೆಯೊಂದರಲ್ಲಿ ನಾಯಕಿಯನ್ನು ನೋಡುತ್ತಾನೆ. ಅವರಿಬ್ಬರಿಗೆ ಮೊದಲ ಪ್ರೇಮವೇನೂ ಆಗುವುದಿಲ್ಲ. ಆ ಹುಡುಗಿಗೆ ಅದಾಗಲೇ ಫಾರಿನ್‌ ರಿಟರ್ನ್‌ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತಾನು ಮದುವೆ ಆಗುವ ಹುಡುಗ ಹಾಗೂ ರಾಜ ನರಸಿಂಹನ ನಡುವೆ ವ್ಯತ್ಯಾಸ ಗುರುತಿಸುತ್ತಾಳೆ. ಆ ಫಾರಿನ್‌ ರಿಟರ್ನ್‌ ಹುಡುಗ ಹೆಣ್ಣನ್ನು ಭೋಗವಸ್ತು ಅಷ್ಟೇ ಎಂದು ತಿಳಿದುಕೊಂಡವನು. ಅಂಗಡಿಯಲ್ಲಿ ಗ್ರಾಹಕ ವಸ್ತುವಿನ ಪರಿಶುದ್ಧತೆ ಪರೀಕ್ಷೆ ಮಾಡಿ ಕೊಳ್ಳುವಂತೆ ಈತ ಹೆಣ್ಣನ್ನೂ ಪರೀಕ್ಷೆ ಮಾಡಿ ಮದುವೆ ಮಾಡಿಕೊಳ್ಳುವವನು. ಮದುವೆ ಆಗುವವನ ಇಂಥ ಗುಣ ಹಾಗೂ ಹೆಣ್ಣನ್ನು ಗೌರವದ ಕಣ್ಣಲ್ಲಿ ಕಾಣುವ ರಾಜ ನರಸಿಂಹನ ವ್ಯತ್ಯಾಸವನ್ನು ಗುರುತಿಸುವ ನಾಯಕಿ ತನ್ನ ಬದುಕಿನ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಇದು ಚಿತ್ರದಲ್ಲಿ ಒಂದು ಹಂತದವರೆಗೆ ಸಾಗುವ ಕಥೆ.&lt;br /&gt;ನಮ್ಮ ಹೆಣ್ಣಿನ ಸಂಸ್ಕಾರದ ಬಗ್ಗೆ ನಾವೇ ಹೇಳದಿದ್ದರೆ ಬೇರಾರು ಹೇಳುತ್ತಾರೆ. ವಿದೇಶಿ ಸಂಸ್ಕೃತಿ ಆವರಿಸುತ್ತಿದ್ದರೂ, ನಮ್ಮ ಹೆಣ್ಣಿನ ಸಂಸ್ಕಾರ ಇನ್ನೂ ಬದಲಾಗಿಲ್ಲ. ಅದನ್ನು ಉಳಿಸಿಕೊಳ್ಳಬೇಕು. ಒಬ್ಬ ಭಾರತೀಯ ಹುಡುಗಿಯ ಕಥೆಯನ್ನು ಈ ಚಿತ್ರದಲ್ಲಿ ಹೃದಯದಿಂದ ಹೃದಯ ತುಂಬಿ ಹೃದಯಕ್ಕೆ ನಾಟುವಂತೆ ಘಟನೆಗಳ ಮೂಲಕ ಹೇಳಲಾಗಿದೆ ಎಂದರು ವಿಷ್ಣು.&lt;br /&gt;ವಿಷ್ಣು ಮಾತು ಹೆಣ್ಣಿನಿಂದ ಬೇರೆ ವಿಷಯಗಳತ್ತ ಪಲ್ಲಟಗೊಂಡಾಗ ಪ್ರಸ್ತಾಪವಾದದ್ದು ಯೋಗ ಹಾಗೂ ಯೋಗ್ಯತೆಯ ವಿಷಯ. ಈ ದೇಶದಲ್ಲಿ ಯೋಗ ಇದ್ದವರು ಪ್ರಧಾನ ಮಂತ್ರಿಯಾಗುತ್ತಾರೆ. ಯೋಗ್ಯತೆ ಇದ್ದವರು ಮೂಲೆಯಲ್ಲಿರುತ್ತಾರೆ ಎಂದರು ವಿಷ್ಣು.&lt;br /&gt;ಚಿತ್ರರಂಗದಲ್ಲಿ ನಮ್ಮೂರು, ನಮ್ಮೋರಿಗೆ ಅವಕಾಶ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿರುವ ಹಲವು ಪ್ರತಿಭಾವಂತರ ಗುಣಗಾನ ಮಾಡಿದರು. ಅರುಣ್‌ ಕುಮಾರ್‌, ರಂಗಾಯಣ ರಘು, ರೇಣುಕಾ ಪ್ರಸಾದ್‌ ಮೊದಲಾದವರ ಉಪಯುಕ್ತತೆ ಹೊಗಳಿದರು.&lt;br /&gt;ನಾಯಕಿರಾಶಿಯನ್ನು ಮಾತನಾಡಿಸಿ ಎಂದು ಶಿಫಾರಸು ಮಾಡಿ ಆಕೆಯ ಅಭಿನಯ ಸಾಮರ್ಥ್ಯವನ್ನು ಹೊಗಳಿದರು. ಕೆಲವೊಂದು ಮಹತ್ವದ ಸನ್ನಿವೇಶಗಳಲ್ಲಿ ಕೋಲು ಹಿಡಿದು ಆಕೆಯಿಂದ ಅಭಿನಯ ತೆಗೆದಿದ್ದನ್ನು ನೆನಪಿಸಿಕೊಂಡ ಅವರು, ಒಳ್ಳೆ ಹುಡುಗಿ ಎಂದು ಸರ್ಟಿಫಿಕೇಟ್‌ ನೀಡಿದರು.&lt;br /&gt;ಹೊಸ ವರ್ಷದಲ್ಲಿ ವಿಷ್ಣು ಯೋಜನೆಗಳೇನೂ ಇಲ್ಲವಂತೆ. ರಾಜ ನರಸಿಂಹ ಮುಗಿದೊಡನೆ ಹೃದಯವಂತ ಒಪ್ಪಿಕೊಂಡಿದ್ದೇನೆ. ಬೇರಾವುದರ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಮಾತು ಮುಗಿಸಿದರು.&lt;br /&gt;(2002ರ ಡಿಸೆಂಬರ್‌ನಲ್ಲಿ ಬರೆದಿದ್ದು)&lt;br /&gt;&lt;span style="font-weight: bold;"&gt;-ರಾಘವೇಂದ್ರ ಗಣಪತಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-807057518539280994?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/807057518539280994/comments/default' title='Post Comments'/><link rel='replies' type='text/html' href='http://ragaakshara.blogspot.com/2009/12/blog-post_30.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/807057518539280994'/><link rel='self' type='application/atom+xml' href='http://www.blogger.com/feeds/2998842447029730227/posts/default/807057518539280994'/><link rel='alternate' type='text/html' href='http://ragaakshara.blogspot.com/2009/12/blog-post_30.html' title='ವಿಷ್ಣುವರ್ಧನ್‌ ಮತ್ತು ಸ್ತ್ರೀವಾದ!'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/Szs2aVZ7ZmI/AAAAAAAAAKE/ndDSpDP2UGs/s72-c/vish5.jpg' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-5226397508469003941</id><published>2009-12-29T16:08:00.002+05:30</published><updated>2009-12-29T16:16:02.504+05:30</updated><title type='text'>ಪ್ರಶಸ್ತಿಗಳೆಂಬ ಮಾಯಾಜಿಂಕೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_fosRdfQ3Hws/SzndoVCVNKI/AAAAAAAAAJ8/V8bB-AclwAQ/s1600-h/newekalavya3.gif"&gt;&lt;img style="margin: 0pt 10px 10px 0pt; float: left; cursor: pointer; width: 125px; height: 187px;" src="http://2.bp.blogspot.com/_fosRdfQ3Hws/SzndoVCVNKI/AAAAAAAAAJ8/V8bB-AclwAQ/s200/newekalavya3.gif" alt="" id="BLOGGER_PHOTO_ID_5420607311428531362" border="0" /&gt;&lt;/a&gt;&lt;br /&gt;ಪ್ರಶಸ್ತಿಗಳ ಉದ್ದೇಶ ಸಾಧಕರನ್ನು ಗುರುತಿಸಿ ಗೌರವಿಸುವುದು.&lt;br /&gt;ಆದರೆ, ಈ ಸಾಧಕರನ್ನು ಗುರುತಿಸುವುದೇ ನಿಜವಾದ ತಲೆನೋವು.&lt;br /&gt;ಎಲ್ಲಾ ಪ್ರಶಸ್ತಿಗಳನ್ನು ಸಂಸ್ಥಾಪಿಸುವಾಗ  ಅದರ ಫಲಾನುಭವಿಗಳಿಗೊಂದು ಮಾನದಂಡ ನಿಗದಿಪಡಿಸಲಾಗಿರುತ್ತದೆ. ಆದರೆ, ಪ್ರತಿಯೊಬ್ಬರೂ ಆಯಾ ಮಾನದಂಡಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಹಿಸುವುದರಿಂದ/ ಅರ್ಥೈಸಿಕೊಳ್ಳುವುದರಿಂದ ಅನಪೇಕ್ಷಿತ ಅಸಮಾಧಾನಗಳು, ಸಂಘರ್ಷಗಳಿಗೆ ದಾರಿಯಾಗುತ್ತದೆ.&lt;br /&gt;ಭಾರತದಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ಗೌರವಿಸಲೆಂದೇ ಸರ್ವೋತ್ಕೃಷ್ಟ ರಾಜೀವ್‌ ಗಾಂಧಿ ಖೇಲ್‌ರತ್ನ ಪುರಸ್ಕಾರವಿದೆ. ಅರ್ಜುನ, ದ್ರೋಣಾಚಾರ್ಯ ಇತ್ಯಾದಿ ಪ್ರಶಸ್ತಿಗಳಿವೆ. ಪದ್ಮ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಇದಲ್ಲದೆ ಎಲ್ಲಾ ರಾಜ್ಯಗಳು ತಮ್ಮದೇ ಪ್ರಶಸ್ತಿ ವಿಧಾನ ಹೊಂದಿವೆ. ಅದೇ ರೀತಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಹೊಂದಿದೆ.&lt;br /&gt;ಆದರೆ, ಈ ದೇಶದಲ್ಲಿ ಯಾವ ಪ್ರಶಸ್ತಿಗಳೂ ವಿವಾದವಿಲ್ಲದೆ ವಿತರಣೆಯಾಗುವುದಿಲ್ಲ ಎನ್ನುವುದು ವಿಷಾದದ ಸಂಗತಿ.&lt;br /&gt;ಕೇವಲ ಕ್ರೀಡಾ ಪ್ರಶಸ್ತಿಗಳಿಗೆ ಸೀಮಿತವಾಗಿ ನೋಡಿದರೂ, ಪ್ರತೀ ವರ್ಷ, ಪ್ರತೀ ಬಾರಿ ಏನಾದರೂ ತರಲೆ, ರಾದ್ಧಾಂತ ಇದ್ದೇ ಇರುತ್ತದೆ.&lt;br /&gt;&lt;span style="font-weight: bold;"&gt;ವರ್ತಮಾನದಲ್ಲಿ&lt;/span&gt;&lt;span style="font-weight: bold;"&gt;...&lt;/span&gt;&lt;br /&gt;ರಾಜ್ಯ ಸರ್ಕಾರ ಕಳೆದ ತಿಂಗಳು 2007-08 ಹಾಗೂ 2008-09ನೇ ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಎಲ್ಲಾ ವರ್ಷಗಳಂತೆ ಈ ವರ್ಷವೂ ಪುರಸ್ಕೃತರಿಗಿಂತ, ಅತೃಪ್ತರ ಸಂಖ್ಯೆಯೇ ದೊಡ್ಡದಿದೆ.&lt;br /&gt;ಪ್ರಶಸ್ತಿ ವಂಚಿತರಾದವರ ಪೈಕಿ ಕೆಲವು ಅರ್ಹ ಕ್ರೀಡಾಪಟುಗಳೂ ಇದ್ದಾರೆ ಎನ್ನುವುದು ನಿಜ. ಉದಾಹರಣೆಗೆ, ಪವರ್‌ ಲಿಫ್ಟರ್‌ಗಳಾದ ಗೀತಾಬಾಯಿ ಮತ್ತು ಎನ್‌. ಕೀರ್ತಿ. ಸ್ವತಃ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್‌ ಅವರೇ ಇವರ ಅಹವಾಲು ಆಲಿಸಿ, ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರಿಸಲು ಯತ್ನಿಸಿದರೂ, ಸಾಧ್ಯವಾಗಿಲ್ಲ. ಒಮ್ಮೆ ಪ್ರಕಟಿಸಿರುವ ಪಟ್ಟಿಯನ್ನು ಪರಿಷ್ಕರಿಸುವುದು ಅವಮಾನ ಎಂದು ಆಯ್ಕೆ ಸಮಿತಿ ಹಟ ಹಿಡಿದಿದ್ದರಿಂದ ಹೀಗಾಗಿದೆ. ಇಂಥ ಹಲವಾರು ಗೊಂದಲಗಳಿಂದಾಗಿ ಡಿಸೆಂಬರ್‌ನಲ್ಲೇ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿಗೆ ಮುಂದೂಡಿಕೆಯಾಗಿದೆ.&lt;br /&gt;ಈ ಬಾರಿ ಏಕಲವ್ಯ ಪ್ರಶಸ್ತಿಗಳ ಆಯ್ಕೆಗೆ ಹಾಕಿ ಒಲಿಂಪಿಯನ್‌ ಎಂಪಿ ಗಣೇಶ್‌ ಅವರ ಸಲಹೆಯಂತೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಅಳವಡಿಸಿಕೊಂಡಿತ್ತು. ಅರ್ಜುನ ಪ್ರಶಸ್ತಿಗಳ ಆಯ್ಕೆಗೆ  2002ರಿಂದ ಅಳವಡಿಸಿಕೊಳ್ಳಲಾಗಿರುವ ಮಾನದಂಡ ವನ್ನೇ ಇಲ್ಲೂ ಬಳಸಲಾಗಿತ್ತು. ಅದರ ಪ್ರಕಾರ, ಆಯಾ ಸೂಚಿತ ವರ್ಷಗಳಲ್ಲಿ ನಡೆದಿರುವ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ ಷಿಪ್‌, ಕಾಮನ್ವೆಲ್ತ್‌ ಕ್ರೀಡಾಕೂಟ, ಏಷ್ಯಾ ಕ್ರೀಡಾಕೂಟ, 6ಕ್ಕಿಂತಲೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ಅಂತಾರ್ಟ್ರಾಷ್ಟ್ರೀಯ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾಕೂಟ... ಈ ರೀತಿಯಾಗಿ ಅವರೋಹಣ ಕ್ರಮದಲ್ಲಿ ಕ್ರೀಡಾಪಟುಗಳ ಸಾಧನೆ ಪರಿಗಣಿಸಲಾಗುತ್ತದೆ. ಈ ಕೂಟಗಳಲ್ಲಿ ಪಾಲ್ಗೊಳ್ಳುವಿಕೆಗೆ ನಿರ್ದಿಷ್ಟ ಅಂಕ ಇರುತ್ತದೆ. ಪದಕ ಸಾಧನೆಗೆ ಹೆಚ್ಚುವರಿ ಅಂಕ ನೀಡಲಾಗುತ್ತದೆ. ಕ್ರೀಡಾ ಪಟುಗಳು ಪ್ರಶಸ್ತಿ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮೆರೆದಿರಬೇಕು. ಜೊತೆಗೆ, ಪ್ರಶಸ್ತಿ ಸಾಲಿಗೆ ಹಿಂದಿನ ಐದು ವರ್ಷಗಳ ಅತ್ಯುತ್ತಮ ಮೂರು ಪ್ರದರ್ಶನಗಳನ್ನು ಪರಿಗಣಿಸಿ ವಿಜೇತರ ಅಂತಿಮ ಪಟ್ಟಿ ತಯಾರಿಸ ಲಾಗುತ್ತದೆ.&lt;br /&gt;ಈ ಮಾನದಂಡಗಳೇನೋ ಮೇಲ್ನೋಟಕ್ಕೆ ಸಮಗ್ರವಾಗಿಯೇ ತೋರುತ್ತದೆ.  ಆದರೆ, ಈ ಹಿಂದಿನ ವರ್ಷಗಳಲ್ಲಿ ವಿವಿಧ ಲಾಬಿಗೆ ತುತ್ತಾಗಿ ವಂಚಿತರಾದವರಿಗೆ ಹೊಸ ಮಾನದಂಡಗಳು ಮತ್ತೆ ಮುಳ್ಳಾಗಿ ಕಾಡುತ್ತವೆ. ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕಾನೇಕ ಪದಕಗಳನ್ನು ಗೆದ್ದಿರುವ ಗೀತಾ ಬಾಯಿ ನಿದರ್ಶನವನ್ನೇ ತೆಗೆದುಕೊಂಡರೆ, ಅವರನ್ನು ಮುಂದಿನ ವರ್ಷ ಪ್ರಶಸ್ತಿಗೆ ಪರಿಗಣಿಸುವುದಾಗಿ ಸಚಿವರು ಆಶ್ವಾಸನೆ ನೀಡಿದ್ದಾರೆ. ಆದರೆ, 33 ವರ್ಷದ ಗೀತಾಬಾಯಿ ಪ್ರಶಸ್ತಿಗಾಗಿ ತಮಗಿಂತ ಕಿರಿಯ ಲಿಫ್ಟರ್‌ಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಂದರೆ, ಅವರು ಈಗಾಗಲೇ ಮಾಡಿರುವ ಸಾಧನೆಗಳು ಲೆಕ್ಕಕ್ಕೇ ಬರುವುದಿಲ್ಲ.&lt;br /&gt;ಈ ಬಾರಿ ಏಕಲವ್ಯ ಪ್ರಶಸ್ತಿಗಳು ಬಿಕರಿಯಾಗಿವೆ ಎಂದು ಕೆಲವರು ಆರೋಪಿಸಿದ್ದಾರೆ. ಇದರಲ್ಲಿ ಎಷ್ಟು ತಥ್ಯ ಇದೆಯೋ ತಿಳಿದಿಲ್ಲ. ಆದರೆ,  ಒಂದಂತೂ ನಿಜ, ಪ್ರಶಸ್ತಿಗಳಿಗಾಗಿ ಭಾರೀ ಮಟ್ಟದಲ್ಲಿ ಲಾಬಿ ನಡೆಯುವ ಈ ದಿನಗಳಲ್ಲಿ ಎಲ್ಲಾ ಪ್ರಶಸ್ತಿಗಳು ವ್ಯಾಪಾರಿಕರಣಗೊಂಡಿರುವುದಂತೂ ನಿಜ.&lt;br /&gt;&lt;span style="font-weight: bold;"&gt;ವ್ಯವಸ್ಥೆಯೇ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಹಾಗಿದೆ&lt;/span&gt;&lt;span style="font-weight: bold;"&gt;...&lt;/span&gt;&lt;br /&gt;ಪ್ರಶಸ್ತಿಗಳು ಅಪಮೌಲ್ಯಗೊಳ್ಳುವುದಕ್ಕೆ ವ್ಯವಸ್ಥೆಯೂ ಕಾರಣ. ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸುವಂಥ ವ್ಯವಸ್ಥೆ ಇದ್ದಾಗ, ಜನ ತಮ್ಮನ್ನು, ತಮ್ಮ ಸಾಧನೆಯನ್ನು ಅತಿಶಯವಾಗಿ ಬಿಂಬಿಸಿಕೊಳ್ಳಲು ಯತ್ನಿಸುವುದು ಸಹಜ. ಈ ಕಾಲದಲ್ಲಿ ಸುಮ್ಮನಿರು ವವರು ಮೂಲೆಗುಂಪಾಗುತ್ತಾರೆ. ಸಣ್ಣ ಸಾಧನೆಯನ್ನೂ ಮಹಾನ್‌ ಎಂದು ಬಿಂಬಿಸಿಕೊಳ್ಳುವವರು, ಅದಕ್ಕಾಗಿ ಶಿಫಾರಸುಗಳನ್ನು ತರುವವರು, ವಿವಿಧ ಪ್ರಭಾವಗಳನ್ನು ಬಳಸುವವರು, ಹಣ ಚೆಲ್ಲುವವರು ಇಂಥ ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆದುಕೊಳ್ಳುವ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯುತ್ತಾರೆ.&lt;br /&gt;ಹಾಗಾಗಿ, ಇಂದು ನಮ್ಮಲ್ಲಿರುವ ಅದೆಷ್ಟೋ ಮಂದಿ ಪ್ರಶಸ್ತಿ ವಿಜೇತರೇ ಹೊರತು, ಪುರಸ್ಕೃತರಲ್ಲ.&lt;br /&gt;ಸಹಜ ಅರ್ಥದ ಪ್ರಕಾರ, ಯಾವುದೇ ಸ್ಪರ್ಧೆ ಅಥವಾ ಕ್ರೀಡಾಕೂಟದಲ್ಲಿ ಎದುರಾಳಿಯೊಂದಿಗೆ ಮುಖಾಮುಖಿ ಸ್ಪರ್ಧೆ ನಡೆಸಿ ಗೆಲ್ಲುವವನು ವಿಜೇತನೆನಿಸಿಕೊಳ್ಳುತ್ತಾನೆ. ಅರ್ಹ ಸಾಧಕ ವ್ಯಕ್ತಿಯನ್ನು ಗುರುತಿಸಿ, ಗೌರವಿಸಿದಾಗ ಆತ ಪುರಸ್ಕೃತನೆನಿಸಿಕೊಳ್ಳುತ್ತಾನೆ. ಆದರೆ, ವರ್ತಮಾನದಲ್ಲಿ ಇವೆರಡರ ನಡುವಿನ ವ್ಯತ್ಯಾಸದ ಗೆರೆ ಅಳಿಸಿಹೋಗಿದೆ. 100ಮೀ. ಓಟದಲ್ಲಿ ಉಸಿರು ಗಟ್ಟಿ ಓಡುವಂತೆ, ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿಗಳಿಗೂ ಜನ-ಧನ ಬಲದ ಪೈಪೋಟಿ ನಡೆಸಿ ವಿಜೇತರಾಗುವ ಸ್ಥಿತಿ ಇಂದಿದೆ.&lt;br /&gt;ಪ್ರಶಸ್ತಿ ಆಯ್ಕೆಗೆಂದು ರಚಿಸಲಾಗುವ ಸಮಿತಿಗಳು ತಾವೇ ನೇರವಾಗಿ ಅರ್ಹ ಕ್ರೀಡಾಪಟುಗಳನ್ನು ಶೋಧಿಸಿ ಆಯ್ಕೆ ಮಾಡುವ ವ್ಯವಸ್ಥೆ ಇಲ್ಲದಿರುವುದೂ ಒಂದು ಲೋಪವೇ ಸರಿ. ಬದಲಿಗೆ ಆಯಾ ಕ್ರೀಡೆಯ ಆಡಳಿತಾತ್ಮಕ ಸಂಸ್ಥೆಗಳು ಶಿಫಾರಸು ಮಾಡುವ ಪಟ್ಟಿಯನ್ನು ಮುಂದಿಟ್ಟುಕೊಂಡು ಇಂಥ ಆಯ್ಕೆ ಸಮಿತಿಗಳು ಆಯ್ಕೆಗೆ ಮುಂದಾಗುತ್ತವೆ.&lt;br /&gt;ಆಯ್ಕೆ ಸಮಿತಿಯೇ ನೇರವಾಗಿ ವರ್ಷದ ಎಲ್ಲಾ ಕ್ರೀಡಾ ಚಟುವಟಿಕೆ ಗಮನದಲ್ಲಿಟ್ಟುಕೊಂಡು, ಆಯಾ ವರ್ಷದ ಶ್ರೇಷ್ಠ ಅಥ್ಲೀಟ್‌ಗಳನ್ನು ಪರಿಗಣಿಸಿ, ಅವರ ಹಿಂದಿನ ಐದು ವರ್ಷಗಳ ಪ್ರದರ್ಶನ ಆಧರಿಸಿ, ಅಂತಿಮ ಪಟ್ಟಿ ಸಿದ್ಧ ಪಡಿಸಿದರೆ, ಈ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರಲು ಸಾಧ್ಯ.&lt;br /&gt;ಆದರೆ, ರಾಜ್ಯ ಕ್ರೀಡಾ ಸಂಸ್ಥೆಗಳು ಶಿಫಾರಸು ಮಾಡುವ ಮಟ್ಟದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯಲು ಅವಕಾಶವಿರುತ್ತದೆ. ಅರ್ಹ ಕ್ರೀಡಾಪಟುಗಳ ಶಿಫಾರಸು ಪಟ್ಟಿ ಸಲ್ಲಿಸುವ ಮುನ್ನ ಕ್ರೀಡಾ ಸಂಸ್ಥೆಗಳು ಸಮಿತಿ ರಚಿಸಬೇಕು. ಶಿಫಾರಸು ಪತ್ರದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಸಹಿ ಮಾಡಿರಬೇಕು ಹಾಗೂ ಸಮಿತಿ ಸಭೆಯ ವರದಿಯನ್ನು ಉಲ್ಲೇಖಿಸಿರಬೇಕು ಎಂಬ ನಿಯಮ ಇದ್ದರೂ, ಇದೆಲ್ಲಾ ದೊಡ್ಡ ತೊಡಕಿನ ನಿಯಮಗಳೇನೂ ಅಲ್ಲ.&lt;br /&gt;ಜೊತೆಗೆ, ಏಕಲವ್ಯ ಪ್ರಶಸ್ತಿ ಮೊತ್ತವೀಗ 1 ಲಕ್ಷ ರೂ.ಗೆ ಏರಿಕೆಯಾಗಿರುವುದರಿಂದ, 50 ಸಾವಿರ ಕೈಬಿಟ್ಟರೂ, ಅಥ್ಲೀಟ್‌ಗಳು ಯೋಚನೆ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.&lt;br /&gt;ಈ ಬಾರಿ ರಾಜ್ಯ ಸರ್ಕಾರ ಪ್ರಕಟಿಸಿರುವ (ಎರಡು ವರ್ಷದ) 30 ಪ್ರಶಸ್ತಿಗಳಿಗೆ ಒಟ್ಟು 168 ಮಂದಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. 2007-08ನೇ ಸಾಲಿನ ಪ್ರಶಸ್ತಿಗೆ 111 ಮಂದಿ ಹಾಗೂ 08-09ನೇ ಸಾಲಿನ ಪ್ರಶಸ್ತಿಗೆ 57 ಮಂದಿ ಅರ್ಜಿ ಸಲ್ಲಿಸಿದ್ದರು. ಕೊನೆಗೂ ಇವರಲ್ಲಿ ಕೆಲವರು ಅರ್ಹ ಪುರಸ್ಕೃತರಿದ್ದರೆ, ಹಲವರು ವಿಜೇತರಾಗಿದ್ದಾರೆ.&lt;br /&gt;&lt;span style="font-weight: bold;"&gt;ವಿವಾದಗಳು&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಹೊಸದಲ್ಲ&lt;/span&gt;&lt;span style="font-weight: bold;"&gt;...&lt;/span&gt;&lt;br /&gt;ಏಕಲವ್ಯ ಪ್ರಶಸ್ತಿಗಳು ವಿವಾದಕ್ಕೆ ತುತ್ತಾಗುತ್ತಿರುವುದು ಇದೇ ಮೊದಲೇನೂ ಅಲ್ಲ. 2003ರಿಂದ ನಾಲ್ಕು ವರ್ಷಗಳ ಪ್ರಶಸ್ತಿಗಳನ್ನು 2007ರಲ್ಲಿ ಒಟ್ಟಿಗೆ ವಿತರಿಸಲಾಗಿತ್ತು. ಪಂಕಜ್‌ ಆಡ್ವಾಣಿ ತಮಗೆ ಬಹಳ ತಡವಾಗಿ ಬಂದಿದೆ ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಿದ್ದರು. ರಾಜೀವ್‌ಗಾಂಧಿ ಖೇಲ್‌ರತ್ನ, ಅರ್ಜುನ ಪ್ರಶಸ್ತಿಗಳಿಗಿಂತ ಏಕಲವ್ಯ ದೊಡ್ಡದಲ್ಲ ಎಂದು ಅವರು ಸೆಡ್ಡು ಹೊಡೆದಿದ್ದರು. ಆದರೆ, ಇತ್ತೀಚೆಗೆ ಅವರು 5 ಲಕ್ಷ ರೂ. ವಿಶೇಷ ಪುರಸ್ಕಾರ, ನಿವೇಶನದ ಜೊತೆಗೆ ಏಕಲವ್ಯ ಪ್ರಶಸ್ತಿಯನ್ನೂ ಸದ್ದಿಲ್ಲದೆ ಪಡೆದುಕೊಂಡಿದ್ದು ಬೇರೆ ಮಾತು.&lt;br /&gt;ಹಣದ ಆಸೆಗೆ ಪರ ರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳಿಗೆ ಏಕಲವ್ಯ ನೀಡಬೇಕೇ ಎಂಬಿತ್ಯಾದಿ ವಿವಾದಗಳೂ ಎದ್ದಿದ್ದವು. ಈ ಹಿಂದೆ ಸಾಕಷ್ಟು ಮಂದಿ ಅಥ್ಲೀಟ್‌ಗಳು ಪ್ರಶಸ್ತಿ ವಂಚಿತರಾದ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ, ಪ್ರತಿಭಟಿಸಿದ ನಿದರ್ಶನಗಳಿವೆ.&lt;br /&gt;&lt;span style="font-weight: bold;"&gt;ರಾಷ್ಟ್ರ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಮಟ್ಟದಲ್ಲಿ&lt;/span&gt;&lt;span style="font-weight: bold;"&gt;...&lt;/span&gt;&lt;br /&gt;ಕೆಲವು ವರ್ಷಗಳ ಹಿಂದೆ ಕೇರಳದ ಅಥ್ಲೀಟ್‌ ಬೀನಾಮೊಳ್‌ ಹೆಸರನ್ನು ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದಾಗ ಶೂಟರ್‌ ಅಂಜಲಿ ವೇದಪಾಠಕ್‌ ಭಾಗ್ವತ್‌ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರು. ಕೊನೆಗೆ ಇಬ್ಬರಿಗೂ ಪ್ರಶಸ್ತಿ ಹಂಚಲಾಯಿತು. ಸತತ ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ಎಂಸಿ ಮೇರಿಕೊಮ್‌ ನಿರಂತರ ಹೋರಾಟದ ಬಳಿಕ ಕೊನೆಗೂ ಈ ವರ್ಷ ಖೇಲ್‌ರತ್ನ ಪುರಸ್ಕಾರ ಪಡೆದರು. ಕಳೆದ ವರ್ಷ ಆಯ್ಕೆ ಸಮಿತಿಯಲ್ಲಿದ್ದವರು ಮೇರಿಕೋಮ್‌ ಯಾರು, ಮಹಿಳೆಯರೂ ಬಾಕ್ಸಿಂಗ್‌ ಮಾಡುತ್ತಾರಾ ಎಂದು ಪ್ರಶ್ನಿಸಿ ಅವಮಾನಿಸಿದ್ದರು.&lt;br /&gt;ಈ ವರ್ಷ ಕ್ರಿಕೆಟಿಗರಾದ ಎಂಎಸ್‌ ಧೋನಿ ಮತ್ತು ಹರ್ಭಜನ್‌ ಸಿಂಗ್‌ ಪದ್ಮ ಪ್ರಶಸ್ತಿ ಸಮಾರಂಭಕ್ಕೆ ಗೈರುಹಾಜರಾಗುವ ಮೂಲಕ ಪದ್ಮಶ್ರೀ ಪ್ರಶಸ್ತಿಗೆ ಅಗೌರವ ತೋರಿದ್ದರು. ಸ್ವಾರಸ್ಯದ ಸಂಗತಿಯೆಂದರೆ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪದ್ಮಶ್ರೀ ಪ್ರಶಸ್ತಿಗೆ ಹರ್ಭಜನ್‌ ಹೆಸರನ್ನು ಶಿಫಾರಸು ಮಾಡಿರಲೇ ಇಲ್ಲ. ಬದಲಿಗೆ ವಿವಿಎಸ್‌ ಲಕ್ಷ್ಮಣ್‌ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಶಸ್ತಿ ಬಂದಿದ್ದು ಪಂಜಾಬ್‌ನ ಹರ್ಭಜನ್‌ಗೆ. ಇದಕ್ಕೆ ಕಾರಣವನ್ನು ಪಂಜಾಬ್‌ ಮೂಲದ ಕ್ರೀಡಾ ಸಚಿವ ಎಂಎಸ್‌ ಗಿಲ್‌ರನ್ನೇ ಕೇಳಬೇಕು.&lt;br /&gt;&lt;span style="font-weight: bold;"&gt;ಉಪಸಂಹಾರ&lt;/span&gt;&lt;span style="font-weight: bold;"&gt;...&lt;/span&gt;&lt;br /&gt;ಯಾವಾಗಲೂ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ, ಕನಿಷ್ಠ ಪಕ್ಷ ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಅಧಿಕಾರದಲ್ಲಿರುವವರ ಕರ್ತವ್ಯ. ಆದರೆ, ವಿವಿಧ ಒತ್ತಡಗಳು, ಆಮಿಷಗಳು, ಪ್ರಭಾವಗಳು ಹಾಗೂ ಆಪ್ತರ ಚೌಕಾಸಿಗೆ ಗಂಟುಬಿದ್ದು ಮಂತ್ರಿಗಳಿಗೂ ಕೈಕಟ್ಟುವಂತಾದರೆ....&lt;br /&gt;ಹರ ಕೊಲ್ಲಲ್‌ ಪರ ಕಾಯ್ವನೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2998842447029730227-5226397508469003941?l=ragaakshara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ragaakshara.blogspot.com/feeds/5226397508469003941/comments/default' title='Post Comments'/><link rel='replies' type='text/html' href='http://ragaakshara.blogspot.com/2009/12/blog-post_29.html#comment-form' title='0 Comments'/><link rel='edit' type='application/atom+xml' href='http://www.blogger.com/feeds/2998842447029730227/posts/default/5226397508469003941'/><link rel='self' type='application/atom+xml' href='http://www.blogger.com/feeds/2998842447029730227/posts/default/5226397508469003941'/><link rel='alternate' type='text/html' href='http://ragaakshara.blogspot.com/2009/12/blog-post_29.html' title='ಪ್ರಶಸ್ತಿಗಳೆಂಬ ಮಾಯಾಜಿಂಕೆ'/><author><name>ರಾಘವೇಂದ್ರ ಗಣಪತಿ</name><uri>http://www.blogger.com/profile/14942270593482169750</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://1.bp.blogspot.com/_fosRdfQ3Hws/SiZzHFU4NSI/AAAAAAAAAB8/gTJRJHUIkS0/S220/ragu.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_fosRdfQ3Hws/SzndoVCVNKI/AAAAAAAAAJ8/V8bB-AclwAQ/s72-c/newekalavya3.gif' height='72' width='72'/><thr:total>0</thr:total></entry><entry><id>tag:blogger.com,1999:blog-2998842447029730227.post-3534529934443406294</id><published>2009-12-23T22:12:00.002+05:30</published><updated>2009-12-23T22:18:08.899+05:30</updated><title type='text'>ಮರಳಿದ ವೈಭವದ ದಿನಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_fosRdfQ3Hws/SzJJujOgN8I/AAAAAAAAAJs/pVV4WZ-oM24/s1600-h/sanat.jpg"&gt;&lt;img style="margin: 0px auto 10px; display: block; text-align: center; cursor: pointer; width: 400px; height: 267px;" src="http://3.bp.blogspot.com/_fosRdfQ3Hws/SzJJujOgN8I/AAAAAAAAAJs/pVV4WZ-oM24/s400/sanat.jpg" alt="" id="BLOGGER_PHOTO_ID_5418474365759010754" border="0" /&gt;&lt;/a&gt;&lt;br /&gt;&lt;br /&gt;&lt;span style="font-size:130%;"&gt;&lt;span style="font-weight: bold;"&gt;ಕೆ. ಸನತ್‌ಕುಮಾರ್‌ ತರಬೇತಿಯಲ್ಲಿ ಕರ್ನಾಟಕ ರಣಜಿ ತಂಡ ಅದ್ಭುತ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕಿದೆ.&lt;/span&gt;&lt;/span&gt;&lt;br /&gt;&lt;br /&gt;ಕರ್ನಾಟಕ ಕ್ರಿಕೆಟ್‌ನ ಗತವೈಭವದ ದಿನಗಳು ಮರಳುತ್ತಿವೆ. 76ನೇ ರಣಜಿ ಟ್ರೋಫಿಯಲ್ಲಿ ಸೂಪರ್‌ಲೀಗ್‌ ಹಂತ ಮುಕ್ತಾಯದ ಬಳಿಕ ರಾಷ್ಟ್ರದ ಉಳಿದೆಲ್ಲಾ ತಂಡಗಳಿಗಿಂತ ಕರ್ನಾಟಕವೇ ಸರ್ವಾಂಗೀಣ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಲೀಗ್‌ನಲ್ಲಿ  4 ಜಯ, 2ರಲ್ಲಿ ಇನಿಂಗ್ಸ್‌ ಮುನ್ನಡೆ ಅಂಕ ಗಳಿಸಿರುವ ರಾಜ್ಯ ತಂಡ `ಬಿ' ಗುಂಪಿನಿಂದ ಅಗ್ರ ತಂಡವಾಗಿ ನಾಕೌಟ್‌ ಪ್ರವೇಶಿಸಿದೆ.&lt;br /&gt;ಕ್ರಿಕೆಟ್‌ನಲ್ಲಿ ಯಾವಾಗಲೂ ಯಶಸ್ಸಿನ ಶ್ರೇಯ ಪಡೆಯುವವರು ಆಟಗಾರರು. ವೈಫಲ್ಯಕ್ಕೆ ತಲೆ ಕೊಡುವ ವರು ತರಬೇತುದಾರರು. ಆದರೆ, ಹಾಲಿ ಕರ್ನಾಟಕ ತಂಡದ ಅಪಾರವಾದ ಯಶಸ್ಸಿಗೆ ಕೋಚ್‌ ಕೆ. ಸನತ್‌ ಕುಮಾರ್‌ ಅವರನ್ನು ಪ್ರಶಂಸಿಸಲೇಬೇಕು. ಸನತ್‌ ಚುಕ್ಕಾಣಿ ಹಿಡಿದೊಡನೆ ತಂಡದ ಸ್ವರೂಪವೇ ಬದಲಾಗಿದೆ. ಬ್ಯಾಟ್ಸ್‌ಮನ್‌ಗಳು ಶತಕದ ಮೇಲೆ ಶತಕ ಬಾರಿಸುತ್ತಿದ್ದಾರೆ. ಬೌಲರ್‌ಗಳು ಬೊಗಸೆ ತುಂಬಾ ವಿಕೆಟ್‌ ಕಬಳಿಸುತ್ತಿದ್ದಾರೆ. ಟೂರ್ನಿ ಆರಂಭಕ್ಕೆ ಮುನ್ನ ಹತ್ತರಲ್ಲಿ ಹನ್ನೊಂದು ಎಂಬಂತಿದ್ದ ತಂಡ ಈಗ ಪ್ರಶಸ್ತಿಗೆ ಫೇವರಿಟ್‌ಗಳ ಯಾದಿಯಲ್ಲಿ ಮುಂಚೂಣಿಯಲ್ಲಿದೆ.&lt;br /&gt;ಕರ್ನಾಟಕ ತಂಡದ ಈ ಯಶೋಪಯಣದ ಬಗ್ಗೆ ಸನತ್‌ ಕುಮಾರ್‌ ಟಿಒಐ ಜೊತೆ ಮಾತನಾಡಿದ್ದಾರೆ.&lt;br /&gt;&lt;br /&gt;&lt;span style="font-weight: bold;"&gt; ಮರಳಿದ ವೈಭವದ ದಿನಗಳು&lt;/span&gt;&lt;br /&gt;ಯುವ ತಂಡ ಅದ್ಭುತವಾಗಿ ಆಡುತ್ತಿದೆ. ಈ ಆಟಗಾರರು ಯಾರೂ ನನಗೆ ಹೊಸಬರಲ್ಲ. ವಿವಿಧ ವಯೋಮಿತಿಯಲ್ಲಿ ಆಡುವಾಗ ನನ್ನ ಸಂಪರ್ಕಕ್ಕೆ ಬಂದವರೇ. ಇವರೆಲ್ಲರೂ ಕಿರಿಯರ ಹಂತದಲ್ಲಿ ಭಾರೀ ಯಶಸ್ವಿಯಾಗಿ ರಣಜಿ ಮಟ್ಟಕ್ಕೆ ಆಯ್ಕೆಯಾದವರು. ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದಾರೆ.&lt;br /&gt;&lt;br /&gt;&lt;span style="font-weight: bold;"&gt; ನಾನು ಫಲಾನುಭವಿ&lt;/span&gt; ವೆಂಕಟೇಶ್‌ ಪ್ರಸಾದ್‌, ವಿಜಯ್‌ ಭಾರದ್ವಾಜ್‌ ಕೋಚ್‌ ಆಗಿದ್ದ ಅವಧಿಯಲ್ಲಿ ಕೆಲವು ಕಠಿಣ ನಿರ್ಧಾರ ತೆಗೆದುಕೊಂಡು ಯುವ ತಂಡ ಕಟ್ಟಲು ಮುಂದಾದರು. ಆ ಪ್ರಕ್ರಿಯೆ ಈಗ ಫಲ ನೀಡುತ್ತಿದೆ. ಫಲ ನೀಡುವ ಸಂದರ್ಭದಲ್ಲಿ ಕೋಚ್‌ ಆಗಿರುವುದು ನನ್ನ ಅದೃಷ್ಟ.&lt;br /&gt;&lt;br /&gt;&lt;span style="font-weight: bold;"&gt;ಪಾತ್ರಕ್ಕೆ&lt;/span&gt;&lt;span style="font-weight: bold;"&gt; ತಕ್ಕಂತೆ ಸೂತ್ರ &lt;/span&gt; ನಾವು ಆಟಗಾರರಿಗೆ ಅವರವರ ಪಾತ್ರವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಆಟಗಾರರು ಪಾತ್ರಕ್ಕೆ ತಕ್ಕಂತೆ ನ್ಯಾಯ ಒದಗಿಸುತ್ತಿದ್ದಾರೆ. ಪ್ರತೀ ವಿಭಾಗಗಳಲ್ಲಿ ಒಬ್ಬೊಬ್ಬ ನಾಯಕನನ್ನು ಗುರುತಿಸಿದ್ದೇವೆ. ವೇಗದ ಬೌಲರ್‌ಗಳಿಗೆ ವಿನಯ್‌ ಕುಮಾರ್‌ ನಾಯಕ. ಅವರು ಸದಾ ಕಾಲ ಹೊಸಬರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಸ್ಪಿನ್‌ ಪಡೆಗೆ ಸುನಿಲ್‌ ಜೋಷಿ ನೇತೃತ್ವ ಇದೆ. ಬ್ಯಾಟ್ಸ್‌ಮನ್‌ಗಳ ಸಮೂಹಕ್ಕೆ ರಾಬಿನ್‌ ಉತ್ತಪ್ಪ ನಾಯಕ. ಅವರು ಮುಕ್ತ ಮನಸ್ಸಿನಿಂದ  ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡುತ್ತಾರೆ.&lt;br /&gt;&lt;br /&gt;&lt;span sty
